Friday 12 April 2019

ದೊಡ್ಡವರ. ದಾರಿ : 68 ಸಜ್ಜನಿಕೆಯ ಸಾಕಾರ ಮೂರ್ತಿ ಡಾ.ಕೆ ಗೋಕುಲನಾಥ್ ©. ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ಹಾದಿ  ಪೂರ್ಣ ಬೆಂಬಲವಿತ್ತ ಡಾ.ಕೆ ಗೋಕುಲನಾಥ
ನನ್ನ ಬದುಕಿನಲ್ಲಿ ಬಹುದೊಡ್ಡ ತಿರುವು ನೀಡಿದವರು ಎಪಿಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಕೆ ಗೋಕಲುನಾಥರು
ಪ್ರಸಾದರಿಗೆ 2005 ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ iic ltd ಎಂಬ ಒಂದು ಒಳ್ಳೆಯ ಕಂಪೆನಿಯಲ್ಲಿ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿಯರ ಸಹಾಯದಿಂದ ಅಕೌಂಟ್ಸ್ ಆಫೀಸರ್ ಆಗಿ ಒಳ್ಳೆಯ ಕೆಲಸ ಸಿಕ್ಕಿತ್ತು. ಅವರು ಆಗಲೇ ಬೆಂಗಳೂರಿನಲ್ಲಿ ಬಂದು ಸ್ವಲ್ಪ ಸಮಯ ನನ್ನ ತಮ್ಮ ಈಶ್ವರ ಭಟ್ ವಾರಣಾಸಿಯ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಇದ್ದರು.ಆಗ ನನ್ನ ತಮ್ಮ ಮತ್ತು ತಮ್ಮನ ಮಡದಿ ತೋರಿದ ಪ್ರೀತಿ ಕಾಳಜಿ  ಆದರ ಆತಿಥ್ಯ ವನ್ನು  ಪ್ರಸಾದ ಸದಾ ಸ್ಮರಿಸುತ್ತಾ ಇರುತ್ತಾರೆ.
ನಾನಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದೆ.ಶೈಕ್ಷಣಿಕ ವರ್ಷದ ನಡುವೆ ಕೆಲಸ ಬಿಡುವುದು ಸರಿಯಲ್ಲ,ನನ್ನನ್ನು ಕರೆದು ಕೆಲಸ ಕೊಟ್ಟ ಪ್ರಾಂಶುಪಾರಾದ ಸ್ವಿಬರ್ಟ್ ಡಿ ಸಿಲ್ವ ಅವರು ನನ್ನ ಮೇಲೆ ಇಟ್ಟ ನಂಬಿಕೆಗೆ ಧಕ್ಕೆಯಾಗುತ್ತದೆ( ನಾನಲ್ಲಿ ಕನ್ನಡ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸಂಸ್ಕೃತ ಎಂಎ ಯನ್ನು ಮೊದಲ ರ‍್ಯಾಂಕಿನನೊಂದಿಗೆ   ಪಡೆದ  ಬಗ್ಗೆ ಮಾಹಿತಿ ಹಾಕಿದ್ದೆ.ಅದನ್ನು ನೋಡಿ ಅವರು ನನ್ನನ್ನು ಫೋನ್ ಮಾಡಿ ಕರೆಸಿ  ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿ ಆಗಿ ಕೆಲಸ ನೀಡಿದ್ದರು‌)ಅಲ್ಲದೇ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಹಾಗಾಗಿ ಶೈಕ್ಷಣಿಕ ವರ್ಷ ಮುಗಿಯುವ ತನಕ ನಾನು ಮಂಗಳೂರಿನಲ್ಲಿ ಇದ್ದೆ.ಅಲೋಶಿಯಸ್ ಕಾಲೇಜಿನಲ್ಲಿ ಕೆಲಸ ಮುಂದುವರಿಸಿದ್ದೆ.
ನಂತರ ನಾವಿದ್ದ  ಸ್ವಂತ ಮನೆಯನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿ ಅದರ ವ್ಯವಹಾರ ಮುಗಿಸಿ ತಂದೆ ಮನೆಗೆ ಬಂದು ಒಂದು ತಿಂಗಳು ಇದ್ದು ಮತ್ತೆ ಬೆಂಗಳೂರಿಗೆ ಬಂದೆ,ಅದೇ ದಿನ ಪ್ರಸಾದ್ ಮನೆ ಬದಲಾಯಿಸಿ ಕತ್ತರಿಗುಪ್ಪೆ ವಿವೇಕನಗರದಲ್ಲಿ ಒಂದು ಬಾಡಿಗೆ ಮನೆ ಗೆ ಬಂದಿದ್ದರು.ಬರುವಾಗ ನನ್ನ ಬಜಾಜ್ ಸ್ಪಿರಿಟ್ ಟು ವೀಲರ್ ಕೂಡ ಜೊತೆಯಲ್ಲಿ ಬಂದಿತ್ತು.ಎಳೆಯ ಮಗನೂ ಜೊತೆಯಲ್ಲಿ ಇದ್ದ.
ಅದೇ ದಿನದ ಪತ್ರಿಕೆ ನೋಡಿದೆ‌ ಅದರಲ್ಲಿ ಎನ್ ಆರ್ ಕಾಲೋನಿಯ ಎಪಿಎಸ್    ಕಾಲೇಜಿಗೆ ಕನ್ನಡ ಉಪನ್ಯಾಸ ಹುದ್ದೆಗೆ ವಾಕ್ ಇನ್ ಇಂಟರ್ವೂ ಗೆ ಜಾಹೀರಾತು ನೀಡಿದ್ದರು‌.ತಕ್ಷಣವೇ ಮನೆಯ ಓನರಲ್ಲಿ ಇದು ಎಲ್ಲಾಗುತ್ತದೆ ? ಹತ್ತಿರವಾ ? ಎಂದು ವಿಚಾರಿಸಿದೆ.ಇದು ಇಲ್ಲೇ ನಾಲ್ಕು ಕಿಮೀ ದೂರ ಎಂದು ತಿಳಿಸಿ ಹೋಗುವ ದಾರಿ ತಿಳಿಸಿದರು.ಅದಾಗಲೇ ಸಮಯ ಒಂಬತ್ತೂವರೆ ಗಂಟೆ ಆಗಿತ್ತು. ಪ್ರಸಾದ್ ನಮ್ಮನ್ನು ಮನೆ ತಲುಪಿಸಿ ಅರ್ಜೆಂಟ್ ಕೆಲಸ ಇದೆ ಎಂದು ಹೋಟೆಲಿನಿಂದ ತಿಂಡಿ ತರಿಸಿ ಇಟ್ಟು ಆಫೀಸ್ ಗೆ ಹೋಗಿ ಆಗಿತ್ತು.
ಬೇಗ ಬೇಗನೆ ಮಗನಿಗೆ ಸ್ನಾಮಾಡಿಸಿ ಡ್ರೆಸ್ ಹಾಕಿ ನಾನೂ ಮಿಂದು ಸೀರೆ ಉಟ್ಟು ಒಂದು ಅರ್ಜಿ ಬರೆದು ಗಾಡಿ ಸ್ಟಾರ್ಟ್ ಮಾಡಿ ಮಗನನ್ನು ಮುಂದೆ ಕೂರಿಸಿಕೊಂಡು ಹೊರಟೆ.ಹೋಗುವಾಗ ದಾರಿ ಗೊಂದಲ ಆಗಲಿಲ್ಲ.. ಮನೆ ಓನರ್ ಹೇಳಿದಂತೆ ಸೀದಾ ಎನ್ ಆರ್ ಕಾಲೋನಿಯ ಎಪಿಎಸ್ ಟ್ರಸ್ಟ್‌ ಆಪೀಸ್ ಗೆ ತಲುಪಿದೆ.ಬಂದ ಎಲ್ಲರ ಸಂದರ್ಶನ ಮುಗಿದಿತ್ತು..ಇನ್ನೇನು ಅವರೆಲ್ಲ ಹೊರ ಬರುತ್ತಾರೆ ಅನ್ನುವಷ್ಟರಲ್ಲಿ ನಾನು ಅಲ್ಲಿಗೆ ತಲುಪಿ ನನ್ನ ಅರ್ಜಿ ನೀಡಿದೆ..
ಏನಮ್ಮಾ  ಸಂದರ್ಶನ ಒಂಬತ್ತುವರೆಗೆ ಎಂದು ಹಾಕಿದ್ದೆವಲ್ಲ ..ನೀವು ಹತ್ತೂವರೆಗೆ ಬಂದಿದ್ದೀರಲ್ಲ ಎಂದು ಅಲ್ಲಿ ಯಾರೋ ನನ್ನನ್ನು ಆಕ್ಷೇಪ ಮಾಡಿದರು. ಅವರು ಡಾ.ಕೆ ಗೋಕುಲನಾಥರೆಂದು ಅನಂತರ ತಿಳಿಯಿತು..
ನಾನು ಆ ದಿನ ಬೆಳಗಷ್ಟೇ ಬೆಂಗಳೂರಿಗೆ ಬಂದು ತಲುಪಿದ್ದು ಮತ್ತು ಬೆಂಗಳೂರು ನನಗೆ ಅಪರಿಚಿತ ಪ್ರದೇಶ ,ದಾರಿ ಕೇಳಿಕೊಂಡು ಬರುವಷ್ಟರಲ್ಲಿ ತಡವಾಯಿತು ಎಂದು ಸಮಜಾಯಿಸಿ ಕೊಟ್ಟೆ.ಸರಿ ಈಗಲೇ ಸಂದರ್ಶನ ಶುರು ಮಾಡುವುದಾ ಅಥವಾ ನಿಮಗೆ ಸುಧಾರಿಸಿಕೊಳ್ಳಲು ಹತ್ತು ನಿಮಿಷ ಸಮಯ ಬೇಕಾದರೆ ತೆಗೆದುಕೊಳ್ಳಿ ಎಂದು ಹೇಳಿ ಅಟೆಂಡರ್ ಒಬ್ಬರನ್ನು ಕರೆದು ನನ್ನ ಮಗನನ್ನು ನೋಡಿಕೊಳ್ಳಲು ತಿಳಿಸಿದರು.ನಮಗೆ ಸಮಯ ಬೇಡ ಸರ್ ಈಗಲೇ  ಸಂದರ್ಶನ ಮಾಡಬಹುದು ನಾನು ತಯಾರಿದ್ದೇನೆ ಎಂದು ತಿಳಿಸಿದೆ.ಕನ್ನಡ ಸಾಹಿತ್ಯ,ವ್ಯಾಕರಣಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಅಲ್ಲಿ ಇದ್ದ ಗೋಕುಲನಾಥರು ಹಸಗೂ ಇತರರು ಕೇಳಿದರು.ಅಲ್ಲಿ ಕನ್ನಡ ಉಪನ್ಯಾಸಕರಾದ ಕೆ ಎಸ್‌ಮದುಸೂದನರು ಕೂಡ ಇದ್ದರೆಂದು ನಂತರ ತಿಳಿಯಿತು. ಸಂಸ್ಕೃತ ಎಂಎ ಓದಿ ಅನೇಕ ವರ್ಷ ಪಾಠ ಮಾಡಿದ ನನಗೆ ಛಂದಸ್ಸು, ವ್ಯಾಕರಣ ಗಳ ಬಗ್ಗೆ ಉತ್ತರಿಸುವಿದು ಬಹಳ ಸುಲಭವಾಯಿತು.ಕೇಳಿದ ಎಲ್ಲಾ ಪ್ರಶ್ನೆ ಗಳಿಗೂ ಸಮಪರ್ಕಪ ಉತ್ತರ ನೀಡಿ ಗುಡ್ ಗುಡ್ ಎಂದು ಹೇಳಿಸಿಕೊಂಡೆ.ನಂತರ ಮರು ದಿನ ಬಂದು ಡೆಮೋ ನೀಡಲು ತಿಳಿಸಿದರು.ಸರಿ ಎಂದು ಒಪ್ಪಿ ಅಲ್ಲಿದ್ದವರಿಗೆ ಧನ್ಯವಾದಗಳನ್ನು ತಿಳಿಸಿ ಮಗನನ್ನು ಕರೆದು ಕೊಂಡು ಗಾಡಿ ಹತ್ತಿ ಹಿಂದೆ ಹೊರಟೆ.ಹಿಂದೆ ಬರುವಾಗ ಒನ್ ವೇ ಇತ್ತು.ಮಂಗಳೂರಿನಲ್ಲಿ ಆಗಿನ್ನೂ ಒನ್ ವೇ ಬಂದಿರಲಿಲ್ಲ. ಹಾಗಾಗಿ ಒನ್ ವೆ ಯಲ್ಲಿ ಹೋಗಿ‌ಮತ್ತೆ ಮೂಲ ದಾರಿಯನ್ನು ಹಿಡಿಯು ಬಗೆ ನನಗೆ ತಿಳಿದಿರಲಿಲ್ಲ .
ಹಾಗಾಗಿ ದಾರಿ ತಪ್ಪಿ ಎಲ್ಲೆಲ್ಲೋ ಅಲೆ ದಾಡಿದೆ.ಕೊನೆಗೆ ಓರ್ವ ಅಟೋಡ್ರೈವರ್ ನನ್ನನ್ನು ಫಾಲೋ‌ಮಾಡಿ ವಿವೇಕ ನಗರಕ್ಕೆ ನನಗೆ ಹೋಗಲಿದೆ ಅಲ್ಲಿಂದ ನಿಮಗೆ ಹೋಗಲು ದಾರಿ ಗೊತ್ತಾಗಬಹುದು ಎಂದು ಹೇಳಿದರು.ಹಾಗೆಯೇ ಅವರ ಹಿಂದೆಯೇ ಸಾಗಿ ವಿವೇಕಾನಂದ ನಗರ ತಲುಪಿ ಅವರಿಗೆ ಸ್ವಲ್ಪ ದುಡ್ಡು ಕೊಟ್ಟು ಧನ್ಯವಾದಗಳನ್ನು ಹೇಳಿ ಸುಲಭವಾಗಿ ಮನೆ ತಲುಪಿದೆವು.ಮನೆ ತಲುಪುವಾಗ ಸಂಜೆ ಆರು ಗಂಟೆ ಆಗಿತ್ತು.ಉಪ್ಪಿಟ್ಟು  ಚಾಯ ಮಾಡಿ  ತಿಂದು ತಕ್ಷಣದ ಹಸಿವು ಪರಿಹಾರ ಮಾಡಕೊಂಡೆವು.ಇಷ್ಟಾದರೂ ಏನೊಂದೂ ತಕರಾರು ಮಾಡದ ನನ್ನ ಮುದ್ದು ಮಗ ಸುಸ್ತಾಗಿ ಮಲಗಿದ.ರಾತ್ರಿಗೆ ಪ್ರಸಾದ್ ಹೋಟೆಲಿನಿಂದ ಊಟ ತಿಂಡಿ ಕಟ್ಟಿಸಿಕೊಂಡು ಬಂದರು..ನನಗೂ ಸುಸ್ತಾಗಿದ್ದು ಊಟ ಮಾಡಿ ಮಲಗಿಕೊಂಡೆ. ಸುಸ್ತಾಗಿ ಮಲಗಿದ್ದ ನನಗೆ ಮರುದಿನ ಬೇಗನೆ ಎಚ್ಚರ ಆಗಿರಲಿಲ್ಲ. ಪ್ರಸಾದ್ ‌ಅನ್ನ ಸಾರು ಮಾಡಿಟ್ಟು ಆಪೀಸ್ ಗೆ ಹೋಗಿದ್ದರು.ನಾನು ಎದ್ದು ಸ್ನಾನ ಮಾಡಿ ಮಗನನ್ನು ಎಬ್ಬಿಸಿ ಸ್ನಾನ ಮಾಡಿಸಿ ಡ್ರೆಸ್ ಹಾಕಿಸಿ  ಕೈಗೆ ಸಿಕ್ಕ ಒಂದು ಪುಸ್ತಕ ಹಿಡಿದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಎನ್ ಆರ್ ಕಾಲೋನಿಯಲ್ಲಿ ಇರುವ ಎಪಿಎಸ್ ಕಾಲೇಜಿಗೆ ಬಂದೆ.ಪುಸ್ತಕ ತೆರೆದು ಯಾವುದನ್ನು ಪಾಠ ಮಾಡಲಿ ಎಂದು ನೋಡಿದಾಗ ಮಾಸ್ತಿಯವರ ಮದಲಿಂಗನ ಕಣಿವೆ ಎಂಬ ಕಥನ ಕಾವ್ಯ ಕಾಣಿಸಿತು.ಅದರ ಬಗ್ಗೆ ಈ ಹಿಂದೆ ಒಮ್ಮೆ ಎಲ್ಲೋ ಉಪನ್ಯಾಸ ನೀಡಿದ್ದೆ.ಹಾಗಾಗಿ ಒಂದಿನಿತು ತಯಾರಿ ಇಲ್ಲದಿದ್ದರೂ ಧೈರ್ಯವಾಗಿ ಅದನ್ನು ಪಾಠ ಮಾಡಲು ಸಿದ್ಧಳಾದೆ.ಒಂದಷ್ಟು ಪ್ರಶ್ನೆ ಕೇಳಿ ನನ್ನನ್ನು ಗಲಿಬಲಿ ಗೊಳಿಸಬೇಕೆಂದಿದ್ದ ಅಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಮಾಸ್ತಿಯವರ ಮದಲಿಂಗನ ಕಣಿವೆಯ ಕಥಾನಕ ಕಾವ್ಯ ಶೈಲಿಯನ್ನು ಕೇಳುತ್ತಾ ಸಮಯದ ಪರಿವೆಯನ್ನು ನನ್ನನ್ನು ಪ್ರಶ್ನಿಸಬೇಕೆಂದಿದ್ದುದನ್ನು ಮರೆತು ಮಂತ್ರಮುಗ್ಧರಾಗಿ ಕುಳಿತು ಆಲಿಸಿದ್ದರು..ನನಗೂ ಅಲ್ಲಿ ನನ್ನ ಪಾಠ ಮಾಡುವ ವಿಧಾನವನ್ನು ಪರೀಕ್ಷಿಸುವ ಸಲುವಸಗಿ ಪ್ರಾಂಶುಪಾಲರೂ ಕನ್ನಡ ವಿಭಾಗದ ಮುಖ್ಯಸ್ಥ ರೂ ಅಗಿದ್ದ ಡಾ.ಕೆ ಗೋಕುಲ ನಾಥ ಹಾಗೂ ಇತರ ಕನ್ನಡ ಉಪನ್ಯಾಸಕರು ಅಲ್ಲಿ ಇದ್ದುದು ಮರೆತು ಹೋಗಿತ್ತು.ಮಾಸ್ತಿಯವರ ಕಥನ ಕಾವ್ಯದಲ್ಲಿ ನಾನು ಕೂಡ ವಿದ್ಯಾರ್ಥಿಗಳ ಜೊತೆ ತನ್ಮಯಳಾಗಿ ಹೋಗಿದ್ದೆ..ಸಾಕಿನ್ನು ನಿಲ್ಲಿಸಿ ಮೇಡಂ ಎಂದು ಡಾ.ಕೆ ಗೋಕಲುನಾಥರು ಹೇಳಿದಾಗಲೇ ನಾನು ಇಹ‌ಲೋಕಕ್ಕೆ ಬಂದದ್ದು.ಉಪನ್ಯಾಸಕ ವೃತ್ತಿ  ಮತ್ತು ವಿದ್ಯಾರ್ಥಿಗಳನ್ನು ತುಂಬಾ ಇಷ್ಟ ಪಡುವ ನನಗೆ ಪಾಠ ಮಾಡುವುದೆಂದಿಗೂ ಕಷ್ಟದ ವಿಚಾರ ಎನಿಸಿಸಿಯೇ ಇಲ್ಲ..
ಎರಡು ದಿನಗಳಲ್ಲಿ ಬಹಳ ಪ್ರತಿಷ್ಠಿತ ಜೈನ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಹೋಗಿ ಅಲ್ಲಿ ಆಯ್ಕೆ ಆದೆ...ಅಲ್ಲಿ ಉತ್ತಮ ವೇತನ ಹಾಗೂ ಸೌಲಭ್ಯ ಗಳು ಇದ್ದವು..ಆದರೆ ನಾನು ಸಂಸ್ಕೃತ ಬಿಟ್ಟು ಕನ್ನಡಕ್ಕೆ ಬರಬೇಕಿಂದಿದ್ದೆ...ಹಾಗಾಗಿ ಜೈನ್ ಕಾಲೇಜು( ಈಗ ಜೈನಗ ಯುನಿವರ್ಸಿಟಿ ಆಗಿದೆ) ಅಪಾಯಿಂಟ್ಮೆಂಟ್ ಆರ್ಡರ್ ಕಳುಹಿಸಿ ಒಂದು ವಾರದ ಒಳಗೆ ಬಂದು ಕೆಲಸಕ್ಕೆ ಹಾಜರಾಗಿ ವರದಿ ಮಾಡಲು ತಿಳಿಸಿದ್ದರೂ ಹೋಗಿ ವರದಿ ಮಾಡಿರಲಿಲ್ಲ..ಕೊನೆಯ ದಿನದವರೆಗೆ ಎಪಿಎಸ್ ಕಾಲೇಜಿನಿಂದ ಕರೆ ಬಾರದಿದ್ದರೆ ಹೋಗಿ ಜೈನ್ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವುದು ಎಂದು ನಿರ್ಧರಿಸಿದೆ.
ಇನ್ನೇನು ಒಂದು ದಿನ ಮಾತ್ರ ಇದೆ ಅನ್ನುವ ಷ್ಟರಲ್ಲಿ ಎಪಿಎಸ್ ಕಾಲೇಜು ಪ್ರಾಂಶುಪಾಲರಾದ ಡಾ.ಕೆ ಗೋಕುಲನಾಥರು ಫೋನ್ ಮಾಡಿ ನೀವು ಅಯ್ಕೆ ಆಗಿದ್ದೀರಿ ,ಬಂದು  ಕೆಲಸದ ಆದೇಶ ಪತ್ರ ಪಡೆಯುತ್ತೀರಾ? ಅಥವಾ ಪೋಸ್ಟ್‌ ನಲ್ಲಿ ಕಳುಹಿಕೊಡಲಾ ಎಂದು ಕೇಳಿದರು.
ಅದನ್ನೇ ಕಾಯುತ್ತಾ ಇದ್ದ ನಾನು ಈಗಲೇ ಬರುತ್ತೇನೆ ಸರ್ ಪೋಸ್ಟ್‌ ಮಾಡುವುದು ಬೇಡ ಎಂದು ಹೇಳಿದೆ.ಮತ್ತೆ ಮಗನನ್ನು ಹೊರಡಿಸಿಕೊಂಡು ಗಾಡಿ ಹತ್ತಿ ಎಪಿಎಸ್ ಕಾಲೇಜಿಗೆ ಹೋಗಿ‌ ಆದೇಶ ಪತ್ರ ಪಡೆದು ಅದೇ ದಿನ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಕೊಂಡೆ.ಆಗ ನನಗೆ ಜೈನ್ ಕಾಲೇಜಿನಿಂದಲೂ ಆದೇಶ ಬಂದ ಬಗ್ಗೆ ತಿಳಿಸಿದೆ.ಆಗ ಗೋಕುಲನಾಥರು " ನೋಡಿ ಲಕ್ಷ್ಮೀ ನಿಮ್ಮಂತ ಮೂರು ಎಂಎ ಗಳನ್ನು ಮಾಡಿದ ರ‍‍್ಯಾಂಕ್ ಪಡೆದ ಅನುಭವಿ ಉಪನ್ಯಾಸಕರು ನಮ್ಮ ಸಂಸ್ಥೆಗೆ ಬೇಕು ಖಂಡಿತ.. ಆದರೆ ನಮ್ಮ  ಸಂಸ್ಥೆ ಗಿಂತ ಜೈನ್ ಕಾಲೇಜಿನಲ್ಲಿ ಹೆಚ್ಚಿನ ವೇತನ ಹಗೂ ಸೌಲಭ್ಯಗಳು ಸಿಗುತ್ತವೆ.
ಆಲೋಚಿಸಿ ನೋಡಿ" ಎಂದು ಹಿತ ನುಡಿದರು.ಅದಾಗಲೇ ಡಾ.ಕೆ ಗೋಕುಲನಾಥರ ಸೌಜನ್ಯ, ಸಜ್ಜನಿಕೆಯ ಅರಿವಾಗಿತ್ತು ನನಗೆ.ಇಂತಹವ ಕೈ ಕೆಳಗೆ ಕೆಲಸ ಮಾಡಲು ಕೂಡ ಯೋಗ ಬೇಕು.
ಅಲ್ಲದೇ ನಾನು ಅದಾಗಲೇ ಸಂಸ್ಕೃತ ಬಿಟ್ಟು  ಕನ್ನಡದಲ್ಲಿ ಮುಂದುವರಿಯಲು ನಿರ್ಧರಿಸಿದ್ದೆ .ಹಾಗಾಗಿ ನಿರ್ಧರಾತ್ಮಕವಾಗಿ " ಇಲ್ಲ ಸರ್ ನನಗೆ ವೇತನಕ್ಕಿಂತ ವಾತಾವರಣ ಮುಖ್ಯ.
ಅಲ್ಲಿಗೆ ಬತುವ ಸಿರಿವಂತ ‌ಮಕ್ಕಳಿಗಿಂತ‌ಇಲ್ಲಿ ಬರುವ ಬಡ ಮಧ್ಯಮ ವರ್ಗದ ಮಕ್ಕಳಿಗೆ ಕನ್ನಡ ಪಾಠ ಮಾಡಲು ಅವರಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲು ನನಗೆ ಇಷ್ಟವಿದೆ..ಹಾಗಾಗಿ ನಿಮ್ಮ ಕೈ ಕೆಳಗೆ ಕೆಲಸ‌ಮಾಡಿ ಅನುಭವ ಪಡೆಯಲು ನಿರ್ಧರಿಸಿದ್ದೇನೆ.ಹಾಗಾಗಿ ಇಲ್ಲಿಯೇ ಸೇರುತ್ತೇನೆ ಎಂದು ಕೆಲಸಕ್ಕೆ ಹಾಜರಾಗಿ ವರದಿ ಮಾಡಕೊಂಡೆ .ಆಗ ಅವರು : ನೀವು ಮೂರು ಎಂಎ ಪದವಿಗಳನ್ನು ಪಡೆದಿದ್ದೀರಿ,ಪಿಎಚ್ ಡಿ ಯಾಕೆ ಮಾಡಿಲ್ಲ ? ಎಂದು ಕೇಳಿದರು..ಈ ಹಿಂದೆ ನಾನು ಎರಡನೇ ಬಿಎಸ್ಸಿ ವಿದ್ಯಾರ್ಥಿನಿ ಆಗಿದ್ದಾಗ ನಮ್ಮ ಕಾಲೇಜಿಗೆ ಹೊಸದಾಗಿ ಒಬ್ಬರು ಮೇಡಂ ಬಂದಿದ್ದರು.ಅವರಾಗ ಪಿಎಚ್ ಡಿ ಮಾಡುತ್ತಾ ಇದ್ದರು..ಪಿಎಚ್ ಡಿ ಅಂದರೆ ಏನು ಹೇಗೆ ಮಾಡುವುದು ಎಂಬ ಕುತೂಹಲದಿಂದ ನಾನು ಮತ್ತು ಸ್ನೇಹಿತೆ ಗಾಯತ್ರಿ ಅವರಲ್ಲಿ ಈ ಬಗ್ಗೆ ಹೋಗಿ ಮಾತನಾಡಿದ್ದೆವು..ಅದು ತುಂಬಾ ಕಷ್ಟದ ವಿಚಾರ..ತುಂಬಾ ಶ್ರದ್ಧೆ ಏಕಾಗ್ರತೆ ಬೇಕು.ಅದಕ್ಕಾಗಿ ದಿನಾಲು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದಯ ಯೋಗ ಪ್ರಾಣಯಾಮ ಮಾಡಬೇಕೆಂದು ಹೇಳಿದ್ದನ್ನು ಕೇಳಿ ನಾವು ಗಾಭರಿಯಾಗಿದ್ದೆವು.ನಾನಂತೂ ಸೂರ್ಯವಂಶದವದವಳು! ಸೂರ್ಯ ಹುಟ್ಟಿ ಬೆನ್ನಿಗೆ ಬಿಸಿಲು ಬಿದ್ದು ಕರಚಿ ಇನ್ನೇನು ಮಲಗಲಾರದು ಎಂದಾದ ಮೇಲೆ ಚಾಪೆ ಬಿಟ್ಟು ಏಳುವವಳು..ಹಾಗಾಗಿ ಉಳಿದ ಎಲ್ಲಕ್ಕಿಂತ ಅವರು ಹೇಳಿದ " ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರಲ್ಲಿ ಮಿಂದು ಯೋಗ ಪ್ರಾಣಯಾಮ ಮಾಡಬೇಕೆಂಬ ಮಾತು ನನ್ನಲ್ಲಿ ಅಚ್ಚೊತ್ತಿ ಕುಳಿತಿದ್ದು ಪಿಎಚ್ಡಿ ಮಾಡುವುದು ಬಿಡಿ ಆ ಬಗ್ಗೆ ಊಹೆ ಕೂಡ ಮಾಡಿರಲಿಲ್ಲ
.ಓಗ ಡಾ.ಕೆ ಗೋಕುಲನಾಥರು ಈ ಬಗ್ಗೆ ಪ್ರಶ್ನಿಸಿದಾಗ " ನನ್ನಿಂದ ಅದು ಸಾಧ್ಯವಿಲ್ಲ ಸರ್ ಅದು ತುಂಬಾ ಕಷ್ಟ ಅಂತೆ..ದಿನಾಲು ಬೆಳಗ್ಗೆ ಎದ್ದು ಪ್ರಾಣಾಯಾಮ ಯೊಗ ಮಾಡಿ ಏಕಾಗ್ರತೆ ಗಳಿಸಬೇಕಂತೆ " ಎಂದು ಮೆಲ್ಲನೆ ಕ್ಷೀಣ ಧ್ವನಿಯಲ್ಲಿ ಹೇಳಿದೆ.ಅವರಿಗೇನನಿಸಿತೋ ಗೊತ್ತಿಲ್ಲ ನಮ್ನ ಉಡಾಫೆಗೆ ಕೋಪ ಬಂದಿರಬಹುದು.. ಬೆಳ್ಳನೆ ಚಂದ ಇದ್ದ‌ಅವರ ಮುಖ ಕೋಪದಿಂದ ಕೆಂಪಾಯಿತು.
ಸರಿ,ಈಗ ಹೋಗಿ ನಾಳೆಯಿಂದ ರೆಗುಲರ್ ಬರಬೇಕು ಎಂದು ಹೇಳಿದರು.ನಾನು ಮನೆಗೆ ಬಂದೆ.ಇತ್ತ‌ಮಗಗನ್ನು ಸಮೀಪದ ಶಾಲೆಯಲ್ಲಿ ಎರಡನೇ ತರಗತಿಗೆ ಸೇರಿಸಿದೆ.
ಮರುದಿನ ಎಪಿಎಸ್ ಕಾಲೇಜಿನಲ್ಲಿ ಒಂದೆರಡು ಅವಧಿ ಮಾತ್ರ ತರಗತಿ ಇತ್ತು..ಇನ್ನೇನು ನಾನು ಮನೆಗೆ ಹೊರಡಬೇಕಿಂದಿದ್ದಾಗ ಇಂಟರ್ ಕಾಮ್ ಮೂಲಕ ಪ್ರಿನ್ಸಿಪಾಲ್ ಚೇಂಬರಿಗೆ ಬರಲು ತಿಳಿಸಿದರು. ಶುರುವಿನ ದಿನವೇ ಏನಾದರೂ ತಪ್ಪಾಗಿದೆಯಾ ಎಂದು ಆತಂಕದಿಂದ ಬಡ ಬಡ ಬಡಿಯುತ್ತಿರುವ ಎದೆಯನ್ನು ಸಮಸ್ಥಿತಿಗೆ ತರಲು ಯತ್ನಿಸುತ್ತಾ ಪ್ರಿನ್ಸ್ಇಪಾಲ್ ಕೊಠಡಿಗೆ ಹೋಗಿ ಅವರಿಗೆ ವಂದಿಸಿದೆ.ಅವರು ಕುಳಿತುಕೊಳ್ಳಲು ಸೂಚಿಸಿದರು.ಅವರು ಎಂದಿಗೂ ಅವರ ಸಹೋದ್ಯೋಗಿಗಳನ್ನು ನಿಲ್ಲಿಸಿಕೊಂಡು ಮಾತಾಡುತ್ತಿರಲಿಲ್ಲ.ಒಳಗೆ ಬಂದ ತಕ್ಷಣವೇ ಕುಳಿತುಕೊಳ್ಳಲು ಹೇಳುತ್ತಿದ್ದರು.ಕುಳಿತ ನಂತರವೇ ಮಾತು ಶುರು ಮಾಡುತ್ತಿದ್ದರು.ಅವರ ಆ ಸೌಜನ್ಯವೇ ನನಗೆ ತುಂಬಾ ಮೆಚ್ಚಿಕೆಯಾದದ್ದು.
ಅದಿರಲಿ.ನಾನು ಕುಳಿತ ನಂತರ ತಮ್ಮ ಟೇಬಲ್ ನಲ್ಲಿ ಇದ್ದ ಹತ್ತು ಹನ್ನೆರಡು ಪುಸ್ತಕಗಳನ್ನು ನೀಡಿ ಇವನ್ನು ಒಂದು ತಿಂಗಳಲ್ಲಿ ಓದಿ ತಂದು ಕೊಡಿ ಎಂದು ಹೇಳಿದರು.
ಅವೆಲ್ಲವೂ ಪ್ರಕಟಿತ  ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳಾಗಿದ್ದವು..ನನಗೆ ಪಿಎಚ್ ಡಿ ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದಕ್ಕೇ ಅವನ್ನು ನನಗೆ ಓದಲು ನೀಡಿದ್ದಾರೆಂದು ನನಗೆ ಅರ್ಥ ವಾಗಿತ್ತು .ಸರಿ ಸರ್ ಎಂದು ಹೇಳಿ ಧನ್ಯವಾದ ತಿಳಿಸಿ ಮನೆಗೆ ಬಂದೆ.ಒಂದೊಂದೇ ಪುಸ್ತಕಗಳನ್ನು ಓದಲು ಶುರು ಮಾಡಿದೆ‌.ವಾರದೊಳಗೆ ಅಷ್ಟೂ ಸಂಶೋಧನಾ ಮಹಾ ಪ್ರಬಂಧಗಳನ್ನು ಓದಿ‌ ಮುಗಿಸಿ ಅವರಿಗೆ ಹಿಂದೆ ಕೊಟ್ಟೆ‌.ಎಲ್ಲವನ್ನು ಇಷ್ಟು ಬೇಗ ಓದಿ‌ಮುಗಿಸಿದಿರಾ ಎಂದು ಕೇಳಿದರು.ಹೌದೆಂದು ಗೋಣು ಅಲ್ಲಾಡಿಸಿ ಸೂಚಿಸಿದೆ.ನೋಡಿ ಲಕ್ಷ್ಮೀ ನೀವೊಬ್ಬ ರ‍್ಯಾಂಕ್ ಸ್ಟೂಡೆಂಟ್. ಮೂರು ಎಂಎ ಪದವಿಗಳನ್ನು ಪಡೆದಿದ್ದೀರಿ.ಅನೇಕ ಕಥೆ, ಲೇಖನಗಳನ್ನು ಬರೆದಿದ್ದೀರಿ.
ಇಂತಹ ಒಂದು ಪಿಎಚ್ ಡಿ ಸಂಶೋಧನಾ ಮಹಾ ಪ್ರಬಂಧ ಬರೆಯಲು ಸಾಧ್ಯವಿಲ್ಲವೇ ? ನಿಮಗೆ ಖಂಡಿತಾ ಸಾಧ್ಯ ಎಂದು ನನಗನಿಸುತ್ತದೆ.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಎಚ್ ಡಿ ಅಧ್ಯಯನ ಕೇಂದ್ರ ಇಲ್ಲಿಯೇ ಹತ್ತಿರ ಬಿಎಮ್ ಶ್ರೀ ಪ್ರತಿಷ್ಠಾನ ದಲ್ಲಿ ಇದೆ.ಅಲ್ಲಿ ಹೋಗಿ ವಿಚಾರಿಸಿ ಎಂದು ಹೇಳಿದರು.ಅವರು ಹೇಳಿದಂತೆ ಅಲ್ಲಿ ಹೋಗಿ ವಿಚಾರಿಸಿದೆ.ಕೆಲವೇ ದಿನಗಳಲ್ಲಿ ಪಿಎಚ್ ಡಿ ಅಧ್ಯಯನಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಾರೆ ಆಗ ಅರ್ಜಿ ಸಲ್ಲಿಸಿ ಎಂದು ಮಾಹಿತಿ ನೀಡಿದ ಅಲ್ಲಿ ಕೆಲಸ ಮಾಡುತ್ತಿದ್ದ ರಾಜಮ್ಮ ತಿಳಿಸಿದರು
ಅವರು ಹೇಳಿದಂತೆ ಒಂದು ಒಂದೂವರೆ ತಿಂಗಳ‌ಒಳಗೆ ಅರ್ಜಿ ಆಹ್ವಾನಿಸಿದರು. ಅರ್ಜಿ ಹಾಕಿದೆ ನಂತರ ಲಿಖಿತ ಪರೀಕ್ಷೆ ಇತ್ತು ಅದರಲ್ಲಿ ಆಯ್ಕೆಯಾಗಿ ಮೌಖಿಕ‌ಪರೀಕ್ಷೆಗೆ ಹಾಜರಾದೆ.ಅಲ್ಲಿದ್ದವರು ನನಗೆ ಯಾರೂ‌ ಪರಿಚಿತರಲ್ಲ.ಯಾವುದೇ ಇನ್ ಫ್ಲೂ ಯೆನ್ಸ್ ನಮಗಿರಲಿಲ್ಲ‌..ಆದರೂ ಅಲ್ಲಿ ನಿಷ್ಪಾಕ್ಷಿಕಿಕ ಆಯ್ಕೆ ನಡೆದ ಕಾರಣ ನಾನು ಆಯ್ಕೆ ಆದೆ.ನಾನು ಡಾ.ಎಸ್ ನಾಗರಾಜು ಅವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಮಾಡಲು ನಿರ್ಧರಿಸಿದೆ..ಮುಂದಿನದೆಲ್ಲಾ ಕನಸಿನಂತೆ ಈಗ ಭಾಸವಾಗುತ್ತದೆ ನನಗೆ
ಎಲ್ಲಿಯ ಕೋಳ್ಯೂರು ? ಏನೂ ಅರಿಯದ ಯಾರದೇ ಪ್ರಭಾವ ಇಲ್ಲದ ದೂರದ ಗಡಿನಾಡಿನ ಹಠಮಾರಿ ಪೆದ್ದು ಹುಡುಗಿ ಲಕ್ಷ್ಮೀ ಡಾ.ಲಕ್ಷ್ಮೀ ಆಗಿ ಬಿಟ್ಟಳು..ಎರಡನೇ ಡಾಕ್ಟರೇಟ್ ಪದವಿ ಕೂಡ ಒಲಿದು ಬಂತು..

ಅದರೆ ಇವೆಲ್ಲದರ ಹಿಂದೆ ಡಾ.ಕೆ ಗೋಕುಲನಾಥರ ಪ್ರೇರಣೆ ಇತ್ತೆಂಬುದನ್ನು ಎಂದು ನಾನು ಎಂದಿಗೂ ‌ಮರೆಯಲಾರೆ.ಡಾ.ಕೆ ಗೋಕುಲನಾಥರು ಅಂದು ಬೆಂಬಲ ನೀಡದಿದ್ದರೆ ನಾನು ಡಾಕ್ಟರೇಟ್/ ಪಿಎಚ್ ಡಿ ಪದವಿ‌ಪಡೆಯುವುದು ಬಹುಶಃ  ನನ್ನ ಪಾಲಿಗೆ ಗಗನ ಕುಸುಮವೇ ಆಗಿರುತ್ತಿತ್ತು  .
ಮೂರು ನಾಲ್ಕು ದಿನಗಳ ಹಿಂದೆ ವೆಂಕಟೇಶ ಎಂಬವರು ಪೋನ್ ಮಾಡಿ " ನಾನು ಪಿಎಚ್ ಡಿ ಮಾಡುತ್ತಿದ್ದೇನೆ..ನನಗೆ ನಿಮ್ಮ ಸಹಾಯ ಬೇಕಾಗಿತ್ತು.ನಾನು ಡಾ.ಉದಯ ಧರ್ಮಸ್ಥಳ ‌ಮೊದಲಾದ ಅನೇಕರನ್ನು ಸಂಪರ್ಕಿಸಿದೆ.ಅವರೆಲ್ಲ ನೀವು ಇದಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿ ನಿಮ್ಮ ಮೊಬೈಲ್ ನಂಬರ್ ಕೊಟ್ಟರು..ನನಗೆ ಎಂಟು ಹತ್ತು ಪುಟಗಳಷ್ಟು ಕನ್ನಡ ಪದಗಳನ್ನು ತುಳುವಿಗೆ ಅನುವಾದಿಸಿ ಕೊಡುವಿರಾ ಎಂದು ಕೇಳಿದರು.ಮತ್ತು ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಲು ಎರಡು ದಿನ ಮಾತ್ರ ಇದೆ .ಬೇಗ ಬೇಕಿತ್ತು ಎಂದು ಹೇಳಿದರು.ಪಿಎಚ ಡಿ ವಿದ್ಯಾರ್ಥಿಗಳಿಗೆ ಎಂತಹ ಒತ್ತಡ ಇರುತ್ತದೆ ಎಂಬುದರ ಅರಿವು ನನಗಿತ್ತು..ಆದರೆ ನಾನು ಸ್ವಲ್ಪ ಆರೋಗ್ಯ ಸಮಸ್ಯೆಯಿಂದಾಗಿ ವಿಕ್ರಮ ಹಾಸ್ಪಿಟಲ್ ಗೆ ದಾಖಲಾಗಿದ್ದೆ .ಹಾಗಾಗಿ ಸ್ವಲ್ಪ ಹಿಂದೇಟು ಹಾಕಿದೆ.ನಂತರ ಅವರ ವಿನಂತಿ ಮೇರೆಗೆ ಆಸ್ಪತ್ರೆಯಲ್ಲಿ ಇದ್ದಕೊಂಡೇ ತುಳುವಿಗೆ ಅನುವಾದಿಸಿ ನೀಡಿದೆ..ಕೊನೆಯಲ್ಲಿ ನಿಮ್ಮ ಗೈಡ್  ಯಾರೆಂದು ಕೇಳಿದೆ.ಆಗ ಅವರು ಎಪಿಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ.ಕೆ ಗೋಕಲುನಾಥರು ಎಂದು ತಿಳಿಸಿದರು..ವೆಂಕಟೇಶ ನಿಜಕ್ಕೂ ಅದೃಷ್ಟವಂತರು..ಗೋಕುಲನಾಥರ ಬಳಿ‌ಪಿಎಚ್ ಡಿ ಮಾಡಲು ಪೂರ್ವಜನ್ಮದ ಪುಣ್ಯ ಬೇಕು ಅಷ್ಟು ಸಜ್ಜನಿಕೆಯ ಸಾಕಾರ ಮೂರ್ತಿ ಅವರು.
ಈ ವೃತ್ತಾಂತದಿಂದ ನೆನಪಾಗಿ ಡಾ
ಕೆ ಗೋಕುಲನಾಥರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಬರೆದೆ 

No comments:

Post a Comment