Tuesday 31 May 2016

ದೊಡ್ಡವರ ಹಾದಿ -8 ಅಪಾರ ಒಲುಮೆಯ ಡಾ.ಅಮೃತ ಸೋಮೇಶ್ವರ

ಅಜಾತ ಶತ್ರು ತುಳು ಜಾನಪದ ಬ್ರಹ್ಮ ಅಮೃತ ಸೋಮೇಶ್ವರ ರ ಬಗ್ಗೆ ತಿಳಿಯದ ತುಳು ಸಂಶೋಧಕರಿಲ್ಲ ,ಅವರ ಸಹಾಯವನ್ನು ಪಡೆದೇ,ಅವರ ಮಾರ್ಗ ದರ್ಶನ ಪಡೆಯದೇ ಇರುವವರು ತುಂಬಾ ಅಪರೂಪ .
ಆಲದ ಮರ ವಿಸ್ತ್ರವಾಗಿ ಬೆಳೆದು ನಿಂತು ನೂರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ,ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಮೊಳೆಯಲು ಕೂಡ ಬಿಡುವುದಿಲ್ಲ ,ವಿದ್ವಾಂಸರು ಆಲದ ಮರದಂತೆ ಎಂಬ ಮಾತಿದೆ ಆದರೆ ಡಾ.ಅಮೃತ ಸೋಮೆಶ್ವರರು ಇದಕ್ಕೆ ಭಿನ್ನ್ನವಾದವರು .ತಾವು ದೊಡ್ಡ ವಿದ್ವಾಂಸರಾಗಿದ್ದರೂ ಇತರರಿಗೆ ಸಂಪೂರ್ಣ ಬೆಂಬಲ ಇತ್ತು ಎಳೆಯರನ್ನು ಬೆಳೆಸಿದವರು .ಅವರಿಂದ ಮಾರ್ಗ ದರ್ಶನ ಪಡೆದು ಮುಂದುವರಿದವರಲ್ಲಿ ನಾನು ಕೂಡ ಒಬ್ಬಳು .

ಸುಮಾರು 8 -9 ವರ್ಷಗಳ ಹಿಂದೆ ನನ್ನ ಮೊದಲ ಪಿಎಚ್ ಡಿ ಪ್ರಬಂಧ "ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ "ಎಂಬ ಸಂಶೋಧನಾ ಮಹಾ ಪ್ರಬಂಧದವನ್ನು ಸಿದ್ಧ ಪಡಿಸುವ ಬಗ್ಗೆ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೆ .ಆದಾಗಲೇ ನಾನು ಬರೆದಿದ್ದನ್ನು ಓದಿ ತಮ್ಮ ಅಭಿಪ್ರಾಯ ನೀಡಿದ್ದರು .ಕೆಲವು ಸಲಹೆಗಳನ್ನು ನೀಡಿದ್ದರು .
ಆನಂತರ ಕೂಡ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೆ
ಆಗ ನಾನು ನನ್ನ ಆಸಕ್ತಿಯ ಈ ತನಕ ಹೆಸರು ಕೂಡ ದಾಖಲಾಗದ ಅಕ್ಕಚ್ಚ್ಚು ,ಅಚ್ಚು ಬಂಗೆತಿ ,ಕುಕ್ಕೆತ್ತಿ ಬಳ್ಳು ,ಕುಂಡ ಮಲ್ಲು ಮೊದಲಾದ ದೈವಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಗ್ಗೆ ಚರ್ಚಿಸಿದ್ದೆ .ಆಗ ಅವರು ಅದನ್ನು ಮೆಚ್ಚ್ಚಿ ಈ ರೀತಿಯ ಸಂಶೋಧನೆಯ ಅಗತ್ಯವಿದೆ ಈ ನಿಟ್ಟಿನಲ್ಲಿ ಬೇರೆ ಯಾರೂ ಯತ್ನಿಸಿಲ್ಲ ನಿಮ್ಮದು ಒಳ್ಳೆಯ ಪ್ರಯತ್ನ ಎಂದಿದ್ದರು .ಹಾಗೆಯೇ ಮಾತನಾಡುತ್ತಾ "ಡಾ..ವೆಂಕಟ ರಾಜ ಪುಣಿಚಿತ್ತಾಯರಿಗೆ ಎಲ್ಲೇ ಹೋದರು ತುಳು ಪ್ರಾಚೀನ ಹಸ್ತಪ್ರತಿಗಳು ಕಣ್ಣಿಗೆ ಬೀಳುತ್ತವೆ ಹಾಗೆ ನಿಮಗೆ ಎಲ್ಲೇ ಹೋದರೂ ಹೊಸ ಹೊಸ ಭೂತಗಳು ಸಿಗುತ್ತವೆ ಎಂದು ಹೇಳಿ ಪ್ರೋತ್ಸಾಹ ನೀಡಿದ್ದರು

2010 ರಲ್ಲಿ ನನ್ನ ಐದು ಪುಸ್ತಕಗಳನ್ನು  ಪ್ರಕಟಿಸುವ ಸಂದರ್ಭದಲ್ಲಿ ನಾನು ನನ್ನ ಒಂದು ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡುತ್ತೀರಾ ಎಂದು ಫೋನ್ ಮಾಡಿ ಕೇಳಿದೆ ಆಗ ಅವರು ತಕ್ಷಣವೇ ನಿಮ್ಮ ಅಪರೂಪದ ಭೂತಗಳ ಶೋಧನೆ ಉಂಟಲ್ಲ ಅದಕ್ಕೆ ನಾನು ಮುನ್ನುಡಿ ಬರೆಯುತ್ತೇನೆ ಅದರ ಪ್ರತಿಯನ್ನು ಕಳುಹಿಸಿ ಎಂದು ಹೇಳಿದರು ,ಅಂತೆಯೇ ಅದಕ್ಕ್ಕೆ ಒಂದು ಅಪೂರ್ವವಾದ ಮುನ್ನುಡಿ ಬರೆದು ಕೊಟ್ಟು ನನ್ನ ಸಂಶೋಧನೆಯ ಉತ್ಸಾಹವನ್ನು ಹೆಚ್ಚಿಸಿದರು
ಅನಂತರನನ್ನ ಸಂಶೋಧನಾ ಅಧ್ಯಯನದಲ್ಲಿ ಸಂದೇಹ ಉಂಟಾದಾಗೆಲ್ಲ  ಆಗಾಗ ಅವರಿಗೆ ಫೋನ್ ಮಾಡಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೆ
ಕಾಲ ಕ್ರಮೇಣ ನಾನು ಸ್ವಂತ ಅಧ್ಯಯನದ ಹಾದಿಯಲ್ಲಿ ನಡೆದೆ.
ನಿನ್ನೆ ಡಾ..ಅಮೃತ ಸೋಮೇಶ್ವರರನ್ನು ಭೇಟಿ ಮಾಡಿ ನನ್ನ  ಪುಸ್ತಕಗಳನ್ನು ನೀಡಿದೆ .ಅವರು ತುಂಬಾ ಖುಷಿ ಪಟ್ಟು ಹೀಗೆ ಅಧ್ಯಯನ ಮುಂದುವರಿಸಿ ಎಂದು ಹೇಳಿದರು ಅವರ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆಈ ಇಳಿ ವಯಸಿನಲ್ಲೂ ಅವರ ಅಪಾರ ನೆನಪಿನ ಶಕ್ತಿ ಕುಂದದ ಗ್ರಹಣ ಶಕ್ತಿ ,ಬತ್ತದ ಉತ್ಸಾಹ,ಅಪಾರ ಒಲುಮೆ  ನಮಗೆ ನಿಜಕ್ಕೂ ಮಾದರಿ

ದೊಡ್ಡವರ ಹಾದಿ -8 ಅಪಾರ ಒಲುಮೆಯ ಡಾ.ಅಮೃತ ಸೋಮೇಶ್ವರ
ನಾಡೋಜ ಡಾ.ಅಮೃತ ಸೋಮೇಶ್ವರರ ರಚನೆಗಳು

ಕಥಾ ಸಂಕಲನ
1 ಎಲೆಗಿಳಿ(1957)
2 ರುದ್ರ ಶಿಲೆ ಸಾಕ್ಷಿ (1970)
3 ಕೆಂಪು ನೆನಪು(1988)
4ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು (1995)
ಕವನ ಸಂಕಲನಗಳು
5 ವನಮಾಲೆ (1975)
6 ಭ್ರಮಣ (1974)
7 ಜ್ಯೋತಿ ದರ್ಶನವಾಯಿತು (1989)
8 ಉಪ್ಪು ಗಾಳಿ (1992)ಕರೆ ಗಾಳಿ
ಕಾದಂಬರಿ
9 ತೀರದ ತೆರೆ
ರೇಡಿಯೋ ರೂಪಕಗಳು
10 ವಿಶ್ವ ರೂಪ
11 ಮದನಗ
12 ಪೆರಿಂಜ ಗುತ್ತು ದೇವ ಪೂಂಜೆ
13 ಕೋಟಿ ಚೆನ್ನಯ
ನಾಟಕಗಳು
14 ಕೋಟಿ ಚೆನ್ನಯ
15 ವೀರ ರಾಣಿ ಅಬ್ಬಕ್ಕ ದೇವಿ
16 ಗೊಂದೊಳು
ತುಳು ನಾಟಕಗಳು
17 ತುಳು ನಾಟಕ ಸಂಪುಟ
18 ಪುತ್ತೋರ್ದ ಪುತ್ತೊಲಿ(1984)
19 ತುಳುನಾಡ ಕಲ್ಕುಡೆ
20 ಆಟೋ ಮುಗಿಂಡ್
21 ಪ್ರೇಮ ಸಂವಾದ
22 ಕೊಡಿ ಮರ
24 ರಾಯ ರಾವುತೆ ((1982)
25 ಉಳ್ಳಾಲೊದ ರಾಣಿ ಅಬ್ಬಕ್ಕಾ ದೇವಿ
26 ಜೋಕುಮಾರ ಸ್ವಾಮಿ (ಅನುವಾದ)
27 ಬಡವನ ಮಡದಿ ಸುಂದರಿಯಾದರೆ ..
ತುಳು ಕವನ ಸಂಕಲನಗಳು
28 ತಂಬಿಲ
29 ರಂಗ ಗೀತ
ತುಳು ಭಾವ ಗೀತೆಗಳು
30 ಪನ್ನೀರ್
31 ಹಿಂಗಾರ
32 ಆಟಿ ಕಳೆಂಜ
ತುಳು ಭಕ್ತಿ ಗೀತೆಗಳು
33 ಮಾಯೊದ ಪುರಲ್
34 ಮಲೆತ ತುಡರ್
35ಕ್ಷೇತ್ರ ದರ್ಶನ
36 ಸುಗಿಪು ಮದಿಪು
37 ರಂಗನ್ ತೂಯನದೇ
38 ಪೂ ಪೂಜನ
39 ಪೂ ಪರುಂದ್
ಪಾಡ್ದನ ಸಂಗ್ರಹ - ತುಳು ಜಾನಪದ
40 ಬೀರು ಲೆಮಿಂಕಯ (ಫಿನ್ ಲ್ಯಾಂಡ್ ಜಾನಪದ ಮಹಾ ಕಾವ್ಯ –ಕಲೇವಲದ ತುಳು ಅನುವಾದ )
41 ಬಾಮ ಕುಮಾರ ಸಂಧಿ
42 ತುಳು ಪಾಡ್ದನ ಸಂಪುಟ
43 ತುಳು ಸಂಸ್ಕೃತಿಯ ಮುಂದಿನ ಶೋಧನೆ
44 ತುಳು ಜಾನಪದ ಕೆಲವು ನೋಟಗಳು
45 ತುಳು ಪಾಡ್ದನದ ಕಥೆಗಳು
46 ಅವಿಲು
46 ಬಾಮ ಕುಮಾರ ಸಂಧಿ ಕಥೆ
47 ಕೊರಗರು
48 ತುಳು ಬದುಕು
49 ಪೊಸ ಗಾದೆಲು(ಸ್ವತಂತ್ರ ಗಾದೆಗಳು )
50 ತೆರಿನಾಯನ ಪಾತೆರ (ಸರ್ವಜ್ಞನ ವಚನಗಳು ತುಳು ಅನುವಾದ )
ಯಕ್ಷಗಾನ ವಿಮರ್ಶೆ –ಕೃತಿಗಳು
51 ಯಕ್ಷಗಾನ ಹೆಜ್ಜೆ ಗುರುತುಗಳು
52 ಯಕ್ಷಾಂದೋಳ
54 ಯಕ್ಷತರು
ಜನಾಂಗ ಅಧ್ಯಯನ
55 ಕೊರಗರು
ವ್ಯಕ್ತಿ ಚಿತ್ರ
56 ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಮತ್ತು ಕೃತಿಗಳು
57 ಮಹಾ ಚೇತನಗಳು
ಸಂಪಾದನಾ ಗ್ರಂಥಗಳು
58 ಸುಂದರ ಕಾಂಡ
59 ಅಬ್ಬಕ್ಕ ಸಂಕಥನ
60 ವಜ್ರ ಕುಸುಮ
61 ಯಕ್ಷ ಗಂಗೋತ್ರಿ
ಸಹ ಸಂಪಾದನೆ
62 ನಾಟ್ಯ ಮೋಹನ
63 ಅಮ್ಮೆಂಬಳ ಅರುವತ್ತು
64 ಉಲ್ಲಾಳ ಇತಿ ಆದಿ
ಶಬ್ದ ಕೋಶ
65 ಮೋಯಮಲಯಾಳ ಶಬ್ದ ಕೋಶ
66 ಅಪಾರ್ಥಿನೀ (ಕುಚೋದ್ಯ ಕೋಶ )
ನವ ಸಾಕ್ಷರರಿಗಾಗಿ ರಚಿಸಿದ ಕೃತಿಗಳು
67 ಕಲ್ಲುರ್ಟಿ ಕಲ್ಕುಡ
68 ಉತ್ಸವಗಳು
69 ಯಕ್ಷಗಾನ
ಸಂಸ್ಕೃತಿ ಚಿಂತನ
70 ಭಗವತಿ ಆರಾಧನೆ
71 ಜಿಜ್ಞಾಸೆಯ ತುಣುಕುಗಳು (ವೈಚಾರಿಕ)
72 ದೀಪದ ಕೆಳಗೆ (ಅಂಕಣ ಬರಹ ಸಂಕಲನ )
73 ಹೃದಯದ ವಚನಗಳು (ವಚನ ಸಾಹಿತ್ಯ )
ಯಕ್ಷಗಾನ ಪ್ರಸಂಗಗಳು ಮತ್ತು ಕೃತಿಗಳು
74 ಯಕ್ಷಗಾನ ಕೃತಿ ಸಂಪುಟ
75 ಸಹಸ್ರ ಕವಚ ಮೋಕ್ಷ
76 ಕಾಯ ಕಲ್ಪ
77 ಅಮರ ವಾಹಿನಿ
78 ತ್ರಿಪುರ ಮಥನ
77 ಮಹಾ ಕಲಿ ಮಗಧೇಂದ್ರ
78 ವಂಶ ವಾಹಿನಿ
79 ಮಹಾ ಶೂರ ಭೌಮಾಸುರ
80 ಚಾಲುಕ್ಯ ಚಕ್ರೇಶ್ವರ
81 ಅಂಧಕ ಮೋಕ್ಷ
82 ಪುತ್ತೂರ್ದ ಮುತ್ತು
83 ಚಕ್ರವರ್ತಿ ದಶರಥ
84 ಆದಿ ಕವಿ ವಾಲ್ಮೀಕಿ
85 ಚಂದ್ರ ಮತೀ ಸ್ವಯಂವರ
86 ಭುವನ ಭಾಗ್ಯ
87 ಘೋರ ಮಾರಕ
88 ಅರುಣ ಸಾರಥ್ಯ ಮತ್ತು ಇತರ ಯಕ್ಷಗಾನಗಳು
89 ಛಾಯಾವತರಣ ಮತ್ತು ಪ್ರಸಂಗಗಳು
90 ನಿಸರ್ಗ ವಿಜಯ
91 ಸಹನಾ ಸಂದೇಶ
92 ಸತ್ಯನಾಪುರದ ಸಿರಿ
93 ರುಧಿರ ಮೋಹಿನಿ
94 ಏಕ ಶೃಂಗಿ
95 ಅಂಗುಲಿ ಮಾಲಾ
96 ಮದಿರಾಸುರ ದರ್ಶನ
97 ಮಹಾ ದಾನಿ ಬಲಿಯೇಂದ್ರ
98 ಸಪ್ತ ಮಾತೃಕೆಯರು
99 ಶ್ರೀ ಭಗವತಿ ಚರಿತ
100 ಸಂಗ್ಯಾ ಬಾಳ್ಯಾ
101 ಅಮರ ಶಿಲ್ಪಿ ಕಲ್ಕುಡ
ಯಕ್ಷಗಾನ ಧ್ವನಿ ಸುರುಳಿಗಳು
102 ಪೌಂಡ್ರಕ ವಾಸುದೇವ
103 ಶಬ್ದ ವೇದಿ
104 ಆಚಾರ್ಯ ವಿಶ್ವ ರೂಪ
105 ತ್ರಿಪುರ ಮಥನ
106 ಮಹಾ ಶೂರ ಭೌಮಾಸುರ
107 ದಂಭ ದಮನ
108 ಗುರು ತೇಜ
109 ಅಂಧಕ ಮೋಕ್ಷ
110 ಘೋರ ಮಾರಕ
111 ಆದಿ ಕವಿ ವಾಲ್ಮೀಕಿ
112 ವೀರ ಕಲ್ಕುಡ
113ಕಾಯ ಕಲ್ಪ
114 ಗಂಗಾವತರಣ
115 ಭುವನದ ಭಾಗ್ಯ
116 ವಾತಾಪಿ ಜೀರ್ಣೋಭವ
117 ವಂಶ ವಾಹಿನಿ
118 ಚಂದ್ರಮತೀ ಸ್ವಯಂವರ
119 ಪಾದುಕಾ ಪ್ರದಾನ –ತುಳು ಯಕ್ಷಗಾನ
ಧ್ವನಿ ಸುರುಳಿಗಳು –ಭಕ್ತಿ ಗೀತೆಗಳು
120 ಶ್ರೀ ಭಗವತಿ ಭಕ್ತಿ ಗೀತೆಗಳು
121 ಧರ್ಮ ಜ್ಯೋತಿ
122 ಶರಣು ಶಬರೀಶ
123 ಕದಳೀವನ
124 ಗೀತ ಜ್ಯೋತಿ
125 ಪ್ರಮೋದ ಪ್ರಸಾದ
126 ಶ್ರೀ ನಾರಾಯಣ ಗುರು ಸ್ತಪನಾಂಜಲಿ
127 ಶ್ರೀ ಭಗವತಿ ಭಕ್ತಿ ಕುಸುಮಾಂಜಲಿ
128 ಶ್ರೀ ವೈಷ್ಣೋ ದೇವಿ ದಿವ್ಯಾಂಜಲಿ

ಸಾಹಿತ್ಯ ವಿಮರ್ಶೆ
129 ಶ್ರೀ ಜೆಪಿ ರಾಜ ರತ್ನಂ ಅವರ ಕವಿತೆಗಳು
130 ನಂದಳಿಕೆಯ ನಂದಾದೀಪ
131 ಅರಿವಿನ ಹರಿಕಾರರು
132 ಸಿಂಗಾರ ಗಾದೆಗಳು (ಸ್ವತಂತ್ರ ಗಾದೆಗಳು )
ನೃತ್ಯ ರೂಪಕಗಳು
133 ಸಪ್ತ ಮಾತೃಕೆಯರು
134 ಬಲಿ ಚಕ್ರವರ್ತಿ
135ನಿಸರ್ಗ ವಿಜಯ
136 ಸಂಭವಾಮಿ ಯುಗೇ ಯುಗೇ
137 ಸಹನಾ ಸಂದೇಶ
138 ನಾಟ್ಯ ವೇದ
139 ಕರ್ಣ ಗಾಥಾ
140 ಚಲದಂಕೆ ಅಂಬೆ
141 ಭರತ ಗಾಥಾ
142 ಸತ್ಯನಾಪುರದ ಸಿರಿ
143 ಏಳುವೆರ್ ದೆಯ್ಯಾರ್
144 ತುಳುವಾಲ ಬಲಿಯೇಂದ್ರ
ಸಾಗರಂ ಸಾಗರೋಪಮಂ ಅಂತೆಯೇ ಅಮೃತಂ ಅಮೃತೋಪಮಂ ,ದೈತ್ಯ ಪ್ರತಿಭೆಗೆ ನಮೋ ನಮಃ

ಇನ್ನೂ ಅನೇಕ ಕೃತಿಗಳಿವೆ ಎಲ್ಲದರ ಹೆಸರನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ –ಡಾ.ಲಕ್ಷ್ಮೀ ಜಿ ಪ್ರಸಾದ
http://shikshanaloka.blogspot.in/2016/05/8.html


Thursday 26 May 2016

ಹೀಗೊಂದು ಮೋಸ ಪುರಾಣ (c)ಡಾ.ಲಕ್ಷ್ಮೀ ಜಿ ಪ್ರಸಾದ


ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು

ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .ಎರಡು ದಿನ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ  ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ  ಅಕಾಡೆಮಿಗಳ  ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ನಿನ್ನೆ ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ  ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ  ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತು

ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್  ಪುರಾಣ ನೆನಪಾಯಿತು 

ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ   ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ .... ಅವರಿಗೆ ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂದು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ  ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ...ಯವರ ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ  ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !

ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ

ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .


ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ          ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !

ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ
ನನ್ನ ಪುಸ್ತಕಗಳು




















Wednesday 25 May 2016

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು













ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

Tuesday 10 May 2016

ಕೈಬರಹ ಕೆಟ್ಟದಾಗಿ ಇದ್ದರೂ ಲಾಭವಾಗುತ್ತದೆ !-ಡಾ.ಲಕ್ಷ್ಮೀ ಜಿ ಪ್ರಸಾದ



ಕೈಬರಹ ಸುಂದರವಾಗಿದ್ದರೆ ನಮಗೆ ವಿದ್ಯಾರ್ಥಿಗಳಾಗಿದ್ದಾಗ ಒಳ್ಳೆ ಅಂಕಗಳು ಲಭಿಸುತ್ತವೆ ,ಪತ್ರ ಗಿತ್ರ ಬರೆಯಬೇಕಾದರೆ ಅವರ ಸಹಾಯವನ್ನು ಜನರು  ಕೇಳುತ್ತಾರೆ ಹಾಗಾಗಿ ಸುಂದರ ಕೈ ಬರಹ ಇರುವವರಿಗೆ ಸದಾ ಬೇಡಿಕೆ ಇರುತ್ತದೆ !ಒಳ್ಳೆಯ ಸ್ಥಾನಮಾನ ಸಿಗುತ್ತದೆ ,ಆದರೆ ಅಕ್ಷರ ಕೆಟ್ಟದಾಗಿರೋದರಿಂದ ಕೂಡ ಕೆಲವೊಮ್ಮೆ ಬೆನಿಫಿಟ್ ಗಳು ಸಿಗುವುದು ಉಂಟು !ಅದು ಹೇಗೆ ಗೊತ್ತಾ ?ತಿಳಿಯಲು ಕುತೂಹಲ  ಇದ್ದರೆ ಇದನ್ನು ಓದಿ 

ನಿನ್ನೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು .ಪ,ಗೋ ಅವರ ಮಗ ಪದ್ಯಾಣ ರಾಮಚಂದ್ರ ,ಹಾಗೂ ಏಕಮ್ ಪ್ರಕಾಶನದ ರಂಗ ಸ್ವಾಮಿ ಮೂಕನಹಳ್ಳಿ ಯವರು ನನಗೆ ತುಂಬಾ ಆತ್ಮೀಯರೂ ಆಗಿದ್ದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ .ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ .ಅಲ್ಲಿ ಹೋದಾಗ ಕೇ ಪಿ ರಾಜಗೋಪಾಲ ಕನ್ಯಾನ ಅಲ್ಲಿಗೆ ಬರುವವರಿದ್ದು ಅವರಿಗೆ ಒಂದು ಅಭಿನಂದನೆ ಕೂಡ ಏರ್ಪಡಿಸಿರುವುದು ತಿಳಿಯಿತು .

ರಾಜಗೋಪಾಲ ಕನ್ಯಾನ ಅವರು ಕಲೆ ಸಾಹಿತ್ಯ ಅಭಿಮಾನಿಯಾಗಿದ್ದು ,1995ರಲ್ಲಿ ಪ.ಗೋ ಅವರುಹೊಸದಿಗಂತ ಪತ್ರಿಕೆಗೆ ಬರೆದ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ,ಪಗೋ ಕುರಿತು ವಿಶಿಷ್ಟ ಸೃಷ್ಟಿಗಳ ಲೋಕದಲ್ಲಿ ಎಂಬ ಕೃತಿಯನ್ನು 2005ರಲ್ಲಿ ಬೆಳಕಿಗೆ ತಂದಿದ್ದರು .ಅದಕ್ಕಾಗಿ ಪಗೋ ಮಗ ಪದ್ಯಾಣ ರಾಮಚಂದ್ರ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದರು .ಆದರೆ ಪದ್ಯಾಣ ರಾಮಚಂದ್ರ ಹಾಗೂ ಏಕಮ್ ಪ್ರಕಾಶನದ ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ರಾಜಗೋಪಾಲ ಕೆಪಿ ಅವರ ಪರಿಚಯವಿರಲಿಲ್ಲ ,ನನಗೆ ರಾಜಗೋಪಾಲ ಕನ್ಯಾನ ತುಂಬಾ ಅತ್ಮೀಯರಾಗಿರುವುದು ಪದ್ಯಾಣ ರಾಮಚಂದ್ರ ಅವರಿಗೆ ಗೊತ್ತಿತ್ತು ಹಾಗಾಗಿ ಅವರ ಪರಿಚಯವನ್ನು ಬರೆದುಕೊಡಲು ತಿಳಿಸಿದರು .ಹಾಗೆ ರಾಜಗೋಪಾಲ ಕನ್ಯಾನ ಅವರ ಸಂಕ್ಷಿಪ್ತ ಪರಿಚಯ ಬರೆದುಕೊಟ್ಟೆ .ಅದನ್ನು ಅವರು ರಂಗ ಸ್ವಾಮಿ ಮೂಕನ ಹಳ್ಳಿ ಅವರಿಗೆ ಕೊಟ್ಟರು 
ಅವರಿಗೆ ಅದನ್ನು ನೋಡುತ್ತಲೇ ತಲೆಬಿಸಿ ಆಯಿತು ಅದನ್ನು ಓದುವುದು ಹೇಗೆ ಅಂತ !ಅಷ್ಟು ಸುಂದರವಾಗಿದೆ ನನ್ನ ಕೈಬರಹ !ಮೊದಲೇ ನನ್ನ ಕೈಬರಹ ಕೆಟ್ಟದಾಗಿದೆ ಅದಕೆ ಸರಿಯಾಗಿ ನಿನ್ನೆ ಕನ್ನಡಕ ತೆಗೆದುಕೊಂಡು ಹೋಗಲು ಮರೆತಿದ್ದೆ.ಬೇರೆ !ಹಾಗಾಗಿ ನನ್ನ ಅಕ್ಷರ ತೀರ ಅಧ್ವಾನವಾಗಿತ್ತು.ಅದನ್ನು ರಂಗಸ್ವಾಮಿ ಯವರಿಗೆ ಬಿಡಿ ನನಗೆ ಕೂಡ ಓದಲು ಕಷ್ಟಕರವೇ ಆಗಿತ್ತು !ಹಾಗಿರುವಾಗ ಅವರ ಅವಸ್ಥೆಯನ್ನು ಎಂತ ಹೇಳುದು !
ಆಗ ಅವರು ಅದನ್ನು ನನಗೆ ಕೊಟ್ಟು "ಕೆಪಿ ರಾಜಗೋಪಾಲ ಕನ್ಯಾನ ಅವರನ್ನು ನೀವೇ ಪರಿಚಯಿಸಿ "ಎಂದು ನನಗೆ ಹೇಳಿನನ್ನ ಕೈಬರಹ ಓದುವ ಗಂಡಾಂತರದಿಂದ ಪಾರಾದರು ! .
ನನಗೆ ತುಂಬಾ ಖುಷಿ ಆಯ್ತು !ಯಾಕೆಂದರೆ ಕೇ ಪಿ ರಾಜಗೋಪಾಲ ಕನ್ಯಾನ ಅವರು ನನಗೆ ತುಂಬಾ ಆತ್ಮೀಯರು ,ನನ್ನ ಸಂಶೋಧನಾ ಕೃತಿಗಳ ಪ್ರಕಟಣೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟವರು ಅವರು .ನಾನು ಹವ್ಯಕ ಭಾಷೆಯಲ್ಲಿ ನಾಟಕ ಬರೆದ ಮೊದಲ ಮಹಿಳೆ ಎಂಬುದನ್ನು ನನಗೆ ತಿಳಿಸಿದವರೂ ಕೂಡ ಅವರೇ .ಎಲ್ಲೋ ಮೂಲೆಯಲ್ಲಿ ಇದ್ದ ನನ್ನ ಸುಬ್ಬಿಇಂಗ್ಲಿಷ್ ಕಲ್ತದು ಎಂಬ ನಾನು ಏಳನೇ ತರಗತಿಯಲ್ಲಿ ಬರೆದಿದ್ದ ನಾಟಕ  ಮಹಿಳೆ ಬರೆದ ಮೊದಲ ನಾಟಕ ,ಆ ಮಹಿಳೆ ನಾನೇ ಎಂಬುದನ್ನು ತಿಳಿಸಿ ಆ ನಾಟಕ ಬೆಳಕಿಗೆ ಬರಲು ಕಾರಣರಾದವರು ಅವರು .ನನ್ನಂತೆ ಅನೇಕರಿಗೆ ಅಪಾರ ಬೆಂಬಲ ನೀಡಿ ಪ್ರೋತ್ಸಾಹಿಸಿದವರು .ನೂರಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತೆ ಇದ್ದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಿದವರು ಅವರು .
ಹಾಗಾಗಿ ಅವರ ಪರಿಚಯವನ್ನು ಸಭೆಗೆ ಮಾಡಿಕೊಡುವುದು ನನಗೆ ಇಷ್ಟದ ವಿಚಾರವೇ ಆಗಿತ್ತು .ನನ್ನ ಕೆಟ್ಟ ಕೈ ಬರಹ ನನಗೆ ಆ ಅವಕಾಶವನ್ನು ತಂದು ಕೊಟ್ಟಿತು !ಈಗ ಗೊತ್ತಾಗಿರಬಹುದು ನಿಮಗೆ  ಅಕ್ಷರ ಚೆನ್ನಗಿಲ್ಲದೆ ಇದ್ರೂ ಲಾಭ ಇದೆ ಅಂತ!