Saturday 11 June 2022

ಕೃತಿಚೋರ ವಿಶ್ವನಾಥ ಬದಿಕಾನ

 ಕೃತಿ ಚೋರ ವಿಶ್ವನಾಥ ಬದಿಕಾನ 


#ಕೃತಿಚೋರ_ವಿಶ್ವನಾಥ_ಬದಿಕಾನ  ರೇ 

ನನ್ನ ಬೈಲ ಮಾರಿ ನಲಿಕೆ ಎಂಬ ಸಂಶೋಧನಾ ಬರಹವನ್ನು ನೀವು ಕಣಜದಿಂದ ಕಾಪಿ ಮಾಡಿದ್ದು .ಬ್ಲಾಗ್ ನಿಂದ ಅಲ್ಲ ಜಾನಪದ ಕರ್ನಾಟಕ ವಿದ್ವಾತ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ ಕಣಜ ಜಾಲತಾಣದಲ್ಲಿ ಇತ್ತು.ಅದರಿಂದ ಕಾಪಿ ಮಾಡಿದೆ ಎಂದು ಆತ್ಮ ಸಾಕ್ಷಿಯನ್ನು ಮಾರಿಕೊಂಡು ಧೂರ್ತರ ರಕ್ಷಣೆಗಾಗಿ ಹಸಿ ಹಸಿ ಸುಳ್ಳು ಹೇಳಿದ್ದೀರಿ.ಕಣಜದಿಂದ ಕದ್ದರೂ ಬ್ಲಾಗ್ ನಿಂದ ಕದ್ದರೂ ಕೃತಿ ಚೌರ್ಯವೇ ತಾನೇ..ಕಣಜದಲ್ಲಿ ಇದ್ದದ್ದೂ ನನ್ನ ಬರಹವೇ ತಾನೇ..

ಕಣಜದಿಂತ ಕಾಪಿ ಮಾಡಿದ್ದರೆ ಬ್ಯೂಟಿ ಅಫ್ ತುಳುನಾಡು fb ಲಿಂಕ್ ಅನ್ನು ಉಲ್ಲೇಖದಲ್ಲಿ ಯಾಕೆ ಹಾಕಿದ್ದೀರಿ ? ಕಣಜದಲ್ಲಿ ಜಾನಪದ ಕರ್ನಾಟಕದಲ್ಲಿದ್ದ ನನ್ನ ಬರಹ ಇದ್ದಿದ್ದಾದರೆ ಅದರ ಲ್ಲಿ ಬರಹದ ಆರಂಭದಲ್ಲಿಯೇ ಲೇಖಕಿಯಾದ ನನ್ನ ಹೆಸರು ಇತ್ತಲ್ವಾ? ಕಾಪಿ ಮಾಡಿ ನಿಮ್ಮ ಹೆಸರಿನಲ್ಲಿ ಯಾಕೆ ಹಾಕಿಕೊಂಡಿರಿ ? ಜಾನಪದ ಕರ್ನಾಟಕದ ಬರಹದಲ್ಲಿ ಒಂದೇ ಒಂದು ಅಕ್ಷರ ದೋಷವಿಲ್ಲ.ಹಾಗಾಗಿ ಅದೇ ಬರಹ ಕಣಜದಲ್ಲಿ ಬಂದಿದ್ದಾದರೆ ಅದರಲ್ಲೂ ಒಂದೇ ಒಂದು ಅಕ್ಷರ ದೋಷವಿರಲು ಸಾಧ್ಯವಿಲ್ಲ.ಆದರೆ ನೀವು ನಿಮ್ಮ ಹೆಸರಿನಲ್ಲಿ ವಿಕಿಪೀಡಿಯಕ್ಕೆ ಹಾಕಿದ ಬರಹದಲ್ಲಿ ಅನೇಕ ವಿಶಿಷ್ಟ ಅಕ್ಷರ ದೋಷಗಳಿವೆಯಲ್ಲ .ಅದು ಬ್ಲಾಗ್ ನಲ್ಲಿರುವ ಅಕ್ಷರ ದೋಷಗಳೇ ಅಗಿವೆಯಲ್ಲ ಯಾಕೆ ? ಆ ಅಕ್ಷರ ದೋಷ ಮಾಡಬೇಕೆಂದರೂ ಮಾಡಲಾಗದಂಥಹದ್ದು.ಬ್ಲಾಗ್ ಬರೆಯಲು ತೊಡಗಿದ ಆರಂಭಿಕ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯ ಅರಿವಿಲ್ಲದೇ ಇದ್ದಾಗ ನನ್ನಿಂದ ಆದ ವಿಶಿಷ್ಟ ಅಕ್ಷರ ದೋಷಗಳು ಅವು..ಅದೇ ಭಾಗದಲ್ಲಿ ಅದೇ ಶಬ್ದದಲ್ಲಿ ಅದೇ ರೀತಿಯ ದೋಷಗಳು ನಿಮ್ಮ ಬರಹದಲ್ಲಿ ಯಾಕೆ ಇದೆ ?ನೀವೇ ಕಣಜದ್ಲಿನ ನನ್ನ ಬರಹದಿಂದ  ಮಾಹಿತಿ ಪಡೆದು ಬರೆದ ಬರಹವಾದರೆ  ಬ್ಲಾಗ್ಬರಹದ ಯಥಾವತ್ ಕಾಪಿ  ಯಾಕಿದೆ ? ಯಾವ ಬರಹದಿಂದ ಮಾಹಿತಿ ಪಡೆದಿರೋ ಆ ಬರಹದ ಹೆಸರು ಮತ್ತು ಅದರ ಲೇಖಕಿಯಾದ ನನ್ನ ಹೆಸರನ್ನು ಯಾಕೆ ಹಾಕಿಲ್ಲ? ಪೋನ್ ನಲ್ಲಿ ಮಾತನಾಡುವಾಗ ಬ್ಲಾಗ್ ನಿಂದ ಕಾಪಿ ಮಾಡಿದ್ದು ಎಂದು ಒಪ್ಪಿದವರು ನಂತರ ಪೋಲೀಸ್ ಸ್ಟೇಶನ್ ನಲ್ಲಿ ಮತ್ತೆ ಪುನಃ ಕಣಜದಿಂದ ಬರೆದದ್ದು ಎಂದು ಸುಳ್ಳು ಯಾಕೆ ಹೇಳಿದಿರಿ? ಕಣಜದಲ್ಲಿ ಇದ್ದದ್ದು ಕೂಡ ನನ್ನ ಬರಹವೇ ಎಂಬುದನ್ನು ಯಾಕೆ ಮುಚ್ಚಿ ಇಟ್ಟಿರಿ? ನಿಮ್ಮದೇ ದ್ವನಿ ರೆಕಾರ್ಡ್ ಅನ್ನು ಫೇಕ್ ಎಂದು ಯಾಕೆ ಹೇಳಿದಿರಿ ?ಯಾರ ರಕ್ಷಣೆಗಾಗಿ ಕೃತಿ ಚೋರನೆಂಬ ಬಿರುದು ಧರಿಸಿ ನಿಮಗೆ ಬದಕು ಕೊಟ್ಟ ಖ್ಯಾತ ಶಿಕ್ಷಣ ಸಂಸ್ಥೆ ಸೈಂಟ್ ಅಲೋಷಿಯಸ್ ಕಾಲೆಜಿಗೆ ಕಳಂಕ ತಂದಿರಿ ?  ಆತ್ಮ ಸಾಕ್ಷಿ ಇದ್ದರೆ  ಮಾನ ಮರ್ಯಾದೆ ಇದ್ದರೆ ಉತ್ತರಿಸಿ,ಕಣಜದಲ್ಲಿತ್ತು ಎಂದು ನೀವು ವಾದಿಸುವ ಜಾನಪದ ಕರ್ಣಾಕದ ನನ್ನ ಬರಹ ಇಲ್ಲಿ ಹಾಕಿದ್ದೇನೆ

https://m.facebook.com/story.php?story_fbid=pfbid02RyCKRawtF8ST2UqypVnNitbKnvcjuQKVoP8f56QTSYWuFaqoGEYZYAMs1N4fgvp1l&id=100003459322515

 ಇದರಲ್ಲಿ ಇಲ್ಲದ ,ನನ್ನ ಬ್ಲಾಗ್ ನಲ್ಲಿರುವ ಅಕ್ಷರ ದೋಷಗಳಿರುವ ನಿಮ್ಮ ವಿಕಿಪಿಡಿಯ ಬರಹದ ಭಾಗವನ್ನೂ ಹಾಕಿದ್ದೇನೆ..ಪರಿಶೀಲಿಸಿ ಉತ್ತರಿಸಿ..ಇನ್ನೂ ಸುಳ್ಳನ್ನೇ ಸಾಧಿಸುತ್ತಾ ಇರುವುದಾದರೆ ಶಾಶ್ವತವಾಗಿ  #ಕೃತಿ_ಚೋರ_ವಿಶ್ವನಾಥ_ಬದಿಕಾನ ಎಂಬ ಬಿರುದನ್ನು ಹಾಕಿಕೊಳ್ಳಿ

ಅಂದ ಹಾಗೆ ಕಣಜದಿಂದ as it is ಕಾಪಿ ಮಾಡುದು ಬಿಡಿ,ಅದರಿಂದ ಮಾಹಿತಿ ಪಡೆದು ಬಳಸಲೂ ಕೂಡ ಮೂಲ ಲೇಖಕರ ಅನುಮತಿ ಪಡೆಯಬೇಕೆಂದು ಕಣಜದಲ್ಲಿಯೇ ಹಾಕಿದ್ದಾರಲ್ಲ..ಮತ್ತೆಯೂ ನನ್ನ ಬರಹವನ್ನು ನನ್ನ ಅನುಮತಿ ಇಲ್ಲದೆ ಯಾಕೆ ಕದ್ದು ನಿಮ್ಮ ಹೆಸರಿನಲ್ಲಿ ಬಳಸಿದಿರಿ..