Thursday 28 December 2017

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ : 29- ನನಗೆ ಸಂಸ್ಕೃತ ಕಲಿಸಿದ ಯಶೋದಾ ಭಗಿನಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರಾರು ಮಂದಿಗೆ ಸಂಸ್ಕೃತ ಕಲಿಸಿದ  ಯಶೋದಾ ಭಗಿನಿ ಸಂಸ್ಕೃತ ಭಾರತಿ? ಯಿಂದ ಸಂಸ್ಕೃತ ಕಲಿಸಲು ನೇಮಿಸಲ್ಪಟ್ಟ ಸಂಸ್ಕೃತ ಶಿಕ್ಷಕಿ.ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಹತ್ತು ದಿನದ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುವುದು ,ಸಂಸ್ಕೃತ ಪ್ರಚಾರ ಮಾಡುವ ಕೆಲಸ ಅವರದು.ಯಶೋದಾ ಭಗಿನಿಯಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಪ್ರಶಿಕ್ಷಕರನ್ನು ನೇಮಿಸಿದ್ದರು.ಆದರೆ ಯಶೋದಾ ಭಗಿನಿಯ ಸಂಸ್ಕೃತ ಪ್ರೀತಿ,ಅದನ್ನು ಪ್ರಚುರ ಪಡಿಸಲು ಯತ್ನಿಸಿದ ಪರಿ ಅನನ್ಯವಾದುದು.
ಭಾಷೆಯನ್ನು ಹೇಳಿಕೊಡುವುದೊಂದು ಕೌಶಲ್ಯ. ಇದು ಎಲ್ಲರಿಗೆ ಒಲಿಯುವುದಿಲ್ಲ.ಮತ್ತು ಇದನ್ನು ಯತ್ನ ಪೂರ್ವಕವಾಗಿ ಕಲಿಯಬೇಕಾಗುತ್ತದೆ.ಕಲಿಸುವ ಶಿಕ್ಷಕರಿಗೂ ಆ ಕೌಶಲ್ಯವಿರಬೇಕು.
ನಾನು ಪಿಯುಸಿ ,ಡಿಗ್ರಿಯಲ್ಲಿ ಸಂಸ್ಕೃತ ವನ್ನು ಒಂದು ಭಾಷೆಯಾಗಿ ಕಲಿತಿದ್ದೆ.ಸಂಸ್ಕೃತ ಎಂಎ ಪದವಿಯನ್ನು ಕೂಡ ಮೊದಲ ರ‍್ಯಾಂಕ್ ಮತ್ತು ಸುವರ್ಣ ಪದಕಗಳೊಂದಿಗೆ ಪಡೆದಿದ್ದೆ.ಆದರೂ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸಲು,ಮಾತನಾಡಲು ತಿಳಿದಿರಲಿಲ್ಲ. ಯಾಕೆಂದರೆ  ಪಿಯುಸಿ ಮತ್ತು ಪದವಿಯ ಸಂಸ್ಕೃತ ಭಾಷೆಯ ಪರೀಕ್ಷೆ ಯಲ್ಲಿ ಹೆಚ್ಚಿನ ಭಾಗವನ್ನು ಕನ್ನಡದಲ್ಲಿ ಉತ್ತರಿಸಲು ಅವಕಾಶವಿತ್ತು.ಸಂಸ್ಕೃತ ಎಂಎ ಯಲ್ಲಂತೂ ಪೂರ್ತಿಯಾಗಿ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಅವಕಾಶವಿತ್ತು. ಇಲ್ಲೆಲ್ಲೂ ನಮಗೆ ಭಾಷೆಯನ್ನು ಕಲಿಸುವ ಯತ್ನ ನಡೆಯಲೇ ಇಲ್ಲ.ಕೇವಲ ಪಠ್ಯ ಓದಿ ಉತ್ತರಿಸಿದರೆ ಭಾಷೆ ಒಲಿಯುವುದಿಲ್ಲ .ಉದಾಹರಣೆಗೆ ಹೇಳುವುದಾದರೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುವ  ಹೆಚ್ಚಿನ ಮಕ್ಕಳಿಗೆ ಹತ್ತನೇ ತರಗತಿ ಕಳೆದರೂ,ಪಿಯುಸಿ,ಡಿಗ್ರಿ, ಎಂಎ ಆದರೂ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ.ಕಾರಣವೇನೆಂದರೆ ಇಲ್ಲೆಲ್ಲೂ ಇಂಗ್ಲಿಷ್ ಮಾತನಾಡಲು ,ವ್ಯವಹರಿಸಲು ಹೇಳಿಕೊಡುವುದಿಲ್ಲ
ಅದೇ ಪರಿಸ್ಥಿತಿ ಸಂಸ್ಕೃತ ಎಂಎ ಓದಿದವರದ್ದು.
ಯಶೋದಾ ಭಗಿನಿ ನನಗೆ ಸಂಸ್ಕೃತದಲ್ಲಿ ಮಾತನಾಡಲು ,ಸಂಭಾಷಣಾ ಶಿಬಿರವನ್ನು ನಡೆಸಲು  ಅತ್ಯಂತ ಪ್ರೀತಿಯಿಂದ ತಾಳ್ಮೆಯಿಂದ  ಹೇಳಿಕೊಡದೆ ಇದ್ದರೆ ನಾನು ಕೂಡ ಹಾಗೆಯೇ ಇರುತ್ತಿದ್ದೆನೋ ಏನೋ.
ನಾವು ಸಂಸ್ಕೃತ ಎಂಎ ಅಂತಿಮ ಪರೀಕ್ಷೆ ಬರೆದ ನಂತರ ಎರಡು ವಾರಗಳ ಕಾಲ ನಮಗೆ ಸಂಸ್ಕೃತ ಭಾರತಿಯಿಂದ ಪ್ರಶಿಕ್ಷಣ ಶಿಬಿರ ನಡೆಸಿದರು.ಇದರ ಸಂಚಾಲಕಿ ಯಶೋದಾ ಭಗಿನಿ ಆಗಿದ್ದರು.ಎರಡು ವಾರಗಳಲ್ಲಿ ನಾವುಗಳು ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುವುದನ್ನು ಕಲಿತೆವು .ಇಲ್ಲಿ ಬೇರೆಯವರಿಗೆ ಸಂಸ್ಕೃತ ಸಂಭಾಷಣಾ ಶಿಬಿರ ಮಾಡಿ ಸಂಸ್ಕೃತ ಕಲಿಸುವ ವಿಧಾನವನ್ನು ಹೇಳಿಕೊಟ್ಟರು‌.ಯಶೋದಾ ಭಗಿನಿಯ ಮಾರ್ಗದರ್ಶನದಂತೆ ನಾನು ಕೂಡ ಅನೇಕ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು  ಉಚಿತವಾಗಿ ನಡೆಸಿದೆ.ಯಶೋದಾ ಭಗಿನಿ ಮಂಗಳೂರಿನಲ್ಲಿದ್ದ ಎರಡು ಮೂರು ವರ್ಷಗಳಲ್ಲಿ ಸುಮಾರು  ಮುನ್ನೂರು  ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ಸಾವಿರಾರು ಮಂದಿಗೆ ಸಂಸ್ಕೃತ ವನ್ನು ಹೇಳಿಕೊಟ್ಟಿದ್ದರು.ನಿಜಕ್ಕೂ ಅವರು ಸಂಸ್ಕೃತದ ಸೇವೆಯನ್ನು ನಿರ್ವಂಚನೆಯಿಂದ ಮಾಡಿದ್ದರು.
ನಮ್ಮ ಸಂಸ್ಕೃತ ಪ್ರಶಿಕ್ಷಣ ಶಿಬಿರದ ಕೊನೆಯ ಸಮಾರೋಪ ಸಮಾರಂಭದಲ್ಲಿ ಸ್ವಾಗತ,ಧನ್ಯವಾದ,ಕಾರ್ಯಕ್ರಮ ನಿರೂಪಣೆಗಳ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಾದ ನಮಗೇ ನೀಡಿದ್ದರು.ನಾನು ನಿರೂಪಣೆ ಮಾಡುತ್ತೇನೆ ಎಂದಾಗ ನಮ್ಮಂತೆಯೇ ಪ್ರಶಿಕ್ಷಣಾರ್ಥಿಗಳಾಗಿ ಬಂದಿದ್ದ ನಮ್ಮ ಎಂ ಎ ತರಗತಿ ಉಪನ್ಯಾಸಕರೊಬ್ಬರು ಲಕ್ಷ್ಮೀ ಸ್ವಾಗತ ಮಾಡಲಿ,ನಿರೂಪಣೆ ಗಜಾನನ ಮರಾಠೆ ( ನನ್ನ ಸಹಪಾಠಿ)ಮಾಡಲಿ ಎಂದು ಹೇಳಿದರು‌.ಆಗ ಯಶೋದಾ ಭಗಿನಿ ಯಾಕೆ ಸ್ತ್ರೀಯರು ನಿರೂಪಣೆ ಮಾಡಿದರೆ ಆಗುವುದಿಲ್ಲವಾ ?ಎಂದು ಪ್ರಶ್ನಿಸಿದ್ದರು.
ನಂತರ ನಾನು ಸ್ವಾಗತ ನಿರೂಪಣೆ ಎರಡೂ ಬೇಡವೆಂದು ಹೇಳಿ ,ಪ್ರಶಿಕ್ಷಣ ಶಿಬಿರದ ಕುರಿತಾಗಿ ಅಭಿಪ್ರಾಯ ಮಂಡನೆಯ ಜವಾಬ್ದಾರಿಯನ್ನು ಪಡೆದೆ.
ಆಗಿನ್ನೂ ನನಗೆ ಇಪ್ಪತ್ತ ಮೂರು ವರ್ಷ.ಪ್ರೌಢಿಮೆ ತಾಳ್ಮೆ ಇಲ್ಲದ ವಯಸ್ಸದು‌ಮೊದಲೇ ಸ್ವಲ್ಪ ಕೋಪಿಷ್ಟೆ ನಾನು.ನಿರೂಪಣೆಯನ್ನು ನಾನು ಮಾಡುವುದು ಬೇಡವೆಂದು ಆ ಉಪನ್ಯಾಸಕರು ಹೇಳಿದ್ದು ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಆಗಿತ್ತು. ನನ್ನ ಅಭಿಪ್ರಾಯ ಹೇಳುವಾಗ ಇದರ ಛಾಯೆ ಸ್ವಲ್ಪ ಮಾತಿನಲ್ಲಿ ಕಾಣಿಸಿತ್ತು!
ಪೂರ್ಣ ಕುಂಭ ಸದ್ದು ಮಾಡುವುದಿಲ್ಲ .ಅಪೂರ್ಣಕುಂಭಗಳು  ಸದ್ದು ಮಾಡುತ್ತವೆ ಎಂದು ಹೇಳಿ ನನ್ನ ಕೋಪವನ್ನು ಹೊರ ಹಾಕಿದ್ದೆ. ಈ ಕಾರ್ಯಕ್ರಮದ ನಂತರ ಈ ಬಗ್ಗೆ ಪ್ರಸ್ತಾಪಿಸಿದ ಯಶೋದಾ ಭಗಿನಿ ಲಕ್ಷ್ಮೀ ನಿಮಗೆ ಅವಮಾನವಾಗಿದ್ದರೆ ಅದಕ್ಕೆ ಮಾತಿನಲ್ಲಿ ಉತ್ತರಕೊಡಬಾರದು.ಕೃತಿಯ ಮೂಲಕ ಉತ್ತರ ಕೊಡಬೇಕು, ನಿಮ್ಮಲ್ಲಿ ಅಪಾರ ಉತ್ಸಾಹವಿದೆ,ಸಾಮರ್ಥ್ಯವಿದೆ.ಇದನ್ನು ಬಳಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆಯಬೇಕು.ಸ್ತ್ರೀ ಯರು ಇಂತಹ ನೂರಾರು ಅವಮಾನಗಳನ್ನು ಎದುರಿಸುವುದು ಅನಿವಾರ್ಯ, ಯಾಕೆಂದರೆ ನಮ್ಮದು  ಪುರುಷ ಪ್ರಧಾನ ಸಮಾಜ,ಇಲ್ಲಿ ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕೂಡ ಹೋರಾಡಬೇಕಾಗುತ್ತದೆ.ಧೈರ್ಯದಿಂದ ಮುಂದಡಿ ಇಡಿ,ನಿಮ್ಮ ಒಳ್ಳೆಯ ಕಾರ್ಯಕ್ಕೆ ದೇವರ ಬೆಮಬಲ ಇರುತ್ತದೆ.ಎಲ್ಲೆಡೆ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಮಾಡಿ ,ಸಂಸ್ಕೃತ ಭಾಷೆ ನಿಮ್ಮ ಕೈ ಹಿಡಿಯುತ್ತದೆ,ಸ್ಥಾನಕ್ಕೆ ಚ್ಯುತಿ ಬರಬಹುದು ಆದರೆ ಜ್ಞಾನಕ್ಕೆ ಎಂದೂ ಚ್ಯುತಿ ಬರಬಾರದು  ಎಂದು ತಿಳುವಳಿಕೆಯನ್ನು ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಭಾರತಿಯ ಮೀಟಿಂಗ್ ಒಂದರಲ್ಲಿ ಅದರ ನಿರ್ದೇಶಕರೊಬ್ಬರು " ಅವರು ಉಪನ್ಯಾಸಕರು, ಅವಳು ಯಃಕಶ್ಚಿತ್ ಲಕ್ಷ್ಮೀ, ನೀನು ಲಕ್ಷ್ಮೀ ಪರವಾಗಿ ನಿಂತದ್ದು ಸರಿಯಲ್ಲ ಎಂದು ಹೇಳಿದರಂತೆ.ಇದು ತಿಳಿದಾಗ ಯಶೋದಾ ಭಗಿನಿ ನನ್ನಿಂದಾಗಿ ಅವರ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳುವ ಹಾಗಾಯ್ತಲ್ಲಾ ಎಂದು ತುಂಬಾ ಬೇಸರವಾಗಿತ್ತು ನನಗೆ.ಅದರೆ ಯಶೋದಾ ಭಗಿನಿ ನನಗೆ ಈ ಬಗ್ಗೆ ಬೇಸರವಿಲ್ಲ ಯಾಕೆಂದರೆ ನಾನು ನ್ಯಾಯದ ಪರ ನಿಂತಿರುವೆ.ಆದರೂ ರ‍್ಯಾಂಕ್ ತೆಗೆಯುವ ಸಂಭವನೀಯ ವಿದ್ಯಾರ್ಥಿನಿ ನಿಮ್ಮ ಬಗ್ಗೆ ಯಃಕಶ್ಚಿತ್ ಲಕ್ಷ್ಮೀ ಎಂದು ಹೇಳಿ ನಿಮಗೆ ಹಿಂದಿನಿಂದ ಅವಹೇಳನ ಮಾಡಿದ್ದು ನನಗೆ ತುಂಬಾ ಬೇಸರವಾಗಿದೆ.ಲಕ್ಷ್ಮೀ ನೀವು ಪ್ರತಿಭಾವಂತರು. ನನ್ನಂತಾಗಬೇಡಿ.ಸ್ವ ಸಾಮರ್ಥ್ಯದಿಂದ,ಪ್ರಯತ್ನದಿಂದ ಮೇಲೆ ಬನ್ನಿ, ಇಂದು ನಿಮ್ಮನ್ನು ಯಃಕಶ್ಚಿತ್ ಅಂದವರೇ ಭೇಷ್ ಎಂದು ಮೆಚ್ಚುವಂತೆ ಸಾಧನೆ ಮಾಡಿ ತೋರಿಸಬೇಕು ಎಂದು ನನ್ನನ್ನು ಸಾಧನೆಯ ಹಾದಿಯತ್ತ ಹುರಿದುಂಬಿಸಿದ್ದರು‌.
ನಂತರ ಇದೇ ಪ್ತಕರಣದ ಕಾರಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರಂತೆ.ನಂತರ ಅವರು ಅದನ್ನು ಬಿಟ್ಟು ಯೋಗ್ಯ ವರನನ್ನು ಮದುವೆಯಾಗಿ ಇಬ್ಬರು ಅವಳಿ ಮಕ್ಕಳ ತಾಯಿಯಾಗಿ ಸಂತಸದ ಬದುಕನ್ನು ನಡೆಸುತ್ತಿದ್ದಾರೆ ಎಂದು ಯಾರೋ ಹೇಳಿದರು.ಅವರ ಪತಿ ವಿಧಾನ ಸೌಧದಲ್ಲಿ ಉದ್ಯೋಗಿಯಂತೆ.ಆದರೆ ಅವರನ್ನು ಈ ಇಪ್ಪತ್ತು ವರ್ಷಗಳಿಂದ ನನಗೆ ಭೇಟಿಯಾಗಲು ಅಗಿಲ್ಲ,ಅವರೆಲ್ಲಿದ್ದಾರೆ ಎಂದು ತಿಳಿದಿಲ್ಲ ನನಗೆ.
ಅವರಂದಂತೆ ನನ್ನನ್ನು ತುಂಬಿದ ಸಭೆಯಲ್ಲಿ ಯಃಕಶ್ಚಿತ್ ಎಂದು ಹೀಯಾಳಿಸಿದವರ ಬಾಯಿಂದಲೇ ಮೆಚ್ಚುಗೆಯ ಮಾತುಗಳನ್ನು ಪಡೆದಿದ್ದೇನೆ.
ಅವರನ್ನು ಭೇಡಿಯಸಗಬೇಕೆಂಬ ಆಸೆ ಇದೆ ಆದರೆ ಅವರು ಎಲ್ಲಿದ್ದಾರೆ ಎಂದು ತಿಳಿಯದಾಗಿದೆ.
ನಾಡಿದ್ದು ಶನಿವಾರ ಭಾಸ ಮಹಾಕವಿಯ ಪ್ರತಿಜ್ಞಾ ಯೌಗಂಧರಾಯಣಂ ಎಂಬ ಸಂಸ್ಕೃತ ನಾಟಕದ ಬಗ್ಗೆ ಉಪನ್ಯಾಸ ಕೊಡಲು ದಾಕ್ಷಾಯಿಣಿ ಭಟ್ ಅವರು ಕೇಳಿದ್ದಾರೆ.
‌ನಾನು 1997-2003 ತನಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆ.ನಂತರ  ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಕನ್ನಡ ಉಪನ್ಯಾಸಕಿ ಯಾಗಿ ಕೆಲಸ ಮಾಡುತ್ತಿದ್ದೇನೆ,ಹಾಗಾಗಿ ಸಂಸ್ಕೃತ ದ ಸಂಸರ್ಗವೇ ತಪ್ಪಿ ಹೋಗಿದೆ. ನನಗೆ ಸಂಸ್ಕೃತ ಭಾಷೆ ಮರೆತು ಹೋಗಿರಬಹುದೇನೋ ಎಂಬ ಸಂಶಯ ಕಾಡಿತ್ತು.ಆದರೆ ಭಾಸನ ಪ್ರತಿಜ್ಞಾ ಯೌಗಂಧರಾಯಣಂ ಓದುತ್ತಿದ್ದಂತೆ ನನಗೆ ಸಂಸ್ಕೃತ ಮರೆತು ಹೋಗಿಲ್ಲ ಎಂದು ಸ್ಪಷ್ಟವಾಯಿತು. ಬಹುಶಃ ಸಂಸ್ಕೃತ ಇಷ್ಟು ಗಟ್ಟಿಯಾಗಿ ನನ್ನಲ್ಲಿ ಉಳಿಯಲು ಯಶೋದಾ ಭಗಿನಿಯೆ ಕಾರಣವೆನಿಸಿ ಅವರ ನೆನಪಾಯಿತು.ಅವರನ್ನು ಎಂದಿಗೂ ಮರೆಯಲಾಗದು ನನಗೆ.

Sunday 24 December 2017

ದೊಡ್ಡವರ ದಾರಿ 27 ಸ್ವಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ © ಡಾ.ಲಕ್ಷ್ಮೀ ಜಿ ಪ್ರಸಾದ




ದೊಡ್ಡವರ ದಾರಿ: 27 - ಸ್ವ ಸಾಮರ್ಥ್ಯದಿಂದ ಉತ್ತುಂಗಕ್ಕೇರಿದ ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ

  ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ  ಮಾದರಿ ಮಹಿಳೆ  ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. "ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ "ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಜೊತೆಗೆ ಅಲೋಷಿಯಸ್ ಸಂಜೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದೆ.  ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗಿನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆಯನ್ನು ಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

http://shikshanaloka.blogspot.in/2017/12/27.html?m=1


ಕ್ರಿಸ್ಮಸ್ ಹಬ್ಬ ಬಂದಾಗ ತಕ್ಷಣಕ್ಕೆ ನೆನಪಾದವರು ಜೂಡಿ ಮೇಡಂ.( ಡಾ.ವೆರೋನಿಕಾ ಜೂಡಿ ಕಾರ್ಲೋ ಪಿಂಟೋ)ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಜೂಡಿ ಮೇಡಂ ಅವರ ಪರಿಚಯ ಆಯಿತು.1996 ನೇ ಇಸವಿಯಲ್ಲಿ ನನ್ನ ಸಂಸ್ಕೃತ ಎಂಎ ಪದವಿ ಮುಗಿದಿತ್ತು.ಫಲಿತಾಂಶ ಬತುವ ಮೊದಲೇ ಶ್ರೀ ರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಆಗ ನಮ್ಮ ಮನೆ ಮಂಗಳೂರಿನಲ್ಲಿ ಇತ್ತು.ಅಷ್ಟು ದೂರದಿಂದ ಕಲ್ಲಡ್ಕಕ್ಕೆ ಹೋಗಿ ಬರುವುದು ಬಹಳವೇ ಕಷ್ಟದ ವಿಚಾರವಾಗಿತ್ತು.ಆದರೂ ಕೆಲಸ ಬೇಕೇ ಬೇಕು ಎಂಬ ಛಲದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದೆ.ಅಲ್ಲಿ ಸೇರಿದ ಎರಡು ಮೂರು ತಿಂಗಳಲ್ಲಿ ನನ್ನ ಎಂಎ ಫಲಿತಾಂಶ ಬಂತು.ಮೊದಲ ರ‍್ಯಾಂಕ್ ಕೂಡ ಬಂತು.ಆ ಸಮಯದಲ್ಲಿ ಶಿಕ್ಷಕ ದಿನಾಚರಣೆ ಕೂಡ ಬಂತು.ಸಾಮಾನ್ಯವಾಗಿ ಶಿಕ್ಷಕ ದಿನಾಚರಣೆಯಂದು ಸಾಧಕ ಶಿಕ್ಷಕರನ್ನು  ಗುರುತಿಸುವ ಸಂಪ್ರದಾಯ ಎಲ್ಲೆಡೆ ಇರುತ್ತದೆ.ಹಾಗಾಗಿ ನನ್ನನ್ನು ಕರೆದು ಒಂದು ಹೂ ಗುಚ್ಛ ನೀಡಿ ಗುರುತಿಸಿಯಾರು ಎಂದು ನಾನು ಭಾವಿಸಿದ್ದೆ.ಆದರೆ ಅಂತಹದ್ದೇನೂ ನಡೆಯಲಿಲ್ಲ. ಸ್ತ್ರೀ ಯರ ಸಾಧನೆಯನ್ನು ಗುರುತಿಸಲು ಅಪಾರ ಔದಾರ್ಯ ಬೇಕು.
ಇದಾಗಿ ಸ್ವಲ್ಪ ಸಮಯದಲ್ಲಿ ಮಂಗಳೂರಿನ ಪ್ರಖ್ಯಾತ ಸಂತ ಅಲೋಶಿಯಸ್ ಕಾಲೇಜಿನಲ್ಲಿ  ಸಂಸ್ಕೃತ ಉಪನ್ಯಾಸಕಿಯಾಗಿದ್ದ ಶಶಿಕಲಾ ಅವರಿಗೆ ಅವರ ಸ್ವಂತ ಊರಿನಲ್ಲಿ ಕೆಲಸ ಸಿಕ್ಕು ಅಲ್ಲಿಒಂದು ಸಂಸ್ಕೃತ ಹುದ್ದೆ ಖಾಲಿಯಾಗುವ ಬಗ್ಗೆ ಅವರು ತಿಳಿಸಿದರು.ತಕ್ಷಣವೇ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶಿಕಾರಿಪುರ ಕೃಷ್ಣ ಮೂರ್ತಿ ಯವರನ್ನು ಕಂಡು ,ಕಾಲೇಜಿಗೆ ಹೋಗಿ ಆಗ ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತಾ ಅವರಿಗೆ ಅರ್ಜಿ ಸಲ್ಲಿಸಿದೆ.ನನ್ನ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದ ಶಿಕಾರಿಪುರ ಅವರು ಯಾವುದೇ ಸಂದರ್ಶನ ಮಾಡದೆ ನೇರವಾಗಿ ಆಯ್ಕೆ ಮಾಡಿದರು.
ಮರುದಿನವೇ ಕೆಲಸಕ್ಕೆ ಹಾಜರಾಗಿ ವರದಿಮಾಡಿಕೊಳ್ಳಲು ಪ್ರಾಂಶುಪಾಲರು ತಿಳಿಸಿದರು.ಅಂತೆಯೇ ಮರುದಿನ ಹೋದೆ.ಅಲ್ಲಿ ಸಂಸ್ಕೃತ ವಿಭಾಗ ಮತ್ತು ಹಿಂದಿ ವಿಭಾಗ ಒಟ್ಟಿಗೆ ಒಂದು ಕೊಠಡಿಯಲ್ಲಿ ಇತ್ತು.
ಆ ದಿನ ಶಿಕಾರಿಪುರ ಕೃಷ್ಣ ಮೂರ್ತಿಯವರು ರಜೆ ಹಾಕಿದ್ದರು.ದೇಶದಲ್ಲಿ ಅತ್ಯುತ್ತಮ ಐದು ಕಾಲೇಜುಗಳಲ್ಲಿ ಒಂದಾಗಿರುವ ಅಲೋಶಿಯಸ್ ಕಾಲೇಜು ಬಹಳ ಪ್ರತಿಷ್ಠಿತ ಸಂಸ್ಥೆ. ನನಗೋ ಮೂರು ನಾಲ್ಕು ತಿಂಗಳು ಕಲ್ಲಡ್ಕ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ ಕಾಲೇಜಿನಲ್ಲಿ ಪಾಠ ಮಾಡಿದ ಅನುಭವ ಇರಲಿಲ್ಲ. ಹಾಗಾಗಿ ನಾನು ತೀರಾ ಆತಂಕಕ್ಕೆ ಒಳಗಾಗಿದ್ದೆ.ಹತ್ತು ಹದಿನೈದು ಎಕ್ಕರೆ ಜಾಗದಲ್ಲಿ ಹರಡಿರುವ ಈ ಸಂಸ್ಥೆಯಲ್ಲಿ ಕೊಠಡಿ ಹುಡುಕುವುದು ಕೂಡ ಸಾಹಸದ ವಿಚಾರ.ಹಾಗಾಗಿ ನನಗೆ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದೆ ಕಂಗಾಲಾಗಿ ನಿಂತಿದ್ದೆ.ಆಗ ನನ್ನ ಆತಂಕವನ್ನು ಗಮನಿಸಿದವರು.ಅಲ್ಲಿನ ಹಿಂದಿ ಉಪನ್ಯಾಸಕಿ ಜೂಡಿ ಮೇಡಂ. ಗಾಭರಿಯಾಗಬೇಡಿ,ನೀವೊಬ್ಬ ರ‍್ಯಾಂಕ್ ವಿಜೇತೆ ಎಂಬುದನ್ನು ನೆನಪಿಸಿಕೊಳ್ಳಿ.ಧೈರ್ಯವಾಗಿ ತರಗತಿಗೆ ಹೋಗಿ ಎಂದು ಹೇಳಿ ನಾನು ಹೋಗ ಬೆಕಾದ ತರಗತಿಯ ಕೊಠಡಿ ಸಂಖ್ಯೆ ತಿಳಿಸಿದರು..ಆ ಸಂಖ್ಯೆಯ ಕೊಠಡಿ ಎಲ್ಲಿದೆಯೆಂದು ಓರ್ವ ವಿದ್ಯಾರ್ಥಿಯಲ್ಲಿ ಕೇಳಿದಾಗ ಆತ ತೋರಿಸಿದ ದಾರಿಯಲ್ಲಿ ಹೋದಾಗ ಗಂಡಸರ ಟಾಯ್ಲೆಟ್ ಸಿಕ್ಕಿತ್ತು. ಆಗ ಅವನು ತಪ್ಪು ದಾರಿ ಹೇಳಿ ತಮಾಷೆ ನೋಡುತ್ತಿದ್ದಾನೆಂದು ತಿಳಿಯಿತು.ಮತ್ತೆ ಹೋದ ದಾರಿಯಲ್ಲಿ ಹಿಂದೆ ಬಂದಾಗ ಜೂಡಿ ಮೇಡಂ ಎದುರಾಗಿ ನನಗೆ ತರಗತಿ ಎಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ನನ್ನ ಜೊತೆಗೆ ಬಂದು ವಿದ್ಯಾರ್ಥಿಗಳಿಗೆ ನನ್ನ ಪರಿಚಯವನ್ನು ಮಾಡಿ ಕೊಟ್ಟರು.
ಮಕ್ಕಳು ಅಲೋಶಿಯಸ್ ನಲ್ಲಿದ್ದರೂ ಮಕ್ಕಳೇ,ಸರ್ಕಾರಿ ಕಾಲೇಜಿನಲ್ಲಿ ಇದ್ದರೂ ಮಕ್ಕಳೇ,ಸಹಜವಾಗಿ ಮಕ್ಕಳೊಂದಿಗೆ ಬೆರೆತರೆ ಪ್ರೀತಿಯಿಂದ ಮಾತನಾಡಿದರೆ ಎಳೆಗರುಗಳಂತೆ ನಮಗೆ ಪ್ರೀತಿ ತೋರುತ್ತಾರೆ.ನಮ್ಮನ್ನು ಹಿಂಬಾಲಿಸುತ್ತಾರೆ.ಹಾಗಾಗಿ ನನಗೆ ಮಕ್ಕಳ ‌ಮನಸು ಗೆಲ್ಲುವುದು ಅಷ್ಟೇನೂ ಕಷ್ಟದ ವಿಚಾರವಾಗಲಿಲ್ಲ.ಆದರೂ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಗೌರವ ಮೂಡಲು ನಾನು ರ‍್ಯಾಂಕ್ ವಿಜೇತೆ ,ಹಾಗೂ ಲೇಖಕಿ ಎಂದು ಪರಿಣಾಮಕಾರಿಯಾಗಿ ಜೂಡಿ ಮೇಡಂ ನನ್ನನ್ನು ಪರಿಚಯಿಸಿರುವುದೇ ಕಾರಣವಾಗಿತ್ತು ಎಂಬುದು ಕೂಡ ಮುಖ್ಯವಾದುದು.
ನಾನಲ್ಲಿ ಸೇರಿದ ಒಂದು ತಿಂಗಳ ಒಳಗೆ ಕಾಲೇಜು ಡೇ ಆಯಿತು.ಅಲ್ಲಿ ಕಾಲೇಜು ಡೇಯಲ್ಲಿ  ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವ ಪದ್ಧತಿ ಇತ್ತು. ಆಗ ಅಲ್ಲಿನ  ನನಗೆ ರ‍್ಯಾಂಕ್ ಬಂದಿರುವ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿ ಕಾಲೇಜು ಡೇ ಯಲ್ಲಿ ಗೌರವಿಸುವಂತೆ ಜೂಡಿ ಮೇಡಂ ಮಾಡಿದರು.ವಾಸ್ತವವಾಗಿ ನಾನು ಆ ಕಾಲೇಜಿಗೆ ಸೇರುವ ಮೊದಲೇ ನನ್ನ ಫಲಿತಾಂಶ ಬಂದಿದ್ದು ರ‍್ಯಾಂಕ್ ಕೂಡ ಘೋಷಣೆ ಆಗಿತ್ತು. ಹಾಗಾಗಿ ನನ್ನನ್ನು ಗುರುತಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಅರ್ಹತೆಯನ್ನು ಗುರುತಿಸುವ ಉದಾರತೆ ಜೂಡಿ ಮೇಡಂ ಅವರಲ್ಲಿ ಇತ್ತು.ಸ್ವಲ್ಪ ಸಮಯದಲ್ಲಿಯೇ ನನಗೆ ಅವರು ತುಂಬಾ ಆತ್ಮೀಯರಾದರು.ಅವರು ನನ್ನನ್ನು ಅವರ ಪರಿಚಿತರಿಗೆ ಪರಿಚಯಿಸುವಾಗಲೆಲ್ಲ ಲಕ್ಷ್ಮೀ ತುಂಬಾ ಪ್ರತಿಭಾವಂತೆ,ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೊತೆಗೆ ಒಳ್ಳೆಯ ಬರಹಗಾರ್ತಿ ಎಂದು ಹೇಳುತ್ತಿದ್ದರು.ಇದು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಬೆಳೆಯಲು ಕಾರಣವಾಯಿತು.
ಅಲ್ಲಿ ಸಂಸ್ಕೃತಕ್ಕೆ ಅರೆಕಾಲಿಕ ತಾತ್ಕಾಲಿಕ ಹುದ್ದೆ ಇತ್ತು. ಹಾಗಾಗಿ ನನಗೆ ಕೆಲಸ ಖಾಯಂ ಆಗಲು ಕಷ್ಟವಿತ್ರು.ಅಂತಹ ಸಂದರ್ಭದಲ್ಲಿ ನನಗೆ ಹಿಂದಿ ಎಂಎ ಮಾಡುವಂತೆ ಜೂಡಿ ಮೇಡಂ ನನಗೆ ಸಲಹೆ ನೀಡಿದರು.ಹಾಗಾಗಿ ನಾನು ಹಿಂದಿ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.ನನಗೆ ಅರ್ಥವಾಗದ ವಿಷಯಗಳನ್ನು ಜೂಡಿ ಮೇಡಂ ನನಗೆ ತಿಳಿಸಿಕೊಟ್ಟರು.
ಸ್ವಲ್ಪ ಸಮಯಕ್ಕೆ ಸಮಾನ ಕಾರ್ಯಭಾರ ಎಂಬ ನಿಯಮ ಜಾರಿಯಾಗಿ ಅಲ್ಲಿದ್ದ ತಾತ್ಕಾಲಿಕ ಅರೆಕಾಲಿಕ ಹುದ್ದೆಯೂ ರದ್ದಾಯಿತು. ಆಗ ನಾನು ಚಿನ್ಮಯ ಹೈಸ್ಕೂಲಿನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ  ಸೇರಿದೆ.ಮತ್ತೆ ಎರಡು ಮೂರು ವರ್ಷ ಕಳೆದಾಗ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಒಂದು ಸಂಸ್ಕೃತ ಹುದ್ದೆ ಖಾಲಿ ಯಾಯಿತು. ಆಗ ಆಗುನ ಪ್ರಾಂಶುಪಾಲರಾದ ಸ್ವಿಬರ್ಟ್ ಡಿ ಸಿಲ್ವಾ ಅವರು ನನಗೆ ಫೋನ್ ಮಾಡಿ ನನ್ನನ್ನು ಬರಹೇಳಿ ನನಗೆ ಅಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆಯನ್ನು ಸಂದರ್ಶನ ಮಾಡದೆ ನೀಡಿದರು.ಇದಕ್ಕೂ ಕಾರಣ ಜೂಡಿ ಮೇಡಂ ಮತ್ತು ಅಲೋಶಿಯಸ್ ಸಂಜೆ ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಾನ್ಸಿಸ್ ಅವರು ನನ್ನ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ನೀಡಿದ್ದು ಕಾರಣವೆಂದು ನನಗೆ ಆನಂತರ ತಿಳಿಯಿತು.
ಆ ಸಮಯಕ್ಕಾಗುವಾಗ ನಾನು ಕನ್ನಡ ಎಂಎ ಪಡೆದಿದ್ದೆ.ಇದನ್ನು ಜೂಡಿ ಮೇಡಂ ಎಲ್ಲರ ಬಳಿ ಹೇಳುತ್ತಾ "ನೋಡುತ್ತಿರಿ ಲಕ್ಷ್ಮೀ ಒಂದಿನ ದೊಡ್ಡ ಸಾಧನೆ ಮಾಡುತ್ತಾರೆ" ಎಂದು ಅಭಿಮಾನದಿಂದ ಹೇಳುತ್ತಿದ್ದರು.
ಅವರ ನಿರೀಕ್ಷೆಯಂತೆ ಬಹು ದೊಡ್ಡ ಸಾಧನೆವಮಾಡಲು ನನಗೆ ಸಾಧ್ಯವಾಗಿಲ್ಲ ಆದರೂ ಮಾಡಿದ್ದಷ್ಟಕ್ಕೆ ಅವರ ಬೆಂಬಲದ,ಪ್ರೋತ್ಸಾಹದ,ಅಭಿಮಾನದ ನುಡಿಗಳು ಕೂಡ ಕಾರಣವಾಗಿದೆ ಎಂಬುದನ್ನು ನಾನು‌ ಮರೆಯಲಾರೆ.
ಹೌದು,ಜೂಡಿ ಮೇಡಂ ಅವರಿಗೆ ಬೇರೆಯವರ ಅರ್ಹತೆಯನ್ನು ಗುರುತಿಸುವ ಉದಾರತೆ ಎಲ್ಲಿಂದ ಬಂತು ? ವಜ್ರವನ್ನು ಗುರುತಿಸಲು ವಜ್ರದ ವ್ಯಾಪಾರಿಗೆ ಮಾತ್ರ ಸಾಧ್ಯ,ಗುಜರಿ ಅಂಗಡಿಯವನಿಗೆ ವಜ್ರ ಮತ್ತು ಗಾಜಿನ ತುಂಡು ಎರಡೂ ಒಂದೇ ಆಗಿ ಕಾಣಿಸುತ್ತದೆ.
ಜೂಡಿ ಮೇಡಂ ಅಪೂರ್ವ ಪ್ರತಿಭಾವಂತರು.ಬಡಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಮೊದಲಿಗೆ ಟಿಸಿಎಚ್ ಮಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಹದಿನೈದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ,ಕೆಲಸ ಮಾಡುತ್ತಲೇ,ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿ ಸಂಸಾರವನ್ನು ನಿಭಾಯಿಸುತ್ತಲೇ ಓದಿದರು.ಬಿ ಎ ಮಾಡಿದರು.ನಂತರ ಹಿಂದಿ ಎಂಎಯನ್ನು ರ‍್ಯಾಂಕ್ ಹಾಗೂ ಸುವರ್ಣ ಪದಕಗಳೊಂದಿಗೆ ಪಡೆದರು.ಯುಜಿಸಿ ನಡೆಸುವ National eligibility for lectureship ಮತ್ತು junior fellowship ಪರೀಕ್ಷೆ ಯಲ್ಲಿ ಉತ್ತೀರ್ಣರಾದರು.
ಸ್ವಂತ ಸಾಮರ್ಥ್ಯ ದಿಂದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ನಿಯುಕ್ತಿಗೊಂಡರು.ಜೊತೆಗೆ  ಕೌನ್ಸಿಲಿಂಗ್ ನೀಡುವ ಬಗ್ಗೆ ತರಬೇತಿ ಪಡೆದು  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೀಡತೊಡಗಿದರು.ಬೇರೆ ಕಡೆ ಕೌಟುಂಬಿಕ ಕೌನ್ಸಿಲಿಂಗ್ ಕೂಡ ನೀಡಿ ಅನೇಕರ ಬಾಳನ್ನು ಹಸನುಗೊಳಿಸಿದರು. ವೈಯುಕ್ತಿಕವಾಗಿ ಕೂಡ ಐವತ್ತರ ಹರೆಯದಲ್ಲಿ  ಮಾನವೀಯ ಸಂಬಂಧಗಳ ಕುರಿತು ಸಂಶೋಧನಾತ್ಕ ಅಧ್ಯಯನ ಮಾಡಿ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದರು.
ತನ್ನ ವೃತ್ತಿ ಜೀವನದ ಕೊನೆಯ ಐದು ವರ್ಷಗಳ ಕಾಲ ಅತ್ಯಂತ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿ ಎಲ್ಲರ ಒಲವನ್ನು ಗಳಿಸಿದರು.ಸಂಸ್ಥೆಗೆ ಅನನ್ಯ ಕೊಡುಗೆಯನ್ನು ನೀಡಿದರು
ಇವರು ಉತ್ತಮ ಬರಹಗಾರ್ತಿ  ಕೂಡ ಅಗಿದ್ದು ಕೊಂಕಣಿ ಭಾಷೆಯ ರಾಖ್ಣೋ ಎಂಬ ಪತ್ರಿಕೆಯ ಅಂಕಣಗಾರರು ಆಗಿದ್ದಾರೆ.ಅನೇಕ ಕಥೆಗಳನ್ನು ಬರೆದಿದ್ದು ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಥಾಸಂಕಲನಗಳು ಕೂಡ ಪ್ರಕಟವಾಗಿವೆ.
ಶಾರೀರಿಕವಾಗಿ ತೀವ್ರವಾದ ನೋವಿನ ವಾತದ ಸಮಸ್ಯೆಯನ್ನು ಎದುರಿಸುತ್ತಲೇ ಇವರು ಮಾಡಿದ ಸಾಧನೆ ಅತ್ಯದ್ಭುತ ವಾದುದು.ಓರ್ವ ಮಹಿಳೆಯಾಗಿ ಯಾವುದೇ ಬೆಂಬಲವಿಲ್ಲದೆಯೆ,ಯಾರದೇ ಪ್ರಭಾವವೂ ಇಲ್ಲದೆ  ಪ್ರಾಥಮಿಕ ಶಾಲೆಯಿಂದ  ದೇಶದಲ್ಲಿಯೇ ಪ್ರತಿಷ್ಠಿತವಾಗಿರುವ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗುವಷ್ಟರ ಮಟ್ಟಿನ ಉನ್ನತ ಮಟ್ಟಕ್ಕೆ ಏರಿದ  ಇವರ ಸ್ವ ಸಾಮರ್ಥ್ಯ ,ತಾಳ್ಮೆ,,ಪರಿಶ್ರಮ, ಶ್ರದ್ಧೆ ಯಾರು ಕೂಡ ಮೆಚ್ಚುವಂಥಹಾದ್ದೇ ಆಗಿದೆ.ಎಲ್ಲಕ್ಕಿಂತ ಹೆಚ್ಚು ನನ್ನಂತಹ ಸಾಮಾನ್ಯಳನ್ನೂ ಗುರುತಿಸಿ ಉತ್ತೇಜಿಸುವ ಅವರು ಉದಾರ ಅಂತಃಕರಣಕ್ಕೆ ಸಾಟಿಯೇ ಇಲ್ಲ .

Friday 15 December 2017

ಉದಾತ್ತ ಮನಸಿನ ಪೂಜಾ ತಿಂಡಿ ಮನೆಯ ಸದಾಶಿವ ಶೆಟ್ಟಿ - ಡಾ.ಲಕ್ಷ್ಮೀ ಜಿ ಪ್ರಸಾದ



ಬೆಂಗಳೂರು ಯುನಿವರ್ಸಿಟಿ ಕ್ವಾರ್ಟರ್ಸ್ ಬಳಿ ಉಳ್ಳಾಲು ಮುಖ್ಯ ರಸ್ತೆಯ ಆರಂಭದಲ್ಲಿ ಒಂದು ಚಿಕ್ಕ ಹೋಟೆಲ್ ಇದೆ.ಹೆಸರು ಪೂಜಾ ತಿಂಡಿ ಮನೆ.ಇದು ಇತ್ತೀಚೆಗೆ ಎರಡು ಮೂರು ತಿಂಗಳ ಮೊದಲು ಆರಂಭವಾಯಿತು.ಇಲ್ಲಿ ಶುಚಿ ರುಚಿಯಾದ ಊಟ ತಿಂಡಿಗಳು ಕೈಗೆಡಕುವ ಬೆಲೆಯಲ್ಲಿ ಲಭ್ಯವಿವೆ.ರುಚಿ ಜೊತೆಗೆ ಶುಚಿತ್ವಕ್ಕೂ ಇಲ್ಲಿ ಆದ್ಯತೆ ಕೊಡುತ್ತಾರೆ. ನನಗೆ ಇಲ್ಲಿನ ತಿಂಡಿಗಳು ಇಷ್ಟವಾಗಿವೆ.ನಾನು ಇಲ್ಲಿನ ಖಾಯಂ ಗ್ರಾಹಕಿ  .ಊಟ ತಿಂಡಿಗಳನ್ನು ಶುಚಿ ರುಚಿಯಾಗಿ ನೀಡುವ ಹಲವು ಉಪಾಹಾರ ಮಂದಿರಗಳಿವೆ. ಆದರೆ ಇಲ್ಲಿ  ನನ್ನ ಗಮನ ಸೆಳೆದದ್ದು  ಇದರ ಮಾಲಿಕರ ವ್ಯಕ್ತಿತ್ವ,ಉದಾರತೆ.
ಒಂದು ದಿನ ಶನಿವಾರ ಮಧ್ಯಾಹ್ನ ನಾನು ಪೂಜಾ ತಿಂಡಿ‌ಮನೆಗೆ ತಿಂಡಿ ಕಟ್ಟಿಸಿಕೊಂಡು ಹೋಗಲು ಬಂದಿದ್ದೆ.ಆಗ ಅಲ್ಲಿಗೆ ವಯಸ್ಸಾದ ಓರ್ವ ಭಿಕ್ಷುಕಿ ಬಂದಳು.ಅವಳಲ್ಲಿ ಊಟ ಮಾಡುತ್ತೀಯಾ ಎಂದು ಸದಾಶಿವ ಶೆಟ್ಟಿ ಅವರು ಕೇಳಿ ಅವರಿಗೆ ಅನ್ನ ಸಾಂಬಾರ್ ಕಟ್ಟಿ ಕೊಟ್ಟು ಎರಡು ಬಜ್ಜಿಯನ್ನು ಕೂಡ ನೀಡಿದರು.ಆಕೆಯ ಕೈಯಿಂದ ದುಡ್ಡು ತಗೊಂಡಿರಲಿಲ್ಕ.ಆಗ ನಾನು ನಾನು ಯಾವಾಗಲೂ ಇವರಿಗೆ ಹೀಗೆ ಉಚಿತವಾಗಿ ಊಟ ಕೊಡುತ್ತೀರಾ ಎಂದು  ಕೇಳಿದೆ.ಆಗ ಅವರು ಹೌದು,ಇವರಿಗೆ ಮಾತ್ರವಲ್ಲ, ಹೀಗೆ ವಯಸ್ಸಾಗಿ ಭಿಕ್ಷೆ ಬೇಡುವವರು ಬಂದರೆ ಅವರಿಗೆಲ್ಲರಿಗೂ ಉಚಿತವಾಗಿ ಊಟ ನೀಡುತ್ತೇವೆ ಎಂದು ಹೇಳಿದರು.ಪ್ರತಿ ದಿನ  ಕನಿಷ್ಟ ಮೂರು  ನಾಲ್ಕು  ಇಂತಹವರು ಬರುತ್ತಾರೆ.ಅವರಿಗೆಲ್ಲರಿಗೂ ಇವರು ಉಚಿತವಾಗಿ ಊಟ ನೀಡುತ್ತಾರೆ.
ನಾನು ಯಾರಿಗೂ ದುಡ್ಡಿನ ರೂಪದಲ್ಲಿ ಭಿಕ್ಷೆ ನೀಡುವುದಿಲ್ಲ. ಆದರೆ ಊಟದ ಸಮಯದಲ್ಲಿ ಬಂದ ಯಾರಿಗೇ ಆದರೂ ಊಟ ನೀಡುತ್ತೇನೆ.ಎಷ್ಟೇ ಜನ ಬಂದರೂ ನೀಡುತ್ತೇನೆ " ಎಂದವರು ಹೇಳುತ್ತಾರೆ.
ಆದರ್ಶದ ಸಾವಿರ ಮಾತುಗಳನ್ನು ಆಡಬಹುದು. ಆದರೆ ಕಾರ್ಯರೂಪಕ್ಕೆ ತರುವುದು ಕಷ್ಟದ ವಿಚಾರ. ಕಟ್ಟದ ಮೇಲೆ ಕಟ್ಟದ ಮನೆ ಮೇಲೆ ಮನೆ ,ಸೈಟ್ ಗಳ ಕೊಂಡು ಕಟ್ಟುತ್ತಾ ಹತ್ತು ತಲೆಮಾರು ಉಂಡರೂ ಕರಗದಷ್ಟು ಆಸ್ತಿ ಕೂಡಿಟ್ಟರೂ ಇನ್ನೂ ಸಾಲದೆಂದು ದುಡ್ಡಿನ ಹಿಂದೆ ಸಾಗುವ ಜನರ ನಡುವೆ ಸದಾ ಶಿವ ಶೆಟ್ಟಿ ಯವರು ತಮ್ಮ ಉದಾರತೆಯಿಂದಾಗಿ ವಿಶಿಷ್ಟರಾಗಿ ಕಾಣುತ್ತಾರೆ.

ಮೋಜು ಮಸ್ತಿ ಯಲ್ಲಿ ಮುಳುಗಿರುವ ,ಗೊತ್ತು ಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಇವರೊಂದು ಮಾದರಿಯಾಗಿ ನಿಲ್ಲುತ್ತಾರೆ.

Wednesday 6 December 2017

ನಾನು ಕೂಡ ಕಾದಂಬರಿಯ ಜೀವಂತ ಪಾತ್ರವಾದೆ - ಡಾ.ಲಕ್ಷ್ಮೀ ಜಿ ಪ್ರಸಾದ


ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್


ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು
ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು
ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.

ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-
ನಾನೆಂದೂ ಕಾದಂಬರಿ ಬರೆದಿಲ್ಲ
ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ
ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು
ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .
ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ
ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ
ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.
ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು
ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.
ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ
ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು
ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ
ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು

https://www.google.co.in/amp/avadhimag.com/%3fp=173110&amp=1

Sunday 19 November 2017

ದೊಡ್ಡವರ ದಾರಿ 25 ಹೂ ಮನಸಿನ ಹುಡುಗಿ ಸುಮನ್© ಡಾ ಲಕ್ಷ್ಮೀ ಜಿ ಪ್ರಸಾದ




ಸುಮನ್ ಚಿತ್ರ ಒದಗಿಸಿದವರು ವಿದ್ಯಾ  

ಕಾಲೇಜು ಡೇ ಸಮಯದಲ್ಲಿ ತೆಗೆದ ಫೋಟೋವನ್ನು ಗೆಳತಿ ಪೂರ್ಣಿಮಾ ಕಳಹಿಸಿಕೊಟ್ಟಿದ್ದಾರೆ( ಎಡಭಾಗದಿಂದ ಮೊದಲಿನವಳು ಸಲೀಲಾ,ನಂತರ ವೀಣಾ,ಪೂರ್ಣಿಮಾ, ನಾನು,ವಿದ್ಯಾ,ಸಂಧ್ಯಾ,ಸುಮನ್
ದೊಡ್ಡವರ ದಾರಿ25 ಹೂ ಮನಸಿನ  ಹುಡುಗಿ ಸುಮನ್
ದೊಡ್ಡವರು ಎಂದರೆ ವಯಸ್ಸಾದವರು ಮಾತ್ರವಲ್ಲ, ದೊಡ್ಡ ಗುಣವನ್ನು ಪ್ರದರ್ಶಿಸಿದ ಎಳೆಯರೂ ದೊಡ್ಡವರೇ.ಅಂತಹ ಓರ್ವ ಹೂ ಮನಸಿನ ಹುಡುಗಿ ಸುಮನ್.ಃಃಉವರಳಿ ಪರಿಮಳವ ಪಸರಿಸುವ ಮೊದಲೇ ಭಗವಂತನ ಪಾದ ಸೇರಿದ ಪ್ರತಿಭಾನ್ವತೆ ಅವಳು
ಆಗಷ್ಟೇ ಪಿಯುಸಿಯನ್ನು ಮುಗಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಬಿಎಸ್ ಸಿ ಗೆ ಸೇರಿದ್ದೆ.ಹಾಸ್ಟೆಲ್ ನಲ್ಲಿ ಸೀಟು ಸಿಗದ ಕಾರಣ ಅದೇ ಸಂಸ್ಥೆಯ ಪ್ರೌಢಶಾಲೆಯ ಇಂಗ್ಲಿಷ್ ಮಾಸ್ಟ್ರು  ವೆಂಕಟರಮಣ ಭಟ್ ಮನೆಯಲ್ಲಿ ನಡೆಸುತ್ತಿದ್ದ ಮೆಸ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಅಲ್ಲಿ ನನಗೆ ಸೀಟು ಕೊಡಿಸಿದ ಭೌತ ಶಾಸ್ತ್ರ ಉಪನ್ಯಾಸಕರಾದ ನಮ್ಮ ಸಂಬಂಧಿಕರೂ ಆದ ಗಣಪಯ್ಯ ಭಟ್ ಮಾಡಿ ಕೊಟ್ಟಿದ್ದರು.
ಅಲ್ಲಿ ನನ್ನಂತೆ ಏಳೆಂಟು ಬಡ ಮಧ್ಯಮ ವರ್ಗದಿಂದ ಬಂದ ಕಾಲೇಜು ಓದುವ  ಹುಡುಗಿಯರು ಇದ್ದರು.ಇವರಲ್ಲಿ ವಿದ್ಯಾ ನಾಪೋಕ್ಲು ನಿಂದ ಬಂದ ಹುಡುಗಿ ಎರಡನೇ ವರ್ಷ ಬಿಕಾಮ್ ಓದುತ್ತಿದ್ದು ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದರು.ಸಂಧ್ಯಾ ಮತ್ತು ಸಲೀಲ ನಮಗಿಂತ ಚಿಕ್ಕವರು ಪಿಯುಸಿ ಓದುತ್ತಾ ಇದ್ದರು‌
ನಾನು ಪೂರ್ಣಿಮ,ವೀಣಾ ,ಸುಮನ್ ಪದವಿ ಮೊದಲ ವರ್ಷ ಓದುವ ಹುಡುಗಿಯರು.ನಾನು ವೀಣಾ ಪೂರ್ಣಿಮಾ ವಿಜ್ಞಾನ ಪದವಿಗೆ ಸೇರಿದ್ದರೆ ಸುಮನ್ ಪತ್ರಿಕೋದ್ಯಮ ವಿಭಾಗ ಕ್ಕೆ ಸೇರಿದ್ದಳು.
ಸುಮನ್ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿ ಇದ್ದು ಸಾಕಷ್ಟು ಸಿರಿವಂತರಾಗಿದ್ದರು.ವಿದ್ಯಾವಂತರು ಕೂಡ. ಉಳಿದವರೆಲ್ಲ  ಮಧ್ಯಮ ವರ್ಗದವರೇ ಆಗಿದ್ದೆವು.ಒಂದು ಪೆಟ್ಟಿಗೆಯಲ್ಲಿ ನಮ್ಮ ಕೆಲವು ಬಟ್ಟೆ ಬರೆಗಳನ್ನು ತುಂಬಿ ತಂದಿದ್ದ ನಾವುಗಳು
ಸುಮನ್ ಜೊತೆಗೆ ತಂದ ಡನ್ ಲಪ್(?) ಹಾಸಿಗೆಯನ್ನು ಚೆಂದದ ಸೂಟ್ ಕೇಸನ್ನು ನೋಡಿ ನಾವೆಲ್ಲರೂ ಬೆರಗಾಗಿದ್ದೆವು.
ಸಿರಿವಂತರ ಮಗಳಾದರೂ ಸುಮನ್ ಅತ್ಯಂತ ನಿಗರ್ವಿಯಾಗಿದ್ದಳು.ಹಳ್ಳಿ ಹುಡುಗಿಯಾದ ನನಗೆ ಪಟ್ಟಣದ ನಯ ನಾಜೂಕು ತನದ ಬಗ್ಗೆ ತಿಳಿಸಿಕೊಟ್ಟವಳು ಅವಳು.ಹಳ್ಳಿ ಹುಡುಗಿಯಾದ ನನಗೆ ಪೀರಿಯಡ್ ಸಮಯದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ತಿಳಿದಿರಲಿಲ್ಲ. ಅದನ್ನು ಬಳಕೆ ಮಾಡಲು ಹೇಳಿ ಕೊಟ್ಟ ಸುಮನ್ ನನ್ನನ್ನು ದೊಡ್ಡ ಕಷ್ಟದಿಂದ ಪಾರು ಮಾಡಿದ್ದಳು.ಅಷ್ಟರ ತನಕ ನಾನು ಅನುಭವಿಸಿದ ನೋವು ಅಸಹ್ಯ ಕೆರೆತಗಳ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸುಮನ್ ತುಂಬಾ ಜಾಣ ವಿದ್ಯಾರ್ಥಿನಿ .ಕಲಿಕೆಯ ಭಾಷಣ,ನಾಟಕ, ಚರ್ಚೆ ಮೂಕಾಭಿನಯ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು ,ಕಾಲೇಜು ಸೇರಿದ ಕೆಲವೇ ವಾರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ನಿಯಾಗಿ ಗುರುತಿಸಿ ಕೊಂಡಿದ್ದಳು.
ಆಗ ಉಜಿರೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿದ್ದ ನಿರಂಜನ ವಾನಳ್ಳಿಯವರು ವಿದ್ಯಾರ್ಥಿಗಳ ಅಭಿವ್ಯಕ್ತಿ ಗಾಗಿ ಭಿತ್ತಿ ಪತ್ರಿಕೆ ನಡೆಸುತ್ತಾ ಇದ್ದರು.ನಮ್ಮ ಸುಮನ್ ಕೂಡ ಅದಕ್ಕೆ ಬರೆಯುತ್ತಾ ಇದ್ದಳು.ನಮ್ಮಲ್ಲೂ ಬರೆಯಲು ಹೇಳಿದ್ದಳು.ಹಾಗೆ ನಾನೂ ಒಂದು ಲೇಖನ (  ಕನ್ನಡದ ಬಗ್ಗೆ ಎಂದು ನೆನಪು)ಬರೆದು ನೀಡಿದೆ.ಅದನ್ನು ತೆಗೆದುಕೊಂಡು ಹೋಗಿ ಅವಳು ಉಪನ್ಯಾಸಕರಿಗೆ ಅಥವಾ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗೆ ನೀಡಿ ಭಿತ್ತಿ ಪತ್ರಿಕೆಯಲ್ಲಿ ಪ್ರಟಸಿಸಲು ಕೋರಿದ್ದಳು.ಆ ಲೇಖನ ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ .ಆಗ ಅವಳು "ನಿನ್ನ ಲೇಖನ ಚೆನ್ನಾಗಿದೆ ಆದರೆ ಅದು ಕನ್ನಡದ ಬಳಕೆ ಕುರಿತಾಗಿದ್ದು ನವೆಂಬರ್ ತಿಂಗಳಲ್ಲಿ ಆಗಿದ್ದರೆ ಭಿತ್ತಿ ಪತ್ರಿಕೆಯಲ್ಲಿ ಹಾಕುತ್ತಿದ್ದರು" ಎಂದು ಸಮಾಧಾನ ಹೇಳಿದ್ದಳು.
ಅವಳು ಶ್ರೀಮಂತ ಮನೆಯ ,ವಿದ್ಯಾವಂತ ಕುಟುಂಬದ ಹುಡುಗಿಯಾಗಿದ್ದದು ಮಾತ್ರವಲ್ಲದೆ ಬಹುಮುಖಿ ಪ್ರತಿಭಾವಂತೆಯಾದ ಕಾರಣ ನಮ್ಮ ಮೆಸ್ ನಲ್ಲಿ ಅವಳಿಗೆ ಸಹಜವಾಗಿಯೇ ಹೆಚ್ಚಿನ ಮನ್ನಣೆ ಇತ್ತು. ಜೊತೆಗೆ ಎಲ್ಲರಲ್ಲೂ ಹೊಂದಿಕೊಳ್ಳುವ ಅವಳ ಸ್ವಭಾವ ಕೂಡ ‌ಮನಸೆಳೆಯುವದ್ದೇ ಆಗಿತ್ತು. ಅವಳು ಕಥೆ ಕವನ ಲೇಖನಗಳನ್ನು ಬರೆದು ಭಿತ್ತಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು‌.ಒಂದೆರಡು ಲೇಖನ ಹೊಸದಿಗಂತ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯೂ ಪ್ರಕಟವಾದವು.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಒಂದು ಹವ್ಯ ಭಾಷೆಯಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಬರೆದಿದ್ದೆ.ನಂತರ ಒಂಬತ್ತನೇ ತರಗತಿ ಓದುವಾಗ ಒಂದು ಕಥೆಯನ್ನು ಬರೆದು ಅಮ್ಮನಿಗೆ ತೋರಿಸಿ ಮೆಚ್ಚುಗೆ ಪಡೆದಿದ್ದೆ.ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ತರಗತಿಯಲ್ಲಿ ಜಾಣೆ ಹುಡುಗಿಯಾಗಿ ಗುರುತಿಸಿಕೊಂಡಿದ್ದೆ.
ಪಿಯುಸಿಗೆ ಸೇರಿ ವಿಜ್ಞಾನ ವಿಭಾಗದಲ್ಲಿ ಓದುವಾಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿದ ಪಾಠ ಅರ್ಥವಾಗದೆ ಕಲಿಕೆಯಲ್ಲಿ ಹಿಂದೆ ಬಿದ್ದು ಮೊದಲ ಬೆಂಚಿನ ಹುಡುಗಿಯಾಗಿದ್ದವಳು ಹಿಂದಿನ ಬೆಂಚಿನ ಹುಡುಗಿಯಾಗಿದ್ದೆ.ಇಲ್ಲಿ ನಾನು ಆತ್ಮವಿಶ್ವಾಸವನ್ನು ಕಳೆದು ಕೊಂಡಿದ್ದೆ.ಅಂತೂ ಇಂತೂ ಪಿಯುಸಿ ಪಾಸ್ ಆಗಿ ಬಿಎಸ್ ಸಿಗೆ ಸೇರಿದ್ದೆ.ಅಲ್ಲಿಯೂ ನಾನು ಕೊನೆ ಬೆಂಚಿನ ಹುಡುಗಿಯೇ ಆಗಿದ್ದೆ( ಹಾಗಾಗಿಯೆ ಏನೋ ಈಗಲೂ ನನಗೆ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಕೊನೆ ಬೆಂಚಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಪ್ರೀತಿ).
ಸುಮನ್ ಬರೆಯುತ್ತಾ ಇದ್ದ ಕಥೆ ಕವನ ಬರಹಗಳನ್ನು ಓದುತ್ತಾ ನಾನೂ ಇಂತಹ ವನ್ನು ಬರೆಯಬಲ್ಲೆ ಎಂದೆನಿಸಿ ನಾನು ನನ್ನಷ್ಟಕ್ಕೆಸಣ್ಣ ಪುಟ್ಟ  ಕಥೆ ಕವನ ಲೇಖನ  ಬರೆದು ಯಾರಿಗೂ ತೋರಿಸದೆ ನನ್ನೊಳಗೆ ಅಡಗಿಸಿ ಇಟ್ಟಿದ್ದೆ.ಅದನ್ನು ಬೇರೆಯವರಿಗೆ ಅಥವಾ ಸ್ನೇಹಿತೆಯರಾದ ವೀಣಾ,ಪೂರ್ಣಿಮಾ, ಸುಮನ್ ಗೆ ತೋರಿಸುವಷ್ಟು ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ತನ್ನ ಬರವಣಿಗೆಯ ಕಾರಣಕ್ಕೆ ಗಮನ ಸೆಳೆವ ವ್ಯಕ್ತಿತ್ವ ಹೊಂದಿದ್ದ ಸುಮನ್ ಬರೆಯಲು ನನಗೆ ಪ್ರೇರಣೆಯಾಗಿದ್ದಳು.ಅವಳ ಬಗ್ಗೆ ಒಳಗಿನಿಂದ ಕಾಡುತ್ತಿದ್ದ ಮತ್ಸರ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ನನಗೆ ಈಗ ಅನಿಸುತ್ತದೆ.ಸುಮನ್ ಸಿರಿವಂತರ ಮನೆಯ ಜಾಣ ಹುಡುಗಿಯಾಗಿದ್ದರೂ ಯಾವುದೇ ಅಹಂಕಾರ ಅವಳಿಗಿರಲಿಲ್ಲ .ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಳು.ಅವಳಿಗೆ ಸಿಕ್ಕ ಬಹುಮಾನ,ಮನ್ನಣೆಗಳು ನನಗೂ ಏಕಪಾತ್ರಾಭಿನಯ,ಭಾಷಣ ಮೊದಲಾದವುಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪ್ರೇರಣೆಯಾಯಿತು.
ಮುಂದೆ ಸುಮನ್ ದೊಡ್ಡ ಪತ್ರಕರ್ತೆಯಾಗಬಹುದು ಇಲ್ಲವೇ ತುಂಬಾ ಓದಿ ಒಳ್ಳೆಯ ಕೆಲಸ ಪಡೆದು ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದೇ ನಾವೆಲ್ಲರೂ ಊಹಿಸಿದ್ದೆವು.
ಆದರೆ ಬದುಕು ನಾವಂದುಕೊಂಡಂತೆ ಇರುವುದಿಲ್ಲ. ಅವಳಿಗೆ ಮೊದಲ ವರ್ಷ ಪದವಿ  ಪರೀಕ್ಷೆ ಮುಗಿಯುತ್ತಿದ್ದಂತೆ ದೊಡ್ಡ ಕಾಫಿ ಎಸ್ಟೇಟ್ ಉದ್ಯಮಿ ಜೊತೆಗೆ ಮದುವೆಯಾಯಿತು. ಮುಂದೆ ರೆಗುಲರ್ ಆಗಿ ಓದು ಮುಂದುವರಿಸಲಾಗಲಿಲ್ಲ .ಖಾಸಗಿಯಾಗಿ ಓದಿರಬಹುದೇನೋ ಗೊತ್ತಿಲ್ಲ, ನಂತರ ಅವಳ ಕಥೆ ಕವನಗಳು ಬರಹಗಳು ಪ್ರಕಟವಾಗಿದೆಯೋ ಇಲ್ಲವೋ ನನಗೆ ತಿಳಿಯದು ಆದರೂ ಅವಳಿಗೆ ಹೆಚ್ಚೇನು ಬರೆಯಲಾಗಿಲ್ಲ ಎಂದು ಅನಂತರ ತಿಳಿಯಿತು. ಅವಳ ಮದುವೆಯಾದ ಕೆಲ ತಿಂಗಳಲ್ಲಿ ಪೂರ್ಣಿಮಾ ಕೂಡ ಮದುವೆಯಾಗಿ ಶ್ರೀಮಂತರ ಮನೆ ಸೇರಿದಳು‌ .ನಂತರ ಎರಡನೇ ವರ್ಷ ಪೂರ್ವ ಸಿದ್ದತಾ ಪರೀಕ್ಷೆ ಆಗುತ್ತಿದ್ದಂತೆ ನನಗೂ ಮದುವೆಯಾಯಿತು, ನಾನು ವಿವಾಹಾನಂತರವೂ ಮನೆ ಮಂದಿ ಸಮಾಜವನ್ನು ಎದುರು ಹಾಕಿಕೊಂಡು ಓದಿದೆ..ಬಿಎಸ್ಸಿ ‌ಮುಗಿಯುತ್ತಲೇ ವಿಜ್ಞಾನ ವನ್ನು ಬಿಟ್ಟು ಸಂಸ್ಕೃತ ಎಂಎ ಗೆ ಸೇರಿ ಮತ್ತೆ ಮೊದಲ ಬೆಂಚಿನ ವಿದ್ಯಾರ್ಥಿನಿಯಾಗಿ ಮೊದಲ ರ‌್ಯಾಂಕ್ ಪಡೆದು ನಂತರದ ದಿನಗಳಲ್ಲಿ ಉಪನ್ಯಾಸಕಿಯಾದೆ.
ಎಷ್ಟೋ ವರ್ಷಗಳ ನಂತರ ಉಜಿರೆಯಲ್ಲಿ ವಿಶ್ವ ತುೞು ಸಮ್ಮೇಳನದಲ್ಲಿ ಭಾಗವಹಿಸಲು ಹೋದವಳು ನಾನಿದ್ದ ಮೆಸ್ ಗೂ ಹೋಗಿದ್ದೆ.ಅವರ ಮೂಲಕ ಸುಮನ್ ಗೆ ಕ್ಯಾನ್ಸರ್ ಬಂದಿದ್ದು ತಿಳಿದು ಫೋನ್ ಮಾಡಿ ಮಾತಾಡಿದ್ದೆ.ಆಗ ಅವಳಿಗೆ ಮೊದಲಿಗೆ ಬ್ರೆಸ್ಟ್ ಕ್ಯಾನ್ಸರ್ ಬಂದು ಗುಣವಾಗಿ ಮತ್ತೆ ಎಲುಬಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು‌.ಅವಳಿಗೆ ಮಕ್ಕಳಾಗದ ಕಾರಣ ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು ಆ ಮಗುವಿಗೆ ಮೂರು ನಾಲ್ಕು ವರ್ಷ ಅಗಿದೆ ಎಂದು ತಿಳಿಸಿದ್ದಳು.ತುಂಬಾ ನಿರಾಶೆಯಲ್ಲಿದ್ದ ಅವಳಿಗೆ ಏನೆಂದು ಧೈರ್ಯ ಹೇಳಬೇಕೋ ನನಗೂ ಗೊತ್ತಾಗಲಿಲ್ಲ. ಆದರೂ ನಾವು ಎಷ್ಟು ಸಮಯ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಹೇಗೆ ಬದುಕಿದ್ದೇವೆ ಹೇಳುವುದು ಮುಖ್ಯ. ಯಾರ ಆಯುಷ್ಯ ಕ್ಕೂ ಗ್ಯಾರಂಟಿ ಇಲ್ಲ,ಸಾಯಲು ಕ್ಯಾನ್ಸರ್ ಇರಬೇಕೆಂದೇನೂ ಇಲ್ಲ .ರಸ್ತೆ ಆಕ್ಸಿಡೆಂಟ್ ನಲ್ಲು ಜನರು ಸಾಯುತ್ತಾರೆ.ಏನೂ ಸಮಸ್ಯೆ ಇಲ್ಲದೆ ಇರುವ ಜನರೂ ಇದ್ದಕ್ಕಿದ್ದಂತೆ ಕುಸಿದು ಕುಳಿತು ಸಾಯುತ್ತವೆ. ಹೃದಯ ಕಾಯಿಲೆ, ಏಡ್ಸ್ ,ಕ್ಯಾನ್ಸರ್ ನಂತ ರೋಗಗಳು ಬಂದರೂ ನೂರು ವರ್ಷ ಬದುಕಿದವರು ಇದ್ದಾರೆ.ನೀನು ಸಾಧ್ಯವಾದರೆ ಪುಸ್ತಕ ಪ್ರಕಟಿಸು ಎಂದು ಹೇಳಿ ಧೈರ್ಯ ಹೇಳಿದ್ದೆ.ಇದಾಗಿ ಕೆಲವು ತಿಂಗಳ ನಂತರ ಕ್ಯಾನ್ಸರ್ ಗುಣಮುಖ ವಾಗಿದೆ, ಎರಡು ಪುಸ್ತಕ ಪ್ರಕಟಿಸಲು ಸಿಧ್ದ ಮಾಡುತ್ತಿದ್ದೇನೆ,ಪ್ರಕಟವಾದ ಮೇಲೆ ಕಳಹಿಕೊಡುತ್ತೇನೆ ಎಂದು ನನ್ನ ವಿಳಾಸ ಪಡೆದುಕೊಂಡಿದ್ದಳು.
ಅದಾಗಿ ಕೆಲ ತಿಂಗಳ ನಂತರ ಅವಳ ಸಾವಿನ ದಾರುಣೆ ವಾರ್ತೆ ಸಿಕ್ಕಿ ಮನಸ್ಸು ಭಾರವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.ಅವಳಿಗೆ ಮತ್ತೆ ಮೆದುಳಿಗೆ ಕ್ಯಾನ್ಸರ್ ಹರಡಿತಂತೆ. ಯಮರಾಯ ಇಂತಹ ಪ್ರತಿಭಾನ್ವಿತೆ ಸ್ವರ್ಗದಲ್ಲಿರಲಿ ಎಂದು ಎಳೆದೊಯ್ದು ಸ್ವರ್ಗ ಕ್ಕೆ ಸೇರಿಸಿಬೇಕು. ಅವಳ ಎರಡು ಪುಸ್ತಕಗಳು ಅವಳಿದ್ದಾಗಲೇ ಪ್ರಕಟವಾಗಿವೆ ಎಂದು ಸ್ನೇಹಿತೆ ವಿದ್ಯಾ ತಿಳಿಸಿದ್ದರು.

ಅವಳ ನೇತೃತ್ವದಲ್ಲಿ ನಾವು ಕಾಲೇಜು ಡೇಯಲ್ಲಿ "ನೋಡವಳಂದಾವಾ ಮುತ್ತಿನ ಮಾಲೆ ಚಂದಾವಾ" ಹಾಡಿಗೆ ಸಮೂಹ ನೃತ್ಯ ಮಾಡಿದ್ದೆವು‌. ಅವಳನ್ನು ಹೇಗೆ ತಾನೇ ಮರೆಯಲಿ?
ಒಂದು ದಿನ ಸಂಜೆ  ಅವಳು ಬೇಕರಿಯಿಂದ ಪಪ್ಸ್ ತಂದು ತಿನ್ನೋಣವಾ ಎಂದು ಕೇಳಿದಳು.ಹಾಗೆಂದರೇನು ಎಂದು ನಾವು ಕೇಳಿದೆವು.ಅದು ಬ್ರೆಡ್ ಒಳಗಡೆ ಪಲ್ಯ ಹಾಕಿ ಹುರಿದು ಮಾಡುತ್ತಾರೆ.ತುಂಬಾ ರುಚಿಯಿರುತ್ತದೆ ಎಂದು ಹೇಳಿದಳು.ಹಾಗೆ ನಾವೆಲ್ಲಾ ಉಜಿರೆ ಪೇಟೆಗೆ ಬಂದು ಅಲ್ಲಿದ್ದ ಒಂದೇ ಒಂದು ಬೇಕರಿಯಲ್ಲಿ ಪಪ್ಪ್ ಬೇಕೆಂದು ಕೇಳಿದೆವು‌. ಹಳ್ಳಿಯ ಬೇಕರಿ ಮಾಲಕನಿಗೆ ಪಪ್ಸ್ ದು ಹೆಸರು ಕೂಡ ಕೇಳಿ ಗೊತ್ತಿರಲಿಲ್ಲ.! ವರು ನಾವು ಕೇಳಿದ ವಸ್ತುವೇನೆಂದು ತಿಳಿಯದೆ ಮಿಕ ಮಿಕ ನೋಡಿದ್ದರು! ಅಲ್ಲಂದ ನಾನು ಪಪ್ಸ್ ತಿನ್ಬಲೇ ಬೇಕೆಂದು ಕೊಂಡಿದ್ದೆ.ಇದಾಗಿ ಸುಮಾರು ಒಂದು ವರ್ಷದ ನಂತರ ನನಗೆ ಮದುವೆಯಾಯಿತು, ಪ್ರಸಾದ್ ಆಗಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ನಾನು ರಜೆಯಲ್ಲಿ ಬೆಂಗಳೂರಿಗೆ ಬಂದೆ.ಆಗ ಪ್ರಸಾದ್ ನಿನಗೇನು  ತಿನ್ನಲು ತರಬೇಕು ಎಂದು  ಕೇಳಿದಾಗ ನಾನು ಪಪ್ ಬೇಕೆಂದು ಹೇಳಿದೆ! ಆರಂಭದಲ್ಲಿ ಅವರಿಗೆ ನಾನೇನು ಕೇಳುತ್ತಿದ್ದೇನೆ ಗೊತ್ತಾಗಲಿಲ್ಲ, ನಂತರ ಸುಮನ್ ಹೇಳಿದ್ದನ್ನು ನೆನಪಿಸಿಕೊಂಡು ಬ್ರೆಡ್ ಒಳಗೆ ಪಲ್ಯ ಹಾಕಿ ಹುರಿದ ತಿಂಡಿ ಎಂದು ವಿವರಿಸಿದೆ,ಓ ಅದಾ ಅದು ಪಪ್ಸ್ ಮಾರಾಯ್ತಿ ಈಗ ತಂದೆ ಎಂದು ಹೇಳಿ ಐದು ನಿಮಿಷದಲ್ಲಿ ಬೇಕರಿಯಂದ ತಂದು ಕೊಟ್ಟರು‌ಹೌದು ಸುಮನ್ ಹೇಳಿದ್ದು ನಿಜ ಅದು ತುಂಬಾ ರುಚಿಕರ, ನನಗೆ ಈಗಲೂ ಅದು ತುಂಬಾ ಇಷ್ಟ!

Tuesday 14 November 2017

ಬದುಕೆಂಬ ಬಂಡಿಯಲಿ 2 ಮುನಿಯಮ್ಮ

ಮುನಿಯಮ್ಮನ ಕಥೆಯಲ್ಲ ವ್ಯಥೆ ಇದು

ಪರೀಕ್ಷಾ ಕಾರ್ಯ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿಗಳಾದ ಶ್ರೀಶ ,ಗೀತಾ ಬೇಗನೆ ಬಸ್ ನಿಲ್ದಾಣಕ್ಕೆ ಬಂದು ಆಗಷ್ಟೇ ಹೊರಟು ನಿಂತ ಬಸ್ ಗೆ ಹತ್ತಿದೆವು.ಮುಂದೆ ಸೀಟ್ ಇಲ್ಲದ ಕಾರಣ ಬಸ್ ನ ಹಿಂದಿನ ಸೀಟ್ ಗಳಲ್ಲಿ ಕುಳಿತಿದ್ದೆವು.ಜಾಲ ಹಳ್ಳಿ ಕ್ರಾಸ್ ಸಮೀಪ ಬಂದಾಗ ಮುಂದೆ ಒಂದೆರಡು ಸೀಟ್ ಗಳು ಖಾಲಿಯಾದವು.ನಾನು ಮುಂದೆ ಬಂದು ಒಬ್ಬ ಅಜ್ಜಿಯ ಪಕ್ಕ ಖಾಲಿ ಸೀಟಿನಲ್ಲಿ ಕುಳಿತೆ.ಅಜ್ಜೆ ಕಡೆ ನೋಡಿ  ನಗು ಬೀರಿದೆ.ಅಜ್ಜಿ ಮಾತನಾಡಲು ಶುರು ಮಾಡಿದರು.ಅವರ ಹೆಸರು ಮುನಿಯಮ್ಮ .ಗಂಡ ಮಕ್ಕಳು ಯಾರೂ ಇಲ್ಲ. ಇವರ ಗಂಡನ ಹೊಲವನ್ನು ಯಾರೋ ಸಂಬಂಧಿಗಳು ಒಳಗೆ ಹಾಕಿಕೊಂಡು ಮಾರಾಟ ಮಾಡಿದ್ದಾರೆ.ಕೂಲಿ‌ಕೆಲಸ ಮಾಡಿ ಬದುಕುತ್ತಾ ಇದ್ದರು.ಈಗ ವಯಸ್ಸಾಗಿ ಕೂಲಿ ಕೆಲಸ ಮಾಡಲು ಶಕ್ತಿ ಇಲ್ಲ‌.ಇದರಿಂದಾಗಿ ಈಗ ಇವರಿಗೆ ಊಟಕ್ಕೆ ಗತಿಯಿಲ್ಲದಾಗಿ ಭಿಕ್ಷೆ ಬೇಡುತ್ತಾರಂತೆ.ಏನೋ ಚಿಕಿತ್ಸೆ ಗಾಗಿ ನೆಲಮಂಗಲ ದಿಂದ ಎಂಟು‌ಮೈಲು ದೂರದ ಎಣ್ಸಿಗೇರಿ ಯಿಂದ ಬೆಂಗಳೂರಿಗೆ ಬಸ್ ನಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.ನನ್ನ ಪರ್ಸ್ ನಲ್ಲಿ ಇದ್ದ ಐನೂರು ರುಪಾಯಿ ದುಡ್ಡು ಕೊಟ್ಟು ಇನ್ನೇನಾದರು ಸಹಾಯ ಬೇಕಾದರೆ ಕಾಲೇಜಿಗೆ ಬರುವಂತೆ ಹೇಳಿ ಒಂದು ಕಾಗದದಲ್ಲಿ ನನ್ನ ಮೊಬೈಲ್ ನಂಬರ್ ಕಾಲೇಜು ವಿಳಾಸ ಬರೆದು ನೀಡಿದೆ.
ಇಂತಹ ಎಷ್ಟು ಮುನಿಯಮ್ಮರು ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಿಲ್ಲದೆ ಒದ್ದಾಡುತ್ತಿದ್ದಾರೋ ಏನೋ,ದೇವರೇ ಬಲ್ಲ

Sunday 12 November 2017

ದೊಡ್ಡವರ ದಾರಿ 24ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ24 - ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಭಟ್ ©ಡಾ ಲಕ್ಷ್ಮೀ ಜಿ ಪ್ರಸಾದ




ಸಾಲು ಸಾಲು  ಸೈಟ್ ಗಳು, ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ

ಫೇಸ್ ಬುಕ್ ನನಗೆ ಹೊರ ಜಗತ್ತಿನ ಅನೇಕ ಮಹನೀಯರನ್ನು ಪರಿಚಯಿಸಿದೆ.ಗುಡ್ಡೆಯಿಂದ ಗುಡ್ಡೆ ಅಡ್ಡ ಎಂಬಂತೆ ವಿಶಿಷ್ಠವಾದ ಸಾಧನೆ ಮಾಡಿದವರ ಬಗ್ಗೆ ನನಗೆ ತಿಳಿದದ್ದು ಫೇಸ್ ಬುಕ್ ಮೂಲಕ.ಅನೇಕರು ಪೇಸ್ ಬುಕ್ ಸೇರಿದಂತೆ ಅಂತರ್ಜಾಲ ಬಳಕೆ ಬಹಳ ಕೆಡುಕುಂಟು ಮಾಡುತ್ತದೆ ಎಂದು ಹೇಳುವುದು ಕೇಳಿದ್ದೆ.ಆದರೆ ನನಗೇನೂ ಅದು ಕೆಟ್ಟದು ಎನಿಸಿಲ್ಲ ಅದೆಲ್ಲ ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.
ಅದಿರಲಿ.ನನಗೆ ಪೇಸ್ ಬುಕ್ ಮೂಲಕ ಪರಿಚಿತರಾಗಿ‌ನಂತರ ಬಹಳ ಆತ್ಮೀಯರಾಗಿರುವ ಪದ್ಮಾ ಭಟ್ ಅವರ ಮಹತ್ತರ ಕಾರ್ಯದ ಬಗ್ಗೆ ಇಲ್ಲಿ ಹೇಳಲು ಹೊರಟಿರುವೆ.ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಅನಾಥ ಮಕ್ಕಳನ್ನು ಸಾಕಿ ಬದುಕು ಕೊಟ್ಟ ಮಹನೀಯರ ಸೇವೆಯ ಬಗ್ಗೆ ಓದಿ ಅಬ್ಬಾ ಅವರು ನಿಜಕ್ಕೂ ಗ್ರೇಟ್ ಎಂದು ಕೊಳ್ಳುತ್ತೇವೆ.ಆದರೆ ನಮ್ಮ ಸುತ್ತ ಮುತ್ತಲೂ ಅಂತಹ ಕೆಲವರು ಇದ್ದಾರೆ.ಅಂತಹವರ ಸಾಧನೆಯನ್ನು ಗುರುತಿಸಲು ಆಂತರ್ಯದ ಕಣ್ಣು ತೆರೆದಿರಬೇಕು ಅಷ್ಟೇ.
ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಒಂದು  ಚಿಕ್ಕ ಮನೆಯಲ್ಲಿ ವಾಸಿಸುವ ಪದ್ಮಾ ಭಟ್ ಹೆಚ್ಚಾಗಿ ಇರುವುದು ಅವರೇ ಸ್ಥಾಪಿಸಿರುವ  ಸತ್ಯ ಭಾರತಿ  ಆಶ್ರಮದಲ್ಲಿ.
ಪಿಯುಸಿ ಆಗಿ  telecommunicationsಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದು ಸಣ್ಣ ವಯಸಿನಲ್ಲಿಯೇ ಸ್ವಂತ ಇಂಡಸ್ಟ್ರಿ ಪ್ರಾರಂಭ ಮಾಡಿದ ಪದ್ಮಾ ಭಟ್ ಸಾಗಿದ ಹಾದಿ ಕಲ್ಲುಮುಳ್ಳಿನದು.ಆದರೆ ನೀಡಿದ್ದು ಅಮೃತ .
ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಅವರು ಮಾಡಿದ ಮಹತ್ಕಾರ್ಯ ಅತ್ಯಂತ ಶ್ಲಾಘನೀಯ. ಚಿಕ್ಕಂದಿನಲ್ಲಿ ತಮ್ಮ ಓರ್ವ ತಂಗಿಯ ಅಸಹಜ ಸಾವು,ಹಾಗೂ ತಂಗಿಯರಿಗೆ  ಬೇರೆಯವರ ಮನೆಯಲ್ಲಿದ್ದು ಓದಬೇಕಾಗಿ ಬಂದ ಸಂದರ್ಭದಲ್ಲಿ ಕಾಡಿದ ಅಭದ್ರತೆ ಅವರಿಗೆ ಈ ಕಾರ್ಯ ಮಾಡಲು ಪ್ರೇರಣೆ ಎಂದು ಅವರು ಹೇಳುತ್ತಾರೆ.  ಬೇರೆ ಬಡ ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡಬಾರದೆಂಬ ಸದುದ್ದೇಶದಿಂದ ಅವರು ಅನಾಥ ಮಕ್ಕಳ ಆಶ್ರಮ ತೆರೆದಿದ್ದಾರೆ
ಬೆಂಗಳೂರಿನ ಚಳ್ಳೆಕೆರೆಯಲ್ಲಿ  ಸುಮಾರು ನಲುವತ್ತು ಅನಾಥ ಬಡ ಮಕ್ಕಳಿಗೆ ಉಚಿತ  ಊಟ ವಸತಿ  ಶಿಕ್ಷಣ ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಕೆಂಗೇರಿಯ ನಾಗದೇವನ ಹಳ್ಳಿಯಲ್ಲಿ ಒಂದು ಉಚಿತ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.ಇಲ್ಲಿ ಒಂಬತ್ತು ಜನ ಹಿರಿಯರು ಇದ್ದಾರೆ.
ಇಷ್ಟಕ್ಕೂ ಪದ್ಮ ಭಟ್ ಕೋಟ್ಯಧಿಪತಿಯಲ್ಲ ,ದುಡ್ಡು ಹೆಚ್ಚಾಗಿ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಆಶ್ರಮ ತೆರೆದವರಲ್ಲ.ಯಾವುದೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿಯೂ ಇದನ್ನು ಮಾಡಿಲ್ಲ .
ಅವರ ಆಂತರ್ಯದ ಉದಾರ ಹೃದಯ ಬಡ ಮಕ್ಕಳ ಕಡೆಗಿರುವ ಒಲವೇ ಅವರನ್ನು ಈ ಮಹತ್ಕಾರ್ಯದಲ್ಲಿ ತೊಡಗಿಸಿದೆ.
ಇವರಿಗೆ ದಿನಕ್ಕೆ ಕಡಿಮೆ ಎಂದರೆ ಹನ್ನೆರಡು ಸಾವರ ರುಗಳಷ್ಟು ಖರ್ಚು ಬರುತ್ತದೆ.ಕೆಲವು ದಾನಿಗಳು ಆಗಾಗ ತಮ್ಮ ಮಕ್ಕಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಥವಾ ಇನ್ ಯಾವುದೋ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಅನ್ನದಾನದ ಕಾರ್ಯ ಮಾಡುತ್ತಾರೆ.ಆದರೆ ಬೇರೆ ಯಾವುದೇ ರೀತಿಯ ಸಹಾಯ ಧನ ಸಿಗದೆ ಇರುವ ಕಾರಣ ಪದ್ಮ ಭಟ್ ಅವರೇ ಈ ಎಲ್ಲ ಖರ್ಚನ್ನು ನಿಭಾಯಿಸುತ್ತಾರೆ.ಇದಕ್ಕಾಗಿ ತನ್ನ ಒಂದು ಮನೆ ಮತ್ತು ಎರಡು ಸೈಟುಗಳನ್ನು ಮಾರಾಟ ಮಾಡಿದ್ದಾರೆ.
ಸೈಟಿನ‌ಮೇಲೆ ಸೈಟ್ ಮನೆಯ ಮೇಲೆ ಮನೆ ಕಟ್ಟುಸುತ್ತಾ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಹತ್ತು ಜನ್ಮದಲ್ಲೂ ಉಂಡು ಮುಗಿಯದಷ್ಟು ಸಂಪತ್ತನ್ನು ಅಡ್ಡ ಮಾರ್ಗದಲ್ಲಿ ಅಥವಾ ನೇರ ಮಾರ್ಗದಲ್ಲಿ ಗಳಿಸಿ ಇನ್ನೂ ಇನ್ನೂ ಸಾಲದು  ಸಾಲದೆಂದು ತುಂಬಿಡುವ ಜನರೇ ತುಂಬಿದ ಸ್ವಾರ್ಥಿಗಳ ಜಗತ್ತಿನಲ್ಲಿ , ತಮ್ಮ ಮನೆ  ಸೈಟನ್ನು ಮಾರಾಟ ಮಾಡಿ ಅನಾಥ ಮಕ್ಕಳನ್ನು ವೃದ್ಧರನ್ನು ಪೊರೆಯುವ ಮಹತ್ಕಾರ್ಯ ಮಾಡುತ್ತಿರುವ ಪದ್ಮಾ ಭಟ್ ಬಲು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ( ಲತಿಕಾ ಭಟ್ ಎಂಬ ಇನ್ನೋರ್ವ ಫೇಸ್ ಬುಕ್ ಸ್ನೇಹಿತರು ಕೂಡ ಇಂತಹ ಮಹತ್ಕಾರ್ಯ ಆರಂಭಿಸಿದ್ದಾರೆ ).ಅವರ ಈ ಮಹತ್ಕಾರ್ಯ ದಲ್ಲಿ ನಾವೂ ಸ್ವಲ್ಪ ಅಳಿಲ ಸೇವೆ ಮಾಡಿ ಕೃತಾರ್ಥರಾಗೋಣ ಏನಂತೀರಾ ?
(ಸ್ನೇಹಿತರೇ.. ನಮ್ಮ ಮಕ್ಕಳ ಆಶ್ರಮದ ಕಟ್ಟಡದ ಮುಂಭಾಗದ 1000 ಚ ಅಡಿ ವಿಸ್ತೀರ್ಣದ ಹಾಲ್ ಪ್ರಸ್ತುತ ಶೀಟ್ ಹಾಸಿದೆ . ಪೂರ್ಣವಾಗಿ ಟೇರೆಸ್ ಮಾಡಬೇಕಿದ್ದರೆ ಮೂವತ್ತು ನಲವತ್ತು ಲಕ್ಷ ಖರ್ಚಿದೆ.
ನಿಮ್ಮಲ್ಲಿ ಯಾರಿಗಾದರೂ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಮನಸ್ಸಿದ್ದಲ್ಲಿ ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. ಖುದ್ದಾಗಿ ಭೇಟಿ ನೀಡಿಯೂ ಸಹಾಯ ಮಾಡಬಹುದು. ನಿಮ್ಮ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80g ಪ್ರಕಾರ ತೆರಿಗೆ ವಿನಾಯಿತಿ ಇದೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ.
..ಪದ್ಮಾ ಭಟ್

Sri Satya Sai Mahila Charitable Trust (R)
SB a/c no..520101021856601
IFSC Code: CORP0000744
Corporation Bank, KS Town Branch
Bangalore-560060.
Web: www.srisaimahila.org
Email: smct189@gmail.com

Mobile: 9986014189/9844540380 Sri Satya Bharathi Ashrama vidyalaya, behind Ekadantha layout, Saibaba temple road, Challagatta)
 http://shikshanaloka.blogspot.in/2017/11/24.html?m=1




)

Saturday 4 November 2017

ದೊಡ್ಡವರ ದಾರಿ 23 ಜೀವನ್ಮುಖಿ ಗೆಳತಿ ನಿರ್ಮಲ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕಿನಲ್ಲಿ ನಾವು ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಜನರನ್ನು ಭೇಟಿ ಮಾಡುತ್ತೇವೆ.ಅಂತೆಯೇ ನನ್ನ ಮತ್ತು ನಿರ್ಮಲಾ ಭೇಟಿ ಆಕಸ್ಮಿಕ. ನಿರ್ಮಲಾ ಸುಮಾರಾಗಿ ನನ್ನದೇ ವಯಸ್ಸಿನ ಮಹಿಳೆ .ಆದರೆ ನನಗಿಂತ ಹೆಚ್ಚು ಅನುಭವ ಇದ್ದವರು.ಯಾರದೇ ಬೆಂಬಲ ಇಲ್ಲದೇ ಇದ್ದರೂ ಕೂಡ ಸಾಲ ಮಾಡಿ ಕಂಪ್ಯೂಟರ್ ತೆಗೆದು ಡಿಟಿಪಿ ಮಾಡಿಕೊಡುವ ಸ್ವ ಉದ್ಯೋಗ ಮಾಡುತ್ತಿದ್ದರು.ಈಗ ಅವರು ಮಿಥಿಕ್ ಸೊಸೈಟಿಯ ಉದ್ಯೋಗಿಯಾಗಿದ್ದಾರೆ.ಬಿಡುವಿನ ವೇಳೆಯಲ್ಲಿ ಡಿಟಿಪಿ ಮಾಡಿ ಕೊಡುತ್ತಾರೆ.ಈಗಿವರು ನನಗೆ ಒಳ್ಳೆಯ ಸ್ನೇಹಿತೆ.
ನಾವು ಆಗಷ್ಟೇ ಬೆಂಗಳೂರಿಗೆ ಮನೆ ಬದಲಾಯಿಸಿದ್ದೆವು.ಅದೇ ಸಮಯದಲ್ಲಿ ನನಗೆ ಬೆಂಗಳೂರಿನ ಬಿಎಂಶ್ರೀ ಪ್ರತಿಷಟಾನದ ಮೂಲಕ ಹಂಪಿ ಯುನಿವರ್ಸಿಟಿ ಯಲ್ಲಿ ಪಿಎಚ್ ಡಿ ಅಧ್ಯಯನಕ್ಕೆ ಅವಕಾಶ ದೊರೆತಿತ್ತು.ಆಗ ನನಗೆ ಕಂಪ್ಯೂಟರ್ ನ ಗಂಧ ಗಾಳಿ ಗೊತ್ತಿರಲಿಲ್ಲ. ನಮ್ಮ ಪ್ರಬಂಧವನ್ನು ಡಿಟಿಪಿ ಯಾರಲ್ಲಿ ಮಾಡಿಸುವುದು ಹೇಳಿ ಆಲೋಚಿಸುವಾಗ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಉದ್ಯೋಗಿಯಾಗಿದ್ದ ರಾಜಮ್ಮ ಅವರು ನನಗೆ ನಿರ್ಮಲಾರನ್ನು ಪರಿಚಯಿಸಿದರು.
ನಿರ್ಮಲಾ ಅದಾಗಲೇ ಅನೇಕರ‌ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿದ್ದರು.ಹಾಗಾಗಿ ಸಂಶೋಧನಾ ವಿದಿವಿಧಾನಗಳ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇತ್ತು.ಅವರು ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯೆಯಾಗಿದ್ದು ಅವರಿಗೆ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ವಿಚಾರಗಳ ಬಗ್ಗೆ ತುಂಬಾ ತಿಳುವಳಿಕೆ ಇತ್ತು
ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡುವಾಗ ಫಾಂಟ್ ಸೈಜ್ ಉದ್ದ ಅಗಲಗಳ ಬಗ್ಗೆ ಅವರಿಗೆ ಗೊತ್ತಿತ್ತು.
ಅದೆಷ್ಟೋ ದಿನಗಳು ಅವರ ಮನೆಯಲ್ಲಿ ರಾತ್ರಿ ಉಳಿದುಕೊಂಡು ನನ್ನ ಪ್ರಬಂಧದ ತಿದ್ದುವಿಕೆಯ ಕಾರ್ಯವನ್ನು ನಾನು ಮಾಡಿದ್ದೆವು.ಅದರಲ್ಲೂ ನನ್ನ ಪ್ರಬಂಧ ದಲ್ಲಿ ನೂರರಷ್ಟು ಭಾವಚಿತ್ರಗಳಿದ್ದವು.ಇವನ್ನು ಫೋಟೋ ಶಾಪ್ ಮಾಡಿ ಹಾಕಲು ಅವರ ಕಂಪ್ಯೂಟರ್ ನಲ್ಲಿ ಕಷ್ಟವಾದಾಗ ಅವರ ಸ್ನೇಹಿತರಾದ ಹರಿಹರ ಶ್ರೀನಿವಾಸರ ಮನೆಗೆ ಹೋಗಿ ರಾತ್ರಿ ಇಡೀ ಕುಳಿತು ಈ ಕೆಲಸವನ್ನು ಮುಗಿಸಿದ್ದೆವು.
ನನ್ನ ಮೊದಲ ಪಿಎಚ ಡಿ ಪ್ರಬಂಧ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ತುಂಬಾ ಪರಿಶ್ರಮವನ್ನು ಕೇಳುವ ವಿಷಯ .ಇದಕ್ಕಾಗಿ ವ್ಯಾಪಕ ಕ್ಷೇತ್ರ ಕಾರ್ಯ ಮಾಡಬೇಕಿತ್ತು.ಕಾಲೇಜಿನ ಕೆಲಸದೊಂದಿಗೆ ಸಮಯ ಹೊಂದಾಣಿಕೆಯೂ ಸಮಸ್ಯೆಯದೇ ಆಗಿತ್ತು
ನನ್ನ ಮಾರ್ಗದರ್ಶಕರಾದ ಡಾ.ಎಸ್ ನಾಗರಾಜು ಅವರು ನನ್ನಿಂದ ಉತೃಷ್ಟ ಮಟ್ಟದ ಸಂಶೋಧನಾ ಪ್ರಬಂಧ ವನ್ನು ನಿರೀಕ್ಷಿಸುತ್ತಾ ಇದ್ದರು.ಅವರು ತುಂಬಾ ದೊಡ್ಡ ಸಂಶೋಧಕರು.ಅವರ ಮಟ್ಟಕ್ಕೆ ಏರುವುದು ನನಗೆ ಸುಲಭಸಾಧ್ಯವಾಗಿರಲಿಲ್ಲ ಅವರಿಗೆ ತೃಪ್ತಿ ಆಗದಿದ್ದರೆ ಅವರು ನನ್ನ ವಾರ್ಷಿಕ ವರದಿಗೆ ಸಹಿ ಮಾಡುತ್ತಾ ಇರಲಿಲ್ಲ. ಮೊದಲು ವರದಿಯನ್ನು ಕೈಯಲ್ಲಿ ಬರೆದು ನಿರ್ಮಲಾ ಮನೆಗೆ ಬಂದು ಡಿಟಿಪಿ ಮಾಡಿ ಗುರುಗಳ‌ಮನೆಗೆ ಹೋಗಿ ನನ್ನ ಅಧ್ಯಯನ ವನ್ನು ತಿಳಿಸಿ ಅದರ ಸಾರವನ್ನು ಬರೆದಿರುವ ವರದಿಯನ್ನು ನೀಡುತ್ತಿದ್ದೆ.ಅವರು ಅದರಲ್ಲಿ ಅನೇಕ ಬದಲಾವಣೆಗಳನ್ನು ಸೂಚಿಸುತ್ತಾ ಇದ್ದರು.ಮತ್ತೆ ನಿರ್ಮಲಾ ಮನೆಗೆ ಬಂದು ವರದಿಯನ್ನು ‌ತಿದ್ದಿ ಮತ್ತೆ ಗುರುಗಳ‌ಮನೆಗೆ ಹೋಗುತ್ತಾ ಇದ್ದೆ.ಕೆಲವೊಮ್ಮೆ ಮೂರು ನಾಲ್ಕು ಬಾರಿ ತಿದ್ದು ಪಡಿ ಆಗುತ್ತಾ ಇತ್ತು
ನನ್ನ ಮನೆಯಿಂದ ನಿರ್ಮಲಾ ‌ಮನೆಗೆ ಸುಮಾರು ಅರೇಳು‌ ಕಿಮೀ ದೂರು.ನಿರ್ಮಲಾ ‌ಮನೆಯಿಂದ  ಗುರುಗಳ ಮನೆಗೆ ಹತ್ತು ಕಿಮೀ ನಷ್ಟು ದೂರ..ನನ್ನಲ್ಲಿ ಒಂದು ಸ್ಕೂಟಿ ಇದ್ದ ಕಾರಣ ಹೇಗೋ ನಡೆಯುತ್ತಾ ಇತ್ತು
ಕೆಲವೊಮ್ಮೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಬರುತ್ತಾ ಇತ್ತು.ಒಂದು ಬಾರಿ ವರದಿ ತಯಾರು ಮಾಡಿ ನಿರ್ಮಲಾ ಮನೆಗೆ ಹೊಗಿ ಡಿಟಿಪಿ ಮಾಡಿಸಿ ತಿದ್ದು ಪಡಿ ಮಾಡಲು ಬರುತ್ತೇನೆ ಎಂದು ಹೇಳಿ ಗುರುಗಳ‌ಮನೆಗೆ ಹೋಗಿದ್ದೆ  ಗುರುಗಳ ಮನೆಗೆ ಹೋದಾಗ ಕೆಲವು ತಿದ್ದು ಪಡಿ ಹೇಳಿದ್ದರು ಅದರಲ್ಲಿ ಕೆಲವನ್ನು ನಾನು ಒಪ್ಪಲು ತಯಾರಿರಲಿಲ್ಲ
ಅವರು ಹೇಳಿದಂತೆ ಬದಲಾವಣೆ ಮಾಡದಿದ್ದರೆ ಅವರು ವರದಿಗೆ ಸಹಿ ಹಾಕುವುದಿಲ್ಲ ( ವರ್ಷಕ್ಕೆ ಎರಡು ಬಾರಿ ವರದಿ ಸಲ್ಲಿಸಲು ಇದೆ)
ಹೇಗೋ ಒಂದು ಪಿಎಚ್ ಡಿ ಪದವಿ ಪಡೆಯುವ ಉದ್ದೇಶ ನನಗಿರಲಿಲ್ಲ .ನಾನು ಮಾಡಿತ್ತಿರುವ ಅಧ್ಯಯನ ಸರಿ ಇದೆಯೇ ಎಂಬುದನ್ನು ನಾನು ಡಾ.ಅಮೃತ ಸೋಮೇಶ್ವರರಲ್ಲಿ ಚರ್ಚಿಸಿ ನಂತರ ಬರೆಯಿತ್ತಾ ಇದ್ದೆ.ಹಾಗಾಗಿ ಕೆಲವು ನನ್ನದೇ ಆದ ನಿಲುವುಗಳನ್ನು ಬದಲಾಯಿಸಲು ಸಾಧ್ಯಗುವುದಿಲ್ಲ ನನಗೆ.
ಮೊದಲೇ ಕಾಲೇಜು ಕೆಲಸ ,ಆಗ ಮಗ ಚಿಕ್ಕವನಿದ್ದು ಇವನ ಓದು ಹೋಂ್ ವರ್ಕ್ ,ಜೊತೆಗೆ ಕ್ಷೇತ್ರ ಕಾರ್ಯ ಇವೆಲ್ಲದರ ನಡುವೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಎಲ್ಲದರಿಂತ ಸೋತು ಸೊರಗಿ ಹೋಗಿದ್ದ ನನಗೆ ಪಿಎಚ ಡಿ ಪದವಿಯು ಬೇಡ ಏನೂ ಬೇಡ ಎನಿಸಿತ್ತು.ಗುರುಗಳಲ್ಲಿ ತಿದ್ದು ಪಡಿ ಮಾಡಿ ತರುತ್ತೇನೆ ಎಂದು ಹೇಳಿದವಳು ನಿರ್ಮಲಾ ಮನೆಗೆ ಹೋಗದೆ ಸೀದಾ ನನ್ನ ‌ಮನೆಗೆ ಬಂದು ಬರೆದ ಅಧ್ಯಯನ ದ ವರದಿಯನ್ನೆಲ್ಲಾ ಅಲ್ಲೆ ಮೆಜಿನ‌ಮೇಲೆ ಎಸೆದು ಟೇರೆಸ್ ಹತ್ತಿ ಆಕಾಶ ನೋಡುತ್ತಾ ದಿಙ್ಮೂಢಳಾಗಿ ಕುಳಿದಿದ್ದೆ.ಹಾಗೆಯೇ ಎಷ್ಟು ಹೊತ್ತು ಕುಳಿತಿದ್ದನೋ ಗೊತ್ತಿಲ್ಲ. ಪೋನ್ ರಿಂಗಾಗಿ ಇಹ ಲೋಕಕ್ಕೆ ಬಂದೆ .ನಿರ್ಮಲಾ ಪೋನ್ ಮಾಡಿ ಡಿಟಿಪಿ ಮಾಡಿಸಲು ಯಾಕೆ ಬಂದಿಲ್ಲ ಎಂದು ಕೇಳಿದರು.
ಅಯ್ಯೋ ಬಿಡಿ ನಿರ್ಮಲಾ ನಾನಿನ್ನು ಬರೋದಿಲ್ಲ ಪಿಎಚ್ ಡಿ ಮಾಡಿ ಉದ್ಧಾರ ಆಗ್ಲಿಕೆ ಏನಿದೆ ? ಜಗತ್ತಿನಲ್ಲಿ ಪಿಎಚ್ ಡಿ ಮಾಡದ ಯಾರೂ ಬದುಕುತ್ತಾ ಇಲ್ಲವಾ ? ಇತ್ಯಾದಿಯಾಗಿ ಹೇಳುತ್ತಾ ಹೋದೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅವರು " ಎಂತ ಲಕ್ಷ್ಮೀ ಇದು ? ಈಗಾಗಲೇ ಕ್ಷೇತ್ರ ಕಾರ್ಯ ಮುಗಿದಿದೆ ಪ್ರಬಂಧ ಕೂಡ ಎಂಬತ್ತು ಶೇಕಡಾ ಸಿದ್ದವಾಗಿದೆ.ಈ ಹಂತದಲ್ಲಿ ಕೈ ಬಿಟ್ಟರೆ ನೀವು ಇಷ್ಟು ಸಮಯ ಕಷ್ಟ ಬಂದದ್ದಕ್ಕೆ ಏನು ಸಿಕ್ಕಂತಾಯಿತು.ಎಂತೆಂಥವರೆಲ್ಲಾ ಪಿಎಚ್ ಡಿ ಮಾಡಿದ್ದಾರೆ ಗೊತ್ತಾ ? ನಾಳೆ ಬೆಳಿಗ್ಗೆ ಬನ್ನಿ ,ಡಿಟಿಪಿ ಮಾಡಿ‌ಕೊಡುತ್ತೇನೆ ಗೈಡ್ ಮನೆಗೆ ಹೋಗಿ ಸಹಿ ಹಾಕಿಸಿವರದಿ ಸಲ್ಲಿಸಿ ಫೀಸ್ ಕಟ್ಟಿ, ಎಲ್ಲರಿಗೂ ಪಿಎಚ್ ಡಿ ಮಾಡಲು ಅವಕಾಶ ಸಿಗುವುದಿಲ್ಲ ಸಿಕ್ಕ ಅವಕಾಶ ಬಿಟ್ಟರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ ಎಂದು ಹಿತ ನುಡಿದರು.ಸ್ವಲ್ಪ ಸಮಾಧಾನವಾಗಿ ಮನೆಯೊಳಗೆ ಬಂದೆ.ಚಕ್ ದೇ ಇಂಡಿಯಾ ಸಿನಿಮಾ ಟಿವಿ ಯಲ್ಲಿ ಬರ್ತಾ ಇತ್ತು.
ಅದೊಂದು ಅದ್ಭುತ ಸಿನಿಮಾ. ಅದು ಮುಗಿಯುವಷ್ಟರಲ್ಲಿ ಹತಾಶೆಯನ್ನು ತೊಡೆದು ಹಾಕಿ ಎಂದಿನ ಲಕ್ಷ್ಮೀ ಆದೆ.ಒಂದಿನಿತು ಗುರುಗಳು ಹೇಳಿದಂತೆ ತಿದ್ದುಪಡಿ ಪಡಿ ಮಾಡಿ ಬರೆದೆ.ಕೆಲವನ್ನು ಬದಲಾಯಿಸದೆ ಹಾಗೆಯೇ ಬಿಟ್ಟೆ.ಮರು ದಿನ ಬೆಳಗ್ಗಿನ ಜಾವವೇ ನಿರ್ಮಲಾ ‌ಮನೆಗೆ ಹೋಗಿ ಟೈಪ್ ಮಾಡಿಸಿ ಗುರುಗಳ ಮನೆಗೆ ಹೋದೆ.ಕೆಲವನ್ನು ತಿದ್ದುಪಡಿ ಮಾಡದೆ ಹಾಗೆ ಬಿಟ್ಟದ್ದೇಕೆ ಎಂದು ಕೇಳಿದರು.ಅದು ನಾನು ಬರೆದದ್ದು ಸರಿ ಎಂದು ವಾದಿಸಿದೆ.ಸಾಕಷ್ಟು ಚರ್ಚೆ ಆಯಿತು. ಕೊನೆಗೆ ಅಮೃತ ಸೋಮೇಶ್ವರರಿಗೆ ಪೋನ್ ಮಾಡಿ ವಿಷಯ ತಿಳಿಸಿ ನನ್ನ ಗುರುಗಳ ಕೈಗೆ ಕೊಟ್ಟೆ.ಅಮೃತ ಸೋಮೇಶ್ವರರು ನಾನು ಹೇಳಿರುವುದನ್ನು ಸಮರ್ಥಿಸಿ ಮನವರಿಕೆ ಮಾಡಿದರು.
ಗುರುಗಳು ಸಹಿ ಮಾಡಿದರು ನಾನು ವರದಿ ಸಲ್ಲಿಸಿ ಪೀಸ್ ಕಟ್ಟಿದೆ ಅಂತೂ ಇಂತೂ ಪಿಎಚ್ ಡಿ ಪದವಿ ಸಿಕ್ತು

ಈ ನಡುವೆ ನಾನು ಒಂದಷ್ಟು ಕಥೆಗಳನ್ನು ಬರೆದಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವದ್ದವು.ಅದೇ ರೀತಿ ಅನೇಕ ಲೇಖನಗಳು ಪ್ರಕಟವಾಗಿದ್ದವು. ಹಾಗಾಗಿ ಇವನ್ನು ಸೇರಿಸಿ ಕಥಾ ಸಂಕಲನ ‌ಮತ್ತು ಲೇಖನ ಸಂಕಲನ ಪ್ರಕಟಿಸಬೇಕೆಂಬ ಕನಸು ನನಗಿತ್ತು.ಆದರೆ ಹೇಗೆ ಏನು ಎತ್ತ ಎಂಬುದು ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನಿರ್ಮಲಾ ಅವರು ಯಾವುದೋ ಒಂದು ಪುಸ್ತಕ ವನ್ನು( ಬಹುಶ ಹಾವನೂರು ಅವರದಿರಬೇಕು) ಜವಾಬ್ದಾರಿ ವಹಿಸಿ ಪ್ರಕಟಿಸಿಕೊಟ್ಟದ್ದು ಗೊತ್ತಾಯಿತು. ಹಾಗಾಗಿ ಅವರಲ್ಲಿ ನನ್ನ ಎರಡು ಪುಸ್ತಕಗಳನ್ನು ಪ್ರಕಟಮಾಡುವುದು ಹೇಗೆ ? ಪ್ರಿಂಟರ್ ಅನ್ನು ಪರಿಚಯಿಸಿ ಎಂದು ಕೇಳಿದೆ.ಆರಂಭದಲ್ಲಿ ಪುಸ್ತಕ ಪ್ತಕಟಣೆಯ ಬವಣೆ ಗಳನ್ನು ಅವರು ತಿಳಿಸಿದರು.ಆದರೆ ನನಗೆ ಪುಸ್ತಕ ಪ್ರಕಟಿಸಬೇಕೆಂಬ‌ ಮರ್ಲು ತುಂಬಾ ಇತ್ತು.
ಸರಿ ನಿರ್ಮಲಾ ನನ್ನ ಆಯ್ದ ಕಥೆ ಲೇಖನಗಳನ್ನು ಡಿಟಿಪಿ ಮಾಡಿ ಶಾರದಾ ಪ್ರೆಸ್ ಮಾಲಕರ ಬಳಿಗೆ ಕರೆದುಕೊಂಡು ಹೋಗಿ ಅವರಲ್ಲಿ ಚರ್ಚಿಸಿ ನನಗೆ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಪುಸ್ತಕ ಪ್ರಿಂಟ್ ಮಾಡಲು ಸಹಾಯ ಮಾಡಿದರು.ಇಲ್ಲಿಂದ ಪುಸ್ತಕ ಪ್ರಕಟಿಸು ಬಗ್ಗೆ ನನಗೆ ಗೊತ್ತಾಯಿತು.ನನ್ನ ಪುಸ್ತಕಗಳ ಪ್ರಕಟಣೆಗೆ ಇವರು ಭದ್ರ ಬುನಾದಿಯನ್ನು ಹಾಕಿ ಕೊಟ್ಟರು ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ ಇವುಗಳಲ್ಲಿ ನನ್ನ ಹದಿನಾಲ್ಕು ಪುಸ್ತಕಗಳನ್ನು ನಾನು ಸ್ವತಃ ಪ್ರಕಟಿಸಿರುವೆ
ನಿರ್ಮಲಾ ಜೀವನೋತ್ಸಾಹಿ ಮತ್ತು ತನ್ನಿಂದ ಆದ ಸಹಾಯವನ್ನು ಮಾಡುವ ಸಹೃದಯಿ,ನನ್ನ ಕಷ್ಟದ ಸಮಯದಲ್ಲಿ ನನಗೆ ಪೂರ್ಣ ಬೆಂಬಲ ನೀಡಿರುವುದನ್ನು ನಾನೆಂದಿಗೂ ಮರೆಯಲಾರೆ.
ಅನೇಕರ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿ ಸೆಟ್ ಮಾಡಿ‌ಕೊಟ್ಟಿರುವ ನಿರ್ಮಲಾ ಈಗ ಸ್ವತಃ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದಾರೆ.ಹಲವು ಅಡ ತಡೆಗಳ ನಡುವೆಯೂ ಅವರ ಕಲಿಕೆಯ ಉತ್ಸಾಹ ಮೆಚ್ಚುವದ್ದು.ಆದಷ್ಟು ಬೇಗನೆ ಅವರಿಗೆ ಪಿಎಚ್ ಡಿ ಪದವಿ ಸಿಗಲೆಂದು ಹಾರೈಸುವೆ.

Sunday 8 October 2017

ದೊಡ್ಡವರ ದಾರಿ -22 ಉದಾರ ಹೃದಯದ ರಾಜಗೋಪಾಲ ಕನ್ಯಾನ

ದೊಡ್ಡವರ ದಾರಿ -22   ಉದಾರ ಹೃದಯದ ರಾಜಗೋಪಾಲ ಕನ್ಯಾನ
ದೂರದ ನಕ್ಷತ್ರಕ್ಕಿಂತ ಮನೆಯ ಜಗಲಿಯ ಹಣತೆ ಹೆಚ್ಚು ಬೆಳಕು ಕೊಡುತ್ತದೆ.ಮಹಾತ್ಮರನ್ನು ಎಲ್ಲೋ ಹುಡುಕುವುದರಲ್ಲಿ ನನಗೆ ನಂಬಿಕೆ ಇಲ್ಲ.ಅಂತಹವರು ನಮ್ಮ ಸುತ್ತ ಮುತ್ತ ಅನೇಕರಿರುತ್ತಾರೆ.
 ಸ್ಥಾನ ಮಾನ ಉದ್ಯೋಗ ಸಿರಿವಂತಿಕೆಯಿಂದ ದೊಡ್ಡವರು ದೊಡ್ಡವರೆಂದು ಕರೆಸಿಕೊಳ್ಳುವುದಿಲ್ಲ,,ತಮ್ಮ ಉದಾರತೆಯಿಂದ ಗಾರೆ ಕೆಸ ಮಾಡುವ ರವಿ ಹನ್ನೊಂದು ಲಕ್ಷವನ್ನು ಕಷ್ಟದಲ್ಲಿ ಇರುವವರಿಗೆ ದಾನ ಮಾಡಿ ದೊಡ್ಡವರಾಗುತ್ತಾರೆ.ಬುಟ್ಟಿಯಲ್ಲಿ ಬಾಳೆ ಹಣ್ಣು ಇಟ್ಟುಕೊಂಡು ರಸ್ತೆ ಬದಿಯ ಮರದಡಿಯಲ್ಲಿ ಕುಳಿತು ಮಾರಾಟ ಮಾಡುವ ರಾಜು ಕೂಡ ತಮ್ಮ ಔದಾರ್ಯತೆಯಿಂದಾಗಿ ದೊಡ್ಡವರಾಗಿ ಬಿಟ್ಟಿದ್ದಾರೆ.
ದೊಡ್ಡವರೆನಿಸಿಕೊಂಡವರು ಅವರದೇ ಆದ ಕಾರಣಕ್ಕಾಗಿ ದೊಡ್ಡವರೆನಿಸಿಕೊಳ್ಳುತ್ತಾರೆ.ಆ ಅಭಿವ್ಯಕ್ತಿ ಅವರಿಗೆ ಪ್ರಕೃತಿ ಸಹಜವಾದ ಸ್ವಭಾವ ಆಗಿರುತ್ತದೆ.ಪ್ರಶಸ್ತಿ ಪುರಸ್ಕಾರ ಗಳಿಗಾಗಲೀ,ದುಡ್ಡು ಹೆಸರಿಗಾಗಲೀ ಅಂತಹವರುಔದಾರ್ಯವನ್ನು ತೋರುವುದಿಲ್ಲ.
ಇಂತಹ ನಮ್ಮ ನಿಮ್ಮೊಳಗೆ ಇರುವ ಒಬ್ಬರ ಬಗ್ಗೆ ನನಗನಿಸಿದ ನನ್ನ ಅಂತರಾಳದ ಕೆಲವು ಮಾತುಗಳನ್ನು ಇಲ್ಲಿ ಬರೆಯುತ್ತೇನೆ.
ಸುಮಾರು ಹತ್ತು ವರ್ಷಗಳ ಹಿಂದಿನ ವೃತ್ತಾಂತವಿದು
 ಆಗಿನ್ನೂ ನಾನು ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.ಎಂ ಫಿಲ್ ಆಗಿದ್ದು ಪಿಎಚ್ ಡಿ ಅಧ್ಯಯನ ಆರಂಭಿಸಿದ್ದೆ.ಅದಕ್ಕಾಗಿ ಹಿರಿಯ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ, ಡಾ.ಬಿಎ ವಿವೇಕ ರೈ,ಡಾ.ಚಿನ್ನಪ್ಪ ಗೌಡ,ಡಾ.ವಾಮನ ನಂದಾವರ,ಇಂದಿರಾ ಹೆಗಡೆ ಮೊದಲಾದವರ ಸಂಶೋಧನಾ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಯತ್ನ ಮಾಡುತ್ತಾ ಇದ್ದೆ. ನನಗೇನೋ ಪಿಎಚ್ ಡಿ ಮಾಡಬೇಕು,ಹೆಸರಿನ ಮುಂದೆ ಡಾ.ಎಂದು ಹಾಕಿಕೊಳ್ಳ ಬೇಕೆಂಬ ಕನಸಿತ್ತು .ಆದರೆ ಧೈರ್ಯ ಇರಲಿಲ್ಲ .
ಇವರೆಲ್ಲರ ಮಹಾನ್ ಗ್ರಂಥಗಳನ್ನು ಓದಿದಾಗ ಧೈರ್ಯ ಬರುವ ಬದಲು ಇಂತಹ ಗ್ರಂಥ ರಚಿಸಲು ನನ್ನಿಂದ ಆಗದೇನೋ ಎಂಬ ಆತಂಕ ಕಾಡುತ್ತಾ ಇತ್ತು.

ಇಂತಹ ಸಮಯದಲ್ಲಿ ಒಂದು ದಿನ ಸಂಜೆ ನನ್ನ ಹಳೆಯ ನೋಕಿಯಾ ಮೊಬೈಲ್ ಗೆ ಕರೆಯೊಂದು ಬಂತು.ಕರೆ ಸ್ವೀಕರಿಸಿ ಹಲೋ ಎಂದೆ,ಆ ಕಡೆಯಿಂದ ನೀವು ಲಕ್ಷ್ಮೀ ಯವರ ಎಂದು ಕೇಳಿದರು.ಯಾಕಪ್ಪಾ ದೇವರೆ ? ಯಾರಿದು ಫೋನ್ ಮಾಡಿರೋದು ? ನಾನು ವಿದ್ಯಾರ್ಥಿಗಳ ಕಲಿಕೆ ಮತ್ತು ಶಿಸ್ತಿನ ವಿಚಾರದಲ್ಲಿ ಸ್ವಲ್ಪ ಬಿಗಿಯಾಗಿದ್ದು ,ಓದಿ ಬರೆಯದೆ ಇದ್ದರೆ ಕಲಿಯದೆ ಇದ್ದರೆ ಅಶಿಸ್ತು ತೋರಿದರೆ ಮಕ್ಕಳನ್ನು ಸ್ವಲ್ಪ ಮಟ್ಟಿಗೆ ಜೋರು ಮಾಡುತ್ತಿದ್ದೆ.
‌ಹಾಗೆ ಯಾರಾದರೂ ವಿದ್ಯಾರ್ಥಿ ನನ್ನ ಮೇಲೆ ಹೆತ್ತವರಿಗೇನಾದರೂ ದೂರು ಕೊಟ್ಟರೇನೋ ? ಎಂದು ಆತಂಕವಾಯಿತು.ಆದರೂ ನನ್ನ ನಂಬರ್ ವಿದ್ಯಾರ್ಥಿಗಳಿಗೆ ಸಿಗಲು ಸಾಧ್ಯವಿಲ್ಲ, ಅಪರಿಚಿತರಿಗೆ ಯಾರಿಗೂ ನನ್ನ ಫೋನ್ ನಂಬರ್ ಸಿಗುವ ಸಾಧ್ಯತೆ ಇಲ್ಲ.ಹಾಗಿದ್ದರೂ ಇದಾರು ಅಪರಿಚಿತ ಸಂಖ್ಯೆ ಯಿಂದ ಫೋನ್ ಮಾಡಿ ನೀವು ಲಕ್ಷ್ಮೀ ಯವರ ಎಂದು ಕೇಳುತ್ತಿರುವುದು ಎಂದು ಆತಂಕ ಆಯಿತು.ಏನೊಂದು ಉತ್ತರಿಸದೆ ತಡವರಿಸಿದೆ.ಆಗ ಅವರು ನೀವು ಲಕ್ಷ್ಮೀ ಜಿ ಪ್ರಸಾದ ತಾನೇ ಎಂದು ಕೇಳಿದರು.ಆಗಿನ್ನೂ ನಾನು ಬರವಣಿಗೆಯ ಕ್ಷೇತ್ರದಲ್ಲಿ ಅಂಬೆಗಾಲಿಕ್ಕುವ ಮಗು( ಈಗಲೂ ಅಷ್ಟೇ ಮುಂದೆ ಬೆಳೆಯಲೇ‌ಇಲ್ಲ ಅದು ಬೇರೆ ವಿಚಾರ),ಹಾಗಿರುವಾಗ ನನ್ನ ಕಾವ್ಯ ನಾಮ ಕೂಡ ಇವರಿಗೆ ಗೊತ್ತಾಗಿದೆ ,ಇವರ್ಯಾರಪ್ಪ ಎಂದು ಕುತೂಹಲ ಆಯಿತು.ಹೌದು ಎಂದು ಹೇಳಿದೆ.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ನೀವೇ ಬರೆದದ್ದು ತಾನೇ ? ಎಂದು ಕೇಳಿದರು.ಓಹ್! ನಾನು ಎಷ್ಟೋ ವರ್ಷಗಳ ಹಿಂದೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಬರೆದ ನಾಟಕದ ಬಗ್ಗೆ ಇವರಿಗೆ ಹೇಗೆ ಗೊತ್ತಾಯಿತು ಎಂದು ಆಶ್ಚರ್ಯವೂ ಆಯಿತು.ಅಷ್ಟರಲ್ಲಿ ಅವರೇ ಮುಂದುವರಿದು
ಆಗ ಅವರು ತಾನು ರಾಜಗೋಪಾಲ ಕನ್ಯಾನ,ನೀವು ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಬಿ ಎಂ ಶ್ರೀ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ.ಗೀತಾಚಾರ್ಯ ನಿಮ್ಮ ಫೋನ್ ನಂಬರ್ ಕೊಟ್ಟರು.ನಿಮ್ಮ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಬಗ್ಗೆ ಮಾತಾಡಬೇಕಿತ್ತು.ನಿಮ್ಮ ಮನೆಗೆ ಬರಬಹುದಾ ಎಂದು ಕೇಳಿದರು.
‌ಗೀತಾಚಾರ್ಯರು ನಂಬರ್ ಕೊಟ್ಟ ಕಾರಣ ನಾನು ನಿರಾಳವಾದೆ.ಅವರು ಹಾಗೆಲ್ಲ ಯಾರ್ಯಾರಿಗೋ ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ನಂಬರ್ ಕೊಡುವವರಲ್ಲ ,ಹಾಗಾಗಿ ಸರಿ ಮನೆಗೆ ಬನ್ನಿ ಎಂದು ಮನೆ ವಿಳಾಸ ತಿಳಿಸಿದೆ.
‌ಸ್ವಲ್ಪ ಹೊತ್ತಿನಲ್ಲಿ ನಮ್ಮ ಮನೆಗೆ ಬಂದರು.ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚನೆಯಾದ ಕಾಲ ,ಕಥಾ ವಸ್ತು ಬಗ್ಗೆ ಮಾಹಿತಿ ಕೇಳಿದರು. ನಾನು 1984ರಲ್ಲಿ ಏಳನೇ ತರಗತಿಯಲ್ಲಿ ಬರೆದು ಅಭಿನಯಿಸಿ ಬಹುಮಾನ ಪಡೆದ ನಾಟಕ ಅದಾಗಿತ್ತು. ಅನಂತರವೂ ಅದನ್ನು ಅಭಿನಯಿಸಿ ನಾನು ಶಾಲಾ ಕಾಲೇಜುಗಳಲ್ಲಿ ಬಹುಮಾನ ಪಡೆದಿದ್ದೆ.ನನ್ನ ಸ್ನೆಹಿತೆಯರು ಬೇರೆ ಕಡೆ ಕೂಡ ಪ್ರದರ್ಶನ ಮಾಡಿದ್ದರು. ಅದು ಹವ್ಯಕ ಕನ್ನಡದಲ್ಲಿ ಬರೆದ ನಾಟಕವಾಗಿದ್ದು ಅದನ್ನು 1997 ರಲ್ಲಿ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವದಲ್ಲಿ   ರಾಜಿ ಬಾಲಕೃಷ್ಣ,ರಾಜೇಶ್ವರಿ,ಪುಷ್ಪಾ ಖಂಡಿಗೆ ನಾನುಮೊದಲಾದ ಕೆಲವು ಮಹಿಳೆಯರು ಸೇರಿಕೊಂಡು ಅಭಿನಯಿಸಿದ್ದೆವು.ಅದು ಆಗಿನ ಹವ್ಯಕ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
‌ಹವ್ಯಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ನಾರಾಯಣ ಶಾನುಭಾಗರು ಹವ್ಯಕ ಸಾಹಿತ್ಯ ಚರಿತ್ರೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು ಹಳೆಯ  ಹವ್ಯಕ ವಾರ್ತೆ ಪತ್ರಿಕೆಗಳಲ್ಲಿ ದಾಖಲೆಗಳನ್ನು ಹುಡುಕುತ್ತಾ ಇರುವಾಗ ಅಂದು ನಾವು ಅಭಿನಯಿಸಿದ ನಾಟಕದ ವರದಿಯನ್ನು ಓದಿದರು.2006 ರ ತನಕ ಹವ್ಯಕ ಮಹಿಳೆಯರು ನಾಟಕ ರಚಿಸಿದ್ದು ಆ ತನಕ ಅವರ ಗಮನಕ್ಕೆ ಬಂದಿರಲಿಲ್ಲ, ಅ ವರದಿಯನ್ನು ಓದಿದಾಗ ನಾನು ರಚಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ವೇ ಮಹಿಳೆ ರಚಿಸಿದ ಮೊದಲ ಹವ್ಯಕ ನಾಟಕ ಎಂಬುದನ್ನು ಸ್ಪಷ್ಟವಾಗಿ ತಿಳಿದು ಆ ನಾಟಕವನ್ನು ಪ್ರಕಟಿಸುವ ಸಲುವಾಗಿ ಅದರ ಹಸ್ತಪ್ರತಿ ಸಂಹ್ರಹಿಸುವ ಜವಾಬ್ದಾರಿ ಯನ್ನು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದ್ದರು. ಹಾಗಾಗಿ ಅವರು ಲಕ್ಷ್ಮೀ ಜಿ ಪ್ರಸಾದ ಯಾರೆಂದು ಹುಡುಕುತ್ತಾ ಇದ್ದರು.ಆ ನಾಟಕ ಮಂಗಳೂರು ಹವ್ಯಕ ಸಭೆಯಲ್ಲಿ ಪ್ರದರ್ಶನ ಮಾಡಿದ ಸಮಯದಲ್ಲಿ ನಾನು ಮಂಗಳೂರಿನಲ್ಲಿ ಇದ್ದೆ.ನಂತರ ನಾನು ಪ್ರಸಾದ ಉದ್ಯೋಗಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾ ಬೆಂಗಳೂರು ಸೇರಿದ್ದೆವು.ಮಂಗಳೂರು ಹವ್ಯಕ ಸಭೆಯಲ್ಲಿ ವಿಚಾರಿಸಿದಾಗ ಅವರು  ಮೂಲತಃ ಹೊಸಂಗಡಿ ಸಮಿಪದ  ಮೀಯಪದವು,ಕೋಳ್ಯೂರು ಸಮೀಪದವರು.ಈಗ ಬೆಂಗಳೂರು ನಲ್ಲಿ ಎಲ್ಲೋ ಇರಬೇಕು ಎಂದು ತಿಳಿಸಿದರಂತೆ.
‌ನನ್ನ ಮನೆ ಹೆಸರು ವಿದ್ಯಾ ಎಂದು. ನಮ್ಮ ಊರ ಕಡೆ ನಮ್ಮ ಕುಟುಂಬದವರಿಗೆ ಬಿಟ್ಟು ಬೇರೆ ಯಾರಿಗೂ ನನಗೆ ಲಕ್ಷ್ಮೀ ಎಂಬ ಹೆಸರು ಇರುವುದಾಗಲೀ ,ಲಕ್ಷ್ಮೀ ಜಿ ಪ್ರಸಾದ ಎಂಬ ಹೆಸರು ಇರುವುದಾಗಲಿ ಗೊತ್ತೇ ಇಲ್ಲ.ಹಾಗಾಗಿ ನಮ್ಮ ಊರ ಕಡೆ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಅಂತ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರಂತೆ.
‌ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಪ್ರೇಮಿಯಾಗಿದ್ದು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದವರು.ಕಲಾ ಪೋಷಕರಾಗಿದ್ದುಹಲವಾರು ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡಿದವರು,ಸಂಪರ್ಕ ಇದ್ದವರು .ಹಾಗಾಗಿ ಅವರು ತಮ್ಮ ಪರಿಚಯದ ಜನರಲ್ಲಿ ಲಕ್ಷ್ಮೀ ಜಿ ಪ್ರಸಾದ ಯಾರು ಎಲ್ಲಿದ್ದಾರೆ ಎಂದು ವಿಚಸರಿಸುತ್ತಾ ಇದ್ದರು.
‌ಹಾಗೆಯೇ ಒಂದು ದಿನ ಬಿ ಎಂ ಶ್ರೀ ಪ್ರತಿಷ್ಠಾನ ದ ಗೌರವ ಕಾರ್ಯದರ್ಶಿಗಳಾಗಿದ್ದ ಗೀತಾಚಾರ್ಯ ಸಿಕ್ಕಾಗ ನನ್ನ ಬಗ್ಗೆ ಮಾಹಿತಿಗಾಗಿ ವಿಚಾರಿಸಿದರಂತೆ.ಆಗ ಅವರು ನಮ್ಮಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಲಕ್ಷ್ಮೀ ವಿ ಎಂಬವರು ಇದ್ದಾರೆ.ಅವರಿಗೆ ಬರವಣಿಗೆಯ ಹವ್ಯಾಸವೂ ಇದೆ.ಅವರೇ ಲಕ್ಷ್ಮೀ ಜಿ ಪ್ರಸಾದ ಇರಲೂ ಸಾಕು ಎಂದು ಹೇಳಿ ನನ್ನ ಫೋನ್ ನಂಬರ್ ನೀಡಿದ್ದರು.
‌ನಮ್ಮ ಮನೆಗೆ ಬಂದ ರಾಜಗೋಪಾಲ ಅವರು ನನ್ನ ನಾಟಕದ ಹಸ್ತ ಪ್ರತಿ ಇದೆಯಾ ,ಹವ್ಯಕ ಅಧ್ಯಯನ ಕೇಂದ್ರದ ಮೂಲಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು..ಇದೆ,ಎಲ್ಲಿದೆ ಎಂದು ಹುಡುಕಬೇಕು  ಒಂದು ವಾರ ಸಮಯ ಕೊಡಿ ಎಂದು ಹೇಳಿದೆ.ನನ್ನ ಎಂ ಫಿಲ್ ಸಂಶೋಧನಾ ಪ್ರಬಂಧದ ಒಂದು ಪ್ರತಿ ಅಲ್ಲಿಯೇ ಮೆಜಿನ ಮೇಲೆ ಇತ್ತು.
‌ಅದನ್ನು ನೋಡಿ ತೆರೆದು ಮೇಲೆ ಮೇಲಿನಿಂದ ಓದಿ ತುಂಬಾ ಚೆನ್ನಾಗಿದೆ, ಪ್ರಕಟ ಮಾಡಿ ಎಂದು ಹೇಳಿದರು.ಏನೋ   ಎಂ ಫಿಲ್ ಪದವಿಗಾಗಿ ಒಂದಷ್ಟು ಬರೆದಿದ್ದೆ.ಅದು ಪ್ರಕಟಮಾಡಲು ಯೋಗ್ಯವಾದುದು ಎಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ.ರಾಜ ಗೋಪಾಲ ಕನ್ಯಾನ ತುಂಬಾ ತಿಳಿದವರು.ಅವರು ಹೇಳಿದ ಕಾರಣ ಅದು ಪ್ತಕಟ ಮಾಡಲು ಯೋಗ್ಯವಾಗಿರಬಹುದು ಎಂದು ನನಗೂ ಅನಿಸಿತು.
‌ಅದಕ್ಕೆ ಸ್ವಲ್ಪ ಮೊದಲು ಮನೆಯಂಗಳದಿ ಹೂ ಎಂಬ ಕಥಾ ಸಂಕಲನ ಮತ್ತು ಅರಿವಿನಂಗಳದ ಸುತ್ತ ಎಂಬ ಶಿಕ್ಷಣ ಸಂಬಂಧಿಸಿದ ಲೇಖನಗಳ ಸಂಕಲನವನ್ನು ಪ್ರಕಟಿಸಿ ಮಾರಾಟ ಮಾಡಲು ಅಂಗಡಿ ಅಂಗಡಿ ಅಲೆದರೂ ಅಗದೆ  ನಷ್ಟ ಮಾಡಕೊಂಡಿದ್ದೆ.( ನಂತರ ಗ್ರಂಥಾಲಯಕ್ಕೆ ಈ ಪುಸ್ತಕಗಳು ಅಯ್ಕೆ ಯಾಗಿ ಅವರು ಮುನ್ನೂರು ಮುನ್ನೂರು ಪುಸ್ತಕಗಳನ್ನು ತೆಗೆದುಕೊಂಡ ಕಾರಣ ಹಾಕಿದ ಅಸಲು ಹಿಂದೆ ಬಂದಿತ್ತು)
‌ಹಾಗಾಗಿ ನನಗೆ ಸ್ವಂತ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ.ಆಗ ಅವರು ಯಾರಾದರೂ ಪ್ರಕಾಶಕರಲ್ಲಿ ಮಾತಾಡಿ ಪ್ತಕಟ ಮಾಡಿ ಕೊಡುತ್ತೇನೆ ಎಂದು ಹೇಳಿದರು.ಮತ್ತೆ ಕೆಲವೇ ತಿಂಗಳುಗಳಲ್ಲಿ ನನ್ನ ಬಳಿಯಿಂದ ಅದರ ಮುಲಪ್ರತಿಯನ್ನು ತೆಗೆದುಕೊಂಡು ಹೋಗಿ ಅವರು ಸ್ವತಃ ಮುತುವರ್ಜಿ ವಹಿಸಿ  ನನ್ನ ಈಜೋ ಮಂಜೊಟ್ಟಿಗೋಣ ಪಾಡ್ದನ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಎಂ ಫಿಲ್ ಪ್ರಬಂಧವನ್ನು  ದೈವಿಕ ಕಂಬಳ ಕೋಣ ಎಂಬ ಹೆಸರಿನಲ್ಲಿ ಹರೀಶ್ ಎಂಟರ್ ಪ್ರೈಸಸ್ ಎಂಬ ಪ್ರಕಾಶಕರ ಮೂಲಕ ಪ್ರಕಟಮಾಡಿ ಹವ್ಯಕ ಸಭೆಯ ಕಾರ್ಯಕ್ರಮ ಒಂದರಲ್ಲಿ ಮಲ್ಲೇಪುರಂ ವೆಂಕಟೇಶ್ ಅವರ ಕೈಯಿಂದ ಬಿಡುಗಡೆ ಕೂಡ ಮಾಡಿಕೊಟ್ಟರು.
‌ಹೀಗೆ ನನ್ನ ಸಂಶೋಧನಾ ಪ್ರಕಟನೆಗೆ ಭದ್ರವಾದ ತಳಪಾಯ ಹಾಕಿ ಕೊಟ್ಟರು  .ಈ ಕೃತಿಯನ್ನು ಓದಿದ ಅಮೃತ ಸೋಮೇಶ್ವರ ಅವರು ಇದು ಒಂದು ಮಹತ್ವದ ಸಂಶೋಧನೆ ಆಗಿದೆ.ಇದೇ ರೀತಿ ಮುಂದುವರಿಯಿರಿ ಎಂದು ಹೇಳಿ ಪ್ರೋತ್ಸಾಹ ನೀಡಿದರು.
‌ಬಹುಷ ಅದೊಂದು ಪುಸ್ತಕ ವನ್ನು ರಾಜ ಗೋಪಾಲ ಕನ್ಯಾನ ಅವರು ಪ್ತಕಟಿಸಿ ಕೊಡದೆ ಇದ್ದರೆ ನನ್ನ ಮುಂದಿನ ಯಾವುದೇ ಸಂಶೋಧನಾ ಕೃತಿಗಳು ಪ್ರಕಟವಾಗುತ್ತಿರಲಿಲ್ಲ ಹೆಚ್ಚೇಕೆ ಅ ಪುಸ್ತಕ ಓದಿ ಅಮೃತ ಸೋಮೇಶ್ವರರು ಪ್ರೋತ್ಸಾಹ ನೀಡದೆ ಇರುತ್ತಿದ್ದರೆ ನಾನು ಭೂತಾರಾಧನೆ, ತುಳು ಸಂಸ್ಕೃತಿ ಕುರಿತಾದ ಅಧ್ಯಯನ ಮುಂದುವರಿಸುತ್ತಿರಲಿಲ್ಲ ಖಂಡಿತಾ. ಈಗ ನನ್ನ ಹದಿನೇಳು ಸಂಶೋಧನಾತ್ಮಕ ಕೃತಿಗಳು  ,ಒಂದು ಕಥಾ ಸಂಕಲನ, ಒಂದು ಲೇಖನ ಸಂಕಲನ ಒಂದು ನಾಟಕ ಸಂಕಲನ ಪ್ರಕಟವಾಗಿವೆ.ಇದಕ್ಕೆಲ್ಲ ಪ್ರೇರಣೆ ರಾಜಗೋಪಾಲ ಕನ್ಯಾನ ಅವರು ಅಂದು ನನ್ನ ಪ್ರಬಂಧ ಓದಿ ಪ್ರಕಟಿಸಿಕೊಟ್ಟಿರುವುದೇ ಆಗಿದೆ.ಮತ್ತು ನನ್ನ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವ ಪಡೆಯಲು ತನ್ಮೂಲಕ ಹವ್ಯಕ ಸಾಹಿತ್ಯ ಚರಿತ್ರೆಯಲ್ಲಿ ನನಗೊಂದು ಚಾರಿತ್ರಿಕ ದಾಖಲೆ ಸಿಗಲು ಅವರೇ ಕಾರಣರಾಗಿದ್ದಾರೆ.
‌ಇವರು ನನಗೆ ಮಾತ್ರ ಈ ರೀತಿಯ ಬೆಂಬಲ ನೀಡಿದ್ದಲ್ಲ.ನನ್ನಂತೆ ಇರುವ ಅನೇಕರ ಅಜ್ಞಾತ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ.
‌ಪದ್ಯಾಣ ಗೋಪಾಲಕೃಷ್ಣ ಎಂಬ ಅಪ್ರತಿಮ ಪತ್ರಕರ್ತರ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ ವಿಚಿತ್ರ ಸೃಷ್ಟಿ ಗಳ ಲೋಕದಲ್ಲಿ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಹಾಗೆಯೇ ಅನೇಕ ಯಕ್ಷಗಾನಪ್ರಸಂಗಗಳ ಕೃತಿಗಳನ್ನು, ಯಕ್ಷಗಾನ ಸಂಬಂಧಿಸಿದಂತೆ ಬೇರೆ ಬೇರೆಯವರು ರಚಿಸಿದ ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ. ಆದರೆ ಇದಕ್ಕಾಗಿ ಅವರು ಯಾವುದೇ ಪ್ರತಿಫಲ ಬಯಸಿಲ್ಲ.ನಿಷ್ಕಾಮ ಕರ್ಮ ಅವರದು.
‌ವೃತ್ತಿಯಲ್ಲಿ ಅಕೌಂಟ್ ಆಫೀಸರ್ ಅಗಿರುವ ಅವರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು,ಅರ್ಥಧಾರಿಗಳು.ಕಲಾ ಪೋಷಕರು.ಯಕ್ಷ ಕರ್ದಮ ಎಂಬ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿದ್ದಾರೆ. ಯಾವುದೇ ಹೆಸರು ದುಡ್ಡಿಗಾಗಿ ಇವನ್ನು ಮಾಡಿಲ್ಲದೇ ಇದ್ದರೂ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.
ಪದ್ಯಾಣ ಗೋಪಾಲ ಕೃಷ್ಣರ ಕುರಿತಾಗಿ ಚಿದಂಬರ ಬೈಕಂಪಾಡಿ ರಚಿಸಿದ   ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಪ.ಗೋ ಅವರ ಮಕ್ಕಳು ರಾಜಗೋಪಾಲ ಕನ್ಯಾನ ಅವರನ್ನು ಗುರುತಿಸಿ ಗೌರವಿಸಿದ್ದಾರೆ.
ಗಾನ ಸೌರಭ ಯಕ್ಷಗಾನ ಶಾಲೆ ವತಿಯಿಂದ ಯಕ್ಷಾಭಿವಂದನಮ್ ಪುರಸ್ಕಾರ ವನ್ನು ನೀಡಿ ಗೌರವಿಸಿದ್ದಾರೆ.ಇನ್ನೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಬೇರೆಯವರ ಪ್ರತಿಭೆಯನ್ನು ಗುರುತಿಸಿ ,ಪ್ರೋತ್ಸಾಹ ನೀಡುವ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರ ಕೃತಿಗಳ ಪ್ರಕಟನೆಗೆ ಸಹಾಯ ಮಾಡುವ ,ಎಲೆಮರೆಯ ಕಾಯಿಗಳನ್ನು ಬೆಳಕಿಗೆ ತಂದು ತಾವು ತೆರೆಮರೆಯಲ್ಲಿ ನಿಲ್ಲುವ ಇವರ ಔದಾರ್ಯ,ಉದಾತ್ತ ಹೃದಯವನ್ನು ಯಾರೂ ಕೂಡ ಮೆಚ್ಚ ಬೇಕಾದ್ದೇ ಸರಿ
ಇಂತಹವರ ಸಂಖ್ಯೆ ತೀರಾ ಕಡಿಮೆ ಇದೆ.ನನಗೆ ರಾಜಗೋಪಾಲ ಕನ್ಯಾನ ಈಗ  ಸಹೋದರನ ಸ್ಥಾನದಲ್ಲಿ ನಿಂತು ಬೆಂಬಲ ನೀಡುತ್ತಿರುವ ರಾಜಗೋಪಾಲಣ್ಣ ಆಗಿದ್ದಾರೆ.
ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುವೆ
© ಡಾ.ಲಕ್ಷ್ಮೀ ಜಿ ಪ್ರಸಾದ


Monday 2 October 2017

ನಂಬಿದರೆ ನಂಬಿ ಇಲ್ಲವೇ ಬಿಡಿ ಆದರೆ ಇದು ನಡೆದದ್ದು ಸತ್ಯ

ಸುಮಾರು ಒಂದೂವರೆ ವರ್ಷದ ಹಿಂದೆ ಒಂದು ದಿನ ನಾನು ರೈಲು ಮೂಲಕ ಮಂಗಳೂರಿಗೆ ಹೋಗುವಾಗ ರೈಲಿನಲ್ಲಿ ಓರ್ವ ಚೆನ್ನೈ ಹೈಕೋರ್ಟ್ ವಕೀಲರು ಮಾತಿಗೆ ಸಿಕ್ಕರು,ಮಾತಿನ ನಡುವೆ ನನ್ನ ಆಸಕ್ತಿ ಯ ಕ್ಷೇತ್ರ ಭೂತಾರಾಧನೆ ಬಗ್ಗೆ ಹೇಳಿದೆ.ಕುತೂಹಲ ದಿಂದ ಅನೇಕ ಪ್ರಶ್ನೆ ಗಳನ್ನು ಕೇಳಿದರು.ನಂತರ ಅವರ ಮನೆಯಲ್ಲಿ ಕೆಲವು ಅಮುಲ್ಯ ವಸ್ತುಗಳು ಕಾಣೆಯಾದ ಬಗ್ಗೆ ತಿಳಿಸಿ ಇದನ್ನು ಹಿಂದೆ ಪಡೆಯಲು,ಕಳ್ಳ ಯಾರೆಂದು ತಿಳಿಯಲು ಯಾವ ದೈವಕ್ಕೆ ಹರಸಿಕೊಳ್ಳಬೇಕು ಎಂದು ಕೇಳಿದರು.ನಾವೆಲ್ಲರೂ  ಯಾವುದಾದರೂ ವಸ್ತು ಕಾಣೆಯಾದರೆ ಕೊರಗಜ್ಜ ದೈವಕ್ಕೆ ಹರಸಿಕೊಳ್ಳುತ್ತೇವೆ ಎಂದು ಹೇಳಿದೆ.ಹಾಗಾದರೆ ನಾನೂ ಕೊರಗಜ್ಜನಿಗೆ ಹರಿಕೆ ಹೇಳುತ್ತೇನೆ.ನಿಮ್ಮ ದೈವದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದರು, ನನ್ನ ಫೋನ್ ನಂಬರ್  ಇ ಮೇಲ್ ಅಡ್ರೆಸ್ ತಗೊಂಡಿದ್ದರು.
ನಂತರ ನನಗೆ ಈ ವಿಚಾರ ಮರೆತುಹೋಗಿತ್ತು.ಸುಮಾರು ಐದಾರು ತಿಂಗಳ ನಂತರ ಅವರಿಂದ ಒಂದು ಮೇಲ್ ಬಂತು.ಅದರಲ್ಲಿ ಅವರ ಮನೆಯಲ್ಲಿ ಕಳವು ಮಾಡಿದ ವ್ಯಕ್ತಿ ಯಾರೆಂದು ತಿಳಿಯಿತು.ನೀವು ಕೊರಗಜ್ಜ ದೈವದ ಬಗ್ಗೆ ಹೇಳಿದ್ದೆಲ್ಲವೂ ಸತ್ಯ ಎಂದು  ತಿಳಿಸಿದರು
ಭೂತಾರಾಧನೆ ಬಗ್ಗೆ ತಿಳಿಯದೇ ಇರುವ ದೂರದ ಚೆನ್ನೈ ಯ ವಕೀಲರು ಭಕ್ತಿಯಿಂದ ಪ್ರಾರ್ಥನೆ ಮಾಡಿದಾಗ ಅವರ ಕಷ್ಟವನ್ನು ದೂರ ಮಾಡಿದ ದೈವ ಕೊರಗಜ್ಜನ ಬಗ್ಗೆ ಏನು ಹೇಳಲಿ
ತುಳುವರ ಜನಾನುರಾಗಿ ದೈವ ಕೊರಗಜ್ಜ ©ಡಾ.ಲಕ್ಷ್ಮೀ ಜಿ ಪ್ರಸಾದ

Thursday 7 September 2017

ಬದುಕೆಂಬ ಬಂಡಿಯಲಿ ಅಚ್ಚರಿಯ ತಿರುವುಗಳು

ಇಂದು ಕಾಲೇಜಿನಿಂದ ಮನೆಗೆ ಬರುತ್ತಿರ ಬೇಕಾದರೆ ಬಸ್ಸಿನಲ್ಲಿ ನಾನು ಕುಳಿತ ಸೀಟಿಗಿಂತ ಎರಡು ಸೀಟು ಮುಂದೆ ಕುಳಿತಿದ್ದ ಯುವತಿ ಹಿಂತಿರುಗಿ ನೋಡಿ ಮುಗುಳು ನಕ್ಕರು.ನನ್ನ ಹಿಂದಿನ ಸೀಟ್ ನಲ್ಲಿ ಯಾರಾದರೂ ಅವರ ಪರಿಚಿತರು ಕುಳಿತಿರಬಹುದು.ಅವರನ್ನು ನೋಡಿ ಪರಿಚಯದ ನಗು ಬೀರಿರಬಹುದು ಎಂದು ಕೊಂಡೆ.ಅವರು ಮತ್ತೊಮ್ಮೆ ನೋಡಿ‌ಮುಗುಳು ನಕ್ಕರು ಯಾರಾದರೂ ನನ್ನ ಪರಿಚಿತರಿದ್ದು ನಾನು ಮರೆತಿರಬಹುದೇನೋ ಎಂದು ಕೊಂಡು ನಾನು ಪ್ರತಿನಗು ಬೀರಿದೆ. ಮುಂದಿನ ಸ್ಟಾಪ್ ನಲ್ಲಿ ಅವರ ಪಕ್ಕದ ಸೀಟ್ನಲ್ಲಿದ್ದವರು ಇಳಿದು ಹೋದರು.ಆಗ ಅವರು ನನ್ನನ್ನು ಇಲ್ಲಿಗೆ ಬರ್ತೀರಾ ಮೇಡಂ pls ಎಂದು ‌ಕರೆದರು.ಯಾಕೆಂದು ಗೊತ್ತಾಗದಿದ್ದರೂ ಎದ್ದು ಅವರ ಪಕ್ಕ ಕುಳಿತೆ." ನಿಮ್ಮಲ್ಲಿ ಮಾತಾಡಲು ಯುನಿವರ್ಸಿಟಿಗೆ ಬರಬೇಕೆಂದಿದ್ದೆ " ಎಂದು ಹೇಳಿದರು.ಯುನಿವರ್ಸಿಟಿಯಾ ? ಯಾವ ಯುನಿವರ್ಸಿಟಿ ? ನೀವು ನನ್ನನ್ನು ಬೇರೆ ಯಾರೋ ಎಂದು ತಪ್ಪಾಗಿ ಭಾವಿಸಿರಬೇಕು ಎಂದು ಹೇಳಿದೆ."ನೀವು ಬೆಂಗಳೂರು ಯುನಿವರ್ಸಿಟಿ ಯ ಕನ್ನಡ ಪ್ರೊಫೆಸರ್ ಅಲ್ವಾ ? ಎಂದು ಕೇಳಿದರು
ಅಲ್ಲ ನಾನು ನೆಲಮಂಗಲ ಪಿಯು ಕಾಲೇಜು ಉಪನ್ಯಾಸಕಿ ಎಂದು ಉತ್ತರಿಸಿದೆ .ನೀವು ಲಕ್ಷ್ಮೀ ಜಿ ಪ್ರಸಾದ್ ತಾನೇ ? ಎಂದು ಕೇಳಿದರು.ಹೌದು ಎಂದೆ."ಗಣೇಶಯ್ಯ ಕಾದಂಬರಿಯಲ್ಲಿನ ಲಕ್ಷ್ಮೀ ಪೋದ್ದಾರ್ ನೀವೆ ತಾನೆ ? ನಿಮ್ಮ ಫೋಟೋ ಕೂಡಾ ಅದರಲ್ಲಿ ಇದೆ" ಎಂದು ಹೇಳಿದರು.ಆಗ ನನಗೆ ವಿಷಯವೇನೆಂದು ತಲೆಗೆ ಹೋಯಿತು. ಕೆ ಎನ್ ಗಣೇಶಯ್ಯ ಅವರು ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ  ನನ್ನನ್ನು ಒಂದು ಮುಖ್ಯ ಪಾತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿಯೂ ತುಳು ಸಂಶೋಧಕಿಯ ಪಾತ್ರ ನನ್ನದು.ಅ ಕಾದಂಬರಿಯಲ್ಲಿ ಲಕ್ಷ್ಮೀ ಪೋದ್ದಾರ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್. ಆ ಕಾದಂಬರಿಯ ಕೊನೆಯಲ್ಲಿ ಡಾ.ಗಣೇಶಯ್ಯ ಅವರೊಂದಿಗಿನ ಫೋಟೋ ಹಾಕಿ ಲಕ್ಷ್ಮೀ ಜಿ ಪ್ರಸಾದ ಪೋದ್ದಾರ್ ಆದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು .ಅವರ ಕಾದಂಬರಿ ಓದಿರುವ ಸುನೀತಾ ಅವರು ಅಲ್ಲಿ ಹಾಕಿರುವ ನನ್ನ ಫೋಟೋ ನೋಡಿದ್ದು ಬಸ್ ನಲ್ಲಿ ಗುರುತಿಸಿ ಮಾತನಾಡಿದರು.ಗಣೇಶಯ್ಯ ಅವರ ಕಾದಂಬತಿಗಳ ಬಗ್ಗೆ  ಮಾತನಾಡಿದರು ಭೂತಾರಾಧನೆ ತುಳು ಸಂಸ್ಕೃತಿಯ ಕುರಿತಾಗಿಯೂ ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು .ನನ್ನ ಪೋನ್ ನಂಬರ್ ತಗೊಂಡರು.ಅವರೊಂದಿಗೆ ಸೆಲ್ಫಿ ತಗೊಳ್ಳಬೇಕು ಅನ್ನುವಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.ಅಂದ ಹಾಗೆ ಆ ಅಂದದ ಯುವತಿ ಕಾನ್ಪುರದ ಐಐಟಿಯಲ್ಲಿ ಎಂ ಟೆಕ್ ಓದ್ತಿದ್ದಾರೆ.ಅವರಿಗೆ ಕನ್ನಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ.ಉತ್ತರ ಕಾಂಡ ಸೇರಿದಂತೆ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ.ಕೆ ಎನ್ ಗಣೇಶಯ್ಯ ಅವರ ಎಲ್ಲಾ ಕಾದಮಬರಿಗಳನ್ನೂ ಓದಿದ್ದಾರೆ.ವಸುಧೇಂದ್ರ ಕೂಡ ಅವರಿಗೆ ತುಂಬಾ ಅಚ್ಚುಮೆಚ್ಚು ಅಂತೆ.ಎ ಅರ್ ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನು ಇಪ್ಪತ್ತು ಮೂವತ್ತು ಬಾರಿ ಓದಿದ್ದಾರಂತೆ.ಅವರ ಮಾತೃಭಾಷೆ ತೆಲುಗು ಅಂತೆ ಅದರೆ ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿ .ಅವರ ಸಾಹಿತ್ಯದೆಡೆಗಿನ ಒಲವು ನೋಡಿ ತುಂಬಾ ಸಂತಸವಾಯಿತು
https://www.google.co.in/amp/avadhimag.com/%3fp=173110&amp=1

Sunday 18 June 2017

ನಾನು ಅಳುವುದನ್ನು ಮರೆತು ನೋಡುತ್ತಾ ನಿಂತಿದ್ದೆ- -ಡಾ.ಲಕ್ಮೀ ಜಿ ಪ್ರಸಾದ

ಧೋ ಎಂದು ಮಳೆ ಸುರಿಯುವ ಸದ್ದಿಗೆ ಗಾಢ ನಿದ್ರೆ ಆವರಿಸಿತ್ತು. ನಿರಂತರವಾಗಿ  ಮೊಬೈಲ್‌ ಪೋನ್ ರಿಂಗಾಗುತ್ತಾ ಇತ್ತು.ಕೊನೆಗೂ ಹೇಗೋ ಕಣ್ಣು ತೆರೆದು ಕರೆ ಸ್ವೀಕರಿಸಿದೆ.ಆ ಕಡೆಯಿಂದ ಅಕ್ಕನ ಧ್ವನಿ ಕೇಳಿಸಿತು.ನಡುರಾತ್ರಿ ಒಂದೂವರೆ ಗಂಟೆಗೆ ಅಕ್ಕ ಫೋನ್ ನೋಡಿ ಮೊದಲೇ ದುರಂತದ ಸೂಚನೆ ಸಿಕ್ಕಿ ಮನಸು ಅಳುಕಿತ್ತು.ತಂದೆಗೆ ಸೀರಿಯಸ್ ನೀನು ಆದಷ್ಟು ಬೇಗ ಮನೆಗೆ ಬಾ ಎಂದು ಹೇಳಿ ಅಕ್ಕ ಫೋನ್ ಕತ್ತರಿಸಿದಳು.ಅವಳ ಧ್ವನಿ ನಡುಗುತ್ತಾ ಇತ್ತು ಅದರಿಂದಲೇ ತಂದೆಯವರು ಬದುಕಿರಲಾರರು ಎಂದು ಅನಿಸಿತು.ಆದರೂ ಒಂದು ದೂರದ ಆಸೆಯಿಂದ ತಂದೆ ಮನೆಗೆ ಫೋನ್ ಮಾಡಿದೆ.ಪೋನೆತ್ತಿದ ಸೀಮಾ( ತಮ್ಮನ ಮಡದಿ) ತಂದೆಯವರನ್ನು ಆಸ್ಪತ್ರೆ ಯಿಂದ ಮನೆಗೆ ಕರೆ ತರುತ್ತಿದ್ದಾರೆ ಎಂದು ತಿಳಿಸಿದಾಗ ತಂದೆಯವರು ಇನ್ನಿಲ್ಲ ಎಂಬ ವಾಸ್ತವ ಅರಿವಾಗಿ ದುಃಖ ಉಮ್ಮಳಿಸಿ ಬಂತು.
ರಾತ್ರಿ ಹನ್ನೊಂದು ಗಂಟೆಗೆ ನಾನುಲಗುವ ಮೊದಲು ಮನೆಗೆ ಪೋನ್ ಮಾಡಿದ್ದೆ.ತಂದೆಯವರೇ ಫೋನ್ ಎತ್ತಿದ್ದರು.ಹೇಗಿದ್ದೀರಿ ? ಎಂದು ಕುಶಲ ವಿಚಾರಿಸಿದಾಗ ಆರಾಮಿದ್ದೇನೆ ಸ್ವಲ್ಪ ಧೂಳಿಗೆ ಕಫ ಆಗಿದೆ ಎಂದು ಹೇಳಿ ಉಪ್ಪರಿಗೆ ಮೇಲೆ ಟಿವಿನೋಡುತ್ತಿದ್ದ ಅಮ್ಮನನ್ನು ಕರೆದು ಪೋನ್ ನೀಡಿದ್ದರು.ಅಮ್ಮನ ಹತ್ತಿರ ಹತ್ತು ನಿಮಿಷ ಮಾತನಾಡಿ ನಾನು ಮಲಗಿದ್ದೆ.
ಅಮ್ಮ ಮಲಗಲೆಂದು ಬಾಗಿಲು ಹಾಕಿ ಚಾವಡಿಗೆ ಬರುವಾಗ ತಂದೆ ಕೆಮ್ಮುತ್ತಾ ಇದ್ದರು.ಆ ದಿನ ಅಡಿಕೆಯನ್ನು ಆಯುವ ಕೆಲಸ ಮಾಡಿದ ಕಾರಣ ಅಡಿಕೆ ಧೂಳಿಗೆ ಕೆಮ್ಮು ಬಂದಿದೆ ಎಂದು ತಿಳಿದು ಅಮ್ಮ ಕಫದ ಸಿರಪ್ ಅನ್ನು ನೀಡಿದರು ಕೆಮ್ಮು ಕಡಿಮೆಯಾಯಿತು.ಸ್ವಲ್ಪ ಉಸಿರು ಕಟ್ಟಿದ ಹಾಗೆ ಆಗುತ್ತದೆ ಎಂದು ಹೇಳಿದಾಗ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸಮಿಪದ ವೈದ್ಯರಾದ ಐಕೆ ಭಟ್ಟರ ಮನೆಗೆ ಹೊರಟ.ನಮ್ಮ ಮನೆ ಹಿಂಭಾಗದ ಸಣ್ಣ ಗುಡ್ಡೆ ಯ ದಾರಿಯಲ್ಲಿ ಕಾರು ಹತ್ತುತ್ತಿದ್ದಂತೆ ತಮ್ಮ ತಂದೆಯವರಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ಏನಾಗಿಲ್ಲ ಆರಾಮಿದ್ದೇನೆ ಎಂದು ತಿಳಿಸಿ ಕಾರಿನ ಹಿಂಭಾಗಕ್ಕೆ ಒರಗಿ ತಂದೆಯವರು ನಿದ್ರೆಗೆ ಜಾರಿದ್ದರು.ನಿದ್ರೆಯಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಪ್ಪತ್ತ ಮೂರು ವರ್ಷದ ಅವರ ನೋವು ನರಳಿಕೆಒಂದಿನಿತೂ ಇಲ್ಲದ ಸುಖಮರಣ ಅವರು ಬಾಳಿಮದ ಸರಳ ಪ್ರಾಮಾಣಿಕ ನಿಸ್ವಾರ್ಥ ಬದುಕಿಗೆ ಹಿಡಿದ ಕೈಗನ್ನಡಿಯಾಗಿತ್ತು.ಶರಣರಬಾಳನ್ನು ಮರಣದಲ್ಲಿ ನೋಡು ಎಂಬ ಗಾದೆಮಾತಿಗೆ ನಿದರ್ಶನವಾಗಿದ್ದರು ಅವರು.ಯಾರೊಬ್ಬರಿಗೂ ಒಂದಿನಿತು ನೋವು ಮಾಡಿದವರಲ್ಲ ಮೋಸ ವಂಚನೆ ಏನೆಂದೇ ತಿಳಿಯದ ಮುಗ್ದ ಸ್ವಭಾವ ಅವರದು.ಬಿಳಿಯಾದದ್ದೆಲ್ಲಾ ಹಾಲೆಂದು ನಂಬುವ ಅವರಿಗೆ ಅನೇಕರು ಮೋಸ ಮಾಡಿದ್ದರು. ಅವರಿಂದ ಸಹಾಯ ಪಡೆದವರೇ ಹಿಂದಿನಿಂದ ದ್ರೋಹ ಮಾಡಿದ್ದರೂ ಅವರನ್ನು ಉದಾರವಾಗಿಕ್ಷಮಿಸಿವರು ನನ್ನ ತಂದೆ.ಕಷ್ಟದಲ್ಲಿ ಇರುವರನ್ನು ಕಂಡರೆ ಅಪಾರ ಅನುಕಂಪ ತನಗಾದ ಸಹಾಯ ಮಾಡುತ್ತಿದ್ದರು.
 ಸ್ನೇಹಿತೆ ವಿದ್ಯಾ ಮತ್ತು ಅವರ ಪತಿಯ ಸಹಾಯದಿಂದ ಒಂದು ಕಾರನ್ನು ಬಾಡಿಗೆಗೆ ಹಿಡಿದು ಸುರಿವ ಮಳೆಯ ಕಾರ್ತ್ತಗಲಿನಲ್ಲಿ ಮಗನೊಂದಿಗೆ ಬೆಳ್ಳಾರೆಯಿಂದ ತಂದೆ ಮನೆ ಕೋಳ್ಯೂರಿಗೆ ಹೊರಟೆ.ದಾರಿಯಲ್ಲಿ ಅಕ್ಕ ಭಾವನನ್ನೂ ಹತ್ತಿಸಿಕೊಂಡು ಮನೆ ತಲುಪುವಾಗ ಬೆಳಗಿನಜಾವ ಐದೂವರೆ ಆಗಿತ್ತು. ಬೆಳಕು ಹರಿಯುವಮುನ್ನವೇ ಸುದ್ದಿ ತಿಳಿದು ಸಂಬಂಧಿಕರು ಊರವರು ತಂದೆಯ ಶಿಷ್ಯ ವರ್ಗದರು ಬಂದು ಸೇರಿದ್ದರು.
ನನ್ನ ತಂದೆ ವಾರಣಾಸಿ ನಾರಾಯಣ ಭಟ್ಟರು ಪುರೋಹಿತ ರಾಗಿದ್ದರು. ಹವ್ಯಕರಲ್ಲಿ ಪುರೋಹಿರಿಗೆ ಗುರುಗಳ ಸ್ಥಾನಮಾನವಿದೆ.ಆದ್ದರಿಂದ ತಂದೆಯವರಿಗೆ ಅಪಾರ ಶಿಷ್ಯವರ್ಗದವರು ಇದ್ದರುಅವರಲ್ಲಿ ಅನೇಕ ಮಂದಿ ಡಾಕ್ಟರ್ ಗಳು, ಇಂಜಿನಿಯರ್‌ಗಳು, ಬ್ಯುಸಿನೆಸ್‌ ಮ್ಯಾನ್ಗಳು ಹೀಗೆ ನಾನಾ ವೃತ್ತಿಯ ಹಿರಿ ಕಿರಿಯರುಇದ್ದರು..ನನ್ನ ತಂದೆಯವರನ್ನು ಕಿರಿಯರೆಲ್ಲರೂ ಭಟ್ಟಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ತಂದೆಯ ಶಿಷ್ಯ ವರ್ಗದವರು ತಂದೆಯವರಿಗೆ ಮನೆ ಮಂದಿಯಂತೆ ಆತ್ಮೀಯ ರಾಗಿದ್ದರು. ತಂದೆಯ ಸರಳ ಮುಗ್ದ ವ್ಯಕ್ತಿತ್ವ ಎಲ್ಲರನ್ನೂ ಹತ್ತಿರ ತಂದಿತ್ತು.
ಮನೆ ಅಂಗಳಕ್ಕೆ ಕಾಲಿಡುತ್ತಲೇ ತಂದೆಯ ನೆನಪು ಬಂದು ದುಃಖ ಉಮ್ಮಳಿಸಿ ಬಂದು ಅಳುತ್ತಲೇ ಮನೆ ಒಳಗೆ ಪ್ರವೇಶ ಮಾಡಿದೆ.ತಂದೆಯ ಶಿಷ್ಯ ವರ್ಗದವರುತುಂಬಾ ಮಂದಿ ತಂದೆಯವರ ದೇಹದ  ಕಾಲಬದಿಯಲ್ಲಿ ಕುಳಿತು ಅಳುತ್ತಾ ಇದ್ದರು.ಅವರಲ್ಲಿ ಕೆಲವರು ಡಾಕ್ಟರ್ ಗಳೂ ಇದ್ದರು.ದಿನನಿತ್ಯ ಸಾವು ನೋವುಗಳನ್ನು ನೋಡುವ ದೊಡ್ಡ ದೊಡ್ಡ ಡಾಕ್ಟರ್ ಗಳೂ ಅಳುವಂತೆ ಮಾಡಿದ್ದ ನನ್ನ ತಂದೆಯ ಔನ್ನತ್ಯಕ್ಕೆ ಬೆರಗಾಗಿ ನಾನು ಅಳುವುದನ್ನು ಮರೆತು ಅವರೆಲ್ಲ ಅಳುವುದನ್ನು ನೋಡುತ್ತಾ ನಿಂತಿದ್ದೆ.
ನನ್ನ ತಂದೆಯವರು ಪುರೋಹಿತರಾಗಿದ್ದರೂ ನಮಗೆ ಮನೆಯಲ್ಲಿ ಯಾವುದೇ ಕಟ್ಟು ಕಟ್ಟಳೆವಿಧಿಸಿರಲಿಲ್ಲ.ನಮಗೆ ಬೇಕಾದುದನ್ನು ಓದುವವೇಷಭೂಷಣ ಧರಿಸುವ ಸ್ವಾತಂತ್ರ್ಯ ಇತ್ತು.ಜೀವನ ಇಡೀ ಮಕ್ಕಳ ಏಳಿಗೆಗಾಗಿ ದುಡಿದ ಅವರುಒಂದು ದಿನ ಕೂಡ ತಾನು ದುಡಿದು ತಂದು ಹಾಕಿದ್ದೇನೆ ತನ್ನ ದುಡ್ಡು ದುಡಿಮೆ ಎಂದು ಹೇಳಿಲ್ಲ.
ಮಕ್ಕಳು ಪ್ರಥಮ ಸ್ಥಾನ ಪಡೆಯಬೇಕು ಎಂದು ಅವರ ಆಸೆಯಾಗಿತ್ತು.
ಪ್ರತಿ ಸಲ ಮಾರ್ಕ್ಸ್ ಕಾರ್ಡ್ ಸಿಕ್ಕಿದಾಗ"ಫಸ್ಟಾ .?ಎಂದು ಕೇಳುತ್ತಿದ್ದರು. ಅಲ್ಲವೆಂದಾದರೂ ಬೈಯುತ್ತಿರಲಿಲ್ಲ  ಮಾತಾಡದೆ ಸಹಿಹಾಕಿಕೊಡುತ್ತಿದ್ದರು.ಮೊದಲ ಸ್ಥಾನ ಗಳಿಸಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು.ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರಾಂಕ್ ಗಳಿಸಿದಾಗ ಸ್ವರ್ಗ ಸಿಕ್ಕಂತೆ ಸಂಭ್ರಾಮಿಸಿದ್ದರು
ತೀರಾ ಕಷ್ಟ ಇದ್ದಾಗಲೂ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಓದಿಸಿದರು.ಹೆಚ್ಚಾಗಿ ಎಲ್ಲೆಡೆ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.ಒಂದು ದಿನ‌ಕೂಡ ಹುಷಾರಿಲ್ಲವೆಂದು ಮಲಗಿರಲಿಲ್ಲ
ಸಾಯುವ ದಿನ ಕೂಡ ರಾತ್ರಿ ಹನ್ನೊಂದು ಗಂಟೆಯ ವರೆಗೆ ಅಡಿಕೆ ಆಯುವಕೆಲಸ ಮಾಡಿದ್ದರು.ಆರೋಗ್ಯ ವಾಗಿದ್ದ ಅವರು ಹೀಗೆ ಯಾವುದೇ ಸೂಚನೆ ಇಲ್ಲದೆ ಮರಣವಪ್ಪಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ.ಮಕ್ಕಳೆಲ್ಲ ಒಳ್ಳೆಯ ಕೆಲಸ ಹಿಡಿದು ಸಂಮೃದ್ದವಾಗಿದ್ದಾಗ ಅವರು ದೇವನೆಡೆಗೆ ಸದ್ದಿಲ್ಲದೆ ನಡೆದಿದ್ದರು.ದಿನನಿತ್ಯ ‌ಮಲಗುವ ಮೊದಲು ದೇವರಲ್ಲಿ ಅವರು ಅನಾಯಾಸೇನೆ ಮರಣಂ ವಿನಾ ದೈನ್ಯೇನ ಜೀವನಂ...ಅನಾಯಾಸವಾದ ಮರಣವನ್ನು ದೈನ್ಯ ರಹಿತವಾದ ಜೀವನವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದರು .ದೇವರು ಅವರ ಪ್ರಾರ್ಥನೆ ಯನ್ನು ಮನ್ನಿಸಿ ಅದನ್ನು ಅವರಿಗೆ ಕರುಣಿಸಿದ್ದ.





Sunday 11 June 2017

ಮದುವೆಗೆ ಬೇಕಾದ ಹೂವಿನ ಹಾರ ನಾನೇ ತಂದಿದ್ದೆ © ಡಾ ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ:  ಕನ್ನಡ ಕನ್ನಡತಿ
ಅಂದು ೧೯೯೩ ರ ಪೆಬ್ರವರಿ ಹದಿಮೂರನೇ ತಾರೀಕು,ನಾನು ಮತ್ತು ಗೆಳತಿ ಅನುಪಮಾ ಉಜಿರೆ ( ಖ್ಯಾತ ಕಥಾಗಾರ್ತಿ ಅನುಪಮಾ  ಪ್ರಸಾದ್) ಜೊತೆ ಬೆಳಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಉಜಿರೆಯಿಂದ ಮಂಗಳೂರಿಗೆ ಹೋಗಲು  ಬಸ್ ಹತ್ತಿದ್ದೆ .ಮರು ದಿನ  ಹದಿನಾಲ್ಕನೇ ತಾರೀಕಿಗೆ  ನನ್ನ ಮದುವೆ.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಅಕ್ಕನ ಮದುವೆ ಆಗಿತ್ತು. ಅಣ್ಣ ದೂರದ ಕುಂಭಕೋಣಂ ನಲ್ಲಿ ಓದುತ್ತಾ ಇದ್ದಹಾಗಾಗಿ‌ ಮನೆಯಲ್ಲಿ ಹಿರಿಯಳಾಗಿ ನಾನೇ ಇದ್ದೆ. ತಮ್ಮಂದಿರು ಚಿಕ್ಕವರು .  ಹಾಗಾಗಿಮನೆಗೆ ಬೇಕಾದ ಸಾಮಾನುಗಳನ್ನು ತರುವುದು,ಬಟ್ಟೆ ಬರಹಗಳನ್ನು ತರುವುದು ಮೊದಲಾದ ವ್ಯವಹಾರವನ್ನು ಮಾಡಿ ಅನುಭವವಾಗಿತ್ತು.
 ವಾರದ ಮೊದಲು ಉಜಿರೆಯಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದ ನಾನು ಊರಿಗೆ ನಾಂದಿಗಾಗಿ  ಬಂದಿದ್ದೆ . ( ಹವ್ಯಕರಲ್ಲಿ ಮದುಮಗ ಮತ್ತು ಮದುಮಗಳಿಗೆ ಮದುವೆ ದಿನ ಅಥವಾ ಅದಕ್ಕಿಂತ ಹಿಂದೆ ಹತ್ತು ದಿನಗಳ ಒಳಗೆ ಒಂದು ನಾಂದಿ ಎಂಬ ಶುಭಕಾರ್ಯವಿದೆ . ನಾಂದಿಯ ನಂತರ ಸೂತಕ ಬಂದರೆ ಮದುವೆ ತನಕ ತಂದೆ ತಾಯಿ ಮತ್ತು ಮದುಮಕ್ಕಳಿಗೆ ಸೂತಕ ತಾಗುವುದಿಲ್ಲ ) ಅದಕ್ಕೂ ಕೆಲ ದಿನಗಳ ಮೊದಲು ಮದುವೆಗೆ ಬೇಕಾದ ಚಿನ್ನವನ್ನು ಮಂಗಳೂರಿನ ಭಂಡಾರ್ಕರ್ ಮಳಿಗೆಗೆ ಹೋಗಿ ಮಾಡಿಸಲು ಹೇಳಿ ದುಡ್ಡು ಕೊಟ್ಟು ಬಂದಿದ್ದೆವು .
ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದ ಕಾರಣ ರಜೆ ಹಾಕುವಂತಿರಲಿಲ್ಲ .ಹಾಗಾಗಿ ನಾಂದಿ ಮರುದಿನ ಉಜಿರೆಗೆ ಹೋಗಿದ್ದೆ.ಹನ್ನೆರಡನೇ ತಾರೀಖಿನಂದು ಕೊನೆಯ ಪೂರ್ವ ಸಿದ್ಧತಾ ಪರೀಕ್ಷೆ ಬರೆದು‌ ಮರುದಿನ ಎಂದರೆ ಮದುವೆ ಹಿಂದಿನ ದಿನ ಊರಿಗೆ ಬರುತ್ತೇನೆ ಎಂದು ಹೇಳಿದ್ದೆ.ಆಗ ಅಮ್ಮ ಊರಿಗೆ ಬರುವಾಗ ಮಂಗಳೂರಿಗೆ ಬಮದು ಭಂಡಾರ್ಕರ್ ಚಿನ್ನದ ಮಳಿಗೆಗೆ ಹೋಗಿ ಮಾಡಿಸಲು ಹಾಕಿದ ಒಡವೆಗಳನ್ನು ತಂದು ಬಿಡು ಎಂದು ಹೇಳಿದರು.ಜೊತೆಗೆ ಮರುದಿನ ಮದುವೆಗೆ ಬೇಕಾದ ಹೂವಿನ ಹಾರ,ಹೂ ಮೊದಲಾದವುಗಳನ್ನು ತರುತ್ತೇನೆ ಎಂದು ಒಪ್ಪಿ ಕೊಂಡೆ .
ಮಂಗಳೂರಿಗೆ ತಲುಪಿದಾಗ ಸುಮಾರು ಹತ್ತು ಗಂಟೆ ಆಗಿತ್ತು .ಮೊದಲಿಗೆ ಚಿನ್ನದ ಮಳಿಗೆಗೆ ಹೋದೆವು.ಅಲ್ಲಿ ಒಡವೆಗಳು ಇನ್ನೂ ಸಿದ್ಧವಾಗಿರಲಿಲ್ಲ.ಒಂದು ಗಂಟೆ ಬಿಟ್ಟು ಬನ್ನಿ ಎಂದು ಹೇಳಿದರು .ಸರಿ ಎಂದು ಅಲ್ಲಿಯೇ ಸಮೀಪದ ಹೂವಿನ ಮಾರುಕಟ್ಟೆಗೆ ಹೋದೆವು .ಅಲ್ಲಿ ಚರ್ಚೆ ಮಾಡಿ ಎರಡು ಹೂವಿನ ಹಾರ ಹಾಗೂ ಬೇಕಾದ ಇತರ ಬಿಡು ಹೂ,ಕಟ್ಟಿದ ಹೂವು,ಮಲ್ಲಿಗೆ,ಗುಲಾಬಿ ಸೇವಂತಿಗೆ ಗಳನ್ನು ಖರೀದಿಸಿ ಮತ್ತೆ ಚಿನ್ನದ ಮಳಿಗೆಗೆ ಬಂದೆವು .ಇಷ್ಟೆಲ್ಲಾ ಆಗುವಾಗ ಹನ್ನೊಂದೂವರೆ ಆಗಿತ್ತು. ಅಲ್ಲಿಂದ ಒಡವೆಗಳನ್ನು ತೆಗೆದುಕೊಂಡು ಲೇಡಿಗೋಷನ್ ಗೆ ಬಂದು ಬಸ್ ಹಿಡಿದು ತಲಪಾಡಿಗೆ ಬಂದು ಅಲ್ಲಿಂದ ನಮ್ಮ ಊರಿಗೆ ಹೋಗುವ ಬಸ್ ಹತ್ತಿದೆ.ಬಸ್ ನಲ್ಲಿ ಬಾಲ್ಯ ಸ್ನೇಹಿತೆ ಶೋಭಿತಾಳನ್ನು ನೋಡಿ ನಾಳೆ ನನ್ನ ಮದುವೆ ಬಾ ಎಂದು ಆಹ್ವಾನ ಪತ್ರಿಕೆ ನೀಡಿದೆ .ಮಂಗಳೂರಿನಲ್ಲಿ ಸುತ್ತಿ ಸುಸ್ತಾಗಿದ್ದ  ನನ್ನನ್ನು ಅಪನಂಬಿಕೆಯಿಂದ ನೋಡಿ ಏ ಸುಳ್ಳುಹೇಳಿ ತಮಾಷೆಮಾಡುತ್ತಿದ್ದೀಯ ? ಎಂದು ಕೇಳಿದಳು.ಸುಳ್ಳು ಹೇಳುತ್ತಾ ಇಲ್ಲ ಅದು ಸತ್ಯ ಎಂದು ಒಪ್ಪಿಸಲು ನಾನು ಹೆಣಗಾಡಬೇಕಾಯಿತು.  ಅವಳು ಸಾಮನ್ಯ ವೇಷ ಭೂಷಣ ದಲ್ಲಿದ್ದ ನನ್ನನ್ನು ಮದುಮಗಳು ಎಂದು ಅವಳು ಎಂದು ಭಾವಿಸಲು ಅವಳಿಗೆ ಕಷ್ಟಕರ ವಾಗಿತ್ತು .ಅಂತೂ ಇಂತು  ತಲುಪಿದಾಗ ಸಂಜೆ ಮೂರಾಗಿತ್ತು. ಗಂಟೆ ಮೂರಾದರೂ ಮದುಮಗಳು ಬಾರದ ಕಾರಣ ಮನೆಯಲ್ಲಿ ಗಡಿಬಿಡಿ ಆರಂಭವಾಗಿತ್ತು .ಅಣ್ಣನನ್ನು ಕಾರು ಮಾಡಿಕೊಂಡು ಉಜಿರೆಗೆ ಕಳಹಿಸಲು ಏರ್ಪಾಡು ಮಾಡುತ್ತಾ ಇದ್ದರು.ಅಷ್ಟರಲ್ಲಿ ನಾವು ತಲುಪಿದೆವು .ಎಲ್ಲರೂ ನಿರಾಳರಾದರು .ನಾವು ಊಟ ಮಾಡಿದೆವು.ಹತ್ತಿರದ ಬಂಧುಗಳು ಹಿಂದಿನ ದಿವಸವೇ ಬಂದಿದ್ದು ಪಟ್ಟಾಂಗ ಹೊಡೆದೆವು .ಹವ್ಯಕರಲ್ಲಿ ನಾಂದಿ ಬಿಟ್ಟರೆ ಮದುವೆಗೆ ಮೊದಲು ಯಾವುದೇ ಸಂಪ್ರದಾಯ ದ ಕಾರ್ಯಕ್ರಮ ಇರುವುದಿಲ್ಲ ಹಾಗಾಗಿ ನಾನು ಪೂರ್ವ ಸಿದ್ಧತಾ ಪರೀಕ್ಷೆ ಗಳನ್ನು ಬರೆದು ಮದುವೆ ಹಿಂದಿನ ದಿನ ಬಂದಿದ್ದೆ .ಇಂದು ಪೇಸ್ ಬುಕ್ ‌ನಲ್ಲಿ ಸ್ನೇಹಿತರೊಬ್ಬರು ಹೂವಿನ ಹಾರಕ್ಕಾಗಿ ಅಲೆದಾಡಿದ ಬಗ್ಗೆ ಬರೆದಿರುವುದನ್ನು ಓದಿದಾಗ ತಕ್ಷಣವೇ ನಾನೂ ಹೂವಿನ ಹಾರಕ್ಕಾಗಿ ಅಲೆದಾಡಿದ ವಿಚಾರ ನೆನಪಿಗೆ ಬಂತು 

Sunday 4 June 2017

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಸೂಕ್ತವಲ್ಲದ ಲಿಪಿ ಬಳಸಿ ತುಳುಭಾಷೆಯನ್ನು ಹಾಳುಗೆಡವದಿರಿ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ಹೆಚ್ಚಿನ ವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ ಹಾಗಾಗಿ ಬ್ಲಾಗ್ ಬರಹವನ್ನು ಕಾಪಿ ಮಾಡಿ ಹಾಕಿರುವೆ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ಎಂಬ ಸತ್ಯವನ್ನು  ಮುಚ್ಚಿಟ್ಡು ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿ ಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ ಪ್ರಸ್ತುತ  ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ  ಯಾಕೆಂದರೆ ಇದರಲ್ಲಿ ತುಳು ಭಾಷೆಯಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ಇದರಿಂದಾಗಿ ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ ವಾಗುತ್ತದೆ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಇಲ್ಲ ಇದರಲ್ಲಿ  ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯ ಏಳು ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು
ಆದರೆ ಇದು ತುಲು ಭಾಷೆಯ ಲಿಪಿ ಅಲ್ಲ
ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2, ಈ ಲಿಪಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳಾಗಿವೆ  ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ  ತುಳುವಿನ ಎಲ್ಲ ಅಕ್ಷರಗಳು ಇಲ್ಲ ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11  ಇದರಲ್ಲಿ  ಉಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ   ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆ ಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
 13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಏಳು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಏಳು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಏಳು ಮಾತ್ರ ಒಂದೊಮ್ಮೆ ಇದು ತುಳು ಭಾಷೆ ಬರೆಯಲು ಬಳಕೆಗೆ ಇದ್ದಿದ್ದರೆ  ಲಿಪಿ ಆಗಿರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ  ಈ ಲಿಪಿಯಲ್ತುಲಿ ಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ  ಎಂದು ಹೇಳಬಹುದು .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಲು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಯಲ್ಲಿ ಸಿಕ್ಕಿವೆ ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾ್ಉವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಳು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--


Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)

Thursday 1 June 2017

ಬದುಕ ಬಂಡಿಯಲಿ 12 ಕಾಲೇಜಿನಲ್ಲಿ ಮೊದಲ ದಿನದ ಪೇಚಾಟ © ಡಾ ಲಕ್ಷ್ಮೀ ಜಿ ಪ್ರಸಾದ

ಮೂರು ದಶಕಗಳ ಹಿಂದೆ ನಮ್ಮ ಸಮಾಜದಲ್ಲಿ ಸ್ತ್ರೀ ಶಿಕ್ಷಣಕ್ಕೆ ಯಾವುದೇ ರೀತಿಯ ಪ್ರಾಧಾನ್ಯತೆ ಇರಲಿಲ್ಲ. ನಮ್ಮ ಹವ್ಯಕರಲ್ಲಿ ಅಂತೂ ಹುಡುಗಿಯರು ಓದುವುದು ನಿಷ್ಪ್ರಯೋಜಕ ಎಂದು ಹೇಳುವ ಬಗ್ಗೆ   ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ ಎಂಬ ಮಾತು ಪ್ರಚಲಿತವಿತ್ತು .ಹುಡುಗಿಯರು ಏನು ಓದಿದರೇನು ? ಒಲೆಉ ಬೂದಿ ಗೋರುವುದು ತಪ್ಪದು ಎಂದು ಈ ಮಾತಿನ ಅರ್ಥ.
ಹುಡುಗಿಯರು ಓದುವುದು ವ್ಯರ್ಥ .ಏನೇ ಓದಿದರೂ ಅವರು ಅಡುಗೆ ಮಾಡಲು ಲಾಯಕ್ಕು ಎಂಬ ರೀತಿಯ ಅವಜ್ಞೆ ಆ ಕಾಲದಲ್ಲಿ ಇತ್ತು.
ಆದರೂ ಆ ಕಾಲದಲ್ಲಿ ನನ್ನ ಅಮ್ಮ ನನ್ನ ಓದಿಗೆ ಬೆಂಬಲ ನೀಡಿದರು.ತನ್ನ ಮಗಳು ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ಅಮ್ಮನ ಆಶಯವಾಗಿತ್ತು.
ಆಗ ನಮಗೆ ಮಂಗಳೂರಿನಲ್ಲಿ ಕಾಲೇಜುಗಳು ಇರುವುದು ಗೊತ್ತಿತ್ತಾದರೂ ಸೈಂಟ್ ಅಲೋಶಿಯಸ್, ಕೆನರಾ,ಆಗ್ನೆಸ್ ಎಂಬ ಮೂರು ಪ್ರತಿಷ್ಠಿತ ಕಾಲೇಜುಗಳು ಬಿಟ್ಟರೆ ಉಳಿದವುಗಳ ಹೆಸರು ಕೂಡ ತಿಳಿದಿರಲಿಲ್ಲ .

ಫಲಿತಾಂಶಕ್ಕೆ ಮೊದಲೇ ನಾವು ಅರ್ಜಿ ತಂದಿರಿಸಬೇಕು ಇತ್ಯಾದಿ ಯಾಗಿ ಪ್ರವೇಶ ಪ್ರಕ್ರಿಯೆ ಬಗ್ಗೆ ಯೂ ತಿಳಿದಿರಲಿಲ್ಲ .ಹಾಗಾಗಿ ನನ್ನ ಫಲಿತಾಂಶ ಬರುವ ತನಕ ನಾವು ಯಾವುದೇ ಕಾಲೇಜಿನಿಂದ ಅರ್ಜಿ ತಂದು ಇಡಲಿಲ್ಲ.ಫಲಿತಾಂಶ ಬಂದ ತಕ್ಷಣವೇ ನನ್ನ ಭಾವ ( ದೊಡ್ಡಮ್ಮನ ಮಗಳ ಗಂಡ) ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ಅರ್ಜಿ ತಂದು ಕೊಡಲು ಕೇಳಿದೆವು.ಅವರು ಮಂಗಳೂರು ಸರ್ಕಾರಿ ಕಾಲೇಜಿನ( ಈಗಿನ ವಿಶ್ವವಿದ್ಯಾಲಯ ಕಾಲೇಜು) ಅರ್ಜಿ ತಂದು ಕೊಟ್ಟರು .ಉಳಿದೆಲ್ಲ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಗಳು ಮುಗಿದಿದ್ದವು ( ಪ್ರವೇಶ ಪ್ರಕ್ರಿಯೆ ಗಳ ಬಗ್ಗೆ ಮುಂದೆ ಓದಬಹುದಾದ ಕೋರ್ಸ್ ಪದವಿಗಳ ಬಗ್ಗೆ ನಮಗೆ ನಾನು ಓದಿದ ಶಾಲೆಯ ಶಿಕ್ಷಕರು ಯಾವುದೇ ಒಂದು ರೀತಿಯ ಮಾಹಿತಿ ನೀಡಿರಲಿಲ್ಲ ಅದು ಯಾಕೆ ? ಈ ಹಳ್ಳಿ ಮಕ್ಕಳು ಓದಿ ಏನು ಉದ್ದಾರ ಆದಾರು ಎಂಬ ಉಪೇಕ್ಷೆ ಇತ್ತೇ ಅಥವಾ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ನನಗೆ ಈ ಪ್ರಶ್ನೆ ಆಗಾಗ ಕಾಡುತ್ತದೆ)
ಆದರೂ ನಾನು ತಂದೆಯವರ ಜೊತೆ ಮಂಗಳೂರಿಗೆ ಹೋಗಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಒಂದು ಸೀಟು ಕೊಡುವಂತೆ ,ಓದಲು ಅವಕಾಶ ಕೊಡುವಂತೆ ವಿನಂತಿ ಮಾಡಿದೆವು.ಆಗ ಅಲ್ಲಿ ನನ್ನ ಮಾರ್ಕ್ಸ್ ನೋಡಿ ಇದು ಒಳ್ಳೆಯ ಮಾರ್ಕ್ಸ್ ಆದರೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಲ್ಲಿ ಇಂಗ್ಲಿಷ್ ಮೀಡಿಯಂ ನಲ್ಲಿ ಓದುವುದು ಕಷ್ಟ ಅಲ್ಲದೆ ಅಡ್ಮಿಶನ್ ಮುಗಿದಿದೆ ಎಂದು ಹೇಳಿದರು.
ಅದೇ ದಿನ ಸರ್ಕಾರಿ ಕಾಲೇಜಿನಲ್ಲಿ ನನಗೆ ಸೀಟ್ ಸಿಕ್ಕಿತು.
ಅದಾಗಿ ಹದಿನೈದು ದಿನಗಳ ನಂತರ ಕಾಲೇಜು ಆರಂಭ.ಮೊದಲ ದಿನ ಚಿಕ್ಕಪ್ಪನ ಮಗಳು ಅಕ್ಕ ಸಂಧ್ಯಾ ಜೊತೆ ಬಹಳ ಸಂಭ್ರಮದಿಂದ ಜೊತೆ ಕಾಲೇಜಿಗೆ ಹೊರಟೆ.ತಲಪ್ಪಾಡಿ ತಲುಪಿದಾಗ ಕರ್ನಾಟಕ ದಲ್ಲಿ ಯಾವುದೋ ಕಾರಣಕ್ಕೆ ಆ ದಿನ ಬಸ್ ಸ್ಟ್ರೈಕ್ ಹಾಗಾಗಿ ಅರ್ಧ ದಾರಿ ಹೋಗಿ ಹಿಂದೆ ಬಂದೆವು.ಮರು ದಿನ ಮಂಜೇಶ್ವರದಿಂದ ರೈಲು ಹತ್ತಿ ಹೋದೆವು .ಸಂಧ್ಯಾ ಅಕ್ಕ ನನ್ನನ್ನು ಮಂಗಳೂರು ಕಾಲೇಜಿಗೆ ಹೋಗುವವರ ಜೊತೆ ಸೇರಿಸಿ ಅವಳು ಓದುವ ಗಣಪತಿ ಕಾಲೇಜಿಗೆ ಹೋದಳು.ಮತ್ತು ಸಂಜೆ ಐದಯ ಗಂಟೆಗೆ ರೈಲು ಇದೆ ಅದಕ್ಕೆ ಬಾ ಎಂದು ಹೇಳಿದಳು.

ಅಂತೂ ಕಾಲೇಜು ತಲುಪಿದೆ.ಮೊದಲ ಎರಡು ಅವಧಿ ಯಾರೂ ಕ್ಲಾಸ್ ತೆಗೆದುಕೊಳ್ಳಲಿಲ್ಲ ಮಧ್ಯಾಹ್ನ ಮೇಲೆ ಮೂವರು ತರಗತಿ ತೆಗೆದುಕೊಂಡರು .ನಮ್ಮ ತರಗತಿಯಲ್ಲಿ ಇದ್ದವರೆಲ್ಲ ಕನ್ನಡ ಮಾಧ್ಯಮ ದಲ್ಲಿ ಓದಿದವರು.ಆದರೂ ಒಂದಕ್ಷರ ಕನ್ನಡ ದಲ್ಲಿ ಯಾವುದೇ ಒಬ್ಬ ಉಪ‌್ಯಾಸಕರು ಮಾತಾಡಲಿಲ್ಲ .ಇಂಗ್ಲಿಷ್ ತರಗತಿ ತೆಗೆದು ಕೊಂಡ ಓರ್ವ ಉಪನ್ಯಾಸಕಿ " ಏನೋ ಒಂದಷ್ಟು ಹೇಳಿ ವಿದೇಶಿ ಯರು ಮಸತಾಡುವ ರೀತಿಯ ಇಂಗ್ಲಿಷ್ ನಲ್ಲಿ ಎರಡು ನಿಮಿಷ  ಮಾತಾಡಿ ಬೋರ್ಡ್ ನಲ್ಲಿ If the boys learns to cook " ಎಂದು ಬರೆದು ಇಡೀ ಅವಧಿಯಲ್ಲಿ ಬೊಂಬೆ ತರಹ ನಿಂತಿದ್ದರು.ಬಾಬ್ ಕಟ್ ಮಾಡಿದ ಕೇಶ ಶೈಲಿಯ ಅವರೂ ನನಗೆ ಒಂದು ಬೊಂಬೆಯ ಹಾಗೆ ಕಾಣುತ್ತಿದ್ದರು .ನಾನು ಅವರ ಮುಖ ನೋಡುತ್ತಾ ಕುಳಿತೆ .ಅಲ್ಲಿನ ಇಂಗ್ಲಿಷ್ ವಾತಾವರಣದಲ್ಲಿ ನನ್ನ ಸಂಭ್ರಮವೆಲ್ಲ ಆತಂಕವಾಗಿ ಮಾರ್ಪಾಡಾಗಿತ್ತು. ತರಗತಿಯಲ್ಲಿ ಇದ್ದ    ಇಂಗ್ಲಿಷ್ ಮಾಧ್ಯಮ ದಲ್ಲಿ ಓದಿದ್ದ  ಒಬ್ಬಿಬ್ಬರು ಏನೋ ಬರೆದಿದ್ದು ಗಂಟೆ ಬಾರಿಸಿದಾಗ ಅದನ್ನು ತಗೊಂಡು ಅವರು ಹೋದರು .ಅವರು ಹಾಗೆ ಬೋರ್ಡ್ ನಲ್ಲಿ ಬರೆದದ್ದು ಏನಿರಬಹುದು ಎಂದು ನಾನು ಶಿಕ್ಷಕಿ ಯಾಗುವ ತನಕ ತಿಳಿದೆ ಇರಲಿಲ್ಲ. ನಾನು ಶಿಕ್ಷಕಿಯಾದ ಮೇಲೆ ಸಾಮಾನ್ಯವಾಗಿ ಮೊದಲ ಒಂದೆರಡು ದಿನ‌ಮಕ್ಕಳಿಗೆ ನಾವು ಪರಿಚಯ ದ ನಂತರ ಸರಳವಾದ ಪ್ರಬಂಧ ಗಳನ್ನು ಬರೆಯಲು ಹೇಳುತ್ತೇವೆ.ಆಗ ನನಗೆ ತಲೆಗೆ ಹೋದದ್ದು ನಾನು ಕಾಲೆಜಿಗೆ ಹೋದ ಮೊದಲ ದಿನ ಆ ಉಪನ್ಯಾಸಕಿ ಪ್ರಬಂಧ ಬರೆಯಲು ಹೇಳಿರಬಹುದೆಂದು ತಿಳಿಯಿತು.ಅದರೆ ನೂರರಷ್ಟು ಇದ್ದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೂ ಅವರು ನೀಡಿದ ಪ್ರಬಂಧ ಬರೆಯದೆ ಇದ್ದಾಗಲೂ ನಮಗೆ ಸರಳವಾಗಿ ಅರ್ಥವಾಗು ರೀತಿಯಲ್ಲಿ ಹೇಳಿ ನಾಲ್ಕು ಸಾಲು ಹೇಳಿಕೊಟ್ಟು ಬರೆಯಿಸುವ ಪ್ರಯತ್ನ ಮಾಡಲೇ ಇಲ್ಲ .ಆಗ ಈಗಿನಂತೆ ಫಲಿತಾಂಶ ಕಡಿಮೆ ಬಂದರೆ ಇವರನ್ನು ಯಾರೂ ಕೇಳುವವರು ಇರಲಿಲ್ಲವೇ ? ಬಹುಶಃ ಇರಲಿಲ್ಲ ಇದ್ದರೆ ಈಗ ನಾವೆಲ್ಲಾ ಮಾಡುವಂತೆ    ಕಲಿಸುವ ಯತ್ನ ಮಾಡುತ್ತಿದ್ದರು ಖಂಡಿತಾ

 ಕೊನೆಯ ಅವಧಿ ಸಂಜೆ ನಾಲ್ಕರಿಂದ ಐದು ಗಂಟೆ ತನಕ ಇತ್ತು .ರೈಲಿಗೆ ಹೋಗುವ ವಿದ್ಯಾರ್ಥಿ ಗಳಿಗೆ ಕೇಳಿದರೆ ಐದು ನಿಮಿಷ ಮೊದಲೇ ಬಿಡುತ್ತಾರೆ ಎಂದು ನನಗೆ ಮೊದಲೇ ಆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ತಿಳಿಸಿದ್ದರು .ಕೊನೆಯ ಅವಧಿ ಗಣಿತದ್ದು ಆಗಿತ್ತು. ಅವರೂ ಒಂದಕ್ಷರ ಕನ್ನಡ ಪದ ಹೇಳಿರಲಿಲ್ಲ .ಹಾಗಿರುವಾಗ ಅವರಲ್ಲಿ ನಾನು ರೈಲಿಗೆ ಹೋಗಲು ಐದು ನಿಮಿಷ ಬೇಗ ಬಿಡಿ ಎಂದು ಕೇಳುವುದು ಹೇಗೆ ಅಂತ ಗೊತ್ತಾಗಲಿಲ್ಲ. ಐದು ಗಂಟೆಗೆ ಐದು ನಿಮಿಷ ಇರುವಾಗ ಬೇರೆ ದಾರಿ ಇಲ್ಲದೆ ಎದ್ದು ನಿಂತು ಕನ್ನಡ ದಲ್ಲಿಯೇ ಬೇಗ ಹೋಗಲು ಅನುಮತಿ ಕೇಳಿದೆ .ನನ್ನನ್ನು ಯಾವುದೋ ಅನ್ಯ ಗ್ರಹ ಜೀವಿ ಎಂಬಂತೆ ನೋಡಿ ಗೋ ಎಂದು ಹೇಳಿ ಹೋಗಲು ಅನುಮತಿ ನೀಡಿದರು .ಅಲ್ಲಿಂದ ಒಂದೇ ಉಸಿರಿಗೆ ಓಡಿಕೊಂಡು ರೈಲ್ವೇ ಸ್ಟೇಷನ್ ಗೆ ಬಂದೆ .ಅಲ್ಲಿ ಒಂದು ರೈಲು ನಿದಾನವಾಗಿ ಚಲಿಸಲು ಆರಂಭಿಸಿತ್ತು .ಓಡಿ ಹೋಗಿ ಕೊನೆಯ ಭೋಗಿಗೆ ಹತ್ತಿದೆ .ಅದೃಷ್ಟವಶಾತ್ ಅದು ನಾನು ಹೋಗ ಬೇಕಾಗಿದ್ದ ರೈಲು ಆಗಿತ್ತು .ನಾನು ಟಿಕೆಟ್ ಕೂಡ ತೆಗೆದುಕೊಂಡು ಇರಲಿಲ್ಲ. ಒಂದೊಮ್ಮೆ ಅದು ಬೇರೆಡೆಗೆ ಹೋಗು ರೈಲಾಗಿರುತ್ತಿದ್ದರೆ ? ಅಥವಾ ನಾನು ಬರುವಷ್ಟರಲ್ಲಿ ಅದು ಹೋಗಿರುತ್ತಿದ್ದರೆ ? ನನಗೆ ನೆನೆದರೆ ಈಗಲೂ ಭಯವಾಗುತ್ತದೆ.ಯಾಕೆಂದರೆ ನನಗೆ ಮಂಗಳೂರಿನಲ್ಲಿ ಓಡಾಡಿ ಅಭ್ಯಾಸ ಇರಲಿಲ್ಲ ಯಾರ ಪರಿಚಯವೂ ಇಲ್ಲದೆ ರೈಲ್ವೆ ಸ್ಟೇಷನ್ ನಲ್ಲಿ ಏನು ಮಾಡುತ್ತಿದ್ದೆನೋ ? ದೇವರೇ ಬಲ್ಲ!
ಸದ್ಯ ಹಾಗಾಗಲಿಲ್ಲ.
ಅದರ ಮರುದಿನಕ್ಕೆ ಆಗುವಾಗ ಬಸ್ ಸ್ಟ್ರೈಕ್ ನಿಂತಿದ್ದು ನಾನು ಅಕ್ಕನ ಜೊತೆ ನನ್ನ ತಂದೆ ಮನೆ ಕಾಸರಗೋಡು ಜಿಲ್ಲೆಯ ಕೋಳ್ಯೂರಿನಿಂದ ಮಂಗಳೂರಿಗೆ ಬಂದೆ.ನನ್ನನ್ನು ಕಾಲೇಜು ತಲುಪಿಸಿ ಅಕ್ಕ ಅವಳ ಕಾಲೇಜಿಗೆ ಹೋದಳು.
ಆ ದಿನವೂ ಒಂದೆರಡು ಅವಧಿ ತರಗತಿ ಯನ್ನು ಯಾರೋ ತೆಗೆದುಕೊಂಡರು.ಯಾವ ವಿಷಯ ಅಂತ ನನಗೆ ಗೊತ್ತಾಗಲಿಲ್ಲ ಯಾಕೆಂದರೆ ಅವರೆಲ್ಲರೂ ಸಾಕ್ಷಾತ್ ಇಂಗ್ಲೆಂಡಿಂದ ಉದುರಿದವರಂತೆ ಇಂಗ್ಲಿಷ್ ಅನ್ನು ವಿದೇಶಿ ಶೈಲಿಯಲ್ಲಿ  ಬಾಯಿಯಲ್ಲಿ ಕಲ್ಲು ಇಟ್ಟುಕೊಂಡವರಂತೆ ಮಾತಾಡುತ್ತಾ ಇದ್ದರು.ಅಂತೂ ಸಂಜೆ ಐದು  ಗಂಟೆಗೆ ಎಲ್ಲರೂ ಮನೆಗೆ ಹೊರಟೆವು .
ಈಗ ಬಂತು ನನಗೆ ಪೇಚಾಟ.ಬೆಳಗ್ಗೆ ಕಾಲೇಜಿಗೆ ಬಂದ ರಸ್ತೆ ವನ್ ವೇ ಆಗಿತ್ತು. ಈಗ ಹಿಂದೆ ಹೋಗುವುದು ಹೇಗೆ ತಿಳಿಯಲಿಲ್ಲ. ಆಗ ಸಹಾಯಕ್ಕೆ ಬಂದವಳು ನನಿ ಸಹಪಾಠಿ ಶಾಲಿನಿ.ಅವಳಿಗೆ ಮಂಗಳೂರು ಸರಿಯಾಗಿ ಪರಿಚಯ ಇದ್ದು ನನ್ನನ್ನು ರಸ್ತೆ ದಾಟಿಸಿ ಲೇಡಿ ಗೋಷನ್ ಆಸ್ಪತ್ರೆ ಬಳಿ ಕರೆದುಕೊಂಡು ಬಂದು ತಲಪ್ಪಾಡಿಗೆ ಹೋಗುವ 42 ಎಂಬ ಸಂಖ್ಯೆ ಯ ಬಸ್ ಗೆ ಹತ್ತಿಸಿದಳು ಅಂತೂ ಅವಳ ಸಹಾಯದಿಂದ ಮನೆ ಸೇರಿದೆ.ಇಂದು ನಮಗೆ ಕಾಲೇಜು ಆರಂಭ .ಹಾಗಾಗಿಯೇ ನನ್ನ ಕಾಲೇಜಿನ ಮೊದಲ ದಿನದ ನೆನಪು ಆಯಿತು
ಅಂದು ನನಗೆ ಕಲಿಯಲು ಅವಕಾಶ ಸಿಗದ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಾನು ನಂತರ ಸಂಸ್ಕೃತ ಉಪನ್ಯಾಸಕಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ .ಕಲಿಯಲು ಅವಕಾಶ ಸಿಗದೇ ಇದ್ದರೂ ಕಲಿಸಲು ಅವಕಾಶ ಸಿಕ್ಕಿತ್ತು © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.