Saturday 4 November 2017

ದೊಡ್ಡವರ ದಾರಿ 23 ಜೀವನ್ಮುಖಿ ಗೆಳತಿ ನಿರ್ಮಲ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕಿನಲ್ಲಿ ನಾವು ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಜನರನ್ನು ಭೇಟಿ ಮಾಡುತ್ತೇವೆ.ಅಂತೆಯೇ ನನ್ನ ಮತ್ತು ನಿರ್ಮಲಾ ಭೇಟಿ ಆಕಸ್ಮಿಕ. ನಿರ್ಮಲಾ ಸುಮಾರಾಗಿ ನನ್ನದೇ ವಯಸ್ಸಿನ ಮಹಿಳೆ .ಆದರೆ ನನಗಿಂತ ಹೆಚ್ಚು ಅನುಭವ ಇದ್ದವರು.ಯಾರದೇ ಬೆಂಬಲ ಇಲ್ಲದೇ ಇದ್ದರೂ ಕೂಡ ಸಾಲ ಮಾಡಿ ಕಂಪ್ಯೂಟರ್ ತೆಗೆದು ಡಿಟಿಪಿ ಮಾಡಿಕೊಡುವ ಸ್ವ ಉದ್ಯೋಗ ಮಾಡುತ್ತಿದ್ದರು.ಈಗ ಅವರು ಮಿಥಿಕ್ ಸೊಸೈಟಿಯ ಉದ್ಯೋಗಿಯಾಗಿದ್ದಾರೆ.ಬಿಡುವಿನ ವೇಳೆಯಲ್ಲಿ ಡಿಟಿಪಿ ಮಾಡಿ ಕೊಡುತ್ತಾರೆ.ಈಗಿವರು ನನಗೆ ಒಳ್ಳೆಯ ಸ್ನೇಹಿತೆ.
ನಾವು ಆಗಷ್ಟೇ ಬೆಂಗಳೂರಿಗೆ ಮನೆ ಬದಲಾಯಿಸಿದ್ದೆವು.ಅದೇ ಸಮಯದಲ್ಲಿ ನನಗೆ ಬೆಂಗಳೂರಿನ ಬಿಎಂಶ್ರೀ ಪ್ರತಿಷಟಾನದ ಮೂಲಕ ಹಂಪಿ ಯುನಿವರ್ಸಿಟಿ ಯಲ್ಲಿ ಪಿಎಚ್ ಡಿ ಅಧ್ಯಯನಕ್ಕೆ ಅವಕಾಶ ದೊರೆತಿತ್ತು.ಆಗ ನನಗೆ ಕಂಪ್ಯೂಟರ್ ನ ಗಂಧ ಗಾಳಿ ಗೊತ್ತಿರಲಿಲ್ಲ. ನಮ್ಮ ಪ್ರಬಂಧವನ್ನು ಡಿಟಿಪಿ ಯಾರಲ್ಲಿ ಮಾಡಿಸುವುದು ಹೇಳಿ ಆಲೋಚಿಸುವಾಗ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಉದ್ಯೋಗಿಯಾಗಿದ್ದ ರಾಜಮ್ಮ ಅವರು ನನಗೆ ನಿರ್ಮಲಾರನ್ನು ಪರಿಚಯಿಸಿದರು.
ನಿರ್ಮಲಾ ಅದಾಗಲೇ ಅನೇಕರ‌ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿದ್ದರು.ಹಾಗಾಗಿ ಸಂಶೋಧನಾ ವಿದಿವಿಧಾನಗಳ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇತ್ತು.ಅವರು ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯೆಯಾಗಿದ್ದು ಅವರಿಗೆ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ವಿಚಾರಗಳ ಬಗ್ಗೆ ತುಂಬಾ ತಿಳುವಳಿಕೆ ಇತ್ತು
ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡುವಾಗ ಫಾಂಟ್ ಸೈಜ್ ಉದ್ದ ಅಗಲಗಳ ಬಗ್ಗೆ ಅವರಿಗೆ ಗೊತ್ತಿತ್ತು.
ಅದೆಷ್ಟೋ ದಿನಗಳು ಅವರ ಮನೆಯಲ್ಲಿ ರಾತ್ರಿ ಉಳಿದುಕೊಂಡು ನನ್ನ ಪ್ರಬಂಧದ ತಿದ್ದುವಿಕೆಯ ಕಾರ್ಯವನ್ನು ನಾನು ಮಾಡಿದ್ದೆವು.ಅದರಲ್ಲೂ ನನ್ನ ಪ್ರಬಂಧ ದಲ್ಲಿ ನೂರರಷ್ಟು ಭಾವಚಿತ್ರಗಳಿದ್ದವು.ಇವನ್ನು ಫೋಟೋ ಶಾಪ್ ಮಾಡಿ ಹಾಕಲು ಅವರ ಕಂಪ್ಯೂಟರ್ ನಲ್ಲಿ ಕಷ್ಟವಾದಾಗ ಅವರ ಸ್ನೇಹಿತರಾದ ಹರಿಹರ ಶ್ರೀನಿವಾಸರ ಮನೆಗೆ ಹೋಗಿ ರಾತ್ರಿ ಇಡೀ ಕುಳಿತು ಈ ಕೆಲಸವನ್ನು ಮುಗಿಸಿದ್ದೆವು.
ನನ್ನ ಮೊದಲ ಪಿಎಚ ಡಿ ಪ್ರಬಂಧ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ ತುಂಬಾ ಪರಿಶ್ರಮವನ್ನು ಕೇಳುವ ವಿಷಯ .ಇದಕ್ಕಾಗಿ ವ್ಯಾಪಕ ಕ್ಷೇತ್ರ ಕಾರ್ಯ ಮಾಡಬೇಕಿತ್ತು.ಕಾಲೇಜಿನ ಕೆಲಸದೊಂದಿಗೆ ಸಮಯ ಹೊಂದಾಣಿಕೆಯೂ ಸಮಸ್ಯೆಯದೇ ಆಗಿತ್ತು
ನನ್ನ ಮಾರ್ಗದರ್ಶಕರಾದ ಡಾ.ಎಸ್ ನಾಗರಾಜು ಅವರು ನನ್ನಿಂದ ಉತೃಷ್ಟ ಮಟ್ಟದ ಸಂಶೋಧನಾ ಪ್ರಬಂಧ ವನ್ನು ನಿರೀಕ್ಷಿಸುತ್ತಾ ಇದ್ದರು.ಅವರು ತುಂಬಾ ದೊಡ್ಡ ಸಂಶೋಧಕರು.ಅವರ ಮಟ್ಟಕ್ಕೆ ಏರುವುದು ನನಗೆ ಸುಲಭಸಾಧ್ಯವಾಗಿರಲಿಲ್ಲ ಅವರಿಗೆ ತೃಪ್ತಿ ಆಗದಿದ್ದರೆ ಅವರು ನನ್ನ ವಾರ್ಷಿಕ ವರದಿಗೆ ಸಹಿ ಮಾಡುತ್ತಾ ಇರಲಿಲ್ಲ. ಮೊದಲು ವರದಿಯನ್ನು ಕೈಯಲ್ಲಿ ಬರೆದು ನಿರ್ಮಲಾ ಮನೆಗೆ ಬಂದು ಡಿಟಿಪಿ ಮಾಡಿ ಗುರುಗಳ‌ಮನೆಗೆ ಹೋಗಿ ನನ್ನ ಅಧ್ಯಯನ ವನ್ನು ತಿಳಿಸಿ ಅದರ ಸಾರವನ್ನು ಬರೆದಿರುವ ವರದಿಯನ್ನು ನೀಡುತ್ತಿದ್ದೆ.ಅವರು ಅದರಲ್ಲಿ ಅನೇಕ ಬದಲಾವಣೆಗಳನ್ನು ಸೂಚಿಸುತ್ತಾ ಇದ್ದರು.ಮತ್ತೆ ನಿರ್ಮಲಾ ಮನೆಗೆ ಬಂದು ವರದಿಯನ್ನು ‌ತಿದ್ದಿ ಮತ್ತೆ ಗುರುಗಳ‌ಮನೆಗೆ ಹೋಗುತ್ತಾ ಇದ್ದೆ.ಕೆಲವೊಮ್ಮೆ ಮೂರು ನಾಲ್ಕು ಬಾರಿ ತಿದ್ದು ಪಡಿ ಆಗುತ್ತಾ ಇತ್ತು
ನನ್ನ ಮನೆಯಿಂದ ನಿರ್ಮಲಾ ‌ಮನೆಗೆ ಸುಮಾರು ಅರೇಳು‌ ಕಿಮೀ ದೂರು.ನಿರ್ಮಲಾ ‌ಮನೆಯಿಂದ  ಗುರುಗಳ ಮನೆಗೆ ಹತ್ತು ಕಿಮೀ ನಷ್ಟು ದೂರ..ನನ್ನಲ್ಲಿ ಒಂದು ಸ್ಕೂಟಿ ಇದ್ದ ಕಾರಣ ಹೇಗೋ ನಡೆಯುತ್ತಾ ಇತ್ತು
ಕೆಲವೊಮ್ಮೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಬರುತ್ತಾ ಇತ್ತು.ಒಂದು ಬಾರಿ ವರದಿ ತಯಾರು ಮಾಡಿ ನಿರ್ಮಲಾ ಮನೆಗೆ ಹೊಗಿ ಡಿಟಿಪಿ ಮಾಡಿಸಿ ತಿದ್ದು ಪಡಿ ಮಾಡಲು ಬರುತ್ತೇನೆ ಎಂದು ಹೇಳಿ ಗುರುಗಳ‌ಮನೆಗೆ ಹೋಗಿದ್ದೆ  ಗುರುಗಳ ಮನೆಗೆ ಹೋದಾಗ ಕೆಲವು ತಿದ್ದು ಪಡಿ ಹೇಳಿದ್ದರು ಅದರಲ್ಲಿ ಕೆಲವನ್ನು ನಾನು ಒಪ್ಪಲು ತಯಾರಿರಲಿಲ್ಲ
ಅವರು ಹೇಳಿದಂತೆ ಬದಲಾವಣೆ ಮಾಡದಿದ್ದರೆ ಅವರು ವರದಿಗೆ ಸಹಿ ಹಾಕುವುದಿಲ್ಲ ( ವರ್ಷಕ್ಕೆ ಎರಡು ಬಾರಿ ವರದಿ ಸಲ್ಲಿಸಲು ಇದೆ)
ಹೇಗೋ ಒಂದು ಪಿಎಚ್ ಡಿ ಪದವಿ ಪಡೆಯುವ ಉದ್ದೇಶ ನನಗಿರಲಿಲ್ಲ .ನಾನು ಮಾಡಿತ್ತಿರುವ ಅಧ್ಯಯನ ಸರಿ ಇದೆಯೇ ಎಂಬುದನ್ನು ನಾನು ಡಾ.ಅಮೃತ ಸೋಮೇಶ್ವರರಲ್ಲಿ ಚರ್ಚಿಸಿ ನಂತರ ಬರೆಯಿತ್ತಾ ಇದ್ದೆ.ಹಾಗಾಗಿ ಕೆಲವು ನನ್ನದೇ ಆದ ನಿಲುವುಗಳನ್ನು ಬದಲಾಯಿಸಲು ಸಾಧ್ಯಗುವುದಿಲ್ಲ ನನಗೆ.
ಮೊದಲೇ ಕಾಲೇಜು ಕೆಲಸ ,ಆಗ ಮಗ ಚಿಕ್ಕವನಿದ್ದು ಇವನ ಓದು ಹೋಂ್ ವರ್ಕ್ ,ಜೊತೆಗೆ ಕ್ಷೇತ್ರ ಕಾರ್ಯ ಇವೆಲ್ಲದರ ನಡುವೆ ನನಗೂ ಗುರುಗಳಿಗೂ ಅಭಿಪ್ರಾಯ ವ್ಯತ್ಯಾಸ ಎಲ್ಲದರಿಂತ ಸೋತು ಸೊರಗಿ ಹೋಗಿದ್ದ ನನಗೆ ಪಿಎಚ ಡಿ ಪದವಿಯು ಬೇಡ ಏನೂ ಬೇಡ ಎನಿಸಿತ್ತು.ಗುರುಗಳಲ್ಲಿ ತಿದ್ದು ಪಡಿ ಮಾಡಿ ತರುತ್ತೇನೆ ಎಂದು ಹೇಳಿದವಳು ನಿರ್ಮಲಾ ಮನೆಗೆ ಹೋಗದೆ ಸೀದಾ ನನ್ನ ‌ಮನೆಗೆ ಬಂದು ಬರೆದ ಅಧ್ಯಯನ ದ ವರದಿಯನ್ನೆಲ್ಲಾ ಅಲ್ಲೆ ಮೆಜಿನ‌ಮೇಲೆ ಎಸೆದು ಟೇರೆಸ್ ಹತ್ತಿ ಆಕಾಶ ನೋಡುತ್ತಾ ದಿಙ್ಮೂಢಳಾಗಿ ಕುಳಿದಿದ್ದೆ.ಹಾಗೆಯೇ ಎಷ್ಟು ಹೊತ್ತು ಕುಳಿತಿದ್ದನೋ ಗೊತ್ತಿಲ್ಲ. ಪೋನ್ ರಿಂಗಾಗಿ ಇಹ ಲೋಕಕ್ಕೆ ಬಂದೆ .ನಿರ್ಮಲಾ ಪೋನ್ ಮಾಡಿ ಡಿಟಿಪಿ ಮಾಡಿಸಲು ಯಾಕೆ ಬಂದಿಲ್ಲ ಎಂದು ಕೇಳಿದರು.
ಅಯ್ಯೋ ಬಿಡಿ ನಿರ್ಮಲಾ ನಾನಿನ್ನು ಬರೋದಿಲ್ಲ ಪಿಎಚ್ ಡಿ ಮಾಡಿ ಉದ್ಧಾರ ಆಗ್ಲಿಕೆ ಏನಿದೆ ? ಜಗತ್ತಿನಲ್ಲಿ ಪಿಎಚ್ ಡಿ ಮಾಡದ ಯಾರೂ ಬದುಕುತ್ತಾ ಇಲ್ಲವಾ ? ಇತ್ಯಾದಿಯಾಗಿ ಹೇಳುತ್ತಾ ಹೋದೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅವರು " ಎಂತ ಲಕ್ಷ್ಮೀ ಇದು ? ಈಗಾಗಲೇ ಕ್ಷೇತ್ರ ಕಾರ್ಯ ಮುಗಿದಿದೆ ಪ್ರಬಂಧ ಕೂಡ ಎಂಬತ್ತು ಶೇಕಡಾ ಸಿದ್ದವಾಗಿದೆ.ಈ ಹಂತದಲ್ಲಿ ಕೈ ಬಿಟ್ಟರೆ ನೀವು ಇಷ್ಟು ಸಮಯ ಕಷ್ಟ ಬಂದದ್ದಕ್ಕೆ ಏನು ಸಿಕ್ಕಂತಾಯಿತು.ಎಂತೆಂಥವರೆಲ್ಲಾ ಪಿಎಚ್ ಡಿ ಮಾಡಿದ್ದಾರೆ ಗೊತ್ತಾ ? ನಾಳೆ ಬೆಳಿಗ್ಗೆ ಬನ್ನಿ ,ಡಿಟಿಪಿ ಮಾಡಿ‌ಕೊಡುತ್ತೇನೆ ಗೈಡ್ ಮನೆಗೆ ಹೋಗಿ ಸಹಿ ಹಾಕಿಸಿವರದಿ ಸಲ್ಲಿಸಿ ಫೀಸ್ ಕಟ್ಟಿ, ಎಲ್ಲರಿಗೂ ಪಿಎಚ್ ಡಿ ಮಾಡಲು ಅವಕಾಶ ಸಿಗುವುದಿಲ್ಲ ಸಿಕ್ಕ ಅವಕಾಶ ಬಿಟ್ಟರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ ಎಂದು ಹಿತ ನುಡಿದರು.ಸ್ವಲ್ಪ ಸಮಾಧಾನವಾಗಿ ಮನೆಯೊಳಗೆ ಬಂದೆ.ಚಕ್ ದೇ ಇಂಡಿಯಾ ಸಿನಿಮಾ ಟಿವಿ ಯಲ್ಲಿ ಬರ್ತಾ ಇತ್ತು.
ಅದೊಂದು ಅದ್ಭುತ ಸಿನಿಮಾ. ಅದು ಮುಗಿಯುವಷ್ಟರಲ್ಲಿ ಹತಾಶೆಯನ್ನು ತೊಡೆದು ಹಾಕಿ ಎಂದಿನ ಲಕ್ಷ್ಮೀ ಆದೆ.ಒಂದಿನಿತು ಗುರುಗಳು ಹೇಳಿದಂತೆ ತಿದ್ದುಪಡಿ ಪಡಿ ಮಾಡಿ ಬರೆದೆ.ಕೆಲವನ್ನು ಬದಲಾಯಿಸದೆ ಹಾಗೆಯೇ ಬಿಟ್ಟೆ.ಮರು ದಿನ ಬೆಳಗ್ಗಿನ ಜಾವವೇ ನಿರ್ಮಲಾ ‌ಮನೆಗೆ ಹೋಗಿ ಟೈಪ್ ಮಾಡಿಸಿ ಗುರುಗಳ ಮನೆಗೆ ಹೋದೆ.ಕೆಲವನ್ನು ತಿದ್ದುಪಡಿ ಮಾಡದೆ ಹಾಗೆ ಬಿಟ್ಟದ್ದೇಕೆ ಎಂದು ಕೇಳಿದರು.ಅದು ನಾನು ಬರೆದದ್ದು ಸರಿ ಎಂದು ವಾದಿಸಿದೆ.ಸಾಕಷ್ಟು ಚರ್ಚೆ ಆಯಿತು. ಕೊನೆಗೆ ಅಮೃತ ಸೋಮೇಶ್ವರರಿಗೆ ಪೋನ್ ಮಾಡಿ ವಿಷಯ ತಿಳಿಸಿ ನನ್ನ ಗುರುಗಳ ಕೈಗೆ ಕೊಟ್ಟೆ.ಅಮೃತ ಸೋಮೇಶ್ವರರು ನಾನು ಹೇಳಿರುವುದನ್ನು ಸಮರ್ಥಿಸಿ ಮನವರಿಕೆ ಮಾಡಿದರು.
ಗುರುಗಳು ಸಹಿ ಮಾಡಿದರು ನಾನು ವರದಿ ಸಲ್ಲಿಸಿ ಪೀಸ್ ಕಟ್ಟಿದೆ ಅಂತೂ ಇಂತೂ ಪಿಎಚ್ ಡಿ ಪದವಿ ಸಿಕ್ತು

ಈ ನಡುವೆ ನಾನು ಒಂದಷ್ಟು ಕಥೆಗಳನ್ನು ಬರೆದಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವದ್ದವು.ಅದೇ ರೀತಿ ಅನೇಕ ಲೇಖನಗಳು ಪ್ರಕಟವಾಗಿದ್ದವು. ಹಾಗಾಗಿ ಇವನ್ನು ಸೇರಿಸಿ ಕಥಾ ಸಂಕಲನ ‌ಮತ್ತು ಲೇಖನ ಸಂಕಲನ ಪ್ರಕಟಿಸಬೇಕೆಂಬ ಕನಸು ನನಗಿತ್ತು.ಆದರೆ ಹೇಗೆ ಏನು ಎತ್ತ ಎಂಬುದು ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನಿರ್ಮಲಾ ಅವರು ಯಾವುದೋ ಒಂದು ಪುಸ್ತಕ ವನ್ನು( ಬಹುಶ ಹಾವನೂರು ಅವರದಿರಬೇಕು) ಜವಾಬ್ದಾರಿ ವಹಿಸಿ ಪ್ರಕಟಿಸಿಕೊಟ್ಟದ್ದು ಗೊತ್ತಾಯಿತು. ಹಾಗಾಗಿ ಅವರಲ್ಲಿ ನನ್ನ ಎರಡು ಪುಸ್ತಕಗಳನ್ನು ಪ್ರಕಟಮಾಡುವುದು ಹೇಗೆ ? ಪ್ರಿಂಟರ್ ಅನ್ನು ಪರಿಚಯಿಸಿ ಎಂದು ಕೇಳಿದೆ.ಆರಂಭದಲ್ಲಿ ಪುಸ್ತಕ ಪ್ತಕಟಣೆಯ ಬವಣೆ ಗಳನ್ನು ಅವರು ತಿಳಿಸಿದರು.ಆದರೆ ನನಗೆ ಪುಸ್ತಕ ಪ್ರಕಟಿಸಬೇಕೆಂಬ‌ ಮರ್ಲು ತುಂಬಾ ಇತ್ತು.
ಸರಿ ನಿರ್ಮಲಾ ನನ್ನ ಆಯ್ದ ಕಥೆ ಲೇಖನಗಳನ್ನು ಡಿಟಿಪಿ ಮಾಡಿ ಶಾರದಾ ಪ್ರೆಸ್ ಮಾಲಕರ ಬಳಿಗೆ ಕರೆದುಕೊಂಡು ಹೋಗಿ ಅವರಲ್ಲಿ ಚರ್ಚಿಸಿ ನನಗೆ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಪುಸ್ತಕ ಪ್ರಿಂಟ್ ಮಾಡಲು ಸಹಾಯ ಮಾಡಿದರು.ಇಲ್ಲಿಂದ ಪುಸ್ತಕ ಪ್ರಕಟಿಸು ಬಗ್ಗೆ ನನಗೆ ಗೊತ್ತಾಯಿತು.ನನ್ನ ಪುಸ್ತಕಗಳ ಪ್ರಕಟಣೆಗೆ ಇವರು ಭದ್ರ ಬುನಾದಿಯನ್ನು ಹಾಕಿ ಕೊಟ್ಟರು ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ ಇವುಗಳಲ್ಲಿ ನನ್ನ ಹದಿನಾಲ್ಕು ಪುಸ್ತಕಗಳನ್ನು ನಾನು ಸ್ವತಃ ಪ್ರಕಟಿಸಿರುವೆ
ನಿರ್ಮಲಾ ಜೀವನೋತ್ಸಾಹಿ ಮತ್ತು ತನ್ನಿಂದ ಆದ ಸಹಾಯವನ್ನು ಮಾಡುವ ಸಹೃದಯಿ,ನನ್ನ ಕಷ್ಟದ ಸಮಯದಲ್ಲಿ ನನಗೆ ಪೂರ್ಣ ಬೆಂಬಲ ನೀಡಿರುವುದನ್ನು ನಾನೆಂದಿಗೂ ಮರೆಯಲಾರೆ.
ಅನೇಕರ ಪಿಎಚ್ ಡಿ ಪ್ರಬಂಧಗಳನ್ನು ಡಿಟಿಪಿ ಮಾಡಿ ಸೆಟ್ ಮಾಡಿ‌ಕೊಟ್ಟಿರುವ ನಿರ್ಮಲಾ ಈಗ ಸ್ವತಃ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದಾರೆ.ಹಲವು ಅಡ ತಡೆಗಳ ನಡುವೆಯೂ ಅವರ ಕಲಿಕೆಯ ಉತ್ಸಾಹ ಮೆಚ್ಚುವದ್ದು.ಆದಷ್ಟು ಬೇಗನೆ ಅವರಿಗೆ ಪಿಎಚ್ ಡಿ ಪದವಿ ಸಿಗಲೆಂದು ಹಾರೈಸುವೆ.

8 comments:

  1. Dr. Lakshmi PrAsad madam.. Read ur article on jeevanmukhi... I thank u for your inspirational write up on Nirmala. She deserves it 100 percent...

    Nirmala is bold, sound in her subject. She can stand with all types of challenges... She proves herself a perfect personality. U might be astonished who am I.. I am proud to be friend of her. THQ u very much for enlightening her thru ur article...

    ReplyDelete
  2. ನಿಜ ಮೇಡಂ ಧನ್ಯವಾದಗಳು

    ReplyDelete
  3. Respected madam, each and every word you wrote about Nirmala is true I am also thankfuk to you to enlighten her name, thanks alot and all the very best

    ReplyDelete
  4. This comment has been removed by the author.

    ReplyDelete
    Replies
    1. ನಿಜ ಮೇಡಂ ಧನ್ಯವಾದಗಳು

      Delete
  5. I congratulate from heart for this good article on a good friend like Nirmala. I specially congratulate y for remebaring me even after reaching the heights of several awards.Dr.H.S.Rao

    ReplyDelete