Sunday 14 January 2024

ದೊಡ್ಡವರು ದಾರಿ 75-ಡಾ.ರಹಮತ್ ತರೀಕೆರೆ

 ದೊಡ್ಡವರ ದಾರಿ 75 : ಡಾ . ರಹಮತ್ ತರೀಕೆರೆ

ಜಟ್ಟಿಗ ದೈವದ ಕಥಾನಕವನ್ನು ನಾನು ನನ್ನ ಬ್ಲಾಗ್ ನಲ್ಲಿ ಆರೇಳು ವರ್ಷಗಳ ಹಿಂದೆ ಬರೆದಿದ್ದೆ.ಅದರಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಾ ರಹಮತ್ ತರೀಕೆರೆ ಅವರ ಲೇಖನದ ಭಾಗವನ್ನು ಉಧ್ಧರಿಸಿದ್ದೆ.ಈ ನನ್ನ ಜುಟ್ಟಿಗೆ ದೈವಗಳ ಕುರಿತಾದ ಲೇಖನ ಡಾ ಗಣೇಶಯ್ಯನವರ ಬಳ್ಳಿ ಕಾಳು ಬೆಳ್ಳಿ ಎಂಬ ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾದ ಐತಿಹಾಸಿಕ ಕಥಾನಕದ ಜತೆ ಕಾಲ್ಪನಿಕ ಕಥೆ ಮಿಶ್ರ ಮಾಡಿ ಬರೆದ ಕಾದಂಬರಿಗೆ ಮೂಲ ಆಕರವಾಯಿತೆಂದು ಕೆ ಎನ್ ಗಣೇಶಯ್ಯ ಅವರು ಹೇಳಿದ್ದಾರೆ.ರಹಮತ್ ತರೀಕೆರೆಯವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಬಗ್ಗೆ ಮಾಹಿತಿ ಇದೆ ಎಂದು ಕೇಳಿದ್ದರು.ಆದರೆ ನನಗೆ ರಹಮತ್ ತರೀಕೆರೆ ಅವರ ಯಾವ ಲೇಖನದಲ್ಲಿ ಜಟ್ಟಿಗರ ಆರಾಧನೆ ಕುರಿತು ಮಾಹಿತಿ ಇತ್ತು ಎಂಬುದು ನನಗೆ ನೆನಪಿರಲಿಲ್ಲ

ಅಂದಿನಿಂದ ಅವರಲ್ಲಿ ಈ ಬಗ್ಗೆ ಮಾತನಾಡಬೇಕೆಂದು ಅವರು ಫೋನ್ ನಂಬರ್ ಸಂಗ್ರಹಿಸಿ ಇರಿಸಿದ್ದೆನಾದರೂ ಮಾತನಾಡಿರಲಿಲ್ಲ

2010ರಲ್ಲಿ ನನ್ನ ಮೊದಲ ಡಾಕ್ಟರೇಟ್ ಪದವಿಯ ವೈವ( ಮೌಖಿಕ ಪರೀಕ್ಷೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು 

ತುಳು ನಾಡಿನ ನಾಗಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬುದು ನನ್ನ ಪಿಎಚ್ ಡಿ ಮಹಾ ಪ್ರಬಂಧ.ಈ ಪ್ರಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.ಪರೀಕ್ಷರಲ್ಲಿ ಒಬ್ಬರಾದ ಡಾ

ಮಾಧವ ಪೆರಾಜೆಯವರು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ನಿಮಗೆ ಗೊತ್ತೇ ಆಗಿಲ್ಲ ಇತ್ಯಾದಿ ಏನೋ ಹೇಳಿದರು.ಆಗ ನಾನು ಆರಂಭದಲ್ಲೇ ನಾಗ  ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು.ಬೆರ್ಮೆರ್ ಎಂದರೆ ಹಿರಿಯ ಎಂಬ ಪದವೇ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಗಿದೆ ಎಂದು ಹೇಳಿದ್ದೇನೆ.ಅದನ್ನು ಆಧಾರ್ ಸಹಿತ ನಿರೂಪಿಸಿದ್ದೇನೆ ಎಂದು ಹೇಳಿದೆ.

ಆಗ ವೀ ಸಿ ಅವರು ಕ್ಲಿಷ್ಟ ಸಂಸ್ಕೃತ ಪದಗಳು ಸರಳವಾಗಿ ಬದಲಾಗುವುದು ಸಹಜ ಆದರೆ ಸರಳವಾದ ಬೆರ್ಮೆರ್ ಪದೇ ಬ್ರಹ್ಮ ಎಂದಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದರು.ಆಗ ಪರೀಕ್ಷರಲ್ಲಿ ಓರ್ವರು ಆಗಿದ್ದು ರಹಮತ್ ತರೀಕೆರೆ ಅವರು ನನ್ನ ಪರ ನಿಂತು  ಸರಳವಾಗಿರುವ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರ ಪದವಾಗಿ ಬದಲಾಗಿರುವುದಕ್ಕೆ ಸನಿವಾರ>ಶನಿವಾರ ಇತ್ಯಾದಿ ಕೆಲವು ಉದಾಹರಣೆಗಳನ್ನು ನೀಡಿದರು

ನಂತರ ವೀಸಿಯವರು ನನ್ನ ವಾದವನ್ನು ಒಪ್ಪಿ ದರು.ಆದರೆ ಮಾಧವ ಪೆರಾಜೆಯವರು ನಾನು ಹಾಗೆ ಸಿದ್ಧ ಮಾಡಿಲ್ಲ ಎಂದು ವಿಷಾದಿಸಿದರು

ಆಗ ನನ್ನ ಮಾರ್ಗದರ್ಶಕರು ಹಾಗೂ ಜೊತೆ ಇದ್ದವರು ಮಾಧವ ಪೆರಾಜೆಯವರು ಹೇಳಿದ್ದನ್ನು ಒಪ್ಪಿಕೊಂಡು ಬಿಡಿ.ಇಲ್ಲವಾದರೆ ನಿಮಗೆ ಪಿಎಚ್ ಡಿ ಪದವಿ ಸಿಗಲಾರದು ಎಂದು ಹಿತ ನುಡಿದರು

ಆದರೆ ನಾನು ಆರಂಭದಿಂದಲೂ ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಪ್ರೂವ್ ಮಾಡುತ್ತಾ ಬಂದಿದ್ದಾರೆ.ಐದಾರು ವರ್ಷಗಳ ಕ್ಷೇತ್ರ ಕಾರ್ಯ ಮಾಡಿ ನಾಡೋಜ ಅಮೃತ ಸೋಮೇಶ್ವರ ಮತ್ತು ಇತರ ವಿದ್ವಾಂಸರೊಡನೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೆ.ಹಾಗಾಗಿ ಪಿ ಎಚ್ ಡಿ ಪದವಿಗಾಗಿ ನಾನು ಮಾಡಿರುವುದನ್ನು ಇಲ್ಲ ಎಂದು ಹೇಳಿದ್ದನ್ನು ಒಪ್ಪಿಕೊಂಡು ಸುಮ್ಮನೇ ಇರಲು ನನ್ನಿಂದ ಸಾಧ್ಯವಿರಲಿಲ್ಲ.ಹಾಗಾಇಗಿ ನನಗೆ ಮತ್ತು ಮಾಧವ ಪೆರಾಜೆಯವರಿಗೆ ಸಾಕಷ್ಟು ಚರ್ಚೆ ನಡೆಯಿತು.ಕೊನೆಗೆ ವೀಸಿ ಗಳಾದ ಮುರಿಗೆಪ್ಪನವರೇ " ನೀವು ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು ಎಂದು ಎಲ್ಲಿ ಬರೆದಿದ್ದೀರಿ? ಯಾವ ಪುಟದಲ್ಲಿದೆ ಎಂದು ತೋರಿಸಿ"ಎಂದರು.ಆಗ ನಾನು ಉಪಸಂಹಾರ ಭಾಗದಲ್ಲಿ ಬರೆದಿರುವುದನ್ನು ಓದಿ ಹೇಳಿದೆ.ಅಲ್ಲಿಗೆ ಚರ್ಚೆ ಮುಕ್ತಾಯ ಆಯಿತು.ನನ್ನ ಪ್ರಬಂಧ ಪಿ ಎಚ್ ಡಿ ಪದವಿ ಗೆ ಅರ್ಹವಾಗಿದೆ ಎಂದು ವೀಸಿಯವರು ಘೋಷಣೆ ಮಾಡಿದರು.

ಇಲ್ಲಿ ರಹಮತ್ ತರೀಕೆರೆ ಅವರು ಆಡುಭಾಷೆಯ ಸರಳ ಪದಗಳು ಸಂಸ್ಕೃತೀಕರಣಕ್ಕೆ ಒಳಗಾಗಿ ಕ್ಲಿಷ್ಟಕರವಾದ ಪದವಾಗಿ ಬಳಕೆಯಾಗುವ ಬಗ್ಗೆ ಮಾಹಿತಿ ಕೊಡದೇ ಇರುತ್ತಿದ್ದರೆ ನಾನು ಆಗ ದಿನ ಮೌಖಿಕ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ ಇತ್ತು

ಅಂತೂ ಮೊದಲ ಡಾಕ್ಟರೇಟ್ ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಡೆದೆ‌.ನಂತರ ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಮಹಾ ಪ್ರಬಂಧ ರಚಿಸಿ ಕುಪ್ಪಂ ನ ದ್ರಾವಿಡ ವಿಶ್ವವಿದ್ಯಾಲಯದ ತುಳು ವಿಭಾಗಕ್ಕೆ ಸಲ್ಲಿಸಿ ಎರಡನೇ ಡಾಕ್ಟರೇಟ್ ಪದವಿಯನ್ನು ಪಡೆದ

ಆಗ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ದೈವಗಳ ಕುರಿತಾದ ಪಾಡ್ದನ ಹೊಗಳಿಕೆ ಜಾನಪದ ಐತಿಹ್ಯ ಆಧಾರಿತ ಮಾಹಿತಿಯನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಿ ತುಂಡು ಭೂತಗಳು - ಒಂದು ಅಧ್ಯಯನ,ದೈವಿಕ ಕಂಬಳ ಕೋಣ,ತುಳುನಾಡಿನ ಅಪೂರ್ವ ಭೂತಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿ ಗಳು,ಕಂಬಳ ಕೋರಿ ನೇಮ , ಭೂತಗಳ ಅದ್ಭುತ ಜಗತ್ತು ಮೊದಲಾದ ಅನೇಕ ಪುಸ್ತಕಗಳನ್ನು ಬರೆದು ಸ್ವತಃ ಪ್ರಕಟಿಸಿದೆ.

20130ರಲ್ಲಿ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದೆ.fb ಯಲ್ಲೂ ಬರೆಯುತ್ತಿದ್ದೆ

ಯಾವುದೋ ಒಂದು ಪೋಸ್ಟ್ ನ ಕಾಮೆಂಟ್ ನಲ್ಲಿ ರಹಮತ್ ತರೀಕೆರೆಯವರು ನನ್ನ ನಾಗ ಬ್ರಹ್ಮ ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ (ಪ್ರಕಟಿತ ಪಿ ಎಚ್ ಡಿ ಮಹಾ ಪ್ರಬಂಧ) ಪುಸ್ತಕ ಬೇಕೆಂದು ಕೇಳಿದ್ದರು

ಈ ಸಮಯಕ್ಕಾಗುವಾಗ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದ ಅಕ್ರಮ ದಿಂದಾಗಿ ಯೂನಿವರ್ಸಿಟಿಗಳ ಬಗ್ಗೆ, ಪ್ರೊಫೆಸರ್ ಗಳು ಬಗ್ಗೆ ಒಂತರಾ ಅಸಹನೆ ಜುಗುಪ್ಸೆ ಉಂಟಾಗಿತ್ತು.ಹಾಗಾಗಿ ರಹಮತ್ ತರೀಕೆರೆ ಅವರ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಪುಸ್ತಕವನ್ನೂ ಕಳುಹಿಸಿರಲಿಲ್ಲ 

ಇದಾಗಿ ಕೆಲ ಸಮಯದ ನಂತರ ಎಂ ಆರ್ ಮಣಿಕಾಂತ್ ಅವರು " ರಹಮತ್ ತರೀಕೆರೆ ಅವರಿಗೆ ನಿಮ್ಮ ಪುಸ್ತಕ ಬೇಕೆಂದು ಕೇಳಿದ್ದರು.ನಿಮ್ಮಲ್ಲಿ ಕೇಳಿದ್ದರೂ ನೀವು ಕಳುಹಿಸಿಲ್ಲವಂತೆ..ದೊಡ್ಡವರು ಕೇಳಿದಾಗ ಅವರು ಕೋರಿಕೆಗೆ ಗೌರವ ಕೊಟ್ಟು ಕಳುಹಿಸಬೇಕು.ಅವರಿಗೆ ಪುಸ್ತಕ ಕಳುಹಿಸಿ ಕೊಡಿ ಎಂದು ಹೇಳಿದರು

ನಂತರ ಆ ಪುಸ್ತಕದ ಜೊತೆಗೆ ನನ್ನ ಇತರ ಪ್ರಕಟಿತ ಪುಸ್ತಕಗಳ ಒಂದೊಂದು ಪ್ರತಿಯನ್ನು ಕಳುಹಿಸಿದ್ದೆ ತಲುಪಿದಾಗ ಧನ್ಯವಾದ ಹೇಳಿದ್ದರು

ಇದಾಗಯೂ ಆರೇಳು ವರ್ಷಗಳು ಕಳೆದವು.ಮೊನ್ನೆ ಕನ್ನಡ ಕಾರ್ಯಾಗಾರಕ್ಕೆ ಬಂದಿದ್ದಾಗ ಮಾತನಾಡಿ ಒಂದು ಫೋಟೋ ಹಿಡಿದುಕೊಂಡು ಬಂದೆ 

Saturday 13 January 2024

ಆತ್ಮ ಕಥೆಯ ಬಿಡಿ ಭಾಗಗಳು: ಅನುಭವ ಆಗಲು ಏನು ಮಾಡಬೇಕು?

 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.


. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

Sunday 7 January 2024

ಆತ್ಮ ಕಥೆಯ ಬಿಡಿ ಭಾಗಗಳು:ಅಮ್ಮಂದಿರು ಕೈಲಾಗುವಾಗಲೇ ದುಡ್ಡು ತೆಗೆದಿರಿಸಿಕೊಳ್ಳಿ

 ನನಗೂ ಆತ್ಮವಿದೆ  ಅದಕ್ಕೂ ಒಂದು ಕಥೆ ಇದೆ

ಅಮ್ಮಂದಿರೇ ಕೈ ನಡೆಯುವಾಗಲೇ ದುಡ್ಡು ನಿಮ್ಮ ಹೆಸರಿನಲ್ಲಿರಿಸಿಕೊಳ್ಳಿ- ಡಾ.ಲಕ್ಷ್ಮೀ ಜಿ ಪ್ರಸಾದ 


ತಾಯವ್ನ ಬೈಬ್ಯಾಡ ತಿಳಿಗೇಡಿ ನನತಮ್ಮ

ಬಾಳದಿನದಾಕಿ ಹಡೆದವ್ವನ ಬೈದರ

ಭಾಳ ಮರುಗ್ಯಾಳ ಮನದಾಗ ||


ಯಾರು ಇದ್ದರೂ ನನ್ನ ತಾಯವ್ವನ ಹೋಲ್ಹರು

ಸಾವಿರ ಕೊಳ್ಳಿ ಒಲಿಯಾಗ ಇದ್ದರ

ಜ್ಯೋತಿ ನಿನ್ಯಾರ ಹೋಲರ ||


ನಮ್ಮ‌ಪರಿಚಯದ  ಎಲ್ಲಮ್ಮ ಆಂಟಿ ಮಾತಿನ ನಡುವೆ  ಅವರ ಸ್ನೇಹಿತರೊಬ್ಬರ ನಡೆದ ಕಥೆಯನ್ನು  ಹೇಳಿದ್ದರು.

ಅವರ ಸ್ನೇಹಿತೆಯ ಗಂಡ ಒಳ್ಳೆಯ ಕೆಲಸದಲ್ಲಿದ್ದರು

ಒಬ್ಬ ಮಗ ಒಂದು ಮಗಳ‌ ಚಂದದ ಸಂಸಾರ

ಮಗ ಮತ್ತು ಮಗಳಿಗೆ ಸೈಟು ತೆಗೆದುಕೊಟ್ಟಿದ್ದರು

ಮಗನ ಹೆಸರಿನ ಸೈಟಿನಲ್ಲಿ ಡುಪ್ಲೆಕ್ಸ್ ಮನೆ ಕಟ್ಟಿ ಅರಾಮಾಗಿ ಬದುಕುತ್ತಿದ್ದರು.ಮಗ ಮಗಳಿಗೆ ಮದುವೆಯಾಗಿ ಸೊಸೆ ಅಳಿಯ ಬಂದರು

ಹೀಗೇ ದಿನ ಉರುಳುತ್ತಿರುವಾಗ ಒಂದು ರಾತ್ರಿ ಹೃದಯಾಘಾತ ಆಗಿ ಅಸ್ಪತ್ರೆಗೆ ತಲುಪುವ ಮೊದಲೇ ಗಂಡ ತೀರಿಕೊಂಡರು

ಮೊದಲಿನಿಂದಲೂ ದುಡ್ಡಿನ ವ್ಯವಹಾರ ಗಂಡನೇ ನೋಡಿಕೊಳ್ತಾ ಇದ್ದಿದ್ದು.ಹೆಂಡತಿಗೆ ಒಂದಿನಿತು ಹೊರಗಿನ ವ್ಯವಹಾರದ ತಿಳುವಳಿಕೆ ಇಲ್ಲ.ತಂದೆ ಸತ್ತಾಗ ಬಂದ ದುಡ್ಡೆಲ್ಲವನ್ನು ಮಗ ಅಮ್ಮನ ಸಹಿ ಹಾಕಿಸಿಕೊಂಡು ಪಡೆದ.ಇದರಿಂದಾಗಿ ಮಗಳಿಗೆ ಕೋಪ ಬಂತು.ತಾಯಿಯಕಡೆ ತಿರುಗಿ ನೋಡಲಿಲ್ಲ.

ತಂದೆ ಸತ್ತ ಕೆಲವೇ ದಿನಕ್ಕೆ ಮಗನಿಗೆ ತಾಯಿ ಭಾರವಾಗತೊಡಗಿದಳು.ಅವಳಲ್ಲಿದ್ದ ಆಭರಣಗಳನ್ನು ಚೂರಿ ತೋರಿಸಿ ಹೆದರಿಸಿ ಕಿತ್ತುಕೊಂಡು ಹೊರ ಹಾಕಿದರು.ಗಂಡ ಹೆಂಡತಿಯ ಹೆಸರಿನಲ್ಲಿ ಏನನ್ನೂ ಮಾಡಿಟ್ಟಿರಲಿಲ್ಲ.ನಂತರ ಆ ತಾಯಿ ಯಾರ್ಯಾರದೋ ಮನೆಯ ಅಡಿಗೆ ಕೆಲಸಕ್ಕೆ ಹೋಗಿ ಎಂಟು ನೂರು ರುಪಾಯಿಯ ಶೀಟಿನ ಮನೆಯಲ್ಲಿ ಬದುಕುವಂತಾಯಿತು.

ಇದೇ ರೀತಿ ಅವರ ಇನ್ನೊಂದು ಸ್ನೇಹಿತರ ಕಥೆಯೂ ಹೇಳಿದ್ದರು

ಬಹುಶಹ ಈ ಸ್ನೇಹಿತೆಗೆ ಒಂದು ಸಣ್ಣ ಸರ್ಕಾರಿ ಕೆಲಸ ಇತ್ತು.ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ತಂದೆ ತಾಯಿಯನ್ನು ಕಳೆದುಕೊಂಡ ಸಂಬಂಧಿಕರ ಹೆಣ್ಣು ಮಗುವನ್ನು ಮಗಳಂತೆ ಸಾಕಿ ಓದಿಸಿದರು.ತಮಗಾಗಿ ದುಡ್ಡು ಉಳಿಸಿಕೊಳ್ಳಲಿಲ್ಲ  ಅ ಸಾಕು ಮಗಳಿಗೆ ಮದುವೆಯಾಯಿತು.ಈಗ ಈ ಸಾಕುತಾಯಿಗೆ ನೆಲೆಯಿಲ್ಲದಾಯಿತು

ಅವರು ರಿಟೈರ್ಡ್ ಆದರು‌‌.ನಂತರ ಬರುವ ಪೆನ್ಷನ್ ನಲ್ಲಿ ಒಂದು ಸಣ್ಣ ಬಾಡಿಗೆ ಮನೆ ಹಿಡಿದು ಬದುಕುತ್ತಿದ್ದಾರೆ.ಇನ್ನೊಂದು ನನ್ನ ಸಂಬಂಧಿಕರದೇ ಉದಾಹರಣೆ

ಮಗಳು ಹುಟ್ಟಿ ಕಣ್ಣು ತೆರೆಯುವ ಮೊದಲೇ ಗಂಡ ತೀರಿ ಹೋಗಿದ್ದ.ಇವರೇಕೆ ಮುಂದೆ ಓದಿ ಸರಿಯಾದ ಕೆಲಸ ಹಿಡಿಯಲಿಲ್ಲ ಎಂದು ನನಗೆ ಗೊತ್ತಿಲ್ಲ.ಮಗಳು ಬಹಳ ಜಾಣೆ.ಇಂಜನಿಯರಿಂಗ್ ಓದಿ ಮದುವೆಯಾದಳು.ಅದು ಅತ್ತೆ ಮಾವ ಮೈದುನಂದಿರು ಇರುವ ಕೂಡು ಕುಟುಂಬ.ಈ ತಾಯಿಗೆ ಯಾಕೋ ಅಲ್ಲಿ ಸರಿ ಹೋಗಲಿಲ್ಲ.ನಂತರ ಪುನಃತಂದೆ ಮನೆ ಸೇರಿದರು‌ಅದೃಷ್ಟಕ್ಕೆ ಸ್ವಲ್ಪ ಪಿತ್ರಾರ್ಜಿತ ಆಸ್ತಿಯೂ ಇದೆ.ಇರಲು ತಂದೆ ಮನೆ ಇದೆ..ಹೇಗೋ ನಡೆದಿರಬಹುದು ಅವರ ಬದುಕು.

ಹೀಗೆ ಸುತ್ತ ಮುತ್ತ ಅನೇಕ ಘಟನೆಗಳ ಬಗ್ಗೆ ಕೇಳ್ತಾ ಇದ್ದೇವೆ.ತಂದೆ ತಾಯಿಯರ ಮನೆ ಆಸ್ತಿ ಪಾಸ್ತಿ ದುಡ್ಡನ್ನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ತಂದೆ ತಾಯಿಯರನ್ನು ನೋಡಿಕೊಳ್ಳದೆ ಇರುವ ಅನೇಕ ಮಕ್ಕಳಿದ್ದಾರೆ.ಇಂತಹ ವಿಷಯಗಳಲ್ಲಿ ಮಗಳು ಮಗನೆಂಬ ಬೇಧ ಇಲ್ಲ

ತಂದೆ ತಾಯಿಯರನ್ನು ಕೆಲಸದಾಳಿನಂತೆ ದುಡಿಸಿಕೊಳ್ಳುವ ಅವರು ಕೆಲಸ ಮಾಡಲಾಗದಷ್ಟು ಅಶಕ್ತರಾದಾಗ ಹೊರಗೆ ಹಾಕುವ ಮಗಳಂದಿರೂ ಇದ್ದಾರೆ

ಹಾಗಾಗಿ ತಂದೆ ತಾಯಂದಿರು ಸ್ವಲ್ಪ ಎಚ್ಚತ್ತುಕೊಳ್ಳಬೇಕಿದೆ.ಸರ್ವಸ್ವವನ್ನೂ ಮಕ್ಕಳಿಗೆ ಕೊಡದೆ ತಮ್ಮ ವೃದ್ಧಾಪ್ಯದ ದಿನಗಳಿಗಾಗಿ ಇರಿಸಿಕೊಳ್ಳಬೇಕು.ಮಕ್ಕಳಿಗೆ ಎಜುಕೇಶನ್ ಕೊಡಿಸಬೇಕು ಅಷ್ಟೇ..ಹಾಗೆಂದು ವಿಪರೀತ ಸಾಲ ಮಾಡಿಕೊಂಡು ಓದಿಸುವುದಲ್ಲ.ಅವರು ತೆಗೆದ ಅಂಕಗಳಿಗೆ ಯಾವುದು ಸಿಗುತ್ತದೋ ಅದನ್ನಷ್ಟೇ ಓದಿಸಬೇಕು.

ಎಷ್ಟೇ ತ್ಯಾಗ ಮಾಡಿ ಕಷ್ಟ ಪಟ್ಟು ಬೆಳೆಸಿದರೂ ಮಕ್ಕಳಿಗೆ ಆ ಬಗ್ಗೆ ಒಂದಿನಿತೂ ಕೃತಜ್ಞತೆ ಇರುವುದಿಲ್ಲ.ತಾವು ತಂದೆ ತಾಯಿಗೆ ಮಾಡಿದ್ದೇ ಹೆಚ್ಚೆಂಬ ಭಾವ ಇರುತ್ತದೆ

ಸಾಮಾನ್ಯವಾಗಿ ತಂದೆ ಇರುವ ತನಕ ಸಮಸ್ಯೆ ಅಗುದಿಲ್ಲ.ಯಾಕೆಂದರೆ ದುಡ್ಡು ಅಸ್ತಿ ಎಲ್ಲ ತಂದೆ ಹೆಸರಲ್ಲಿ ಇರುತ್ತದೆ.ತಂದೆ ತೀರಿ ಹೋದ ನಂತರ ಉಳಿಯುವ ತಾಯಿಯ ಹೆಸರಲ್ಲಿ ಯಾವುದೇ ಆಸ್ತಿಪಾಸ್ತಿ ದುಡ್ಡಿಲ್ಲದೇ ಇರುವಾಗ ಸಮಸ್ಯೆ ಶುರುವಾಗುತ್ತದೆ.ತಾಯಿ‌ ಮುಟ್ಟಿದ್ದು ಮಾತನಾಡಿದ್ದು.ಉಸಿರೆಳೆದದ್ದು ಎಲ್ಲದರಲ್ಲಿಯೂ ತಪ್ಪುಗಳು ಕಾಣಿಸುತ್ತವೆ.

ಎಷ್ಟೇ ಪ್ರೀತಿಯಿಂದ ತಮಗಾಗಿ ಏನು ಇರಿಸಿಕೊಳ್ಳದೆಯೇ ಮಕ್ಕಳನ್ನು ಸಾಕಲಿ

ವಯಸ್ಸಾದಾಗ ನನ್ನನ್ನು ಹೆತ್ತದ್ದು ಯಾಕೆ ಸಾಕಿದ್ದು ಯಾಕೆ ಓದಿಸಿದ್ದು ಯಾಕೆ ,ನಿನ್ನಿಂದಾಗಿ ನನ್ನ ಬದುಕು ಹಾಳಾಯಿತು ಎಂಬ ಮಕ್ಕಳ ಸಂಖ್ಯೆ ಹೆಚ್ಚಿದೆ


ದುಡ್ಡಿದ್ದರೆ ಇಂದು ಪೇ ಮಾಡಿ ಇರುವ ವೃದ್ಧಾಶ್ರಮಗಳಲ್ಲಿ ಆರಾಮಾಗಿ ಇರಬಹುದು.ಮಗಳು ಅಳಿಯ ಮಗ ಸೊಸೆಯಂದಿರ ಗಂಟು ಹಾಕಿದ ಮುಖ ನೋಡಿಕೊಂಡು ಬೈದರೂ ಬಡಿದರೂ ಅನುಭವಿಸಿಕೊಂಡು ಇರುವ ಅಗತ್ಯವಿಲ್ಲ.ತಮ್ಮದೇ ವಯಸ್ಸಿನ ಸ್ನೇಹಿತರ ಜೊತೆಗೆ ಆರಾಮಾಗಿ ಬದುಕಬಹುದು.

ಹಾಗಾಗಿ ಅಮ್ಮಂದಿರು ತಮಗೆ ಅರುವತ್ತು ವರ್ಷದ ನಂತರದ ಜೀವನಕ್ಕೆ ಬೇಕಾದಷ್ಟು ದುಡ್ಡನ್ನು ತಮ್ಮ ಹೆಸರಿನಲ್ಲಿಯೇ ಇರಿಸಿಕೊಳ್ಳಬೇಕು

ಮಕ್ಕಳು ಒಳ್ಳೆಯವರೇ ಆಗಿದ್ದರೂ ಅವರಿಗೆ ಭಾರವೆನಿಸಬೇಕಿಲ್ಲ.ತಮ್ಮ ಕೈಲಾದಷ್ಟು ದಿನ ಸ್ವತಂತ್ರವಾಗಿ ಬದುಕಿ ಕೈಲಾಗದಾಗ ಪೇ ಮಾಡುವ ವೃದ್ಧಾಶ್ರಮಕ್ಕೆ ಹೋಗಬಹುದು.ಅಥವಾ ಮಕ್ಕಳೇ ನೋಡಿಕೊಳ್ಳುದಾದರೆ ಅವರ ಜೊತೆಗೂ ಇರಬಹುದು.ಆದರೆ ದುಡ್ಡಿದ್ದರೆ ಬೈದರೂ ಬಡಿದರೂ ಅವರ ಜೊತೆಗೇ ಬದುಕುವ ಅನಿವಾರ್ಯತೆ ಇರುವುದಿಲ್ಲ.ಹಾಗಾಗಿ ಎಚ್ಚತ್ತುಕೊಳ್ಳಬೇಕಿದೆ.

ಇದಲ್ಲದೆ ಇತ್ತೀಚೆಗಿನ ಇನ್ನೊಂದು ಸಮಸ್ಯೆ ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸುವದ್ದು.ಊರಿನಲ್ಲಿರುವ ವೃದ್ಧ ತಂದೆ ತಂದೆ ತಾಯಿಗೆ ಬೇಕಾದದ್ದನ್ನು ತಂದುಕೊಡುವವರಿಲ್ಲ.ಆರೋಗ್ಯ ಹಾಳಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಲ್ಲದ ದುಸ್ಥಿತಿ.ಅಡುಗೆ ಮಾಡಿ ಕೊಡುವವರಿಲ್ಲ.

ಇದಕ್ಕೂ ಪೇ ಮಾಡುವ ವೃದ್ಧಾಶ್ರಮಗಳೇ ಸದ್ಯಕ್ಕೆ ಕಾಣಿಸುವ ಪರಿಹಾರ.

ನಾನಿವತ್ತು ಅಕ್ಕನ ಜೊತೆ ಮಾತನಾಡುವಾಗ ಮಕ್ಕಳು ಚೆನ್ನಾಗಿ ನೋಡಿಕೊಂಡಿರುವ ತಲೆಮಾರಿನಲ್ಲಿ ನನ್ನ ಅಮ್ಮನದೇ ಕೊನೆ ಇರಬಹುದು ಎಂದು ಹೇಳಿದೆ.

ತಮ್ಮ‌ತಮ್ಮನ ಹೆಂಡತಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ.ಅಮೇರಿಕಾದಲ್ಲಿನ ಅಣ್ಣ ಮತ್ತು ದೊಡ್ಡ ತಮ್ಮ ದುಡ್ಡು ಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಮುಂದೆ ನಮ್ಮ ಮಕ್ಕಳಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅವರು ಚೆನ್ನಾಗಿ ನೋಡಿಕೊಂಡರೆ ನಮ್ಮ ಪುಣ್ಯ

ಆದರೆ ನಾವ್ಯಾಕೆ ಅವರಿಗೆ ಭಾರವಾಗಬೇಕು.ನಮ್ಮ‌ಕೈಲಾದಷ್ಟು ದಿನ ಸ್ವತಂತ್ರವಾಗಿದ್ದು.ಮಕ್ಕಳಿಗೂ ಸ್ವತಮತ್ರವಾಗಿ ಬದುಕಲು ಅನುವು ಮಾಡಿಕೊಡುದು ಒಳ್ಳೆಯದಲ್ವಾ? ಕೈಲಾಗದೇ ಇರುವ ಪ್ರಸಂಗ ಬಂದರೆ ಮುಂದಿನದು ನೋಡಿಕೊಂಡರಾಯಿತು.ಆದರೆ ನಾವು ರಿಟೈರ್ಮೆಮಟಿನ ನಂತರದ ಬದುಕಿಗೆ ಬೇಕಾದಷ್ಟು  ದುಡ್ಡು ಹೊಂದಿಸಿಟ್ಟಿರಬೇಕು

ಸಾಕಷ್ಟು ಲೈಫ್ ಇನ್ಷುರೆನ್ಸ್ ಮಾಡಿಸಿ ಇಡುವುದು ಒಳ್ಳೆಯದು.ತಿಂಗಳು ತಿಂಗಳು ಕಟ್ ಆಗುವಾಗ ನಮಗೇನೂ ಅದೊಂದು ಹೊರೆ ಎನಿಸುವುದಿಲ್ಲ.ಆದರೆ ಕಡ್ಡಾಯವಾಗಿ ಸೇವಿಂಗ್ ಅಗಿರುತ್ತದೆ‌.ನಮಗೆ ಅರುವತ್ತು ಎಪ್ಪತ್ತು ವರ್ಷಗಳಾಗುವಾಗ ಪಾಲಿಸಿ‌ ಮೆಚ್ಯೂರ್ ಅಗಿ ನಮಗೆ ಸಾಕಷ್ಟು ದುಡ್ಡು ಬರುತ್ತದೆ.ಜೊತೆಗೆ ಆರೋಗ್ಯ ವಿಮೆಯನ್ನೂ ಮಾಡಿಸಿರಬೇಕು.ಒಮ್ಮೆ ಆರೋಗ್ಯ ಸಮಸ್ಯೆ ಬಂದ ನಂತರೆ ಜೀವ ವಿಮೆ ಅಥವಾ ಆರೋಗ್ಯ ವಿಮೆ ಮಾಡಿಸಲು ಆಗುವುದಿಲ್ಲ.ಅದಕ್ಕಾಗಿ ಸಣ್ಣ ವಯಸ್ಸಿನಲ್ಲಿ ಆರೋಗ್ಯವಂತ ರಾಗಿ ಇರುವಾಗಲೇ ಮಾಡಿಸಿರಬೇಕು.ಜೊತೆಗೆ ಪೋಸ್ಟಲ್ ಡಿಪಾರ್ಟ್ ಮೆಂಟಿನಲ್ಲಿ ಸೇವಿಂಗ್ ಮಾಡಿಡಬಹುದು.

ಏನೇ ಆದರೂ ಅರುವತ್ತರ ನಂತರದ ಬದುಕಿಗೆ ನಮ್ಮಲ್ಲಿ ಸಾಕಷ್ಟು ದುಡ್ಡಿರಬೇಕು.


ನನ್ನ ಸ್ನೇಹಿತೆಯೊಬ್ಬಳ ತಂದೆ ತೀರಿ ಹೋಗಿ ತಾಯಿಯ ಕೈಯಲ್ಲಿ ದುಡ್ಡು ಇತ್ತು.ಮಗನಿಗೆ ಒಳ್ಳೆಯ ಕೆಲಸ ಇತ್ತು.ಈ ನನ್ನ ಸ್ನೇಹಿತೆ ಮಗಳಿಗೆ ಡೈವರ್ಸ್ ಆಗಿತ್ತು.ಅವಳ ಬಾಡಿಗೆ ಮನೆಗೆ ಹೋಗಿದ್ದಾಗ  ಬೆಂಗಳೂರಿನಲ್ಲಿ ಮನೆ ಕಟ್ಟಿಸಿಕೊಡುವ ವಿಚಾರ ಬಂತು.ಆಗಪೋನ್ ಕರೆ ಬಂದು  ನನ್ನ ಸ್ನೆಹಿತೆ ಮನೆಯ ಹೊರಗೆ ಹೋಗಿದ್ದಳು.ನಾನು ಮಾತಿ‌ ನಡುವೆ ನೀವು ಸಾಕಷ್ಟು ದುಡ್ಡು ದುಡ್ಡು ಇರಿಸಿಕೊಳ್ಳಿ ಎಂದಿದ್ದೆ.ನಂತರ ಒಂದಿನ ಅವರು ಮಾತ್ರ ನಮ್ಮನೆಗೆ ಬಂದು ಮಾತನಾಡಿದರು.ತಮ್ಮಲ್ಲಿರುವ 80% ದುಡ್ಡು ಕೊಟ್ಟರೆ ಮಾತ್ರ ಮಗಳಿಗೆ ಮನೆ ಆಗಲು ಸಾಧ್ಯ.ಆದರೆ ನಂತರ ನನ್ನ ಕೈಯಲ್ಲಿ ಹತ್ತು ಲಕ್ಷ ಉಳಿಯುತ್ತದೆ ಅಷ್ಟೇ ..ಏನು ಮಾಡುದು ಎಂದಿದ್ದರು.ಆಗ ನಾನು ಅರ್ಧಾಂಶ ಇಟ್ಟುಕೊಂಡು ಉಳಿದ ಅರ್ಧಾಂಶದಲ್ಲಿ ಸೈಟ್ ತೆಗೆಯಿರಿ.ಅದು ನಿಮ್ಮ ಹೆಸರಿನಲ್ಲಿಯೇ ಇರಲಿ‌.ನಂತರ ಸಾಲ ಮಾಡಿ ಅವರು ತಾಯಿ ಮತ್ತು ಮಗ( ನನ್ನ ಸ್ನೇಹಿತೆ ಮತ್ತು ಅವರ ಮಗ)ಮನೆ ಕಟ್ಟಿಕೊಳ್ಳಲಿ ಎಂದೆ.ಅವರು ಹಾಗೆಯೇ ಮಾಡಿದ್ದರು.ನಂತರ ಯಾಕೋ ಮಗಳ ಮನೆಯಲ್ಲಿಯೂ ಸರಿ ಹೋಗದೆ ಕೆಲ ವರ್ಷ ಗಂಡ ಕಟ್ಟಿಸಿದ್ದ ಮನೆಯಲ್ಲಿ ಅಡಿಗೆಗೆ ಕೆಲಸಕ್ಕೆ ಕೆಲಸದವರನ್ನು ಇರಿಸಿಕೊಂಡು ಸ್ವತಂತ್ರವಾಗಿ ಬದುಕಿದ್ದರು.ತೀರಾ ಓಡಾಡಲು ಆಗದೇ ಇದ್ದಾಗ ಪೈಡ್ ವೃದ್ಧಾಶ್ರಮಕ್ಕೆ ಹೋಗಿದ್ದರು.ಮಕ್ಕಳು ಅಗಾಗ ಮನೆಗೆ ಕರೆ ತರ್ತಾ ಇದ್ದರು.ಅಲ್ಲಿಗೂ ಹೋಗ್ತಾ ಇದ್ದರು.

ಅವರು ವೃದ್ಧಾಶ್ರಮವನ್ನು ಇಷ್ಟ ಪಡುತ್ತಾ ಇದ್ದರು.ಒಂದಿನ ಮಗ ಕರೆದುಕೊಂಡು ಬಂದಿರುವಾಗ ಮಗನ ಮಡಿಲಲ್ಲಿ ಪ್ರಾಣ ಬಿಟ್ಟಿದ್ದರು.


ಮಕ್ಕಳಲ್ಲೂ ನಾನು ಹೇಳುವುದಿಷ್ಟೇ..ವಯಸ್ಸಾದ ತಂದೆ ತಾಯಿಯರನ್ನು ಮಾತು ಮಾತಿಗೆ ಹಂಗಿಸಿ ಕಣ್ಣೀರು ಹಾಕುವಂತೆ ಮಾಡಬೇಡಿ.ಎಲ್ಲ ತಂದೆ ತಾಯಂದಿರೂ ತಮಗಾಗಿ ಏನೂ ಇರಿಸದೆ ಮಕ್ಕಳಿಗಾಗಿ ತಮ್ಮ ಆಸೆ ಅಕಾಂಕ್ಷೆಗಳನ್ಮು ತ್ಯಾಗ ಮಾಡಿರ್ತಾರೆ.ಲೋಪ ದೋಷಗಳಿಲ್ಲದ ಮನುಷ್ಯರಿಲ್ಲ.ನಮ್ಮಲ್ಲಿ ಇತರರಿಗಿಂತ ನೂರು ಪಟ್ಟು ಹೆಚ್ಚು ಇರ್ತದೆ.ನಮಗೆ ನಮ್ಮ ಬೆನ್ನು ಕಾಣುವುದಿಲ್ಲ ಅಷ್ಟೇ..ನಾವು ನಮ್ಮ ಮೂಗಿನ ನೇರಕ್ಕೆ ಅಲೋಚಿಸುತ್ತೇವೆ ಅಷ್ಟೇ..


ನಿಮಗೆ ಸಾಧ್ಯವಾದರೆ ನೀವೇ ಚೆನ್ನಾಗಿ ನೋಡಿಕೊಳ್ಳಿ.ಅವರಿಗೆ ತಾವು ಮಕ್ಕಳಿಗೆ ಭಾರ ಆಗಿದ್ದೇವೆ ಎಂಬ ಭಾವ ಬರದಂತೆ ನೋಡಿಕೊಳ್ಳಬೇಕು.ಆಗದೇ ಇದ್ದರೆ ಸಾಕಷ್ಟು ಸೌಲಭ್ಯಗಳಿರುವ  ಪೇ ಮಾಡುವ ವೃದ್ಧಾಶ್ರಮಗಳಿಗೆ ಸೇರಿಸಿ ಇಲ್ಲವೇ ಅವರಿಗೆ ಸ್ವತಂತ್ರವಾಗಿ ಬದುಕುವಂತೆ ವ್ಯವಸ್ಥೆ ಮಾಡಿಕೊಡಿ..ಹುಟ್ಟುವಾಗ ಆರಿಂಚು ಉದ್ದ ಇರುವ ಮಗು ಗಾಳಿಯಲ್ಲಿ ಬೆಳೆದು ಆರಡಿ ಆಗುವುದಿಲ್ಲ.ಅವರನ್ನು ಅಷ್ಟು ದೊಡ್ಡ ಮಾಡಲು ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ.ಮಕ್ಕಳಿಗೂ ಕರ್ತವ್ಯ ಇದೆ ಇದನ್ನು ಮರೆಯಬಾರದು.

ದೂರದಲ್ಲಿದ್ದರೆ ದಿನಕ್ಕೊಮ್ಮೆಯಾದರೂ  ತಂದೆ ತಾಯಿಯರಿಗೆ  ಅಜ್ಜ ಅಜ್ಜಿಯರಿಗೆ ಫೋನ್ ಮಾಡಿ ಊಟ ಮಾಡಿದೆಯಾ ತಿಂಡಿ ತಿಂದೆಯಾ ಎಂದು ವಿಚಾರಿಸಿ.ಹೆತ್ತವರಂತೆಯೇ ಅಜ್ಜ ಅಜ್ಜಿ ಕೂಡ ನಿಮಗಾಗಿ ತ್ಯಾಗ ಮಾಡಿರ್ತಾರೆ ಮರೆಯಬೇಡಿ..ಅವರನ್ನು ಪ್ರೀತಿಯಿಂದ ಕಾಣಿ..ಅಜ್ಜ ಅಜ್ಜಿಯರನ್ನು ಹೆತ್ತವರಂತೆಯೇ ಕಾಣಬೇಕು.ಅವರನ್ನು ನಿರ್ಲಕ್ಷ್ಯ ಮಾಡಿದರೆ ಮನದೊಳಗೆ ನೊಂದುಕೊಳ್ತಾರೆ.ಅವರ ಮನದ ನೋವಿನ ಕಾವು ನಮಗೆ ತಟ್ಟಬಹುದು..ಅವರೆಲ್ಲ ಶಾಶ್ವತರಲ್ಲ..ಬದುಕಿರುವಾಗ ಚಂದಕೆ ನೋಡಿಕೊಳ್ಳಬೇಕು.ಬದುಕಿರುವಷ್ಟೂ ದಿನ ಹಂಗಿಸಿ ಕಣ್ಣೀರು ಹಾಕಿಸಿ ನಂತರ ಬಹಲ ವೈಭವದ ಬೊಜ್ಜ ಮಾಡಿದರೆ ಏನೂ ಪ್ರಯೋಜನವಿಲ್ಲ..ಪ್ರೀತಿ ಗೌರವವನ್ನು ಬಾಯಿ ಬಿಟ್ಟು ಆಡಿ ತೋರಿಸಬೇಕು.ನಿಮ್ಮಿಂದಾಗಿಯೇ ನಾನು ಈ ಉತ್ತಮ ಸ್ಥಿತಿಗೆ ಬಂದೆ ಎಂದು ಹೆತ್ತವರಿಗೆ ಅಜ್ಜ ಅಜ್ಜಿಯರಿಗೆ ಹೇಳಬೇಕು..ಮನದಲ್ಲಿ ಪ್ತೀತಿ ಇದೆ ಎಂದರೆ ಸಾಲದು..ಒಂದು ಸೀರೆಯೋ ಶಲ್ಯವೋ ಸ್ವೆಟರೋ ತೆಗೆದುಕೊಡಬೇಕು.ಆಗ ಅವರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳು ತಂದುಕೊಟ್ಟಿದ್ದಾರೆ ಎಂದು ತಮ್ಮ ಸರೀಕರಲ್ಲಿ ಹೇಳಿಕೊಂಡು ಹೆಮ್ಮೆ ಪಡ್ತಾರೆ..ಅವರು ಅವರಿಗಾಗಿ ಏನನ್ನೂ ಬಯಸುವುದಿಲ್ಲ.ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಲುತ್ತಿದ್ದಾರೆ ಎಂದು ತೋರಿಸಲು ಇಂತಹದ್ದನ್ನು ಮನದೊಳಗೆ ಬಯಸಿರುತ್ತಾರೆ

Thursday 11 August 2022

 ನಾನೂ ಲೋಕಾಯಕ್ತಕ್ಕೆ ದೂರು ಕೊಡಲು ಹೋಗಿದ್ದೆ


ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿ ನಡೆದ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು.ಎಂಎ ( ಸಂಸ್ಕೃತ) ಮೊದಲ ರ‌್ಯಾಂಕ್,ಎಂಎ( ಹಿಂದಿ) ಎಂಎ ( ಕನ್ನಡ) ನಾಲ್ಕನೆಯ ರ‌್ಯಾಂಕ್ ,ಎಂಫಿಲ್,ಹಾಗೂ ಎರಡು ಪಿಎಚ್ ಡಿ ಪದವಿಗಳನ್ನು ಪಡೆದು ಅದಾಗಲೇ 17 ಸಂಶೋಧನಾ ಕೃತಿಗಳನ್ನು ಆರುನೂರರಷ್ಡು ಬರಹಗಳನ್ನು ಬರೆದಿದ್ದು ಪ್ರಕಟವಾಗಿತ್ತು.ಸುಮಾರು 200 ರಷ್ಟು ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದೆ.ಹಾಗಾಗಿ ಅಕಾಡೆಮಿಕ್ ಫರ್ಪಾರ್ಮೆಕ್ಸ್ ಇಂಡಿಕೇಟರ್  1167 ಇತ್ತು.ಸಾಮಾನ್ಯವಾಗಿ ಪ್ರೊಫೆಸರ್ ಗೆ ಕೂಡ ಇಷ್ಡು ಸೈಕ್ಷಣಿಕ ನಿರ್ವಹಣಾಂಕಗಳನ್ನು ಗಳಿಸಲು ಕಷ್ಟದ ವಿಚಾರ.ನನ್ನ ಅಧ್ಯಯನದ ಬಗ್ಗೆ ತಿಳಿದಿದ್ದ ಡಾ.ಚಿನ್ನಪ್ಪ ಗೌಡ,ಡಾ.ಸಬೀಹಾ ಭೂಮಿ ಗೌಡರು ಆಯ್ಕೆ ಸಮಿತಿಯಲ್ಲಿದ್ದರು ಹಾಗಾಗಿ ನನ್ನ ಆಯ್ಕೆ ಆಗುತ್ತದೆ ಎಂದು ನಾನು ನಂಬಿದ್ದೆ

ಆದರೆ ನಡೆದದ್ದೇ ಬೇರೆ..ನನ್ನ ಅರ್ಧದಷ್ಟು ಸೈಕ್ಷಣಿಕ ನಿರ್ವಹಣಾಂಕ ಇಲ್ಲದ ಕೇವಲ ಒಂದು ಎಂಎ ಒಂದು ಪಿಎಚ್ ಡಿ ,ಎರಡು ಸಂಶೋಧನಾ ಕೃತಿ ರಚಿಸಿದ್ದ ಧನಂಜಯ ಕುಂಬಳೆ ಆಯ್ಕೆ ಆಗಿದ್ದರು

ಕನ್ನಡ ವಿಭಾಗ ಎಂದಲ್ಲ ಎಲ್ಲ ವಿಭಾಗಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು‌ದುಡ್ಡಿನ ಹೊಳೆಯೇ ಹರಿದಿತ್ರು.ಇನ್ಫ್ಲೂಯೆನ್ಸ್ ಇತ್ತು.ಕೆಲವು ಸಿಂಡಿಕೇಟ್ ಮೆಂಬರ್ ಗಳು ತಮ್ಮ ತಮ್ಮ ಜಾತಿಯ ತಮಗೆ ಬಕೆಟ್ ಹಿಡಿದವರನ್ನು ಆಯ್ಕೆ ಮಾಡಿಸುವಲ್ಲಿ ಸಫಲರಾಗಿದ್ದರು 


ಆಗ ನಾನು ಲೋಕಾಯುಕ್ತಕ್ಕೆ ದೂರು ಕೊಡಲು ಹೋಗಿದ್ದೆ.ಮಂಗಳೂರಿನ ಉರ್ವ ಸ್ಟೋರ್ ? ಅಶೋಕ ನಗರದಲ್ಲಿ ಲೋಕಾಯುಕ್ತ ಕಛೇರಿ ಇತ್ತು

ಅಲ್ಲಿ ಯಾರನ್ನೋ ಕಂಡು ವಿಷಯ ಹೇಳಿ ದೂರು ಬರೆದು ಕೊಟ್ಟು ತನಿಖೆ ನಡೆಸುವಂತೆ ಮನವಿ ಮಾಡಿದೆ.ಆಗ ಅಲ್ಲಿ ಅಫಿದಾವತ್ ಮಾಡಿ ದೂರು ? ಕೊಡಬೇಕು ಹಾಗಿದ್ದರೆ ಮಾತ್ರ ತನಿಖೆ ನಡೆಸಲು ಸಾಧ್ಯ ಎಂದರು‌

ಇದು ನಿಜವೇ ? ನನ್ನನ್ನು ಸಾಗ ಹಾಕಲು ಹೇಳಿದರಾ ಎಂದು ನನಗೆ ಗೊತ್ತಿಲ್ಲ.ಏನೆಂದು ಅಫಿದಾವತ್ ಮಾಡಿಸುದು ?ಆಗ ಒಳ್ಳೆಯ ಲಾಯರ ಪರಿಚಯವೂ ನನಗಿರಲಿಲ್ಲ 

ಹಾಗಾಗಿ ನಾನು ಮತ್ತೆ ಅಫಿದಾವತ್ ಮಾಡಿ ದೂರು ನೀಡಲಿಲ್ಲ.

ಇತ್ತೀಚೆಗೆ ಮಂಗಳೂರು ಯೂನಿವರ್ಸಿಟಿಯ ನೇಮಕಾತಿಯಲ್ಲಿನ ಅಕ್ರಮಗಳು ಕನ್ಪರ್ಮ್ ಆಗಿದ್ದು ಏನೋ ಕ್ರಮತೆಗೆದುಕೊಳ್ಳುವಂತೆ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಗಳು ವೀಸಿಗೆ ಸೂಚಿಸಿದ್ದಾರೆಂದು ಓದಿದ ನೆನಪು

ಈಗ ಅಯ್ಕೆ ಸಮಿತಿಯಲ್ಕಿದ್ದವರೆಲ್ಲ ಯೂನಿವರ್ಸಿಟಿಗಳ ವೀಸಿಗಳಾಗಿ ನಿವೃತ್ತರಾಗಿದ್ದು ಬಹಳ ಆದರ್ಶದ ಮಾತುಗಳನ್ನಾಡುವುದನ್ನು ಗಮನಿಸಿದಾಗ ಇವರ ಸೋಗಲಾಡಿತನದ ಬಗ್ಗೆ ನನಗೆ ಅಸಹ್ಯ ಎಂದೆನಿಸುತ್ತದೆ 

ನಾನು ಆಗಲೇ ಪಟ್ಟು ಹಿಡಿದು ಅಫಿದಾವತ್ ಮಾಡಿ ದೂರು ನೀಡಬೇಕಿತ್ತು ಎಂದು ಈಗ ನನಗನಿಸುತ್ತದೆ ಈ ಸೋಗಲಾಡಿಗಳ ಬಣ್ಣ ಆಗ ಬಯಲಾಗುವ ಸಾಧ್ಯತೆ ಇತ್ತು

ಮುಂದಾದರೂ ಈ ಬಗ್ಗೆ ಹೋರಾಟ ಮಾಡಬೇಕೆಂದಿರುವೆ

ಯಾವಾಗ ? ಹೇಗೆ ? ಮತ್ತೆ KAT ಗೆ ಹಾಕಬಹುದೆಂದು ಆತ್ಮೀಯರಾಗಿರುವ ವಕೀಲರೊಬ್ಬರು ಸಲಹೆ ನೀಡಿದ್ದಾರೆ.

ಅರವಿಂದನಿಗೆ ಒಂದೆರಡು ವರ್ಷ ಲಾಯರಾಗಿ ಅನುಭವವಾದ ನಂತರ ಯತ್ನ ಮಾಡಬೇಕೆಂದಿರುವೆ.ನನಗೆ ಇನ್ನು ಹತ್ತು ವರ್ಷ ಸರ್ವಿಸ್ ಇರುವುದು‌ನಮ್ಮ‌ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದೇನೆ,ಮನೆ ಸಮೀಪದ ಕಾಲೇಜಿಗೆ ಟ್ರಾನ್ಸ್ಫರ್ ಸಿಕ್ಕಿದೆ.ಇಲ್ಲಿಯೇ ಮನೆ ಕಟ್ಟಿ ನೆಲೆಯಾಗಿದ್ದೇವೆ.ಹಾಗಾಗಿ ಇನ್ನು ಮಂಗಳೂರು ಯೂನಿವರ್ಸಿಟಿಗಾಗಲೀ ಇತರೆಡೆಗಳಿಗಾಗಲೀ ಹೋಗುವ ಮನಸಿಲ್ಲ.ಆದರೆ ದುಡ್ಡು ಇನ್ಫ್ಲೂಯೆನ್ಸ್ ನಿಂದಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು ಹೋರಾಡಬೇಕಿದೆ 

ನೋಡೋಣ ದೇವರ ದಯೆಯಿಂದ ಹೋರಾಡಿ ಗೆಲ್ಲಬೇಕೆಂದಿರುವೆ  

ಎಸಿಬಿ  ಲೋಕಾಯುಕ್ತದ ಅಡಿಗೆ ಬಂದ ವಿಚಾರ ಓದಿದಾಗ ಇದೆಲ್ಲ ನೆನಪಾಯ್ತು.

Saturday 11 June 2022

ಕೃತಿಚೋರ ವಿಶ್ವನಾಥ ಬದಿಕಾನ

 ಕೃತಿ ಚೋರ ವಿಶ್ವನಾಥ ಬದಿಕಾನ 


#ಕೃತಿಚೋರ_ವಿಶ್ವನಾಥ_ಬದಿಕಾನ  ರೇ 

ನನ್ನ ಬೈಲ ಮಾರಿ ನಲಿಕೆ ಎಂಬ ಸಂಶೋಧನಾ ಬರಹವನ್ನು ನೀವು ಕಣಜದಿಂದ ಕಾಪಿ ಮಾಡಿದ್ದು .ಬ್ಲಾಗ್ ನಿಂದ ಅಲ್ಲ ಜಾನಪದ ಕರ್ನಾಟಕ ವಿದ್ವಾತ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ ಕಣಜ ಜಾಲತಾಣದಲ್ಲಿ ಇತ್ತು.ಅದರಿಂದ ಕಾಪಿ ಮಾಡಿದೆ ಎಂದು ಆತ್ಮ ಸಾಕ್ಷಿಯನ್ನು ಮಾರಿಕೊಂಡು ಧೂರ್ತರ ರಕ್ಷಣೆಗಾಗಿ ಹಸಿ ಹಸಿ ಸುಳ್ಳು ಹೇಳಿದ್ದೀರಿ.ಕಣಜದಿಂದ ಕದ್ದರೂ ಬ್ಲಾಗ್ ನಿಂದ ಕದ್ದರೂ ಕೃತಿ ಚೌರ್ಯವೇ ತಾನೇ..ಕಣಜದಲ್ಲಿ ಇದ್ದದ್ದೂ ನನ್ನ ಬರಹವೇ ತಾನೇ..

ಕಣಜದಿಂತ ಕಾಪಿ ಮಾಡಿದ್ದರೆ ಬ್ಯೂಟಿ ಅಫ್ ತುಳುನಾಡು fb ಲಿಂಕ್ ಅನ್ನು ಉಲ್ಲೇಖದಲ್ಲಿ ಯಾಕೆ ಹಾಕಿದ್ದೀರಿ ? ಕಣಜದಲ್ಲಿ ಜಾನಪದ ಕರ್ನಾಟಕದಲ್ಲಿದ್ದ ನನ್ನ ಬರಹ ಇದ್ದಿದ್ದಾದರೆ ಅದರ ಲ್ಲಿ ಬರಹದ ಆರಂಭದಲ್ಲಿಯೇ ಲೇಖಕಿಯಾದ ನನ್ನ ಹೆಸರು ಇತ್ತಲ್ವಾ? ಕಾಪಿ ಮಾಡಿ ನಿಮ್ಮ ಹೆಸರಿನಲ್ಲಿ ಯಾಕೆ ಹಾಕಿಕೊಂಡಿರಿ ? ಜಾನಪದ ಕರ್ನಾಟಕದ ಬರಹದಲ್ಲಿ ಒಂದೇ ಒಂದು ಅಕ್ಷರ ದೋಷವಿಲ್ಲ.ಹಾಗಾಗಿ ಅದೇ ಬರಹ ಕಣಜದಲ್ಲಿ ಬಂದಿದ್ದಾದರೆ ಅದರಲ್ಲೂ ಒಂದೇ ಒಂದು ಅಕ್ಷರ ದೋಷವಿರಲು ಸಾಧ್ಯವಿಲ್ಲ.ಆದರೆ ನೀವು ನಿಮ್ಮ ಹೆಸರಿನಲ್ಲಿ ವಿಕಿಪೀಡಿಯಕ್ಕೆ ಹಾಕಿದ ಬರಹದಲ್ಲಿ ಅನೇಕ ವಿಶಿಷ್ಟ ಅಕ್ಷರ ದೋಷಗಳಿವೆಯಲ್ಲ .ಅದು ಬ್ಲಾಗ್ ನಲ್ಲಿರುವ ಅಕ್ಷರ ದೋಷಗಳೇ ಅಗಿವೆಯಲ್ಲ ಯಾಕೆ ? ಆ ಅಕ್ಷರ ದೋಷ ಮಾಡಬೇಕೆಂದರೂ ಮಾಡಲಾಗದಂಥಹದ್ದು.ಬ್ಲಾಗ್ ಬರೆಯಲು ತೊಡಗಿದ ಆರಂಭಿಕ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯ ಅರಿವಿಲ್ಲದೇ ಇದ್ದಾಗ ನನ್ನಿಂದ ಆದ ವಿಶಿಷ್ಟ ಅಕ್ಷರ ದೋಷಗಳು ಅವು..ಅದೇ ಭಾಗದಲ್ಲಿ ಅದೇ ಶಬ್ದದಲ್ಲಿ ಅದೇ ರೀತಿಯ ದೋಷಗಳು ನಿಮ್ಮ ಬರಹದಲ್ಲಿ ಯಾಕೆ ಇದೆ ?ನೀವೇ ಕಣಜದ್ಲಿನ ನನ್ನ ಬರಹದಿಂದ  ಮಾಹಿತಿ ಪಡೆದು ಬರೆದ ಬರಹವಾದರೆ  ಬ್ಲಾಗ್ಬರಹದ ಯಥಾವತ್ ಕಾಪಿ  ಯಾಕಿದೆ ? ಯಾವ ಬರಹದಿಂದ ಮಾಹಿತಿ ಪಡೆದಿರೋ ಆ ಬರಹದ ಹೆಸರು ಮತ್ತು ಅದರ ಲೇಖಕಿಯಾದ ನನ್ನ ಹೆಸರನ್ನು ಯಾಕೆ ಹಾಕಿಲ್ಲ? ಪೋನ್ ನಲ್ಲಿ ಮಾತನಾಡುವಾಗ ಬ್ಲಾಗ್ ನಿಂದ ಕಾಪಿ ಮಾಡಿದ್ದು ಎಂದು ಒಪ್ಪಿದವರು ನಂತರ ಪೋಲೀಸ್ ಸ್ಟೇಶನ್ ನಲ್ಲಿ ಮತ್ತೆ ಪುನಃ ಕಣಜದಿಂದ ಬರೆದದ್ದು ಎಂದು ಸುಳ್ಳು ಯಾಕೆ ಹೇಳಿದಿರಿ? ಕಣಜದಲ್ಲಿ ಇದ್ದದ್ದು ಕೂಡ ನನ್ನ ಬರಹವೇ ಎಂಬುದನ್ನು ಯಾಕೆ ಮುಚ್ಚಿ ಇಟ್ಟಿರಿ? ನಿಮ್ಮದೇ ದ್ವನಿ ರೆಕಾರ್ಡ್ ಅನ್ನು ಫೇಕ್ ಎಂದು ಯಾಕೆ ಹೇಳಿದಿರಿ ?ಯಾರ ರಕ್ಷಣೆಗಾಗಿ ಕೃತಿ ಚೋರನೆಂಬ ಬಿರುದು ಧರಿಸಿ ನಿಮಗೆ ಬದಕು ಕೊಟ್ಟ ಖ್ಯಾತ ಶಿಕ್ಷಣ ಸಂಸ್ಥೆ ಸೈಂಟ್ ಅಲೋಷಿಯಸ್ ಕಾಲೆಜಿಗೆ ಕಳಂಕ ತಂದಿರಿ ?  ಆತ್ಮ ಸಾಕ್ಷಿ ಇದ್ದರೆ  ಮಾನ ಮರ್ಯಾದೆ ಇದ್ದರೆ ಉತ್ತರಿಸಿ,ಕಣಜದಲ್ಲಿತ್ತು ಎಂದು ನೀವು ವಾದಿಸುವ ಜಾನಪದ ಕರ್ಣಾಕದ ನನ್ನ ಬರಹ ಇಲ್ಲಿ ಹಾಕಿದ್ದೇನೆ

https://m.facebook.com/story.php?story_fbid=pfbid02RyCKRawtF8ST2UqypVnNitbKnvcjuQKVoP8f56QTSYWuFaqoGEYZYAMs1N4fgvp1l&id=100003459322515

 ಇದರಲ್ಲಿ ಇಲ್ಲದ ,ನನ್ನ ಬ್ಲಾಗ್ ನಲ್ಲಿರುವ ಅಕ್ಷರ ದೋಷಗಳಿರುವ ನಿಮ್ಮ ವಿಕಿಪಿಡಿಯ ಬರಹದ ಭಾಗವನ್ನೂ ಹಾಕಿದ್ದೇನೆ..ಪರಿಶೀಲಿಸಿ ಉತ್ತರಿಸಿ..ಇನ್ನೂ ಸುಳ್ಳನ್ನೇ ಸಾಧಿಸುತ್ತಾ ಇರುವುದಾದರೆ ಶಾಶ್ವತವಾಗಿ  #ಕೃತಿ_ಚೋರ_ವಿಶ್ವನಾಥ_ಬದಿಕಾನ ಎಂಬ ಬಿರುದನ್ನು ಹಾಕಿಕೊಳ್ಳಿ

ಅಂದ ಹಾಗೆ ಕಣಜದಿಂದ as it is ಕಾಪಿ ಮಾಡುದು ಬಿಡಿ,ಅದರಿಂದ ಮಾಹಿತಿ ಪಡೆದು ಬಳಸಲೂ ಕೂಡ ಮೂಲ ಲೇಖಕರ ಅನುಮತಿ ಪಡೆಯಬೇಕೆಂದು ಕಣಜದಲ್ಲಿಯೇ ಹಾಕಿದ್ದಾರಲ್ಲ..ಮತ್ತೆಯೂ ನನ್ನ ಬರಹವನ್ನು ನನ್ನ ಅನುಮತಿ ಇಲ್ಲದೆ ಯಾಕೆ ಕದ್ದು ನಿಮ್ಮ ಹೆಸರಿನಲ್ಲಿ ಬಳಸಿದಿರಿ..

Friday 13 May 2022

ನನಗೂ ಆತ್ಮವಿದೆ ಅದಕ್ಕೂ ಕಥೆ ಇದೆ :

 ನನ್ನ ಧ್ವನಿ ಉಡುಗಿದೆ

ಸುತ್ತ ಮುತ್ತ ಎತ್ತ ನೋಡಿದರೂ ಭ್ರಷ್ಟಾಚಾರದ ಕಂಬಂಧ ಬಾಹುಗಳು ಎಲ್ಲೆಡೆ ಹರಡಿ ಅಟ್ಟಹಾಸ ಮಾಡುತ್ತಿವೆ.ಎಫಡಿಎ  ಹಿಡಿದು ಯೂನಿವರ್ಸಿಟಿ ತನಕದ ಎಲ್ಲ ಹುದ್ದೆಗಳು 30-70 ಲಕ್ಷಕ್ಕೆ ಬಿಕರಿಯಾಗಿದೆ.

ನಮ್ಮ‌ಬಡಮಕ್ಕಳು ಊಟ ತಿಂಡಿಯ ಪರಿವೆಯಿಲ್ಲದೆ ಓದುತ್ತಿದ್ದಾರೆ.ಯಾಕೆಂದರೆ ಚೆನ್ನಾಗಿ ಓದಿ ಮಕ್ಕಳೇ..ಉತ್ತಮ‌ಅಂಕ ಪಡೆದವರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ ,ಸರ್ಕಾರಿ ಉದ್ಯೋಗ ಭದ್ರತೆಯನ್ನು ಕೊಡುತ್ತದೆ ಎಂಬ ಭರವಸೆಯನ್ನು ನಾವು ಸದಾ ತುಂಬುತ್ತಿರುತ್ತೇವೆ

ಮೊದ ಮೊದಲು ಈ ಮಾತು ಹೇಳುವಾಗ ನನಗೂ ಈ ಬಗ್ಗೆ ತುಂಬಾ ಭರವಸೆಯಿತ್ತು

ಯಾಕೆಂದರೆ 2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಯಾವುದೇ ದುಡ್ಡು ವಶೀಲಿ ಇಲ್ಲದೆ ಕೇವಲ ಅರ್ಹತೆಯಿಂದಲೇ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆಯನ್ನು ಪಡೆದವಳು ನಾನು.

ಈ ನನ್ನ ಮಕ್ಕಳಂತೆಯೇ ನಾನೂ ಕೆಲಸದ ಜೊತೆಗೆ ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದೆ.ನನಗೊಂದು ಕನಸಿತ್ತು.ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ದೊಡ್ಡದಾದ ಕನಸು ಕಾಣಿರಿ ಎಂದಿದ್ದರಲ್ಲ.ಅಂತೆಯೇ ನನ್ನ‌ ಕನಸೂ ಕೂಡ ನನ್ನ ಪಾಲಿಗೆ ದೊಡ್ಡದೇ ಇರಬೇಕು.ಹಾಗಾಗಿಯೇ ಡಾ.ಅಮೃತ ಸೋಮೇಶ್ವರರರಂತಹ ಹಿರಿಯರೂ ನನಗೆ ಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದು ಹಿತ ನುಡಿದಿದ್ದರು.ಬಹುಶಃ ಅದಾಗಲೇ ಯೂನಿವರ್ಸಿಟಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಅವರಿಗೆ ಅವರಿವಿದ್ದಿರಬಹುದೋ ಏನೋ.ಇರುವ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಹುದ್ದೆಯಲ್ಲಿಯೇ ತೃಪ್ತಿ ಪಡುವುದು ಒಳ್ಳೆಯದೆಂದು ಹೇಳಿರಬಹುದು.ಈ ಮಾತು ನಾನು ಮಾತ್ರ ವಲ್ಲ ನನ್ನ ಸ್ನೇಹಿತರಾದ ನನ್ನ ಜೊತೆಗೆ ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಹುದ್ದೆಯನ್ನು ಪಡೆದ ಬಹುಮುಖೀ ಪ್ರತಿಭಾವಂತ ಡಾ.ಶ್ರೀಧರ ಹೆಗಡೆ ಭದ್ರನ್ ಅವರೂ ಕೇಳಿದ್ದರು‌ಅವರ ಹಿತೈಷಿಗಳು ಯಾರೋ ಅವರಿಗೆಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದಿದ್ದ ಬಗ್ಗೆ ಮಾತಿನ ನಡುವೆ ನನ್ನಲ್ಲಿ ಒಮ್ಮೆ ಅವರು ಹೇಳಿದ್ದರು

ಪ್ರಾಧ್ಯಾಪಕರಿಗೆ ಬೇಕಾಗ ಎಲ್ಲ ಅರ್ಹತೆಯನ್ನು ಪಡೆದ ನಂಯರ ಅದನ್ನು ಬಯಸುವುದು ಮಹತ್ವಾಕಾಂಕ್ಷೆ ಆಗುತ್ತದಾ ? ಏನೋ ನನಗೆ ಗೊತ್ತಿಲ್ಲ.ನನಗೆ ಅದು ಈಗಲೂ ತಪ್ಪೆನಿಸಿಲ್ಲ

2009 ರಲ್ಲಿ ಸರ್ಕಾರಿ ಉದ್ಯೋಗಕ್ಕೆನಾನು ಸೇರುವಾಗ ನನ್ನ‌ಮೊದಲ ಡಾಕ್ಟರೇಟ್ ಅಧ್ಯಯನದ ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಿ ಆಗಿತ್ತು.ಮತ್ತೆ ಸ್ವಲ್ಪ ಸಮಯದ ಒಳಗೆ ಡಾಕ್ಟರೇಟ್ ಪದವಿಯನ್ನು ಪಡೆದೆ.

ನಾನು ಬೆಳ್ಳಾರೆ ಕಾಲೇಜಿಗೆ ಸೇರಿದಾಗ ಅದು ಸುವರ್ಣ ಮಹೋತ್ಸವವನ್ನು ಆಚರಿಸುತ್ತಾ ಇತ್ತು.ಆ ಐವತ್ತು ವರ್ಷಗಳಲ್ಲಿ ಆ ಕಾಲೇಜಿನ ಮೊದಲ ಡಾಕ್ಟರೇಟ್ ಪದವಿ ಪಡೆದ ಮೊದಲ ಉಪನ್ಯಾಸಕಿ ನಾನಾಗಿದ್ದೆ.

.ಪಿಯು ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಮನ್ನಣೆ ಇಲ್ಲ.ಹೆಚ್ಚಾಗಿ ಪ್ರೌಢಶಾಲೆಯಿಂದ ಭಡ್ತಿ ಬಂದ ಉಪನ್ಯಾಸಕರೇ ಇರುತ್ತಾರೆ.ಹಾಗಾಗಿ ಆಗ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರ ಸಂಖ್ಯೆ ತೀರ ಕಡಿಮೆ ಇತ್ತು.2009 ರ ಬ್ಯಾಚ್ ನಲ್ಲಿ ಆಯ್ಕೆ ಆದವರಲ್ಲಿ  ಅನೇಕರು ಪಿಎಚ್ ಡಿ ಪದವಿಧರರಿದ್ದರು

ಇರಲಿ

ಮೊದಲ ಡಾಕ್ಟರೇಟ್ ನ‌ ಕನಿಷ್ಟ ಅಧ್ಐನ ಅವಧಿ  ಎರಡೂವರೆ ವರ್ಷ ಮುಗಿದ ಕೂಡಲೇ ನಾನು ಎರಡನೆಯ ಡಾಕ್ಟರೇಟ್ ಅಧ್ಯಯನಕ್ಕಾಗಿ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೂ ಪ್ರಬಂಧ ಸಿದ್ದವಾಗಿತ್ತು.2012 ರಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ಮೌಲ್ಯ ಮಾಪಕರ ಹಾಗೂ ಮಾರ್ಗ ದರ್ಶಕರ  ನಿರ್ಲಕ್ಷ್ಯದಿಂದಾಗಿ  ಬಹಳ‌ ತಡವಾಗಿ 2015 ರಲ್ಲಿ ಎರಡನೆಯ ಡಾಕ್ಟರೇಟ್ ಪದವಿಯನ್ನೂ ಪಡೆದೆ

ಈ ನಡುವೆ 2013 ರಲ್ಲಿ ಮಂಗಳೂರು ಯೂನಿವರ್ಸಿಟಿ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು ನಾನೂ ಅರ್ಜಿ ಸಲ್ಲಿಸಿದ್ದೆ

ಈ ಬಾರಿ ನಾನು ಖಂಡಿತಾ ಆಯ್ಕೆ ಆಗುವೆನೆಂಬ ಆತ್ಮ ವಿಶ್ವಾಸ ನನಗಿತ್ತು.ಯಾಕೆಂದರೆ ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಅಕಾಡೆಮಿಕ್ ಫರ್ಪಾಮೆನ್ಸ್ ಇಂಡಿಕೇಟರ್ ನನಗಿತ್ತು.ನನಗೆ 1157 accademi performance indication ಪಾಯಿಂಟುಗಳಿದ್ದವು

ನಾನು ಅದಾಗಲೇ ಎಂಎ( ಕನ್ನಡ)  73.7% - ನಾಲ್ಕನೆಯ ರ‌್ಯಾಂಕ್,ಎಂಎ( ಹಿಂದಿ) ಎಂಎ( ಸಂಸ್ಕೃತ)- ಮೊದಲ ರ‌್ಯಾಂಕ್ ,ಎಂಫಿಲ್ ಪಿಎಚ್ ಡಿ ಪದವಿ ಗಳಿಸಿದ್ದು ಎರಡನೆಯ ಪಿಎಚ್ ಡಿ ಪದವಿಗೆ ಪ್ರಬಂಧ ಸಲ್ಲಿಕೆ ಆಗಿತ್ತು.

ಅ ಸಮಯಕ್ಕಾಗುವಾಗಲೇ ನನ್ನ ಹದಿನೇಳು ಸಂಶೋಧಾನಾ ಕೃತಿಗಳು ನೂರರಷ್ಟು ಸಂಶೋಧನಾ ಬರಹಗಳು,ಮುನ್ನೂರರಷ್ಟು ಇತರ ವೈಚಾರಿಕ ಬರಹಗಳು ಪ್ರಕಟವಾಗಿದ್ದವು

ಸುಮಾರು ಇನ್ನೂರೈವತ್ತು ಅಂತರಾಷ್ಟ್ರೀಯ,ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದೆ

ಯುಜಿಸಿ ನಿಯಮಾವಳಿಗಳಂತೆ ಅಂಕಗಳನ್ನು ನೀಡಿದರೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಖಂಡಿತವಾಗಿಯೂ ಸಿಗುತ್ತಿತ್ತು.ಆದರೆ ದುಡ್ಡು ಇನ್ಪ್ಲೂಯೆನ್ಸ್ ಗೆ ಒಳಗಾದ ವೀಸಿ ಯನ್ನೊಳಗೊಂಡ ಆಯ್ಕೆ ಸಮಿತಿ ಯುಜಿಸಿ ನಿಯಮಗಳನ್ನು ಮೀರಿ ತಮಗೆ ಬೇಕಾದ ಅಭ್ಯರ್ಥಿಗಳು ಕಡಿಮೆ ಅರ್ಹತೆ ಹೊಂದಿದ್ದರೂ ಅವರನ್ನೇ ಆಯ್ಕೆ ಮಾಡಿದ್ದರು.

ಕನ್ನಡ ವಿಭಾಗದಲ್ಲಿ ಜೆನರಲ್ ಮೆರಿಟ್ ಗೆ ಒಂದು ಹುದ್ದೆ ಇತ್ತು.ಅದಕ್ಕೆ ಒಂದು ಕನ್ನಡ( ಎಂಎ)66% ಎರಡು ಸಂಶೋಧನಾ ಕೃತಿ( ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧ) ಗಳನ್ನು ಪ್ರಕಟಿಸಿದ ಧನಂಜಯ ಕುಂಬಳೆ ಆಯ್ಕೆ ಆದರು.

ಇಲ್ಲಿ ಒಟ್ಟು ನೂರು ಅಂಕಗಳ ಸಂದರ್ಶನದಲ್ಲಿ 20 ಅಂಕಗಳು ರಿಸರ್ಚ್ ಫರ್ಫಾರ್ಮೆನ್ಸ್ ಗೆ ಮೀಸಲಾಗಿವೆ.ಇಲ್ಲಿ ಒಂದು ಸಂಶೋಧನಾ ಕೃತಿಗೆ ಐದು ಅಂತ ಮತ್ತು ಅಂತ ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಎರಡು ಅಂಕ,ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಇದರ ಹೊರತಾಗಿ ಈ ವಿಭಾಗದಲ್ಲಿ ಅಂಕಗಳನ್ನು ಕೊಡುವಂತಿಲ್ಲ ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ.ಇಲ್ಲಿ ಗರಿಷ್ಠ ಅಂಕಗಳು 20

ನನ್ನದು 17 ಸಂಶೋಧನಾ ಕೃತಿಗಳು ಪ್ರಕಟವಾದ ಕಾರಣ ಗರಿಷ್ಠ 20 ಅಂಕಗಳು ಲಭಿಸಿದ್ದವು.

ಆದರೆ ಇಲ್ಲಿ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರ ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವಂತೆ ಕೇವಲ ಎರಡು ಸಂಶೋಧನಾ ಕೃತಿಗಳು ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಇನ್ನೊಂದು ಅಕಾಡೆಮಿಕ್ ವಿಭಾಗದಲ್ಲಿ ಅಂಕಗಳು ನೀಡಲ್ಪಟ್ಟಿದೆ

ಹಾಗಾಗಿ ಇಲ್ಲಿ ಅವರು ಅವರ ಒಂದು ಪುಸ್ತಕಕ್ಕೆ 5 ಅಂಕಗಳನ್ನು ಮಾತ್ರ ಪಡೆಯಲು‌ಅರ್ಹರಾಗಿದ್ದರು.ಇದನ್ನು ಪ್ರಾಥಮಿಕ ಶಾಲೆಯ ಬಾಲಕ ಕೂಡ ಲೆಕ್ಕ ಹಾಕಬಲ್ಲ. 

ಆದರೆ ಇಲ್ಲಿ ಆಯ್ಕೆ ಸಮಿತಿಯವರು ಹೆಚ್ಚಿನ ಅಂಕ ನೀಡಲು ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹೆಚ್ಚುವರಿಯಾಗಿ ಹದಿನೈದು ಅಂಕ ನೀಡಿ ಗರಿಷ್ಟ 20 ಅಂಕ ನೀಡಿದ್ದರು.

ಇಲ್ಲಿ ಅರ್ಹತೆ ಇಲ್ಲದೆ ಇದ್ದಾಗಲೂ ಅವರನ್ನು ಆಯ್ಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ನೀಡಿದ 15 ಅಂಗಳನ್ಮು ಅವರು ಸಂದರ್ಶನದಲ್ಲಿ ಗಳಿಸಿದ ಒಟ್ಟು ಅಂಕ‌69.4 ರಿಂದ ಕಳೆದರೆ ಅವರಿಗೆ ಸಿಗಬೆಕಾಗಿದ್ದ ಅಂಕ‌54.4% 

ನನಗೆ ಸಿಕ್ಕ ಒಟ್ಟು ಅಂಕ 63.9 ಹಾಗೆಯೇ ಇರುತ್ತದೆ.ಹಾಗಾಗಿ ನಾನೇ ಹೆಚ್ಚು ಅರ್ಹಳು ಆದರೆ ದುಡ್ಡು ವಶೀಲೊಗೊಳಗಾಗಿ ಆಯ್ಕೆಸಮಿತಿ ಅಕ್ರಮವಾಗಿ ರಿಸೃಚ್ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಅವರಿಗೆ ಹದಿನೈದು ಅಂಕ‌ ನೀಡಿದ ಕಾರಣ ನನಗೆ ಅನ್ಯಾಯ ಆಗಿದೆ

ಹಾಗೆ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡಿದರೂ ಗೆಲ್ಲಾಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ  ಇಲ್ಲ ಎಂದಿಲ್ಲ‌ .ಬದಲಿಗೆ ಅರ್ಹತೆಯನ್ನು ನಿರ್ಧರಿಸುವುದು ಆಯ್ಕೆ ಸಮಿತಿ‌ ಅದರಲ್ಲಿ ತಲೆಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತದೆ

ಕಾನೂನಿನ ಈ ಪರಿಮಿತಿಯನ್ನು ತಿಳಿದೇ ಆಯ್ಕೆ ಸಮಿತಿಯವರು ಅಕ್ರಮ ಎಸಗಿ ತಮಗೆ ಬೇಕಾದವರನ್ನು ಬೇಕಾ ಬಿಟ್ಟಿ ಆಯ್ಕೆ ಮಾಡುತ್ತಾರೆ

ಆಯ್ಕೆ ಸಮಿತಿಯವರೇ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ‌ ದುಡ್ಡು ವಶೀಲಿಗೆ ಒಳಗಾಗಿ ಅನರ್ಹರನ್ನು ಆಯ್ಕೆ ಮಾಡಿದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು ? ಇದಕ್ಕೇನು ಪರಿಹಾರ? ಇದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ಈ ಬಗ್ಗೆ ಸರ್ಕಾರ ಸಿಐಡಿ ಗೆ ವಹಿಸಿ ಸರಿಯಾದ ತನಿಖೆ ಮಾಡಿ ಅಕ್ರಮ ಎಸಗಿದವರ ಮೇಲೆ ಸೆಒಯಾದ ಕ್ರಮ‌ತೆಗೆದುಕೊಂಡರೆ ಸರಿ ಹೋಗಬಹುದು.

2013 ರಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ರಿಜಿಸ್್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯಲ್ಲಿ ವೀಸಿಗಳಾಗಿರುವ ಡಾ.ಪಿಎಸ್ ಎಡಪಡಿತ್ತಾಯರು 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದ ಬಗ್ಗೆ ಒಪ್ಪಿಕೊಳ್ಳುತ್ತಾರೆ.ಅದಕ್ಕಾಗಿಯೇ  ನೇಮಕಾತಿ ಪ್ರಕ್ರಿಯೆಯಿಂದ ಆಗಿನ ವೀಸಿಗಳಾದ ಶಿವಶಂಕರಮೂರ್ತಿಗಳು   ರಿಜಿಸ್ಟ್ರಾರ್ ಆಗಿದ್ದ ಡಾ.ಪಿಎಸ್ ಎಡಪಡಿತ್ತಾಯರನ್ನು ಹೊರಗಿರಿಸಿ ನಡೆಸಿದ ಬಗ್ಗೆಯೂ ಹೇಳಿದ್ದಾರೆ.ಆಗಿನ ವೀಸಿಗಳು ಕೆಲವು ಕ್ಲರ್ಕ್ ಹಾಗೂ ಒಬ್ಬಿಬ್ಬರು ಪ್ರಾಧ್ಯಾಪಕರನ್ನು ಇಟ್ಟುಕೊಂಡು ಅಕ್ರಮ‌ಎಸಗಿದ್ದರಂತೆ.ಅಂದಿನ ನೇಮಕಾತಿಗಳಲ್ಲಿ ಎರಡು ಕೋರ್ಟಿನಲ್ಲಿ ರದ್ದಾಗಿವೆ.ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿವೆ ಎಂದವರು ತಿಳಿಸಿದ್ದಾರೆ.

ಅಂದ ಹಾಗೆ ಅಂದಿನ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ‌ಡಾ.ಚಿನ್ನಪ್ಪ ಗೌಡ ಮತ್ತು ಡಾ.ಸಬೀಹಾ ಭೂಮಿ ಗೌಡ ಮತ್ತಿತರರು ಇದ್ದರು


ನನ್ನ ವಿಷಯದಲ್ಲಿಯೇ ಇಷ್ಟು ಅನ್ಯಾಯವಾದಾಗ ಓದಿ ಕಲಿಯಿರಿ ಮಕ್ಕಳೇ ಒಳ್ಳೆಯ ಭವಿಷ್ಯ ಇದೆ ಎನ್ನುವಾಗ ನನ್ನ ಧ್ವನಿ ನಡುಗದೆ ಇರಲು ಸಾಧ್ಯವೇ ? ಆದರೂ ನಾನಿದನ್ನು ಮಕ್ಕಳ ಜೊತೆ ಹಂಚಿಕೊಳ್ಳುವುದಿಲ್ಲ.ಅವರ ಆತ್ಮ ವಿಶ್ವಾಸಕ್ಕೆ ಧಕ್ಕೆ ಬಂದು ನಿರಾಸೆ ಮೂಡೀತು ಎಂಬ ಆತಂಕ ನನಗೆ‌

ಇಷ್ಟರ ತನಕ ಸಂದರ್ಶನ ಇರುವಲ್ಲಿ ಮಾತ್ರ ದುಡ್ಡು ವಶೀಲಿ‌ ನಡೆಯುತ್ತದೆ ಎಂಬ ಭಾವ ಇತ್ತು.ಈಗ ಲಿಖಿತ ಪರೀಕ್ಷೆ ಇರುವಲ್ಲಿನಡೆದ ಅಕ್ರಮ ನೋಡಿ ಆಘಾತವಾಗಿದೆ.ನಮ್ಮ‌ಬಡ ಪ್ರತಿಭಾವಂತ ಮಕ್ಕಳ ಪಾಡೇನು ಎಂಬ ಆತಂಕ ಉಂಟಾಗಿದೆ


ನನಗೇನೋ ಬದುಕಲೊಂದು ಗೌರವದ ಉದ್ಯೋಗವಿದೆ.ಮಂಗಳೂರು ಯೂನಿವರ್ಸಿಟಿಗೆ ಅರ್ಜಿ ಅಲ್ಲಿಸುವ ಮೊದಲೇ ನಾನು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾಗಿದ್ದೆ.ಆದರೆ ಉದ್ಯೋಗವಿಲ್ಲದ ಬಡ ಪ್ರತಿಭಾವಂತರ ಬಗ್ಗೆಯೇ ನನ್ನ ಕಾಳಜಿ..

ಈಗ ಸರ್ಕಾರ ಎಲ್ಲ‌ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಅದಕ್ಕೆ ಕಾರಣರಾದವ ಮೇಲೆಬಲವಾದ ಕ್ರಮ ತೆಗೆದುಕೊಂಡರೆ ಸ್ವಲ್ಪ ಪ್ರಯೋಜನವಾಗಬಹುದು 

ಡಾ.ಲಕ್ಷ್ಮೀ ಜಿ ಪ್ರಸಾದ್
ಕನ್ನಡ ಉಪನ್ಯಾಸಕಿ
ಸರ್ಕಾರಿ ಪಿಯು ಕಾಲೇಜು
ಬ್ಯಾಟರಾಯನಪುರ
ಬೆಂಗಳೂರು 
ಮೊಬೈಲ್ :9480516684 

Saturday 16 April 2022

ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ಈವತ್ತಿಗೂ ಪಶ್ಚಾತ್ತಾಪವಿದೆ

 ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ

ಆ ಒಂದು ತೀರ್ಪಿನ ಬಗ್ಗೆ ಈವತ್ತಿಗೂ ಪಶ್ಚಾತ್ತಾಪವಿದೆ 

ನಾನು ಚಿಕ್ಕಂದಿನಲ್ಲಿ ಹೈಪರ್ ಆಕ್ಟೀವ್.ಎಲ್ಲ ಸ್ಪರ್ದೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದೆ.ಬಹುಮಾನಗಳನ್ನೂ ಪಡೆದು ಸ್ವರ್ಗ ಸಿಕ್ಕಂತೆ ಸಂಭ್ರಮಿಸುತ್ತಿದ್ದೆ.ಮನೆಗೆ ಬಂದವರಿಗೆ ಹೊಓದವರಿಗೆ ಎಲ್ಲರಿಗೂ ಸರ್ಟಿಫಿಕೇಟ್ ಗಳನ್ನು ತೋರಿಸಿ ಅವರಿಂದ ಮೆಚ್ಚುಗೆ ಮಾತುಗಳನ್ನು ಪಡೆದು(ಬಲವಂತವಾಗಿ ?ನನ್ನ  ಕಿರಿ ಕಿರಿ ತಾಳಲಾಗದೇ )  ಬಹಳ ಖುಷಿ ಪಡುತ್ತಿದ್ದೆ.

ಬಹುಮಾನವನ್ನು ಪಡೆಯಲು ವೇದಿಕೆ ಏರುವಾಗ ನನಗೆ ಚಂದ್ರಲೋಕಕ್ಕೆ ಹೋಗುವಷ್ಟು ಉತ್ಸಾಹ ಇರುತ್ತಿತ್ತು.ನಂತರ ಬಹುಮಾನ ಪಡೆದು ಸಭೆಯಿಂದ ಚಪ್ಪಾಳೆ ಸದ್ದನ್ನು ಕೇಳಿ ಬಹಳ ನಲಿವಿನಿಂದ ಇಳಿದು ಬರುತ್ತಿದ್ದೆ

ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಬಂದಾಗ ನಾನು ಶಿಕ್ಷಕಿಯಾದೆ.ಸಹಜವಾಗಿ ನಾನಾ ಸ್ಪರ್ಧೆಗಳಿಗೆ ತೀರ್ಪುಗಾರಳಾಗಿ ಭಾಗಹಿಸಿದೆ

ಅಲ್ಲೆಲ್ಲ ನಾನು ಬಹಳ ಎಚ್ಚರಿಕೆಯಿಂದ ನಿಷ್ಪಾಕ್ಷಿಕವಾಗಿ ತೀರ್ಪು ನೀಡಿರುವೆ.

ಆದರೆ ಒಂದೆಡೆ ಮಾತ್ರ ನಾನು ತುಸು ತಪ್ಪು ಮಾಡಿ ಒಂದು ವಿದ್ಯಾರ್ಥಿನಿಯ ಪರ ಹೆಚ್ಚು ಅಂಕ ನೀಡಿ ಗೆಲ್ಲಿಸಬೇಕಿತ್ತು ಎನಿಸಿತ್ತು.ಹಾಗೆ ಮಾಡದ್ದಕ್ಕೆ ನನಗೆ ಇಂದಿಗೂ ಪಶ್ಚಾತ್ತಾಪವಿದೆ.

ಸಮಾನತೆಗೆ ಭಿನ್ನ ಭಿನ್ನವಾದ ಮಾನದಂಡಗಳಿವೆ.ಒಂದು ತಾಯಿ ತನ್ನ ಎರಡು ವರ್ಷದ ಮಗುವಿಗೆ ಒಂದು ರೊಟ್ಟಿಯನ್ನೂ ಎಂಟು ವರ್ಷದ ಮಗುವಿಗೆ ಎರಡು ರೊಟ್ಟಿಗಳನ್ನೂ ಕೊಡುತ್ತಾಳೆ.ಅದುಮಕ್ಕಳ ನಡುವೆ ಅಸಮಾನತೆ ತೋರಿದಂತೆ ಆಗುವುದಿಲ್ಲ.

ನಾನು ಈ ವಿಧದ ಮಾನದಂಡವೊಂದನ್ನು ಅದೊಂದು ಸ್ಪರ್ಧೆಯಲ್ಲಿ ಅನುಸರಿಬೇಕಿತ್ತು 


ಅದು ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿನ ಚಿನ್ಮಯ ಶಾಲೆಯಲ್ಲಿ ನಡೆದ ಘಟನೆ.ಆಗ ಚಿನ್ಮಯ ಶಾಲೆ ಮಂಗಳೂರಿನಲ್ಲಿ ಬಹಳ ಖ್ಯಾತಿಯನ್ನು ಪಡೆದಿತ್ತು.ಅಲ್ಲಿ ಸೀಟು ಸಿಗುವುದು ಸುಲಭದ್ದಾಗಿರಲಿಲ್ಲ.ಪಠ್ಯ ಮತ್ತು ಪಠ್ಯೇತರ ಚಟುವಟಿಗೆ ಎರಡರಲ್ಲೂ ಚಿನ್ಮಯ ವಿದ್ಯಾ ಸಂಸ್ಥೆ ಬಹಳ ಕ್ರಿಯಾಶೀಲವಾಗಿತ್ತು.ಬಹಳ ಕ್ರಿಯಾಶೀಲರಾದ ಶಿಕ್ಷಕರ ದಂಡು ಅಲ್ಲಿತ್ತು

ಒಂದು ವರ್ಷ ಒಂಬತ್ತನೆಯ ತರಗತಿಗೆ ಓರ್ವ ವಿಶಿಷ್ಟ ಚೇತನಳಾದ ವಿದ್ಯಾರ್ಥಿನಿಯ ದಾಖಲಾತಿ ಆಗಿತ್ತು.ಹುಟ್ಟಿನಿಂದ ಅವಳಿಗೆ ನ್ಯೂನತೆ ಇರಲಿಲ್ಲ.ಸುಮಾರು ಹತ್ತರ ವಯಸದಸಿನಲ್ಲಿ ಗಂಟಲಿನ ಮೈನರ್ ಸರ್ಜರಿ ಆದಾಗ ಸೋಂಕು ತಗುಲಿ ಅವಳಿಗೆ ವಾತ ( arthritis) ಉಂಟಾಗಿತ್ತು.ಬಹಳ ಜಾಣ ವಿದ್ಯಾರ್ಥಿನಿ

ಆದರೆ ವಾತದಿಂದಾಗಿ ಅಕ್ಷರಗಳು ಮುದ್ದಾಗಿರಲಿಲ್ಲ

ಇಡೀ ದೇಹದಲ್ಲಿ ಎಲ್ಲ ಗಂಟುಗಳಲ್ಲಿ ಅಪಾರವಾದ ನೋವಿತ್ತು ಅವಳಿಗೆ.ಹಾಗಾಗಿ ಬರೆಯುವುದೂ ಸಾಹಸದ ವಿಚಾರವೇ.ಅದರೆ ಅವಳು ತುಂಬಾ ಜಾಣೆ ಎಂದು ಗೊತ್ತಿದ್ದ ಕಾರಣ ಅವಳ ಬರವಣಿಗೆಯನ್ನು ಕೊರಕಲಾಗಿದ್ದರೂ ಓದಿ ಅಂಕ ಕೊಡುತ್ತಿದ್ದೆವು. ಹಾಗಾಗಿ ಉತ್ತಮ ಅಂಕಗಳು ಸಿಗುತ್ತಿತ್ತು.ಆದರೆ ಪಬ್ಲಿಕ್ ಪರೀಕ್ಷೆಯಲ್ಲಿ ಅವಳಿಗೆ ಒಳ್ಳೆಯ ಅಂಕಗಳು ಬರಲು ಕಷ್ಟವಿತ್ತು

ಅವಳು ಚಿನ್ಮಯ ಶಾಲೆಗೆ ಸೇರಿದ ವರ್ಷ ಅತವಾ ಮರು ವರ್ಷ  ಯಾವುದೋ ಸಂಘಟನೆಯೊಂದು ನಮ್ಮಲ್ಲಿ ಭಗವದ್ಗೀತೆ ? ಕುರಿತಾದ ಭಾಷಣ ಪ್ರಬಂಧ ಕಂಟಪಾಠ ಸ್ಪರ್ದೆ ಏರ್ಪಡಿಸಿತ್ತು.ಇಲ್ಲಿ ಪ್ರಥಮ ಸ್ಥಾನ ಬಂದವರು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದರು.ದ್ವಿತೀಯ ತೃತೀಯ ಸ್ತಾನ ಪಡೆದವರಿಗೆ ಒಂದು ಸಣ್ಣ ಬಹುಮಾನ ಮತ್ತು ಸರ್ಟಿಫಿಕೇಟ್ ಕೊಡುತ್ತೇವೆ ಎಂದಿದ್ದರು

ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಆ ವಿದ್ಯಾರ್ಥಿನಿಯೂ ಭಾಗವಹಿಸಿದ್ದಳು.ಅವಳಿಗೆ ಶಾಲೆಯೊಳಗಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಿತ್ತು.ಹೊರಗಡೆ ನಡೆಯುವ ಸ್ಪರ್ಧೆಗಳಿಗೆ ಹೋಗಲು ಅವಳ ಶಾರೀರಿಕ ಸಮಸ್ಯೆ ತೊಡಕಾಗಿತ್ತು.ಹಾಗಾಗಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಳು

ಚಿನ್ಮಯ ಶಾಲೆ ನಾನು ಮೊದಲೇ ತಿಳಿಸಿದಂತೆ ಅಗಿನ ಕಾಲಕ್ಕೆ ಬಹಳ ಪ್ರಸಿದ್ದವಾದದ್ದು.ಬಹಳ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿದ್ದರು.ಇಲ್ಲಿನ ಮಕ್ಕಳು ತಾಲೂಕು,ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದರು.ಹಾಗಾಗಿ ಶಾಲೆಯೊಳಗೆ ನಡೆಯುವ ಸ್ಪರ್ಧೆಗಳಲ್ಲಿ ಕೂಡ ಬಹುಮಾನ ಪಡೆಯುವದ್ದು ಸುಲಭದ್ದಾಗಿರಲಿಲ್ಲ.ಹಾಗಾಗಿ ಆ ವಿದ್ಯಾರ್ಥಿನಿಗೆ ಅದು ತನಕ ಬಹುಮಾನ ಬಂದಿರಲಿಲ್ಲ

ಆದಿನ  ಭಾಷಣ ಸ್ಪರ್ಧೆಗೆ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬಳಾಗಿದ್ದೆ

ಆ ದಿನ ಈ ಹುಡುಗಿ ಕೂಡ ಚೆನ್ನಾಗಿ ಭಾಷಣ ಮಾಡಿದ್ದಳು.ನಾನು ನೀಡಿದ ತೀರ್ಪಿನಲ್ಲಿ ಇವಳಿಗೆ ಮೂರನೆಯ ಸ್ಥಾನವಿತ್ತು.ಮೂವರೂ ನೀಡಿದ ಅಂಕಗಳನ್ನು ಒಟ್ಟು ಮಾಡಿದಾಗ ಇವಳಿಗೆ ಮತ್ತು ಇನ್ನೊಬ್ಬಳಿಗೆ ಸಮಾನ ಅಂಕ ಬಂದು ಇಬ್ಬರಿಗೂ  ಮೂರನೆಯ ಸ್ಥಾನ ಬಂತು.

ಇಬ್ಬರಲ್ಲಿ ಒಬ್ಬಳನ್ನು ಆಯ್ಕೆ ಮಾಡಿ ತೃತೀಯ ಬಹುಮಾನ ಘೋಷಣೆ ಮಾಡಬೇಕಿತ್ತು.ಆಗ ನಾನು ಈ ವಿದ್ಯಾರ್ಥಿನಿಗೆ ತೃತೀಯ ಬಹುಮಾನ ಕೊಡುವ ಎಂದೆ.ಆದರೆ ಇನ್ನಿಬ್ಬರು ತೀರ್ಪುಗಾರರು " ಬೇಡ..ಇನ್ನೊಬ್ಬಳಿಗೆ ಕೊಡುವ ಎಂದರು.ಬಹುಮತಕ್ಕೆ ಮನ್ನಣೆ ಬಂತು.ನನಗೇನೂ ಮಾಡಲಾಗದ ಪರಿಸ್ಥಿತಿ

ಆ ಇನ್ನೊಬ್ಬಹುಡುಗಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದವಳು.ಅದಕ್ಕೆ ಮೊದಲೇ ಅನೇಕ ಸ್ಪರ್ಧೆಗಳಲ್ಲಿ ಗೆದ್ದವಳೇ ಆಗಿದ್ದಳು

ಅವಳಿಗೆ ಇದೊಂದು ಬಹುಮಾನ ಬಾರದೇ ಇದ್ದಾಗ ಒಂದೆರಡು ದಿನ ಬರಲಿಲ್ಲ ಅನ್ನುವ ನೋವು ಕಾಡ್ತಿತ್ತು ಅಷ್ಟೇ

ಆ ಮೂರನೆಯ ಬಹುಮಾನವನ್ನು ನಾವು  ಶಾರೀರಿಕ  ಸಮಸ್ಯೆ ಇದ್ದ ವಿದ್ಯಾರ್ಥಿನಿಗೆ ಕೊಟ್ಟಿದ್ದರೆ ಆ ಬಹುಮಾನ ಪಡೆದು ಅವಳು ತುಂಬಾ ಸಂಭ್ರಮ ಪಡುತ್ತಿದ್ದಳು.ಬದುಕಿರುವ ತನಕವೂ ಆ ಸರ್ಟಿಫಿಕೇಟನ್ನು ನೋಡಿ ತನ್ನ ಗೆಲುವಿನ ರೋಮಾಂಚನವನ್ನು ಅನುಭವಿಸುತ್ತಿದ್ದಳು.ಅವಳು ಸದಾ ಸ್ಪರ್ಧೆಗಳಲ್ಲಿ ಗೆಲ್ಲುವವಳಾಗಿದ್ದು ಇದೂ ಬಂದಿದ್ದರೆ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು ಇನ್ನೊಬ್ಬಳಂತೆ

ಆದರೆ ನನಗೆ ತಿಳಿದಂತೆ ಅವಳಿಗೆ ಅದು ತನಕ ಯಾವುದರಲ್ಲೂ ಬಹುಮಾನ ಬಂದಿರಲಿಲ್ಲ.ಇಬ್ಬರಿಗೆ ಸಮಾನ ಅಂಕ ಬಂದು ಮೂರನೆಯ ಸ್ಥಾನ ಸಿಕ್ಕಾಗ ನಾವು ಇಬ್ಬರಿಗೂ ಬಹುಮಾನ ಪ್ರಮಾಣ ಪತ್ರ ನಿಡಬೇಕೆಂದು ಗಟ್ಟಿಯಾಗಿ ನಿಲ್ಲಬೇಕಿತ್ತು. ಅದೂ ಮಾಡಲಿಲ್ಲ

ಅಪರೂಪಕ್ಕೆ ತೃತೀಯ ಸ್ಥಾನ ಪಡೆದ ಮತ್ತು ಇತರೆಡೆ ಹೊಗಲಾಗದ ಈ ಹುಡುಗಿಗೇ ಆ ತೃತೀಯ ಬಹುಮಾನವನ್ನು ಕೊಡಿಸಬೇಕಿತ್ತು

ಎರಡೂ ಆಗದ ಬಗ್ಗೆ ನನಗೆ ನಂತರ ಬಹಳ ಕೊರಗು ಉಂಟಾಗಿತ್ತು

ಈಗಲೂ ನಾನಾ ಸಂಘ ಸಂಸ್ಥೆಗಳು ನನ್ನನ್ನು ನಾನಾ ಸ್ಪರ್ಧೆಗಳ ತೀರ್ಪುಗಾರಳಾಗಿ ಆಹ್ವಾನಿಸುತ್ತಿದ್ದು ನಾನು ತೀರ್ಪುಗಾರಳಾಗಿ ಬಾಗವಹಿಸುತ್ತೇನೆ.ಅತ್ಯಂತ ನಿಷ್ಪಾಕ್ಷಿಕವಾಗಿ ತೀರ್ಪು ನೀಡುತ್ತೇನೆ.ಕೆಲವಿಮ್ಮೆ ನಮ್ಮ ಆತ್ಮೀಯರೇ ಸ್ಪರ್ಧಿಗಳಾಗಿರುತ್ತಾರೆ. ಆಗಲೂ ನನ್ನ ತೀರ್ಪು ಪ್ರತಿಭೆಯ ಪರವೇ ಆಗಿರುತ್ತದೆ.ಅದರೆ ಪ್ರತಿ ಬಾರಿಯೂ ನನಗೆ ಈ ವಿದ್ಯಾರ್ಥಿನಿ ನೆನಪಾಗುತ್ತಾಳೆ 

ಆದರೆ ಆ ದಿನ ಚಿನ್ಮಯ ಶಾಲೆಯಲ್ಲಿ ನಾನು ಆ ವಿದ್ಯಾರ್ಥಿನಿಗೆ ತುಸು ಹೆಚ್ಚು ಅಂಕ ಕೊಡಬೇಕಿತ್ತೆನಿಸುತ್ತದೆ.

ಆಗ ಅವಳಿಗೆ ಮೂರನೆಯ ಬಹುಮಾನ ಬರುತ್ತಿತ್ತು ಎಂದೆನಿಸುತ್ತದೆ.ಆದರೆ ತೀರ್ಪುಗಾರಳಾಗಿ ನಾನು ಅವತ್ತು ಮಾಡಿದ್ದು ಸರಿ..ಅವಳಿಗಿಂತ ಚೆನ್ನಾಗಿ ಭಾಷಣ ಮಾಡಿದ ಇಬ್ಬರಿಗೆ ಇವಳಿಗಿಂತ ಹೆಚ್ಚು ಅಂಕ ನೀಡಿದ್ದೆ.ಅದು ಸರಿಯಾದುದೇ.ಆದರೆ ಇಬ್ಬರಿಗೆ ಮೂರನೆಯ ಬಹುಮಾನ ಕೊಡಲು ಅಸಾಧ್ಯ ಎಂದಾದಾಗ ನಾನು ಈ ಹುಡುಗಿಗೆ ತುಸು ಹೆಚ್ಚು ಅಂಕ ಕೊಡುತ್ತಿದ್ದರೆ ಅವಳಿಗೆ ಮುರನೆಯ ಬಹುಮಾನ ಬರ್ತಿತ್ತು ಇನ್ನೊಬ್ಬಳಿಗೆ ನಾಲ್ಕನೆಯ ಸ್ಥಾನ ಬರ್ತಿತ್ತು ಎಂದೆನಿಸಿತ್ತು

ಅಥವಾ ಇಬ್ಬರಿಗೂ ಸಮಾನ ಅಂಕ ಲಭಿಸಿದ ಮೂರನೆಯ ಸ್ಥಾನದಲ್ಲಿದ್ದ  ಕಾರಣ ಇಬ್ಬರಿಗೂ ತೃತೀಯ ಬಹುಮಾನ ಕೊಡಲೇಬೇಕೆಂದು ಪಟ್ಟು ಹಿಡಿಯಬೇಕಿತ್ತು ಎಂದೆನಿಸುತ್ತದೆ

ಅದರೇನು ಮಾಡಲಿ..ಅದು ಘಟಿಸಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದವು.ಆ ಹುಡುಗಿಯ ಬದುಕಿನಲ್ಲಿ ಪವಾಡ ಸದೃಶ ಘಟನೆ ಸಂಭವಿಸಿ ಅವಳು ಪೂರ್ತಿ ಗುಣಮುಖಳಾಗಿ ಎಲ್ಲರಂತೆ ಓಡಾಡುತ್ತಾ ಸುಖವಾಗಿ ನೂರು ಕಾಲ ಬದುಕಲಿ ಎಂದು ಹಾರೈಸುವೆ.