Thursday 11 August 2022

 ನಾನೂ ಲೋಕಾಯಕ್ತಕ್ಕೆ ದೂರು ಕೊಡಲು ಹೋಗಿದ್ದೆ


ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿ ನಡೆದ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು.ಎಂಎ ( ಸಂಸ್ಕೃತ) ಮೊದಲ ರ‌್ಯಾಂಕ್,ಎಂಎ( ಹಿಂದಿ) ಎಂಎ ( ಕನ್ನಡ) ನಾಲ್ಕನೆಯ ರ‌್ಯಾಂಕ್ ,ಎಂಫಿಲ್,ಹಾಗೂ ಎರಡು ಪಿಎಚ್ ಡಿ ಪದವಿಗಳನ್ನು ಪಡೆದು ಅದಾಗಲೇ 17 ಸಂಶೋಧನಾ ಕೃತಿಗಳನ್ನು ಆರುನೂರರಷ್ಡು ಬರಹಗಳನ್ನು ಬರೆದಿದ್ದು ಪ್ರಕಟವಾಗಿತ್ತು.ಸುಮಾರು 200 ರಷ್ಟು ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದೆ.ಹಾಗಾಗಿ ಅಕಾಡೆಮಿಕ್ ಫರ್ಪಾರ್ಮೆಕ್ಸ್ ಇಂಡಿಕೇಟರ್  1167 ಇತ್ತು.ಸಾಮಾನ್ಯವಾಗಿ ಪ್ರೊಫೆಸರ್ ಗೆ ಕೂಡ ಇಷ್ಡು ಸೈಕ್ಷಣಿಕ ನಿರ್ವಹಣಾಂಕಗಳನ್ನು ಗಳಿಸಲು ಕಷ್ಟದ ವಿಚಾರ.ನನ್ನ ಅಧ್ಯಯನದ ಬಗ್ಗೆ ತಿಳಿದಿದ್ದ ಡಾ.ಚಿನ್ನಪ್ಪ ಗೌಡ,ಡಾ.ಸಬೀಹಾ ಭೂಮಿ ಗೌಡರು ಆಯ್ಕೆ ಸಮಿತಿಯಲ್ಲಿದ್ದರು ಹಾಗಾಗಿ ನನ್ನ ಆಯ್ಕೆ ಆಗುತ್ತದೆ ಎಂದು ನಾನು ನಂಬಿದ್ದೆ

ಆದರೆ ನಡೆದದ್ದೇ ಬೇರೆ..ನನ್ನ ಅರ್ಧದಷ್ಟು ಸೈಕ್ಷಣಿಕ ನಿರ್ವಹಣಾಂಕ ಇಲ್ಲದ ಕೇವಲ ಒಂದು ಎಂಎ ಒಂದು ಪಿಎಚ್ ಡಿ ,ಎರಡು ಸಂಶೋಧನಾ ಕೃತಿ ರಚಿಸಿದ್ದ ಧನಂಜಯ ಕುಂಬಳೆ ಆಯ್ಕೆ ಆಗಿದ್ದರು

ಕನ್ನಡ ವಿಭಾಗ ಎಂದಲ್ಲ ಎಲ್ಲ ವಿಭಾಗಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು‌ದುಡ್ಡಿನ ಹೊಳೆಯೇ ಹರಿದಿತ್ರು.ಇನ್ಫ್ಲೂಯೆನ್ಸ್ ಇತ್ತು.ಕೆಲವು ಸಿಂಡಿಕೇಟ್ ಮೆಂಬರ್ ಗಳು ತಮ್ಮ ತಮ್ಮ ಜಾತಿಯ ತಮಗೆ ಬಕೆಟ್ ಹಿಡಿದವರನ್ನು ಆಯ್ಕೆ ಮಾಡಿಸುವಲ್ಲಿ ಸಫಲರಾಗಿದ್ದರು 


ಆಗ ನಾನು ಲೋಕಾಯುಕ್ತಕ್ಕೆ ದೂರು ಕೊಡಲು ಹೋಗಿದ್ದೆ.ಮಂಗಳೂರಿನ ಉರ್ವ ಸ್ಟೋರ್ ? ಅಶೋಕ ನಗರದಲ್ಲಿ ಲೋಕಾಯುಕ್ತ ಕಛೇರಿ ಇತ್ತು

ಅಲ್ಲಿ ಯಾರನ್ನೋ ಕಂಡು ವಿಷಯ ಹೇಳಿ ದೂರು ಬರೆದು ಕೊಟ್ಟು ತನಿಖೆ ನಡೆಸುವಂತೆ ಮನವಿ ಮಾಡಿದೆ.ಆಗ ಅಲ್ಲಿ ಅಫಿದಾವತ್ ಮಾಡಿ ದೂರು ? ಕೊಡಬೇಕು ಹಾಗಿದ್ದರೆ ಮಾತ್ರ ತನಿಖೆ ನಡೆಸಲು ಸಾಧ್ಯ ಎಂದರು‌

ಇದು ನಿಜವೇ ? ನನ್ನನ್ನು ಸಾಗ ಹಾಕಲು ಹೇಳಿದರಾ ಎಂದು ನನಗೆ ಗೊತ್ತಿಲ್ಲ.ಏನೆಂದು ಅಫಿದಾವತ್ ಮಾಡಿಸುದು ?ಆಗ ಒಳ್ಳೆಯ ಲಾಯರ ಪರಿಚಯವೂ ನನಗಿರಲಿಲ್ಲ 

ಹಾಗಾಗಿ ನಾನು ಮತ್ತೆ ಅಫಿದಾವತ್ ಮಾಡಿ ದೂರು ನೀಡಲಿಲ್ಲ.

ಇತ್ತೀಚೆಗೆ ಮಂಗಳೂರು ಯೂನಿವರ್ಸಿಟಿಯ ನೇಮಕಾತಿಯಲ್ಲಿನ ಅಕ್ರಮಗಳು ಕನ್ಪರ್ಮ್ ಆಗಿದ್ದು ಏನೋ ಕ್ರಮತೆಗೆದುಕೊಳ್ಳುವಂತೆ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಗಳು ವೀಸಿಗೆ ಸೂಚಿಸಿದ್ದಾರೆಂದು ಓದಿದ ನೆನಪು

ಈಗ ಅಯ್ಕೆ ಸಮಿತಿಯಲ್ಕಿದ್ದವರೆಲ್ಲ ಯೂನಿವರ್ಸಿಟಿಗಳ ವೀಸಿಗಳಾಗಿ ನಿವೃತ್ತರಾಗಿದ್ದು ಬಹಳ ಆದರ್ಶದ ಮಾತುಗಳನ್ನಾಡುವುದನ್ನು ಗಮನಿಸಿದಾಗ ಇವರ ಸೋಗಲಾಡಿತನದ ಬಗ್ಗೆ ನನಗೆ ಅಸಹ್ಯ ಎಂದೆನಿಸುತ್ತದೆ 

ನಾನು ಆಗಲೇ ಪಟ್ಟು ಹಿಡಿದು ಅಫಿದಾವತ್ ಮಾಡಿ ದೂರು ನೀಡಬೇಕಿತ್ತು ಎಂದು ಈಗ ನನಗನಿಸುತ್ತದೆ ಈ ಸೋಗಲಾಡಿಗಳ ಬಣ್ಣ ಆಗ ಬಯಲಾಗುವ ಸಾಧ್ಯತೆ ಇತ್ತು

ಮುಂದಾದರೂ ಈ ಬಗ್ಗೆ ಹೋರಾಟ ಮಾಡಬೇಕೆಂದಿರುವೆ

ಯಾವಾಗ ? ಹೇಗೆ ? ಮತ್ತೆ KAT ಗೆ ಹಾಕಬಹುದೆಂದು ಆತ್ಮೀಯರಾಗಿರುವ ವಕೀಲರೊಬ್ಬರು ಸಲಹೆ ನೀಡಿದ್ದಾರೆ.

ಅರವಿಂದನಿಗೆ ಒಂದೆರಡು ವರ್ಷ ಲಾಯರಾಗಿ ಅನುಭವವಾದ ನಂತರ ಯತ್ನ ಮಾಡಬೇಕೆಂದಿರುವೆ.ನನಗೆ ಇನ್ನು ಹತ್ತು ವರ್ಷ ಸರ್ವಿಸ್ ಇರುವುದು‌ನಮ್ಮ‌ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದೇನೆ,ಮನೆ ಸಮೀಪದ ಕಾಲೇಜಿಗೆ ಟ್ರಾನ್ಸ್ಫರ್ ಸಿಕ್ಕಿದೆ.ಇಲ್ಲಿಯೇ ಮನೆ ಕಟ್ಟಿ ನೆಲೆಯಾಗಿದ್ದೇವೆ.ಹಾಗಾಗಿ ಇನ್ನು ಮಂಗಳೂರು ಯೂನಿವರ್ಸಿಟಿಗಾಗಲೀ ಇತರೆಡೆಗಳಿಗಾಗಲೀ ಹೋಗುವ ಮನಸಿಲ್ಲ.ಆದರೆ ದುಡ್ಡು ಇನ್ಫ್ಲೂಯೆನ್ಸ್ ನಿಂದಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು ಹೋರಾಡಬೇಕಿದೆ 

ನೋಡೋಣ ದೇವರ ದಯೆಯಿಂದ ಹೋರಾಡಿ ಗೆಲ್ಲಬೇಕೆಂದಿರುವೆ  

ಎಸಿಬಿ  ಲೋಕಾಯುಕ್ತದ ಅಡಿಗೆ ಬಂದ ವಿಚಾರ ಓದಿದಾಗ ಇದೆಲ್ಲ ನೆನಪಾಯ್ತು.