Sunday 8 November 2020

ನಿಜವಾಗಿಯೂ ನಡೆದದ್ದೇನು?

 ನಿಜವಾಗಿಯೂ  ನಡೆದದ್ದೇನು?


 ನಾನು ಎರಡನೇ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ನನಗೆ ಮದುವೆ ಆಯಿತು.ಮುಂದಿನ ಓದಿನ ಕಾರಣಕ್ಕಾಗಿ ಮನೆ ಮಂದಿಯ ವಿರೋಧ ಇತ್ತು.ಹಾಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮನೆ ಬಿಟ್ಟು ಹೊರ ನಡೆದಿದ್ದವು.

ಅನೆನ ಏಳು ಬೀಳುಗಳ ಜೊತೆಗೆ ಒಂದು ಕೆಲಸ ಹಿಡಿದು ಮನೆ ಖರೀದಿಸಿ ಮಂಗಳೂರಿನಲ್ಲಿ ನಾವು ಬದುಕುತ್ತಿದ್ದೆವು.

ಈ ನಡುವೆ ಅತ್ತೆಯವರ ಕಣ್ಣೀರಿಗೆ ಸೋತು ಮನೆ ಮಂದಿಯ ಜೊತೆಗೆ ರಾಜಿ ಮಾಡಿಕೊಂಡಿದ್ದೆವು.ಆದರೆ ಇದೆಲ್ಲ ಹೊರ ಜಗತ್ತಿನ ಕಣ್ಣಿಗೆ ಮಣ್ಣು ಹಾಕುವದ್ದು ಅಷ್ಟೇ, 

ಒಳಗಿನಿಂದ ಹೊಟ್ಟೆ ಕಿಚ್ಚು ಆರೋಪಗಳು ಇದ್ದದ್ದೇ..ನಮ್ಮ ಕುಟುಂಬದಲ್ಲಿ ಓದಿ ಸರಿಯಾದ ಕೆಲಸ ಹಿಡಿದವರಿರಲಿಲ್ಲ.ಪ್ರಸಾದ್ ಮತ್ತು ನಾನು ಇಬ್ಬರೂ ಕೂಡ ಓದಿ ಒಳ್ಳೆಯ ಕೆಲಸ ಹಿಡಿದು ಮಂಗಳೂರಿನಲ್ಲಿ ಮನೆ ತಗೊಂಡದ್ದು ಉಳಿದವರ ಕಣ್ಣು ಕೆಂಪಾಗಲು ಕಾರಣವಾಗಿತ್ತು.

ನನ್ನ ಮಗನಿಗೆ ಒಂದು ಅಂದಾಜು ಎರಡು ಎರಡೂವರೆ ವರ್ಷ..ಅಗಷ್ಟೇ ಬಾಲ ಭಾಷೆಯಲ್ಲಿ ಮಾತನಾಡಲು ಕಲಿತಿದ್ದ.

ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿ ನಾಗ ಪ್ರತಿಷ್ಠೆ ನಂತರ ಇನ್ನೇನೋ ಕಾರ್ಯಕ್ರಮ ಇತ್ತು.ಹಾಗಾಗಿ ಎರಡು ದಿನಗಳ ಮೊದಲೇ ಊರಿಗೆ ಹೋದೆವು.

ಕಾರ್ಯಕ್ರಮದ ಹಿಂದಿನ ದಿನವೇ ಸಂಬಂಧಿಕರು ,ಕುಟುಂಬದವರೆಲ್ಲ ಬಂದು ಸೇರಿದ್ದರು.ಎಲ್ಲರೂ ಏನೇನೋ ಕೆಲಸ ಹಚ್ಚಿಕೊಂಡು ಮರುದಿನದ ಕಾರ್ಯಕ್ರಮಕ್ಕೆ ಸಜ್ಜು ಮಾಡುತ್ತಿದ್ದರು.ನನಗೆ ಮಗನನ್ನು ಕಾಯುವುದೇ ಕೆಲಸ ಆಗಿತ್ತು.ವಿಪರೀತ ತುಂಟ.ಹಳ್ಳಿ ಅಲ್ವಾ? ಕೆರೆ ಬಾವಿಗಳಿವೆ‌

ಇವನೆಲ್ಲಿ ಅಲ್ಲಿ ಹೋಗಿ ಬಗ್ಗಿದರೆ ಎಂಬ ಆತಂಕ..

ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಕ್ಕಳೆಲ್ಲ ಆಟ ಅಡುತ್ತಿದ್ದರು‌‌.

ನನ್ನ ಮಗನೂ ಕೂಡ ಅವರ ಜೊತೆ ಇದ್ದ‌.ಆ ಗುಂಪಿನಲ್ಲಿ ಸ್ವಲ್ಪ ಹಿರಿಯಳಾದ ಬಾವನವರ ಮಗಳಿಗೆ ಅರವಿಂದನ ಮೇಲೆ ಒಂದು ಕಣ್ಣು ಇರುವಂತೆ ತಿಳಿಸಿ ಸ್ನಾನಕ್ಕೆ ಹೋಗಿದ್ದೆ..

ಸೋಪು ಹಚ್ಚಿಕೊಳ್ಳುವಷ್ಟರಲ್ಲಿ ಮಗ ಬೇಡಾ ಬೇಡಾ..ಅಮ್ಮಾ ಎಂದು ದೊಡ್ಡಕ್ಕೆ ಬೊಬ್ಬೆ ಹೊಡೆಯಿವುದು ಕೇಳಿಸಿತು.

ಗಾಬರಿಯಲ್ಲಿ ಹಾಗೆಯೇ ಬಟ್ಟೆ ಹಾಕಿಕೊಂಡು ಹೊರಗೆ ಅರವಿಂದ್ ಎಂತಾತು ಎಂದು ದೊಡ್ಡದಾಗಿ  ಓಡಿ ಅಂಗಳಕ್ಕೆ ಬಂದೆ..ಆಗ ಒಬ್ಬರು ಹತ್ತಿರದ ನೆಂಟರು ಬಾವಿ ಕಟ್ಟೆ ಕಡೆಯಿಂದ ವೇಗವಾಗಿ ಓಡಿದ್ದು ನೋಡಿದೆ.ಮಗ ಅಲ್ಲಿ ಅಳುತ್ತಾ ಇದ್ದ.ಏನೆಂದು ಕೇಳಿದೆ.ಅವನು ತನ್ನದೇ ಬಾಲ ಭಾಷೆಯಲ್ಲಿ ಯಾರೋ ಅವನನ್ನು ಎತ್ತಿ ಬಾವಿಗೆ ಹಾಕಲು ಹೊರಟದ್ದನ್ನು ಹೇಳಿದ..

ನಂಬಲು ಅಸಾಧ್ಯವಾದ ವಿಚಾರ.. ಆದರೆ ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇಇಲ್ಲ..ಹಾಗೆಂದು ಸಣ್ಣ ‌ಮಗುವಿನ ಮಾತಿನ ಮೇಲೆ ಈ ಬಗ್ಗೆ ಯಾರನ್ನಾದರೂ ಆಕ್ಷೇಪ ಮಾಡಲು ಸಾಧ್ಯವೇ? 

ನನ್ನ ಅಮ್ಮ ನನಗೆ "ನೋಡು ದಾಯಾದಿ‌ ಮತ್ಸರ ಎಂಬುದು ಬಹಳ ಅಪಾಯಕಾರಿ.ಊರ ಕಡೆ ಬಂದರೆ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು" ಎಂದು ಸದಾ ಹೇಳುತ್ತಿದ್ದರು.

ಅಲ್ಲಿ ಬಾವಿ ಕಟ್ಟೆ ಕಡೆಯಿಂದ ಓಡಿ ಬಂದವರೂ ದಾಯಾದಿಗಳೇ‌..ನಿಜಕ್ಕೂ ಮಗನನ್ನು ಎತ್ತಿ ಬಾವಿಗೆ ಹಾಕಲು ಹೊರಟರೇ.ಅಲ್ಲಿ ಯಾರೂ ಇರಲಿಲ್ಲ.

ಮನೆ ಮಂದಿ ಮಕ್ಕಳೆಲ್ಲ ತೆಂಕ ಜಾಲಿನಲ್ಲಿ ಇದ್ದರು.ಅಲ್ಲದೆ ಚಪ್ಪರ ಹಾಕಿ ಬದಿ ಕಟ್ಟಿದ ಕಾರಣ ಬಾವಿ ಇರುವ ಜಾಗ ಯಾರಿಗೂ ಕಾಣುವಂತೆ ಇರಲಿಲ್ಲ. ನಾನು ಸ್ನಾನಕ್ಕೆ ಹೋಗುತ್ತಲೇ ಅಡುವ ಮಕ್ಕಳ‌ ನಡುವಿನಿಂದ ಇವನನ್ನು ಎತ್ತಿಕೊಂಡು ಹೋದರೇ..? 

ಇಲ್ಲೊಂದು ಗೊಂದಲವಿದೆ‌.ಅರವಿಂದ ಬಾವಿಗೆ ಎತ್ತಿ ಹಾಕಲು ಹೊರಟದ್ದು ಎಂದು ಒಬ್ಬರ ಹೆಸರನ್ನು ಹೇಳಿದ್ದ‌‌.ನಾನು ಹೊರಬರುವಾಗ ನೋಡಿದ  ಬಾವಿ ಕಟ್ಟೆ ಕಡೆಯಿಂದ ಓಡಿ ಬಂದ ವ್ಯಕ್ತಿ ಆ ಹೆಸರಿನವರಲ್ಲ.ಮತ್ತು ಅಡುತ್ತಿರುವ ಮಕ್ಕಳ ನಡುವಿನಿಂದ ತಿಂಡಿ ಕೊಡ್ತೇನೆ ಬಾ ಎಂದು ಎತ್ತಿಕೊಂಡು ಹೋದ ವ್ಯಕ್ತಿ ಮತ್ತು ಅಲ್ಲಿ ಓಡಿ ಬಂದ ವ್ಯಕ್ತಿ ಬೇರೆ ಬೆರೆಯವರಾಗಿದ್ದರು. .ಅದರೆ ಅರವಿಂದ ಹೆಸರು  ಹೇಳಿದ ವ್ಯಕ್ತಿ ಯೇ ಅವನನ್ನು ಮಕ್ಕಳ ನಡುವಿನಿಂದ ಎತ್ತಿಕೊಂಡು ಹೋದ ಬಗ್ಗೆ ನಂತರ ನಾನು ಮಕ್ಕಳಿಂದ ಮೆಲ್ಲಗೆ ಕೇಳಿ ಕನ್ಫರ್ಮ್ ಮಾಡಿದ್ದೆ.ಹಾಗಾಗಿ ಅಲ್ಲಿ ಇಬ್ಬರು ಸೇರಿ ಇವನನ್ನು ಎತ್ತಿ ಬಾವಿಗೆ ಹಾಕಲು ಟ್ರೈ ಮಾಡಿದರೇ..ಅ ಇನ್ನೊಬ್ಬ ನಾನು ನೊಡುವ ಮೊದಲೇ ಅಲ್ಲಿಂದ ಓಡಿ ಹೋಗಿದ್ದರೇ‌‌..? ದೇವರೊಬ್ಬರಿಗೇ ಗೊತ್ತು...

ಅದೇ ಕೊನೆ..ನಾನು ಅರವಿಂದ ದೊಡ್ಡವನಾಗುವ ತನಕ ಎಲ್ಲೇ ಹೋದರೂ ಅದರಲ್ಲೂ ನಮ್ಮ ಸ್ವಂತ ಊರಿಗೆ ಹೋದರೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.ಸ್ನಾಕ್ಕೆ ಹೋಗುವಾಗ ಮಗನನ್ನು ಪ್ರಸಾದರ ಸುಪರ್ದಿಗೆ ಕೊಟ್ಡೇ ಹೋಗುತ್ತಿದ್ದೆ.ಯಾರಲ್ಲೂ ಹೇಳಲೂ ಆಗದ ಹೇಳದೇ ಇರಲೂ ಆಗದ ಪರಿಸ್ಥಿತಿ ಅದು..

ಮಕ್ಕಳನ್ನು ದೊಡ್ಡ ಮಾಡುವುದೆಂದರೆ ಸಣ್ಣ ಮಾತಲ್ಲ..ಅವರಾಗಿ ಬಾವಿಗೋ ಕೆರೆಗೊ ಬಿದ್ದರೂ ಬೇರೆಯವರು ಹೊಟ್ಟೆಕಿಚ್ಚಿನಿಂದ ಎತ್ತಿ ಹಾಕಿದರೂ ಅಪಾಯವೇ..

ಆಟ ಆಡುವಾಗ ಸಂಪಿಗೆ ,ಕೆರೆ ಬಾವಿಗೆ ಬಿದ್ದು ಸತ್ತ ಮಕ್ಕಳ ಬಗ್ಗೆ ಕೇಳುವಾಗೆಲ್ಲ ಈ ವಿಚಾರ ನನಗೆ ನೆನಪಾಗುತ್ತದೆ. ಹೆಚ್ಚಿನದು ಅಕಸ್ಮಿಕ ಅಗಿರಬಹುದು‌ .ಕೆಲವೊಂದು ಯಾರೋ ಹೊಟ್ಟೆ ಕಿಚ್ಚಿನವರು ದೂಡಿ ಹಾಕಿದ್ದೂ ಇರಬಹುದು ಅಲ್ವಾ? .ದಾಯಾದಿ ಮತ್ಸರವಂತೂ ಬಹಳ ಅಪಾಯಕಾರಿ.

ಅಂದು ಭೀಮಸೇನನಿಗೆ ವಿಷದ ಲಡ್ಡು ಕೊಟ್ಟ ಕಥೆ ,ಅರಗಿನ ಮನೆಯನ್ನು ಸುಟ್ಟ ಕಥೆ ಮಹಾಭಾರತದಲ್ಲಿ ಓದಿರ್ತೇವೆ..ಅಲ್ಲಿ ಇಲ್ಲಿ ಇಂತಹ ವಿಚಾರಗಳು ನಡೆದಿರುತ್ತವೆ.

ಕಥೆಗಳೆಲ್ಲ ನೂರಕ್ಕೆ ನೂರು ಕಾಲ್ಪನಿಕವಲ್ಲ.

ಎಲ್ಲೋ ನಡೆದ ನಡೆಯಬಹುದಾದ ವಿಚಾರಗಳ ಎಳೆ ಅದರಲ್ಲಿ ಇರುತ್ತದೆ.

ಅಂದು ನಿಜಕ್ಕೂ ನಮ್ಮ ಮನೆಯಲ್ಲಿ ನಡೆದದ್ದೇನು ಎಂದು ಇಂದಿಗೂ ನನಗೆ ಗೊಂದಲದಲ್ಲಿಯೇ ಇದೆ.ಸಣ್ಣ ಮಗು ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ಮತ್ತು ಇವನು ಕೊಸರಾಡಿದ್ದಕ್ಕೆ ಸಾಕ್ಷಿಯಾಗಿ ಅಂಗಿ ಹರಿದಿತ್ತು.ಚಡ್ಡಿ ಜಾರಿತ್ತು ಬೇಡಾ ಎಂದು .ಬೊಬ್ಬೆ ಹಾಕಿದ್ದು ನನಗೂ ಕೇಳಿಸಿಯೇ ಓಡಿ ಬಂದದ್ದು ನಾನು


ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 


ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಕುಳಿತ ಭಂಗಿಯ  ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗರಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ( ಅಜ್ಜನ ಅಜ್ಜನ ತಂದೆ)ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  .ಮತ್ತು ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.

ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

https://shikshanaloka.blogspot.com/2020/11/blog-post_7.html?m=1

ಚಿತ್ರ : ಇಂಟರ್ನೆಟ್ ನಿಂದ

Saturday 7 November 2020

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ

 

ಹುಗ್ಗಾಟದ ಸಂಭ್ರಮ ಜಾರಿ ಹನಿಗಣ್ಣಾದ ಕ್ಷಣ 

ಮನೆ ಹಿಂದಿನ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ನಾಲ್ಕೈದು ಮಕ್ಕಳು ಐ ಸ್ಪೈಸ್ ? ಆಟ ಅಡುದನ್ನು ನೋಡಿದೆ‌ನಾವೂ ಹುಗ್ಗಾಟ ಆಡುತ್ತಿದ್ದ, ನಂತರ ನಿಜವಾಗಿ ನಡೆದ  ಕಥೆಯೊಂದನ್ನು  ಕೇಳಿ ಆಸಕ್ತಿ ಕಳೆದುಕೊಂಡ ವಿಚಾರ ನೆನಪಾಯಿತು‌


ನಾನು ಅಜ್ಜನ ಮನೆಯಲ್ಲಿ ಬೆಳೆದವಳು.

ನಮ್ಮ ಅಜ್ಜನ ಮನೆ ಕಾಸರಗೋಡಿನ ಮೀಯಪದವು ಸಮೀದ ಹೊಸಮನೆ.ಸುಮಾರು ಇನ್ನೂರು ವರ್ಷಗಳ ಹಳೆಯ ಮನೆ ಇದು.ಆಗಿನ ಕಾಲಕ್ಕೆ ಎರಡು ಅಂತಸ್ತಿನ ಉಪ್ಪರಿಗೆ ಮನೆ( ಎರಡು ಮಾಳಿಗೆಯ ಮನೆ) ಇದರಲ್ಲಿ ಮೇಲಿನ ಮಾಡಿನಲ್ಲಿ( ಮಾಳಿಗೆ ಯಲ್ಲಿ) ಒಂದು ದೋಣಿಯಾಕಾರದ ಮರದ ದೊಡ್ಡ ವಸ್ತು ಇತ್ತು‌ ಬಹುಶ ಃ ಹಳೆಯ ದೋಣಿ ಇರಬಹುದೋ ಏನೋ. ಅದರಲ್ಲಿ ಏನೇನೋ ಪುಸ್ತಕಗಳು ಇದ್ದವು.ಕೆಲವು ತಾಳೆ ಗರಿ ಗ್ರಂಥಗಳು ಕೂಡ ಇದ್ದವೆಂದು ಅನಿಸುತ್ತದೆ. ಆಗ ಅದರ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಈಗ ಇವು ಒರಳೆ ಹಿಡಿದು ಹಾಳಾಗಿದೆಯೋ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.

ನಾವು ಹುಗ್ಗಾಟ ಆಡಲು ಇಲ್ಲಿ ಅಡಗಿ ಕುಳಿತುಕೊಳ್ಳುತ್ತಾ ಇದ್ದೆವು.ಈ ಮಾಳಿಗೆಯಲ್ಲಿ ದೊಡ್ಡ ದೊಡ್ಡ  ಮಣ್ಣಿನ ಹಂಡೆಗಳಿದ್ದವು.

ಈ ಹಂಡೆಗಳಲ್ಲಿ ನಾವು ಅಡಗಿ ಕುಳಿತುಕೊಳ್ಳುತ್ತಿದ್ದೆವು..

ಇದನ್ನು ಗಮನಿಸಿದ ಅಜ್ಜಿ ನಮಗೆ ಜೋರು ಮಾಡಿ ಹಂಡೆಗಳನ್ನೆಲ್ಲ ಕವುಚಿ ಹಾಕಿದ್ದರು ನಮ್ಮನ್ನು ಎರಡನೆಯ ಮಾಳುಗೆಗೆ ಹೋಗದ ಹಾಗೆ ಜೋರು ಮಾಡಿದ್ದರು‌

.ಬಹುಶಃ ನಾವು ಒಡೆದು ಹಾಕಬಹುದು ಎಂದು ಹೀಗೆ ಮಾಡಿರಬಹುದು ಎಂದು ನಾವು ಊಹಿಸಿದ್ದೆವು.


ಆದರೆ ಅದಕ್ಕೆ ಬೇರೆಯೇ ಒಂದು ದೊಡ್ಡ ದುಃಖದ ದುರಂತದ ಕಾರಣವಿತ್ತು‌.ಅದರ ಹಿಂದೆ ಒಂದು ದುರಂತದ ಕಥೆ ಇತ್ತು 

ಇದನ್ನು ಒಮ್ಮೆ ನಮ್ಮ ಅಜ್ಜನ ತಂಗಿ ಪೆಲತ್ತಡ್ಕದ ಅಜ್ಜಿ ಒಮ್ಮೆ ಹೇಳಿದ್ದರು.

ನಮ್ಮ ಹಳ್ಳಿಗಳಲ್ಲಿ ಆಗ ಹೀಗೇ ಅಲ್ಲೊಂದು ಇಲ್ಲೊಂದು ಮಾಳಿಗೆ ಮನೆಗಳಿರುತ್ತಿದ್ದವು.

ಇಂತಹದ್ದೇ ಒಂದು ಮನೆಯಲ್ಲಿ ಮಕ್ಕಳೆಲ್ಲ ಸೇರಿ   ಹುಗ್ಗಾಟ  ಆಡುತ್ತಿದ್ದರು.ಹುಗ್ಗಾಟ ಎಂದರೆ ಹುಡುಕುವ ಆಟ.ಇದರಲ್ಲಿ ಮನೆಯ ಅಂಗಳ ಒಂದು ತುದಿಯಲ್ಲಿ ಒಬ್ಬರು  ಕಣ್ಣನ್ನು ಕೈಯಲ್ಲಿ ಮುಚ್ಚಿ ಕುಳಿತಿರುತ್ತಾರೆ‌.ಉಳಿದವರೆಲ್ಲ ಓಡಿ ಹೋಗಿ ಅಡಗಿ ಕುಳಿತುಕೊಳ್ಳುತ್ತಾರೆ.ಅಡಗಿದ ನಂತರ ಇಲ್ಲಿ ಕಣ್ಣು ಮುಚ್ಚಿದವರು ಕಣ್ಣಾ ಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಇತ್ಯಾದಿ ದೊಡ್ಡದಾಗಿ ಹಾಡುತ್ತಿದ್ದರು.ಅಡಗಿದವರು ಕೂ ಹಾಕಿ ರೆಡಿ ಎಂಬುದನ್ನು ಸೂಚಿಸುತ್ತಿದ್ದರು.ಆ ಹುಡುಗಿ/ ಗ ಒಬ್ಬೊಬ್ಬರನ್ನೇ ಹುಡುಕಿ ಹಿಡಿಯಬೇಕು‌.ಸಿಕ್ಕಿದವರು ಉಳಿದವರನ್ನು ಹುಡುಕಲು ಸಹಾಯ ಮಾಡುತ್ತಾರೆ‌.ಇವರು ಆಗಾಗ ಕೂ ಹಾಕುತ್ತಾರೆ‌.ಅಡಗಿ ಕುಳಿತವರು ಕೂಡ ಹುಡುಕುವವರು ದೂರ ಹೋದಾಗ ಕೂ ಹಾಕಿ ತಮ್ಮ ಇರವನ್ನು ಸೂಚಿಸುತ್ತಾರೆ.ಮತ್ತೆ ಅವರು ಹುಡುಕುತ್ತಾರೆ‌ ಹೀಗೇ ಎಲ್ಲರನ್ನೂ ಹಿಡಿದ ನಂತರ ಶರುವಿಗೆ ಸಿಕ್ಕವನು ಈಗ ಮತ್ತೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು.ಉಳಿದವರೆಲ್ಲ ಅಡಗಿ ಕುಳಿತುಕೊಳ್ಳುತ್ತಾರೆ‌

ಹೀಗೇ ಒಂದು ದೊಡ್ಡ ಎರಡು ಮಾಳಿಗೆಯ ಮನೆಯಲ್ಲಿ ಅಕ್ಕ ಪಕ್ಕದ ಮಕ್ಕಳು ಅ ಮನೆಯ ಏಳೆಂಟು ಮಕ್ಕಳ ಜೊತೆಗೆ ಸೇರಿ ಹುಗ್ಗಾಟ ಆಡುತ್ತಿದ್ದರು.

ಆಟದ ನಡುವೆಯೇ ಮನೆ ಮಂದಿ ತಿಂಡಿಗೋ ಊಟಕ್ಕೋ ಕರೆದರು.ತಿಂದು ಬೇರೆ ಏನೆನೋ ಆಟ ಆಡಿದರು‌ .ರಾತ್ರಿಯಾಗುತ್ತಲೇ ಎಲ್ಲರೂ ಅವರರವ ಮನೆ ಸೇರಿಕೊಂಡರು.ಆಟ ಆಡುವಾಗ  ಆ ಮನೆಯ ಐದು ವರ್ಷದ ಚಿಕ್ಕ ಹುಡುಗಿ ಕೂಡ ಇದ್ದಳು.

ರಾತ್ರಿ ಹೊತ್ತು ಊಟದ ವೇಳೆಯಲ್ಲಿ ಈ ಹುಡುಗಿ ಇಲ್ಲದ್ದು ಮನೆಯವರ ಗಮನಕ್ಕೆ ಬಂತು.ಅಕ್ಕ ಪಕ್ಕದ ಸ್ನೆಹಿತರ ಮನೆಗೆ ಹೋಗಿರಬಹುದು ಎಂದು ಮನೆ ಮಂದಿ ಅಲ್ಲೆಲ್ಲ ಹೋಗಿ ಹುಡುಕಾಡಿದರು.ಎಲ್ಲೂ ಇಲ್ಲ.ಕೆರೆ ಬಾವಿ ಎಲ್ಲ ಬಗ್ಗಿ ನೋಡಿದರು.ಎಲ್ಲಾದರೂ ಕಾಲು ಜಾರಿ ಬಿದ್ದಿರಬಹುದೋ ಏನೋ ಎಂದು.. ಎಲ್ಲೂ ಇಲ್ಲ..

ಊರ ಜನರೆಲ್ಲಾ ಸೇರಿ ಹುಡುಕಾಡಿದರೂ ಸಿಗಲಿಲ್ಲ.

ಹುಡುಗಿ ಕಾಣೆ ಆದಳು..ಆಗೆಲ್ಲ  ನಿತ್ಯ ಕರ್ಮಕ್ಕೆ ಗುಡ್ಡೆಗೆ ಇಲ್ಲವೇ ತೋಡಿಗೆ ಹೋಗುತ್ತಿದ್ದರು‌ ಹಾಗೆ ಈ ಹುಡುಗಿ ಗುಡ್ಡೆಗೆ ಹೋಗಿದ್ದು ಹುಲಿಯೋ ಕತ್ತೆ ಕಿರುಬನೋ ಹಿಡಿರಬಹುದೇ ಎಂದು ಹುಡುಕಾಡಿದರು.ಅಥವಾ ತೋಡನ ನೀರಿಗೆ ಕೊಚ್ಚಿಕೊಂಡು ಹೋದಳೇ ಎಂದು ಹುಡುಕಿದರು.ಎಲ್ಲೂ ಅವಳ ದೇಹ ಕೂಡ ಸಿಗಲಿಲ್ಲ.

ಅನೇಕ ದಿನಗಳ ಕಾಲ ಮನೆಯವರು ಹುಡುಕಾಡಿದರು..ಸಿಗಲಿಲ್ಲ ‌ನಿದಾನಕ್ಕೆ ಈ ವಿಚಾರವನ್ನು ಊರವರು ಮರೆತರು‌.ಹೆತ್ತ ತಂದೆ ತಾಯಿಗೆ ಮರೆಯಲಾದೀತೇ..ಆದರೂ ಉಳಿದ ಮಕ್ಕಳಿಗಾಗಿ ನೋವು ನುಂಗಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು.

ಇದಾಗಿ ಎಷ್ಟೋ ವರ್ಷಗಳ  ಮೂವತ್ತು ನಲುವತ್ತು ವರ್ಷಗಳ  ನಂತರ   ಮೇಲಿನ ಎರಡನೇ ಮಾಳಿಗೆಯಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಹಂಡೆಗಳನ್ನು ಬಟ್ಟೆ ತುಂಬಿಸಿ ಇಡುವ ಸಲುವಾಗಿ ತೊಳೆದು ಇಡಬೇಕೆಂದು ಕೆಳಗೆ ತಂದರು

ಅಲ್ಲಿದ್ದ ನಾಲ್ಕೈದು ಹಂಡೆಗಳು ತೆರೆದೇ ಇದ್ದವು‌.ಒಂದರ ಮುಚ್ಚಳ ಗಟ್ಟಿಯಾಗಿ ಹಾಕಿತ್ತಂತೆ.ಮುಚ್ಚಳ ತೆಗೆಯಲು ಆಗದಷ್ಟು ಗಟ್ಟಿ ಇತ್ತಂತೆ‌‌ ಕೆಳಗೆ ತಂದು ನೋಡುವಾ ಎಂದು ಮುಚ್ಚಳ ಸಹಿತವಾಗಿ ಆ ಹಂಡೆಯನ್ನು ಹೊತ್ತು ಕೆಳಗೆ ತಂದರಂತೆ.ಏನು ಮಾಡಿದರೂ ಅದರ ಮುಚ್ಚಳ ತೆರೆಯಲು ಆಗಲಿಲ್ಲ

ಈ ಹಂಡೆಯನ್ನು ತರುವಾಗ ಅದರೊಳಗೆ ಏನೋ ಇದ್ದ ಹಾಗೆ ಅನಿಸಿತ್ತು‌.ಹಾಗಾಗಿ ಕುತೂಹಲದಿಂದ ಆ ಮುಚ್ಚಳವನ್ನು ಒಡೆದು ತೆಗೆದರಂತೆ..

ಏನು ಹೇಳುದು ? ಅದರೊಳಗೆ ಒಂದು ಮನುಷ್ಯನ ಅಸ್ತಿಪಂಜರ ಇತ್ತಂತೆ.ಅದು ಆ ಕಾಣೆಯಾದ ಹುಡುಗಿಯದಾಗಿತ್ತು..

ಹುಗ್ಗಾಟ ಆಡುವಾಗ ಈ ಹುಡುಗಿ ಹಂಡೆಯ ಒಳಗೆ ಕುಳಿತುಕೊಂಡು ಮುಚ್ಚಳ ಹಾಕಿಕೊಂಡಿರಬಹುದು ಅಥವಾ ಇವಳನ್ನು ಬೇರೆ ಮಕ್ಕಳು ಒಳಗೆ ಕುಳಿತುಕೊಳ್ಳಿಸಿ ಹೊರಗಿನಿಂದ ಮುಚ್ಚಳ ಹಾಕಿದ್ದು ಮರೆತಿರಬಹುದು..

ಏನಾಯಿತು.. ದೇವರೊಬ್ಬನೇ ಬಲ್ಲ..ಆ ಹುಡಿಗಿ ಕುಳಿತಿದ್ದ ಹಂಡೆಯ ಮುಚ್ಚಳ ಬಹಳ ಗಟ್ಟಿಯಾಗಿ ಕುಳಿತಿದ್ದು ಹುಡುಗಿ ಕೂ ಹಾಕಿದ್ದು ಯಾರಿಗೂ ಕೇಳಿಸಿರಲಾರದು.ಅ ಅದರೊಳಗೆ ಗಾಳಿ ಸಾಲದೆ ಕೂಡಲೇ ಸತ್ತಿರಲೂ ಸಾಕು.

ಎರಡನೇ ಮಾಳಿಯಲ್ಲಿ ಹಳೆಯ ಸಾಮಾನುಗಳ ಜೊತೆ ಇದ್ದ ಕಾರಣ ಇವಳಲ್ಲಿ ಅವಿತಿರಬಹುದು ಎಂಬ ಊಹೆ ಯಾರಿಗೂ ಬಂದಿರಲಾರದು.ಅಥವಾ ಹೀಗೊಂದು ಆಗಬಹುದು ಎಂದು ಯಾರೂ ಊಹೆ ಮಾಡಿರಲಾರರು.

ಒಟ್ಟಿನಲ್ಲಿ ಆ ಹುಡುಗಿ ಸತ್ತದ್ದು ನಿಜವಂತೆ.

ಎರಡನೆಯ ಮಾಳಿಗೆಯಲ್ಲಿ ಇದ್ದ ಕಾರಣ ,ಅಲ್ಲಿಗೆ ಯಾರೂ ಹೋಗದಿರುವ ಕಾರಣ ಹೆಣ ಕೊಳೆತಾಗಲೂ ಗಮನಕ್ಕೆ ಬರಲಿಲ್ಲವೆನೋ ಅಥವಾ ಹಳ್ಳಿ ಮನೆಗಳಲ್ಲಿ ಕೆಲವೊಮ್ಮೆ ಹೆಗ್ಗಣ ,ಹಾವುಗಳು ಕೊಳೆತು ವಾಸನೆ ಬರುತ್ತಿದ್ದುದು ಸಾಮಾನ್ಯ ವಿಚಾರ ‌ಹಾಗೆಯೇ ಎಂದು ಭಾವಿಸಿರಬಹುದೋ ಏನೋ..

ಇದು ನಮ್ಮ ಅಜ್ಜನ ಪಿಜ್ಜನ ಕಾಲದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಎಂದು ಪೆಲತ್ತಡ್ಕದ  ಅಜ್ಜಿ ನಮಗೆ ಹೇಳಿದ್ದರು‌

ಈ ನಿಜ ಘಟನೆ ಎಲ್ಲೋ ನಡೆದದ್ದು ನಮ್ಮ ಅಜ್ಜಿಗೂ ಗೊತ್ತಿದ್ದಿರಬೇಕು‌ ಅದಕ್ಕಾಗಿ ನಮ್ಮನ್ನು ಎರಡನೇ ಮಾಳಿಗೆಗೆ ಹತ್ತಲು ಬಿಡುತ್ತಿರಲಿಲ್ಲ.ಹಂಡೆಯನ್ನೆಲ್ಲ ಕವುಚಿ ಹಾಕಿದ್ದರು.

ನಮ್ಮ ಪೆಲತ್ತಡ್ಕದ ಅಜ್ಜಿ ಈ ಕಥೆ ಹೇಳಿದ ಮೇಲೆ  ಈ ಆಟದಲ್ಲಿ ನಾವು ಆಸಕ್ತಿ ಕಳೆದುಕೊಂಡಿದ್ದೆವು.ಯಾವಾಗಾದರೊಮ್ಮೆ ಆಡುವಾಗ 

 ಸಣ್ಣ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸುತ್ತಿದ್ದೆವು‌.


ಪಾಪ ಹಂಡೆಯೊಳಗೆ ಸತ್ತ ಆ ಹುಡುಗಿ ಎಷ್ಟು ಭಯ ಪಟ್ಟಿದ್ದಳೋ,ಬೊಬ್ಬೆ ಹಾಕಿದ್ದಳೋ ಹಸಿವು ಬಾಯಾರಿಕೆಯಿಂದ ನರಳಿದಳೋ,ಗಾಳಿ ಸಾಲದೆ ಒದ್ದಾಡಿದಳೋ..ಅಜ್ಜಿ ಈ ನಿಜವಾದ  ಕಥೆ ಹೇಳಿದಾಗ ಅಂದು ನಾವೆಲ್ಲ ದುಃಖಿಸಿ ದುಃಖಿಸಿ ಅತ್ತಿದ್ದೆವು.ನಮ್ಮ ಜೊತೆಗೆ ಅಜ್ಜಿ ಕೂಡ ಕಣ್ಣೀರು ಹಾಕಿದ್ದರು‌. ನೆನೆದರೆ ಈಗಲೂ ಕಣ್ಣು ಹನಿಗೂಡುತ್ತದೆ‌.

ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು .ಇತ್ತೀಚೆಗೆ ಮಾಳಿಗೆಯಿಂದ ಮಗುವೊಂದು ಬಿದ್ದು ಸಾವನ್ನಪ್ಪಿದ ವಿಚಾರ ಓದಿದ್ದೆ‌‌..ನಾನು ಚಿನ್ಮಯ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾಗ ಐದನೆಯ ತರಗತಿಯ ಮಗುವೊಂದು ಐದು ಫ್ಲೋರ್ ನ ಫ್ಲಾಟ್ ನಿಂದ ಆಡುತ್ತಾ ಅಡುತ್ತಾ ಬಿದ್ದ ಚೆಂಡನ್ನು ತೆಗೆಯಲು ನೆರಳಿಗಾಗಿ ಹಾಸಿದ್ದ ಶೀಟ್ ಮೇಲೆ ಕಾಲಿಟ್ಟು ಬಿದ್ದು ಸಾವನ್ನಪ್ಪಿದ ದುರಂತ ನಡೆದಿತ್ತು.ನೀರಿನ ಸಂಪಿಗೆ ಬೀಳುದು,ಆಡಲು ಹೋಗಿ ಕೆರೆ ನದಿಯಲ್ಲಿ ಮುಳಗುವ ವಿಚಾರಗಳನ್ನು ಕೇಳುತ್ತಲೇ ಇರ್ತೇವೆ‌.ಅದಕ್ಕಾಗಿ ನಾವು ಸದಾ ಜಾಗ್ರತೆಯಿಂದ ಇರಬೇಕು.

ಡಾ.ಲಕ್ಷ್ಮೀ ಜಿ ಪ್ರಸಾದ 

Thursday 5 November 2020

ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು ಕೊಡುತ್ತಿದ್ದ ಚಾಕೊಲೇಟ್ ನ ಸವಿ

 ಕೆರೆಕೋಡಿಯ ಸುರಂಗದ ನೀರು ಮತ್ತು ಅಣ್ಣ ತಂದು  ಕೊಡುತ್ತಿದ್ದ ಚಾಕೊಲೇಟ್ ನ ಸವಿ 


ನಾನು ಹೆಚ್ಚು ಅಜ್ಜನ ಮನೆಯಲ್ಲಿ ಬೆಳೆದವಳು.ನನ್ನ ಅಜ್ಜ ಹೊಸಮನೆ  ಈಶ್ವರ ಭಟ್ಟರಿಗೆ ನನ್ನ ಅಮ್ಮ ಮತ್ತು ದೊಡ್ಡಮ್ಮ ಇಬ್ಬರೇ ಮಕ್ಕಳು.

ದೊಡ್ಡಮ್ಮನ ಮಗಳು  ಅಕ್ಕ ಪಾರ್ವತಿ ,ಅಣ್ಣ ರಾಧಾ ಕೃಷ್ಣ ಭಟ್,ದೊಡ್ಡಮ್ಮನ ಎರಡನೇ ಮಗಳು ಜಯಲಕ್ಷ್ಮಿ ( ಶಶಿ) ,ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು  ಅಜ್ಜನ ಮನೆಯಿಂದ ಶಾಲೆಗೆ ಹೋಗುತ್ತಿದ್ದೆವು.

ನಮ್ಮ ಅಜ್ಜನ‌ ಮನೆಯಲ್ಲಿ ಎಮ್ಮೆ ,ದನಗಳನ್ನು ಸಾಕುತ್ತಿದ್ದರು.ಸಾಕಷ್ಟು ಹಾಲು ಸಿಗುತ್ತಿತ್ತು .ಮನೆವಾರ್ತೆಗೆ ಮಿಕ್ಕಿದ್ದನ್ನು ಮುಂದಿಲದವರ ಹೋಟೆಲ್ ಗೆ ಮಾರಾಟ ಮಾಡುತ್ತಿದ್ದರು.

ಬೆಳಗ್ಗೆ ಶಾಲೆಗೆ ಹೋಗುವಾಗ ಹಾಲು ತಗೊಂಡು ಅಣ್ಣ ಹೋಟೆಲ್ ಗೆ ಕೊಡುತ್ತಿದ್ದ.ನಮಗೆ ಶಾಲೆಗೆ ಹೋಗಲು ಎರಡು ದಾರಿ ಇತ್ತು.ಒಂದು ಗುಡ್ಡದಲ್ಲಿ ಹೋಗಿ ಕೆರೆಕೋಡಿ ಮಾಸ್ಟ್ರ ಗುಡ್ಡೆಯ ದಾರಿಯಲ್ಲಿ ಸಾಗಿ ಮೀಯಪದವು ತಲುಪುದು.ಇನ್ನೊಂದು ಶೇಡಿ ಗುಡ್ಡೆ ಹತ್ತಿ ಮೀಯಪದವು ತಲುಪುದು

ನಾವು ಬೆಳಗ್ಗೆ ಹೋಗುವಾಗ ಕೆರೆ ಕೋಡಿ ಗುಡ್ಡೆಯ ದಾರಿ ಆಯ್ಕೆ ಮಾಡುತ್ತಿದ್ದೆವು.ಈ ಕೆರೆಕೋಡಿ ಮಾಸ್ಟ್ರ ಜಾಗದಲ್ಲಿ ಇರುವ ಗುಡ್ಡೆಯಲ್ಲಿ ಒಂದು ಸುರಂಗ ಇತ್ತು.ಈಗಲೂ ಇರಬಹುದೋ ಏನೋ.

ಅದರಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ಕೂಡ ಸ್ವಚ್ಛವಾದ ನೀರು ಬರುತ್ತಿತ್ತು.ಅದನ್ನು ಒಂದು ಗುಂಡಿಗೆ ಬಂದು ಬೀಳುವಂತೆ ಮಾಡಿದ್ದರು.ಅಲ್ಲಿಂದ ಪೈಪಿನ ಮೂಲಕ ಅವರ ಮನೆಗೆ ನೀರು ಹೋಗುತ್ತಾ ಇತ್ತು.

ಈ ನೀರು ಬಹಳ ರುಚಿ.ನೋಡಿದ ತಕ್ಷಣವೇ ಕುಡಿಯಬೇಕು ಎನಿಸುವಷ್ಟು ಸ್ವಚ್ಛ.

ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ಇಲ್ಲಿ ಬರುತ್ತಿದ್ದೆವು.ನೀರು ಕುಡಿಯಲು ಅಲ್ಲ.ಅದಕ್ಕೆ ಬೇರೆಯೇ ಕಾರಣ ಇದೆ.ಈಗ ನೆನಪಾಗಿ  ನಗು ಬರುತ್ತದೆ.

ನಮ್ಮ ಅಜ್ಜಿ ಬಹಳ ಪ್ರಾಮಾಣಿಕ ಮಹಿಳೆ.ಹಾಗಾಗಿ ಹೋಟೆಲಿಗೆ ಕೊಡುವ ಹಾಲಿನ ಒಂದು ತೊಟ್ಟು ಕೂಡ ನೀರು ಸೇರಿಸುತ್ತಿರಲಿಲ್ಲ..

ನಾವು ಮಕ್ಕಳು ಮಾತ್ರ ಚಾಕೊಲೇಟ್ ನ ಆಸೆಗೆ  ದ್ರೋಹ ಮಾಡುತ್ತಿದ್ದೆವು.ದಾರಿಯಲ್ಲಿ ಸಿಗುವ ಈ ಸುರಂಗದ ನೀರನ್ನು ತೆಗೆದು ಅಜ್ಜಿ ಅಳೆದು ಕೊಟ್ಟ ಹಾಲಿನ ಪಾತ್ರೆಗೆ ಒಂದು ಕುಡ್ತೆಯಷ್ಟು ಹಾಕುತ್ತಿದ್ದೆವು.

ಅಜ್ಜಿ ಹಾಲು ತುಂಬಿಸಿ ಕೊಡುವ ಅಲ್ಯೂಮಿನಿಯಂ ಬುತ್ತಿ ಪಾತ್ರದ ಮುಚ್ಚಳದಲ್ಲಿ‌ ಎಂಟು ಸಲ ನೀರು ತುಂಬಿ ಹಾಕಿದರೆ ಒಂದು ಕುಡ್ತೆ ಆಗುತ್ತಿತ್ತು.ಇದನ್ನು ಮನೆಯಲ್ಲಿ ಅಳೆದು  ದೊಡ್ಡಮ್ಮನ ಮಗ ಅಣ್ಣ ಕಂಡುಕೊಂಡಿದ್ದ. 

ನಾವು ಹತ್ತು ಮುಚ್ಚಳ ನೀರು ಹಾಕುತ್ತಿದ್ದೆವು.ಹೋಟೆಲಿಗೆ ಹಾಲು ಕೊಡುವಾಗ ಅಜ್ಜಿ ಹೇಳಿದ ಅಳತೆಗೆ ಒಂದು ಕುಡ್ತೆ ಹೆಚ್ಚು ಸೇರಿಸಿ ಹೇಳುತ್ತಿದ್ದೆವು.ಆಗ ಹಾಲು ಕೊಟ್ಟ ತಕ್ಷಣವೇ ದುಡ್ಡು ಕೊಡುತ್ತಿದ್ದರು.ಅವರು ಅಳೆದು ನೋಡಿದರೆ ನಾವು ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹಾಲು ಇರ್ತಿತ್ತು‌.ಯಾಕೆಂದರೆ ನಾವು ಎಂಟು ಮುಚ್ಚಳದ ಬದಲು ಹತ್ತು‌ ಮುಚ್ಚಳ ನೀರು ಸೇರಿಸುತ್ತಿದ್ದೆವಲ್ಲ.

ಹೀಗೆ ಒಂದು ಕುಡ್ತೆ ಹೆಚ್ಚು ಮಾಡಿದಾಗ ನಮಗೆ ಒಂದು ಕುಡ್ತೆ ಹಾಲಿನ ದುಡ್ಡು ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ದುಡ್ಡಿನಲ್ಲಿ  ಅಣ್ಣ ಚಾಕೊಲೇಟ್ ಬಿಸ್ಕತ್ತು ಗಳನ್ನು ಅಂಗಡಿಯಿಂದ ಖರೀದಿಸಿ ಸಮಪಾಲು ಮಾಡಿ ಒಂದು ಪಾಲು ತಾನಿಟ್ಟುಕೊಂಡು ಉಳಿದದ್ದನ್ನು ನಮಗೆ ಹಂಚುತ್ತಿದ್ದ‌‌‌.ಹಂಚುವಾಗ ಅಣ್ಣನಲ್ಲಿ ಸ್ವಲ್ಪವೂ ಪಕ್ಷಪಾತ ಇರಲಿಲ್ಲ ‌ತನ್ನ ಸ್ವಂತ  ಅಕ್ಕ ತಂಗಿಯರಂತೆಯೇ ನನ್ನನ್ನು ಕಾಣುತ್ತಿದ್ದ.ಆಟದಲ್ಲಿ ಇರಬಹುದು ,ತಿಂಡಿಕೊಡುವಾಗ ಇರಬಹುದು.. ಅಣ್ಣನಿಗೆ ನಮ್ಮ ನಡುವೆ ಒಂದಿನಿತು ಬೇಧ ಭಾವವಿರಲಿಲ್ಲ(.ಅವರು ಅಂದು ಬಾಲಕನಿದ್ದಾಗ  ಹೇಗೆಯೋ ಇಂದು ಕೂಡ ಹಾಗೆಯೇ ಇದ್ದಾರೆ .ಅವರ ಸ್ವಂತ ಅಕ್ಕ ತಂಗಿಯರಲ್ಲಿ ಇರುವಂತಹದೇ ಪ್ರೀತಿ ಚಿಕ್ಕಮ್ಮನ ಮಕ್ಕಳಾದ ನಮ್ಮಲ್ಲಿ ಕೂಡ)

ಮನೆಯಲ್ಲಿ ಅಜ್ಜಗೆ ಅಜ್ಜನಿಗೆ ಈ ವಿಚಾರ ತಿಳಿಯದಂತೆ ನಾವು ಜಾಗ್ರತೆ ವಹಿಸಿದ್ದೆವು.ಅಜ್ಜಿ ಗಟ್ಟಿಯಾದ ಹಾಲನ್ನೇ ಕೊಡುತ್ತಿದ್ದರು.ಹದಿನೈದು ಇಪ್ಪತ್ತು ಕುಡ್ತೆ ಗಟ್ಟಿ ಹಾಲಿಗೆ ಒಂದು ಕುಡ್ತೆ ನೀರು ಸೇರಿಸಿದ್ದು ಹೋಟೆಲಿನವರ ಗಮನಕ್ಕೂ ಬರುತ್ತಿರಲಿಲ್ಲ ‌ಯಾಕೆಂದರೆ  ಎಮ್ಮೆ ಹಾಲು ತುಂಬಾ ದಪ್ಪ ಇರುತ್ತದೆ.ಒಂದು ಲೀಟರ್ ಗೆ ಒಂದು ಕುಡ್ತೆ ನೀರು ಹಾಕಿದರೂ ಕೂಡ ನೀರು ಹಾಕುದ್ದಾರೆ ಎಂದು ಗೊತ್ತಾಗದಷ್ಟು ಗಟ್ಟಿ ಹಾಲು ಅದು.ಇನ್ನೂ ನಮ್ಮ ಅಜ್ಜಿ ದಿನಕ್ಕೆ ಎರಡು ಎರಡೂವರೆ ಲೀಟರ್ ಹಾಲು ಹೋಟೆಲಿಗೆ ಮಾರುತ್ತಿದ್ದರು.ಅವರು ಒಂದು ತೊಟ್ಟು ನೀರು ಹಾಕುತ್ತಿರಲಿಲ್ಲ.ಹಾಗಾಗಿ ನಾವು ಒಂದು ಕುಡ್ತೆ ನೀರು ಸೇರಿಸುದರಿಂದ ಹಾಲು ತೆಳು ಎಂದೆನಿಸುತ್ತಿರಲಿಲ್ಲ‌.ಕೆರೆಕೋಡಿಯ ಸುರಂಗದ ಶುದ್ದ ನೀರನ್ನು ಸೇರಿಸುತ್ತಿದ್ದ ಕಾರಣ ಆರೋಗ್ಯ ಹಾಳಾಗುವ ಸಾಧ್ಯತೆಯೇ ಇರಲಿಲ್ಲ.


.ನಾನು ಅಜ್ಜನ ಮನೆಯಲ್ಲಿ ದೊಡ್ಡಮ್ಮನ ಮಕ್ಕಳ ಜೊತೆಗೆ ಬೆಳೆದ ಕಾರಣ ನನಗೂ ಅವರಲ್ಲಿ ನನ್ನ ಸ್ವಂತ ಅಣ್ಣ ಅಕ್ಕ ತಮ್ಮಂದಿರಲ್ಲಲಿ ಇರುವಷ್ಟೇ ಫ್ರೀತಿ ಸೆಳೆತ.

ಅದರಲ್ಲೂ ದೊಡ್ಡಮ್ಮನ ಮೂರನೇ ಮಗಳು ರಾಜೇಶ್ವರಿ ಮತ್ತು ನಾನು ಗಳಸ್ಯ ಕಂಠಸ್ಯ..

ಒಂದೇ ಒಂದು ಸಲ ನಮ್ಮೊಳಗೆ ಯಾವುದೇ ವಿಚಾರಕ್ಕೆ ಜಗಳವಾದದ್ದಿಲ್ಲ..ನಾವಿಬ್ಬರೂ ದೊಡ್ಡ ಕಸಂಟುಗಳು.ಜಗಳಗಂಟಿಯರು.ಆದರೆ ನಮ್ಮೊಳಗೆ ಬಹಳ ಸ್ನೇಹ‌.ಒಗ್ಗಟ್ಟು.. ನಾವು ಅಣ್ಣ ಅಕ್ಕ ತಮ್ಮ ತಂಗಿಯರ ಜೊತೆಗೆ ಜಗಳವಾಡದ ದಿನವೇ ಇಲ್ಲ..ಅಷ್ಟು ಕುಖ್ಯಾತರು.

ಎಲ್ಲೇ ಹೋಗಲಿ, ನಾವು ಇಬ್ಬರು ಜೊತೆಗೆ ಹೋಗುದು ಬರುವುದು ಮಾಡುತ್ತಿದ್ದೆವು‌.

ನಾನು ಪಿಯುಸಿ ಓದುತ್ತಿದ್ದಾಗ ಅಜ್ಜ ತೀರಿ ಹೋದರು.ನಮ್ಮ ಮನೆಗಳ ನಡುವೆ ಆಸ್ತಿ ವುವಾದ ಹುಟ್ಟಿತು.ಒಂದಷ್ಟು ಜನರು ನ್ಯಾಯವಾಗಿ ಪರಿಹರಿಸುವ ಬದಲು ಸಣ್ಣ ಬೆಂಕಿಗೆ ತುಪ್ಪ ಎರೆದು ಗಾಳಿ ಹಾಕಿ ದೊಡ್ಡದು ಮಾಡಿದರು..

ಆದರೆ ಅದು ತುಂಬಾ ಸಮಯ ನಡೆಯಲಿಲ್ಲ ನಾವು ಮತ್ತೆ ರಾಜಿಯಾದೆವು.

ಈ ನಡುವಿನ ಸಮಯದಲ್ಲಿ ನಮಗೆ ಹೋಗುದು ಬರುವ ಸಂಬಂಧ ಇರಲಿಲ್ಲ. ಅದರೆ ನಾವಿಬ್ಬರು ( ನಾನು ಮತ್ತು ರಾಜೇಶ್ವರಿ) ಎಂದಿನಂತೆ ಕಾಲೇಜಿನಲ್ಲಿ ಸಿಕ್ಕಾಗ ಪಟ್ಟಾಂಗ ಹೊಡೆಯುತ್ತಿದ್ದೆವು.

ಮನೆಗಳ ನಡುವಿನ ಆಸ್ತಿಯ ವುವಾದ ನಮ್ಮ ಮನಗಳನ್ನು ಒಡೆಯುವಷ್ಟು ಗಟ್ಟಿಯಾಗಿರಲಿಲ್ಲ.ಅಥವಾ ನಮ್ಮ ಮನಸ್ಸನ್ನು ಒಡೆಯುವುದು ಸುಲಭದ ವಿಚಾರವಾಗಿರಲಿಲ್ಲ.ಅಷ್ಟೂ ಸಾಂಗತ್ಯ ನಮ್ಮೊಳಗೆ..ಮತ್ತೆ ಬಾಲ್ಯಕ್ಕೆ ಇಳಿದು ಮಕ್ಕಳಾಗಿ ನಲಿಯಬೇಕೆನಿಸುತ್ತದೆ ನನಗೆ‌.

ಇನ್ನೂ ಅನೇಕ ಹೇಳಲು ಇದೆ.ಇನ್ನೊಂದು ದಿನ ಬರೆಯುವೆ‌

ಲಕ್ಷ್ಮೀ ಜಿ ಪ್ರಸಾದ