Saturday 16 April 2022

ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ಈವತ್ತಿಗೂ ಪಶ್ಚಾತ್ತಾಪವಿದೆ

 ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ

ಆ ಒಂದು ತೀರ್ಪಿನ ಬಗ್ಗೆ ಈವತ್ತಿಗೂ ಪಶ್ಚಾತ್ತಾಪವಿದೆ 

ನಾನು ಚಿಕ್ಕಂದಿನಲ್ಲಿ ಹೈಪರ್ ಆಕ್ಟೀವ್.ಎಲ್ಲ ಸ್ಪರ್ದೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದೆ.ಬಹುಮಾನಗಳನ್ನೂ ಪಡೆದು ಸ್ವರ್ಗ ಸಿಕ್ಕಂತೆ ಸಂಭ್ರಮಿಸುತ್ತಿದ್ದೆ.ಮನೆಗೆ ಬಂದವರಿಗೆ ಹೊಓದವರಿಗೆ ಎಲ್ಲರಿಗೂ ಸರ್ಟಿಫಿಕೇಟ್ ಗಳನ್ನು ತೋರಿಸಿ ಅವರಿಂದ ಮೆಚ್ಚುಗೆ ಮಾತುಗಳನ್ನು ಪಡೆದು(ಬಲವಂತವಾಗಿ ?ನನ್ನ  ಕಿರಿ ಕಿರಿ ತಾಳಲಾಗದೇ )  ಬಹಳ ಖುಷಿ ಪಡುತ್ತಿದ್ದೆ.

ಬಹುಮಾನವನ್ನು ಪಡೆಯಲು ವೇದಿಕೆ ಏರುವಾಗ ನನಗೆ ಚಂದ್ರಲೋಕಕ್ಕೆ ಹೋಗುವಷ್ಟು ಉತ್ಸಾಹ ಇರುತ್ತಿತ್ತು.ನಂತರ ಬಹುಮಾನ ಪಡೆದು ಸಭೆಯಿಂದ ಚಪ್ಪಾಳೆ ಸದ್ದನ್ನು ಕೇಳಿ ಬಹಳ ನಲಿವಿನಿಂದ ಇಳಿದು ಬರುತ್ತಿದ್ದೆ

ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಬಂದಾಗ ನಾನು ಶಿಕ್ಷಕಿಯಾದೆ.ಸಹಜವಾಗಿ ನಾನಾ ಸ್ಪರ್ಧೆಗಳಿಗೆ ತೀರ್ಪುಗಾರಳಾಗಿ ಭಾಗಹಿಸಿದೆ

ಅಲ್ಲೆಲ್ಲ ನಾನು ಬಹಳ ಎಚ್ಚರಿಕೆಯಿಂದ ನಿಷ್ಪಾಕ್ಷಿಕವಾಗಿ ತೀರ್ಪು ನೀಡಿರುವೆ.

ಆದರೆ ಒಂದೆಡೆ ಮಾತ್ರ ನಾನು ತುಸು ತಪ್ಪು ಮಾಡಿ ಒಂದು ವಿದ್ಯಾರ್ಥಿನಿಯ ಪರ ಹೆಚ್ಚು ಅಂಕ ನೀಡಿ ಗೆಲ್ಲಿಸಬೇಕಿತ್ತು ಎನಿಸಿತ್ತು.ಹಾಗೆ ಮಾಡದ್ದಕ್ಕೆ ನನಗೆ ಇಂದಿಗೂ ಪಶ್ಚಾತ್ತಾಪವಿದೆ.

ಸಮಾನತೆಗೆ ಭಿನ್ನ ಭಿನ್ನವಾದ ಮಾನದಂಡಗಳಿವೆ.ಒಂದು ತಾಯಿ ತನ್ನ ಎರಡು ವರ್ಷದ ಮಗುವಿಗೆ ಒಂದು ರೊಟ್ಟಿಯನ್ನೂ ಎಂಟು ವರ್ಷದ ಮಗುವಿಗೆ ಎರಡು ರೊಟ್ಟಿಗಳನ್ನೂ ಕೊಡುತ್ತಾಳೆ.ಅದುಮಕ್ಕಳ ನಡುವೆ ಅಸಮಾನತೆ ತೋರಿದಂತೆ ಆಗುವುದಿಲ್ಲ.

ನಾನು ಈ ವಿಧದ ಮಾನದಂಡವೊಂದನ್ನು ಅದೊಂದು ಸ್ಪರ್ಧೆಯಲ್ಲಿ ಅನುಸರಿಬೇಕಿತ್ತು 


ಅದು ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿನ ಚಿನ್ಮಯ ಶಾಲೆಯಲ್ಲಿ ನಡೆದ ಘಟನೆ.ಆಗ ಚಿನ್ಮಯ ಶಾಲೆ ಮಂಗಳೂರಿನಲ್ಲಿ ಬಹಳ ಖ್ಯಾತಿಯನ್ನು ಪಡೆದಿತ್ತು.ಅಲ್ಲಿ ಸೀಟು ಸಿಗುವುದು ಸುಲಭದ್ದಾಗಿರಲಿಲ್ಲ.ಪಠ್ಯ ಮತ್ತು ಪಠ್ಯೇತರ ಚಟುವಟಿಗೆ ಎರಡರಲ್ಲೂ ಚಿನ್ಮಯ ವಿದ್ಯಾ ಸಂಸ್ಥೆ ಬಹಳ ಕ್ರಿಯಾಶೀಲವಾಗಿತ್ತು.ಬಹಳ ಕ್ರಿಯಾಶೀಲರಾದ ಶಿಕ್ಷಕರ ದಂಡು ಅಲ್ಲಿತ್ತು

ಒಂದು ವರ್ಷ ಒಂಬತ್ತನೆಯ ತರಗತಿಗೆ ಓರ್ವ ವಿಶಿಷ್ಟ ಚೇತನಳಾದ ವಿದ್ಯಾರ್ಥಿನಿಯ ದಾಖಲಾತಿ ಆಗಿತ್ತು.ಹುಟ್ಟಿನಿಂದ ಅವಳಿಗೆ ನ್ಯೂನತೆ ಇರಲಿಲ್ಲ.ಸುಮಾರು ಹತ್ತರ ವಯಸದಸಿನಲ್ಲಿ ಗಂಟಲಿನ ಮೈನರ್ ಸರ್ಜರಿ ಆದಾಗ ಸೋಂಕು ತಗುಲಿ ಅವಳಿಗೆ ವಾತ ( arthritis) ಉಂಟಾಗಿತ್ತು.ಬಹಳ ಜಾಣ ವಿದ್ಯಾರ್ಥಿನಿ

ಆದರೆ ವಾತದಿಂದಾಗಿ ಅಕ್ಷರಗಳು ಮುದ್ದಾಗಿರಲಿಲ್ಲ

ಇಡೀ ದೇಹದಲ್ಲಿ ಎಲ್ಲ ಗಂಟುಗಳಲ್ಲಿ ಅಪಾರವಾದ ನೋವಿತ್ತು ಅವಳಿಗೆ.ಹಾಗಾಗಿ ಬರೆಯುವುದೂ ಸಾಹಸದ ವಿಚಾರವೇ.ಅದರೆ ಅವಳು ತುಂಬಾ ಜಾಣೆ ಎಂದು ಗೊತ್ತಿದ್ದ ಕಾರಣ ಅವಳ ಬರವಣಿಗೆಯನ್ನು ಕೊರಕಲಾಗಿದ್ದರೂ ಓದಿ ಅಂಕ ಕೊಡುತ್ತಿದ್ದೆವು. ಹಾಗಾಗಿ ಉತ್ತಮ ಅಂಕಗಳು ಸಿಗುತ್ತಿತ್ತು.ಆದರೆ ಪಬ್ಲಿಕ್ ಪರೀಕ್ಷೆಯಲ್ಲಿ ಅವಳಿಗೆ ಒಳ್ಳೆಯ ಅಂಕಗಳು ಬರಲು ಕಷ್ಟವಿತ್ತು

ಅವಳು ಚಿನ್ಮಯ ಶಾಲೆಗೆ ಸೇರಿದ ವರ್ಷ ಅತವಾ ಮರು ವರ್ಷ  ಯಾವುದೋ ಸಂಘಟನೆಯೊಂದು ನಮ್ಮಲ್ಲಿ ಭಗವದ್ಗೀತೆ ? ಕುರಿತಾದ ಭಾಷಣ ಪ್ರಬಂಧ ಕಂಟಪಾಠ ಸ್ಪರ್ದೆ ಏರ್ಪಡಿಸಿತ್ತು.ಇಲ್ಲಿ ಪ್ರಥಮ ಸ್ಥಾನ ಬಂದವರು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದರು.ದ್ವಿತೀಯ ತೃತೀಯ ಸ್ತಾನ ಪಡೆದವರಿಗೆ ಒಂದು ಸಣ್ಣ ಬಹುಮಾನ ಮತ್ತು ಸರ್ಟಿಫಿಕೇಟ್ ಕೊಡುತ್ತೇವೆ ಎಂದಿದ್ದರು

ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಆ ವಿದ್ಯಾರ್ಥಿನಿಯೂ ಭಾಗವಹಿಸಿದ್ದಳು.ಅವಳಿಗೆ ಶಾಲೆಯೊಳಗಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಿತ್ತು.ಹೊರಗಡೆ ನಡೆಯುವ ಸ್ಪರ್ಧೆಗಳಿಗೆ ಹೋಗಲು ಅವಳ ಶಾರೀರಿಕ ಸಮಸ್ಯೆ ತೊಡಕಾಗಿತ್ತು.ಹಾಗಾಗಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಳು

ಚಿನ್ಮಯ ಶಾಲೆ ನಾನು ಮೊದಲೇ ತಿಳಿಸಿದಂತೆ ಅಗಿನ ಕಾಲಕ್ಕೆ ಬಹಳ ಪ್ರಸಿದ್ದವಾದದ್ದು.ಬಹಳ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿದ್ದರು.ಇಲ್ಲಿನ ಮಕ್ಕಳು ತಾಲೂಕು,ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದರು.ಹಾಗಾಗಿ ಶಾಲೆಯೊಳಗೆ ನಡೆಯುವ ಸ್ಪರ್ಧೆಗಳಲ್ಲಿ ಕೂಡ ಬಹುಮಾನ ಪಡೆಯುವದ್ದು ಸುಲಭದ್ದಾಗಿರಲಿಲ್ಲ.ಹಾಗಾಗಿ ಆ ವಿದ್ಯಾರ್ಥಿನಿಗೆ ಅದು ತನಕ ಬಹುಮಾನ ಬಂದಿರಲಿಲ್ಲ

ಆದಿನ  ಭಾಷಣ ಸ್ಪರ್ಧೆಗೆ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬಳಾಗಿದ್ದೆ

ಆ ದಿನ ಈ ಹುಡುಗಿ ಕೂಡ ಚೆನ್ನಾಗಿ ಭಾಷಣ ಮಾಡಿದ್ದಳು.ನಾನು ನೀಡಿದ ತೀರ್ಪಿನಲ್ಲಿ ಇವಳಿಗೆ ಮೂರನೆಯ ಸ್ಥಾನವಿತ್ತು.ಮೂವರೂ ನೀಡಿದ ಅಂಕಗಳನ್ನು ಒಟ್ಟು ಮಾಡಿದಾಗ ಇವಳಿಗೆ ಮತ್ತು ಇನ್ನೊಬ್ಬಳಿಗೆ ಸಮಾನ ಅಂಕ ಬಂದು ಇಬ್ಬರಿಗೂ  ಮೂರನೆಯ ಸ್ಥಾನ ಬಂತು.

ಇಬ್ಬರಲ್ಲಿ ಒಬ್ಬಳನ್ನು ಆಯ್ಕೆ ಮಾಡಿ ತೃತೀಯ ಬಹುಮಾನ ಘೋಷಣೆ ಮಾಡಬೇಕಿತ್ತು.ಆಗ ನಾನು ಈ ವಿದ್ಯಾರ್ಥಿನಿಗೆ ತೃತೀಯ ಬಹುಮಾನ ಕೊಡುವ ಎಂದೆ.ಆದರೆ ಇನ್ನಿಬ್ಬರು ತೀರ್ಪುಗಾರರು " ಬೇಡ..ಇನ್ನೊಬ್ಬಳಿಗೆ ಕೊಡುವ ಎಂದರು.ಬಹುಮತಕ್ಕೆ ಮನ್ನಣೆ ಬಂತು.ನನಗೇನೂ ಮಾಡಲಾಗದ ಪರಿಸ್ಥಿತಿ

ಆ ಇನ್ನೊಬ್ಬಹುಡುಗಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದವಳು.ಅದಕ್ಕೆ ಮೊದಲೇ ಅನೇಕ ಸ್ಪರ್ಧೆಗಳಲ್ಲಿ ಗೆದ್ದವಳೇ ಆಗಿದ್ದಳು

ಅವಳಿಗೆ ಇದೊಂದು ಬಹುಮಾನ ಬಾರದೇ ಇದ್ದಾಗ ಒಂದೆರಡು ದಿನ ಬರಲಿಲ್ಲ ಅನ್ನುವ ನೋವು ಕಾಡ್ತಿತ್ತು ಅಷ್ಟೇ

ಆ ಮೂರನೆಯ ಬಹುಮಾನವನ್ನು ನಾವು  ಶಾರೀರಿಕ  ಸಮಸ್ಯೆ ಇದ್ದ ವಿದ್ಯಾರ್ಥಿನಿಗೆ ಕೊಟ್ಟಿದ್ದರೆ ಆ ಬಹುಮಾನ ಪಡೆದು ಅವಳು ತುಂಬಾ ಸಂಭ್ರಮ ಪಡುತ್ತಿದ್ದಳು.ಬದುಕಿರುವ ತನಕವೂ ಆ ಸರ್ಟಿಫಿಕೇಟನ್ನು ನೋಡಿ ತನ್ನ ಗೆಲುವಿನ ರೋಮಾಂಚನವನ್ನು ಅನುಭವಿಸುತ್ತಿದ್ದಳು.ಅವಳು ಸದಾ ಸ್ಪರ್ಧೆಗಳಲ್ಲಿ ಗೆಲ್ಲುವವಳಾಗಿದ್ದು ಇದೂ ಬಂದಿದ್ದರೆ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು ಇನ್ನೊಬ್ಬಳಂತೆ

ಆದರೆ ನನಗೆ ತಿಳಿದಂತೆ ಅವಳಿಗೆ ಅದು ತನಕ ಯಾವುದರಲ್ಲೂ ಬಹುಮಾನ ಬಂದಿರಲಿಲ್ಲ.ಇಬ್ಬರಿಗೆ ಸಮಾನ ಅಂಕ ಬಂದು ಮೂರನೆಯ ಸ್ಥಾನ ಸಿಕ್ಕಾಗ ನಾವು ಇಬ್ಬರಿಗೂ ಬಹುಮಾನ ಪ್ರಮಾಣ ಪತ್ರ ನಿಡಬೇಕೆಂದು ಗಟ್ಟಿಯಾಗಿ ನಿಲ್ಲಬೇಕಿತ್ತು. ಅದೂ ಮಾಡಲಿಲ್ಲ

ಅಪರೂಪಕ್ಕೆ ತೃತೀಯ ಸ್ಥಾನ ಪಡೆದ ಮತ್ತು ಇತರೆಡೆ ಹೊಗಲಾಗದ ಈ ಹುಡುಗಿಗೇ ಆ ತೃತೀಯ ಬಹುಮಾನವನ್ನು ಕೊಡಿಸಬೇಕಿತ್ತು

ಎರಡೂ ಆಗದ ಬಗ್ಗೆ ನನಗೆ ನಂತರ ಬಹಳ ಕೊರಗು ಉಂಟಾಗಿತ್ತು

ಈಗಲೂ ನಾನಾ ಸಂಘ ಸಂಸ್ಥೆಗಳು ನನ್ನನ್ನು ನಾನಾ ಸ್ಪರ್ಧೆಗಳ ತೀರ್ಪುಗಾರಳಾಗಿ ಆಹ್ವಾನಿಸುತ್ತಿದ್ದು ನಾನು ತೀರ್ಪುಗಾರಳಾಗಿ ಬಾಗವಹಿಸುತ್ತೇನೆ.ಅತ್ಯಂತ ನಿಷ್ಪಾಕ್ಷಿಕವಾಗಿ ತೀರ್ಪು ನೀಡುತ್ತೇನೆ.ಕೆಲವಿಮ್ಮೆ ನಮ್ಮ ಆತ್ಮೀಯರೇ ಸ್ಪರ್ಧಿಗಳಾಗಿರುತ್ತಾರೆ. ಆಗಲೂ ನನ್ನ ತೀರ್ಪು ಪ್ರತಿಭೆಯ ಪರವೇ ಆಗಿರುತ್ತದೆ.ಅದರೆ ಪ್ರತಿ ಬಾರಿಯೂ ನನಗೆ ಈ ವಿದ್ಯಾರ್ಥಿನಿ ನೆನಪಾಗುತ್ತಾಳೆ 

ಆದರೆ ಆ ದಿನ ಚಿನ್ಮಯ ಶಾಲೆಯಲ್ಲಿ ನಾನು ಆ ವಿದ್ಯಾರ್ಥಿನಿಗೆ ತುಸು ಹೆಚ್ಚು ಅಂಕ ಕೊಡಬೇಕಿತ್ತೆನಿಸುತ್ತದೆ.

ಆಗ ಅವಳಿಗೆ ಮೂರನೆಯ ಬಹುಮಾನ ಬರುತ್ತಿತ್ತು ಎಂದೆನಿಸುತ್ತದೆ.ಆದರೆ ತೀರ್ಪುಗಾರಳಾಗಿ ನಾನು ಅವತ್ತು ಮಾಡಿದ್ದು ಸರಿ..ಅವಳಿಗಿಂತ ಚೆನ್ನಾಗಿ ಭಾಷಣ ಮಾಡಿದ ಇಬ್ಬರಿಗೆ ಇವಳಿಗಿಂತ ಹೆಚ್ಚು ಅಂಕ ನೀಡಿದ್ದೆ.ಅದು ಸರಿಯಾದುದೇ.ಆದರೆ ಇಬ್ಬರಿಗೆ ಮೂರನೆಯ ಬಹುಮಾನ ಕೊಡಲು ಅಸಾಧ್ಯ ಎಂದಾದಾಗ ನಾನು ಈ ಹುಡುಗಿಗೆ ತುಸು ಹೆಚ್ಚು ಅಂಕ ಕೊಡುತ್ತಿದ್ದರೆ ಅವಳಿಗೆ ಮುರನೆಯ ಬಹುಮಾನ ಬರ್ತಿತ್ತು ಇನ್ನೊಬ್ಬಳಿಗೆ ನಾಲ್ಕನೆಯ ಸ್ಥಾನ ಬರ್ತಿತ್ತು ಎಂದೆನಿಸಿತ್ತು

ಅಥವಾ ಇಬ್ಬರಿಗೂ ಸಮಾನ ಅಂಕ ಲಭಿಸಿದ ಮೂರನೆಯ ಸ್ಥಾನದಲ್ಲಿದ್ದ  ಕಾರಣ ಇಬ್ಬರಿಗೂ ತೃತೀಯ ಬಹುಮಾನ ಕೊಡಲೇಬೇಕೆಂದು ಪಟ್ಟು ಹಿಡಿಯಬೇಕಿತ್ತು ಎಂದೆನಿಸುತ್ತದೆ

ಅದರೇನು ಮಾಡಲಿ..ಅದು ಘಟಿಸಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದವು.ಆ ಹುಡುಗಿಯ ಬದುಕಿನಲ್ಲಿ ಪವಾಡ ಸದೃಶ ಘಟನೆ ಸಂಭವಿಸಿ ಅವಳು ಪೂರ್ತಿ ಗುಣಮುಖಳಾಗಿ ಎಲ್ಲರಂತೆ ಓಡಾಡುತ್ತಾ ಸುಖವಾಗಿ ನೂರು ಕಾಲ ಬದುಕಲಿ ಎಂದು ಹಾರೈಸುವೆ.


Friday 15 April 2022

ನನಗೂ ಆತ್ಮವಿದೆ.ಅದಕ್ಕೂ ಒಂದು ಕಥೆ ಇದೆ ಕೊಟ್ಟವರ ಕೈ ಯಾವಾಗಲೂ ಮೇಲೆ ತಗೊಂಡವರ ಕೈ ಯಾವಾಗಲೂ ಕೆಳಗೆ

 ನನಗೂ ಆತ್ಮವಿದೆ.ಅದಕ್ಕೂ ಒಂದು ಕಥೆ ಇದೆ 

ಕೊಟ್ಟವರ ಕೈ ಯಾವಾಗಲೂ ಮೇಲೆ 

ತಗೊಂಡವರ ಕೈ ಯಾವಾಗಲೂ ಕೆಳಗೆ


ಇದು ಮೂರು ಕಾಲಕ್ಕೂ ಸಲ್ಲುವ ಮಾತು.ಇದನ್ನು ನಾನು ಮೊದಲು ಕೇಳಿದ್ದು ಚಿನ್ಮಯ ಶಾಲೆಯ ಹಿರಿಯ ಶಿಕ್ಷಕರಾಗಿದ್ದ ಶೈಲಜಾ ಮಿಸ್ ಬಾಯಿಂದ.ಯಾವ ಸಂದರ್ಭದಲ್ಲಿ ಈ ಮಾತು ಬಂತೆಂದು ನೆನಪಿಗೆ ಬರುತ್ತಿಲ್ಲ

ಅವರು ಆ ಮಾತನ್ನು ಹೇಳಿದಾಗ ನನಗೂ ಅದುನೂರಕ್ಕೆ ನೂರು ನಿಜವಾದ ಮಾತೆನ್ನಿಸಿತು

ಅದುನಿಜ ತಾನೇ? ತಗೊಂಡವರ ಕೈ ಯಾವಾಗಲೂ ಕೆಳಗೆಯೇ ಇರುತ್ತದೆ ,ತಗೊಳ್ಳಬೇಕಾದರೆ ಕೈ ಚಾಚಿ ಹಿಡಿಯಬೇಕು.ಕೊಡುವಾತನ ಕೈ ಮೇಲೆಯೇ ಇರುತ್ತದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಇದು ನಿಜವಾದುದೇ ಆಗಿದೆ.

ಕೆಲವೊಮ್ಮೆ ನಾವು ನಿರೀಕ್ಷಿಸಿದ ಸಹಾಯ ಬಾರದೇ ಇದ್ದಾಗ ನಮಗೆ ಖೇದವೆನಿಸುತ್ತದೆ.ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ತುಳು ಸಂಸ್ಕೃತಿ ಅದರಲ್ಲೂ ದೈವಗಳ ಕುರಿತಾದ ಅಧ್ಯಯನ ಹಾಗೂ ಅದರ ಪ್ರಕಟಣೆಗೆ ಅನುದಾನದ ಅಗತ್ಯವಿತ್ತು

ಈ ನಿಟ್ಟಿನಲ್ಲಿ ನಾನು ತುಳು ಅಕಾಡೆಮಿ ಹಾಗೂ ತುಳುವಿನ ಅಭಿವೃದ್ಧಿಗಾಗಿ ಅಪಾರ ಕೆಲಸ ಮಾಡುತ್ತಿರುವ ದೊಡ್ಡ ದಾನಿಯೊಬ್ಬರಲ್ಲಿ  ಸಹಾಯವನ್ನು ಕೇಳಿದ್ದೆ.ಒಂದು ನಯಾ ಪೈಸೆಯ ಸಹಾಯ ನನಗೆ ಬರಲಿಲ್ಲ.ಆ ಕ್ಷಣಕ್ಕೆ ನನಗದು ಬೇಸರವನ್ನುಂಟುಮಾಡಿತ್ತು.ಯಾಕೆಂದರೆ ದೈವಗಳ ಕುರಿತಾದ ಮಾಹಿತಿ ಸಂಗ್ರಹ ಹಾಗೂ ಪ್ರಕಟಣೆಗೆ ತುಂಬಾ ಖರ್ಚಿದೆ.ಇದು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿದವರಿಗೆ ಮಾತ್ರ ಅರ್ಥವಾಗಬಹುದಾದ ವಿಚಾರ.ಇಲ್ಲಿ ನನಗೆ ಸಹಾಯ ಬಾರದೇ ಇರುವುದಕ್ಕೆ ಕಾರಣವೇನು ? ಅದರ ಹಿಂದಿನ ಕೈಗಳು ಯಾರದೆಂದು ನನಗೆ ನಂತರ ಗೊತ್ತಾಗಿದೆ.

ನನಗೆ ಪರಿಚಯವೇ ಇಲ್ಲದವರು ವಿನಾಕಾರಣ ದ್ವೇಷ ಸಾಧಿಸುತ್ತಿರುವುದು ತಿಳಿದಾಗ ನನಗೆ ಅಚ್ಚರಿ ಎನಿಸುತ್ತದೆ.ನನಗೆ ಪರಿಚಿತ ವ್ಯಕ್ತಿಗಳಾಗಿದ್ದರೆ ನನ್ನಲ್ಲಿ ದ್ವೇಷ ಸಾಧಿಸಲು ಯಾವುದಾದರೂ ಕಾರಣವಿದ್ದರೂ ಇದ್ದೀತು‌.ಆದರೆ ಪರಿಚಯವೇ ಇಲ್ಲದ ವ್ಯಕ್ತಿಗಳೂ ದ್ವೇಷ ಸಾಧಿಸುತ್ತಾರೆಂದರೆ ಅದಕ್ಕೆ ಕಾರಣವೇನು ಇದ್ದೀತು ? ಇದೊಂದು ಉದಾಹರಣೆ ಅಷ್ಟೇ.


 ಯುನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರೊಬ್ಬರೂ ಹೀಗೆಯೇ ದ್ವೇಷ ಸಾಧಿಸಿದ್ದರು.ವಾಸ್ತವದಲ್ಲಿ ನನ್ನ ಪರಿಚಯವೇ ಅವರಿಗಿಲ್ಲ.ನಾನು ಬೆಂಗಳೂರಿನ ಆ ಯುನಿವರ್ಸಿಟಿಯ ಅಧಿಕೃತ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಕಟ್ಟಿದ್ದೆ.ಅಂಕ ಗಳಿಕೆಗಾಗಿಯೇ ಎರಡನೆಯ ಬಾರಿ ಕನ್ನಡ ಎಂಎ ಗೆ ಕಟ್ಟಿದ್ದಾಗಿತ್ತು.ಹಾಗಾಗಿ ಬಹಳ ಚೆನ್ನಾಗಿ ಓದಿದ್ದೆ.ಆದರೆ ಮೊದಲ ವರ್ಷದ ಫಲಿತಾಂಶ ಬಂದಾಗ 69% ಬಂದಿತ್ತು .ಹಾಗಾಗಿ ಯಾಕೆ ಹೀಗಾಯಿತೆಂದು ವಿಚಾರಿಸಲು ಆ ಯೂನಿವರ್ಸಿಟಿಗೆ ಹೋಗಿ ನಾನು ಮತ್ತು ಪ್ರಸಾಸ್ ಕನ್ನಡ ವಿಭಾಗದ ಮುಖ್ಯಸ್ಥರನ್ನು ಭೇಟಿಯಾದೆವು.ಆಗ ಅವರು ನನ್ನ ಅಂಕ ಪಟ್ಟಿಯನ್ನು ತಿರುಗಿಸಿ ತಿರುಗಿಸಿ ನೋಡಿದ್ದರು.ಇಷ್ಟು ಅಂಕಗಳಾದರೂ ಹೇಗೆ ಬಂತೆಂದು..ನನಗೆ ಅಂಕ ಕೊಡದೆ ಇರಲು ಕಾರಣ ಇಷ್ಟೇ..ಆ ಡೀನ್ ? ಬೆಂಗಳೂರಿನ ಅಧ್ಯಯನ ಕೇಂದ್ರಕ್ಕೆ ಬಂದಿದ್ದಾಗ ಇವರು ಸರಿಯಾಗಿ ಟ್ರೀಟ್  ಮಾಡಲಿಲ್ಲವಂತೆ.ಬಹುಶಃ ಲಂಚ ಕೊಡಲಿಲ್ವೋ ಏನೋ ಗೊತ್ತಿಲ್ಲ.ಅದಕ್ಕೆ ಆ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಅಥವಾ ಇನ್ಯಾವುದೇ ಪದವಿಗೆ ಕಟ್ಟಿದವರಿಗೆ ಉತ್ತಮ ಅಂಕ ಬಾರದಂತೆ ನೋಡಿಕೊಂಡಿದ್ದರು.ಅಬ್ಬಾ..ದೊಡ್ಡವರ ಸಣ್ಣತನವೇ ಎನಿಸಿತ್ತು ನನಗೆ.ಆದರೂ ಬಿಡದೆ ಮರು ಮೌಲ್ಯ ಮಾಪನಕ್ಕೆ ಹಾಕಿದೆ.exact ಅಷ್ಟೇ ಅಂಕಗಳು ಬಂದವು.ನಂತರಾ ಯೂನಿವರ್ಸಿಟಿ ಬಿಟ್ಟು  ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂಎ ಗೆ ಕಟ್ಟಿ ನಾಲ್ಕನೆಯ ರ‌್ಯಾಂಕನ್ನೂ 77% ಅಂಕಗಳನ್ನೂ ಗಳಿಸಿದೆ.

ಇದೇ ರೀತಿ ಇನ್ನೊಂದು ವಿಷಯವೂ ನಡೆದಿದೆ.ಬಹುಶಃ 2014-15 ನೇ ಇಸವಿ ಇರಬೇಕು.ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಷತ್ ನ ಪದಾಧಿಕಾರಿಯೊಬ್ಬರು ಮುಖತಃ ಭೇಟಿಯಾಗಲು ಸಿಕ್ಕಿದ್ದರು ಎಲ್ಲಿ ಯಾವ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ಎಂದು ನನಗೆ ನೆನಪಾಗುತ್ತಿಲ್ಲ.ಆದರೆ ಇಲ್ಲಿ ನಡೆದ ವೃತ್ತಾಂತವೊಂದರ ಬಗ್ಗೆ ಅವರಿಗೇ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡಿರುವೆ

ಆಗ ಅವರು ಸಧ್ಯದಲ್ಲಿಯೇ ನಡೆಯಲಿದ್ದ ಬಂಟ್ವಾಳ ತಾಲೂಕಿನ ಸಾಹಿತ್ಯ ಸಮ್ಮಳನದ ವಿಚಾರ ಗೋಷ್ಟಿಯೊಂದರ ಅಧ್ಯಕ್ಷತೆಗೆ ಆಹ್ವಾನಿಸುತ್ತೇವೆ ಬನ್ನಿ ಎಂದಿದ್ದರು.ನಾನೂ ಬರುತ್ತೇನೆ ಎಂದು ಒಪ್ಪಿದ್ದೆ.ನಂತರ 

ನಾನು ಬೆಂಗಳೂರಿಗೆ ವರ್ಗವಾಗಿ ಬಂದೆ.ಆದರೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಹ್ವಾನ ಬರಲಿಲ್ಲ

ನಾನೂ ಈ ವಿಷಯ ಮರೆತಿದ್ದೆ.ಬ್ಲಾಗ್ ಬರೆಯಲು ಶುರುಮಾಡಿದ ನಂತರ ನನ್ನ ಅಧ್ಯಯನದ ವಿಚಾರವನ್ನು ಆಸಕ್ತರ ಜೊತೆ ಹಂಚಿಕೊಳ್ಳಲು ನನಗೆ ಅನ್ಯ ವೇದಿಕೆ ತೀರಾ ಅಗತ್ಯವೇನೂ ಆಗಿರಲಿಲ್ಲ.ಬ್ಲಾಹ್ ಬರೆಯುವ ತನಕ ನನಗದರ ಅಗತ್ಯವಿತ್ತು.

ಈ ವಿಷಯ ನನಗೆ ಮತ್ತೆ ನೆನಪಾದದ್ದು ಇತ್ತೀಚೆಗೆ.ಹಾಗಾಗಿ ಅವತ್ತು ನನ್ನನ್ನು ಕರೆಯುತ್ತೇನೆ ಎಂದವರು ಯಾಕೆ ಕರೆಯಲಿಲ್ಲ ಎಂದು ಅವರಲ್ಲಿಯೇ ವಿಚಾರಿಸಿದೆ.ಆಗಲೂ ನನಗೆ ಅಪರಿತವಾಗಿದ್ದ ವ್ಯಕ್ತಿಯೊಬ್ಬರು ಅಡ್ಡಗಾಲು ಹಾಕಿದ್ದು ತಿಳಿದಾಗ ನನಗೆ ನಿಜಕ್ಕೂ ಅಚ್ಚರಿ ಆಯಿತು.ಆ ವ್ಯಕ್ತಿಯ  ನೇರ ಪರಿಚಯ ನನಗಿಲ್ಲವಾದರೂ ಸಾಹಿತ್ಯಕ ಕ್ಷೇತ್ರದಲ್ಲಿದ್ದ ,ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಕನ್ನಡ  ಉಪನ್ಯಾಸಕರಾಗಿದ್ದ ಅವರ ಬಗ್ಗೆ ನನಗೆ ಅಪಾರ ಗೌರವ ಇತ್ತು.ಆದರೆ ಅವರೇಕೆ ದ್ವೇಷ ಸಾಧಿಸಿದರು ? ಬೆಳ್ಳಾರೆಯ ಪ್ರಿನ್ಸಿಪಾಲ್ ನನಗೆ ಕಿರುಕುಳ ನೀಡಿದ್ದು ಆ ಸಮಯದಲ್ಲಿ ನಾನವರ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದೆ.ಆ ಕಾರಣಕ್ಕೆ ಈ ವ್ಯಕ್ತಿ ನನ್ನನ್ನು ಬಂಟ್ವಾಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬೇಡ ಎಂದದ್ದಂತೆ..ನನಗೆ ತೊಂದರೆ ಕೊಟ್ಟವರ ಮೇಲೆ ನಾನು ದೂರು ನೀಡುದಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನು ಸಂಬಂಧ ? ಆರೋಪಿಗಳನ್ನಾದರೂ ಅವರು ಆರೋಪ ಮುಕ್ತರಾಗುವ ತನಕ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆಗೆ ಬೇಡ ಎನ್ನಬಹುದೋ ಏನೋ..ಇಲ್ಲಿ ನಾನು ಆರೋಪಿಯಲ್ಲ.ನನಗೆ ಕಿರುಕುಳ ಕೊಟ್ಟ ಬಗ್ಗೆ ನಾನು ದೂರು ನೀಡಿದವಳು ಅಷ್ಟೇ..ಪುರುಷ ಪ್ರಧಾನ ಸಮಾಜದ ಲಕ್ಷಣ ಇದೇ ಇರಬೇಕು.ಸ್ರೀಯೊಬ್ಬಳಿಗೆ ತನಗೆ ಅನ್ಯಾಯ ಮಾಡಿದವರ ವಿರುದ್ಧ ದೂರು ಕೊಡುವ ಸ್ವಾತಂತ್ರ್ಯವೂ ಇಲ್ಲ.ಕೊಟ್ಟರೆ ಅಕೆಯ ವಿರುದ್ಧದ ದ್ವೇಷ ಸಾಧಿಸುವವರ ಹಿಂಡು ತಯಾರಾಗುತ್ತದೆ ಎಂದೆನಿಸುತ್ತದೆ.

ನನ್ನಿಂದ ಮುದ್ರಣಕ್ಕೆ ಮೊದಲೇ ಪಾವತಿಸಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಖರೀದಿಸಿದ್ದ ಬೆಂಗಳೂರಿನ ಫ್ರೊಫೆಸರೊಬ್ಬರು  ನಾನು ಸಹಾಯ ಕೇಳಿದ್ದ  ದಾನಿಗಳಿಗೆ  ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಪ್ರೀತಿಯಿಂದ ನೀಡಿದರು.ನಾನು ಅದಕ್ಕೂ ಮೊದಲೇ ಅವರಿಗೆ  ಈ ಪುಸ್ತಕದ ಗೌರವ ಪ್ರತಿ ನೀಡಿದ್ದು ಅವರಿಗೆ ಗೊತ್ತಿರಲಿಲ್ಲ‌

ನಂತರ ಮಾತಿಗೆ ಸಿಕ್ಕಾಗ ಒಂದಿನ ನನ್ನ ಕೃತಿಯನ್ನು ನೀಡಿದ ಬಗ್ಗೆ ತಿಳಿಸಿದರು.ಆಗ ನಾನುಈ ಪುಸ್ತಕದ ಪ್ರತಿಯೊಂದನ್ನು ಅವರು ಖರೀದಿಸಲು ಕೇಳಿದ್ದು ಆಗ ನಾನು ತುಳುವಿಗಾಗಿ ಅಪಾರ ಕೆಲಸ ಮಾಡಿದ ಅವರಿಗೆ  ಗೌರವ ಪ್ರತಿ ನೀಡಿದ್ದನ್ನು ತಿಳಿಸಿದೆ.ಆಗ ಅವರು  ನಿಮ್ಮಿಂದ ಈ ಪುಸ್ತಕದ ಒಂದಷ್ಟು ಪ್ರತಿಗಳನ್ನು ಅವರ ಸಂಸ್ಥೆಗಳಿಗಾಗಿ ,ಅತಿಥಿಗಳಿಗೆ ನೆನಪಿನ ಕಾಣಿಕೆ ಕೊಡುವುದಕ್ಕಾಗಿ ಖರೀದಿಸಿಲ್ಲವೇ ಎಂದು ಕೇಳಿದರು.ಇಲ್ಲವೆಂದೆ.

ಆಗ ಅಲ್ಲಿ ಪುಸ್ತಕ ವಿಭಾಗವನ್ನು ನೋಡಿಕೊಳ್ಳುತ್ತಿರುವವರೊಬ್ಬರ ಬಗ್ಗೆ ತಿಳಿಸಿ ಅವರನ್ನು ಸಂಪರ್ಕಿಸಲು ಬೆಂಗಳೂರಿನ ನನ್ನ ಹಿತೈಷಿಗಳಾದ ಪ್ರೊಫೆಸರ್ ಹೇಳಿದರು.ಅವರಲ್ಲಿ ಆಯಿತೆಂದು ತಲೆಯಾಡಿಸಿದೆ.ಆದರೆ ನನ್ನ ಮುಖ ಭಾವದಿಂದಲೇ ನನಗೆ ಅದು ಸಮ್ಮತವಾಗಿಲ್ಲವೆಂದು ಅವರಿಗರ್ಥವಾಗಿ ಯಾಕೆ ನೀವವರನ್ನು ಸಂಪರ್ಕಿಸಬಾರದು ? ಎಂದು ಕೇಳಿದರು

ಅವರಲ್ಲಿ ಏನೂ ಹೇಳಲಿಲ್ಲ.ಆಗ ನನಗೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ವಿಚಾರ ನೆನಪಿಗೆ ಬಂದು ಆಗ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಚತ್ ನ ಪದಾಧಿಕಾರಿಗಳಾಗಿದ್ದ  ಹಿತೈಷಿಗಳಿಗೆ ಫೋನ್ ಮಾಡಿ ವಿಚಾರಿಸಿದೆ.


ಆಗ ನನಗೆ ಗೊತ್ತಾಯಿತು..ನನಗೆ ಗೊತ್ತೇ ಇಲ್ಲದ ಜನರೂ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು

ಇರಲಿ..ಎಲ್ಲವೂ ದೈವೇಚ್ಛೆ.ದೈವ ದೇವರುಗಳು  ಸದಾ ನನ್ನ ಕೈ ಮೇಲೆ ಇರಬೇಕೆಂದೇ ಹೀಗೆ ನನಗೆ ಎಲ್ಲಿಂದಲೂ ಸಹಾಯ ಬರದೇ ಇರುವಂತೆ ಮಾಡಿ ಸ್ವಯಂ ಅಧ್ಯಯನ ಹಾಗೂ ಪ್ರಕಟಿಸುವ ಸಾಮರ್ಥ್ಯವನ್ನು ಅನುಗ್ರಹಿಸಿರಬಹುದು.ಸಾವಿರ ಪುಟಗಳ ದೊಡ್ಡ ಪುಸ್ತಕವನ್ನು ಅದರ ವಿಷಯ ಘನತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಆರ್ಟ್ ಪೇಪರ್ ನಲ್ಲಿ ಪ್ರಕಟಿಸಲು ದುಡ್ಡಿಗೇನು ಮಾಡಲಿ? ಎಂಬ ಚಿಂತೆಯಲ್ಲಿದ್ದಾಗ ಹಿತೈಷಿಗಳೊಬ್ಬರು ಮುಂಗಡ ಬುಕಿಂಗ್ ಶುರು ಮಾಡಿ.ಈಗಾಗಲೇ ನಿಮ್ಮ ಬರಹಗಳ ಬಗ್ಗೆ ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ ಹಾಗಾಗಿ ಪೂರ್ಣ ಬೆಲೆಗಿಂತ ಕಡಿಮೆ ಬೆಲೆ ಇರಿಸಿ ಮುಂಗಡ ಕಾಯ್ದಿರಿಸಲು ಹೇಳಿದರೆ ಜನರು ತಗೊಂಡೇ ತಗೊಳ್ತಾರೆ ಎಂದು ಸಲಹೆ ನೀಡಿದರು.ಹಾಗೆಯೇ ಮಾಡಿದೆ.ಯಶಸ್ಸನ್ನು ಪಡೆದೆ ಕೂಡ.

ಯಾರಿಂದಲೂ ಆರ್ಥಿಕ ಸಹಾಯ ಬೇಕಾಗಿ ಬರಲಿಲ್ಲ.ಯಾರಲ್ಲಿ ನಾನು ಸಹಾಯವನ್ನು ಕೇಳಿದ್ದೆನೋ ಅವರಿಗೆ ಗೌರವ ಪ್ರತಿಯನ್ನು ನೀಡುವಂತೆ ಆಯಿತು.ಇದು ನಿಜಕ್ಕೂ ದೈವ ಕೃಪೆಯೇ ತಾನೇ ? 

ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ನಾನೂ ಅಲ್ಲ.ಆದರೆ ನನ್ನ ಅಧ್ಯಯನ ಕೃತಿ ನನ್ನ ನಂತರವೂ ಇರುತ್ತದೆ.ಕಾಯಕ್ಕೆ ಅಳಿವಿದೆ.ಕಾಯಕಕ್ಕೆ ಅಳಿವು ಇಲ್ಲ ಎಂಬುದು ನಿಶ್ಚಿತ .

ಬಹುಶಃ ನನ್ನ ಬದುಕಿನಲ್ಲಿ ಮಾತ್ರ ಇಂತಹದ್ದು ನಡೆದದ್ದು ಇರಲಾರದು

ಸಮಾಜದಲ್ಲಿ ತನ್ನ ಕಾಲ ಮೇಲೆ ನಿಂತು ಅನ್ಯರಿಗೆ ಬಕೆಟ್ ಹಿಡಿಯದೆ ಸ್ವಂತಿಕೆಯಿಂದ ಬದುಕುವವರಿಗೂ ಇಂತಹ ನಾನಾ ರೀತಿಯ ಅನುಭವಗಳಾಗಿರಬಹುದು.ನನ್ನ ಅನುಭವವನ್ನು ನಾನು ಹಂಚಿಕೊಂಡಿರುವೆ.

ನನಗೂ ಆತ್ಮವಿದೆ.ಅದಕ್ಕೂ ಒಂದು ಕಥೆ ಇದೆ ಕೊಟ್ಟವರ ಕೈ ಯಾವಾಗಲೂ ಮೇಲೆ ತಗೊಂಡವರ ಕೈ ಯಾವಾಗಲೂ ಕೆಳಗೆ

 


ನನಗೂ ಆತ್ಮವಿದೆ.ಅದಕ್ಕೂ ಒಂದು ಕಥೆ ಇದೆ
ಕೊಟ್ಟವರ ಕೈ ಯಾವಾಗಲೂ ಮೇಲೆ
ತಗೊಂಡವರ ಕೈ ಯಾವಾಗಲೂ ಕೆಳಗೆ

ಇದು ಮೂರು ಕಾಲಕ್ಕೂ ಸಲ್ಲುವ ಮಾತು.ಇದನ್ನು ನಾನು ಮೊದಲು ಕೇಳಿದ್ದು ಚಿನ್ಮಯ ಶಾಲೆಯ ಹಿರಿಯ ಶಿಕ್ಷಕರಾಗಿದ್ದ ಶೈಲಜಾ ಮಿಸ್ ಬಾಯಿಂದ.ಯಾವ ಸಂದರ್ಭದಲ್ಲಿ ಈ ಮಾತು ಬಂತೆಂದು ನೆನಪಿಗೆ ಬರುತ್ತಿಲ್ಲ
ಅವರು ಆ ಮಾತನ್ನು ಹೇಳಿದಾಗ ನನಗೂ ಅದುನೂರಕ್ಕೆ ನೂರು ನಿಜವಾದ ಮಾತೆನ್ನಿಸಿತು
ಅದುನಿಜ ತಾನೇ? ತಗೊಂಡವರ ಕೈ ಯಾವಾಗಲೂ ಕೆಳಗೆಯೇ ಇರುತ್ತದೆ ,ತಗೊಳ್ಳಬೇಕಾದರೆ ಕೈ ಚಾಚಿ ಹಿಡಿಯಬೇಕು.ಕೊಡುವಾತನ ಕೈ ಮೇಲೆಯೇ ಇರುತ್ತದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಇದು ನಿಜವಾದುದೇ ಆಗಿದೆ.
ಕೆಲವೊಮ್ಮೆ ನಾವು ನಿರೀಕ್ಷಿಸಿದ ಸಹಾಯ ಬಾರದೇ ಇದ್ದಾಗ ನಮಗೆ ಖೇದವೆನಿಸುತ್ತದೆ.ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ತುಳು ಸಂಸ್ಕೃತಿ ಅದರಲ್ಲೂ ದೈವಗಳ ಕುರಿತಾದ ಅಧ್ಯಯನ ಹಾಗೂ ಅದರ ಪ್ರಕಟಣೆಗೆ ಅನುದಾನದ ಅಗತ್ಯವಿತ್ತು
ಈ ನಿಟ್ಟಿನಲ್ಲಿ ನಾನು ತುಳು ಅಕಾಡೆಮಿ ಹಾಗೂ ತುಳುವಿನ ಅಭಿವೃದ್ಧಿಗಾಗಿ ಅಪಾರ ಕೆಲಸ ಮಾಡುತ್ತಿರುವ ಶ್ರೀಯುತ ವೀರೇಂದ್ರ ಹೆಗ್ಗಡೆಯವರಿಂದ ಸಹಾಯವನ್ನು ಕೇಳಿದ್ದೆ.ಒಂದು ನಯಾ ಪೈಸೆಯ ಸಹಾಯ ನನಗೆ ಬರಲಿಲ್ಲ.ಆ ಕ್ಷಣಕ್ಕೆ ನನಗದು ಬೇಸರವನ್ನುಂಟುಮಾಡಿತ್ತು.ಯಾಕೆಂದರೆ ದೈವಗಳ ಕುರಿತಾದ ಮಾಹಿತಿ ಸಂಗ್ರಹ ಹಾಗೂ ಪ್ರಕಟಣೆಗೆ ತುಂಬಾ ಖರ್ಚಿದೆ.ಇದು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿದವರಿಗೆ ಮಾತ್ರ ಅರ್ಥವಾಗಬಹುದಾದ ವಿಚಾರ.ಇಲ್ಲಿ ನನಗೆ ಸಹಾಯ ಬಾರದೇ ಇರುವುದಕ್ಕೆ ಕಾರಣವೇನು ? ಅದರ ಹಿಂದಿನ ಕೈಗಳು ಯಾರದೆಂದು ನನಗೆ ನಂತರ ಗೊತ್ತಾಗಿದೆ.
ನನಗೆ ಪರಿಚಯವೇ ಇಲ್ಲದವರು ವಿನಾಕಾರಣ ದ್ವೇಷ ಸಾಧಿಸುತ್ತಿರುವುದು ತಿಳಿದಾಗ ನನಗೆ ಅಚ್ಚರಿ ಎನಿಸುತ್ತದೆ.ನನಗೆ ಪರಿಚಿತ ವ್ಯಕ್ತಿಗಳಾಗಿದ್ದರೆ ನನ್ನಲ್ಲಿ ದ್ವೇಷ ಸಾಧಿಸಲು ಯಾವುದಾದರೂ ಕಾರಣವಿದ್ದರೂ ಇದ್ದೀತು‌.ಆದರೆ ಪರಿಚಯವೇ ಇಲ್ಲದ ವ್ಯಕ್ತಿಗಳೂ ದ್ವೇಷ ಸಾಧಿಸುತ್ತಾರೆಂದರೆ ಅದಕ್ಕೆ ಕಾರಣವೇನು ಇದ್ದೀತು ? ಇದೊಂದು ಉದಾಹರಣೆ ಅಷ್ಟೇಶ ಯುನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರೊಬ್ಬರೂ ಹೀಗೆಯೇ ದ್ವೇಷ ಸಾಧಿಸಿದ್ದರು.ವಾಸ್ತವದಲ್ಲಿ ನನ್ನ ಪರಿಚಯವೇ ಅವರಿಗಿಲ್ಲ.ನಾನು ಬೆಂಗಳೂರಿನ ಆ ಯುನಿವರ್ಸಿಟಿಯ ಅಧಿಕೃತ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಕಟ್ಟಿದ್ದೆ.ಅಂಕ ಗಳಿಕೆಗಾಗಿಯೇ ಎರಡನೆಯ ಬಾರಿ ಕನ್ನಡ ಎಂಎ ಗೆ ಕಟ್ಟಿದ್ದಾಗಿತ್ತು.ಹಾಗಾಗಿ ಬಹಳ ಚೆನ್ನಾಗಿ ಓದಿದ್ದೆ.ಆದರೆ ಮೊದಲ ವರ್ಷದ ಫಲಿತಾಂಶ ಬಂದಾಗ 69% ಬಂದಿತ್ತು .ಹಾಗಾಗಿ ಯಾಕೆ ಹೀಗಾಯಿತೆಂದು ವಿಚಾರಿಸಲು ಆ ಯೂನಿವರ್ಸಿಟಿಗೆ ಹೋಗಿ ನಾನು ಮತ್ತು ಪ್ರಸಾಸ್ ಕನ್ನಡ ವಿಭಾಗದ ಮುಖ್ಯಸ್ಥರನ್ನು ಭೇಟಿಯಾದೆವು.ಆಗ ಅವರು ನನ್ನ ಅಂಕ ಪಟ್ಟಿಯನ್ನು ತಿರುಗಿಸಿ ತಿರುಗಿಸಿ ನೋಡಿದ್ದರು.ಇಷ್ಟು ಅಂಕಗಳಾದರೂ ಹೇಗೆ ಬಂತೆಂದು..ನನಗೆ ಅಂಕ ಕೊಡದೆ ಇರಲು ಕಾರಣ ಇಷ್ಟೇ..ಆ ಡೀನ್ ? ಬೆಂಗಳೂರಿನ ಅಧ್ಯಯನ ಕೇಂದ್ರಕ್ಕೆ ಬಂದಿದ್ದಾಗ ಇವರು ಸರಿಯಾಗಿ ಟ್ರೀಟ್  ಮಾಡಲಿಲ್ಲವಂತೆ.ಬಹುಶಃ ಲಂಚ ಕೊಡಲಿಲ್ವೋ ಏನೋ ಗೊತ್ತಿಲ್ಲ.ಅದಕ್ಕೆ ಆ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಅಥವಾ ಇನ್ಯಾವುದೇ ಪದವಿಗೆ ಕಟ್ಟಿದವರಿಗೆ ಉತ್ತಮ ಅಂಕ ಬಾರದಂತೆ ನೋಡಿಕೊಂಡಿದ್ದರು.ಅಬ್ಬಾ..ದೊಡ್ಡವರ ಸಣ್ಣತನವೇ ಎನಿಸಿತ್ತು ನನಗೆ.ಆದರೂ ಬಿಡದೆ ಮರು ಮೌಲ್ಯ ಮಾಪನಕ್ಕೆ ಹಾಕಿದೆ.exact ಅಷ್ಟೇ ಅಂಕಗಳು ಬಂದವು.ನಂತರಾ ಯೂನಿವರ್ಸಿಟಿ ಬಿಟ್ಟು  ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂಎ ಗೆ ಕಟ್ಟಿ ನಾಲ್ಕನೆಯ ರ‌್ಯಾಂಕನ್ನೂ 77% ಅಂಕಗಳನ್ನೂ ಗಳಿಸಿದೆ.
ಇದೇ ರೀತಿ ಇನ್ನೊಂದು ವಿಷಯವೂ ನಡೆದಿದೆ.ಬಹುಶಃ 2014-15 ನೇ ಇಸವಿ ಇರಬೇಕು.ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಷತ್ ನ ಅಧ್ಯಕ್ಷರು ಮುಖತಃ ಭೇಟಿಯಾಗಲು ಸಿಕ್ಕಿದ್ದರು ಎಲ್ಲಿ ಯಾವ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ಎಂದು ನನಗೆ ನೆನಪಾಗುತ್ತಿಲ್ಲ.ಆದರೆ ಇಲ್ಲಿ ನಡೆದ ವೃತ್ತಾಂತವೊಂದರ ಬಗ್ಗೆ ಅವರಿಗೇ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡಿರುವೆ
ಆಗ ಅವರು ಸಧ್ಯದಲ್ಲಿಯೇ ನಡೆಯಲಿದ್ದ ಬಂಟ್ವಾಳ ತಾಲೂಕಿನ ಸಾಹಿತ್ಯ ಸಮ್ಮಳನದ ವಿಚಾರ ಗೋಷ್ಟಿಯೊಂದರ ಅಧ್ಯಕ್ಷತೆಗೆ ಆಹ್ವಾನಿಸುತ್ತೇವೆ ಬನ್ನಿ ಎಂದಿದ್ದರು.ನಾನೂ ಬರುತ್ತೇನೆ ಎಂದು ಒಪ್ಪಿದ್ದೆ.ನಂತರ
ನಾನು ಬೆಂಗಳೂರಿಗೆ ವರ್ಗವಾಗಿ ಬಂದೆ.ಆದರೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಹ್ವಾನ ಬರಲಿಲ್ಲ
ನಾನೂ ಈ ವಿಷಯ ಮರೆತಿದ್ದೆ.ಬ್ಲಾಗ್ ಬರೆಯಲು ಶುರುಮಾಡಿದ ನಂತರ ನನ್ನ ಅಧ್ಯಯನದ ವಿಚಾರವನ್ನು ಆಸಕ್ತರ ಜೊತೆ ಹಂಚಿಕೊಳ್ಳಲು ನನಗೆ ಅನ್ಯ ವೇದಿಕೆ ತೀರಾ ಅಗತ್ಯವೇನೂ ಆಗಿರಲಿಲ್ಲ.ಬ್ಲಾಹ್ ಬರೆಯುವ ತನಕ ನನಗದರ ಅಗತ್ಯವಿತ್ತು.
ಈ ವಿಷಯ ನನಗೆ ಮತ್ತೆ ನೆನಪಾದದ್ದು ಇತ್ತೀಚೆಗೆ.ಹಾಗಾಗಿ ಅವತ್ತು ನನ್ನನ್ನು ಕರೆಯುತ್ತೇನೆ ಎಂದವರು ಯಾಕೆ ಕರೆಯಲಿಲ್ಲ ಎಂದು ಅವರಲ್ಲಿಯೇ ವಿಚಾರಿಸಿದೆ.ಆಗಲೂ ನನಗೆ ಅಪರಿತವಾಗಿದ್ದ ವ್ಯಕ್ತಿಯೊಬ್ಬರು ಅಡ್ಡಗಾಲು ಹಾಕಿದ್ದು ತಿಳಿದಾಗ ನನಗೆ ನಿಜಕ್ಕೂ ಅಚ್ಚರಿ ಆಯಿತು.ಆ ವ್ಯಕ್ತಿಯ  ನೇರ ಪರಿಚಯ ನನಗಿಲ್ಲವಾದರೂ ಸಾಹಿತ್ಯಕ ಕ್ಷೇತ್ರದಲ್ಲಿದ್ದ ,ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಕನ್ನಡ  ಉಪನ್ಯಾಸಕರಾಗಿದ್ದ ಅವರ ಬಗ್ಗೆ ನನಗೆ ಗೌರವ ಇತ್ತು.ಆದರೆ ಅವರೇಕೆ ದ್ವೇಷ ಸಾಧಿಸಿದರು ? ಬೆಳ್ಳಾರೆಯ ಪ್ರಿನ್ಸಿಪಾಲ್ ನನಗೆ ಕಿರುಕುಳ ನೀಡಿದ್ದು ಆ ಸಮಯದಲ್ಲಿ ನಾನವರ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದೆ.ಆ ಕಾರಣಕ್ಕೆ ಈ ವ್ಯಕ್ತಿ ನನ್ನನ್ನು ಬಂಟ್ವಾಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬೇಡ ಎಂದದ್ದಂತೆ..ನನಗೆ ತೊಂದರೆ ಕೊಟ್ಟವರ ಮೇಲೆ ನಾನು ದೂರು ನೀಡುದಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನು ಸಂಬಂಧ ? ಆರೋಪಿಗಳನ್ನಾದರೂ ಅವರು ಆರೋಪ ಮುಕ್ತರಾಗುವ ತನಕ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆಗೆ ಬೇಡ ಎನ್ನಬಹುದೋ ಏನೋ..ಇಲ್ಲಿ ನಾನು ಆರೋಪಿಯಲ್ಲ.ನನಗೆ ಕಿರುಕುಳ ಕೊಟ್ಟ ಬಗ್ಗೆ ನಾನು ದೂರು ನೀಡಿದವಳು ಅಷ್ಟೇ..ಪುರುಷ ಪ್ರಧಾನ ಸಮಾಜದ ಲಕ್ಷಣ ಇದೇ ಇರಬೇಕು.ಸ್ರೀಯೊಬ್ಬಳಿಗೆ ತನಗೆ ಅನ್ಯಾಯ ಮಾಡಿದವರ ವಿರುದ್ಧ ದೂರು ಕೊಡುವ ಸ್ವಾತಂತ್ರ್ಯವೂ ಇಲ್ಲ.ಕೊಟ್ಟರೆ ಅಕೆಯ ವಿರುದ್ಧದ ದ್ವೇಷ ಸಾಧಿಸುವವರ ಹಿಂಡು ತಯಾರಾಗುತ್ತದೆ ಎಂದೆನಿಸುತ್ತದೆ.
ನನ್ನಿಂದ ಮುದ್ರಣಕ್ಕೆ ಮೊದಲೇ ಪಾವತಿಸಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಖರೀದಿಸಿದ್ದ ಬೆಂಗಳೂರಿನ ಫ್ರೊಫೆಸರೊಬ್ಬರು ಧರ್ಮಸ್ಥಳಕ್ಕೆ ಹೋದಾಗ ಶ್ರೀಯುತ ವೀರೇಂದ್ರ ಹೆಗ್ಗಡೆಯವರಿಗೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಪ್ರೀತಿಯಿಂದ ನೀಡಿದರು.ನಾನು ಅದಕ್ಕೂ ಮೊದಲೇ ಹೆಗ್ಗಡೆಯವರಿಗೆ ಈ ಪುಸ್ತಕದ ಗೌರವ ಪ್ರತಿ ನೀಡಿದ್ದು ಅವರಿಗೆ ಗೊತ್ತಿರಲಿಲ್ಲ‌
ನಂತರ ಮಾತಿಗೆ ಸಿಕ್ಕಾಗ ಒಂದಿನ ನನ್ನ ಕೃತಿಯನ್ನು ನೀಡಿದ ಬಗ್ಗೆ ತಿಳಿಸಿದರು.ಆಗ ನಾನುಈ ಪುಸ್ತಕದ ಪ್ರತಿಯೊಂದನ್ನು ಅವರು ಖರೀದಿಸಲು ಕೇಳಿದ್ದು ಆಗ ನಾನು ತುಳುವಿಗಾಗಿ ಅಪಾರ ಕೆಲಸ ಮಾಡಿದ ಅವರಿಗೆ  ಗೌರವ ಪ್ರತಿ ನೀಡಿದ್ದನ್ನು ತಿಳಿಸಿದೆ.ಆಗ ಅವರು ಹೆಗ್ಗಡೆಯವರು ನಿಮ್ಮಿಂದ ಈ ಪುಸ್ತಕದ ಒಂದಷ್ಟು ಪ್ರತಿಗಳನ್ನು ಅವರ ಸಂಸ್ಥೆಗಳಿಗಾಗಿ ಖರೀದಿಸಿಲ್ಲವೇ ಎಂದು ಕೇಳಿದರು.ಇಲ್ಲವೆಂದೆ.
ಆಗ ಅಲ್ಲಿ ಪುಸ್ತಕ ವಿಭಾಗವನ್ನು ನೋಡಿಕೊಳ್ಳುತ್ತಿರುವವರೊಬ್ಬರ ಬಗ್ಗೆ ತಿಳಿಸಿ ಅವರನ್ನು ಸಂಪರ್ಕಿಸಲು ಬೆಂಗಳೂರಿನ ನನ್ನ ಹಿತೈಷಿಗಳಾದ ಪ್ರೊಫೆಸರ್ ಹೇಳಿದರು.ಅವರಲ್ಲಿ ಆಯಿತೆಂದು ತಲೆಯಾಡಿಸಿದೆ.ಆದರೆ ನನ್ನ ಮುಖ ಭಾವದಿಂದಲೇ ನನಗೆ ಅದು ಸಮ್ಮತವಾಗಿಲ್ಲವೆಂದು ಅವರಿಗರ್ಥವಾಗಿ ಯಾಕೆ ನೀವವರನ್ನು ಸಂಪರ್ಕಿಸಬಾರದು ? ಎಂದು ಕೇಳಿದರು
ಅವರಲ್ಲಿ ಏನೂ ಹೇಳಲಿಲ್ಲ.ಆಗ ನನಗೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ವಿಚಾರ ನೆನಪಿಗೆ ಬಂದು ಆಗ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಚತ್ ನ ಅಧ್ಯಕ್ಷರಾಗಿದ್ದ? ಹಿತೈಷಿಗಳಿಗೆ ಫೋನ್ ಮಾಡಿ ವಿಚಾರಿಸಿದೆ.

ಆಗ ನನಗೆ ಗೊತ್ತಾಯಿತು..ನನಗೆ ಗೊತ್ತೇ ಇಲ್ಲದ ಜನರೂ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು
ಇರಲಿ..ಎಲ್ಲವೂ ದೈವೇಚ್ಛೆ.ದೈವ ದೇವರುಗಳು  ಸದಾ ನನ್ನ ಕೈ ಮೇಲೆ ಇರಬೇಕೆಂದೇ ಹೀಗೆ ನನಗೆ ಎಲ್ಲಿಂದಲೂ ಸಹಾಯ ಬರದೇ ಇರುವಂತೆ ಮಾಡಿ ಸ್ವಯಂ ಅಧ್ಯಯನ ಹಾಗೂ ಪ್ರಕಟಿಸುವ ಸಾಮರ್ಥ್ಯವನ್ನು ಅನುಗ್ರಹಿಸಿರಬಹುದು.ಸಾವಿರ ಪುಟಗಳ ದೊಡ್ಡ ಪುಸ್ತಕವನ್ನು ಅದರ ವಿಷಯ ಘನತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಆರ್ಟ್ ಪೇಪರ್ ನಲ್ಲಿ ಪ್ರಕಟಿಸಲು ದುಡ್ಡಿಗೇನು ಮಾಡಲಿ ಎಂಬ ಚಿಂತೆಯಲ್ಲಿದ್ದಾಗ ಹಿತೈಷಿಗಳೊಬ್ಬರು ಮುಂಗಡ ಬುಕಿಂಗ್ ಶುರು ಮಾಡಿ.ಈಗಾಗಲೇ ನಿಮ್ಮ ಬರಹಗಳ ಬಗ್ಗೆ ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ ಹಾಗಾಗಿ ಪೂರ್ಣ ಬೆಲೆಗಿಂತ ಕಡಿಮೆ ಬೆಲೆ ಇರಿಸಿ ಮುಂಗಡ ಕಾಯ್ದಿರಿಸಲು ಹೇಳಿದರೆ ಜನರು ತಗೊಂಡೇ ತಗೊಳ್ತಾರೆ ಎಂದು ಸಲಹೆ ನೀಡಿದರು.ಹಾಗೆಯೇ ಮಾಡಿದೆ.ಯಶಸ್ಸನ್ನು ಪಡೆದೆ ಕೂಡ.
ಯಾರಿಂದಲೂ ಆರ್ಥಿಕ ಸಹಾಯ ಬೇಕಾಗಿ ಬರಲಿಲ್ಲ.ಯಾರಲ್ಲಿ ನಾನು ಸಹಾಯವನ್ನು ಕೇಳಿದ್ದೆನೋ ಅವರಿಗೆ ಗೌರವ ಪ್ರತಿಯನ್ನು ನೀಡುವಂತೆ ಆಯಿತು.ಇದು ನಿಜಕ್ಕೂ ದೈವ ಕೃಪೆಯೇ ತಾನೇ ?
ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ನಾನೂ ಅಲ್ಲ.ಆದರೆ ನನ್ನ ಅಧ್ಯಯನ ಕೃತಿ ನನ್ನ ನಂತರವೂ ಇರುತ್ತದೆ.ಕಾಯಕ್ಕೆ ಅಳಿವಿದೆ.ಕಾಯಕಕ್ಕೆ ಅಳಿವು ಇಲ್ಲ ಎಂಬುದು ನಿಶ್ಚಿತ .
ಬಹುಶಃ ನನ್ನ ಬದುಕಿನಲ್ಲಿ ಮಾತ್ರ ಇಂತಹದ್ದು ನಡೆದದ್ದು ಇರಲಾರದು
ಸಮಾಜದಲ್ಲಿ ತನ್ನ ಕಾಲ ಮೇಲೆ ನಿಂತು ಅನ್ಯರಿಗೆ ಬಕೆಟ್ ಹಿಡಿಯದೆ ಸ್ವಂತಿಕೆಯಿಂದ ಬದುಕುವವರಿಗೂ ಇಂತಹ ನಾನಾ ರೀತಿಯ ಅನುಭವಗಳಾಗಿರಬಹುದು.ನನ್ನ ಅನುಭವವನ್ನು ನಾನು ಹಂಚಿಕೊಂಡಿರುವೆ.

Sunday 10 April 2022

ನನಗೂ ಆತ್ಮ ವಿದೆ ಅದಕ್ಕೂ ಕಥೆ ಇದು ..ಚೊಚ್ಚಲ ಗರ್ಭಪಾತವಾದಾಗ ನೋವನ್ನು ಅವಡು ಗಚ್ಚಿಸೈರಿಸಿಕೊಂಡು ಬರೆದೆ

 ನನಗೂ ಆತ್ಮ ವಿದೆ  ಅದಕ್ಕೂ ಕಥೆ ಇದು ..ಚೊಚ್ಚಲ ಗರ್ಭಪಾತವಾದಾಗ ನೋವನ್ನು ಅವಡು ಗಚ್ಚಿಸೈರಿಸಿಕೊಂಡು  ಬರೆದೆ 

ನನಗೂ ಆತ್ಮ ವಿದೆ  ಅದಕ್ಕೂ ಕಥೆ ಇದೆ.


ಗೆದ್ದಾಗ ಬಿಕ್ಕಿ ಬಿಕ್ಕಿ ಅಳುವವರನ್ನು ನೋಡಿದ್ದೀರಾ ? ನಾನೂ ಅತ್ತಿದ್ದೆ. ಎಂ.ಎ ಅಂತಿಮ‌ ಪರೀಕ್ಷೆಗೆ ಎರಡು ತಿಂಗಳು‌‌ ಇತ್ತು. ಈ ನಡುವೆ ವಿವಾಹಾ ನಂತರ ಓದಿದ ನಮ್ಮ‌ ಮಡಿಲಿನಲ್ಲಿ‌ ಮಗು  ಮೊಳೆಯುವ ಲಕ್ಷಣ ಕಾಣಿಸಿತು‌.ಆಗ ನಾವು ಮಂಗಳೂರಿನಲ್ಲಿ ಮನೆ ಮಾಡಿದ್ದೆವು. ಎರಡು ತಿಂಗಳು ಬಸ್ಸಿನಲ್ಲಿ ಓಡಾಡಬಾರದು ಎಂದು ವೈದ್ಯರು ಹೇಳಿದ್ದರು.


ತರಗತಿಗೆ ಹಾಜರಾಗಿದ್ದರೂ ತೊಂದರೆ ಇರಲಿಲ್ಲ. ಅದಾಗಲೇ ಸಾಕಷ್ಟು ಹಾಜರಿ ನನಗಿತ್ತು. ಪ್ರಿಪರೇಟರಿ ಪರೀಕ್ಷೆ ಬರೆಯುವುದು ಹೇಗೆ? ಎಂಬ ಚಿಂತೆ ಕಾಡಿತು.

ನಮ್ಮ ಗುರುಗಳಾದ ನಾರಾಯಣಭಟ್ಟರು ಮತ್ತ ಅವರ ಮಡದಿ ಜಯಕ್ಕ ಬಹಳ ಉದಾರಿಗಳು. ನಮಗೆ ದೂರದ ಸಂಬಂಧಿಗಳು ಕೂಡ. ಅವರಲ್ಲಿ ಕೇಳಿದೆ. ಪರೀಕ್ಷೆ ಇರುವಷ್ಟು ದಿನ ಅವರಲ್ಲಿ ಇರಲು ಸಂತೋಷದಿಂದ ಒಪ್ಪಿದರು. ಅಂತೂ ಸಮಸ್ಯೆ ಪರಿಹಾರ ಆಯಿತು. ಮನೆ ಮಗಳಂತೆ ನನ್ನನ್ನು ಬಹಳ‌ ಪ್ರೀತಿಯಿಂದ ನೋಡಿಕೊಂಡರು. ಅವರಿಬ್ಬರ ಸಹಾಯವನ್ನು ಎಂದಿಗೂ ಮರೆಯಲಾಗದು .

ಇದಾಗಿ ಎರಡು ತಿಂಗಳ ನಂತರ ಅಂತಿಮ ಪರೀಕ್ಷೆ ಇತ್ತು.

ವಿಪರೀತ ವಾಂತಿ, ಊಟ ಸೇರದ ಸಂಕಟದ ಸಮಸ್ಯೆ ಎಲ್ಲ ಚೊಚ್ಚಲ ಗರ್ಭಿಣಿಯರಂತೆ ನನಗು ಇತ್ತು‌. ಬೇಕಾದ ತಿಂಡಿ ತಂದುಕೊಡಲು ಪ್ರಸಾದ ಸದಾ ಸಿದ್ಧರಿದ್ದರು. ಬಡತನ ಇತ್ತು. ಆದರೆ  ಒಲವಿಗೆ ಕೊರತೆ ಇರಲಿಲ್ಲ. ಆದರೆ ಒಂದು ಹನಿ ನೀರು ಕೂಡ ನಿಲ್ಲುತ್ತಿರಲಿಲ್ಲ.


ಮಾರ್ನಿಂಗ್ ಸಿಕ್ನೆಸ್ ಬೆಳಗ್ಗೆ ಮಾತ್ರ ಇರುತ್ತದೆ ಎಂದುಕೊಂಡಿದ್ದೆ‌. ಇದು ಇಡೀ ದಿ‌ನ ಆರೇಳು ತಿಂಗಳ ಕಾಲ ಕಾಡುತ್ತದೆ ಎಂಬದು ಅನುಭವ ಆದಾಗಲೇ ಗೊತ್ತಾದದ್ದು. ದಿನ ನಿತ್ಯ ಕಾಲು ಸೆಳೆತ ಕೈ ಮೈ ನೋವು ವಾಂತಿ ಹಿಂಸೆ ನಿತ್ರಾಣ‌‌, ಕಣ್ಣು ಬಿಡಲಾಗದಷ್ಟು ಆಯಾಸ  ಸದಾ ನಿದ್ರೆ, ಕಣ್ಣೆಳೆತ ಜೊತೆಗೆ. ತಿನ್ನುವಹುಚ್ಚು.


ಅಂತಿಮ‌ಪರೀಕ್ಷೆ ಹಿಂದಿನದಿನ ಬೆಳಗಿನಿಂದಲೂ ತೀರಾ ಹಿಂಸೆ ಬೆನ್ನು ನೋವು ಆಗಾಗ ಟಾಯ್ಲೆಟಿಗೆ ಹೋಗಬೇಕು ಅನಿಸಿದು. ಹಿಂಸೆ, ಏನೇನೋ ಆಗುತ್ತಿತ್ತು. ಪರೀಕ್ಷೆಯ ಆತಂಕ ಇರಬಹುದು ಎಂದುಕೊಂಡೆ. ತಲೆ ಸುತ್ತು ಕಣ್ಣು ಕತ್ತಲು ಬರುತ್ತಿತ್ತು. ಕಾಲು ಬ್ಯಾಲನ್ಸ್ ಇರಲಿಲ್ಲ .


ಮುಖ‌,ಕೈ , ಕಾಲಲ್ಲಿ ನೀರು ತುಂಬಿತ್ತು. ನಾನು ಗರ್ಭಿಣಿಯರಿಗೆ ಇದು ಸಹಜ ಎಂದುಕೊಂಡೆ. 

ಮಧ್ಯಾಹ್ನವಾಗುವಾಗ ತೀವ್ರ ಹಿಂಡುವ ಹೊಟ್ಟೆ,ತೊಡೆ ಸಂಧಿಯಿಂದ ಶುರುವಾಗುವ ನೋವು ಬೆನ್ನಿನ ಹಿಂಭಾಗ ಕೈ, ಕಾಲು ಹರಡುತ್ತಿತ್ತು . ನೋವಿನೊಡನೆ ರಕ್ರ ಸ್ರಾವ ಶುರುವಾಯಿತು.

ಕೂಡಲೇ ಭಟ್ ನಿರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಷ್ಟ್ ಮಾಲತಿ ಭಟ್ ಬಳಿಗೆ ಹೋದೆ. ಅವರು ಸ್ಕಾನಿಂಗ್ ಗೆ ಕಳುಹಿಸಿದರು

ಕೊನೆಗೂ ನಮ್ಮ ಮೊದಲ‌ ಮಗು ಹೊಟ್ಟೆಯಲ್ಲಿಯೇ ಸತ್ತದ್ದು ಗೊತ್ತಾಯಿತು.

ಏನು ಹೇಳಲಿ ಆದಿನ ನನ್ನ ಸ್ಥಿತಿ? ನನ್ನನ್ನು ಮೊದಲ ಅಮ್ಮ‌ ಎಂದು ಕರೆಯಲಿದ್ದ ಮಗು ಕೈ ತಪ್ಪಿ ಹೋಯಿತಲ್ಲ‌.

ವೈದ್ಯರು 'ಈಗ ಜಾಗರೂಕತೆ ಮಾಡಿದರೆ  ಇನ್ನು ಹತ್ತು ಮಕ್ಕಳನ್ನು ಹೆರಬಹುದು. ಅತ್ತರೆ ಸತ್ತವರು ಬರುವುದಿಲ್ಲ.ಡಿಎಂಡ್ಸಿ ಮಾಡಬೇಕು ಇಲ್ಲವಾದರೆ ಮಗು ಅಲ್ಲಿಯೇ ಕೊಳೆತು ಇತರ ಭಾಗಕ್ಕೆ ಸೋಂಕು ಹರಡಬಹುದು‌ ಮುಂದೆ ಬಂಜೆತನ ಬರಬಹುದು, ಜೀವಾಪಾಯ ಉಂಟಾಗಬಹುದು ಎಂದರು.ಅಷ್ಟಾಗುವಾಗ ರಾತ್ರಿ ಹನ್ನೊಂದಾಗಿತ್ತು.

ಡಿಎಂಡ್ಸಿ ಮಾಡಿದರೆ ನಾಳೆ ಪರೀಕ್ಷೆ ಬರೆಯಲು ಸಾಧ್ಯವಾ ಎಂದು ಕೇಳಿದೆ. ಸಾಧ್ಯವಿಲ್ಲ.ಲೋಕಲ್ ಅನಸ್ತೀಶಿಯ ಕೊಡ್ತೇವೆ ನಿದ್ರೆಯ ಮಂಪರು ಇರ್ತದೆ.ಮುಂದಿನಬಾರಿ ಪರೀಕ್ಷೆ ಬರೆ ಸರ್ಟಿಫಿಕೇಡ್ ಕೊಡ್ಡೇನೆಎಂದು. ಅಯ್ಯೋ ನನ್ನ ರ‌್ಯಾಂಕನ ಕನಸು. ಮನೆ ಮಂದಿಯನ್ನು ಸಮಾಜವನ್ನು ಎದುರು ಹಾಕಿಕೊಂಡು ಏನೋ ಸಾಧನೆ ಮಾಡ್ತೇವೆ ಎಂದು ಬಂದದ್ದು ಎಲ್ಲ‌ ಒಮ್ಮೆಗೆ ಉಕ್ಕಿ ಬಂದು ಡಾಬಾರನೆ ನಿಂತಲ್ಲಿಂದ ಬಿದ್ದೆ. ಅಷ್ಟೇ ಗೊತ್ರು ನನಗೆ ನಾನು ಎಚ್ಚರಾಗುವಾಗ ಐಸಿಯು ಬೆಡ್ ನಲ್ಲಿದ್ದೆ. ಒತ್ತಡಕ್ಕೆ ಬಿಪಿ ಹೆಚ್ಚಾಗುತ್ತಿತ್ತು ಅಂತೆ.ಅದಕ್ಕೆ ತಲೆ ಸುತ್ತಿ ಬಿದ್ದೆ ಅಂತೆ.

ಅಳು ಗಿಳು ನಿಲ್ಲಿಸಿದ್ದೆ. ವಾಸ್ತವದ ಬಗ್ಗೆ ಯೋಚಿಸಿದೆ.

ನಾಳೆ ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ ವ್ಯರ್ಥ ಆಗುತ್ತದೆ ಅಲ್ಲದೇ ರ‌್ಯಾಂಕಿನ ಕನಸು ಅಸಾಧ್ಯ.

ಹಾಗಾಗಿ ನಾಳೆ ಪರೀಕ್ಷೆ ಬರೆದು ಬಂದು ಡಿ ಎಂಡ್ ಸಿ‌ ಮಾಡಿಸಿದರೆ ಆಗುತ್ತದಾ ಎಂದು ಕೇಳಿದೆ

ಬಹಳ ಅಪಾಯ ಇದೆ‌. ಬಹಳ ಹೊಟ್ಟೆ ನೀವು ಇರುತ್ತದೆ. ತಾಳಿಕೊಂಡು ತೀವ್ರ ರಕ್ತಸ್ರಾವ ಸುರಿಸಿಕೊಂಡು ಪರೀಕ್ಷೆ ಬರೆಯಲು ನಿನಗಾಗುತ್ತಾ ಎಂದು ಬೈದ್ಯರು ,ಬುದ್ದಿ ಹೇಳಿದರು ಕೇಳಲಿಲ್ಲ.

ಎಷ್ಟೇ ಕಷ್ಟ ಆದರೂ ನಾನು ಪರೀಕ್ಷೆ ಬರೆಯುತ್ತೇನೆ ಎಂದೆ

ಅಂದಷ್ಟು ಸುಲಭವಿರಲಿಲ್ಲ. ವಿಪರೀತ ರಕ್ತ ಸ್ರಾವ ಹಿಂಡುವ ನೋವು ತಲೆ ಸುತ್ರು.. ಓಹ್..ನೀವು ನಂಬುತ್ತೀರೋ ಎಲ್ಲವೋ ಇಲ್ಲವೋ ಒಂದು ದಪ್ಪದ ಕಂಬಳಿಯನ್ನು ಏಳೆಂಟು ಮಡಿಕೆ ಮಾಡಿ ಕುಳಿತು ಕೊಳ್ಳುವ  ಬೆಂಚಿನ‌ಮೇಲೆ ಹಾಕಿದ್ದೆ. ಕೆಳಗೆ ಎರಡೆರಡು ಡೈಪರ್ ಬಳಸಿದ್ದೆ. ಇವೆಲ್ಲವೂ ರಕ್ತದಿಂದ ಒದ್ದೆಯಾಗಿದ್ದವು‌ ನನ್ನ ಉಟ್ಟ ಬಟ್ಟೆಯೂ ಪರೀಕ್ಷೆ ಮುಗಿಯುವಷ್ಟರಲ್ಲಿಲ್ಲಿ ರಕ್ತದಲ್ಲಿ ಒದ್ದೆಯಾಗಿ ಕೆಂಪಾಗಿತ್ತು.ಆಗ ಉಂಟಾದ ಸಂಕೋಚ ನಾಚಿಕೆಗಳಲ್ಲನ್ನು ಪದಗಳಲ್ಲಿ ವರ್ಣಿಸಲಾಗದು. ಅಳು ಉಕ್ಕಿ ಬಾಯಿಗೆ ಬರುತ್ತಿತ್ತು. ಆದರೆ ನಾನು ಅಳಲಿಲ್ಲ ನನ್ನದಲ್ಲದ ತಪ್ಪಿಗೆ ನಾನೇಕೆ ಅಳಲಿ? ಋತುಮತಿಯಾಗುವುದು ಮದುವೆ, ತಾಯ್ತನ ಅಪರೂಪಕ್ಕೆ ಒಮ್ಮೆ  ದುರದೃಷ್ಟದ ಗರ್ಭಪಾತ ಇದೆನ್ನಲ್ಲವನು ಎದುರಿಸಿ ಗೆದ್ದು ಬದುಕಬೇಕು. ಹೆಣ್ಣಾದ ಮೇಲೇ ಇದಕ್ಕೆಲ್ಲ ಅಳುಕಿದರೆ ಹೇಗೆ ಎಂದು ಗಟ್ಟಿ ಮನಸು ಮಾಡಿದ್ದೆ .ಮಾಡಿ ಗೆದ್ದಿದ್ದೆ ಕೂಡ  ಗರ್ಭ ಸ್ರಾವವಾಗಿ ನಮ್ಮಲ್ಲಿ ಇದ್ದುದೇ  ಒಂದು ಕಂಬಳಿ ಅದೂ ಹಾಳಾಯ್ತಲ್ಲವೆಂಬ ಸಣ್ಣ ಚಿಂತೆ ಕೂಡ ಕಾಡಿ ಬಿಟ್ಟಿತು. ಬರೆ.‌ತಮಾಷೆಯ‌ ಮಾತಲ್ಲ‌ ಮತ್ತೆ ಕಂಬಳಿ ತೆಗೆದುಕೊಳ್ಳ ಬೇಕಂದ್ರೇ ಮತ್ತಾರು ತಿಂಗಳು ದುಡ್ಡು ಹೊಂದಿಸಬೇಕಾಗಿತ್ತು. 

ನಾವಿಬ್ಬರು ಹಾಸಿ‌ ಮಲಗುತ್ತಿದ್ದ ನಮ್ಮಲ್ಲಿದ್ದ ಒಂದೇ ಒಂದು ಕಂಬಳಿ ಇದು.

ಪರೀಕ್ಷೆ ಹಾಲಿನಿಂದ  ಕಾರು ಮಾಡಿಕೊಂಡು ನೇರವಾಗಿ ಮಾಲತಿ ಆಸ್ಪತ್ರೆಗೆ ನಾನು ಪ್ರಸಾದ್ ಬಂದೆವು.

ಈ ನಡುವೆ ನಡು ರಾತ್ರಿ ಅಲ್ಲಿಂದ ಬಂದು ಬೆಳಗ್ಗೆ ಒಂಬತ್ತರಿಂದ ಹನ್ನೆರಡರ ತನಕ ಪರೀಕ್ಷೆ ಬರೆದು ನೇರವಾಗಿ ಆಸ್ಪತ್ರೆಗೆ ಹೋಗಿದ್ದೆವು. ಉಣ್ಣಲು ತಿನ್ನಲು ಏನಾದರೂ ಸೇರಿದರೆ ತಾನೆ ಮಡಿಲ ಮಗುವನ್ನು ಕಳೆದುಕೊಂಡ ನಮಗೆ ಏನೂ ಬೇಡವಾಗಿತ್ತು...ತಿನ್ನಲು ಸೇರಿದರೆ ತಾನೆ..? ಒಂದು ಹನಿ ನೀರನ್ನೂ ಕುಡಿದಿರಲಿಲ್ಲ. ಗರ್ಭಪಾತವಾದಲ್ಲಿಂದ ಒಂದು ತೊಟ್ಟು ನೀರು ಕೊಡಿದಿರಿರಲಿಲ್ಲ. ಅಂತೂ ಹೇಗೋ ಪರೀಕ್ಷೆ ಬರೆದು  ಆಸ್ಪತ್ರೆಗೆ ಹೋದೆ. ಆಸ್ಪತ್ರೆಗೆ ಕಾಲಿಡುವಷ್ಟರರಲ್ಲಿ ಕಣ್ಣು ಕತ್ತಲು ಬಂದು ಎಚ್ಚರ ತಪ್ಪಿ ಬಿದ್ದಿದ್ದೆ. ಎಚ್ಚರಾಗುವಾಗ ಆಸ್ಪತ್ರೆಯ  ಐಸಿಯು ವಿನಲ್ಲಿದ್ದೆ. ಸುತ್ತ ಮುತ್ತ ಹಸಿರು ಗೌನ್ ಧರಿಸಿದ ವೈದ್ಯರು ಕಣ್ಣು ತೆರೆಯಿರಿ ಎಚ್ಚರ ಬಂತಾ? ನಿಮ್ಮ ಹೆಸರೇನು? ಇತ್ಯಾದಿ ಕೇಳಿದ್ದರು‌.  ಏನೋನೋ ಮಷಿನ್ ಗಳನ್ನು ಹಾಕಿದ್ದರು.

ಬ್ಲಡ್ ಹೋಗಿ ತುಂಬಾ ಸಮಸ್ಯೆ ಆಗಿತ್ತ.ಸಾಕಷ್ಟು ಗ್ಲೂಕೋಸ್,ಬ್ಲಡ್ ಎಲ್ಲ ಕೊಟ್ಟ ರೆಡಿ ಮಾಡಿ  ನಂತರ ಡಿಆಂಡ್ಸಿ‌ ಮಾಡಿದರು.

ಅದೃಷ್ಟವಶಾತ್ ಅದರ ಮರುದಿನ ಪರೀಕ್ಷೆ ಇರಲಿಲ್ಲ ಸುದ್ದಿ ಸಿಕ್ಕಿ ಆರೈಕೆಗೆ  ಅಮ್ಮ ಬಂದಿದ್ದರು.


ಹಾಗಾಗಿ ಮೊದಲ ರ‌್ಯಾಂಕ್ ಪಡೆದಾಗ ಇವೆಲ್ಲವೂ ಕಣ್ಣ ಮುಂದೆ ಬಂದು ಅಳು ಉಕ್ಕಿ ಬಂದಿತ್ತು

ಬಡತನವೇ ದೊಡ್ಡ ಕಷ್ಟ ಜಗತ್ತಿಲ್ಲಿ.‌ ಉಳಿದದ್ದೆಲ್ಲ  ನಂತರದ ಸಾಲಿನಲ್ಲಿ ನಿಲ್ಲುತ್ತವೆ.

ಗೆದ್ದಾಗ ಬಿಕ್ಕಿ ಬಿಕ್ಕಿಅಳುವವರನ್ನು ನೋಡಿದ್ದೀರಾ ? ನಾನೂ ಅತ್ತಿದ್ಬವು ಎಂಎ ಅಂತಿಮ‌ಪರೀಕ್ಷೆಗೆ ಎರಡು ತಿಂಗಳು‌‌ ಇತ್ತು ಈ ನಡುವೆ ವಿವಾಹಾನಂತರ ಓದಿದ ನಮ್ಮ‌ ಮಡಿಲಿನಲ್ಲಿ‌ಮಗು  ಮೊಳೆಯುವ ಲಕ್ಷಣ ಕಾಣಿಸಿತು‌ಆಗ ನಾವು ಮಂಗಳೂರು ನಲ್ಲಿ ಮನೆ ಮಾಡಿದ್ದೆವು.ಎರಡು ತಿಂಗಳು ಬಸ್ಸಿನಲ್ಲಿ ಓಡಾಡಬಾರದು ಎಂಧು ವೈದ್ಯೆರು...

ತರಗರಿಗೆ ಹಾಜರಾಗಿದ್ದರೂ ತೊಂದರೆ ಇರಲಿಲ್ಲ ಅದಾಗಲೇ ಸಾಕಷ್ಟು ಹಾಜರಿ ನನಗಿತ್ತು...ಪ್ರಿಪರೇಟರಿ ಪರೀಕ್ಷೆ ಬರೆಯವುದುವುದು ಹೇಗೆ? ಎಂಬ ಚಿಂತೆ ಕಾಡಿತು

ನಮ್ಮ ಗುರುಗಳಾದ ನಾರಾಯಣಭಟ್ಟರು ಮತ್ತ ಅವರ ಮಡದಿ ಜಯಕ್ಕ ಬಹಳ ಉದಾರಿಗಳು.ನಮಗೆ ದೂರು ಸಂಸಬಂಧಿಗಳು ಕೂಡ.ಅವರಲ್ಲಿ ಕೇಳಿದೆ..ಪರೀಕ್ಷೆ ಇರುವಷ್ಟು ದಿನ ಅವರಲ್ಲಿ ಇರಲು ಸಂತೋಷದಿಂದ ಒಪ್ಪಿದರು.ಅಂತೂ ಸಮಸ್ಯೆ ಪರಿಹಾರ ಆತಿತು...ಮನೆ ಮಗಳಂತೆ ನನ್ನನ್ನು ಬಹಳ‌ಪ್ರೀತಿಯಿಂದ ನೋಡಿಕೊಂಡರು ಅವರಿಬ್ಬರ ಸಹಾಯವನ್ನು ಎಂದಿಗೂ ಮರೆಯಲಾಗದು 

ಇದಾಗಿ ಎರಡು ತಿಂಗಳ ನಂತರ ಅಂತಮ ಪರೀಕ್ಷೆ ಇತ್ರು...

ವಿಪರೀಬ ವಾಂತಿ ಊಟಸೇರದ ಸಂಕಟದ ಸಮಸ್ಯೆ ಎಲ್ದ ಚೊಚ್ಚಲ ಗರ್ಭಿಣಿಯರಂತೆ ನನಗು ಇತ್ತು‌.ಬೇಕಾದ ತಿಂಡಿ ತಂದುಕೊಡಲು ಪ್ರಸಾದ ಸದಾ ಸಿದ್ಧರಿದ್ದರು.ಬಡತನ ಇತ್ತು.ಆದರೆ  ಒಲವಿಗೆ ಕೊರೆತೆ ಇರಲಲ್ಲ‌   ಆದೆ ರೆಒಂದು ಹನಿ ನೀರು ಕೂಡ ನಿಲ್ಲುತ್ತಿತಲಿಲ್ಲ..


ಮಾರ್ನಿಂಗ್ ಸಿಕ್ನೆಸ್ ಬೆಳಗ್ಗೆ ಮಾತ್ರ ಇರುತ್ತದೆ ಎಂದುಕೊಂಡಿದ್ದೆ‌.ಇದು ಇಡೀ ದಿ‌ನ ಆರೇಳು ತಿಂಗಳ ಕಾಲ ಕಾಡುತ್ತದೆ ಎಂಬದು ಅನುಭವ ಆದಾಗಲೇ ಗೊತ್ತಾದದ್ದು .ದಿನ ನಿತ್ಯ ಕಾಲು ಸೆಳೆತ ಕೈ ಮೈ ನೋವು ವಾಂತಿ ಹಿಂಸೆ ನಿತ್ರಾಣ‌‌,ಕಣ್ಣು ಬಿಡಲಾಗದಷ್ಟು ಆಯಾಸ  ಸದಾ ನಿದ್ರೆ, ,ಕಣ್ಣೆಳೆತ ಜೊತೆಗೆ. ತಿನ್ನುವಹುಚ್ಚು


ಅಂತಿಮ‌ಪರೀಕ್ಷೆ ಹಿಂದಿನದಿನ ಬೆಳಗಿನಿಂದಲೂ ತೀರಾ ಹಿಂಸೆ ಬೆನ್ನು ನೋವು ಆಗಾಗ ಟಾಯ್ಲೆಟಿಗೆ ಹೋಗಬೇಕು ಅನಿಸಿದು ಹಿಂಸೆವಏನೇನೋ ಆಗುತ್ತಿತ್ತು.ಪರೀಕ್ಷೆಯ ಆತಂತ ಇರಬಹುದು ಎಂದುಕೊಂಡೆ..ತಲೆ ಸುತ್ತು ಕಣ್ಣು ಕತ್ತಲು ಬರುತ್ತಿತ್ರು‌ಕೈಕಾಲು ಬ್ಯಾಲನ್ಸ್ವ ಇರಲಿಲ್ಲ 


ಮುಖ‌ಕೈ ಕಾಲಲ್ಲಿ ನೀರು ತುಂಬಿತ್ತು ಗರ್ಭಿಣಿಯರಿಗೆ ಇದು ಸಹಜ ಎಂದುಕೊಂಡೆ ನಾನು 

ಮಧ್ಯಾಹ್ನವಾಗುವಾಗ ತೀವ್ರ ಹಿಂಡುವ ಹೊಟ್ಟೆತೊಡೆ ಸಂಧಿಯಿಂದ ಶುರುವಾಗುವ ನೋವು ಬೆನ್ನನ ಹಿಂಭಾಗ ಕೈ ಕಾಲು ಹರಡುತ್ತಿತ್ರು . ನೋವಿನೊಡನೆ ರಕ್ರ ಸ್ರಾವ ಶುರುವಾಯಿತು

ಕೂಡಲೇ ಭಟ್ ನಿರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಷ್ಟ್ ಮಾಲತಿ ಭಟ್ ಬಳಿಗೆ ಹೋದೆ.ಅವರು ಸ್ಕಾನಿಂಗ್ ಗೆ ಕಳುಹಿಸಿದರು

ಕೊನೆಗೂ ನಮ್ಮ ಮೊದಲ‌ ಮಗು ಹೊಟ್ಟೆಯಲ್ಲಿಯೇ ಸತ್ತದ್ದು ಗೊತ್ತಾಯಿತು

ಏನು ಹೇಳಲಿ ಆದಿನ ನನ್ನ ಸ್ಥಿತಿ?. ನನ್ನನ್ನು ಮೊದಲ ಅಮ್ಮ‌ಎಂದು ಕರೆಯಲಿದ್ದ ಮಗು ಕೈ ತಪ್ಪಿ ಹೋಯಿತಲ್ಲ‌

ವೈದ್ಯರು 'ಈಗ ಜಾಗರೂಕತೆ ಮಾಡಿದರೆ  ಇನ್ನು ಹತ್ತು ಮಕ್ಕಳನ್ನು ಹೆರಬಹುದು ಅತ್ತರೆ ಸತ್ತವರು ಬರುವುದಿಲ್ಲ.ಡಿಎಂಡ್ ಸಿ‌ಮಾಡಬೇಕು ಇಲ್ಲವಾದರೆವ ಮಗು ಅಲ್ಲಿಯೇ ಕೊಳೆತು ಇತರ ಭಾಗಕ್ಕೆ ಸೋಂಕು ಹರಡಬಹುದು‌ಮುಂದೆ ಬಂಜೆ ತನ ಬರಬಹುದು,ಜೀವಾಪಾಯ ಉಂಟಾಗಬಹುದು ಎಂದರು.ಅಷ್ಟಾಗುವಾಗ ರಾತ್ರಿ ಹನ್ನೊಂದಾಗಿತ್ತು

ಡಿಎಂಡ ಸಿ ಮಾಡಿರೆ ನಾಳೆ ಪರೀಕ್ಷೆ ಬರೆಉಲು ಸಾಧ್ಯವಾ ಎಂದು ಕೇಳಿದೆ.ಸಾಧ್ಯವಿಲ್ಲ.ಲೋಕಲ್ ಅನಸ್ತೀಶಿಯ ಕೊಡ್ತೇವೆ ನಿದ್ರೆಯ ಮಂಪರು ಇರ್ತದೆ .ಮುಂದಿನಬಾರಿ ಪರೀಕ್ಷೆ ಬರೆ ಸರ್ಟಿಫಿಕೇಡ್ ಕೊಡ್ಡೇನೆಎಂದು.ಅಯ್ಯೋ ನನ್ನ ರ‌್ಯಾಂಕನ ಕನಸು..ಮನೆ ಮಂದಿಯನ್ನು ಸಮಾಜವನ್ನುಎದುರು ಹಾಕಿಕೊಂಡುಬ ಏನೋ ಸಾಧನೆ ಮಾಡ್ತೇವೆ ಎಂದು ಬಂದದ್ದು ಎಲ್ಲ‌ಒಮ್ಮೆಗೆ ಉಕ್ಕಿ ಬಂದು ಡಾಬಾರನೆ ನಿಂತಲ್ಲಿಂದ ಬಿದ್ದೆ.ಅಷ್ಟೇ ಗೊತ್ರು ನನಗೆ ನಾನು ಎಚ್ಚರಾಗುವಾಗ ಐಸಿಯುಬ ಬೆಡ್ ನಲ್ಲಿದ್ದೆ ಒತ್ತಡಕ್ಕೆ ಬಿಪಿ ಎಚ್ಚಾಗುತಿತ್ತಂತೆ.ಅದಕ್ಕೆ ತಲೆ ಸುತ್ರಿ ಬಿದ್ದನೆಂತೆ

ಅಳು ಗಿಳು ನಿಲ್ಲಿಸಿದ್ದೆ ವಾಸ್ತವದ ಬಗ್ಗೆ ಹೋಚಿಸಿದೆ

ನಾಳೆ ಪರೀಕ್ಷೆ ಬರೆಯದಿದ್ದರ ಒಂದು ವರ್ಷ ವ್ಯರ್ಥ ಆಗುತ್ತದೆಅಲ್ಲದವರ‌್ಯಾಂಕಿನ ಕನಸು ಅಸಾಧ್ಯ.

ಹಾಗಾಗಿ ನಾಳೆ ಪರೀಕ್ಷೆ ಬರೆದುಬಂದು ಡಿ ಎಂಡ್ ಸಿ‌ಮಾಡಿಸಿದರೆ ಆಗುತ್ತದಾ ಎಂದು ಕೇಳಿದೆ

ಬಹಳ ಅಪಾಯ ಇದೆ‌.ಬಹಳ ಹೊಟ್ಟೆ ನೀವು ಇರುತ್ತದೆ ತಾಳಿಕೊಂಡು ತೀವ್ರ್ ರಕ್ತಸ್ರಾವ ಸುರಿಸಿಕೊಂಡು ಪರೀಕ್ಷೆ ಬರೆಯಲು ನಿನಗಾಗುತ್ತಾ ಎಂದು ಬೈದ್ಯರು ,ಬುದ್ದಿ ಹೇಳಿದರು ಕೇಳಲಿಲ್ಲ

ಎಷ್ಟೇ ಕಷ್ಟ ಆದರೂ ನಾನು ಪರೀಕ್ಷೆ ಬರೆಯುತ್ತೃನೆ ಎಂದೆ

ಅಂದಷ್ಡು ಸುಲಭವಿರಲಿಲ್ಲ.ವಿಪರೀತ ರತ್ಕಸ್ರಾವ ಹಿಂಡುವ ನೋವು ತಲೆ ಸುತ್ರು..ಓಹ..ನೀವು ನಂಬುತ್ತೀರೋ ಎಲ್ಲವೋ ಇಲ್ಲವೋ ಒಂದು ದಪ್ಪದ ಕಂಬಳಿಯನ್ನು ಏಖೆಂಟು ಮಡಿಕೆ ಮಾಡಿ ಕುಳುತುಕೊಳ್ಳುವ ಬೆಂಚಿನ‌ಮೇಲೆ ಹಾಕಿದ್ದೆ.ಇಳಗೆ ಎರಡೆರಡು ಡೈಪರ್ ಬಳಸಿದ್ದೆ.ಇವೆಲ್ಲವೂ ರಕ್ತದಿಂದ ಒದ್ದೆಯಾಗಿದ್ದವು‌ ನನ್ನ ಉಟ್ಟ ಬಟ್ಟೆಯೂ ಪರೀಕ್ಷೆ ಮುಗಿಯುವಷ್ಟರಲ್ಲಿಲ್ಲಿ ರಕ್ತದಲ್ಲಿ ಒದ್ದೆಯಾಗಿ ಕೆಂಪಾಗಿತ್ತು.ನಾಗ ಉಙಟಾದ ಸಂಕೋಚ ನಾಚಿಕೆಗಳಲ್ಲನ್ನು ಭದ್ಬಗಳಲ್ಲಿ ವರ್ಷಿಸಲಾಗದು‌ಅಳು ಉಕ್ಕಿ ಬಾಯಿಗೆ ಬರುತ್ತಿತ್ತು ಆದರೆ ನಾನು ಅಳಲಿಲ್ಲಲ ನನ್ನದಲ್ಲದ ತಪ್ಪಿಗೆ ನಾನೇಕೆ ಅಳಲಿ? ಋಉತುಮಿಯಾಗುವುದುಮದುವೆ ತಾಯ್ತನ ಅಪರೂಒಕ್ಕಿನ್ಮೆ ದುರದೃಷ್ಟದ ಬರ್ಭಪಾತ ಇದೆನ್ನಲ್ಲವನಗನುಎದುರಿಸಿಸೆ ಗೆದ್ದುಬ ಬದಕಕುಬೇಕು.ಹೆಣ್ಣಾದ ಮೇಲೇ ಇದಕ್ಕೆಲ್ಲ ಅಳುಕಿದರೆ ಗೇಗೆ ಎಂದುಬ ಗಟ್ಟಿ ಮನಸು ಮಾಡಿದ್ದೆ ಮಾಡಿ ಗೆದ್ದಿದ್ದೆ ಕೂಡ  ಗರ್ಭ ಸ್ರಾವವಾಗಿ ನಮ್ಮಲ್ಲಿ ಇದ್ದುದೇ  ಒಂದುಕಂಬಳಿಅನದೂ ಹಾಳಾಯ್ತಲ್ಲವೆಂಬ ಸಣ್ಣ ಚಿಂತೆಕೂಡ ಕಾಡಿತಿಬಿದುಬ ಬರೆ.‌ತಮಾಷೆಯ‌ಮಾತಲ್ಲ‌ಮತ್ತೆಕಂಬಳಿ ತೆಗೆಯಕೆಂದರೆವ ಮತ್ತಾರು ತಿಂಗಳು ದುಡ್ಡು ಹೊಂದಿಸೆಬೇಕಾಗಿತ್ತು 

ನಾವಿಬ್ಬರು ಹಾಸಿ‌ಮಲಗುತ್ತಿದ್ದ ನಮ್ಮಲ್ಲಿದ್ದ ಒಂದೇ ಒಂದು ಕಂಬಳಿ ಇದು.

ಪರೀಕ್ಷೆ ಹಾಲಿನಿಂಂ  ಕಾರು ಮಾಡಿಕೊಂಡು ನೇರವಾಗಿ ಮಾಲತಿ ಆಸ್ಪತ್ರೆಗೆ ನಾನು ಪ್ರಸಾದ್ ಬಂದೆವು

ಈ ನಡವೆ ನಡುರಾತ್ರಿ ಅಲ್ಲಿಂತ ಬಂದುಬೆಳಗ್ಗೆ ಒಂಬತ್ತರಿಂದ ಹನ್ನೆರಡರ ತನಕ ಪರೀಕ್ಷೆ ಬರೆದು ನೇರವಾಗಿ ಆಸ್ಪತ್ರೆಗೆಹೋಗಿದ್ದೆವುಬ ಉಣ್ಣಲು ತಿನ್ನಲು ಏನಾದರೂ ಸೇರಿದರೆ ತಾನೆ ಮಡಿಲ ಮಗುವನ್ನು ಕಳೆದುಕೊಂಡ ನಮಗೆ ಏನೂ ಬ್ಯಾಡವಾವಾಗಿತ್ರ...ತಿನ್ನಲು ಸೇರಿದರೆ ತಾನೆ..? ಒಂದು ಹನಿ ನೀರನ್ನೂ ಕುಡಿದಿರಲಿಲ್ಲ ಗರ್ಭಪಾತದವಾದಲ್ಲಿಂದ ಒಂದು ತೊಟ್ಟು ನೀರು ಕೊಡಿದಿರಿರಲಿಲ್ಲಂತೂ ಹೇಗೋ ಪರೀಕ್ಷೆ ಬರೆದು  ಆಸ್ಪತ್ರೆಗೆ ಹೋದೆ..ಅಸ್ಪತ್ರೆಗೆ ಕಾಲಿಡುವಷ್ಟರರಲ್ಲಿ ಕಟ್ಟಿಕತ್ತಲು ಬಂದು ಎಚ್ಚರ ತಪ್ಪಿ ಬಿದ್ದಿದ್ದೆ.ಎಚ್ಚರಾಗುವಾಗಾಸ್ಪತ್ರೆಯವ ಐಸಿಯು ವಿನಲ್ಲಿದ್ದೆಸುತ್ತ ಮುತ್ತ ಹಸಿರು ಘನ್ ಧರಿಸಿದ ವೈದ್ಯರಯ ಕಣ್ಣು ತೆರೆಯಿರಿ ಎಚ್ಚರ ಬಂತಾ? ನಿಮ್ಮ ಹೆಸರೇನು ಇತ್ಯಾದಿ ಕೇಳಿದ್ದರು‌ಹೇಸಕ್ಕೆ ಏನೋನೋ ಮಷಿನ್ ಗಳನ್ನು ಹಾಕಿದ್ದರರು

ಬ್ಲಾಡಗ ಹೋಗಿವತುಂಬಾ ಸಮಸ್ಯೆ ಆಗಿತ್ತ  ಸಾಕಷ್ಟು ಗ್ರೂಕೋಸ‌,ಬ್ಲಡ್ ಎಲ್ಲ ಕೊಟ್ಟ ರೆಡಿಬಮಾಡಿ  ನಂತರ ಡಿಆಂಡ್ಸಿ‌ ಸಿ‌ಮಾಡಿದರು

ಅದೃಷ್ಟವಶಾತ್ ಅದರ ಮರುದಿನ ಪರೀಕ್ಷೆ ಇರಲಿಲ್ಲ ಸುದ್ದಿ ಸಿಕ್ಕಿ ಆರೈಕೆಗೆ ಗೆ ಅಮ್ಮ ಬಂದಿದ್ದರು


ಹಾಗಾಗಿ ಮೊದಲ ರ‌್ಯಾಂಕ್ ಪಡೆದಾಗ ಇವೆಲ್ಲವೂ ಕಣ್ಣ ಮುಂದೆ ಬಂದು ಅಳು ಉಕ್ಕಿ ಬಂದಿತ್ತು

ಬಡತನವೇ ದೊಡ್ಡ ಕಷ್ಡ ಜಗತ್ತಿಲ್ಲಿ.‌ಉೞಿದೆಲ್ಲದೆವೂ ನಂತರದ ಸಾಲಿಬಲ್ಲಿ ವಿಲ್ಲುತ್ತವೆ

Thursday 7 April 2022

ಕಾಶ್ಮೀರ ಫೈಲ್ಸ್ ಮಾತ್ರವಲ್ಲ ಶ್ರೀಲಂಕಾ ಕೂಡ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ .- ಡಾ.ಲಕ್ಷ್ಮೀ ಜಿ ಪ್ರಸಾದ್

 ಕಾಶ್ಮೀರ ಫೈಲ್ಸ್ ಮಾತ್ರವಲ್ಲ ಶ್ರೀಲಂಕಾ ಕೂಡ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ .- ಡಾ.ಲಕ್ಷ್ಮೀ ಜಿ ಪ್ರಸಾದ್.ಕನ್ನಡ ಉಪನ್ಯಾಸಕರು,ಸರ್ಕಾರಿ ಕಾಲೇಜು ಬ್ಯಾಟರಾಯನಪುರ,ಬೆಂಗಳೂರು 


ಒಂದು ಕೆಜಿ ಅಕ್ಕಿಗೆ 300₹ ಅದಕ್ಕೂ ದಿನಗಟ್ಟಲೆ ಬಿಸಿಲಿನಲ್ಖಿ ಕ್ಯೂನಿಲ್ಲಬೇಕು.ಅಗತ್ಯ ಔಷಧಿಗಳು ದುಡ್ಡು ಕೊಟ್ಟರೂ ಲಭ್ಯವಿಲ್ಲ ಹಾಗಾಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಿಲ್ಲಿಸಿದೆ.ಇನ್ನು ಸರ್ಕಾರಿ ಸಾರಿಗೆ ವ್ಯವಸ್ಥೆ ಇದ್ದೀತೇ ? ಅನೇಕರು ಈಗಾಗಲೇ ಆಹಾರ ಔಷಧ ಸಿಗದೆ ಸಾವನ್ನಪ್ಪಿದ್ದಾರೆ.ಇದು ದೂರದ ಚಂದ್ರ ಲೋಕದ ಅಥವಾ ಮಂಗಳನ ಕಥೆಯಲ್ಲ

ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದು ಈಗ ಸ್ವತಂತ್ರ ದೇಶವಾಗಿರುವ  ಶ್ರೀಲಂಕಾದ ಕಥೆ ಇದು

ದೇಶ ದಿವಾಳಿಯಂಚಿನಲ್ಲಿ ಬಂದು ನಿಂತಿದೆ

ರಾಜಕಾರಣಿಗಳ ದೂರ ದೃಷ್ಟಿ ಇಲ್ಲದ ಸ್ವಾರ್ಥ ಲಾಲಸೆಯ ನಿಷ್ಪ್ರಯೋಜಕ ಯೋಜನೆಗಳ  ದುಷ್ಪರಿಣಾಮ ಇದು.ಆದರೆ ರಾಜಕಾರಣಿಗಳು ದುಡ್ಡು ಮಾಡಿ ವಿದೇಶದಲ್ಲಿ ಆರಾಮಾಗಿರ್ತಾರೆ.ತಾವು ಓಟು ಹಾಕಿ ಗೆಲ್ಲಿಸಿ ಬಹು ಪರಾಕ್ ಹೇಳಿದ ಸಾಮಾನ್ಯ ಜನರು ಸಮಸ್ಯೆಗೆ ಸಿಲುಕಿದ್ದಾರೆ


ನಮ್ಮ ದೇಶಕ್ಕೂ ಇಂತಹ ದುಸ್ಥಿತಿ ಬರಬಾದೆಂದೇನೂ ಇಲ್ಲ.

ಅನಿಯಂತ್ರಿತ ಭ್ರಷ್ಟಾಚಾರ ದೇಶದ ದೊಡ್ಡ ಶತ್ರು

700 ಕೋಟಿ ಖರ್ಚು ಮಾಡಿ ಕಟ್ಟಿದ ಫ್ಲೈ ಓವರ್ ಹತ್ತು ವರ್ಷಗಳಲ್ಲಿ ಬಳಕೆಗೆ ಅನರ್ಹವಾಗಿದೆ.ಇಂತಹ 1000 ಪ್ಲೈ ಓವರ್ ದೇಶಾದ್ಯಂತ ಕಟ್ಟಿದ್ದು ವ್ಯರ್ಥವಾದರೆ  ಹಾಳಾದ ದುಡ್ಡು ಎಪ್ಪತ್ತು ಲಕ್ಷ ಕೋಟಿ.ಎಂದರೆ ಪ್ರತಿಯೊಬ್ಬ ಭಾರತೀಯನ 50,000₹ ನಷ್ಟ ಆಯಿತು.ಇದನ್ನು ವಸೂಲಿ ಮಾಡುವ ಸಣ್ಣ  ದಾರಿಯಾದರೂ  ಇದೆಯೇ? ಇದರ ಹೆಚ್ಚನ ಭಾಗ ರಾಜಕಾರಣಿಗಳ ಜೇಬಿಗೆ ಹೋಗಿ ವಿದೇಶೀ ಬ್ಯಾಂಕಿನಲ್ಲಿ ಸುರಕ್ಷಿತವಾಗಿರುತ್ತದೆ‌.ಇದು ಒಂದು ಸಣ್ಣ ಉದಾಹರಣೆ ಅಷ್ಟೇ..ಇಂತಃದ್ದು ದಿನ ನಿತ್ಯ ಎಷ್ಟು ನಡೆಯುವುದಿಲ್ಲ

ವಾಜಪೇಯಿ ಕಾಲದಲ್ಲಿಯೇ ಚತುಷ್ಪಥ ರಸ್ತೆ ನಿರ್ಮಾಣದ ಅವ್ಯಹಾರದ ಬಗ್ಗೆ ವಾಜೊಏಯಿ ಅವರಿಗೆ ತಿಳಿಸಿದ ಸತ್ಯೇಂದ್ರ ದುಬೆ ಎಂಬ ಪ್ರಾಮಾಣಿಕ ಇಂಜನಿಯರ್ ಕೊಲೆಯಾಗಿದ್ದಾನೆ.ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದ ಸಾವಿರಾರು ಜನರು ಕೊಲೆಯಾಗಿದ್ದಾರೆ.

ಜನರ್ಯಾರೂ ಅದರ ಬಗ್ಗೆ ಯೋಚಿಸುವುದಿಲ್ಲ


ಪಕ್ಕದ ಶ್ರೀಲಂಕಾದಲ್ಲಿ ಆದಂತೆ ನಮ್ಮಲ್ಲೂ ಆಗಲು ಎಷ್ಟು ಹೊತ್ತು ಬೇಕು? ದೇಶದ ಖಚಾನೆ ಖಾಲಿಯಾಗಿ ದಿವಾಳಿಯಂಚಿಗೆ ಬಂದು ನಿಲ್ಲುವ ಕಿನೆಯ ಕ್ಷಣದವರೆಗೂ ಜನರಿಗೆ ಗೊತ್ತೇ ಆಗುವುದಿಲ್ಲ


ನಾವೇ ಆಯ್ಕೆ ಮಾಡಿದ ಎಂಎಲ್ ಎ ಎಂಪಿ ಮಂತ್ರಿಗಳು ಭ್ರಷ್ಟಾಚಾರ ಮಾಡಿದರೆ,ಭ್ರಷ್ಟಾಚಾರವನ್ನು ತಡೆಯದೇ ಇದ್ದರೆ  ನಾವೇ ಪ್ರಶ್ನಿಸಬೇಕಿದೆ.ಇಲ್ಲವಾದರೆ ನಮಗೂ ಶ್ರೀಲಂಕಾ ದ ದುರ್ಗತಿಯೇ ಬರಬಹುದು


ಕಳೆದ ವಾರ ಸ್ಟಾಪ್ ರೂಮಿನಲ್ಲಿ ನಾವು ಈ ಬಗ್ಗೆ ಮಾತನಾಡಿಕೊಂಡಿದ್ದೆವು.ದೇಶದಲ್ಲಿ  ಇದೇ ರೀತಿ ಭ್ರಷ್ಟಾಚಾರ ನಿರಂತರವಾಗಿ ತಡೆಯಿಲ್ಲದೆ ನಡೆದರೆ ಉಚಿತ ಕೊಡುಗೆಗಳನ್ನು ನೀಡುತ್ತಾ ಹೋದರೆ ,ರಾಜಕೀಯ ಲಾಭಕ್ಕಾಗಿ ವಿದೇಶದಲ್ಲಿ ಸತ್ತವರಿಗೂ,ಕೊಲೆಯಾದವರಿಗೂ  ವೀರ ಯೋಧರಿಗೆ ನೀಡುವಂತೆ ಇಪ್ಪತ್ತು ಮೂವತ್ತು ಲಕ್ಷ ರುಪಾಯಿ ದುಡ್ಡು ಹಂಚುತ್ತಾ ಹೋದರೆ ಒಂದಿನ ದಿವಾಳಿಯಾಗುತ್ತದೆ.ಚೆನ್ನಾಗಿ ಬದುಕಿದ ಜನರು ಬಿಕ್ಷುಕರಂತೆ ಅನ್ನ ನೀರಿಲ್ಲದೆ ಸಾಯಬೇಕಾಗುತ್ತದೆ.ನಮ್ಮ‌ಕಾಲದಲ್ಲಿ ಇದು ಆಗದೇ ಇದ್ದರೆ ನಮ್ಮ‌ಪುಣ್ಯ .ಒಂದೊಮ್ಮೆ ದಿವಾಳಿಯಾದರೆ ಕಷ್ಟಕ್ಕೆ ಸಿಲುಕುವುದು ಜನ ಸಾಮಾನ್ಯರೇ ಹೊರತು ರಾಜಕಾರಣಿಗಳಾಗಲೀ ಶ್ರೀಮಂಥರಾಗಲೀ ಅಲ್ಲ.

ಅಂದ ಹಾಗೆ ಸರ್ಕಾರದ ವಿರುದ್ಧ ಸರ್ಕಾರಿ ಉದ್ಯೋಗಿಗಳು ಏನನ್ನೂ ಬರೆಯಬಾರದಂತೆ..ನಾನು ಬರೆದದ್ದು ಸರ್ಕಾರದ ವಿರುದ್ದವಲ್ಲ.ಭ್ರಷ್ಟಾಚಾರ ಮುಂದುವರಿದರೆ ಏನಾಗಬಹುದೆಂದು ಮಾತ್ರ ಬರೆದಿರುವೆ.

ಯಾವುದೇ ಭ್ರಷ್ಟಾಚಾರವನ್ನು ಅನ್ಯಾಯವನ್ನು ಕೇಳುವವರೇ ಇಲ್ಲ.ಈ ಬಗ್ಗೆ ಹೇಳೋಣವೆಂದು ಯಾರಾದರೊಬ್ಬ ಎಂಎಲ್ ಎ, ಎಂಪಿ ,ಮಂತ್ರಿಗಳಿಗೆ ಫೋನ್ ಮಾಡಿ ನೋಡಿ  ಒಬ್ಬರೂ ಎತ್ತುವುದಿಲ್ಲ.ಅವರ ಪರ್ಸನಲ್ ಸೆಕ್ರೆಟರಿಗಳಿಗೆ ಕರೆ ಮಾಡಿ ನೋಡಿ..ನಮಗ್ಯಾಕೆ ಹೇಳ್ತೀರಿ ? ಸಚಿವರಿಗೆ ಹೇಳಿ ಎನ್ನುತ್ತಾರೆ.ಈಗಲೇ ಇಂತಹ ದುರವಸ್ಥೆ ..ಮುಂದೆ ಹೇಗಾಗಬಹುದು ?

ನಾವಿನ್ನೂ ಭಾವನಾತ್ಮಕ ವಿಚಾರಗಳಲ್ಲಿಯೇ ಇದ್ದೇವೆ.ವಾಸ್ತವದತ್ತ ಕಣ್ಣು ತೆರೆದು ನೋಡುತ್ತಿಲ್ಲ


ನಮ್ಮ ದೇಶದ ಬಗ್ಗೆ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ‌.ನಮ್ಮದು ಬಹಳ ದೊಡ್ಡ ದೇಶ,ಬಹಳ ಸಂಪದ್ಭರಿತವಾದದ್ದು.ಇದು ದಿವಾಳಿಯಾಗಲಾರದು ಎಂದು.


 ರಾಮಾಯಣದ ಕಾಲದಲ್ಲಿಯೇ ಶ್ರೀಲಂಕಾ ಬಹಳ ಸಂಪದ್ಭರಿತವಾದ ದೇಶ ಸರ್ ,ರಾಮ ರಾವಣರ ಯುದ್ಧದ ನಂತರ ವಿಭೀಷಣನಿಗೆ ಪಟ್ಟಾಭಿಷೇಕವಾಗುತ್ತದೆ ನಂತರ ರಾಮ ಅಯೋಧ್ಯೆಗೆ ತೆರಳಲು ಸಿದ್ದನಾದಾಗ ವಿಭೀಷಣ ಇಲ್ಲಿ ಕೆಲವು ದಿನ ಇದ್ದು ಆತಿಥ್ಯವನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ತಾನೆ.ಆಗ ಲಕ್ಷ್ಮಣ ಕೂಡ ಈ ಲಂಕೆ ಸ್ವರ್ಣಮಯವಾಗಿದೆ ಇದನ್ನೆಲ್ಲ ನೋಡಿ ಮತ್ತೆ ಹೋಗೋಣ ಎಂಬ ಸಲಹೆ ಕೊಡ್ತಾನೆ

ಆಗ ರಾಮ

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ

(ಎಲೈ ಲಕ್ಷ್ಮಣನೇ  ಈ ಲಂಕೆಯು ಸುವರ್ಣಮಯವಾಗಿದ್ದರೂ ನನಗೆ ರುಚಿಸುವುದಿಲ್ಲ‌ ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ಹೇಳ್ತಾನೆ ಅಂದರೆ ಲಂಕೆ ಪ್ರಾಚೀನ ಕಾಲದಿಂದಲೂ ಸಂಪದ್ಭರಿತ ದೇಶವಾಗಿತ್ತು.ಭ್ರಷ್ಟ ರಾಜಕಾರಣಿಗಳು ಕೆಲವೇ ವರ್ಷಗಳಲ್ಲಿ ಬರಿದು ಮಾಡಿದ್ದಾರೆ.ಇದೇ ರೀತಿ ಉಚಿತ ಯೋಜನೆಗಳು ಮತ್ತು ಭ್ರಷ್ಟಾಚಾರ ಮುಂದುವರಿದರೆ ನಮ್ಮ ದೇಶವೂ ದಿವಾಳಿಯ ಅಂಚಿನಲ್ಲಿ ಬಂದು ನಿಲ್ಲಲು ಹೆಚ್ಚು ದಿನಗಳು ಬೇಕಾಗಿಲ್ಲ .ಭ್ರಷ್ಟರಿಗೆ ಸಂಪತ್ತನ್ನು ಖಾಲಿ ಮಾಡಲು ಎಷ್ಟು ಸಮಯ ಬೇಕು? ಕಡಿವಾಣ ಬೀಳದೇ ಇದ್ದರೆ..

ನಮ್ಮ ದೇಶ ಮೊಗೆದಷ್ಟೂ ಹೆಚ್ಚಾಗಲು ಅಕ್ಷಯ ಪಾತ್ರವಲ್ಲ.ಉಚಿತ ಕೊಡುಗೆಗಳು ಮತ್ತು ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ನಮಗೂ ಶ್ರೀಲಂಕಾದ ದುಸ್ಥಿತಿ  ಬರಲು ಹೆಚ್ಚು ಸಮಯ ಬೇಡ‌‌..ಹಾಗಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಕಲಿಯಬೇಕಿದೆ

ಡಾ.ಲಕ್ಷ್ಮೀ ಜಿ ಪ್ರಸಾದ್ 

ಕನ್ನಡ ಉಪನ್ಯಾಸಕರು

ಬೆಂಗಳೂರು 


Monday 4 April 2022

ದೊಡ್ಡವರ ದಾರಿ 94 : ಅಪಾರ ಕರ್ತವ್ಯ ಪ್ರಜ್ಞೆಯ ಜಿಲ್ಲಾ ಉಪನಿರ್ದೇಶಕ ಬಿಎಸ್ ರಾಜಕುಮಾರ್

 

ದೊಡ್ಡವರ ದಾರಿ94: ಅಪಾರ ಕರ್ತವ್ಯ ಪ್ರಜ್ಞೆಯ ಜಿಲ್ಲಾ ಉಪನಿರ್ದೇಶಕ ಬಿ ಎಸ್  ರಾಜಕುಮಾರ

ಕೆಲವು ದಿನಗಳ ಹಿಂದೆ ನಾವು ಸ್ಟಾಫ್ ರೂಮಿನಲ್ಲಿ ಮಾತಾಡ್ತಾ ಇರುವಾಗ ನನ್ನ ಬರವಣಿಗೆಯ ವಿಚಾರ ಬಂತು.ಇತ್ತೀಚೆಗೆ ಏನು ಬರೆದಿರಿ ಎಂದು ವಿಚಾರಿಸಿದರು.ನಾನು ಇತ್ತೀಚೆಗೆ ಬಹಳ ಸೋಮಾರಿಯಾಗಿದ್ದೇನೆ.ದೊಡ್ಡವರ ದಾರಿ ಸರಣಿಯಲ್ಲಿ ಅನೇಕರ ಬಗ್ಗೆ ಬರೆಯಬೇಕೆಂದು ಗುರುತು ಮಾಡಿಟ್ಟಿರುವೆ.ಬರೆಯಲು ಸಮಯ ಮೂಡ್ ಎರಡೂ  ಇಲ್ಲ‌ ಎಂದೆ.ಬರೆಯಬೇಕೆನಿಸಿದ್ದನ್ನು ಆಗಲೇ ಬರೆದುಬಿಡಬೇಕು ಎಂದು ಸಹೋದ್ಯೋಗಿ ಮಂಜುಳಾ ಹೇಳಿದರು.ಹೌದು‌‌..ನಾನು ನಮ್ಮ ಶೈಲಜಾ ಮೇಡಂ( ನಮ್ಮ ಕಾಲೇಜಿನಲ್ಲಿ ಪ್ರಾಂಶುಒಅಲರಾಗಿದ್ದು ಈಗ ಜಿಲ್ಲಾ ಉಪನಿರ್ದೇಶಕರಾಗಿ ಪದೋನ್ನತಿ ಪಡೆದಿರುವ ಪ್ರತಿಭಾನ್ವಿತೆ) ಹಾಗೂ ಪ್ರಸ್ತುತ ನಮ್ಮ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ರಾಜಕುಮಾರ ಸರ್ ಅವರ ವಿಶೇಷ ಗುಣಗಳನ್ನು ಗುರುರಿಸಿರುವೆ.ಅವರ ಬಗ್ಗೆ ಬರೆಯಬೇಕೆಂದಿರುವೆ ಎಂದೆ.ಹಾಗಾದರೆ ಬೇಗ ಬರೆಯಿರಿ ತಡವೇಕೆ ಎಂದು ಸಹೋದ್ಯೋಗಿ‌ಮಿತ್ರರು ಕೇಳಿದರು.ಅವರಿಬ್ಬರು ಈಗಲೂ ಸರ್ವಿಸ್ ನಲ್ಲಿ ಇದ್ದಾರೆ.ನನ್ನ‌ ಮೇಲಧಿಕಾರಿಗಳಾಗಿದ್ದಾರೆ.ನಾನು ಈಗ ಬರೆದರೆ ಬಕೆಟ್ ಹಿಡಿಯುದು ಎಂದು ನನ್ನನ್ನು ಜನರು ಆಡಿಕೊಂಡರೆ ಎಂಬ ಅಳುಕಿನ ಬಗ್ಗೆ ತಿಳಿಸಿದೆ.

ನೀವು ಬರೆಯದಿದ್ದರೆ ಆಡಿಕೊಳ್ಳುವುದಿಲ್ವಾ? ಅವರಿವರ ಮಾತಿನ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀರಿ ? ಬರೆಯಬೇಕೆನಿಸಿದ್ದನ್ನು ಬರೆದುಬಿಡಿ ಎಂದು ಮಂಜುಳಾ ಹೇಳಿದರು.ಹೌದಲ್ವಾ ಎನಿಸಿತು.ಆದರೆ ನಾನು ನಂತರ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಪ್ರಕಟಣೆಯಲ್ಲಿ ಮುಳುಗಿ ದೊಡ್ಡವರ ದಾರಿ ಸರಣಿಯನ್ನು ಬರೆಯುವುದನ್ನು ಮುಂದೆ ಹಾಕಿದ್ದೆ

ಈವತ್ತು ಬರೆಯಬೇಕೆನಿಸಿತು.ರಾಜಕುಮಾರ ಸರ್ ಸುಮಾರು‌ ಎರಡು ವರ್ಷಗಳ ಮೊದಲು ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆಗೆ ಡಿಡಿಪಿಯು ಆಗಿ ಭಡ್ತಿ ಪಡೆದು ಬಂದಿದ್ದರು.ಅನೇಕರು ಇವರು ಬಹಳ ಸಹೃದಯಿಗಳು ಉದಾರಿಗಳು ಎಂದು ಮಾತನಾಡುದನ್ನು ಕೇಳಿಸಿಕೊಂಡಿದ್ದೆ.ನನಗೆ ಸ್ವಲ್ಪ ಕೀಳರಿಮೆ ಇದೆ ಕಾಣಬೇಕು ಹಾಗಾಗಿ ಸಾಮಾನ್ಯವಾಗಿ ಮೇಲಧಿಕಾರಿಗಳ ಜೊತೆ ಮುಖಾಮುಖಿಯಾಗಿ‌ಮಾತನಾಡುದನ್ನು ತಪ್ಪಿಸಿಕೊಳ್ತೇನೆ.ನನ್ನ ಕಾರುಬಾರು ಏನಿದ್ದರೂ ಬರವಣಿಗೆಯಲ್ಲಿ ಮಾತ್ರ.ನೇರವಾಗಿ ಮಾತನಾಡುದು ಬಹಳ ಕಡಿಮೆ ನಾನು.ಏನೋ ಸಂಕೋಚ.ನಾನು ಬ್ಯಾಟರಾಯನೊಉರ ಕಾಲೇಜಿಗೆ ವರ್ಗಾವಣೆಯಾದ ವರ್ಷ ಕಾಲೇಜು ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಡಿಡಿಪಿಯು ಆಗಿದ್ದ ರಾಜಕುಮಾರ್ ಸರ್ ಬಂದಿದ್ದರು

ನಾನು ಬರೆದು ನಿರ್ದೇಶಿಸಿಸಿದ ನೀರಕ್ಕನ ಮನೆ ಕಣಿವೆ ನಾಟಕವನ್ನು ನಮ್ಮ‌ಮಕ್ಕಳು ವೇದಿಕೆಯಲ್ಲಿ ಪ್ರದರ್ಶಿಸಿದ್ದರು.ಮಕ್ಕಳಿಗೆ ಬಾಯಿ ಪಾಠ ಬಾರದಿದ್ದರೆ ವೆದುಕೆ ಏರಿದಾಗ ಭಯವಾಗಿ ಮಾತು ಹೊರಳದಿದ್ದರೆ ಅಥವಾ ಇನ್ನೇನಾದರೂ ಅವಾಂತರ ಆದರೆ ಎಂಬ ಆತಂಕದಲ್ಲಿ ವೇದಿಕೆಯ ಹಿಂಭಾಗದಲ್ಕಿ ನಿಂತು ನಾನು ನೋಡುತ್ತಿದ್ದೆ.ನಾಟಕವನ್ನು ಅತಿಥಿಗಳಾಗಿ ಬಂದಿದ್ದ ರಾಜಕುಮಾರ್ ಸರ್ ನೋಡಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ.ನಾಟಕದ ನಂತರ ಅದರ ಪರಿಕರಗಳನ್ನು‌ಹಿಡಿದು ಕಾಲೇಜಿನ ಸಾಮಗ್ರಿಗಳನ್ನು ಹಿಂದೆ ಕಪಾಟಿನಲ್ಲಿ ಇಡಲು ನಾನು ಪ್ರಿನ್ಸಿಪಾಲ್ ಕೊಠಡಿಗೆ ಬಂದೆ.ಆಗ ರಾಜಕುಮಾರ್ ಸರ್ ನಿಮ್ಮಂಥಹ ಉಪನ್ಯಾಸಕರು ನಮ್ಮ‌ಇಲಾಖೆಗೆ ಒಂದು ಕೊಡುಗೆ ಎಂದು‌ಮುಕ್ತವಾಗಿ ಪ್ರಶಂಸಿಸಿದರು.ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವುದು ಸಣ್ಣ ಮಾತಲ್ಲ.ಕೊಂಕು ತೆಗೆಯುವವರೇ ಹೆಚ್ಚು.ಅಂತಹವರ ನಡುವೆ ರಾಜಕುಮಾರ್ ಸರ್ ನನಗೆ ವಿಶಿಷ್ಟ ಎನಿಸಿದರು..ದಿನಗಳು ಕಳೆದವು.ನಮ್ಮ ಒರ್ವ ಬಡ ವಿದ್ಯಾರ್ಥಿನಿ92% ಅಂಕ ತೆಗೆದ ಸಂದರ್ಭದಲಿ ಆಗ ಸಚಿವರಾಗಿದ್ದ ಸುರೇಶ್ ಅವರು ಬಂದಾಗ ರಾಜಕುಮಾರ್ ಸರ್ ಬಂದು ತಮ್ಮಿಂದಾದ ಸಹಾಯವನ್ನು ಮಾಡಿದ್ದರು

ಇದಾಗಿ ನಂತರದ ಶೈಕ್ಷಣಿಕ ವರ್ಷದ ಆರಂಭದ ದಿನ ರಾಜಕುಮಾರ್ ಸರ್ ಅನಿರೀಕ್ಷಿತವಾಗಿ ನಮ್ಮ‌ಕಾಲೇಜಿಗೆ ಭೇಟಿ ನೀಡಿದರು.ಭೇಟಿ ನಿಡಿದಾಗ ಯಾವುದೇ ಕೊಂಕು ತೆಗೆಯದೆ ಕೊರೋನಾ ಹರಡದಂತೆ ನಾವು‌ಮಾಡಿದ್ದ ಏರ್ಪಾಟನ್ನು ನೋಡಿ ಮೆಚ್ಚಿದರು

ನಂತರ ಒಂದು ಮೀಟಿಂಗ್ ಮಾಡಿದರು.ಇಲ್ಲಿ ಅವರ ವ್ಯಕ್ತಿತ್ವ ಅವರ ಮಾತು ನನಗೆ ಬಹಳ ಇಷ್ಟ ಆಯಿತು

ಅವರು ಮಾತನಾಡುತ್ತಾ ನಾವು ಸೇವೆಗೆ ಸೇರುವಾಗ ಯಾವ ಉತ್ಸಾಹವನ್ನು ಮನೋಭಾವನೆಯನ್ನು ಹೊಂದಿರುತ್ತೇವೆಯೋ ಅದೇ ಭಾವವನ್ನು ನಿವೃತ್ತಿ ಹೊಂದುವ ತನಕ ಇರಿಸಿಕೊಳ್ಳಬೇಕು.ಸೇರುವಾಗ ನಮಗೊಂದು‌ಕೆಲಸ ಸಿಕ್ಕರೆ ಸಾಕು.ಎಲ್ಲಾದರೂ ಅಡ್ಡಿ ಇಲ್ಲ‌ಎಂಬ ಭಾವ ಇರ್ತದೆ ನಂತರ ಅದಿಲ್ಲ ಇದಿಲ್ಲ ಎಂದೆನಿಸಲು ಶುರುವಾಗುತ್ತದೆ ಆಗ ನಾವು ವಿಚಲಿತರಾಗಬಾರದು ದೃಢತೆಯನ್ನು ಹೊಂದಿ ಸೇರುವಾಗಿನ ಉತ್ಸಾಹವನ್ನೇ ಉಳಿಸಿಕೊಳ್ಳಬೇಕು " ಎಂದರು

ಹೌದಲ್ಲ ಎಂದೆನಿಸಿತು ನಮಗೆಲ್ಲರಿಗೂ.ನಾವು ಕೆಲಸಕ್ಕೆ ಸೇರುವಾಗ ಚಂದ್ರಲೋಕದಲ್ಲಿ ಸಿಕ್ಕರೂ ಸೇರ್ತೇವೆ ಎಂದುಕೊಳ್ತೇವೆಡ.ನಂತರ ನಮಗೆ ಸಿಕ್ಕ ಜಾಗ ದೂರ ಆಯಿತು ಸೌಲಭ್ಯ ಇಲ್ಲ ಎಂದೆನಿಸಲು ಶುರುವಾಗುತ್ತದೆ.

ನನಗೆ ಬ್ಯಾಟರಾಯನಪುರ ಕಾಲೇಜಿಗೆ ಬಂದಾಗ ನಮಗೆ ಬೇಕಷ್ಟು ಜಾಗ ಇಲ್ಲ ಗ್ರಂಥಾಲಯ ಇಲ್ಲ ಎಂದೆನಿಸಿತ್ತು.ರಾಜಕುಮಾರ್ ಸರ್ ಮಾತು ಕೇಳಿದ ದಿನವೇ ನಿರ್ಧರಿಸಿದ್ದೆ.ಇನ್ನು ಇಲ್ಲದಿರುವದರ ಕಡೆ ನೋಡುವುದನ್ನು ಬಿಟ್ಟು ಇರುವ ಕಡೆಗೆ ನೊಡಬೇಕು ಎಂದು.ಹಾಗಾಗಿ ಲೇಖಕರಲ್ಲಿ ಕೇಳಿ ಅವರು ಓದಿ ಆದ ಪುಸ್ತಕಗಳನ್ನು ಸಂಗ್ರಹಿಸಿದೆ.ನಮ್ಮ‌ಮನೆಯಿಂದ ಎರಡು ಮೂರು ದೊಡ್ಡ ಬ್ಯಾಗ್ ತಗೊಂಡು ಹೋಗಿ ತುಂಬಿಸಿ ನಾನು ಕುಳಿತುಕೊಳ್ಳವಲ್ಲಿಯೇ ಕಾಲಿನ ಬಳಿ ಜಾಗ ಮಾಡಿ ಇರಿಸಿಕೊಂಡೆ.ಪುಸ್ತಕಕ್ಕೆ ನಂಬರ್ ಹಾಕಿ ಮಕ್ಕಳಿಗೆ ಮೊಬೈಲ್ ಲೈಬ್ರರಿ ಮಾದರಿಯಲ್ಲಿ ಪುಸ್ತಕಗಳನ್ನು ಒದಗಿಸಿದೆ.ಹದಿನೈದು ದಿನಗಳ ನಂತರ ಹಿಂದೆ ಪಡೆದು ಬೇರೆ ಪುಸ್ತಕಗಳನ್ನು ಕೊಟ್ಟೆ.ಅದೇ ರೀತಿ ಇರುವ ಸೌಲಭ್ಯವನ್ನು ಬಳಸಿ‌ಮಕ್ಕಳಿಗೆ ನನ್ನ ಕೈಯಿಂದ ಸಾಧ್ಯವಾದುದನ್ನು ಮಾಡಿದೆ.ಮಕ್ಕಳಿಗೆ ಓದಲು ಸಹಾಯ ಧನ ಎಂದು ನಿಡಿದರೆ ಅವರಲ್ಲಿ ಕೀಳರಿಮೆ ಕಾಡುತ್ತದೆ ಅದಕ್ಕಾಗಿ ಅಂಕ ಗಳಿಸಿ ಬಹುಮಾನ ಪಡೆಯಿರಿ ಎಂದು ಮೊದಲೇ ಹೇಳಿದೆ.ಕನ್ನಡದಲ್ಲಿ  85 ಕ್ಕಿಂತ ಹೆಚ್ಚು ಅಂಕ ತೆಗೆದ ಎಲ್ಲ‌ಮಕ್ಕಳಿಗೂ ನಗದು ಬಹುಮಾನ ನೀಡಿದೆ.ಹೀಗೆ ಇರುವುದರಲ್ಲಿ ಎಲ್ಲವನ್ನೂ ಮಾಡಬೇಕೆಂಬುದನ್ನು ರಾಜಕುಮಾರ್ ಸರ್ ಮಾತುಗಳ ಮೂಲಕ ಕಂಡುಕೊಂಡೆ ನಾನು.ಇನ್ನೊಂದು ಸಂಕಷ್ಟದ ಕಾಲದಲ್ಲಿ ಕೂಡ ಅತ್ಯಂತ ನಿಷ್ಪಾಕ್ಷಿಕವಾಗಿ ನಡೆದುಕೊಂಡು ನನಗೆ ನ್ಯಾಯ ಒದಗಿಸಿದ್ದಾರೆ ಈ ಬಗ್ಗೆ ಮುಂದೆ ನನ್ನ ಆತ್ಮ ಕಥೆಯಲ್ಲಿ ಬರೆಯುವೆ .ರಾಜಕುಮಾರ್ ಸರ್ ಬಗ್ಗೆ ಈ ಹಿಂದೆ ಒಮ್ಮೆ ಬರೆದು ಬ್ಲಾಗ್ ಗೆ ಹಾಕಿದ್ದೆ.ಅದು ಏನೋ ಎರರ್ ಆಗಿ ಡಿಕೀಟ್ ಆಗಿತ್ತು.ಒಮ್ಮೆ ಬರೆದಂತೆ ಇನ್ನೊಮ್ಮೆ ಬರೆಯಲು ಆಗುವುದಿಲ್ಲ ಆದರೂ ನನಗೆ ತಿಳಿದಂತೆ ಅವರ ಸಹೃದಯತೆ ,ಕರ್ತವ್ಯದ ಬಗ್ಗೆ ಇರುವ ಒಲುಮೆ ಯ ಬಗ್ಗೆ ಬರೆದಿರುವೆ