Sunday 10 April 2022

ನನಗೂ ಆತ್ಮ ವಿದೆ ಅದಕ್ಕೂ ಕಥೆ ಇದು ..ಚೊಚ್ಚಲ ಗರ್ಭಪಾತವಾದಾಗ ನೋವನ್ನು ಅವಡು ಗಚ್ಚಿಸೈರಿಸಿಕೊಂಡು ಬರೆದೆ

 ನನಗೂ ಆತ್ಮ ವಿದೆ  ಅದಕ್ಕೂ ಕಥೆ ಇದು ..ಚೊಚ್ಚಲ ಗರ್ಭಪಾತವಾದಾಗ ನೋವನ್ನು ಅವಡು ಗಚ್ಚಿಸೈರಿಸಿಕೊಂಡು  ಬರೆದೆ 

ನನಗೂ ಆತ್ಮ ವಿದೆ  ಅದಕ್ಕೂ ಕಥೆ ಇದೆ.


ಗೆದ್ದಾಗ ಬಿಕ್ಕಿ ಬಿಕ್ಕಿ ಅಳುವವರನ್ನು ನೋಡಿದ್ದೀರಾ ? ನಾನೂ ಅತ್ತಿದ್ದೆ. ಎಂ.ಎ ಅಂತಿಮ‌ ಪರೀಕ್ಷೆಗೆ ಎರಡು ತಿಂಗಳು‌‌ ಇತ್ತು. ಈ ನಡುವೆ ವಿವಾಹಾ ನಂತರ ಓದಿದ ನಮ್ಮ‌ ಮಡಿಲಿನಲ್ಲಿ‌ ಮಗು  ಮೊಳೆಯುವ ಲಕ್ಷಣ ಕಾಣಿಸಿತು‌.ಆಗ ನಾವು ಮಂಗಳೂರಿನಲ್ಲಿ ಮನೆ ಮಾಡಿದ್ದೆವು. ಎರಡು ತಿಂಗಳು ಬಸ್ಸಿನಲ್ಲಿ ಓಡಾಡಬಾರದು ಎಂದು ವೈದ್ಯರು ಹೇಳಿದ್ದರು.


ತರಗತಿಗೆ ಹಾಜರಾಗಿದ್ದರೂ ತೊಂದರೆ ಇರಲಿಲ್ಲ. ಅದಾಗಲೇ ಸಾಕಷ್ಟು ಹಾಜರಿ ನನಗಿತ್ತು. ಪ್ರಿಪರೇಟರಿ ಪರೀಕ್ಷೆ ಬರೆಯುವುದು ಹೇಗೆ? ಎಂಬ ಚಿಂತೆ ಕಾಡಿತು.

ನಮ್ಮ ಗುರುಗಳಾದ ನಾರಾಯಣಭಟ್ಟರು ಮತ್ತ ಅವರ ಮಡದಿ ಜಯಕ್ಕ ಬಹಳ ಉದಾರಿಗಳು. ನಮಗೆ ದೂರದ ಸಂಬಂಧಿಗಳು ಕೂಡ. ಅವರಲ್ಲಿ ಕೇಳಿದೆ. ಪರೀಕ್ಷೆ ಇರುವಷ್ಟು ದಿನ ಅವರಲ್ಲಿ ಇರಲು ಸಂತೋಷದಿಂದ ಒಪ್ಪಿದರು. ಅಂತೂ ಸಮಸ್ಯೆ ಪರಿಹಾರ ಆಯಿತು. ಮನೆ ಮಗಳಂತೆ ನನ್ನನ್ನು ಬಹಳ‌ ಪ್ರೀತಿಯಿಂದ ನೋಡಿಕೊಂಡರು. ಅವರಿಬ್ಬರ ಸಹಾಯವನ್ನು ಎಂದಿಗೂ ಮರೆಯಲಾಗದು .

ಇದಾಗಿ ಎರಡು ತಿಂಗಳ ನಂತರ ಅಂತಿಮ ಪರೀಕ್ಷೆ ಇತ್ತು.

ವಿಪರೀತ ವಾಂತಿ, ಊಟ ಸೇರದ ಸಂಕಟದ ಸಮಸ್ಯೆ ಎಲ್ಲ ಚೊಚ್ಚಲ ಗರ್ಭಿಣಿಯರಂತೆ ನನಗು ಇತ್ತು‌. ಬೇಕಾದ ತಿಂಡಿ ತಂದುಕೊಡಲು ಪ್ರಸಾದ ಸದಾ ಸಿದ್ಧರಿದ್ದರು. ಬಡತನ ಇತ್ತು. ಆದರೆ  ಒಲವಿಗೆ ಕೊರತೆ ಇರಲಿಲ್ಲ. ಆದರೆ ಒಂದು ಹನಿ ನೀರು ಕೂಡ ನಿಲ್ಲುತ್ತಿರಲಿಲ್ಲ.


ಮಾರ್ನಿಂಗ್ ಸಿಕ್ನೆಸ್ ಬೆಳಗ್ಗೆ ಮಾತ್ರ ಇರುತ್ತದೆ ಎಂದುಕೊಂಡಿದ್ದೆ‌. ಇದು ಇಡೀ ದಿ‌ನ ಆರೇಳು ತಿಂಗಳ ಕಾಲ ಕಾಡುತ್ತದೆ ಎಂಬದು ಅನುಭವ ಆದಾಗಲೇ ಗೊತ್ತಾದದ್ದು. ದಿನ ನಿತ್ಯ ಕಾಲು ಸೆಳೆತ ಕೈ ಮೈ ನೋವು ವಾಂತಿ ಹಿಂಸೆ ನಿತ್ರಾಣ‌‌, ಕಣ್ಣು ಬಿಡಲಾಗದಷ್ಟು ಆಯಾಸ  ಸದಾ ನಿದ್ರೆ, ಕಣ್ಣೆಳೆತ ಜೊತೆಗೆ. ತಿನ್ನುವಹುಚ್ಚು.


ಅಂತಿಮ‌ಪರೀಕ್ಷೆ ಹಿಂದಿನದಿನ ಬೆಳಗಿನಿಂದಲೂ ತೀರಾ ಹಿಂಸೆ ಬೆನ್ನು ನೋವು ಆಗಾಗ ಟಾಯ್ಲೆಟಿಗೆ ಹೋಗಬೇಕು ಅನಿಸಿದು. ಹಿಂಸೆ, ಏನೇನೋ ಆಗುತ್ತಿತ್ತು. ಪರೀಕ್ಷೆಯ ಆತಂಕ ಇರಬಹುದು ಎಂದುಕೊಂಡೆ. ತಲೆ ಸುತ್ತು ಕಣ್ಣು ಕತ್ತಲು ಬರುತ್ತಿತ್ತು. ಕಾಲು ಬ್ಯಾಲನ್ಸ್ ಇರಲಿಲ್ಲ .


ಮುಖ‌,ಕೈ , ಕಾಲಲ್ಲಿ ನೀರು ತುಂಬಿತ್ತು. ನಾನು ಗರ್ಭಿಣಿಯರಿಗೆ ಇದು ಸಹಜ ಎಂದುಕೊಂಡೆ. 

ಮಧ್ಯಾಹ್ನವಾಗುವಾಗ ತೀವ್ರ ಹಿಂಡುವ ಹೊಟ್ಟೆ,ತೊಡೆ ಸಂಧಿಯಿಂದ ಶುರುವಾಗುವ ನೋವು ಬೆನ್ನಿನ ಹಿಂಭಾಗ ಕೈ, ಕಾಲು ಹರಡುತ್ತಿತ್ತು . ನೋವಿನೊಡನೆ ರಕ್ರ ಸ್ರಾವ ಶುರುವಾಯಿತು.

ಕೂಡಲೇ ಭಟ್ ನಿರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಷ್ಟ್ ಮಾಲತಿ ಭಟ್ ಬಳಿಗೆ ಹೋದೆ. ಅವರು ಸ್ಕಾನಿಂಗ್ ಗೆ ಕಳುಹಿಸಿದರು

ಕೊನೆಗೂ ನಮ್ಮ ಮೊದಲ‌ ಮಗು ಹೊಟ್ಟೆಯಲ್ಲಿಯೇ ಸತ್ತದ್ದು ಗೊತ್ತಾಯಿತು.

ಏನು ಹೇಳಲಿ ಆದಿನ ನನ್ನ ಸ್ಥಿತಿ? ನನ್ನನ್ನು ಮೊದಲ ಅಮ್ಮ‌ ಎಂದು ಕರೆಯಲಿದ್ದ ಮಗು ಕೈ ತಪ್ಪಿ ಹೋಯಿತಲ್ಲ‌.

ವೈದ್ಯರು 'ಈಗ ಜಾಗರೂಕತೆ ಮಾಡಿದರೆ  ಇನ್ನು ಹತ್ತು ಮಕ್ಕಳನ್ನು ಹೆರಬಹುದು. ಅತ್ತರೆ ಸತ್ತವರು ಬರುವುದಿಲ್ಲ.ಡಿಎಂಡ್ಸಿ ಮಾಡಬೇಕು ಇಲ್ಲವಾದರೆ ಮಗು ಅಲ್ಲಿಯೇ ಕೊಳೆತು ಇತರ ಭಾಗಕ್ಕೆ ಸೋಂಕು ಹರಡಬಹುದು‌ ಮುಂದೆ ಬಂಜೆತನ ಬರಬಹುದು, ಜೀವಾಪಾಯ ಉಂಟಾಗಬಹುದು ಎಂದರು.ಅಷ್ಟಾಗುವಾಗ ರಾತ್ರಿ ಹನ್ನೊಂದಾಗಿತ್ತು.

ಡಿಎಂಡ್ಸಿ ಮಾಡಿದರೆ ನಾಳೆ ಪರೀಕ್ಷೆ ಬರೆಯಲು ಸಾಧ್ಯವಾ ಎಂದು ಕೇಳಿದೆ. ಸಾಧ್ಯವಿಲ್ಲ.ಲೋಕಲ್ ಅನಸ್ತೀಶಿಯ ಕೊಡ್ತೇವೆ ನಿದ್ರೆಯ ಮಂಪರು ಇರ್ತದೆ.ಮುಂದಿನಬಾರಿ ಪರೀಕ್ಷೆ ಬರೆ ಸರ್ಟಿಫಿಕೇಡ್ ಕೊಡ್ಡೇನೆಎಂದು. ಅಯ್ಯೋ ನನ್ನ ರ‌್ಯಾಂಕನ ಕನಸು. ಮನೆ ಮಂದಿಯನ್ನು ಸಮಾಜವನ್ನು ಎದುರು ಹಾಕಿಕೊಂಡು ಏನೋ ಸಾಧನೆ ಮಾಡ್ತೇವೆ ಎಂದು ಬಂದದ್ದು ಎಲ್ಲ‌ ಒಮ್ಮೆಗೆ ಉಕ್ಕಿ ಬಂದು ಡಾಬಾರನೆ ನಿಂತಲ್ಲಿಂದ ಬಿದ್ದೆ. ಅಷ್ಟೇ ಗೊತ್ರು ನನಗೆ ನಾನು ಎಚ್ಚರಾಗುವಾಗ ಐಸಿಯು ಬೆಡ್ ನಲ್ಲಿದ್ದೆ. ಒತ್ತಡಕ್ಕೆ ಬಿಪಿ ಹೆಚ್ಚಾಗುತ್ತಿತ್ತು ಅಂತೆ.ಅದಕ್ಕೆ ತಲೆ ಸುತ್ತಿ ಬಿದ್ದೆ ಅಂತೆ.

ಅಳು ಗಿಳು ನಿಲ್ಲಿಸಿದ್ದೆ. ವಾಸ್ತವದ ಬಗ್ಗೆ ಯೋಚಿಸಿದೆ.

ನಾಳೆ ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ ವ್ಯರ್ಥ ಆಗುತ್ತದೆ ಅಲ್ಲದೇ ರ‌್ಯಾಂಕಿನ ಕನಸು ಅಸಾಧ್ಯ.

ಹಾಗಾಗಿ ನಾಳೆ ಪರೀಕ್ಷೆ ಬರೆದು ಬಂದು ಡಿ ಎಂಡ್ ಸಿ‌ ಮಾಡಿಸಿದರೆ ಆಗುತ್ತದಾ ಎಂದು ಕೇಳಿದೆ

ಬಹಳ ಅಪಾಯ ಇದೆ‌. ಬಹಳ ಹೊಟ್ಟೆ ನೀವು ಇರುತ್ತದೆ. ತಾಳಿಕೊಂಡು ತೀವ್ರ ರಕ್ತಸ್ರಾವ ಸುರಿಸಿಕೊಂಡು ಪರೀಕ್ಷೆ ಬರೆಯಲು ನಿನಗಾಗುತ್ತಾ ಎಂದು ಬೈದ್ಯರು ,ಬುದ್ದಿ ಹೇಳಿದರು ಕೇಳಲಿಲ್ಲ.

ಎಷ್ಟೇ ಕಷ್ಟ ಆದರೂ ನಾನು ಪರೀಕ್ಷೆ ಬರೆಯುತ್ತೇನೆ ಎಂದೆ

ಅಂದಷ್ಟು ಸುಲಭವಿರಲಿಲ್ಲ. ವಿಪರೀತ ರಕ್ತ ಸ್ರಾವ ಹಿಂಡುವ ನೋವು ತಲೆ ಸುತ್ರು.. ಓಹ್..ನೀವು ನಂಬುತ್ತೀರೋ ಎಲ್ಲವೋ ಇಲ್ಲವೋ ಒಂದು ದಪ್ಪದ ಕಂಬಳಿಯನ್ನು ಏಳೆಂಟು ಮಡಿಕೆ ಮಾಡಿ ಕುಳಿತು ಕೊಳ್ಳುವ  ಬೆಂಚಿನ‌ಮೇಲೆ ಹಾಕಿದ್ದೆ. ಕೆಳಗೆ ಎರಡೆರಡು ಡೈಪರ್ ಬಳಸಿದ್ದೆ. ಇವೆಲ್ಲವೂ ರಕ್ತದಿಂದ ಒದ್ದೆಯಾಗಿದ್ದವು‌ ನನ್ನ ಉಟ್ಟ ಬಟ್ಟೆಯೂ ಪರೀಕ್ಷೆ ಮುಗಿಯುವಷ್ಟರಲ್ಲಿಲ್ಲಿ ರಕ್ತದಲ್ಲಿ ಒದ್ದೆಯಾಗಿ ಕೆಂಪಾಗಿತ್ತು.ಆಗ ಉಂಟಾದ ಸಂಕೋಚ ನಾಚಿಕೆಗಳಲ್ಲನ್ನು ಪದಗಳಲ್ಲಿ ವರ್ಣಿಸಲಾಗದು. ಅಳು ಉಕ್ಕಿ ಬಾಯಿಗೆ ಬರುತ್ತಿತ್ತು. ಆದರೆ ನಾನು ಅಳಲಿಲ್ಲ ನನ್ನದಲ್ಲದ ತಪ್ಪಿಗೆ ನಾನೇಕೆ ಅಳಲಿ? ಋತುಮತಿಯಾಗುವುದು ಮದುವೆ, ತಾಯ್ತನ ಅಪರೂಪಕ್ಕೆ ಒಮ್ಮೆ  ದುರದೃಷ್ಟದ ಗರ್ಭಪಾತ ಇದೆನ್ನಲ್ಲವನು ಎದುರಿಸಿ ಗೆದ್ದು ಬದುಕಬೇಕು. ಹೆಣ್ಣಾದ ಮೇಲೇ ಇದಕ್ಕೆಲ್ಲ ಅಳುಕಿದರೆ ಹೇಗೆ ಎಂದು ಗಟ್ಟಿ ಮನಸು ಮಾಡಿದ್ದೆ .ಮಾಡಿ ಗೆದ್ದಿದ್ದೆ ಕೂಡ  ಗರ್ಭ ಸ್ರಾವವಾಗಿ ನಮ್ಮಲ್ಲಿ ಇದ್ದುದೇ  ಒಂದು ಕಂಬಳಿ ಅದೂ ಹಾಳಾಯ್ತಲ್ಲವೆಂಬ ಸಣ್ಣ ಚಿಂತೆ ಕೂಡ ಕಾಡಿ ಬಿಟ್ಟಿತು. ಬರೆ.‌ತಮಾಷೆಯ‌ ಮಾತಲ್ಲ‌ ಮತ್ತೆ ಕಂಬಳಿ ತೆಗೆದುಕೊಳ್ಳ ಬೇಕಂದ್ರೇ ಮತ್ತಾರು ತಿಂಗಳು ದುಡ್ಡು ಹೊಂದಿಸಬೇಕಾಗಿತ್ತು. 

ನಾವಿಬ್ಬರು ಹಾಸಿ‌ ಮಲಗುತ್ತಿದ್ದ ನಮ್ಮಲ್ಲಿದ್ದ ಒಂದೇ ಒಂದು ಕಂಬಳಿ ಇದು.

ಪರೀಕ್ಷೆ ಹಾಲಿನಿಂದ  ಕಾರು ಮಾಡಿಕೊಂಡು ನೇರವಾಗಿ ಮಾಲತಿ ಆಸ್ಪತ್ರೆಗೆ ನಾನು ಪ್ರಸಾದ್ ಬಂದೆವು.

ಈ ನಡುವೆ ನಡು ರಾತ್ರಿ ಅಲ್ಲಿಂದ ಬಂದು ಬೆಳಗ್ಗೆ ಒಂಬತ್ತರಿಂದ ಹನ್ನೆರಡರ ತನಕ ಪರೀಕ್ಷೆ ಬರೆದು ನೇರವಾಗಿ ಆಸ್ಪತ್ರೆಗೆ ಹೋಗಿದ್ದೆವು. ಉಣ್ಣಲು ತಿನ್ನಲು ಏನಾದರೂ ಸೇರಿದರೆ ತಾನೆ ಮಡಿಲ ಮಗುವನ್ನು ಕಳೆದುಕೊಂಡ ನಮಗೆ ಏನೂ ಬೇಡವಾಗಿತ್ತು...ತಿನ್ನಲು ಸೇರಿದರೆ ತಾನೆ..? ಒಂದು ಹನಿ ನೀರನ್ನೂ ಕುಡಿದಿರಲಿಲ್ಲ. ಗರ್ಭಪಾತವಾದಲ್ಲಿಂದ ಒಂದು ತೊಟ್ಟು ನೀರು ಕೊಡಿದಿರಿರಲಿಲ್ಲ. ಅಂತೂ ಹೇಗೋ ಪರೀಕ್ಷೆ ಬರೆದು  ಆಸ್ಪತ್ರೆಗೆ ಹೋದೆ. ಆಸ್ಪತ್ರೆಗೆ ಕಾಲಿಡುವಷ್ಟರರಲ್ಲಿ ಕಣ್ಣು ಕತ್ತಲು ಬಂದು ಎಚ್ಚರ ತಪ್ಪಿ ಬಿದ್ದಿದ್ದೆ. ಎಚ್ಚರಾಗುವಾಗ ಆಸ್ಪತ್ರೆಯ  ಐಸಿಯು ವಿನಲ್ಲಿದ್ದೆ. ಸುತ್ತ ಮುತ್ತ ಹಸಿರು ಗೌನ್ ಧರಿಸಿದ ವೈದ್ಯರು ಕಣ್ಣು ತೆರೆಯಿರಿ ಎಚ್ಚರ ಬಂತಾ? ನಿಮ್ಮ ಹೆಸರೇನು? ಇತ್ಯಾದಿ ಕೇಳಿದ್ದರು‌.  ಏನೋನೋ ಮಷಿನ್ ಗಳನ್ನು ಹಾಕಿದ್ದರು.

ಬ್ಲಡ್ ಹೋಗಿ ತುಂಬಾ ಸಮಸ್ಯೆ ಆಗಿತ್ತ.ಸಾಕಷ್ಟು ಗ್ಲೂಕೋಸ್,ಬ್ಲಡ್ ಎಲ್ಲ ಕೊಟ್ಟ ರೆಡಿ ಮಾಡಿ  ನಂತರ ಡಿಆಂಡ್ಸಿ‌ ಮಾಡಿದರು.

ಅದೃಷ್ಟವಶಾತ್ ಅದರ ಮರುದಿನ ಪರೀಕ್ಷೆ ಇರಲಿಲ್ಲ ಸುದ್ದಿ ಸಿಕ್ಕಿ ಆರೈಕೆಗೆ  ಅಮ್ಮ ಬಂದಿದ್ದರು.


ಹಾಗಾಗಿ ಮೊದಲ ರ‌್ಯಾಂಕ್ ಪಡೆದಾಗ ಇವೆಲ್ಲವೂ ಕಣ್ಣ ಮುಂದೆ ಬಂದು ಅಳು ಉಕ್ಕಿ ಬಂದಿತ್ತು

ಬಡತನವೇ ದೊಡ್ಡ ಕಷ್ಟ ಜಗತ್ತಿಲ್ಲಿ.‌ ಉಳಿದದ್ದೆಲ್ಲ  ನಂತರದ ಸಾಲಿನಲ್ಲಿ ನಿಲ್ಲುತ್ತವೆ.

ಗೆದ್ದಾಗ ಬಿಕ್ಕಿ ಬಿಕ್ಕಿಅಳುವವರನ್ನು ನೋಡಿದ್ದೀರಾ ? ನಾನೂ ಅತ್ತಿದ್ಬವು ಎಂಎ ಅಂತಿಮ‌ಪರೀಕ್ಷೆಗೆ ಎರಡು ತಿಂಗಳು‌‌ ಇತ್ತು ಈ ನಡುವೆ ವಿವಾಹಾನಂತರ ಓದಿದ ನಮ್ಮ‌ ಮಡಿಲಿನಲ್ಲಿ‌ಮಗು  ಮೊಳೆಯುವ ಲಕ್ಷಣ ಕಾಣಿಸಿತು‌ಆಗ ನಾವು ಮಂಗಳೂರು ನಲ್ಲಿ ಮನೆ ಮಾಡಿದ್ದೆವು.ಎರಡು ತಿಂಗಳು ಬಸ್ಸಿನಲ್ಲಿ ಓಡಾಡಬಾರದು ಎಂಧು ವೈದ್ಯೆರು...

ತರಗರಿಗೆ ಹಾಜರಾಗಿದ್ದರೂ ತೊಂದರೆ ಇರಲಿಲ್ಲ ಅದಾಗಲೇ ಸಾಕಷ್ಟು ಹಾಜರಿ ನನಗಿತ್ತು...ಪ್ರಿಪರೇಟರಿ ಪರೀಕ್ಷೆ ಬರೆಯವುದುವುದು ಹೇಗೆ? ಎಂಬ ಚಿಂತೆ ಕಾಡಿತು

ನಮ್ಮ ಗುರುಗಳಾದ ನಾರಾಯಣಭಟ್ಟರು ಮತ್ತ ಅವರ ಮಡದಿ ಜಯಕ್ಕ ಬಹಳ ಉದಾರಿಗಳು.ನಮಗೆ ದೂರು ಸಂಸಬಂಧಿಗಳು ಕೂಡ.ಅವರಲ್ಲಿ ಕೇಳಿದೆ..ಪರೀಕ್ಷೆ ಇರುವಷ್ಟು ದಿನ ಅವರಲ್ಲಿ ಇರಲು ಸಂತೋಷದಿಂದ ಒಪ್ಪಿದರು.ಅಂತೂ ಸಮಸ್ಯೆ ಪರಿಹಾರ ಆತಿತು...ಮನೆ ಮಗಳಂತೆ ನನ್ನನ್ನು ಬಹಳ‌ಪ್ರೀತಿಯಿಂದ ನೋಡಿಕೊಂಡರು ಅವರಿಬ್ಬರ ಸಹಾಯವನ್ನು ಎಂದಿಗೂ ಮರೆಯಲಾಗದು 

ಇದಾಗಿ ಎರಡು ತಿಂಗಳ ನಂತರ ಅಂತಮ ಪರೀಕ್ಷೆ ಇತ್ರು...

ವಿಪರೀಬ ವಾಂತಿ ಊಟಸೇರದ ಸಂಕಟದ ಸಮಸ್ಯೆ ಎಲ್ದ ಚೊಚ್ಚಲ ಗರ್ಭಿಣಿಯರಂತೆ ನನಗು ಇತ್ತು‌.ಬೇಕಾದ ತಿಂಡಿ ತಂದುಕೊಡಲು ಪ್ರಸಾದ ಸದಾ ಸಿದ್ಧರಿದ್ದರು.ಬಡತನ ಇತ್ತು.ಆದರೆ  ಒಲವಿಗೆ ಕೊರೆತೆ ಇರಲಲ್ಲ‌   ಆದೆ ರೆಒಂದು ಹನಿ ನೀರು ಕೂಡ ನಿಲ್ಲುತ್ತಿತಲಿಲ್ಲ..


ಮಾರ್ನಿಂಗ್ ಸಿಕ್ನೆಸ್ ಬೆಳಗ್ಗೆ ಮಾತ್ರ ಇರುತ್ತದೆ ಎಂದುಕೊಂಡಿದ್ದೆ‌.ಇದು ಇಡೀ ದಿ‌ನ ಆರೇಳು ತಿಂಗಳ ಕಾಲ ಕಾಡುತ್ತದೆ ಎಂಬದು ಅನುಭವ ಆದಾಗಲೇ ಗೊತ್ತಾದದ್ದು .ದಿನ ನಿತ್ಯ ಕಾಲು ಸೆಳೆತ ಕೈ ಮೈ ನೋವು ವಾಂತಿ ಹಿಂಸೆ ನಿತ್ರಾಣ‌‌,ಕಣ್ಣು ಬಿಡಲಾಗದಷ್ಟು ಆಯಾಸ  ಸದಾ ನಿದ್ರೆ, ,ಕಣ್ಣೆಳೆತ ಜೊತೆಗೆ. ತಿನ್ನುವಹುಚ್ಚು


ಅಂತಿಮ‌ಪರೀಕ್ಷೆ ಹಿಂದಿನದಿನ ಬೆಳಗಿನಿಂದಲೂ ತೀರಾ ಹಿಂಸೆ ಬೆನ್ನು ನೋವು ಆಗಾಗ ಟಾಯ್ಲೆಟಿಗೆ ಹೋಗಬೇಕು ಅನಿಸಿದು ಹಿಂಸೆವಏನೇನೋ ಆಗುತ್ತಿತ್ತು.ಪರೀಕ್ಷೆಯ ಆತಂತ ಇರಬಹುದು ಎಂದುಕೊಂಡೆ..ತಲೆ ಸುತ್ತು ಕಣ್ಣು ಕತ್ತಲು ಬರುತ್ತಿತ್ರು‌ಕೈಕಾಲು ಬ್ಯಾಲನ್ಸ್ವ ಇರಲಿಲ್ಲ 


ಮುಖ‌ಕೈ ಕಾಲಲ್ಲಿ ನೀರು ತುಂಬಿತ್ತು ಗರ್ಭಿಣಿಯರಿಗೆ ಇದು ಸಹಜ ಎಂದುಕೊಂಡೆ ನಾನು 

ಮಧ್ಯಾಹ್ನವಾಗುವಾಗ ತೀವ್ರ ಹಿಂಡುವ ಹೊಟ್ಟೆತೊಡೆ ಸಂಧಿಯಿಂದ ಶುರುವಾಗುವ ನೋವು ಬೆನ್ನನ ಹಿಂಭಾಗ ಕೈ ಕಾಲು ಹರಡುತ್ತಿತ್ರು . ನೋವಿನೊಡನೆ ರಕ್ರ ಸ್ರಾವ ಶುರುವಾಯಿತು

ಕೂಡಲೇ ಭಟ್ ನಿರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಷ್ಟ್ ಮಾಲತಿ ಭಟ್ ಬಳಿಗೆ ಹೋದೆ.ಅವರು ಸ್ಕಾನಿಂಗ್ ಗೆ ಕಳುಹಿಸಿದರು

ಕೊನೆಗೂ ನಮ್ಮ ಮೊದಲ‌ ಮಗು ಹೊಟ್ಟೆಯಲ್ಲಿಯೇ ಸತ್ತದ್ದು ಗೊತ್ತಾಯಿತು

ಏನು ಹೇಳಲಿ ಆದಿನ ನನ್ನ ಸ್ಥಿತಿ?. ನನ್ನನ್ನು ಮೊದಲ ಅಮ್ಮ‌ಎಂದು ಕರೆಯಲಿದ್ದ ಮಗು ಕೈ ತಪ್ಪಿ ಹೋಯಿತಲ್ಲ‌

ವೈದ್ಯರು 'ಈಗ ಜಾಗರೂಕತೆ ಮಾಡಿದರೆ  ಇನ್ನು ಹತ್ತು ಮಕ್ಕಳನ್ನು ಹೆರಬಹುದು ಅತ್ತರೆ ಸತ್ತವರು ಬರುವುದಿಲ್ಲ.ಡಿಎಂಡ್ ಸಿ‌ಮಾಡಬೇಕು ಇಲ್ಲವಾದರೆವ ಮಗು ಅಲ್ಲಿಯೇ ಕೊಳೆತು ಇತರ ಭಾಗಕ್ಕೆ ಸೋಂಕು ಹರಡಬಹುದು‌ಮುಂದೆ ಬಂಜೆ ತನ ಬರಬಹುದು,ಜೀವಾಪಾಯ ಉಂಟಾಗಬಹುದು ಎಂದರು.ಅಷ್ಟಾಗುವಾಗ ರಾತ್ರಿ ಹನ್ನೊಂದಾಗಿತ್ತು

ಡಿಎಂಡ ಸಿ ಮಾಡಿರೆ ನಾಳೆ ಪರೀಕ್ಷೆ ಬರೆಉಲು ಸಾಧ್ಯವಾ ಎಂದು ಕೇಳಿದೆ.ಸಾಧ್ಯವಿಲ್ಲ.ಲೋಕಲ್ ಅನಸ್ತೀಶಿಯ ಕೊಡ್ತೇವೆ ನಿದ್ರೆಯ ಮಂಪರು ಇರ್ತದೆ .ಮುಂದಿನಬಾರಿ ಪರೀಕ್ಷೆ ಬರೆ ಸರ್ಟಿಫಿಕೇಡ್ ಕೊಡ್ಡೇನೆಎಂದು.ಅಯ್ಯೋ ನನ್ನ ರ‌್ಯಾಂಕನ ಕನಸು..ಮನೆ ಮಂದಿಯನ್ನು ಸಮಾಜವನ್ನುಎದುರು ಹಾಕಿಕೊಂಡುಬ ಏನೋ ಸಾಧನೆ ಮಾಡ್ತೇವೆ ಎಂದು ಬಂದದ್ದು ಎಲ್ಲ‌ಒಮ್ಮೆಗೆ ಉಕ್ಕಿ ಬಂದು ಡಾಬಾರನೆ ನಿಂತಲ್ಲಿಂದ ಬಿದ್ದೆ.ಅಷ್ಟೇ ಗೊತ್ರು ನನಗೆ ನಾನು ಎಚ್ಚರಾಗುವಾಗ ಐಸಿಯುಬ ಬೆಡ್ ನಲ್ಲಿದ್ದೆ ಒತ್ತಡಕ್ಕೆ ಬಿಪಿ ಎಚ್ಚಾಗುತಿತ್ತಂತೆ.ಅದಕ್ಕೆ ತಲೆ ಸುತ್ರಿ ಬಿದ್ದನೆಂತೆ

ಅಳು ಗಿಳು ನಿಲ್ಲಿಸಿದ್ದೆ ವಾಸ್ತವದ ಬಗ್ಗೆ ಹೋಚಿಸಿದೆ

ನಾಳೆ ಪರೀಕ್ಷೆ ಬರೆಯದಿದ್ದರ ಒಂದು ವರ್ಷ ವ್ಯರ್ಥ ಆಗುತ್ತದೆಅಲ್ಲದವರ‌್ಯಾಂಕಿನ ಕನಸು ಅಸಾಧ್ಯ.

ಹಾಗಾಗಿ ನಾಳೆ ಪರೀಕ್ಷೆ ಬರೆದುಬಂದು ಡಿ ಎಂಡ್ ಸಿ‌ಮಾಡಿಸಿದರೆ ಆಗುತ್ತದಾ ಎಂದು ಕೇಳಿದೆ

ಬಹಳ ಅಪಾಯ ಇದೆ‌.ಬಹಳ ಹೊಟ್ಟೆ ನೀವು ಇರುತ್ತದೆ ತಾಳಿಕೊಂಡು ತೀವ್ರ್ ರಕ್ತಸ್ರಾವ ಸುರಿಸಿಕೊಂಡು ಪರೀಕ್ಷೆ ಬರೆಯಲು ನಿನಗಾಗುತ್ತಾ ಎಂದು ಬೈದ್ಯರು ,ಬುದ್ದಿ ಹೇಳಿದರು ಕೇಳಲಿಲ್ಲ

ಎಷ್ಟೇ ಕಷ್ಟ ಆದರೂ ನಾನು ಪರೀಕ್ಷೆ ಬರೆಯುತ್ತೃನೆ ಎಂದೆ

ಅಂದಷ್ಡು ಸುಲಭವಿರಲಿಲ್ಲ.ವಿಪರೀತ ರತ್ಕಸ್ರಾವ ಹಿಂಡುವ ನೋವು ತಲೆ ಸುತ್ರು..ಓಹ..ನೀವು ನಂಬುತ್ತೀರೋ ಎಲ್ಲವೋ ಇಲ್ಲವೋ ಒಂದು ದಪ್ಪದ ಕಂಬಳಿಯನ್ನು ಏಖೆಂಟು ಮಡಿಕೆ ಮಾಡಿ ಕುಳುತುಕೊಳ್ಳುವ ಬೆಂಚಿನ‌ಮೇಲೆ ಹಾಕಿದ್ದೆ.ಇಳಗೆ ಎರಡೆರಡು ಡೈಪರ್ ಬಳಸಿದ್ದೆ.ಇವೆಲ್ಲವೂ ರಕ್ತದಿಂದ ಒದ್ದೆಯಾಗಿದ್ದವು‌ ನನ್ನ ಉಟ್ಟ ಬಟ್ಟೆಯೂ ಪರೀಕ್ಷೆ ಮುಗಿಯುವಷ್ಟರಲ್ಲಿಲ್ಲಿ ರಕ್ತದಲ್ಲಿ ಒದ್ದೆಯಾಗಿ ಕೆಂಪಾಗಿತ್ತು.ನಾಗ ಉಙಟಾದ ಸಂಕೋಚ ನಾಚಿಕೆಗಳಲ್ಲನ್ನು ಭದ್ಬಗಳಲ್ಲಿ ವರ್ಷಿಸಲಾಗದು‌ಅಳು ಉಕ್ಕಿ ಬಾಯಿಗೆ ಬರುತ್ತಿತ್ತು ಆದರೆ ನಾನು ಅಳಲಿಲ್ಲಲ ನನ್ನದಲ್ಲದ ತಪ್ಪಿಗೆ ನಾನೇಕೆ ಅಳಲಿ? ಋಉತುಮಿಯಾಗುವುದುಮದುವೆ ತಾಯ್ತನ ಅಪರೂಒಕ್ಕಿನ್ಮೆ ದುರದೃಷ್ಟದ ಬರ್ಭಪಾತ ಇದೆನ್ನಲ್ಲವನಗನುಎದುರಿಸಿಸೆ ಗೆದ್ದುಬ ಬದಕಕುಬೇಕು.ಹೆಣ್ಣಾದ ಮೇಲೇ ಇದಕ್ಕೆಲ್ಲ ಅಳುಕಿದರೆ ಗೇಗೆ ಎಂದುಬ ಗಟ್ಟಿ ಮನಸು ಮಾಡಿದ್ದೆ ಮಾಡಿ ಗೆದ್ದಿದ್ದೆ ಕೂಡ  ಗರ್ಭ ಸ್ರಾವವಾಗಿ ನಮ್ಮಲ್ಲಿ ಇದ್ದುದೇ  ಒಂದುಕಂಬಳಿಅನದೂ ಹಾಳಾಯ್ತಲ್ಲವೆಂಬ ಸಣ್ಣ ಚಿಂತೆಕೂಡ ಕಾಡಿತಿಬಿದುಬ ಬರೆ.‌ತಮಾಷೆಯ‌ಮಾತಲ್ಲ‌ಮತ್ತೆಕಂಬಳಿ ತೆಗೆಯಕೆಂದರೆವ ಮತ್ತಾರು ತಿಂಗಳು ದುಡ್ಡು ಹೊಂದಿಸೆಬೇಕಾಗಿತ್ತು 

ನಾವಿಬ್ಬರು ಹಾಸಿ‌ಮಲಗುತ್ತಿದ್ದ ನಮ್ಮಲ್ಲಿದ್ದ ಒಂದೇ ಒಂದು ಕಂಬಳಿ ಇದು.

ಪರೀಕ್ಷೆ ಹಾಲಿನಿಂಂ  ಕಾರು ಮಾಡಿಕೊಂಡು ನೇರವಾಗಿ ಮಾಲತಿ ಆಸ್ಪತ್ರೆಗೆ ನಾನು ಪ್ರಸಾದ್ ಬಂದೆವು

ಈ ನಡವೆ ನಡುರಾತ್ರಿ ಅಲ್ಲಿಂತ ಬಂದುಬೆಳಗ್ಗೆ ಒಂಬತ್ತರಿಂದ ಹನ್ನೆರಡರ ತನಕ ಪರೀಕ್ಷೆ ಬರೆದು ನೇರವಾಗಿ ಆಸ್ಪತ್ರೆಗೆಹೋಗಿದ್ದೆವುಬ ಉಣ್ಣಲು ತಿನ್ನಲು ಏನಾದರೂ ಸೇರಿದರೆ ತಾನೆ ಮಡಿಲ ಮಗುವನ್ನು ಕಳೆದುಕೊಂಡ ನಮಗೆ ಏನೂ ಬ್ಯಾಡವಾವಾಗಿತ್ರ...ತಿನ್ನಲು ಸೇರಿದರೆ ತಾನೆ..? ಒಂದು ಹನಿ ನೀರನ್ನೂ ಕುಡಿದಿರಲಿಲ್ಲ ಗರ್ಭಪಾತದವಾದಲ್ಲಿಂದ ಒಂದು ತೊಟ್ಟು ನೀರು ಕೊಡಿದಿರಿರಲಿಲ್ಲಂತೂ ಹೇಗೋ ಪರೀಕ್ಷೆ ಬರೆದು  ಆಸ್ಪತ್ರೆಗೆ ಹೋದೆ..ಅಸ್ಪತ್ರೆಗೆ ಕಾಲಿಡುವಷ್ಟರರಲ್ಲಿ ಕಟ್ಟಿಕತ್ತಲು ಬಂದು ಎಚ್ಚರ ತಪ್ಪಿ ಬಿದ್ದಿದ್ದೆ.ಎಚ್ಚರಾಗುವಾಗಾಸ್ಪತ್ರೆಯವ ಐಸಿಯು ವಿನಲ್ಲಿದ್ದೆಸುತ್ತ ಮುತ್ತ ಹಸಿರು ಘನ್ ಧರಿಸಿದ ವೈದ್ಯರಯ ಕಣ್ಣು ತೆರೆಯಿರಿ ಎಚ್ಚರ ಬಂತಾ? ನಿಮ್ಮ ಹೆಸರೇನು ಇತ್ಯಾದಿ ಕೇಳಿದ್ದರು‌ಹೇಸಕ್ಕೆ ಏನೋನೋ ಮಷಿನ್ ಗಳನ್ನು ಹಾಕಿದ್ದರರು

ಬ್ಲಾಡಗ ಹೋಗಿವತುಂಬಾ ಸಮಸ್ಯೆ ಆಗಿತ್ತ  ಸಾಕಷ್ಟು ಗ್ರೂಕೋಸ‌,ಬ್ಲಡ್ ಎಲ್ಲ ಕೊಟ್ಟ ರೆಡಿಬಮಾಡಿ  ನಂತರ ಡಿಆಂಡ್ಸಿ‌ ಸಿ‌ಮಾಡಿದರು

ಅದೃಷ್ಟವಶಾತ್ ಅದರ ಮರುದಿನ ಪರೀಕ್ಷೆ ಇರಲಿಲ್ಲ ಸುದ್ದಿ ಸಿಕ್ಕಿ ಆರೈಕೆಗೆ ಗೆ ಅಮ್ಮ ಬಂದಿದ್ದರು


ಹಾಗಾಗಿ ಮೊದಲ ರ‌್ಯಾಂಕ್ ಪಡೆದಾಗ ಇವೆಲ್ಲವೂ ಕಣ್ಣ ಮುಂದೆ ಬಂದು ಅಳು ಉಕ್ಕಿ ಬಂದಿತ್ತು

ಬಡತನವೇ ದೊಡ್ಡ ಕಷ್ಡ ಜಗತ್ತಿಲ್ಲಿ.‌ಉೞಿದೆಲ್ಲದೆವೂ ನಂತರದ ಸಾಲಿಬಲ್ಲಿ ವಿಲ್ಲುತ್ತವೆ

2 comments:

  1. ಹಸಿವು ದಾಹ ಆ ಒಂದು ಪದವಿಗಾಗಿ,ವಿಶ್ವಾಸದಿಂದ ನೀವು ಕೊಟ್ಟದ್ದು ನಿಮಗೆ ಹಿಂದೆ ಸಿಕ್ಕಿತು.ಏನು ಬೇಕೆಂಬುದು ಕರ್ಮದ ರೂಪು ಪಡೆದಾಗ ಅದ್ಭುತಗಳಾಗುತ್ತವೆ.ಅಮ್ಮ ಸ್ಫೂರ್ತಿದಾಯಕ ಲೇಖನ.ಭಗವಂತ ನಿಮ್ಮೊಂದಿಗೆ ಇರಲಿ.

    ReplyDelete
  2. ನಿಮ್ಮ ಪ್ರೀತಿಯ ಮಾತುಗಳಿಗೆ ಶರಣು- ಲಕ್ಷ್ಮೀ ಜಿ ಪ್ರಸಾದ್

    ReplyDelete