Monday 4 April 2022

ದೊಡ್ಡವರ ದಾರಿ 94 : ಅಪಾರ ಕರ್ತವ್ಯ ಪ್ರಜ್ಞೆಯ ಜಿಲ್ಲಾ ಉಪನಿರ್ದೇಶಕ ಬಿಎಸ್ ರಾಜಕುಮಾರ್

 

ದೊಡ್ಡವರ ದಾರಿ94: ಅಪಾರ ಕರ್ತವ್ಯ ಪ್ರಜ್ಞೆಯ ಜಿಲ್ಲಾ ಉಪನಿರ್ದೇಶಕ ಬಿ ಎಸ್  ರಾಜಕುಮಾರ

ಕೆಲವು ದಿನಗಳ ಹಿಂದೆ ನಾವು ಸ್ಟಾಫ್ ರೂಮಿನಲ್ಲಿ ಮಾತಾಡ್ತಾ ಇರುವಾಗ ನನ್ನ ಬರವಣಿಗೆಯ ವಿಚಾರ ಬಂತು.ಇತ್ತೀಚೆಗೆ ಏನು ಬರೆದಿರಿ ಎಂದು ವಿಚಾರಿಸಿದರು.ನಾನು ಇತ್ತೀಚೆಗೆ ಬಹಳ ಸೋಮಾರಿಯಾಗಿದ್ದೇನೆ.ದೊಡ್ಡವರ ದಾರಿ ಸರಣಿಯಲ್ಲಿ ಅನೇಕರ ಬಗ್ಗೆ ಬರೆಯಬೇಕೆಂದು ಗುರುತು ಮಾಡಿಟ್ಟಿರುವೆ.ಬರೆಯಲು ಸಮಯ ಮೂಡ್ ಎರಡೂ  ಇಲ್ಲ‌ ಎಂದೆ.ಬರೆಯಬೇಕೆನಿಸಿದ್ದನ್ನು ಆಗಲೇ ಬರೆದುಬಿಡಬೇಕು ಎಂದು ಸಹೋದ್ಯೋಗಿ ಮಂಜುಳಾ ಹೇಳಿದರು.ಹೌದು‌‌..ನಾನು ನಮ್ಮ ಶೈಲಜಾ ಮೇಡಂ( ನಮ್ಮ ಕಾಲೇಜಿನಲ್ಲಿ ಪ್ರಾಂಶುಒಅಲರಾಗಿದ್ದು ಈಗ ಜಿಲ್ಲಾ ಉಪನಿರ್ದೇಶಕರಾಗಿ ಪದೋನ್ನತಿ ಪಡೆದಿರುವ ಪ್ರತಿಭಾನ್ವಿತೆ) ಹಾಗೂ ಪ್ರಸ್ತುತ ನಮ್ಮ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ರಾಜಕುಮಾರ ಸರ್ ಅವರ ವಿಶೇಷ ಗುಣಗಳನ್ನು ಗುರುರಿಸಿರುವೆ.ಅವರ ಬಗ್ಗೆ ಬರೆಯಬೇಕೆಂದಿರುವೆ ಎಂದೆ.ಹಾಗಾದರೆ ಬೇಗ ಬರೆಯಿರಿ ತಡವೇಕೆ ಎಂದು ಸಹೋದ್ಯೋಗಿ‌ಮಿತ್ರರು ಕೇಳಿದರು.ಅವರಿಬ್ಬರು ಈಗಲೂ ಸರ್ವಿಸ್ ನಲ್ಲಿ ಇದ್ದಾರೆ.ನನ್ನ‌ ಮೇಲಧಿಕಾರಿಗಳಾಗಿದ್ದಾರೆ.ನಾನು ಈಗ ಬರೆದರೆ ಬಕೆಟ್ ಹಿಡಿಯುದು ಎಂದು ನನ್ನನ್ನು ಜನರು ಆಡಿಕೊಂಡರೆ ಎಂಬ ಅಳುಕಿನ ಬಗ್ಗೆ ತಿಳಿಸಿದೆ.

ನೀವು ಬರೆಯದಿದ್ದರೆ ಆಡಿಕೊಳ್ಳುವುದಿಲ್ವಾ? ಅವರಿವರ ಮಾತಿನ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀರಿ ? ಬರೆಯಬೇಕೆನಿಸಿದ್ದನ್ನು ಬರೆದುಬಿಡಿ ಎಂದು ಮಂಜುಳಾ ಹೇಳಿದರು.ಹೌದಲ್ವಾ ಎನಿಸಿತು.ಆದರೆ ನಾನು ನಂತರ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಪ್ರಕಟಣೆಯಲ್ಲಿ ಮುಳುಗಿ ದೊಡ್ಡವರ ದಾರಿ ಸರಣಿಯನ್ನು ಬರೆಯುವುದನ್ನು ಮುಂದೆ ಹಾಕಿದ್ದೆ

ಈವತ್ತು ಬರೆಯಬೇಕೆನಿಸಿತು.ರಾಜಕುಮಾರ ಸರ್ ಸುಮಾರು‌ ಎರಡು ವರ್ಷಗಳ ಮೊದಲು ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆಗೆ ಡಿಡಿಪಿಯು ಆಗಿ ಭಡ್ತಿ ಪಡೆದು ಬಂದಿದ್ದರು.ಅನೇಕರು ಇವರು ಬಹಳ ಸಹೃದಯಿಗಳು ಉದಾರಿಗಳು ಎಂದು ಮಾತನಾಡುದನ್ನು ಕೇಳಿಸಿಕೊಂಡಿದ್ದೆ.ನನಗೆ ಸ್ವಲ್ಪ ಕೀಳರಿಮೆ ಇದೆ ಕಾಣಬೇಕು ಹಾಗಾಗಿ ಸಾಮಾನ್ಯವಾಗಿ ಮೇಲಧಿಕಾರಿಗಳ ಜೊತೆ ಮುಖಾಮುಖಿಯಾಗಿ‌ಮಾತನಾಡುದನ್ನು ತಪ್ಪಿಸಿಕೊಳ್ತೇನೆ.ನನ್ನ ಕಾರುಬಾರು ಏನಿದ್ದರೂ ಬರವಣಿಗೆಯಲ್ಲಿ ಮಾತ್ರ.ನೇರವಾಗಿ ಮಾತನಾಡುದು ಬಹಳ ಕಡಿಮೆ ನಾನು.ಏನೋ ಸಂಕೋಚ.ನಾನು ಬ್ಯಾಟರಾಯನೊಉರ ಕಾಲೇಜಿಗೆ ವರ್ಗಾವಣೆಯಾದ ವರ್ಷ ಕಾಲೇಜು ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಡಿಡಿಪಿಯು ಆಗಿದ್ದ ರಾಜಕುಮಾರ್ ಸರ್ ಬಂದಿದ್ದರು

ನಾನು ಬರೆದು ನಿರ್ದೇಶಿಸಿಸಿದ ನೀರಕ್ಕನ ಮನೆ ಕಣಿವೆ ನಾಟಕವನ್ನು ನಮ್ಮ‌ಮಕ್ಕಳು ವೇದಿಕೆಯಲ್ಲಿ ಪ್ರದರ್ಶಿಸಿದ್ದರು.ಮಕ್ಕಳಿಗೆ ಬಾಯಿ ಪಾಠ ಬಾರದಿದ್ದರೆ ವೆದುಕೆ ಏರಿದಾಗ ಭಯವಾಗಿ ಮಾತು ಹೊರಳದಿದ್ದರೆ ಅಥವಾ ಇನ್ನೇನಾದರೂ ಅವಾಂತರ ಆದರೆ ಎಂಬ ಆತಂಕದಲ್ಲಿ ವೇದಿಕೆಯ ಹಿಂಭಾಗದಲ್ಕಿ ನಿಂತು ನಾನು ನೋಡುತ್ತಿದ್ದೆ.ನಾಟಕವನ್ನು ಅತಿಥಿಗಳಾಗಿ ಬಂದಿದ್ದ ರಾಜಕುಮಾರ್ ಸರ್ ನೋಡಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ.ನಾಟಕದ ನಂತರ ಅದರ ಪರಿಕರಗಳನ್ನು‌ಹಿಡಿದು ಕಾಲೇಜಿನ ಸಾಮಗ್ರಿಗಳನ್ನು ಹಿಂದೆ ಕಪಾಟಿನಲ್ಲಿ ಇಡಲು ನಾನು ಪ್ರಿನ್ಸಿಪಾಲ್ ಕೊಠಡಿಗೆ ಬಂದೆ.ಆಗ ರಾಜಕುಮಾರ್ ಸರ್ ನಿಮ್ಮಂಥಹ ಉಪನ್ಯಾಸಕರು ನಮ್ಮ‌ಇಲಾಖೆಗೆ ಒಂದು ಕೊಡುಗೆ ಎಂದು‌ಮುಕ್ತವಾಗಿ ಪ್ರಶಂಸಿಸಿದರು.ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವುದು ಸಣ್ಣ ಮಾತಲ್ಲ.ಕೊಂಕು ತೆಗೆಯುವವರೇ ಹೆಚ್ಚು.ಅಂತಹವರ ನಡುವೆ ರಾಜಕುಮಾರ್ ಸರ್ ನನಗೆ ವಿಶಿಷ್ಟ ಎನಿಸಿದರು..ದಿನಗಳು ಕಳೆದವು.ನಮ್ಮ ಒರ್ವ ಬಡ ವಿದ್ಯಾರ್ಥಿನಿ92% ಅಂಕ ತೆಗೆದ ಸಂದರ್ಭದಲಿ ಆಗ ಸಚಿವರಾಗಿದ್ದ ಸುರೇಶ್ ಅವರು ಬಂದಾಗ ರಾಜಕುಮಾರ್ ಸರ್ ಬಂದು ತಮ್ಮಿಂದಾದ ಸಹಾಯವನ್ನು ಮಾಡಿದ್ದರು

ಇದಾಗಿ ನಂತರದ ಶೈಕ್ಷಣಿಕ ವರ್ಷದ ಆರಂಭದ ದಿನ ರಾಜಕುಮಾರ್ ಸರ್ ಅನಿರೀಕ್ಷಿತವಾಗಿ ನಮ್ಮ‌ಕಾಲೇಜಿಗೆ ಭೇಟಿ ನೀಡಿದರು.ಭೇಟಿ ನಿಡಿದಾಗ ಯಾವುದೇ ಕೊಂಕು ತೆಗೆಯದೆ ಕೊರೋನಾ ಹರಡದಂತೆ ನಾವು‌ಮಾಡಿದ್ದ ಏರ್ಪಾಟನ್ನು ನೋಡಿ ಮೆಚ್ಚಿದರು

ನಂತರ ಒಂದು ಮೀಟಿಂಗ್ ಮಾಡಿದರು.ಇಲ್ಲಿ ಅವರ ವ್ಯಕ್ತಿತ್ವ ಅವರ ಮಾತು ನನಗೆ ಬಹಳ ಇಷ್ಟ ಆಯಿತು

ಅವರು ಮಾತನಾಡುತ್ತಾ ನಾವು ಸೇವೆಗೆ ಸೇರುವಾಗ ಯಾವ ಉತ್ಸಾಹವನ್ನು ಮನೋಭಾವನೆಯನ್ನು ಹೊಂದಿರುತ್ತೇವೆಯೋ ಅದೇ ಭಾವವನ್ನು ನಿವೃತ್ತಿ ಹೊಂದುವ ತನಕ ಇರಿಸಿಕೊಳ್ಳಬೇಕು.ಸೇರುವಾಗ ನಮಗೊಂದು‌ಕೆಲಸ ಸಿಕ್ಕರೆ ಸಾಕು.ಎಲ್ಲಾದರೂ ಅಡ್ಡಿ ಇಲ್ಲ‌ಎಂಬ ಭಾವ ಇರ್ತದೆ ನಂತರ ಅದಿಲ್ಲ ಇದಿಲ್ಲ ಎಂದೆನಿಸಲು ಶುರುವಾಗುತ್ತದೆ ಆಗ ನಾವು ವಿಚಲಿತರಾಗಬಾರದು ದೃಢತೆಯನ್ನು ಹೊಂದಿ ಸೇರುವಾಗಿನ ಉತ್ಸಾಹವನ್ನೇ ಉಳಿಸಿಕೊಳ್ಳಬೇಕು " ಎಂದರು

ಹೌದಲ್ಲ ಎಂದೆನಿಸಿತು ನಮಗೆಲ್ಲರಿಗೂ.ನಾವು ಕೆಲಸಕ್ಕೆ ಸೇರುವಾಗ ಚಂದ್ರಲೋಕದಲ್ಲಿ ಸಿಕ್ಕರೂ ಸೇರ್ತೇವೆ ಎಂದುಕೊಳ್ತೇವೆಡ.ನಂತರ ನಮಗೆ ಸಿಕ್ಕ ಜಾಗ ದೂರ ಆಯಿತು ಸೌಲಭ್ಯ ಇಲ್ಲ ಎಂದೆನಿಸಲು ಶುರುವಾಗುತ್ತದೆ.

ನನಗೆ ಬ್ಯಾಟರಾಯನಪುರ ಕಾಲೇಜಿಗೆ ಬಂದಾಗ ನಮಗೆ ಬೇಕಷ್ಟು ಜಾಗ ಇಲ್ಲ ಗ್ರಂಥಾಲಯ ಇಲ್ಲ ಎಂದೆನಿಸಿತ್ತು.ರಾಜಕುಮಾರ್ ಸರ್ ಮಾತು ಕೇಳಿದ ದಿನವೇ ನಿರ್ಧರಿಸಿದ್ದೆ.ಇನ್ನು ಇಲ್ಲದಿರುವದರ ಕಡೆ ನೋಡುವುದನ್ನು ಬಿಟ್ಟು ಇರುವ ಕಡೆಗೆ ನೊಡಬೇಕು ಎಂದು.ಹಾಗಾಗಿ ಲೇಖಕರಲ್ಲಿ ಕೇಳಿ ಅವರು ಓದಿ ಆದ ಪುಸ್ತಕಗಳನ್ನು ಸಂಗ್ರಹಿಸಿದೆ.ನಮ್ಮ‌ಮನೆಯಿಂದ ಎರಡು ಮೂರು ದೊಡ್ಡ ಬ್ಯಾಗ್ ತಗೊಂಡು ಹೋಗಿ ತುಂಬಿಸಿ ನಾನು ಕುಳಿತುಕೊಳ್ಳವಲ್ಲಿಯೇ ಕಾಲಿನ ಬಳಿ ಜಾಗ ಮಾಡಿ ಇರಿಸಿಕೊಂಡೆ.ಪುಸ್ತಕಕ್ಕೆ ನಂಬರ್ ಹಾಕಿ ಮಕ್ಕಳಿಗೆ ಮೊಬೈಲ್ ಲೈಬ್ರರಿ ಮಾದರಿಯಲ್ಲಿ ಪುಸ್ತಕಗಳನ್ನು ಒದಗಿಸಿದೆ.ಹದಿನೈದು ದಿನಗಳ ನಂತರ ಹಿಂದೆ ಪಡೆದು ಬೇರೆ ಪುಸ್ತಕಗಳನ್ನು ಕೊಟ್ಟೆ.ಅದೇ ರೀತಿ ಇರುವ ಸೌಲಭ್ಯವನ್ನು ಬಳಸಿ‌ಮಕ್ಕಳಿಗೆ ನನ್ನ ಕೈಯಿಂದ ಸಾಧ್ಯವಾದುದನ್ನು ಮಾಡಿದೆ.ಮಕ್ಕಳಿಗೆ ಓದಲು ಸಹಾಯ ಧನ ಎಂದು ನಿಡಿದರೆ ಅವರಲ್ಲಿ ಕೀಳರಿಮೆ ಕಾಡುತ್ತದೆ ಅದಕ್ಕಾಗಿ ಅಂಕ ಗಳಿಸಿ ಬಹುಮಾನ ಪಡೆಯಿರಿ ಎಂದು ಮೊದಲೇ ಹೇಳಿದೆ.ಕನ್ನಡದಲ್ಲಿ  85 ಕ್ಕಿಂತ ಹೆಚ್ಚು ಅಂಕ ತೆಗೆದ ಎಲ್ಲ‌ಮಕ್ಕಳಿಗೂ ನಗದು ಬಹುಮಾನ ನೀಡಿದೆ.ಹೀಗೆ ಇರುವುದರಲ್ಲಿ ಎಲ್ಲವನ್ನೂ ಮಾಡಬೇಕೆಂಬುದನ್ನು ರಾಜಕುಮಾರ್ ಸರ್ ಮಾತುಗಳ ಮೂಲಕ ಕಂಡುಕೊಂಡೆ ನಾನು.ಇನ್ನೊಂದು ಸಂಕಷ್ಟದ ಕಾಲದಲ್ಲಿ ಕೂಡ ಅತ್ಯಂತ ನಿಷ್ಪಾಕ್ಷಿಕವಾಗಿ ನಡೆದುಕೊಂಡು ನನಗೆ ನ್ಯಾಯ ಒದಗಿಸಿದ್ದಾರೆ ಈ ಬಗ್ಗೆ ಮುಂದೆ ನನ್ನ ಆತ್ಮ ಕಥೆಯಲ್ಲಿ ಬರೆಯುವೆ .ರಾಜಕುಮಾರ್ ಸರ್ ಬಗ್ಗೆ ಈ ಹಿಂದೆ ಒಮ್ಮೆ ಬರೆದು ಬ್ಲಾಗ್ ಗೆ ಹಾಕಿದ್ದೆ.ಅದು ಏನೋ ಎರರ್ ಆಗಿ ಡಿಕೀಟ್ ಆಗಿತ್ತು.ಒಮ್ಮೆ ಬರೆದಂತೆ ಇನ್ನೊಮ್ಮೆ ಬರೆಯಲು ಆಗುವುದಿಲ್ಲ ಆದರೂ ನನಗೆ ತಿಳಿದಂತೆ ಅವರ ಸಹೃದಯತೆ ,ಕರ್ತವ್ಯದ ಬಗ್ಗೆ ಇರುವ ಒಲುಮೆ ಯ ಬಗ್ಗೆ ಬರೆದಿರುವೆ 


No comments:

Post a Comment