Thursday 7 April 2022

ಕಾಶ್ಮೀರ ಫೈಲ್ಸ್ ಮಾತ್ರವಲ್ಲ ಶ್ರೀಲಂಕಾ ಕೂಡ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ .- ಡಾ.ಲಕ್ಷ್ಮೀ ಜಿ ಪ್ರಸಾದ್

 ಕಾಶ್ಮೀರ ಫೈಲ್ಸ್ ಮಾತ್ರವಲ್ಲ ಶ್ರೀಲಂಕಾ ಕೂಡ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ .- ಡಾ.ಲಕ್ಷ್ಮೀ ಜಿ ಪ್ರಸಾದ್.ಕನ್ನಡ ಉಪನ್ಯಾಸಕರು,ಸರ್ಕಾರಿ ಕಾಲೇಜು ಬ್ಯಾಟರಾಯನಪುರ,ಬೆಂಗಳೂರು 


ಒಂದು ಕೆಜಿ ಅಕ್ಕಿಗೆ 300₹ ಅದಕ್ಕೂ ದಿನಗಟ್ಟಲೆ ಬಿಸಿಲಿನಲ್ಖಿ ಕ್ಯೂನಿಲ್ಲಬೇಕು.ಅಗತ್ಯ ಔಷಧಿಗಳು ದುಡ್ಡು ಕೊಟ್ಟರೂ ಲಭ್ಯವಿಲ್ಲ ಹಾಗಾಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಿಲ್ಲಿಸಿದೆ.ಇನ್ನು ಸರ್ಕಾರಿ ಸಾರಿಗೆ ವ್ಯವಸ್ಥೆ ಇದ್ದೀತೇ ? ಅನೇಕರು ಈಗಾಗಲೇ ಆಹಾರ ಔಷಧ ಸಿಗದೆ ಸಾವನ್ನಪ್ಪಿದ್ದಾರೆ.ಇದು ದೂರದ ಚಂದ್ರ ಲೋಕದ ಅಥವಾ ಮಂಗಳನ ಕಥೆಯಲ್ಲ

ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದು ಈಗ ಸ್ವತಂತ್ರ ದೇಶವಾಗಿರುವ  ಶ್ರೀಲಂಕಾದ ಕಥೆ ಇದು

ದೇಶ ದಿವಾಳಿಯಂಚಿನಲ್ಲಿ ಬಂದು ನಿಂತಿದೆ

ರಾಜಕಾರಣಿಗಳ ದೂರ ದೃಷ್ಟಿ ಇಲ್ಲದ ಸ್ವಾರ್ಥ ಲಾಲಸೆಯ ನಿಷ್ಪ್ರಯೋಜಕ ಯೋಜನೆಗಳ  ದುಷ್ಪರಿಣಾಮ ಇದು.ಆದರೆ ರಾಜಕಾರಣಿಗಳು ದುಡ್ಡು ಮಾಡಿ ವಿದೇಶದಲ್ಲಿ ಆರಾಮಾಗಿರ್ತಾರೆ.ತಾವು ಓಟು ಹಾಕಿ ಗೆಲ್ಲಿಸಿ ಬಹು ಪರಾಕ್ ಹೇಳಿದ ಸಾಮಾನ್ಯ ಜನರು ಸಮಸ್ಯೆಗೆ ಸಿಲುಕಿದ್ದಾರೆ


ನಮ್ಮ ದೇಶಕ್ಕೂ ಇಂತಹ ದುಸ್ಥಿತಿ ಬರಬಾದೆಂದೇನೂ ಇಲ್ಲ.

ಅನಿಯಂತ್ರಿತ ಭ್ರಷ್ಟಾಚಾರ ದೇಶದ ದೊಡ್ಡ ಶತ್ರು

700 ಕೋಟಿ ಖರ್ಚು ಮಾಡಿ ಕಟ್ಟಿದ ಫ್ಲೈ ಓವರ್ ಹತ್ತು ವರ್ಷಗಳಲ್ಲಿ ಬಳಕೆಗೆ ಅನರ್ಹವಾಗಿದೆ.ಇಂತಹ 1000 ಪ್ಲೈ ಓವರ್ ದೇಶಾದ್ಯಂತ ಕಟ್ಟಿದ್ದು ವ್ಯರ್ಥವಾದರೆ  ಹಾಳಾದ ದುಡ್ಡು ಎಪ್ಪತ್ತು ಲಕ್ಷ ಕೋಟಿ.ಎಂದರೆ ಪ್ರತಿಯೊಬ್ಬ ಭಾರತೀಯನ 50,000₹ ನಷ್ಟ ಆಯಿತು.ಇದನ್ನು ವಸೂಲಿ ಮಾಡುವ ಸಣ್ಣ  ದಾರಿಯಾದರೂ  ಇದೆಯೇ? ಇದರ ಹೆಚ್ಚನ ಭಾಗ ರಾಜಕಾರಣಿಗಳ ಜೇಬಿಗೆ ಹೋಗಿ ವಿದೇಶೀ ಬ್ಯಾಂಕಿನಲ್ಲಿ ಸುರಕ್ಷಿತವಾಗಿರುತ್ತದೆ‌.ಇದು ಒಂದು ಸಣ್ಣ ಉದಾಹರಣೆ ಅಷ್ಟೇ..ಇಂತಃದ್ದು ದಿನ ನಿತ್ಯ ಎಷ್ಟು ನಡೆಯುವುದಿಲ್ಲ

ವಾಜಪೇಯಿ ಕಾಲದಲ್ಲಿಯೇ ಚತುಷ್ಪಥ ರಸ್ತೆ ನಿರ್ಮಾಣದ ಅವ್ಯಹಾರದ ಬಗ್ಗೆ ವಾಜೊಏಯಿ ಅವರಿಗೆ ತಿಳಿಸಿದ ಸತ್ಯೇಂದ್ರ ದುಬೆ ಎಂಬ ಪ್ರಾಮಾಣಿಕ ಇಂಜನಿಯರ್ ಕೊಲೆಯಾಗಿದ್ದಾನೆ.ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದ ಸಾವಿರಾರು ಜನರು ಕೊಲೆಯಾಗಿದ್ದಾರೆ.

ಜನರ್ಯಾರೂ ಅದರ ಬಗ್ಗೆ ಯೋಚಿಸುವುದಿಲ್ಲ


ಪಕ್ಕದ ಶ್ರೀಲಂಕಾದಲ್ಲಿ ಆದಂತೆ ನಮ್ಮಲ್ಲೂ ಆಗಲು ಎಷ್ಟು ಹೊತ್ತು ಬೇಕು? ದೇಶದ ಖಚಾನೆ ಖಾಲಿಯಾಗಿ ದಿವಾಳಿಯಂಚಿಗೆ ಬಂದು ನಿಲ್ಲುವ ಕಿನೆಯ ಕ್ಷಣದವರೆಗೂ ಜನರಿಗೆ ಗೊತ್ತೇ ಆಗುವುದಿಲ್ಲ


ನಾವೇ ಆಯ್ಕೆ ಮಾಡಿದ ಎಂಎಲ್ ಎ ಎಂಪಿ ಮಂತ್ರಿಗಳು ಭ್ರಷ್ಟಾಚಾರ ಮಾಡಿದರೆ,ಭ್ರಷ್ಟಾಚಾರವನ್ನು ತಡೆಯದೇ ಇದ್ದರೆ  ನಾವೇ ಪ್ರಶ್ನಿಸಬೇಕಿದೆ.ಇಲ್ಲವಾದರೆ ನಮಗೂ ಶ್ರೀಲಂಕಾ ದ ದುರ್ಗತಿಯೇ ಬರಬಹುದು


ಕಳೆದ ವಾರ ಸ್ಟಾಪ್ ರೂಮಿನಲ್ಲಿ ನಾವು ಈ ಬಗ್ಗೆ ಮಾತನಾಡಿಕೊಂಡಿದ್ದೆವು.ದೇಶದಲ್ಲಿ  ಇದೇ ರೀತಿ ಭ್ರಷ್ಟಾಚಾರ ನಿರಂತರವಾಗಿ ತಡೆಯಿಲ್ಲದೆ ನಡೆದರೆ ಉಚಿತ ಕೊಡುಗೆಗಳನ್ನು ನೀಡುತ್ತಾ ಹೋದರೆ ,ರಾಜಕೀಯ ಲಾಭಕ್ಕಾಗಿ ವಿದೇಶದಲ್ಲಿ ಸತ್ತವರಿಗೂ,ಕೊಲೆಯಾದವರಿಗೂ  ವೀರ ಯೋಧರಿಗೆ ನೀಡುವಂತೆ ಇಪ್ಪತ್ತು ಮೂವತ್ತು ಲಕ್ಷ ರುಪಾಯಿ ದುಡ್ಡು ಹಂಚುತ್ತಾ ಹೋದರೆ ಒಂದಿನ ದಿವಾಳಿಯಾಗುತ್ತದೆ.ಚೆನ್ನಾಗಿ ಬದುಕಿದ ಜನರು ಬಿಕ್ಷುಕರಂತೆ ಅನ್ನ ನೀರಿಲ್ಲದೆ ಸಾಯಬೇಕಾಗುತ್ತದೆ.ನಮ್ಮ‌ಕಾಲದಲ್ಲಿ ಇದು ಆಗದೇ ಇದ್ದರೆ ನಮ್ಮ‌ಪುಣ್ಯ .ಒಂದೊಮ್ಮೆ ದಿವಾಳಿಯಾದರೆ ಕಷ್ಟಕ್ಕೆ ಸಿಲುಕುವುದು ಜನ ಸಾಮಾನ್ಯರೇ ಹೊರತು ರಾಜಕಾರಣಿಗಳಾಗಲೀ ಶ್ರೀಮಂಥರಾಗಲೀ ಅಲ್ಲ.

ಅಂದ ಹಾಗೆ ಸರ್ಕಾರದ ವಿರುದ್ಧ ಸರ್ಕಾರಿ ಉದ್ಯೋಗಿಗಳು ಏನನ್ನೂ ಬರೆಯಬಾರದಂತೆ..ನಾನು ಬರೆದದ್ದು ಸರ್ಕಾರದ ವಿರುದ್ದವಲ್ಲ.ಭ್ರಷ್ಟಾಚಾರ ಮುಂದುವರಿದರೆ ಏನಾಗಬಹುದೆಂದು ಮಾತ್ರ ಬರೆದಿರುವೆ.

ಯಾವುದೇ ಭ್ರಷ್ಟಾಚಾರವನ್ನು ಅನ್ಯಾಯವನ್ನು ಕೇಳುವವರೇ ಇಲ್ಲ.ಈ ಬಗ್ಗೆ ಹೇಳೋಣವೆಂದು ಯಾರಾದರೊಬ್ಬ ಎಂಎಲ್ ಎ, ಎಂಪಿ ,ಮಂತ್ರಿಗಳಿಗೆ ಫೋನ್ ಮಾಡಿ ನೋಡಿ  ಒಬ್ಬರೂ ಎತ್ತುವುದಿಲ್ಲ.ಅವರ ಪರ್ಸನಲ್ ಸೆಕ್ರೆಟರಿಗಳಿಗೆ ಕರೆ ಮಾಡಿ ನೋಡಿ..ನಮಗ್ಯಾಕೆ ಹೇಳ್ತೀರಿ ? ಸಚಿವರಿಗೆ ಹೇಳಿ ಎನ್ನುತ್ತಾರೆ.ಈಗಲೇ ಇಂತಹ ದುರವಸ್ಥೆ ..ಮುಂದೆ ಹೇಗಾಗಬಹುದು ?

ನಾವಿನ್ನೂ ಭಾವನಾತ್ಮಕ ವಿಚಾರಗಳಲ್ಲಿಯೇ ಇದ್ದೇವೆ.ವಾಸ್ತವದತ್ತ ಕಣ್ಣು ತೆರೆದು ನೋಡುತ್ತಿಲ್ಲ


ನಮ್ಮ ದೇಶದ ಬಗ್ಗೆ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ‌.ನಮ್ಮದು ಬಹಳ ದೊಡ್ಡ ದೇಶ,ಬಹಳ ಸಂಪದ್ಭರಿತವಾದದ್ದು.ಇದು ದಿವಾಳಿಯಾಗಲಾರದು ಎಂದು.


 ರಾಮಾಯಣದ ಕಾಲದಲ್ಲಿಯೇ ಶ್ರೀಲಂಕಾ ಬಹಳ ಸಂಪದ್ಭರಿತವಾದ ದೇಶ ಸರ್ ,ರಾಮ ರಾವಣರ ಯುದ್ಧದ ನಂತರ ವಿಭೀಷಣನಿಗೆ ಪಟ್ಟಾಭಿಷೇಕವಾಗುತ್ತದೆ ನಂತರ ರಾಮ ಅಯೋಧ್ಯೆಗೆ ತೆರಳಲು ಸಿದ್ದನಾದಾಗ ವಿಭೀಷಣ ಇಲ್ಲಿ ಕೆಲವು ದಿನ ಇದ್ದು ಆತಿಥ್ಯವನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ತಾನೆ.ಆಗ ಲಕ್ಷ್ಮಣ ಕೂಡ ಈ ಲಂಕೆ ಸ್ವರ್ಣಮಯವಾಗಿದೆ ಇದನ್ನೆಲ್ಲ ನೋಡಿ ಮತ್ತೆ ಹೋಗೋಣ ಎಂಬ ಸಲಹೆ ಕೊಡ್ತಾನೆ

ಆಗ ರಾಮ

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ

(ಎಲೈ ಲಕ್ಷ್ಮಣನೇ  ಈ ಲಂಕೆಯು ಸುವರ್ಣಮಯವಾಗಿದ್ದರೂ ನನಗೆ ರುಚಿಸುವುದಿಲ್ಲ‌ ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ಹೇಳ್ತಾನೆ ಅಂದರೆ ಲಂಕೆ ಪ್ರಾಚೀನ ಕಾಲದಿಂದಲೂ ಸಂಪದ್ಭರಿತ ದೇಶವಾಗಿತ್ತು.ಭ್ರಷ್ಟ ರಾಜಕಾರಣಿಗಳು ಕೆಲವೇ ವರ್ಷಗಳಲ್ಲಿ ಬರಿದು ಮಾಡಿದ್ದಾರೆ.ಇದೇ ರೀತಿ ಉಚಿತ ಯೋಜನೆಗಳು ಮತ್ತು ಭ್ರಷ್ಟಾಚಾರ ಮುಂದುವರಿದರೆ ನಮ್ಮ ದೇಶವೂ ದಿವಾಳಿಯ ಅಂಚಿನಲ್ಲಿ ಬಂದು ನಿಲ್ಲಲು ಹೆಚ್ಚು ದಿನಗಳು ಬೇಕಾಗಿಲ್ಲ .ಭ್ರಷ್ಟರಿಗೆ ಸಂಪತ್ತನ್ನು ಖಾಲಿ ಮಾಡಲು ಎಷ್ಟು ಸಮಯ ಬೇಕು? ಕಡಿವಾಣ ಬೀಳದೇ ಇದ್ದರೆ..

ನಮ್ಮ ದೇಶ ಮೊಗೆದಷ್ಟೂ ಹೆಚ್ಚಾಗಲು ಅಕ್ಷಯ ಪಾತ್ರವಲ್ಲ.ಉಚಿತ ಕೊಡುಗೆಗಳು ಮತ್ತು ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ನಮಗೂ ಶ್ರೀಲಂಕಾದ ದುಸ್ಥಿತಿ  ಬರಲು ಹೆಚ್ಚು ಸಮಯ ಬೇಡ‌‌..ಹಾಗಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಕಲಿಯಬೇಕಿದೆ

ಡಾ.ಲಕ್ಷ್ಮೀ ಜಿ ಪ್ರಸಾದ್ 

ಕನ್ನಡ ಉಪನ್ಯಾಸಕರು

ಬೆಂಗಳೂರು 


No comments:

Post a Comment