Tuesday 14 November 2017

ಬದುಕೆಂಬ ಬಂಡಿಯಲಿ 2 ಮುನಿಯಮ್ಮ

ಮುನಿಯಮ್ಮನ ಕಥೆಯಲ್ಲ ವ್ಯಥೆ ಇದು

ಪರೀಕ್ಷಾ ಕಾರ್ಯ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿಗಳಾದ ಶ್ರೀಶ ,ಗೀತಾ ಬೇಗನೆ ಬಸ್ ನಿಲ್ದಾಣಕ್ಕೆ ಬಂದು ಆಗಷ್ಟೇ ಹೊರಟು ನಿಂತ ಬಸ್ ಗೆ ಹತ್ತಿದೆವು.ಮುಂದೆ ಸೀಟ್ ಇಲ್ಲದ ಕಾರಣ ಬಸ್ ನ ಹಿಂದಿನ ಸೀಟ್ ಗಳಲ್ಲಿ ಕುಳಿತಿದ್ದೆವು.ಜಾಲ ಹಳ್ಳಿ ಕ್ರಾಸ್ ಸಮೀಪ ಬಂದಾಗ ಮುಂದೆ ಒಂದೆರಡು ಸೀಟ್ ಗಳು ಖಾಲಿಯಾದವು.ನಾನು ಮುಂದೆ ಬಂದು ಒಬ್ಬ ಅಜ್ಜಿಯ ಪಕ್ಕ ಖಾಲಿ ಸೀಟಿನಲ್ಲಿ ಕುಳಿತೆ.ಅಜ್ಜೆ ಕಡೆ ನೋಡಿ  ನಗು ಬೀರಿದೆ.ಅಜ್ಜಿ ಮಾತನಾಡಲು ಶುರು ಮಾಡಿದರು.ಅವರ ಹೆಸರು ಮುನಿಯಮ್ಮ .ಗಂಡ ಮಕ್ಕಳು ಯಾರೂ ಇಲ್ಲ. ಇವರ ಗಂಡನ ಹೊಲವನ್ನು ಯಾರೋ ಸಂಬಂಧಿಗಳು ಒಳಗೆ ಹಾಕಿಕೊಂಡು ಮಾರಾಟ ಮಾಡಿದ್ದಾರೆ.ಕೂಲಿ‌ಕೆಲಸ ಮಾಡಿ ಬದುಕುತ್ತಾ ಇದ್ದರು.ಈಗ ವಯಸ್ಸಾಗಿ ಕೂಲಿ ಕೆಲಸ ಮಾಡಲು ಶಕ್ತಿ ಇಲ್ಲ‌.ಇದರಿಂದಾಗಿ ಈಗ ಇವರಿಗೆ ಊಟಕ್ಕೆ ಗತಿಯಿಲ್ಲದಾಗಿ ಭಿಕ್ಷೆ ಬೇಡುತ್ತಾರಂತೆ.ಏನೋ ಚಿಕಿತ್ಸೆ ಗಾಗಿ ನೆಲಮಂಗಲ ದಿಂದ ಎಂಟು‌ಮೈಲು ದೂರದ ಎಣ್ಸಿಗೇರಿ ಯಿಂದ ಬೆಂಗಳೂರಿಗೆ ಬಸ್ ನಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.ನನ್ನ ಪರ್ಸ್ ನಲ್ಲಿ ಇದ್ದ ಐನೂರು ರುಪಾಯಿ ದುಡ್ಡು ಕೊಟ್ಟು ಇನ್ನೇನಾದರು ಸಹಾಯ ಬೇಕಾದರೆ ಕಾಲೇಜಿಗೆ ಬರುವಂತೆ ಹೇಳಿ ಒಂದು ಕಾಗದದಲ್ಲಿ ನನ್ನ ಮೊಬೈಲ್ ನಂಬರ್ ಕಾಲೇಜು ವಿಳಾಸ ಬರೆದು ನೀಡಿದೆ.
ಇಂತಹ ಎಷ್ಟು ಮುನಿಯಮ್ಮರು ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಿಲ್ಲದೆ ಒದ್ದಾಡುತ್ತಿದ್ದಾರೋ ಏನೋ,ದೇವರೇ ಬಲ್ಲ

No comments:

Post a Comment