Monday 2 October 2017

ನಂಬಿದರೆ ನಂಬಿ ಇಲ್ಲವೇ ಬಿಡಿ ಆದರೆ ಇದು ನಡೆದದ್ದು ಸತ್ಯ

ಸುಮಾರು ಒಂದೂವರೆ ವರ್ಷದ ಹಿಂದೆ ಒಂದು ದಿನ ನಾನು ರೈಲು ಮೂಲಕ ಮಂಗಳೂರಿಗೆ ಹೋಗುವಾಗ ರೈಲಿನಲ್ಲಿ ಓರ್ವ ಚೆನ್ನೈ ಹೈಕೋರ್ಟ್ ವಕೀಲರು ಮಾತಿಗೆ ಸಿಕ್ಕರು,ಮಾತಿನ ನಡುವೆ ನನ್ನ ಆಸಕ್ತಿ ಯ ಕ್ಷೇತ್ರ ಭೂತಾರಾಧನೆ ಬಗ್ಗೆ ಹೇಳಿದೆ.ಕುತೂಹಲ ದಿಂದ ಅನೇಕ ಪ್ರಶ್ನೆ ಗಳನ್ನು ಕೇಳಿದರು.ನಂತರ ಅವರ ಮನೆಯಲ್ಲಿ ಕೆಲವು ಅಮುಲ್ಯ ವಸ್ತುಗಳು ಕಾಣೆಯಾದ ಬಗ್ಗೆ ತಿಳಿಸಿ ಇದನ್ನು ಹಿಂದೆ ಪಡೆಯಲು,ಕಳ್ಳ ಯಾರೆಂದು ತಿಳಿಯಲು ಯಾವ ದೈವಕ್ಕೆ ಹರಸಿಕೊಳ್ಳಬೇಕು ಎಂದು ಕೇಳಿದರು.ನಾವೆಲ್ಲರೂ  ಯಾವುದಾದರೂ ವಸ್ತು ಕಾಣೆಯಾದರೆ ಕೊರಗಜ್ಜ ದೈವಕ್ಕೆ ಹರಸಿಕೊಳ್ಳುತ್ತೇವೆ ಎಂದು ಹೇಳಿದೆ.ಹಾಗಾದರೆ ನಾನೂ ಕೊರಗಜ್ಜನಿಗೆ ಹರಿಕೆ ಹೇಳುತ್ತೇನೆ.ನಿಮ್ಮ ದೈವದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದರು, ನನ್ನ ಫೋನ್ ನಂಬರ್  ಇ ಮೇಲ್ ಅಡ್ರೆಸ್ ತಗೊಂಡಿದ್ದರು.
ನಂತರ ನನಗೆ ಈ ವಿಚಾರ ಮರೆತುಹೋಗಿತ್ತು.ಸುಮಾರು ಐದಾರು ತಿಂಗಳ ನಂತರ ಅವರಿಂದ ಒಂದು ಮೇಲ್ ಬಂತು.ಅದರಲ್ಲಿ ಅವರ ಮನೆಯಲ್ಲಿ ಕಳವು ಮಾಡಿದ ವ್ಯಕ್ತಿ ಯಾರೆಂದು ತಿಳಿಯಿತು.ನೀವು ಕೊರಗಜ್ಜ ದೈವದ ಬಗ್ಗೆ ಹೇಳಿದ್ದೆಲ್ಲವೂ ಸತ್ಯ ಎಂದು  ತಿಳಿಸಿದರು
ಭೂತಾರಾಧನೆ ಬಗ್ಗೆ ತಿಳಿಯದೇ ಇರುವ ದೂರದ ಚೆನ್ನೈ ಯ ವಕೀಲರು ಭಕ್ತಿಯಿಂದ ಪ್ರಾರ್ಥನೆ ಮಾಡಿದಾಗ ಅವರ ಕಷ್ಟವನ್ನು ದೂರ ಮಾಡಿದ ದೈವ ಕೊರಗಜ್ಜನ ಬಗ್ಗೆ ಏನು ಹೇಳಲಿ
ತುಳುವರ ಜನಾನುರಾಗಿ ದೈವ ಕೊರಗಜ್ಜ ©ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment