Monday 22 May 2017

ದೊಡ್ಡವರ ದಾರಿ : ಮಾದರಿ ವ್ಯಕ್ತಿತ್ವದ ಡಾ.ಜಿ ಎನ್ ಭಟ್

                   

ಯಾರು ಡಾ.ಜಿ ಎನ್ ಭಟ್ ? ಕರ್ನಾಟಕದ ಸಂಸ್ಕೃತ   ವಿಶ್ವ ವಿದ್ಯಾಲಯ ಆರಂಭವಾದಾಗ ವಿ ಸಿ ಹುದ್ದೆಗೆ ಇವರ ಹೆಸರು ಉಲ್ಲೇಖವಾದಾಗ ಜನರಿಗೆ ಅವರು ಯಾರು ಅಂತ ತಿಳಿಯಿತು.
ಮಂಗಳೂರಿನಲ್ಲಿ ರುವ ಪ್ರತಿಷ್ಠಿತ ಕೆನರಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಇವರು.ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ಇವರು .ಅಷ್ಟೇ ಆಗಿದ್ದರೆ ನಾನು ಅವರ ಬಗ್ಗೆ ಬರೆಯುತ್ತಾ ಇರಲಿಲ್ಲ.
ಮಂಗಳೂರು ವಿಶ್ವವಿದ್ಯಾನಿಲಯದ ದಲ್ಲಿ ಸಂಸ್ಕೃತ ಎಂ ಎ ಓದಲು ಅವಕಾಶವಿರಲಿಲ್ಲ .ಸಂಸ್ಕೃತ ಕಲಿಯುವ ಆಸಕ್ತಿ ಇದ್ದರೂ ದೂರದ ಬೆಂಗಳೂರು, ದಾರವಾಡ ಮೈಸೂರಿಗೆ ಹೋಗಿ ಕಲಿಯವುದು ಕಷ್ಟದ ವಿಚಾರ ವಾಗಿತ್ತು .ಜೊತೆಗೆ ಇಲ್ಲಿನ ಶಾಲಾ ಕಾಲೇಜುಗಳ ಲ್ಲಿ ಸಂಸ್ಕೃತ ಕಲಿಸಲು ಅಧ್ಯಾಪಕರ ಕೊರತೆ ಕಾಡಿತ್ತು .ಅನೇಕ ಸಂಸ್ಥೆ ಗಳು ಕಲಿಸುವ ಶಿಕ್ಷಕರು ಸಿಗದ ಕಾರಣ ಸಂಸ್ಕೃತ ವನ್ನು ತೆಗೆದು ಹಾಕುತ್ತಾ ಇದ್ದರು.
ಸಂಸ್ಕೃತ ದ ಮೇಲೆ ಅಪಾರ ಅಭಿಮಾನ ಪ್ರೀತಿ ಇದ್ದ ಡಾ.ಜಿ ಎನ್ ಭಟ್ ಅವರಿಗೆ ಇದು ತುಂಬಾ ನೋವಿನ ವಿಚಾರವಾಗಿತ್ತು .ಹಾಗಾಗಿ ಕಟೀಲ ಕಾಲೇಜಿನಲ್ಲಿ ಹರ ಸಾಹಸ ಮಾಡಿ ಸಂಸ್ಕೃತ ಎಂ ಎ ತರಗತಿ ಆರಂಭಿಸಿದರು.ಐದು ವರ್ಷದ ಒಪ್ಪಂದ ದ ಮೇರೆಗೆ ಅವರು ಕಟೀಲು ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ಬಂದರು ಕಟೀಲು ಡಿಗ್ರಿ ಕಾಲೇಜಿನಲ್ಲಿ ಮೊದಲಿಗೆ ಸಂಸ್ಕೃತ ವನ್ನು ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶ ಮಾಡಿದರು.ನಂತರ ಎಂ ಎ ತರಗತಿ ಅಲ್ಲಿಯೇ ಆರಂಭ ಮಾಡಿದರು.ಸಂಸ್ಕೃತ ಎಂ ಎ ತರಗತಿ ಏನೋ ಶುರು ಆಯ್ತು ಆದರೆ ಅದನ್ನು ಓದಲು ವಿದ್ಯಾರ್ಥಿಗಳ ಕೊರತೆ ಕಾಡಿತು.ಮೊದಲ ಬ್ಯಾಚ್ ನಲ್ಲಿ ಕೇವಲ  ಜನ ವಿದ್ಯಾರ್ಥಿಗಳು. ವರ್ಷಾಂತ್ಯ ವಾಗುತ್ತಿದ್ದರೂ ಮಂಗಳೂರು ಯುನಿವರ್ಸಿಟಿ ಯಿಂದ ಸಂಸ್ಕೃತ ಎಂ ಎ ಗೆ ಅಧಿಕೃತ ಪರವಾನಗಿ ಸಿಕ್ಕಿರಲಿಲ್ಲ ಜೊತೆಗೆ ಪಠ್ಯ ಏನು ಎತ್ತ ಎಂಬ ಬಗ್ಗೆ ಯೂ ಆತಂಕ‌! ಅಂತು ಇಂತು ಅನುಮತಿ ಸಿಕ್ಕಿ ಮೊದಲ ಬ್ಯಾಚ್ ನವರು ಪರೀಕ್ಷೆ ಬರೆದರು.ಎರಡನೆಯ ವರ್ಷಕ್ಕೂ ಐದು ವಿದ್ಯಾರ್ಥಿಗಳು.
ಮೂರನೇ ಬ್ಯಾಚ್ ನಮ್ಮದು .ಅದರಲ್ಲಿ ಇಪ್ಪತ್ತು ಜನ  ವಿದ್ಯಾರ್ಥಿಗಳ ಗಳು ಇದ್ದೆವು .ಇದರಲ್ಲಿ ಅಲ್ಲಿನ ಡಿಗ್ರಿ ಕಾಲೇಜಿ ನಲ್ಲಿ ಸಂಸ್ಕೃತ ವನ್ನು ಐಚ್ಛಿಕವಗಿ ಓದಿ ಬಂದ ಅನೇಕರು ಇದ್ದರು.ಅವರನ್ನು ನೋಡಿ ಕೊನೆ ಬೆಂಚಿನ ಹುಡುಗಿಯಾಗಿದ್ದ ನಮಗೆ ಆತಂಕವಾಗದೇ ಇದ್ದೀತೆ?
ಆ ಕಾಲ ನಮಗೂ ಕಷ್ಟದ ದಿನಗಳು. ಪ್ರಸಾದ್ ಗೆ ಸರಿಯಸದ ಕೆಲಸ ಇರಲಿಲ್ಲ. ನಾನು ಸಂಸ್ಕೃತ ಎಂಎ ಗೆ ಸೇರಲು ಹೋದಾಗ ಜಿ ಎನ್ ಭಟ್ಟರನ್ನು ಮೊದಲಬಾರಿಗೆ ನೋಡಿದೆ ಆಗ ಅವರಿಗೆ ಸುಮಾರು ನಲವತ್ತು ನಲುವತ್ತೈದರ ವಯಸು .ನೋಡಲು ಚೆನ್ನಾಗಿ ಇದ್ದರು ಮಾತು ಕೂಡ ಅಷ್ಟೇ ಚಂದ  ನಾನು ಸಂಸ್ಕೃತ ಎಂಎ ಸೇರಲು ಬಂದಿರುವೆನೆಂದು ತಿಳಿಸಿದಾಗ ಅಲಂಕಾರಶಾಸ್ತ್ರ  ಮತ್ತು ವೇದಾಂತ ಮತ್ತು ಅಲಂಕಾರ ಶಾಸ್ತ್ರ ಐಚ್ಛಿಕ ವಿಷಯಗಳಿವೆ ಯಾವುದು ಬೇಕು ಎಂದು ಕೇಳಿದರು.ಆ ಎರಡೂ ಶಬ್ದಗಳ  ಹೆಸರನ್ನು ಕೂಡ ಆ ತ‌ನಕ ನಾನು ಕೇಳಿಯೇ ಇರಲಿಲ್ಲ. ಬಹಳ‌ಗಾಬರಿಯಾಯಿತು    ಆಗ ನಮಗೆ ತುಂಬಾ ಕಷ್ಟದ ಸಮಯ ಪ್ರಸಾದ್ ಇದ್ದ ಒಳ್ಳೆಯ ಕೆಲಸ ಬಿಟ್ಟು ಊರಿಗೆ ಬಂದಿದ್ದರು ಮನೆ ಮಂದಿಯಿಂದ ಓದುವುದಕ್ಕೆ ಪ್ರಬಲ ವಿರೋಧ .ಹಾಗಾಗಿ ಬೇರೆ ಮನೆ ಮಾಡುವುದು ಅನಿವಾರ್ಯವಾಗಿತ್ತು ಪ್ರಸಾದ್ ನಂತರ ಮಂಗಳೂರಿನಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡರು.ಹಾಗಾಗ  ಸಂಸ್ಕೃತ ಎಂ ಎ ಓದಲು ಹೊರಟಾಗ ಇದ್ದಿದ್ದು ಒಳ್ಳೆಯ ಕೆಲಸ ಹಿಡಿಯುವುದು ಮಾತ್ರ .ಹಾಗಾಗಿ ಕೆಲಸ ಸಿಗಲು ಯಾವುದು ಒಳ್ಳೆಯ ದು ಎಂದು ಕೇಳಿದೆ ಆಗ ಅವರು ಅಲಂಕಾರ ಶಾಸ್ತ್ರ ತೆಗೆದುಕೊಳ್ಳಿ ಎಂದು ಹೇಳಿದರು .( ನಾನು ಮಾತ್ರ ಮುಂದೆ ವೇದಾಂತ ವನ್ನೇ ಆಯ್ಕೆ ಮಾಡಿದೆಅದು ಬೇರೆ ವಿಚಾರ)   ಶುಲ್ಕ 700ರೂ ತುಂಬ ಬೇಕಾಗಿತ್ತು ಅಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ. ಆಗ ಅದನ್ನು ಅರ್ಥ ಮಾಡಿಕೊಂಡ ಅವರು ನಿಮ್ಮ ಫೀಸ್ ಅನ್ನು ನಾನು ಕಟ್ಟುತ್ತೇನೆ.ಮುಂದೆ ನೀವು ದುಡ್ಡು ಆದಾಗ ಕೊಡಿ ಎಂದು ಹೇಳಿದರು .ಮತ್ತೆ ಒಂದು ವಾರದಲ್ಲಿ ನಾವು ಹೇಗೋ ದುಡ್ಡು ಹೊಂದಿಸಿ ಅವರಿಗೆ ತಂದು ಕೊಟ್ಟೆವು.
ಈ ನಡುವೆ ಸಂಸ್ಥೆ ಬೆಳೆಯುತ್ತಾ ಇದ್ದಂತೆ ಅನೇಕ ಸಮಸ್ಯೆ ಗಳು ಹುಟ್ಟಿಕೊಂಡವು ಜಿ ಎನ್ ಭಟ್ ಅವರು ತಮಗೆ ನ್ಯಾಯಯುತವಾಗಿ ಬರಬೇಕಿದ್ದ ಭಡ್ತಿ ಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾಯಿತು .ನೇರವಾ್ಇ ಇದ್ದುದನ್ನು ಇದ್ದ ಹಾಗೆ ಹೇಳುವ ನನಗೆ ಅಂತರ್ ಮೌಲ್ಯಮಾಪನ ಅಂಕ ನೀಡುವ ವಿಚಾರದಲ್ಲಿ ನನಗು ಅಲ್ಲಿನ ಉಪನ್ಯಾಸಕರಾದ ನಾಗರಾಜ್ ಅವರಿಗೂ ತಗಾದೆ ಹುಟ್ಟಿಕೊಂಡಿತು ಇಲ್ಲಿ ಪಕ್ಷ ಪಾತ ರಹಿತವಾಗಿ ಜಿ ಎನ್ ಭಟ್ ಅವರಯ ನನ್ನ ಪರವಾಗಿದ್ದರು.
ಅಂತೂ ಇಂತೂ ಸಂಸ್ಕೃತ ಎಂಎ ಯನ್ನು ಮೊದಲ ರಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಪಡೆದೆ.
ಮತ್ತೆ ಕೆಲಸದ ಹುಡುಕಾಟ.ಹತ್ತು ಜನ ಸಂಸ್ಥಾಪಕರಲ್ಲಿ  ಜಿ ಎನ್ಒ ಭಟ್ಬ್ಬ ಒಬ್ಬರಾಗಿದ್ದ ಶಾರದಾ ಶಾಲೆಯಲ್ಲಿ ಸಂಸ್ಕೃತ ಟೀಚರ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ದು ನಾವೆಲ್ಲರೂ ಅರ್ಜಿ ಸಲ್ಲಿಸಿದೆವು.ನಾನು ರಾಂಕ್ ವಿಜೇತೆಯಾಗಿದ್ದೆ.ಆದರೆ ಆ ಕೆಲಸ ನನ್ನ ಸಹಪಾಠಿ ರಮಿತಾಳಿಗೆ ಸಿಕ್ಕಿತು .ಮುಂದಿನ ಸಲ ನಿಮಗೆ ಕೊಡಿಸುವೆ ಎಂದು ಜಿ ಎನ್ ಭಟ್ ಅವರು ಹೇಳಿದರು .ಆದರೂ ರಾಂಕ್ ಬಂದ ನನ್ನನ್ನು ಬಿಟ್ಟ ಬೇರೆಯವರಿಗೆ ಕೊಟ್ಟದ್ದು ತುಂಬಾ ನೋವಾಗಿತ್ತು ನನಗೆ.ಮುಂದೆ ಕೆಲವೇ ದಿನಗಳಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದಲ್ಲಿ  ಕೆಲಸ ಸಿಕ್ತು  . ನಂತರದ ಒಂದೆರಡತ ತಿಂಗಳಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಉಪನ್ಯಾಸಕಿ ಹುದ್ದೆ ದೊರೆಯಿತು ಮತ್ತೆಂದೂ ನಾನು ಹಿಂದೆ ನೋಡಲಿಲ್ಲ ಕೆಲವು ವರ್ಷ ಅಲ್ಲಿ ಕೆಲಸ ಮಾಡಿ 2005 ರಲ್ಲಿ ಬೆಂಗಳೂರು ಬಂದೆ 2009 ರಲ್ಲಿ ಸರಕಾರಿ ಪಿಯು ಕಾಲೇಜಿಗೆ ಕನ್ನಡದ ಉಪನ್ಯಾಸಕಿ ಯಾಗಿ ಬೆಳ್ಳಾರೆಗೆ ಬಂದೆ .ಒಳ್ಳೆಯ ಶಿಕ್ಷಕಿಯಾಗಿ, ಲೇಖಕಿಯಾಗಿ ಸಂಶೋಧಕಿಯಾಗಿ ಜನ ಗುರುತಿಸಿದರು
ಇದೆಲ್ಲದರ ಗಿಂದೆ ಒಂದು ಗುಟ್ಟು ಇದೆ ಈಗ ರಟ್ಟು ಮಾಡುವೆ .ನಾನು ಜಿ ಎನ್ ಭಟ್ ಅವರನ್ನು ನೋಡಿದ ಮೊದಲ ದಿನವೇ ನನಗೆ ಅವರಷ್ಟು    ವಯಸ್ಸ್ ಆದಾಗ ನಾನೂ ಅವರಂತೆ ಆಗಬೇಕು ಎಂದು ಕೊಂಡಿದ್ದೆ ಅವರಷ್ಟು ಸಾಧಿಸಲು ಆಗಿಲ್ಲ ಆದರೆ ಭೂತಾರಾಧನೆಯ ಅಧ್ಯಯಯನ ಕ್ಷೇತ್ರದಲ್ಲಿ  ನನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವ ನಂಬಿಕೆ ಇದೆ
ಮಂಗಳೂರು ವಿಶ್ವವಿದ್ಯಾನಿಲಯದ ನೇಮಕಾತಿ ಯಲ್ಲಿ ನನಗೆ ಅನ್ಯಾಯವಾದಾಗ ಕೋರ್ಟಿಗೆ ಹೋಗಿ writ petitionಹಾಕಿ ಎಂದು ಸಲಹೆ ನೀಡಿದವರು ಕೂಡ ಅವರೇ.2012ರಲ್ಲಿ  ಕೆನರಾ ಮಹಾ ವಿದ್ಯಾಲಯ ದಲ್ಲಿ ಸಂಸ್ಕೃತ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಹೋಗುವಾಗ ನನಗೆ ಸ್ವಲ್ಪ ಅಳುಕು ಇತ್ತು ವಿದ್ಯಾರ್ಥಿನಿಯಾಗಿದ್ದಾಗ  ಮತ್ತು ನಂತರ ಎಲ್ಲೋ ಯಾವುದೋ ಸಂಸ್ಕೃತ ಕ್ಕೆ ಸಂಬಂಧ ಪಟ್ಟ ಮೀಟಿಂಗ್ ಒಂದರಲ್ಲಿ ಜಿ ಎನ್ ಭಟ್ ಅವರು ನನ್ನ ಬಗ್ಗೆ " ಅವಳು ಯಾರು ? ಯಃಕಶ್ಚಿತ್ ಲಕ್ಷ್ಮೀ, ಮರಾಠೆ ಉಪನ್ಯಾಸಕರುನೀವೇಕೆ ಲಕ್ಷ್ಮೀ ಪರ ಮಾತನಾಡಿದಿರಿ ( ಇವರು ಎಂಎ ಮೊದಲ ಬ್ಯಾ ಚ್ ವಿದ್ಯಾರ್ಥಿಯಾಗಿದ್ದು    ಕಟೀಲಿನಲ್ಲಿ ನಮಗೆ ಉಪನ್ಯಾಸಕ ರಾಗಿದ್ದರು)  " ಎಂದು ಹೇಳಿದರಂತೆ .ಹಾಗಾಗಿ ಸುಮಾರು ಹದಿನೈದು ವರ್ಷಗಳ ಕಾಲ ನಾನು ಅವರನ್ನು ಭೇಟಿಯಾಗಿರಲಿಲ್ಲ .ಹಾಗಾಗಿ ಸೆಮಿನಾರ್ ಗೆ ಹೋಗುವಾಗ ಅಳುಕಿತ್ತು .ಆದರೆ 'ಇವಾವುದು  ಸತ್ಯವಲ್ಲ ,ಯಾರದೋ ಚಾಡಿ ಮತುಗಳು 'ಎಂದು ತಮ್ಮ ಉದಾರ ಉನ್ನತ ವ್ಯಕ್ತಿತ್ವ ದಿಂದ ತೋರಿಸಿಕೊಟ್ಟರು ಅವರು.ದೊಡ್ಡವರುಯಾಕೆ ದೊಡ್ಡವರು ಎನಿಸಿಕೊಳ್ಳುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ವಾಗಿ ನನಗೆ ಕಂಡವರು ಡಾ ಜಿ ಎನ್ ಭಟ್ ಅವರು. ಸಭಾಂಗಣದಲ್ಲಿ ಹಿಂಭಾಗ ಕುಳಿತಿರುವುದನ್ನು ನೋಡಿ ಅವರನ್ನು ಅವಾಯ್ಡ್ ಮಾಡುವ ಸಲುವಾಗಿ ಎದುರಿನ ಬಾಗಿಲಿನಿಂದ ಹೋಗಿ ಜಾಗ ಇರುಬ
ವಲ್ಲಿ ಕುಳಿತೆ.ಆದಾಗ್ಯೂ ಅವರು ನಾನಿದ್ದಲ್ಲಿಗೆ ಬಂದು ಅಲ್ಲಿ ಖಾಲಿ  ಕುರ್ಚಿ ಇಲ್ಲದೆ ಇದ್ದರೂ ಬೇರೆ ಕಡೆ ಇದ್ದ ಕಾಲಿ ಕುರ್ಚಿ ತಂದು ನನ್ನ ಬಳಿ  ಹಾಕಿ ಕುಳಿತುಕೊಂಡು" ಲಕ್ಷ್ಮೀ ಒಳ್ಳೆಯ ಕೆಲಸ ಮಾಡುತ್ತಿದ್ದಿ‌ .ನಿನ್ನ ಬರಹಗಳನ್ನು ಓದುತ್ತಿರುತ್ತೇನೆ ಅದನ್ನು ಮುಂದು ವರಿಸು  .ನಿನ್ನ ಬಗ್ಗೆ    ಪ್ರಜಾವಾಣಿಯಲ್ಲಿ " ತುಳು ಜಾನಪದ ಸಂಶೋಧಕಿ - ಡಾ ಲಕ್ಷ್ಮೀ ಜಿ ಪ್ರಸಾದ ಎಂಬ    ಲೇಖನ ಓದಿರುವೆ.  ಒಳ್ಳೆಯ ಭವಿಷ್ಯ ವಿದೆ ನಿನಗೆ ಶುಭವಾಗಲಿ ಎಂದು ಹೆಳಿದರು .ಬರವಣಿಗೆ ಮುಂದುವರಿಸುಎಂದು ಹಿತ ನುಡಿದರು  ಆ ಬ್ಯುಸಿ ಕೆಲಸಗಳ ನಡುವೆಯೂ ನನ್ನ ಬಳಿಗೆ ಬಂದು ಮಾತಾಡಿದ ಪ್ರೌಢ ವ್ಯಕ್ತಿ ಯನ್ನು ನನ್ನ  ಗುರುಗಳನ್ನು. ಹೇಗೆ ತಾನೇ  ಮರೆಯಲಿ ?

No comments:

Post a Comment