Friday 15 June 2018

ಬದುಕ ಬಂಡಿಯಲಿ 22 ನಾನು‌ ಮತ್ತು ಮಗ ಬಚಾವಾಗಿದ್ದೆವು!

ನಾನು‌ ಮತ್ತು ಮಗ ಬಚಾವಾಗಿದ್ದೆವು!

ಇದನ್ನು ಓದುತ್ತಿದ್ದಂತೆ ಸುಮಾರು ವರ್ಷಗಳ ಹಿಮದಿನ ಘಟನೆ ನೆನಪಾಯಿತು!
.ಸುಮಾರು ಹದಿನೇಳು ವರ್ಷಗಳ ಹಿಂದಿನ‌ಕಥೆಯಿದು.ಮಗ ಅರವಿಂದ್ ಇನ್ನೂ ಎರಡು ಮೂರು ವರ್ಷದ ಮಗು.
ನಾವಾಗ ಮಂಗಳೂರಿನಲ್ಲಿ ಇದ್ದೆವು.ಒಂದು ದಿನ ತಾಯಿ ಮನೆಗೆ ಮಗನ ಜೊತೆ ಹೊರಟಿದ್ದೆ.ಹಾಗಾಗಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಖಾಸಗಿ ವೇಗದೂತ ಬಸ್ಸನ್ನು ಹತ್ತಿದ್ದೆ.
ಬಸ್ ಪಂಪ್ ವೆಲ್ ತಲುಪಿದಾಗ ಬಸ್ ಹತ್ತಿದ ಒಬ್ಬ ವ್ಯಕ್ತಿ ಮತ್ತು ಡ್ರೈವರ್ ನಡುವೆ ಜಗಳ ಶುರುವಾಯಿತು‌.ಒಬ್ಬರಿಗೊಬ್ಬರು ಬೈದಾಡುತ್ತಿದ್ದರು‌.ಜಗಳವಾಡುತ್ತಲೇ ಡ್ರೈವರ್ ಬಸ್ಸನ್ನು ಯದ್ವಾ ತದ್ವಾ ಚಾಲನೆ ಮಾಡುತ್ತಿದ್ದರು‌.ಬಸ್ ನ ಕಂಡಕ್ಟರ್ ಅನ್ನು ಕರೆದು " ಅವರ ಜಗಳವನ್ನು ನಿಲ್ಲಿಸಿ,ಜಗಳ ನಿಂತ ನಂತರ ಬಸ್ಸು ಚಾಲನೆ ಮಾಡಲು ಹೇಳಿ" ಎಂದು ವಿನಂತಿಸಿದೆ‌.ಆತ ಒಮ್ಮೆ ಅವರಿಗೆ ತಿಳಿ ಹೇಳಲು ಯತ್ನ ಮಾಡಿದನಾದರೂ ಪ್ರಯೋಜನವಾಗದೆ ಕೊನೆಗೆ ಹಿಂದೆ ಹೋಗಿ ನಿಂತರು
ಆಗ ಅಲ್ಲಿದ್ದ ಸ್ವಲ್ಪ ವಿದ್ಯಾವಂತರಂತೆ ಕಾಣುತ್ತಿದ್ದ ಪ್ರಯಾಣಿಕರಾದ ಒಬ್ಬರಲ್ಲಿ " ನೋಡಿ ಇವರು ಹೀಗೆ ಡ್ರೈವ್ ಮಾಡಿದರೆ ನಾವು‌ಮನೆ ತಲುಪಲಾರೆವು .ಅವರಿಗೆ ಬಸ್ ಸೈಡಿಗೆ ಹಾಕಲು ಹೇಳಿ ಎಂದು ತಿಳಿಸಿದರ ಆಗ ಅವರು ಒಮ್ಮೆ ಎದ್ದು ನಿಂತರಾದರೂ‌ ಮತ್ತೆ ಅಳುಕಿ ಪೇಪರ್ ಓದತೊಡಗಿದರು.ಅಷ್ಟರಲ್ಲಿ ತೊಕ್ಕೋಟು ಬಂತು.ಅಲ್ಲಿ ಬಸ್ ಸ್ಟಾಪ್ ಇದೆ‌ಬಸ್ ನಿಂತ ತಕ್ಷಣ ನಾನು‌ಮಗನನ್ನು ಎತ್ತಿಕೊಂಡು ಇಳಿದೆ .
ನಾನು ಹೊಸಂಗಡಿ ತನಕ ಟಿಕೆಟ್ ತೆಗೆದುಕೊಂಡಿದ್ದೆ‌.ಆದರೆ ಆ ಬಸ್ ನಲ್ಲಿ ಮುಂದುವರಿಯುವುದು ಅಪಾಯ ಎನಿಸಿ ಅರ್ಧದಲ್ಲಿಯೇ ಇಳಿದೆ‌ನಂತರ ಬಂದ ಬಸ್ ಹತ್ತಿ ಮತ್ತೆ ಹೊಸಂಗಡಿಗೆ ಟಿಕೆಟ್ ತೆಗೆದೆ.ನಾನಿದ್ದ ಬಸ್ ತಲಪಾಡಿ ಸಮೀಪಿಸುವಷ್ಟರಲ್ಲಿ ರಸ್ತೆ ಇಡೀ ಜಾಮ್ ಅಗಿತ್ತು‌ .ಜನರೆಲ್ಲ ಗಾಭರಿಯಿಂದ ಅತ್ತ ಇತ್ತ‌ಓಡಾಡುತ್ತಿದ್ದರು.
ಹೌದು‌ ಮೊದಲು ನಾನಿದ್ದ ಬಸ್ ಭೀಕರ ಅಫಘಾತಕ್ಕೆ ಈಡಾಗಿತ್ತು .ರಸ್ತೆಯಿಂದ ಉರುಳಿ ಗದ್ದೆಗೆ ಬಿದ್ದಿತ್ತು‌.ಅ ಬಸ್ ನಲ್ಲಿ ಇದ್ದಿದ್ದೇ ಹತ್ತು ಹದಿನೈದು ಜನರು‌.ಅವರಲ್ಲಿ ಏಳೆಂಟು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.ಎಲ್ಲರಿಗೂ ಗಾಯವಾಗಿತ್ತು‌
ಸದ್ಯ ನನ್ನನ್ನು ‌ಮತ್ತು ಮಗನನ್ನು ದೇವರೇ ಕಾಪಾಡಿರಬೇಕು ನಾವು ತೊಕ್ಕೋಟಿನಲ್ಲಿ ಇಳಿಯದೆ ಅದೇ ಬಸ್ಸಿನಲ್ಲಿ ಮುಂದುವರಿದಿದ್ದರೆ ನಮಗೂ ಇದೇ ಗತಿ ಆಗಿರುತ್ತಿತ್ತು‌.ನನಗೆ ಇಳಿಯುವಂತೆ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು‌.ಇದು ಸಮಯ ಪ್ರಜ್ಞೆಯೇ ಆಯುರ್ಬಲವೋ ನನಗೆ ತಿಳಿಯದು .ಅದೇನೇ ಇದ್ದರೂ ನಾವು ಆ ದಿನ ಅಪಾಯದಿಂದ ಬಚಾವಾಗಿದ್ದೆವು.

No comments:

Post a Comment