Friday 21 December 2018

ದೊಡ್ಡವರದಾರಿ : ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಕೆ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ


ನಮ್ಮ ನಮ್ಮ ಕನಸುಗಳ ಈಡೇರಿಕೆಗಾಗಿ ಸಾಧನೆ ಮಾಡುವವರು ನೂರಾರು ಮಂದಿ ಇದ್ದಾರೆ ಆದರೆ ತಮ್ಮ ಸರ್ವಸ್ವವನ್ನೂ ಸಮಾಜ ಸೇವೆಗೆ ಮುಡಿಪಾಗಿಡುವವರ ಸಂಖ್ಯೆ ತೀರಾ ಕಡಿಮೆ..ಹೀಗೆ ಸಮಾಜ ಸೇವೆಗಾಗಿ ಅನಾಥ ಬಡ ಮಕ್ಕಳಿಗಾಗಿ ಸ್ವಂತ ಮನೆ ಸೈಟುಗಳನ್ನು  ಮಾರಾಟ ಮಾಡಿ ತಮ್ಮನ್ನು ಸಮಾಜ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಹಲವರಿಗೆ ದಾರಿ ದೀಪ ವಾದವರು ಪದ್ಮಾ ಕೆ ಭಟ್  ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ  ನನ್ನ್ನುಯ ನಾಮಿನೇಟ್ ಮಾಡಿದವರು ಕೂಡ ಇವರು.ನನ್ನ ಸಾಧನೆಯ ಬಗ್ಗೆ ಮನವರಿಕೆ ಮಾಡಿಸಿದವರು ಕೂಡ ಇವರು.ವಿವಾಹಾನಂತರ ಸಮಾಜದ ಕಟ್ಟುಪಾಡುಗಳನ್ನು ಮೀರಿ ಓದಿ ಸಾಧನೆಯ ದಾರಿ ಹಿಡಿದ ನನಗೆ ಅನೇಕ ಶತ್ರು ಗಳು ಕೂಡ ಇದ್ದಾರೆ. ನನಗೆ ಬಂದಂತಹ ಒಂದು ಮಾಹಿತಿ ಪ್ರಕಾರ ಇಂತಹವರಲ್ಲಿ ಯಾರೋ ಕೆಲವರು ನನ್ನ ಪತಿ ಗೋವಿಂದ ಪ್ರಸಾದ ಹವ್ಯಕರೆಂದು ಗೊತ್ತಿದ್ದರೂ ಕೂಡ ಅವರಯ ಹವ್ಯಕರಲ್ಲವೆಂದು ಹೇಳಿ,ಪ್ರಶಸ್ತಿ ಬಾರದಂತೆ ಮಾಡಲು ಯತ್ನ ಮಾಡಿದರಂತೆ..ಆಗ ನನ್ನ ಪತಿ ಗೋವಿಂದ ಪ್ರಸಾದರು ಹವ್ಯಕರೆಂದು ತಿಳಿಸಿ ನನ್ನ ಪರ ನಿಂತವರು ಪದ್ಮಾ ಭಟ್ .
ಇವರು ನಿಜಕ್ಕೂ ನನಗಿಂತ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ನನ್ನ ಅಭಿಪ್ರಾಯ ಹಾಗಾಗಿ ನಾನು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದೆ,ಅವರು ಸಮಾಜ ಸೇವೆ ವಿಭಾಗದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ಗೆ ಆಯ್ಕೆ ಆಗಿರುವರೋ ಇಲ್ಲವೋ ನನಗೆ ತಿಳಿಯದು . ಸಾಧನೆಯ ಹಾದಿ ಹೂ ಹಾಸಿನದು ಅಲ್ಲ.ಅಲ್ಲಿ ಕಲ್ಲು ಮುಳ್ಳುಗಳೇ ಹೆಚ್ಚಿರುತ್ತವೆ.ನನ್ನಂತೆ ಅವರು ಕೂಡ ಆರೋಪಗಳಿಗೆ ಒಳಗಾಗಿರಬಹುದು .ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ನಿಶ್ಚಿತ  ಹಾಗಾಗಿ  ಅವರು ನಿಜಕ್ಕೂ ಹವ್ಯಕ ರತ್ನ
ಹಾಗಾಗಿ ಅವರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಒಂದು ಬರಹ ಬರೆದಿದ್ದೆ.ಅವರ ಸಂಕ್ಷಿಪ್ತ ಪರಿಚಯವನ್ನು ಇನ್ನೊಮ್ಮೆ ನೀಡಲು ನಾನು ಹೆಮ್ಮೆ ಪಡುತ್ತೇನೆ.

ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ನ ಸಂಸ್ಥಾಪಕಿ ಪದ್ಮಾ ಕೆ ಭಟ್‍ರವರ ಕಿರುಪರಿಚಯ:

ಪದ್ಮಾ ಕೆ.ಭಟ್ ರವರು ಕಳೆದ ಸುಮಾರು ಹದಿನೆಂಟು ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಶ್ರೀ ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್(ರಿ) ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ, ಅನಾಥ ಮತ್ತು ಬಡ ಮಕ್ಕಳ ಆಶ್ರಮ,  ವೃದ್ಧಾಶ್ರಮ, ಮಹಿಳಾ ಸೇವಾಶ್ರಮ, ನಿತ್ಯ ಅನ್ನದಾನ ಇತ್ತಯಾದಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು   "ಆಸರೆ " ಅನ್ನುವ  ಹೆಸರಿನಡಿ  ನಡೆಸುತ್ತಿದ್ದಾರೆ..ಇಲ್ಲಿ 1ರಿಂದ 10ನೇ ತರಗತಿಯತನಕ ಬಡ ಮಕ್ಕಳಿಗೆ ಉಚಿತ ಊಟ, ವಸತಿ, ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ನ್ನು ನೀಡಿದ್ದಾರೆ.. “ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯ”ವನ್ನು ಮೈಸೂರು ರಸ್ತೆಯ ಚಳ್ಳಘಟ್ಟ ಎಂಬಲ್ಲಿ ಪ್ರಾರಂಭಿಸಿ,, 1ರಿಂದ 5ನೇ ತರಗತಿಯತನಕದ ಪುಟ್ಟ ಮಕ್ಕಳಿಗೆ ಆಶ್ರಮದ ಆವರಣದಲ್ಲೇ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿದ್ದಾರೆ..

ಸತ್ಯ,ನ್ಯಾಯ, ಧರ್ಮಕ್ಕಾಗಿ ಹೋರಾಟ...ಮಹಿಳೆಯರ, ಬಡವರ ಮತ್ತು ನೊಂದವರ ಮುಖವಾಣಿಯಾಗಿ..ರಾಜಧಾನಿ ಎಕ್ಸ್‍ಪ್ರಸ್, ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಮಾಧ್ಯಮ ಬಲಯದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ...
ಶ್ರೀ ನಾಗಬ್ರಹ್ಮ ದೇವಸ್ಥಾನ, ನಾಗದೇವನಹಳ್ಳಿ, ಬೆಂಗಳೂರು ಇದರ ಸಂಸ್ಥಾಪಕ ಧರ್ಮದರ್ಶಿಗಳಾಗಿ, ಮಹಿಳಾ ಉದ್ಯಮಿಯಾಗಿ ...ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಪದ್ಮಾ ಕೆ.ಭಟ್ ರವರು ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆ ಮತ್ತು ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯದ ಮೂಲಕ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ವಸತಿ, ಆರೋಗ್ಯ ತಪಾಸಣೆಯ ಜೊತೆಗೆ, ನುರಿತ ಶಿಕ್ಷಕರಿಂದ ಪಾಠ, ನೃತ್ಯ, ಸಂಗೀತ, ಸಾಂಸ್ಕøತಿಕ ಕ್ರೀಡೆಗಳು ಹೀಗೆ ಹಲವು ಆಯಾಮಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಸಮಾಜದಲ್ಲಿ ಬಡ ಮಹಿಳೆಯರಿಗಾಗಿ ಸ್ವ-ಉದ್ಯೋಗ ತರಬೇತಿ ಶಿಬಿರಗಳು, ಮಹಿಳಾ ಅಬಲಾಶ್ರಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಪದ್ಮಾ ಕೆ.ಭಟ್ ರವರು ನಾಗದೇವನಹಳ್ಳಿಯಲ್ಲಿ ಶ್ರೀ ನಾಗಬ್ರಹ್ಮ ದೇವಸ್ಥಾನವನ್ನು ಕಟ್ಟಿಸಿ, ನಿತ್ಯ ಪೂಜೆಯ ಜೊತೆಗೆ, ಪ್ರತೀ ತಿಂಗಳು ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲಿ ಆಶ್ಲೇಷ ಬಲಿ ಪೂಜೆ,ಹೋಮ..ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನವನ್ನು ನಡೆಸುತ್ತಿದಾರೆ.                                                                   
ಮೂಲತಃ ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರು ತಾಲೂಕಿನ “ಕಾವು” ಎಂಬ ಹಳ್ಳಿಯವರಾದ  ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ದಿ|| ಕಾವು ಕೃಷ್ಣಾಭಟ್ ಮತ್ತು ದೇವಕಿ ದಂಪತಿಯ ಮೊದಲ ಮಗಳಾದ ಪದ್ಮಾ ಕೆ ಭಟ್, ಪುತ್ತೂರು ತಾಲೂಕಿನ ಪೆರ್ನಾಜೆಯ ಶ್ರೀ ಸೀತಾರಾಘವ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು  ಮುಗಿಸಿ, 2 ವರ್ಷಗಳ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೊಮೊ ಇನ್ ಟೆಲಿಕಮ್ಯುನಿಕೇಷನ್ ಇಂಜನಿಯರಿಂಗ್ ಮುಗಿಸಿ, 1987 ರಲ್ಲಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಮೆ|| ಬಿಹೆಚ್‍ಇಎಲ್‍ನಲ್ಲಿ ಡಿಪ್ಲೊಮೊ ಅಪ್ರೆಂಟೀಸ್ ಟ್ರೈನಿಯಾಗಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರ “ಸ್ತ್ರೀ ಶಕ್ತಿ ಪ್ಯಾಕೇಜ್” ಎಂಬ ಮಹಿಳಾ ಉದ್ಯಮಶೀಲತಾ ತರಬೇತಿ ಮುಗಿಸಿ 1991ರಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ “ನಿಯೋ ಶಾರ್ಪ್ ಇಂಜಿನಿಯರಿಂಗ್ ಟೆಕ್ನಾಲಜೀಸ್” ಎಂಬ ಸಣ್ಣ ಕೈಗಾರಿಕೋದ್ದಿಮೆಯನ್ನು ಪ್ರಾರಂಭಿಸಿದರು. ಇಂದು 30ಜನ  ಕಾರ್ಮಿಕರಿಗೆ ಜೀವನೋಪಾಯ ಕಲ್ಪಿಸಿ ಯಶಸ್ವೀ ಮಹಿಳಾ ಉದ್ಯಮಿಯೆನಿಸಿಕೊಂಡಿದ್ದಾರೆ.
ಒಬ್ಬ ಮಹಿಳೆಯಾಗಿ, ಮಹಿಳಾ ಉದ್ಯಮಿಯಾಗಿ  ಸಮಾಜ ಸೇವೆಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು, ಯಾರ ನೆರವೂ ಇಲ್ಲದೇ ಮತ್ತು ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯದೇ ಅನೇಕ ಬಡ ಮಕ್ಕಳ, ನಿರ್ಗತಿಕ ಮಹಿಳೆಯರ ಮತ್ತು ನೊಂದವರ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ, ನಿಸ್ವಾರ್ಥವಾಗಿ  ಶ್ರಮಿಸುತ್ತಿದ್ದಾರೆ.
ಇವರ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ ಇವರಿಗೆ 2005 ರಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ರೋಟರಿ ಕ್ಲಬ್, ಮೈಸೂರು ಉತ್ತರ ಇವರಿಂದ ಸನ್ಮಾನ, ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಕೆಂಗೇರಿ ಉಪನಗರ ಇವರಿಂದ 2009ರಲ್ಲಿ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ,2011ರಲ್ಲಿ ಅಭಿಮಾನಿಗಳ ಸಂಗಮ(ರಿ) ಇವರಿಂದ ಶಿರ್ಡಿ ಶ್ರೀ ಸಾಯಿಬಾಬ ನ್ಯಾಷನಲ್ ಅವಾರ್ಡ್, ಜನ್ಮಭೂಮಿ ಸಾಂಸ್ಕøತಿಕ ಮತ್ತು ನಾಗರಿಕರ ವೇದಿಕೆ(ರಿ) ಇವರಿಂದ ಆದರ್ಶ ರತ್ನ ಪ್ರಶಸ್ತಿ, ಸ್ಪಂದನಾ ಸೇವಾ ಸಂಸ್ಥೆ(ರಿ) ಇವರಿಂದ ಸಾಮಾಜಿಕ ಸೇವಾ ಸ್ಪಂದನ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಪೊಲೀಸ್ ಪತ್ರಿಕೆಯ ವತಿಯಿಂದ ಅತ್ಯುತ್ತಮ ನಾಗರಿಕ ಪ್ರಶಸ್ತಿ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ(ರಿ) ಇವರಿಂದ 2012 ನೇ ಸಾಲಿನ ಕಡಲ ತೀರದ ಭಾರ್ಗವ ಡಾ|| ಕೆ.ಶಿವರಾಮ ಕಾರಂತರ ಸದ್ಭಾವನಾ ರಾಜ್ಯ ಪ್ರಶಸ್ತಿ, 2013 ರಲ್ಲಿ ಸುರಕ್ಷಾ ಸೇವಾಶ್ರಮ(ರಿ) ಇವರಿಂದ ಸುರಕ್ಷಾ ರಾಜ್ಯ ಪ್ರಶಸ್ತಿ, ಶಾರದಾ ಕಲಾನಿಕೇತನ(ರಿ) ಇವರಿಂದ ಸಮಾಜಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ಇತ್ಯಾದಿ ಹಲವಾರು ಸಂಘ-ಸಂಸ್ಥೆಗಳು ಅಭಿನಂದನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇವರ ಸಂದರ್ಶನ ಕಾರ್ಯಕ್ರಮಗಳು ಚಂದನ(ಡಿ.ಡಿ.9), ಈ-ಟಿವಿ,(ಇಂದಿನ ಕಲರ್ಸ್) ಸುವರ್ಣವಾಹಿನಿ ಇತ್ಯಾದಿ ಹಲವಾರು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಈ ರೀತಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪದ್ಮಾ ಕೆ ಭಟ್ ರವರು ತಮ್ಮ ಬದುಕನ್ನು “ಇತರರಿಗಾಗಿ ಮೀಸಲಿಟ್ಟಿದ್ದಾರೆ” ಎಂದರೆ ಅತಿಶಯೋಕ್ತಿಯಲ್ಲ. “ಮಾನವತೆಯ ಸೇವೆಯೇ ಜೀವನದ ಅತ್ಯುತ್ತಮ ಸೇವೆ” ಎಂಬ ಜೇಸಿ ಸಂಸ್ಥೆಯ 10ನೇ ಧ್ಯೇಯ ವಾಣಿಯಂತೆ ನಂಬಿ ನಡೆಯುತ್ತಿರುವ ಎಲೆ ಮರೆಯ ಕಾಯಿ ಇವರು. ಇವರ ಈ ಎಲ್ಲಾ ಸೇವೆಯನ್ನು ಸರ್ಕಾರ,ದಾನಿಗಳು ಗುರುತಿಸಿ ಇವರ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವಿನ ಹಸ್ತದೊಂದಿಗೆ ಬೆಂಬಲಿಸಿದರೆ ಇವರಿಂದ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಬಹುದು.
 ,ಎಲ್ಲರೂ ಈ ಸಂಸ್ಥೆಗೆ ಉದಾರವಾಗಿ ಸಹಾಯ ಮಾಡಿ ಹೇಳಿ ಪದ್ಮಕ್ಕನ ಪರವಾಗಿ ನಾನು ಕೇಳಿಗೊಳ್ಳುತ್ತೇನೆ
ಈ ಸಂಸ್ಥೆ ಗೆ ಕೊಟ್ಟ ದುಡ್ಡಿ ಗೆ ಟ್ಯಾಕ್ಸ್ ವಿನಾಯತಿ ಇದ್ದು ಇವರ ಅಕೌಂಟ್ ನಂಬರ್ ಪೋನ್ ನಂಬರ್ ಗಳನ್ನು ಇಲ್ಲಿ ಕೊಡುತ್ತೇನೆ Please send your contributions to
Sri Satya Sai Mahila charitable trust (R)

SB a/c no 559010100076216
Ifs code : UTIB0000559
Axis Bank,
Rajajinagar Branch, Bangalore-10

Regards
Padmaa Bhat
Mob: 8884572149/9844540380

No comments:

Post a Comment