Monday 28 March 2016

ಹೆತ್ತವರು ಮತ್ತು ಶಿಕ್ಷಕರೆಲ್ಲರೂ ನೋಡಲೇ ಬೇಕಾದ ಸಿನೆಮ -ಕಾಡ ಹಾದಿಯ ಹೂಗಳು -ಡಾ.ಲಕ್ಷ್ಮೀ ಜಿ ಪ್ರಸಾದ

 




ತಂದೆ ಇಂಜಿನಿಯರ್ ತಾಯಿಯೂ ವಿದ್ಯಾವಂತೆ ಉದ್ಯೋಗಸ್ಥೆ ,ಇಂಗ್ಲಿಷ್ ಶಿಕ್ಷಣ ಮಾತ್ರ ಭವಿಷ್ಯವನ್ನು ತಂದು ಕೊಡುತ್ತದೆ ಎಂಬ ಭ್ರಮೆ ಇಬ್ಬರಿಗೂ .ಇವರಿಗೆ ಒಬ್ಬಳೇ ಒಬ್ಬ ಮಗಳು ಹನಿ ಹನ್ನೆರಡರ ಪೋರಿ ,ಮಾನವೀಯ ಗುಣಗಳುಳ್ಳ ,ನೇರಮಾತಿನ ಮುಗ್ದೆ ,ತುಂಬಾ ಬುದ್ದಿವಂತೆ ಕೂಡ .
ತಂದೆಗೆ ಮಗಳು ಇಂಜಿನಿಯರ್ ಅಗಲಿ ಎಂಬ ಕನಸು ತಾಯಿಗೆ ಮಗಳು ವೈದ್ಯೆ ಅಗಲಿ ಎಂಬ ಕನವರಿಕೆ .ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದಲೇ ಒಂದು ಲಕ್ಷ ರು ಡೊನೇಷನ್ ನೀಡಿ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ .ಅಲ್ಲಿ ಓರ್ವ ಶಿಕ್ಷಕಿ ಅವರಿಗೊಂದು ಸಾಮನ್ಯ ಬುದ್ದಿವಂತಿಕೆಯ ಮಗಳು ಸ್ವಾತಿ .ಈಕೆ ಮತ್ತು ಹನಿ ಇಬ್ಬರೂ ಒಟ್ಟಿಗೆ ಏಳನೇ ತರಗತಿಯಲ್ಲಿ ಓದುತ್ತಾರೆ.
ಜಾಣೆ ಹುಡುಗಿ ಹನಿ ಬಗ್ಗೆ ಮತ್ಸರ ತಾಳುವ ಸ್ವಾತಿ ತಾಯಿಯ ಮೂಲಕ ತನ್ನ ದ್ವೇಷ ಸಾಧನೆ ಮಾಡ ತೊಡಗುತ್ತಾಳೆ .ತನ್ನ ಮಗಳಿಗಿಂತ ಬುದ್ದಿವಂತೆ ಹನಿ ಬಗ್ಗೆ ಆ ಶಿಕ್ಷಕಿಗೂ ತೀರದ ಅಸಹನೆ, ಮಾತು ಮಾತಿಗೆ ಅವಮಾನ ಕಾರಣ ಹುಡುಕಿ ಶಿಕ್ಷೆ ಬೈಗಳು !.ಕ್ರಮೇಣ ಹನಿ ಶಾಲೆಗೆ ಹೋಗುವ .ಕಲಿಯುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾಳೆ .
ಶಾಲೆಯಲ್ಲಿ ಕನ್ನಡ ಮಾತಾಡಿದ್ದಕ್ಕೆ ನೂರು ರು ದಂಡ ಕಟ್ಟಲು ಹೇಳಿದಾಗ ಮನೆಯಲ್ಲಿ ತಿಳಿಸಲು ಅಳುಕಿ ತಾಯಿಯ ಪರ್ಸ್ ನಿಂದ ದುಡ್ಡು ಕದಿಯುತ್ತಾಳೆ .ಜೊತೆಗೆ ತಾನು ದುಡ್ಡು ಕದ್ದಿದ್ದು ಕೆಲಸದಾಕೆಯ ಮೇಲೆ ಆರೋಪ ಬಂದು ಆಕೆ ಹೊಡೆದರೆ ?ಎಂದು ಹೆದರುತ್ತಾಳೆ ಕೂಡ .
ಹೀಗೆ ದಿನ ದಿನವೂ ತಲ್ಲಣಕ್ಕೆ ಈಡಾಗುತ್ತಲೇ ಸಾಗುವ ಅವಳಿಗೆ ದಿನನಿತ್ಯ ಜಗಳವಾಡುವ ಪ್ರಸಂಗಗಳು ಎದುರಾಗುತ್ತವೆ. .ಇದರೊಂದಿಗೆ ಅಲ್ಲಿಯೇ ಸಮೀಪದಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದುವ ಹುಡುಗನ ಪರಿಚಯವೂ ಆಗಿ ಅವಳ ಮನಸು ಕನ್ನಡ ಶಾಲೆಯ ಕಡೆಗೆ ತುಡಿಯುತ್ತದೆ .
ಒಂದು ದಿನ ನೆನಪಿನ ಶಕ್ತಿ ಸ್ಪರ್ಧೆಯಲ್ಲಿ 24 ರಲ್ಲಿ 24 ವಸ್ತುಗಳ ಹೆಸರುನ್ನೂ ಹನಿ ಬರೆದಿರುತ್ತಾಳೆ. ಸ್ವಾತಿ ಹದಿನೆಂಟು ಬರೆದಿರುತ್ತಾಳೆ .ಬಹುಮಾನಿತರ ಹೆಸರನ್ನು ಹಾಕಿದಾಗ ಸ್ವಾತಿಗೆ ಮೊದಲ ಬಹುಮಾನವಿತ್ತು. ಆಗ ಹನಿ ಈ ಬಗ್ಗೆ ತಕರಾರು ಎತ್ತುತ್ತಾಳೆ ,ತಾನು"24 ಬರೆದಿದ್ದೆ ,ತನಕೆ ಮೊದಲ ಬಹುಮಾನ ಬರಬೇಕಿತ್ತು" "ಎನ್ನುತ್ತಾಳೆ.ಆದರೆ ಅವಳ ಹೆಸರೇ ಸ್ಪರ್ಧಿಗಳ ಪಟ್ಟಿಯಲ್ಲಿ ಇರುವುದಿಲ್ಲ ,ಮತ್ತು ಅವಳು ಉತ್ತರಿಸಿದ ಹಾಳೆ ಕೂಡ ಇರುವುದಿಲ್ಲ .ಕೊನೆಗೆ ಇದು ಮುಖ್ಯೋಪಾಧ್ಯಾಯಿನ ಬಳಿಗೆ ಈ ವಿಚಾರ ಹೋದಾಗ ಅವರು ಹಾಗಾದರೆ ಅವಳು ಮತ್ತೊಮ್ಮೆ ಆ 24 ಹೆಸರುಗಳನ್ನೂ ಬರೆಯಲಿ ಎಂದು ಹೇಳಿ ಬಿಳಿ ಹಾಳೆಯನ್ನು ನೀಡುತ್ತಾರ,ತೀವ್ರ ಅವಮಾನಕ್ಕೆ ಗುರಿಯಾದ ಅವಳಿಗೆ ಉತ್ತರಿಸಲು ಸಾಧ್ಯವಾಗದೆ ಅಳುತ್ತಾಳೆ .ಕೊನೆಗೆ ಬುದ್ಧಿವಂತೆ ಹುಡುಗಿಗೆ ಮಾನಸಿಕ ಸಮಸ್ಯೆ ಇದೆ ಎಂಬಂತೆ ಮಾತಾಡುತ್ತಾರೆ!
ಹೀಗೆ ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುವ ಅವಳಿಗೆ ಒಂದಿನ ಹೆತ್ತವರನ್ನು ಕರೆದುಕೊಂಡು ಬರುವಂತೆ ಹೇಳುತ್ತಾರೆ .
ಅಂದು ಅವಳು ಮನೆಗೆ ಹೋಗದೆ ಎಲ್ಲೋ ಹೋಗುತ್ತಾಳೆ. ಅದೃಷ್ಟವಶಾತ್ ವಿಜ್ಞಾನಿ ಯೊಬ್ಬರಿಗೆ ಅವಳು ಸಿಕ್ಕಿ ಅವರು ಅವಳನ್ನು ತಮ್ಮ ಮನೆಗೆ ಕರೆದೊಯ್ದು ಊಟ ತಿಂಡಿ ನೀಡಿ, ಪೋಲಿಸ್ ರಿಗೆ ಮಾಹಿತಿ ನೀಡುತ್ತಾರೆ ಮತ್ತೆ ಅವಳ ತಂದೆ ತಾಯಿ ಅವಳನ್ನು ಕರೆದುಕೊಂಡು ಹೋಗುತ್ತಾರೆ ಮಗಳ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದ ಅವರುಗಳು ಮತ್ತೆ ಅವಳನ್ನು ಅದೇ ಶಾಗೆ ಕಳುಹಿಸುತ್ತಾರೆ  
ಒಂದು ದಿನ ಶಾಲೆಗೆ ಮೇಲಧಿಕಾರಿಗಳು ವೀಕ್ಷಣೆಗೆ ಬರುತ್ತಾರೆ .ಆ ಶಾಲೆಯು  ಕನ್ನಡ ಮಾಧ್ಯಮ ಕ್ಕೆ ಅನುಮತಿ ಪಡೆದಿತ್ತು ಆದರೆ ಅಲ್ಲಿ ಕಾನೂನು ಬಾಹಿರವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ್ದರು.
ವೀಕ್ಷಕ ಅಧಿಕಾರಿಗಳು ಬರುವ ಸುಳಿವು ಸಿಕ್ಕ ಶಿಕ್ಷಕರು ಓಡಿ ಬಂದು ಎಲ್ಲ ಮಕ್ಕಳಲ್ಲಿ "ನಿಮ್ಮಲ್ಲಿರುವ ಎಲ್ಲ ಇಂಗ್ಲಿಷ್ ಪುಸ್ತಕಗಳನ್ನು ಕಿಟಕಿಯಿಂದ ಹೊರಗೆ ಎಸೆದು ಕನ್ನಡ ಪುಸ್ತಕ ತೆರೆದಿಡುವಂತೆ ಹೇಳುತ್ತಾರೆ .ಎಲ್ಲ ಮಕ್ಕಳೂ ಹಾಗೆ ಮಾಡುತ್ತಾರೆ ಆದರೆ ಹನಿಯ ಮನಸಿನಲ್ಲಿಯೂ ತನಗಾದ ಅವಮಾನದ ವಿರುದ್ಧ ಪ್ರತೀಕಾರದ ಮನೋಭಾವನೆ ಇತ್ತೋ ಅಥವಾ ಇದ್ದುದನ್ನು ಇದ್ದ ಹಾಗೆ ಹೇಳುವ ನೇರ ದಿಟ್ಟ ಸ್ವಭಾವ ವೋ ಏನೋ ,ಅವಳು ಸಮಾಜ ಶಾಸ್ತ್ರದ ಇಂಗ್ಲಿಷ್ ಪುಸ್ತವನ್ನು ಬಿಡಿಸಿ ಕುಳಿತುಕೊಳ್ಳುತ್ತಾಳೆ .ಅದು ವೀಕ್ಷಕರಿಗೆ ಸಿಗುತ್ತದೆ ಅವರು ನೀನು ಏನು ಓಡುತ್ತಿದ್ದೀಯ ಎಂದು ಕೇಳಿದಾಗ" ತಾನು ಇಂಗ್ಲಿಷ್ ಮೀಡಿಯಂ ನಲ್ಲಿ ಏಳನೇ ತರಗತಿ ಓದುತ್ತಿದ್ದೇನೆ "ಎಂಬ ಸತ್ಯವನ್ನು ತಿಳಿಸುತ್ತಾಳೆ .
ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡುತ್ತಿರುವುದಕ್ಕೆ ಸ್ಪಷ್ಟ, ನೇರ ಸಾಕ್ಷಿ ದೊರೆತ ಅವರುಗಳು ಕೂಗಾಡುತ್ತಾರೆ.ನಂತರ ಅವರನ್ನು ಆಫೀಸ್ ರೂಂ ಗೆ ಕರೆದುಕೊಂಡು ಹೋಗಿ ದುಡ್ಡು ಕೊಟ್ಟು ಸರಿಪಡಿಸಲಾಗುತ್ತದೆ !

ಈಗ ಶಿಕ್ಷಕರ ಮ್ಯಾನೇಜ್ಮೆಂಟ್ ನವರ ಸಿಟ್ಟು ಹನಿ ಮೇಲೆ ತಿರುಗುತ್ತದೆ
ಇತ್ತ ಹನಿ ಯನ್ನು ಶಾಲೆಯಿಂದ ತೆಗೆದು ಹಾಕಿ ಟಿಸಿ ಕೊಟ್ಟು ಕಳುಹಿಸುತ್ತಾರೆ .
ನಂತರ ಅವಳು ತಾನು ಕನ್ನಡ ಶಾಲೆಗೆ ಹೋಗುತ್ತೇನೆ ಎಂದಾಗ ಹೆತ್ತವರ ತೀವ್ರ ವಿರೋಧ ಉಂಟಾಗುತ್ತದೆ .ಅವಳನ್ನು ರಕ್ಷಿಸಿದ ವಿಜ್ಞಾನಿ ಅವರು ಹೆತ್ತವರನ್ನು ಮನವೊಲಿಸಿ ಅವಳು ಇಷ್ಟ ಪಟ್ಟ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ .
ಇಲ್ಲಿಂದ ಮತ್ತೆ ಕಥೆ ಸಂಪೂರ್ಣ ತಿರುವು ಪಡೆಯುತ್ತದೆ.

ಬದುಕಿನ ಪಾಠ, ಪರಿಸರದ ಶಿಕ್ಷಣ ,ಮಾನವೀಯತೆಯ ಅರಿವು ಎಲ್ಲವನ್ನು ಪಡೆಯುತ್ತಾ ಆ ಶಾಲೆಯಲ್ಲಿ ಹನಿ ಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ .ಮುಂದೊಂದು ದಿನ ರಾಜ್ಯ ಮಟ್ಟದ ಪ್ರಶಸ್ತಿಯನ್ನ ಪಡೆದಾಗ ಅವಳ ಹಿಂದಿನ ಶಾಲೆಯ ಶಿಕ್ಷಕರು ಮತ್ತು ಮ್ಯಾನೇಜ್ಮೆಂಟ್ ನ ಮಂದಿ ಅವಳನ್ನು ಮತ್ತೆ ತಮ್ಮ ಶಾಲೆಗೆ ಕರೆಯುತ್ತಾರೆ "ಡೊನೇಷನ್  ಫೀಸ್ ಯಾವುದೂ ಇಲ್ಲದೆ ಉಚಿತವಾಗಿ ಶಿಕ್ಷಣ ಕೊಡುತ್ತೇವೆ,ನಮ್ಮ ಶಾಲೆಗೆ ಬಾ ಎಂದು ಕರೆಯುತ್ತಾರೆ ..ಮುಂದೆ ಏನಾಯಿತು ಎಂಬುದು ಸಸ್ಪೆನ್ಸ್ ..

ಸಿನೆಮ ಅತ್ಯದ್ಭುತವಾಗಿ ಮೂಡಿ ಬಂದಿದೆ, ಅನಪೇಕ್ಷಿತ ವೈಭವೀಕರಣವಿಲ್ಲ ,ಅತ್ಯಂತ ಸರಳವಾಗಿ ನೇರವಾಗಿ ಮನಮುಟ್ಟುವಂತೆ ಕಥೆಯನ್ನು ನೆಯ್ಯಲಾಗಿದೆ.ಒಳ್ಳೆಯ ದೃಶ್ಯ ಸಂಯೋಜನೆ ,ಚುರುಕಿನ ಮಾತುಗಳು ಇವೆ, ಎಲ್ಲೂ ಒಂದಿನಿತು ಬೋರ್ ಅನಿಸುದೆ ಇಲ್ಲ .ಸಿನೆಮ ನೋಡಿದಾಗ ಒಂದು ಹನಿ ಕಣ್ಣೀರು ಒಸರದೆ ಇದ್ದರೆ ಅವರು ಮನವಿರುವ ಮನುಜರಲ್ಲ ಖಂಡಿತ!
.ಇದೊಂದು ಮಕ್ಕಳ ಸಿನೆಮ ಆದರೆ ಇದನ್ನು ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಕರು ಮತ್ತು ಹೆತ್ತವರು ನೋಡಲೇ ಬೇಕಾಗಿದೆ.ಇದನ್ನು ಯಾಕೆ ನಾನು ಹೇಳಿದ್ದೇನೆ ಎಂಬುದು ಸಿನೆಮ ನೋಡಿದವರಿಗೆ ಮಾತ್ರ ಅರ್ಥವಗಬಹುದಷ್ಟೇ !ಹಾಗಾಗಿ
ಮಾತೃ ಭಾಷಾ ಶಿಕ್ಷಣದ ಮಹತ್ವವನ್ನು ಸಾರುವ ಕಾಡ ಹಾದಿಯ ಹೂಗಳು ಚಲನಚಿತ್ರದ  ಪ್ರದರ್ಶನವನ್ನು  ಎಲ್ಲ ಶಾಲಾ ಕಾಲೇಜ್ ಗಳಲ್ಲಿ  ಏರ್ಪಡಿಸಿ ಎಲ್ಲ ಶಿಕ್ಷಕರು ಮಕ್ಕಳು ಮತ್ತು ಹೆತ್ತವರಿಗೆ ತೋರಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ

ನಮ್ಮ ಭ್ರಷ್ಟ ವ್ಯವಸ್ಥೆಯ ದುರಂತ ಏನೆಂದರೆ ಸರ್ಕಾರಿ  ಶಾಲೆಗಳ. ಕನ್ನಡ ಭಾಷೆಯ ಉಳಿವಿಕೆಯ ಅಗತ್ಯ ಮತ್ತು ಅನಿವಾರ್ಯತೆಯನ್ನು ಸಾರುವ  ಉತ್ತಮ ಕಥೆಯ ಹಂದರವಿರುವ ದೃಶ್ಯ ಸಂಯೋಜನೆ,ಬೆಳಕಿನ ನಿರ್ವಹಣೆಯಿಂದ ಹಿಡಿದು ಎಲ್ಲ ವಿಧದಲ್ಲೂ ಉತ್ತಮವಾಗಿರುವ ಈ ಸಿನೆಮಾಕ್ಕೆ ಒಂದೇ ಒಂದು ಪ್ರಶಸ್ತಿ ಯನ್ನು ನೀಡಿಲ್ಲ !ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಇದು !
ಇದಕ್ಕೆ ಪ್ರಶಸ್ತಿ ನೀಡದ ಬಗ್ಗೆ ಒಂದಿನ ಖಂಡಿತ ಚಲನಚಿತ್ರ ಮಂಡಳಿ ಪಶ್ಚಾತ್ತಾಪ ಪಡಬೇಕಾಗಿ ಬರಬಹುದು  ಎಂದು ಈ ಚಲನ ಚಿತ್ರವನ್ನು ನೋಡಿದವರಿಗೆ ಅನಿಸುತದೆ ಖಂಡಿತ !

No comments:

Post a Comment