Sunday 27 March 2016

ದೊಡ್ಡವರ ಹಾದಿ -5 ಡಾ.ರಾಜಪ್ಪ ದಳವಾಯಿ ಅವರೊಂದಿಗೆ ಕೆಲವು ನಿಮಿಷಗಳು



ಇಂದು ಆಕಸ್ಮಿಕವಾಗಿ ಡಾ.ರಾಜಪ್ಪ ದಳವಾಯಿ ಅವರನ್ನು ಕಲಾಗ್ರಾಮದಲ್ಲಿ ಭೇಟಿಯಾದೆ ...ಅವರ ಅಸಾಧ್ಯ ನೆನಪಿನ ಶಕ್ತಿಗೆ ನಮೋ ನಮಃ

ಅನೇಕ ದಿನಗಳಿಂದ ರಾಜಪ್ಪ ದಳವಾಯಿ ಅವರೊಂದಿಗೆ ಮಾತನಾಡ ಬೇಕು ಎಂದು ಕೊಂಡಿದ್ದೆ ಅವರ ವಿದ್ಯಾರ್ಥಿನಿಯ ಮೂಲಕ ಅವರ ಫೋನ್ ನಂಬರ್ ಅನ್ನು ಕೂಡ ಪಡೆದುಕೊಂಡಿದ್ದೆ .ಆದರೂ ಯಾಕೋ ಮಾತನಾಡಿರಲಿಲ್ಲ .
ಇಂದು ಬೆಳಗ್ಗೆ ಭಾರತಿ ಬಿವಿ ಅವರು ರಚಿಸಿದ ಅನಾಹತ ನಾಟಕ ನೋಡಲು ಬೆಳಗ್ಗೆ ಕಲಾಗ್ರಾಮಕ್ಕೆ ಹೋದೆ .ಕಲಾಗ್ರಾಮ ಪ್ರವೇಶಿಸುತ್ತಿದ್ದಂತೆ ಒಂದು ಕುಟೀರದಲ್ಲಿ ಒಬ್ರು ಮೇಷ್ಟ್ರು ತನ್ನ ವಿದ್ಯಾರ್ಥಿಗಳೊಂದಿಗೆ ಏನೋ ಅಭ್ಯಾಸ ನಡೆಸುತ್ತಿದ್ದುದು ಗಮನಕ್ಕೆ ಬಂತು .ಮೇಷ್ಟ್ರನ್ನು ಎಲ್ಲೋ ನೋಡಿದ ಹಾಗೆ ಅನಿಸ್ತು .ಆದರೆ ಅದಾಗಲೇ ನಾಟಕ ಶುರು ಆಗೋ ಹೊತ್ತು ಆಗಿದ್ದ ಕಾರಣ ಅಲ್ಲಿ ನಿಲ್ಲದೆ ನೇರವಾಗಿ ಥಿಯೇಟರ್ ಬಳಿಗೆ ಹೋದೆ ,ನಾಟಕ ಮುಗಿಸಿ ಹಿಂದೆ ಬರುವಾಗಲೂ ಮೇಷ್ಟ್ರು ಮತ್ತು ವಿದ್ಯಾರ್ಥಿಗಳ ಅಭ್ಯಾಸ ಮುಂದುವರಿದೇ ಇದ್ದು .ನಂತರದ ನಾಟಕಕ್ಕೆ ಸುಮಾರು ಎರಡು ಗಂಟೆ ಕಾಲಾವಕಾಶ ಇತ್ತು ಹಾಗಾಗಿಯೇ ಅವರ ಅನುಮತಿ ಪಡೆದು ಅವರುಗಳ ಅಭ್ಯಾಸ ನೋಡುತ್ತಾ ಕುಳಿತೆ .ಇಂದು ಸಂಜೆ ಸಂಸ ರಂಗ ಮಂದಿರದಲ್ಲಿ ಅವರ ನೂತನ ವಿಶಿಷ್ಟ ರಂಗ ಪ್ರಯೋಗಕ್ಕೆ ಅವರು ತಯಾರಾಗುತ್ತಿದ್ದರು ಎಂದು ತಿಳಿಯಿತು .
ಅಷ್ಟರಲ್ಲಿ ಮೇಷ್ಟ್ರು ನನಲ್ಲಿ ನೀವು ಲಕ್ಷ್ಮೀ ಪ್ರಸಾದ ತಾನೇ ಎಂದು ಕೇಳಿ ಮಾತನಾಡಿದರು ನನಗೆ ಆಶ್ಚರ್ಯ !ಇದಾರು ನನ್ನ ಪರಿಚಯ ಇವರಿಗೆ ಹೇಗಪ್ಪ ಎಂದು !ನೀವು ಯಾರೆಂದು ಗೊತ್ತಾಗಲಿಲ್ಲ ಎಂದು ಪ್ರಾಮಾಣಿಕವಾಗಿ ನುಡಿದು  ನನ್ನ ಅಜ್ಞಾನವನ್ನು ಪೂರ್ತಿ ತೆರೆದಿಟ್ಟೆ .ಅವರು ಆಗ ತಾನು ರಾಜಪ್ಪ ದಳವಾಯಿ ಎಂದು ತಿಳಿಸಿದರು !
omg!ಅವರು ನನ್ನನ್ನು ಒಂದೇ ಒಂದು ಬಾರಿ ಬೆಳಗಾವಿಯಲ್ಲಿ ನೋಡಿದ್ದರು .ಎರಡು ಮೂರು ವರ್ಷಗಳ ಮೊದಲು ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆಸಿದ ಸಂದರ್ಶನವೆಂಬ ನಾಟಕಕ್ಕೆ ನಾನು ಹಾಜರಾಗಿದ್ದೆ.ಅಂದು ಪರೀಕ್ಷಕರಾಗಿ ಅಲ್ಲಿನ ಪ್ರಾಧ್ಯಾಪಕರಾಗಿದ್ದ ದ.ರಾಜಪ್ಪ ದಳವಾಯಿ ಅವರೂ ಇದ್ದರು .
ಒಮ್ಮೆ ಮಾತ್ರ ನನ್ನನ್ನು ನೋಡಿದ್ದ ಅವರು ಅವರು ನನ್ನನ್ನು ಗುರುತು ಹಿಡಿದರು !ಅವರ ಅಪಾರ ನೆನಪಿನ ಶಕ್ತಿಗೆ ನಮೋ ನಮಃ ,ಅವರು ಹೇಳದಿದ್ದರೆ ನನಗೆ ಅವರು ರಾಜಪ್ಪ ದಳವಾಯಿ ಎಂದು ಖಂಡಿತಾ ಗೊತ್ತಾಗುತ್ತಿರಲಿಲ್ಲ !
ರಾಜಪ್ಪ ದಳವಾಯಿ ಅವರು ನನ್ನ ಬದುಕಿನ ಒಂದು ವಿಚಾರದಲ್ಲಿ ನನಗೆ ಪ್ರೇರಣೆ ಯಾದವರು .ವಿಶ್ವ ವಿದ್ಯಾಲಯವೊಂದರಲ್ಲಿ ಅವರು ಅರ್ಹರಾಗಿದ್ದರೂ ಅವರನ್ನು ಬಿಟ್ಟು ಬೇರೆ ಯಾರನ್ನೋ ಆಯ್ಕೆ ಮಾಡಿದಾಗ ನ್ಯಾಯಾಲಯದಲ್ಲಿ ದಾವೆ ಹೂಡಿ ದೀರ್ಘ ಕಾಲ ಹೋರಾಡಿ ಅವರು ಗೆಲುವನ್ನು ಪಡೆದಿರುವ ವಿಚಾರ ನನಗೆ ಯಾರ ಮೂಲಕವೋ ತಿಳಿದಿತ್ತು.
ಅವರನ್ನು ನೆನೆಸಿಕೊಂಡೇ ನಾನು ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಅಕ್ರಮ ನೇಮಕಾತಿ ಬಗ್ಗೆ ಧ್ವನಿಎತ್ತಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇನೆ.ಒಂದಿನ ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆಯಲ್ಲಿ
ಹಾಗಾಗಿ ನನಗೆ ಅವರನ್ನು ಭೇಟಿ ಮಾಡಬೇಕು ಮಾತಾಡಬೇಕು ಎಂದು ಇತ್ತು ಇಂದು ಆಕಸ್ಮಿಕವಾಗಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು'


No comments:

Post a Comment