Tuesday 8 June 2021

ದೊಡಗಡವರ ದಾರಿ -77 ಬಹು ಎತ್ತರದ ವ್ಯಕ್ತಿತ್ವದ ಡಾ.ಬಿಎ ವಿವೇಕ ರೈ


 ದೊಡ್ಡವರ ದಾರಿ - ಎತ್ತರದ ವ್ಯಕ್ತಿತ್ವದ ಡಾ.ಬಿ ಎ ವಿವೇಕ ರೈ 

ಲಜ್ಷ್ಮೀಯವರೇ ನಮಸ್ಕಾರ ಎಂದಾಗ ಒಂದು ಕ್ಷಣ ನಾನು ಗಲಿಬಿಲಿಗೊಳಗಾಗಿದ್ದೆ 

ನಾನು ಕನ್ನಡ ಎಂಎಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದ್ದಲ್ಲ.ಹಾಗಾಗಿ ಇಲ್ಲಿನ ಪ್ರಾಧ್ಯಾಪಕರ ನೇರ ಪರಿಚಯ ನನಗಿರಲಿಲ್ಲ.ಆದರೂ ಡಾ.ಬಿ ಎ ವಿವೇಕ ರೈ  ಬಗ್ಗೆ ಬಹಳ ಗಂಭೀರ ಸ್ವಭಾವದವರು ,ಬಹಳ ಸಮತೂಕದ ವ್ಯಕ್ತಿತ್ವದವರು ,ಅರ್ಹತೆ ಯಾರಲ್ಲಿಯೆ ಇದ್ದರೂ ಗುರುತಿಸುತ್ತಾರೆ ಇತ್ಯಾದಿ ಕೇಳಿ ತಿಳಿದಿದ್ದೆ


ನನ್ನ ಮೊದಲನೆಯ ಡಾಕ್ಟರೇಟ್ ಅಧ್ಯಯನ ಶುರು ಮಾಡಿದ ಸಂದರ್ಭದಲ್ಲಿ ನನಗೆ ಅವರನ್ನೊಮ್ಮೆ ಭೇಟಿ ಮಾಡಿ ಒಂದಷ್ಟು  ಮಾರ್ಗದರ್ಶನ ಪಡೆಯಬೇಕೆನಿಸಿತ್ತು.ಆಗ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ  ಉಪ ಕುಲಪತಿಗಳಾಗಿದ್ದರು.

ಹಾಗೆ ಮೈಸೂರಿಗೆ ಹೋಗಿ ಭೇಟಿಯಾಗಲು ಯತ್ನ ಮಾಡಿದ್ದೆ.ಅದರೆ ಅವರು ಬಹಳ ಬ್ಯುಸಿ ಇದ್ದರು.ಹಾಗಾಗಿ ಮಾತನಾಡಲಾಗಲಿಲ್ಕ.


ಅದಾಗಿ ಸುಮಾರು ಹತ್ತು ವರ್ಷಗಳ  ನಂತರ ಅವರನ್ನು ನಾನು ಬೆಂಗಳೂರಿನಲ್ಲಿ  ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿದ್ದೆ.ಆಗ ನನ್ನ ಎರಡೂ ಡಾಕ್ಟರೇಟ್ ಪದವಿಗಳು ಕೂಡ ಸಿಕ್ಕಿ ಆಗಿತ್ತು.ಮಾತನಾಡುವದ್ದು ಏನೂ ಇರಲಿಲ್ಲ.ಒಂದು ಅವರ ಜೊತೆ ಪೋಟೋ ತೆಗೆಸಿಕೊಂಡಿದ್ದೆ ಅಷ್ಟೇ

ನನಗೆ ಯಾರಲ್ಲೂ ಅತಿ ವಿನಯ ಪ್ರದರ್ಶಿಸಿ ಓಂಗುವ ಅಭ್ಯಾಸವಿಲ್ಲ.ನನಗೇನಾದರೂ ಅಗತ್ಯದ ಕೆಲಸ ಇದ್ದರೇ ಆ  ಕೆಲಸದ ಬಗ್ಗೆ ಮಾತ್ರ ಮಾತಾಡ್ತೇನೆ.ಬೇರೆ ನೀನೇ ಇಂದ್ರ ಚಂದ್ರ ಎಂದು ಹಾಡಹೊಗಳುವ ಅಭ್ಯಾಸವಿಲ್ಲ‌.ನನಗೆ ಪುಸ್ತಕ ಬೇಕಿದ್ದರೆ ಖರೀದಿಸುತ್ತೇನೆ‌.ದುಡ್ಡು ಕೊಟ್ಟು ಖರೀದಿಸಿದ ಪುಸ್ತಕದದ ಮೇಲೆ ಹಸ್ತಾಕ್ಷರ ಪಡೆವ ಅಭ್ಯಾಸ ನಾನಿಟ್ಟುಕೊಂಡಿಲ್ಲ.


ಇದರ ನಡುವೆ ನಾನು ಮಂಗಳೂರು ಯುನಿವರ್ಸಿಟಿಯ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ನನ್ನ ಆತ್ಮೀಯರಾದ ಸ್ವಂತ ಅಣ್ಣನಂತೆ ಇರುವ ರಾಮಚಂದ್ರ ಭಟ್ ಅವರಲ್ಲಿ ಅಲ್ಲಿ ನೀಡಿದ API ಆಧಾರಿತ ಅಂಕಗಳನ್ನು ಪ್ರಶ್ನಿಸಬಹುದು ಎಂದು ಸಲಹೆ ನೀಡಿದ್ದರು.ಶೈಕ್ಷಣಿಕ ಅರ್ಹತೆ,ಎಂ ಎ ಮಾರ್ಕ್ಸ್  ಎನ್ ಇ ಟಿ ಡಾಕ್ಟರೇಟ್ ) ಮತ್ತು ಸಂಶೋಧನಾ ಪ್ರಕಟಣೆಗಳಿಗೆ ಸಂಬಂಧಿಸಿದ 57  ಅಂಕಗಳನ್ನು ಸಂದರ್ಶನಕ್ಕೆ ಮೊದಲೇ ನೀಡುತ್ತಾರೆ.ಇದರಲ್ಲಿ ಧನಂಜಯ ಕುಂಬಳೆ ಅವರಿಗೆ ಸಂಶೋಧನಾ ಪ್ರಕಟಣೆಯ ವಿಭಾಗದಲ್ಲಿ ಕೇವಲ ಎರಡು ಪುಸ್ತಕ ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಗ್ರಂಥ ಆಗಿತ್ತು.ಹಾಗಾಗಿ ಅವರಿಗೆ ಈ ವಿಭಾಗದ ಇಪ್ಪತ್ತು ಅಂಕಗಳಲ್ಲಿ ಐದು ಮಾತ್ರ ನೀಡಬೇಕಿತ್ತು.ಆದರೆ ಪೂರ್ಣಾಂಕ  20 ಅನ್ನು ನೀಡಿದ್ದರು.ನನ್ನದು ಹದಿನೇಳು ಪುಸ್ತಕಗಳಿದ್ದ ಕಾರಣ ಹೇಗೂ ಪೂರ್ಣಾಂಕ  20 ಬಂದಿತ್ತು.ಆದರೆ ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹದಿನೈದು ಅಂಕ ಹೆಚ್ಚು ನೀಡಿದ್ದು ನನಗೆ ಗೊತ್ತಾಯಿತು.ಬಹುಶಃ ವಿವೇಕ ರೈಗಳಿಗೆ ಮೊದಲೇ ಗೊತ್ತಿತ್ತೋ ಅಥವಾ ವೀಸಿಯಾಗಿ ನಿವೃತ್ತರಾದ ಅವರಿಗೆ ಇದರ ಕಲ್ಪನೆ ಇತ್ತೋ ಗೊತ್ತಿಲ್ಲ.ಅಂತಹದೊಂದು ಸಂದರ್ಭವನ್ನು ಊಹಿಸಿ   ಸಲಹೆ ನೀಡಿದ್ದಂತೂ ನಿಜ

ಅಂತೆಯೇ ಅದನ್ನು ನಾನಲ್ಲಿ ಪ್ರಶ್ನಿಸಿದೆ.ಸರಿ ಇಲ್ಲ ಎನಿಸಿದರೆ ಕೋರ್ಟಿಗೆ ಹೋಗಿ ಎಂಬ ಸಿದ್ದ ಉತ್ತರ ತಯಾರಾಗಿತ್ತು.ಅದೇ ಉತ್ತರ ಬಂತು

ಹಾಗೆ ಹೇಳುವಾಗಲೇ ಅಲ್ಲಿ‌ವರಿಗೆ ಕೋರ್ಟಿಗೆ ಹೋಗಿ ಗೆಲ್ಲಲು ಆಗುವುದಿಲ್ಲ ಎಂಬ ಸಂಗತಿ ಗೊತ್ತಿತ್ತು.ಯಾಕೆಂದರೆ ಕೋರ್ಟ್ ಅರ್ಹತೆಯನ್ನು ನಿರ್ಧರಿಸುದು ಆಯ್ಕೆ ಸಮಿತಿ ಅದರಲ್ಲಿ ಇಂಟರ್ಫಿಯರ್ ಆಗಲು ಕಾನೂನಿನಲ್ಲಿ ಅವಕಾಶ ಇಲ್ಲ‌ಎಂಬ ಒಂದೇ ಮಾತಿನಲ್ಲಿ ನಮಗೆ ಹೆಚ್ಚು ಅರ್ಹತೆ ಇದೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಇದು ಅಲ್ಲಿನ ಆಯ್ಕೆ ಕಮಿಟಿಯ ಮುಖ್ಯಸ್ಥರಾಗಿದ್ದ ಡಾ.ಚಿನ್ನಪ್ಪಗೌಡ ಹಾಗೂ ಇತರರಿಗೆ ಗೊತ್ತಿದ್ದಿರಬಹುದು‌ ಯಾಕೆಂದರೆ ಮಂಗಳೂರು ಯುನಿವರ್ಸಿಟಿ ಪ್ರಾಧ್ಯಾಪಕ ಹುದ್ದೆಗೆ ಅಯ್ಕೆಯಾದಾಗ ಅವರಿಗಿಂತ ಹೆಚ್ಚು ಅರ್ಹತೆ ಇದ್ದವರು ( ಇವರಿಗೆ ಪಿಎಚ್ ಡಿ ಆಗಿರಲಿಲ್ಲವಂತೆ ,ಅವರಿಗೆ ಆಗಿತ್ತಂತೆ ) ಒಬ್ಬರು ಕೋರ್ಟಿಗೆ ಹೋಗಿದ್ದರಂತೆ.ಆಗಲೂ ಅರ್ಜತೆಯನ್ನು ನಿರ್ಧರಿಸುದು ಅಯ್ಕೆ ಸಮಿತಿ ಕೋರ್ಟಿಗೆ ಇಂಟಫಿಯರ್ ಆಗಲು ಆಗುದಿಲ್ಲ ಎಂಬ ತೀರ್ಪು ಬಂದಿತ್ತಂತೆ‌ಇದು ನಿಜವಾ ಸುಳ್ಳಾ ಗೊತ್ತಿಲ್ಲ.ಆದರೆ ಐವತ್ತು ಅರುವತ್ತು ಲಕ್ಷ ಲಂಚ ತಗೊಂಡರೂ ಧೈರ್ಯವಾಗಿ ಇರುವ ವಿಸಿ ,ಪ್ರೊಫೆಸರ್ ಗಳನ್ನು ಕಾಣುವಾಗ ಇದು ನಿಜವಿರಬಹುದೆನಿಸುತ್ತದೆ‌ ಮಂಗಳೂರು ಯುನಿವರ್ಸಿಟಿ ಕನ್ನಡ ವಿಭಾಗ ನೇಮಕಾತಿಯಲ್ಲಿ  ಅನ್ಯಾಯವಾಗಿದೆ ಎಂದು ನಾನು ಕೋರ್ಟಿಗೆ ಹೋದಾಗಲೂ ಇದೇ ಉತ್ತರ ಸಿಕ್ಕಿತ್ತು.ಭ್ರಷ್ಟರ ಕೂದಲು ಕೂಡ ಕೊಂಕಲಿಲ್ಲ


ಇರಲಿ..ಆದರೆ ಇಂತಹದ್ದೊಂದರ ಸೂಚನೆ ಡಾ.ಬಿಎ ವಿವೇಕ ರೈಗಳಿಗಿದ್ದೇ ಅವರು ಈ ಬಗ್ಗೆ ಸಲಹೆ ನೀಡಿರಬಹುದು


ಅವರಿಗೆ ನನ್ನ ಪರಿಚಯ ಇದ್ದಿರಲಾರದು‌ನನ್ನ ಬಗ್ಗೆ ,ನನ್ನ ಅಧ್ಯಯನದ ಬಗ್ಗೆ ತಿಳಿದಿರಲಾರದು ಎಂದೇ ನಾನು ಭಾವಿಸಿದ್ದೆ


ಕಾಂತಾವರ ಕನ್ನಡ ಸಂಘದ  ಮೂಲಕ ನಾಡಿಗೆ ಗಣನೀಯವಾದ  ಕೊಡುಗೆ ನೀಡಿದವರ ಬಗ್ಗೆ ನಾಡಿಗೆ ನಮಸ್ಕಾರ ಸರಣಿಯಲ್ಲಿ ಡಾ.ನಾ.ಮೊಗಸಾಲೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು ಇತ್ತೀಚೆಗೆ ಎರಡು ವರ್ಷಗಳ ಮೊದಲು ನನ್ನ ಬಗ್ಗೆಯೂ ತುಳು ಸಂಸ್ಕೃತಿಯ ಸಂಶೋಧಕಿ ಲಕ್ಷ್ಮೀ ಜಿ ಪ್ರಸಾದ್ ವಾರಣಾಸಿ ಎಂಬ   ಪುಸ್ತಕ ಪ್ರಕಟಿಸಿದರು.

ಅದರ ಬಿಡುಗಡೆ ಸಮಾರಂಭಕ್ಕೆ ನಾನು ಕಾಂತಾವರಕ್ಕೆ ಹೋಗಿದ್ದೆ.


ಹಿಂದಿನ ದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರು ತಲುಪಿ ಸ್ನೇಹಿತೆಯ ಮನೆಗೆ ಹೋಗಿ ಸ್ನಾನ ಗೀನ‌ ಮುಗಿಸಿ ತಿಂಡಿ ತಿಂದು ಬಾಡಿಗೆ ಕಾರು ಮಾಡ ಹೊರಟಿದ್ದೆ.ಅರ್ಧ ದಾರಿ ತಲುಪುವಾಗ ಕಾರು ಹಾಳಾಗಿ ನಿಂತಿತು.ಅಲ್ಲಿಂದ ಬಸ್ ಹಿಡಿದು ಕಾಂತಾವರ ಕನ್ನಡ ಭವನ ತಲುಪುವಾಗ ಹನ್ನೊಂದು ಗಂಟೆ ಆಗಿತ್ತು.


ಎದುರಿಗೆ ಸಿಕ್ಕಿದ ಹಿರಿಯರಾದ ಡಾ.ನಾ ಮೊಗಸಾಲೆಯವರು ಬಹಳ ಪ್ರೀತಿಯಿಂದ ಸ್ವಾಗತಿಸಿ ತಿಂಡಿ ತಿಂದು  ಕಾಫಿ ಕುಡಿದು ಬನ್ನಿ ಎಂದು ಒಳಗೆ ಕಳುಹಿಸಿದರು.


ರಣ ಬಿಸಿಲಿಗೆ ಬಂದ ನನಗೆ ಒಳ ಹೊಕ್ಕಾಗ ಏನೂ ಕಾಣಿಸುತ್ತಿರಲಿಲ್ಲ.ಕೆಪ್ ಮುಪ್ಪಾಗಿ ಆ ಕಡೆ ಈ ಕಡೆ ನೋಡುತ್ತಿದ್ದೆ.


ಆಗ ಲಕ್ಷ್ಮಿಯವರಿಗೆ ನಮಸ್ಕಾರ ಎಂಬ ಗಂಭೀರವಾದ ದ್ವನಿ ಕೇಳಿಸಿತು.ಯಾರೆಂದು ನೋಡಿದರೆ ಉಪ್ಪರಿಗೆ ಮೆಟ್ಟಲಿನಿಂದ ಇಳಿದು ಬರುತ್ತಿದ್ದ ಡಾ ವಿವೇಕ್ ರೈ ಮತ್ತಿರರನ್ನು ನೋಡಿದೆ‌‌‌‌.ಹಾಗಂದಿದ್ದು ವಿವೇಕ ರೈಗಳೆಂದು ಅರ್ಥ ಮಾಡಿಕೊಂಡು ಅವರಿಗೆ ನಮಸ್ಕರಿಸಿದೆ.


ನನಗೆ ತುಂಬಾ ಅಚ್ಚರಿ ಆಗಿತ್ತು ಆಗ.ನನ್ನ ಮುಖ ಪರಿಚಯ ಬಿಡಿ ಹೆಸರು ಕೂಡ ಅವರಿಗೆ ತಿಳಿದಿರಲಾರರು ಎಂದು ನಾನು ಭಾವಿಸಿದ್ದೆ.


ಬಹಳ ದೊಡ್ಡ ವ್ಯಕ್ತಿ ಅವರು .ಯುನಿವರ್ಸಿಟಿಯ ವಿಸಿಯಾಗಿ ನಿವೃತ್ತರಾದವರು.ವಿದೇಶೀ ವಿಶ್ವ ವಿದ್ಯಾಲಯಗಳ ಆಹ್ವಾನಿತ ಅತಿಥಿ ಉಪನ್ಯಾಸಕರಾಗಿ ಬಲು ದೊಡ್ಡ ಗೌರವಕ್ಕೆ ಪಾತ್ರರಾದವರು...ಅವರೆಲ್ಲಿ..ಸಾಮಾನ್ಯ ಉಪನ್ಯಾಸಕಿಯಾಗಿರುವ ನಾನೆಲ್ಲಿ ? 


ಹಾಗಾಗಿ ಅವರೇ ಲಕ್ಷ್ಮೀಯವರಿಗೆ ನಮಸ್ಕಾರ ಎಂದಾಗ ಒಂದು ಕ್ಷಣ ಗಲಿಬಿಲಿಗೆ ಒಳಗಾಗಿದ್ದೆ.


ನಂತರ ನಾನು ಕಾಫಿ ಕುಡಿಯಲು ಹೋದೆ ಅಲ್ಲಿ ಈ ಪುಸ್ತಕದ ಸಂಪಾದಕರಾದ ಡಾ.ಜನಾರ್ದನ ಭಟ್ ಲೇಖಕರಾದ ಗುಣಾಜೆ ರಾಮಚಂದ್ರ ಭಟ್ ಸಿಕ್ಕರು.

ನಂತರ ಸಭಾ ಕಾರ್ಯಕ್ರಮ,ಪುಸ್ತಕ ಬಿಡುಗಡೆಯನ್ನು ತುಕಾರಾಮ ಪೂಜಾರಿಯವರು ಮಾಡಿದರು ( ಕಾಲನ ನಡೆ ಬಹಳ ವಿಚಿತ್ರವಾದುದು ,ಈ ಬಗ್ಗೆ ಇನ್ನೊಂದಿನ ಬರೆಯುವೆ  )

ನಂತರ ಮೀಯಪದವು ಪ್ರೌಢ ಶಾಲೆಯ ರಾಜಾರಾಮ‌ಮಾಸ್ಟ್ರು ತಮ್ಮ  ಕಾರಿನಲ್ಲಿ ಮನೆಗೆ ತನಕ ಬಿಟ್ಟರು .


ಈ ವಿಚಾರವನ್ನು ಮರೆತೇ ಬಿಟ್ಟಿದ್ದೆ ಕೂಡ‌.ನಿನ್ನೆ ಫ್ಯಾಕ್ಟ್ ಚೆಕ್ ಒಂದರಲ್ಲಿ ನಮ್ಮ‌ ಪ್ರಧಾನಿ ಯವರಾದ ನರೇಂದ್ರ ಮೋದಿಯವರು ಸಾಮಾಜಿಕ ಕಾರ್ಯಕರ್ತೆ ಮೊಂಡಲ್  ಅವರಿಗೆ ನಮಸ್ಕರಿಸಿದ ಫೋಟೋ ನೋಡಿದೆ


ಆ ಬಗ್ಗೆ ಮೊಂಡಲ್  ಅವರು ನರೇಂದ್ರ ಮೋದಿಯವರಿಗೆ ನಾನು ನಮಸ್ಕರಿಸಿದೆ ಆಗ ನೀವು ಏನು ಮಾಡುತ್ತೀರಿ ಎಂದು ವಿಚಾರಿಸಿದರು.ಆಗ ನಾನು ಸಮಾಜ ಸೇವಾ ಕಾರ್ಯಕರ್ತೆ ಎಂದೆ.ಆಗ ಅವರು ಕೈಮುಗಿದರು.

ಆಗ ನನಗೆಷ್ಟು ಸಂತಸವಾಯಿತೆಂದು ನನ್ನ ನಗುತ್ತಿರುವ ಫೋಟೋ ನೋಡಿದರೆ ತಿಳಿಯಬಹುದು ಎಂದಿದ್ದ ಬಗ್ಗೆ ವಿವರಣೆ ಇತ್ತು


ಹೌದು‌.ದೊಡ್ಡವರು ಯಾವಾಗಲೂ ಹಾಗೆಯೇ..ಅರ್ಹತೆಯನ್ನು ಗುರುತಿಸಿ ಅವರಿಗೆ ತಲೆಬಾಗುತ್ತಾರೆ.


ಆಗ ನನಗೆ ಡಾ.ಬಿ ಎ ವಿವೇಕ ರೈಗಳು ಕಾಂತಾವರದಲ್ಲಿ  ಅವರಾಗಿಯೇ  ಕರೆದು ನಮಸ್ಕರಿಸಿದ್ದು ನೆನಪಾಯಿತು.


ದೊಡ್ಡವರ ನಡೆ ಯಾವಾಗಲೂ ಹಾಗೆಯೇ..ಅನೂಹ್ಯವಾದದ್ದು.

ದೊಡ್ಡವರು ಯಾವಾಗಲೂ ಒಳಿತನ್ನು ಗುರುತಿಸಿ ಗೌರವಿಸುತ್ತಾರೆ.


ಅವರು ನಮಗೆ ನಮಸ್ಕರಿಸಿದ್ದಾರೆ ಎಂದರೆ ನಾವು ದೊಡ್ಡವರು ಎಂದರ್ಥವಲ್ಲ.ಅವರಿಗೆ ಎಳೆಯರಲ್ಲಿನ ಅರ್ಹತೆಯನ್ನು ಗುರುತಿಸಿ ಗೌರವಿಸುವ ಉದಾರ ಹೃದಯ ಇದೆ ಎಂದು ಅರ್ಥ ಅಷ್ಟೇ‌


ಡಾ.ಬಿ ಎ ವಿವೇಕ ರೈಗಳು ಎಷ್ಟು ಎತ್ತರದ ವ್ಯಕ್ತಿ ಎಂದಿದರಲ್ಲಿ ಅರ್ಥವಾಗುತ್ತದೆ.ಆ ಪೊಂಜೋವಿನ ಪಾತೆರನ್ ಎಂಕುಲು ಲೆಕ್ಕೊಗ್ ದೀಪುಜ್ಜ ( ಅ ಹೆಂಗಸಿನ ಮಾತನ್ನು ನಾನು ಲೆಕ್ಕಕ್ಕೆ ತಗೊಳ್ಳುದಿಲ್ಲ ) ಸರ್ಟಿಫಿಕೇಟ್ ಗಳು ಮಾನದಂಡವಲ್ಲ ಎಂಬವರ ನಡುವೆ ಇವರು ಭಿನ್ನರಾಗಿ ನಿಲ್ಲುತ್ತಾರೆ.


ಭ್ರಷ್ಟರಿಗೆ ನನ್ನ ಮೂರು ಎಂಎ ಎರಡು ಡಾಕ್ಡರೇಟ್ ಪದವಿಗಳ,ಇನ್ನೂರರಷ್ಡು ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳ ಬಗೆಗಿನ ಸರ್ಟಿಫಿಕೇಟ್ ಗಳು ಮಾನದಂಡವಲ್ಲ.ಪ್ರಕಟಿತ ಇಪ್ಪತ್ತು ಪುಸ್ತಕಗಳು,ಬರಹಗಳು ಮಾನದಂಡವಲ್ಲ‌ಹಾಗಾದರೆ ಆಯ್ಕೆ ಸಮಿತಿಯವರ ಮಾನ ದಂಡ ಯಾವುದು ? ಮಾನವೂ ಇಲ್ಲ..ದಂಡವೇ ಎಲ್ಲ..ದುಡ್ಡು,ಜಾತಿ ,ಇನ್ಪ್ಲೂಯೆನ್ಸ್ ಅಷ್ಟೇ ಎಲ್ಲ 


ಮಾನ ಇರುವ ಹಿರಿಯರಿಗೆ ಅರ್ಹತೆ ಕಾಣಿಸುತ್ತದೆ ಎಂಬುದಕ್ಕೆ ವಿವೇಕ ರೈಗಳೇ ಸಾಕ್ಷಿ 

ತುಳು ಜಾನಪದ ಸಂಸ್ಕೃತಿ ಅದರಲ್ಲೂ ನಡು ರಾತ್ರಿ ನಡೆವ ಭೂತ ಕೋಲವನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕುದು ಎಷ್ಟು ಕಷ್ಟದ ವಿಚಾರ ಹೇಳುದು ಮೂಲತಃ ಜಾನಪದ ಸಂಶೋಧಕರಾದ ಅವರಿಗೆ ಅರಿವಿತ್ತು.ಫ್ಯಾನ್ ಅಡಿಯಲ್ಲಿ ಕುಳಿತು ಯಾರದೊ ಕೃತಿ ಬಗ್ಗೆ ಬರೆದು ಡಾಕ್ಟರೇಟ್ ಪದವಿ ಪಡೆವದಕ್ಕೂ ಕ್ಷೇತ್ರ ಕಾರ್ಯದ ಆಧಾರಿತ ಅಧ್ಯಯನಕ್ಕೂ ಅಜಗಜಾಂತರವಿದೆ.ಅದರ ಮಹತ್ವವನ್ನು ಡಾ.ವಿವೇಕ ರೈಗಳು ಗುರುತಿಸಿದ್ದರು 


ಡಾ.ಲಕ್ಷ್ಮೀ ಜಿ ಪ್ರಸಾದ್

No comments:

Post a Comment