Tuesday 30 March 2021

 ಸತ್ಯನಾಪುರದ ಸಿರಿಯನ್ನು ನೆನಪಿಸಿದ ಮಾದರಿ ಮಹಿಳೆ ಮಹಾಲಕ್ಷ್ಮಿ ಮೇಡಂ ದಿಟ್ಟತನಕ್ಕೆ ನಮೋನ್ನಮಃ 


ಹೌದು . ಸುಮಾರು  ಒಂದು ಸಾವಿರದ ಅರುನೂರು ವರ್ಷಗಳ ಹಿಂದೆಯೇ ಅನ್ಯ ಸ್ತ್ರೀಯ ಹಿಂದೆ ಹೋದ ಗಂಡನಿಗೆ ವಿಚ್ಚೇದನ ನೀಡಿ ಮರು ಮದುವೆಯಾಗಿ ತುಳುನಾಡಿನ ಮಹಿಳೆಯರಿಗೆ ಮಾತ್ರವಲ್ಲ‌ ಇಡೀ ಜಗತ್ತಿನ ಸ್ತ್ರೀಯರಿಗೇ ಮಾದರಿಯಾದ ಮಹಾನ್ ಚೇತನ ಸತ್ಯನಾಪುರದ ಬಾಲಕ್ಕೆ ಸಿರಿಯದು.

ಸಿರಿಗೆ ಮದುವೆಯಾಗಿ ಒಬ್ಬ ಮಗನಿದ್ದ .ಸಿರಿ ಎರಡನೆ ಮದುವೆಯಾಗುವ ತೀರ್ಮಾನಕ್ಕೆ ಬರುವಷ್ಟರಲ್ಲಿ ಆತನೂ ದುರಂತವನ್ನಪ್ಪಿದ‌. 

ಸಿರಿ ಕೂಡ  ದೈಹಿಕ ಕಾಮನೆಗಳಿಗಾಗಿ ಇನ್ನೊಂದು ವಿವಾಹವಾಗುದಿಲ್ಲ.ತುಳುವ ಸ್ತ್ರೀಯರ ಸ್ವಾಭಿಮಾನದ ರಕ್ಷಣೆಗಾಗಿ ಅಕೆ ದುರುಳ ಗಂಡನನ್ನು ಧಿಕ್ಕರಿಸಿ ಮರು ಮದುವೆಯಾಗುತ್ತಾಳೆ.ಒಂಟಿ ಮಹಿಳೆಯಾಗಿದ್ದ ಆಕೆಗೆ ಆಶ್ರಯವೂ ಬೇಕಿದ್ದಿರಬಹುದು.ವಿವಾಹದ ನಂತರ ಮಡದಿಯಾಗಿ ತನ್ನ ಕರ್ತವ್ಯವವನ್ನು ನಿರ್ವಹಿಸಿದ ಸಿರಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತು ದೈವತ್ವ ಪಡೆದು ಅರಾದಿಸಲ್ಪಡುತ್ತಾಳೆ

ಸ್ವಾಭಿಮಾನದ ಕಾರಣಕ್ಕಾಗಿಯೇ ನನಗೆ ಸತ್ಯನಾಪುರದ ಸಿರಿ ದೈವತ ಬಹಳ ಹತ್ತಿರವಾದವಳು.

ಮತ್ತೆ ಇಂದು ಅಕೆಯನ್ನು ನೆನಪಿಸಿದರು ಮೈಸೂರಿನ ನಿವೃತ್ತ ಶಿಕ್ಷಕಿ ಎಪ್ಪತ್ತಮೂರರ ಜೀವನೋತ್ಸಾಹಿ‌ ಮಹಾಲಕ್ಷ್ಮೀ ಮೇಡಂ 

ಕೆಲ ದಿನಗಳ ಹಿಂದೆ ನಿವೃತ್ತ ಶಿಕ್ಷಕಿಗೆ 73 ಕ್ಕಿಂತ ಹೆಚ್ಚಿನ ವಯಸ್ಸಿನ ಅರೋಗ್ಯವಂತ ಬ್ರಾಹ್ಮಣ  ವರ ಬೇಕಾಗಿದ್ದಾನೆ ಎಂಬ ಜಾಹಿರಾತು ಪ್ರಕಟವಾಯಿತು.

ಇದನ್ನೋದಿದ ಅನೇಕ ಬುದ್ದಿ ಹೀನರು ನಕ್ಕದ್ದೇನು ? ಅವಹೇಳನ ಮಾಡಿದ್ದೇನು..ಅಬ್ಬಬ್ಬಾ ಇವರೆಲ್ಲ ಮನುಷ್ಯ ವರ್ಗಕ್ಕೆ ಸೇರಿದವರಾ ಎನಿಸಿತ್ತು ನನಗೆ‌.

ಅಗಲೇ ಮಂಜುನಾಥ ಕೊಳ್ಳೇಗಾಲ ಜೆ ಬಿ ಅರ್ ಮೊದಲಾದವರು ಅವಹೆಳನ ಮಾಡಿದವರನ್ನು ವಿರೋಧಿಸಿ ವಾಸ್ತವಿಕತೆಯ ಅರಿವು ಮುಡಿಸುವ ಬರಹ ಬರೆದಿದ್ದರು.


ಇಂದು ನಾನು ಅ ಜಾಹಿರಾತು ನೀಡಿದ ಮಹಿಳೆ ಮಹಾಲಕ್ಷ್ಮೀ ಮೇಡಂ ಗೆ ಕರೆ ಮಾಡಿದೆ.ಆರಂಭದಲ್ಲಿ ಅವರು ಕರೆ ಸ್ವೀಕರಿಸಲಿಲ್ಲ.ಅದನ್ನು ನಾನು ನಿರೀಕ್ಷಿಸಿದ್ದೆ ಕೂಡ.


ಈಗಾಗಲೇ ಅವರಿಗೆ ಅನೆಕರು ಕರೆ ಮಾಡಿ ಅವಹೇಳನ ಮಾಡರ್ತಾರೆ.ಈಗ ಕರೆ ಮಾಡಿದ ನನ್ನ ಕರೆ ಕೂಡ ಅಂತಹದೇ ಒಂದು ಎಂದು ಭಾವಿಸಿ ಕರೆ ಸ್ವೀಕರಿಸಲಿಲ್ಲ.


ಹಾಗಾಗಿ ನಾನವರಿಗೆ ಹೀಗೆ ಮೆಸೇಜ್ ಮಾಡಿದೆ.

ನಮಸ್ತೆ ಮೇಡಂ

"ನಾನು ಡಾ.ಲಕ್ಷ್ಮೀ ಜಿ ಪ್ರಸಾದ್

ಕನ್ನಡ ಉಪನ್ಯಾಸಕಿ

ಸರ್ಕಾರಿ ಪದವಿ ಪೂರ್ವ ಕಾಲೇಜು,ಬ್ಯಾಟರಾಯನಪುರ,ಬೆಂಗಳೂರು


ನನಗೆ ನಿಮ್ಮ ಬಗ್ಗೆ ಅತೀವ ಹೆಮ್ಮೆ ಎನಿಸಿದೆ.ಹಾಗಾಗಿ ನಿಮ್ಮಲ್ಲಿ ಒಮ್ಮೆ ಮಾತನಾಡಬೇಕೆನಿಸಿ ಕರೆ ಮಾಡಿದೆ.,ತೊಂದರೆಯಾಗಿದ್ದಲ್ಲಿ ಕ್ಷಮಿಸಿ"

ನಂತರ ಅವರು ಕರೆ ಸ್ವೀಕರಿಸಿದರು.

ಎಲ್ಲರೂ ಕರೆ ಮಾಡಿ  ತಿರಸ್ಕಾರದಿಂದ ಏನೇನೋ ಹೇಳಿದರು ಲಕ್ಷ್ಮೀ.ನೀವೊಬ್ಬರೇ ನನ್ನನ್ನು ಅರ್ಥ ಮಾಡಿಕೊಂಡು ಮಾತನಾಡಿದಿರಿ ಎಂದುಬಹಳ ಪ್ರೀತಿಯಿಂದ ಮಾತನಾಡಿದರು.

ನಿದಾನಕ್ಕೆ ತಮ್ಮ ಬದುಕಿನ ದುರಂತ ಕಥೆಯನ್ನು ಬಹಳ ದುಃಖದಿಂದ ಹಂಚಿಕೊಂಡರು

ಬಹಳ ಬಡ ಕುಟುಂಬದಲ್ಲಿ ಹಿರಿಯಕ್ಕನಾಗಿ ಹುಟ್ಟಿದ್ದು ನನ್ನ ತಪ್ಪೇ ? ಎಂದು ತಮ್ಮ ಅಂತರಂಗವನ್ನು ತೆರೆದಿಟ್ಟರು

ಬಡ ಬ್ರಾಹ್ಮಣ ದಂಪತಿಯ ಮೂರನೆಯ ಮಗಳಾಗಿ ಹುಟ್ಟಿದವರು ಮಹಾಲಕ್ಷ್ಮೀ.

ಅವರಿಗಿಂತ ಮೊದಲು ಅಕ್ಕ ಅಣ್ಣ ಹುಟ್ಟಿದ್ದರೂ ಸಣ್ಣ ವಯಸ್ಸಿನಲ್ಲಿ‌ ಮರಣವನ್ನಪ್ಪಿದ್ದು ಮನೆಯಲ್ಲಿ ಇವರೇ ಹಿರಿಯರಾಗಿದ್ದರು.

ಇವರ ನಂತರ ಒಂಬತ್ತು ಜನ ತಮ್ಮ ತಂಗಿಯರು ಹುಟ್ಟಿದರು.ಇವರುಗಳು ಹುಟ್ಟಿದಾಗ ತಾಯಿಯ ಬಾಣಂತನವನ್ನು ಮಾಡುವ ಕಷ್ಟವೂ ಇವರ ಪಾಲಿಗೆ ಬಂದೊದಗಿತ್ತು.

ತಂದೆ ಇವರು ಐದನೆ ತರಗತಿಯಲ್ಲಿ ಓದುವಾಗಲೇ ಶಾಲೆ ಬಿಡಿಸಲು ಸಿದ್ದರಾಗಿದ್ದರು.ಮುಂದೆ ಗಂಡನಿಗೆ ಪತ್ರ ಬರೆವಷ್ಟು ಬಂದ ಪತ್ರ ಓದುವಷ್ಟು ಬಂದರೆ ಸಾಕು ಎಂದಿದ್ದರು.

ಅದರೆ ಇವರ ದೊಡ್ಡಮ್ಮನ ಒತ್ತಾಸೆಯಿಂದ ಜಾಣೆಯಾಗಿದ್ದ ಮಹಾ ಲಕ್ಷ್ಮೀಯವರು  ಹೇಗೋ ಹತ್ತನೆ ತರಗತಿ ತನಕ ಓದಿ ಟಿಸಿಎಚ್ / ಸಮಾನಾಂತರ ಓದು ಓದಿ ಸರ್ಕಾರಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು.


ಅದರಿಮದ ಇವರಿಗೇನೂ ಲಾಭವಾಗಲಿಲ್ಲ.ಇವರ ವೇತನ ಎಲ್ಲವೂ ತಮ್ಮ ತಂಗಿಯರನ್ನು ಬೆಳಸಲೇ ಖರ್ಚಾಗುತ್ತಿತ್ತು.

 ಇವರೂ ಸ್ವಾರ್ಥವಿಲ್ಲದೆ ತಮ್ಮ ತಂಗಿಯರನ್ನು ದೊಡ್ಡವರನ್ನಾಗಿ ಮಾಡಿ ಮದುವೆ ಮಾಡಿ ಅವರರವ ಕಾಲ ಮೇಲೆ ನಿಲ್ಲುವಂತೆ ಮಾಡಿದರು.


ಅಷ್ಟಾಗುವಾಗ ಇವರಿಗೆ ವಯಸ್ಸು ನಲುವತ್ತೆರಡು ಕಳೆಯಿತು.

ಬಹಳ ತಡವಾಗಿಯಾಗಿ ಮದುವೆಯಾಯಿತು.ಗಂಡ ಪೊಲೀಸ್ ಇಲಾಕೆಯ ವಯರ್ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.


ಇಲ್ಲೂ ಹುಟ್ಟಿನಿಂದ ಕಾಡಿದ ದುರಾದರಷ್ಟ ಇಲ್ಲೂ ಇವರ ಬಾಳಿನಲ್ಲಿ ಆಟವಾಡಿತು.ಆತನಿಗೆ ಮೊದಲೇ ಮದುವೆಯಾಗಿತ್ತು.ಸರ್ಕಾರಿ ಕೆಲಸದಲ್ಲಿದ್ದ  ಇವರ ದುಡ್ಡಿನ ಮೇಲಿನ ಆಸೆಯಿಂದ ಅತ ಮೊದಲ‌ಮದುವೆಯನ್ನು ಮುಚ್ಚಿಟ್ಟು ಇವರನ್ನು ಮದುವೆಯಾಗಿದ್ದ.ಅತನಿಗೆ ಇವರ ಮೇಲೆ ಯಾವ ಮೋಹವೂ ಇರಲಿಲ್ಲ‌.ಕೆವಲ ಇವರ ದುಡ್ಡು ಮಾತ್ರ ಬೇಕಿತ್ತು

ಹಾಗೂ ಹೀಗೂ ಅತನೊಡನೆ ಇವರು ಎರಡು ವರ್ಷ ಸಂಸಾರ ಮಾಡಿದರು.ಕೊನೆಗೂ ಆತನ ವರ್ತನೆಯಿಂದ ಬೇಸತ್ತು ಬೇರೆಯಾಗಿ ಡೈವರ್ಸ್ ಪಡೆದರು.

ಇಷ್ಟೆಲ್ಲಾ ಅಗುವಾಗ ಕಾಲ ನಿಲ್ಲಲಿಲ್ಲ.ಇವರಿಗು ವಯಸ್ಸು ಐವತ್ತಾಯಿತು.ಅಷ್ಟರಲ್ಲಿ ಬ್ರೈನ್ ಟ್ಯೂಮರ್ ಸಮಸ್ಯೆ ಕಾಡಿ  ವಾಲಂಟರಿ ರಿಟೈರ್ಮೆಂಟ್ ತಗೊಂಡರು

ದುಬಾರಿ ಚಿಕಿತ್ಸೆಯ ನಂತರ ಆರೋಗ್ಯ ಸಮಸ್ಯೆ ಸರಿ ಹೋಯಿತು

ತಮ್ಮ ತಂಗಿಯರು ಅವರವರ ಸಂಸಾರ ತಾಪತ್ರಯದಲ್ಲಿ ಮುಳುಗಿದರು.

ಇವರ ಸಾಂಗತ್ಯಕ್ಕೆ ಯಾರೂ ಇಲ್ಲ.ಒಬ್ಬರೇ ಮನೆಯಲ್ಲಿ ಮಲಗಲು ಆತಂಕ.ಒಬ್ಬರೆ ಇರಲು ಭಯ ಏಕಾಂಗಿತನ ಕಾಡತೊಡಗಿತು.


ಅಗಿನ ಕಾಲದಲ್ಲೇ ಓದಿ ಶಿಜ್ಷಕಿತಾಗಿದ್ದ ಇವರೊಂದು ದಿಟ್ಟ ನಿರ್ಧಾರಕ್ಕೆ ಬಂದರು.ತಮ್ಮ ಬದುಕಿನ ಏಕಾಂಗತನವನ್ನು ಹೋಗಲಾಡಿಸಲು, ತಮ್ಮ ಕಷ್ಟ ಸುಖವನ್ನು ಹಂಚಿಕೊಲ್ಲುವ ಜೀವ ಒಂದಿರಬೆಕೆನಿಸಿತು.


ಹಾಗಾಗಿ ತಮ್ಮಂತೆಯೇ ವಯಸ್ಸಾದ ಅರೋಗ್ಯವಂತ ವ್ಯಕ್ತಿಯನ್ನು ಬಾಳ ಸಂಗಾತಿಯನ್ನಾಗಿ ಪಡೆಯಲು ಇಚ್ಛಿಸಿ ಈ ಬಗ್ಗೆ ಪತ್ರಿಕೆಯಲ್ಲಿ ಜಾಹಿರಾತು ನೀಡಿದರು

ಅವರಿಗೆ ಗಂಡಿನ ಕುರಿತಾದ ಯಾವ ದೈಹಿಕ ಸೆಳೆತವೂ ಇಲ್ಲ.ಅವರಿಗೊಂದು ಅತ್ಮೀಯತೆಯನ್ನು ತೋರುವ ಸಂಗಾತಿ ಬೇಕಿದೆ ಅಷ್ಟೇ.

ಅಷ್ಟಕ್ಕೇ ಜನಬಾಯಿಗೆ ಬಂದ ಹಾಗೆ ಅವಹೇಳನ ಮಾಡಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿದೆ.ಬ್ರಾಹ್ಮಣನೇ ಆಗಬೇಕಾ ? ಬೇರೆ ಜಾತಿಯವರು ಗಂಡಸಲ್ಲವೇ ಎಂದವರೂ ಇದ್ದಾರಂತೆ

ಹುಟ್ಟನಿಂದ ಬ್ರಾಹ್ಮಣರಾಗಿ‌ ಮದು ಮಾಂಸ ತಿನ್ನದೆ ಸಸ್ಯಾಹಾರಿಯಾಗಿ ಬ್ಎಅಹ್ಮಣರ ಸಂಸ್ಕಾರ ಸಂಪ್ರದಾಯದೊಳಗೆ ಬೆಳದ ಇವರು ಬ್ರಾಹ್ಮಣ ವರನನ್ನು ಅಪೇಕ್ಷಿಸಿದ್ದರಲ್ಲಿ ತಪ್ಪೇನಿದೆ.? 

ಇಂದಿಗೂ ಹೆಚ್ಚಿನ ವಿವಾಹಗಳು ಸಜಾತಿಯರಲ್ಲೇ ನಡೆಯುತ್ತಿದೆ ಹಾಗಿರುವಾಗ ಇವರು ಕೂಡ ಸಜಾತಿಯ ಸಂಗಾತಿಯನ್ನು ಅಪೇಕ್ಷಿಸಿದ್ದರಲ್ಲಿ ನನಗೆ ಯಾವ ತಪ್ಪೂ ಕಂಡಿಲ್ಲ.


ಈ ಎಲ್ಲದರ ನಡುವೆ  ಒಂದು ನಾವೆಲ್ಲ ಸಂತಸ ಪಡುವ ವಿಚಾರ ನಡೆದಿದೆ.ಅವರಿಷ್ಟ ಪಟ್ಟಂತಹ ವ್ಯಕ್ತಿ  ಸಿಕ್ಕಿದ್ದಾರೆ‌.ಈಗ ಅವರ ಬಾಳ ಸಂಗಾತಿಯಾಗಲು ಒಪ್ಪಿದ್ದಾರೆ.

ಎಪ್ಪತ್ತರ ಹರೆಯದಲ್ಲಿ ಇವರು ತಗೊಂಡ ದಿಟ್ಟನಿರ್ಧಾರಕ್ಕೆ ,ದಿಟ್ಟ ನಿಲುವಿಗೆ ನಾನು ಶರಣಾಗಿದ್ದೇನೆ.

ಈ ಬಗ್ಗೆ ನನ್ನ ತುಂಬು ಮೆಚ್ಚುಗೆಯನ್ನು ತಿಳಿಸಿದಾಗ ತಮ್ಮನ್ನು ಅವಹೇಳನ ಮಾಡಿದವರ ಬಗ್ಗೆ ತಿಳಿಸಿತಮ್ಮ ಬೇಸರವನ್ನು ಹೊರ ಹಾಕಿದರು

ಆಗ ನಾನು ಆನೆರಾಜಮಾರ್ಗದಲ್ಲಿ ಹೋಗುವಾಗ ನಾಯಿಗಳು ಬೊಗಳುತ್ತವೆ.ಹಿಂದಿನಿಂದ ಬೊಗಳುವುದುನಾಯಿಗಳ ಸ್ವಭಾವ.ಅನೆಗೆ ಅದು ಗೊತ್ತು‌ಹಾಗಾಗಿ ಅದು ತಿರುಗಿಯೂ ನೋಡುವುದಿಲ್ಲ.ಒಂದೊಮ್ಮೆ ಅದು ಒಮ್ಮೆ ಸೊಂಡಿಲು ಬೀಸಿದರೆ ನಾಯಿಗಳ ಎಲುಬೂ ಕಾಣಲು ಸಿಗಲಾರದು

ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.ನಿಮ್ಮನಿರ್ದಾರ ಸರಿಯಾಗಿದೆ.ಮುಂದುವರಿಯಿರಿ.ಮುಂದಿನ ದಿನಗಳು ಶುಭವನ್ನು ತರಲಿವೆ ಎಂದು ಶುಭಹಾರೈಸಿ ಪೋನಿಟ್ಟೆ.

ನಿಜಕ್ಕೂ ಮಹಾಲಕ್ಷ್ಮೀಯವರದು ಮಾದರಿ ನಡೆ.ಅವರ ನಿಲುವಿನ ಬಗ್ಗೆ ನನಗೆ ಅಪಾರ ಗೌರವ ಅಭಿಮಾನ ಮೂಡಿದೆ.

ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು‌

ಡಾ.ಲಕ್ಷ್ಮೀ ಜಿ‌ ಪ್ರಸಾದ್ 


(ಇವರ ಬಗ್ಗೆ ಒಂದಕ್ಷರ ಕೆಟ್ಟದಾಗಿ ಕಮೆಮಟ್ ಮಾಡಿದರೂ ಅವರು ನನಗೆ ಎಷ್ಟೇ ಸ್ನೆಹಿತರಾಗಿದ್ದರೂ ಬ್ಲಾಕ್ ಮಾಡಿ ಬಿಸಾಕುವೆ )

-

No comments:

Post a Comment