Thursday 24 December 2020

ದೊಡ್ಡವರೆಲ್ಲ ಜಾಣರಲ್ಲ

 ನನ್ನ ಆತ್ಮ ಕಥೆ ಬೆಳೆಯುತ್ತಿದೆ..


ದೊಡ್ಡವರೆಲ್ಲ ಜಾಣರಲ್ಲ..ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಏನು ಮಾಡಿದರೂ ಸರಿ..ಅದನ್ನು ಖಂಡಿಸಲು ತಯಾರಿಲ್ಲ..


ಈ ದೊಡ್ಡವರೆಲ್ಲ ಹೀಗೆಯಾ ? ನಾ.ದಾ ಶೆಟ್ಟಿಯವರ ಬಗ್ಗೆ ನನಗೆ ಅಪಾರ ಗೌರವ ಇದೆ.ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು ಎಂಬುದು ನನ್ನ ಪ್ರಶ್ನೆ..ಯಾಕೋ ದೊಡ್ಡವರೆಲ್ಲ ಹೀಗೆಯೇ ಏನೋ ಎಂಬ ಕಹಿ ಭಾವ ಉಂಟಾಗಿದೆ ನನಗೆ..


ನಾ.ದಾ ಶೆಟ್ಟಿ ಯವರುಫೇಸ್ ಬುಕ್ನಲ್ಲಿ‌  ನನ್ನ ಮತ್ತು ಪವನಜ ಇಬ್ಬರ ಸ್ನೇಹಿತರು .


ಹಾಗಾಗಿ ನನ್ನ ಮತ್ತು ಪವನಜರ ವಾಲಿನಲ್ಲಿ ಹಾಕುವ ಎಲ್ಲಾ ಪೋಸ್ಟ್ ಗಳೂ ಇವರಿಗೆ ಸಿಗುತ್ತದೆ.ಇವರು ಫೇಸ್ ಬುಕ್  ನೋಡುತ್ತಾರೆ ಎಂಬುದಕ್ಕೆ ಈವತ್ತು ಪೇಸ್ ಬುಕ್ ನಲ್ಲಿ ಹಾಕಿದ ಯು ಟ್ಯೂಬ್ ಲಿಂಕ್ ಅನ್ನು ತೆರೆದು ಕೇಳಿ ಕಮೆಂಟ್ ಮಾಡಿದ್ದಾರೆ ಎಂಬುದು ಸಾಕ್ಷಿ ಆಗಿದೆ.


ಜುಲೈ 22 ರಿಂದ ಇಂದಿನವರೆಗೂ ಅನೇಕ ಬಾರಿ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಶ್ವನಾಥರು ವಿಕಿಪೀಡಿಯ ಕ್ಕೆ ಹಾಕಿದ ಬಗ್ಗೆ ಚರ್ಚೆ ನಡೆದಿದೆ .


ನಾನು ಅದು ನನ್ನ ಬರಹದ ಯಥಾವತ್ ಕಾಪಿ ಹಾಗಾಗಿ ಅವರದು ಕೃತಿ ಚೌರ್ಯ ಎಂಬುದಕ್ಕೆ ಸ್ಪಷ್ಟ ದಾಖಲೆಗಳನ್ನು ಕೊಟ್ಟಿದ್ದೇನೆ‌.


ಇಷ್ಟು ದಿನ ಸುಮ್ಮನಿದ್ದವರು ಈಗ ಇವರ ಹಳೆಯ ಸಹೋದ್ಯೋಗಿ ವಿಶ್ವನಾಥ ಬದಿಕಾನ  ಹಾಗೂ ಸ್ನೇಹಿತ ಪವನಜ ಮತ್ತವರ ಬೆಂಬಲಿಗರ ಮೇಲೆ ಬಲವಾದ ಕೇಸ್ ಆಗಿದೆ ಎಂದಾದ ಮೇಲೆ ಎರಡೂ ಕಡೆಯವರನ್ನು ಕೂಡಿಸಿ ಮಾತನಾಡಿಸಿದರೆ ಸತ್ಯ ಹೊರಗೆ ಬರುತ್ತಿತ್ತು ಎಂದು ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಕಮೆಂಟ್ ಮಾಡಿದ್ದಾರೆ..


ಇಷ್ಟು ದಿನ ಇವರೆಲ್ಲ ಏನು ಮಾಡುತ್ತಿದ್ದರು ? ನನ್ನ ಬರಹವನ್ನು ಕೃತಿ ಚೌರ್ಯ ಮಾಡಿದ್ದಲ್ಲದೆ, ಅದನ್ನು  ಆಕ್ಷೇಪ ಮಾಡಿದ ನನ್ನನ್ನು ಅವಹೇಳನ ಮಾಡಿದಾಗ ಏನು ಮಾಡುತ್ತಿದ್ದರು..? 


ಇವರುಗಳ ಸತ್ಯ ಪರೀಕ್ಷೆಗೆ ಹಾಜರಾಗಿ  ನನ್ನ ಬರಹ ಎಂದು ಸಾಬೀತು ಮಾಡುವ ಅಗತ್ಯ ನನಗಿಲ್ಲ...

ಮೊನ್ನೆ ನೋಡಿದರೆ ತನ್ನ ನಾಲ್ಕು ಸಾಲಿನ ಕವಿತೆಯನ್ನು ಯಾರೋ  ಕೃತಿ ಚೌರ್ಯ ಮಾಡಿದ್ದಾರೆ ಎಂದು ಆಕ್ಷೇಪ ಮಾಡಿದ ಡುಂಡಿರಾಜರು ತನ್ನ ಸ್ನೇಹಿತ ವಿಶ್ವನಾಥ ಬದಿಕಾನ ಮಾಡಿದ ನನ್ನ ಒಂದು ಸಾವಿರಕ್ಕಿಂತ ಹೆಚ್ಚಿನ ಸಂಶೋಧನಾ ಬರಹವನ್ನು ಯಥಾವತ್ ಕಾಪಿ ಮಾಡಿ ಕೃತಿ ಚೌರ್ಯ ಮಾಡಿದ್ದನ್ನು ,ಅದನ್ನು ಸಮರ್ಥನೆ ಮಾಡಿ ನನ್ನನ್ನು ನಿಂದಿಸಿದ ತನ್ನ ಸ್ನೇಹಿತ ಪವನಜರನ್ನು ಒಂದು ಮಾತಿನಲ್ಲಿ ಖಂಡಿಸಲು ತಯಾರಿಲ್ಲ.


ಈಗ ನೋಡಿದರೆ ನಾನು ತುಂಬಾ ಗೌರವ ಇರಿಸಿದ್ದ ನಾ ದಾ ಶೆಟ್ಟಿಯವರು ಹೀಗೆ ಕಮೆಂಟ್ ಮಾಡಿದ್ದಾರೆ..

ಇವರು ನನ್ನ ಮೂಲ ಬರಹವನ್ನು ಓದಿಲ್ಲವಂತೆ..ವಿಶ್ವನಾಥರು ಕದ್ದು ಹಾಕಿದ ವಿಕಿಪೀಡಿಯ ಬರಹವನ್ನು ಓದಿಲ್ಲ..ಇದ್ಯಾವುದೂ ಮಾಡದೇ ಇವರುಗಳ ಮಾತು ಕೇಳಿ  ತನ್ನ ಸ್ನೇಹಿತರ ಪರ ನಿಂತು ಜಾನಪದಕ್ಕೆ ಕಾಪಿ ರೈಟ್ ಇಲ್ಲ ಎಂಬ ವಿತ್ತಂಡ ಮಾಡಿದ್ದಾರೆ 


ದ್ವಂದ್ವ ನಿಲುವಿನ, ಮುಖ ನೋಡಿ ಮಣೆ ಹಾಕುವ ಈ ದೊಡ್ಡವರ ಸಹವಾಸವೇ ಆಗದಪ್ಪ..

ಇವರಿಬ್ಬರೂ ನನ್ನ ಆತ್ಮ ಕಥೆಯಲ್ಲಿ ಋಣಾತ್ಮಕ ಪಾತ್ರಗಳಾಗಿ ಬಂದ ಬಗ್ಗೆ ನನಗೆ ಖೇದವಿದೆ‌..

Nada Shetty

ನನಗೂ ಈ ಮಾತು ಬರೆಯಲು ಬಹಳ ಬೇಸರವಾಗುತ್ತಿದೆ..ಆದರೆ ನಿಮ್ಮಗಳ ಇಷ್ಟು ದಿನದ ಮೌನ,ಇಷ್ಟಾಗಿಯೂ ನನ್ನ ಬರಹದ ಬಗ್ಗೆ ಅಪನಂಬಿಕೆ ತೋರಿದ್ದು ನನ್ನನ್ನು ಇಷ್ಟು ಖಾರವಾಗಿ ಬರೆಸಿದೆ‌

ಕ್ಷಮಿಸಿ.


 ನನಗೆ ಸತ್ಯ ಪರೀಕ್ಷೆಯ ಅಗತ್ಯವಿಲ್ಲ‌.ಯಾಕೆಂದರೆ ಅದು ನನ್ನ ಬರಹ.ಅಪರೂಪದ ಇಷ್ಟರ ತನಕ ಎಲ್ಲೂ ಹೆಸರು ಕೂಡ ದಾಖಲಾಗದ ಜನಪದ ಕುಣಿತವಿದು.ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಎಂಫಿಲ್, ಪಿಎಚ್ ಡಿ ಪಡೆದ ವಿದ್ವಾಂಸರ ಪ್ರಬಂಧಗಳಲ್ಲಿ ಕೂಡ ಇದರ ಉಲ್ಲೇಖ ಇಲ್ಲ..ಇನ್ನೂ ಮಾಹಿತಿ ಎಲ್ಲಿಂದ ? 


ನನ್ನದು ಜಾನಪದ ಹಾಡಿನ ಸಂಗ್ರಹವಲ್ಲ..ಈ ಕುಣತದ ಕುರಿತಾದ ಬರಹವದು..ಈ ಹಾಡನ್ನು ಕುಣಿತವನ್ನು..ಅದನ್ನು ಊರೂರು ಅಲೆದು ಎಲ್ಲಿದೆ ಎಂದು ತಿಳಿದು ಅಲ್ಲಿ ಹೋಗಿ  ಹಾಡಿನ ಒಂದೊಂದು ಭಾಗವನ್ನು ಬೇರೆ ಬೇರೆ ಕಲಾವಿದರಿಂದ ಗೌರವ ಧನ ಕೊಟ್ಟು ಹಾಡಿಸಿ ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ವಿಶ್ಲೇಷಣೆ ಮಾಡಿ ಸಾಂಸ್ಕೃತಿಕ ಪದ ಕೋಶ ತಯಾರಿಸಿ  ಕುಣಿತದ ಬಗ್ಗೆ ಅಧ್ಯಯನ ಮಾಡಿ ಲೇಖನವಾಗಿ ಬರೆದು ಪ್ರಕಟಿಸಿದವಳು ನಾನು..


ಯಾರಿಗೋ ಕದ್ದು ತನ್ನ ಹೆಸರಿನಲ್ಲಿ ಹಾಕಿ ಮೆರೆಯಲು ಹಾಕಿದ್ದಲ್ಲ‌ ಅದು..ಹಾಗಾಗಿ ನನ್ನ ಬರಹಕ್ಕೆ ಕಾಪಿ ರೈಟ್ ಇಟ್ಟುಕೊಂಡಿದ್ದೇನೆ.


ಜನರ ಸಮುದಾಯದಲ್ಲಿ ಜನಜನಿತವಾಗಿರುವ ಸಾಮಾನ್ಯ ಜನಪದ ಹಾಡುಗಳಿಗೆ ಕಾಪಿ ರೈಟ್ ಇಲ್ಲ ..ಆದರೆ ಜನಪದ ಕುಣಿತಕ್ಕೆ ಸಂಬಂಧಿಸಿದ ಅಧ್ಯಯನಾತ್ಮಕ ಬರಹಕ್ಕೆ ಕಾಪಿ ರೈಟ್ ಇದೆ..


ನೀವು  ಜಾನಪದ ಬರಹಕ್ಕೆ ಕಾಪಿ ರೈಟ್ ಇಲ್ಲ ಎನ್ನುವುದಾದರೆ ನಿಮ್ಮ‌ ಪ್ರಕಾರ ತುಳು ಜನಪದಕ್ಕೆ ಸಂಬಂಧಿಸಿದ ಡಾ.ಚಿನ್ನಪ್ಪ ಗೌಡರ  ಪಿ ಎಚ್ ಡಿ ಪ್ರಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನ, ಡಾ.ವಿವೇಕ ರೈಗಳ ಪಿ ಎಚ್ ಡಿ ಪ್ರಬಂಧ ತುಳು ಜನಪದ ಸಾಹಿತ್ಯ ಎಂಬ ಮಹಾ ಪ್ರಬಂಧಕ್ಕೆ ಕೂಡ ಕಾಪಿ ರೈಟ್ ಇಲ್ಲ ಎಂದಾಗುತ್ತದೆ.. 


ಯಾಕೆಂದರೆ ಅದೆಲ್ಲ‌ ಜಾನಪದ ಹಾಡು ಆರಾಧನೆ ಕುಣಿತಗಳನ್ನು  ಆದರಿಸಿ ಬರೆದದ್ದು .. ಅದಕ್ಕೆ ಕಾಪಿ ರೈಟ್ ಇದೆ ಎಂದಾದರೆ ನನ್ನ ಬರಹಕ್ಕೂ ಕಾಪಿ ರೈಟ್ ಇದೆ..


ಯಾಕೆಂದರೆ ಇದು ಸಂಗ್ರಹವಲ್ಲ..ಬರಹ


..ನಿಮ್ಮ ಪ್ರಕಾರ ಜಾನಪದ ಹಾಡನ್ನು ಕುಣಿತವನ್ನು ಅಧ್ಯಯನ ಮಾಡಿದ ಬರಹಕ್ಜೆ ಕಾಪಿರೈಟ್ ಇಲ್ಲ ಎಂದಾದರೆ ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಮಹಾ ಪ್ರಬಂಧ ರಚಿಸಿ ಡಾಕ್ಟರೇಟ್ ಪದವಿ ಪಡೆದ ಪಾಲ್ತಾಡಿಯವರ ಮಹಾ ಪ್ರಬಂಧ ಕ್ಕೂ ಕಾಪಿ ರೈಟ್ ಇಲ್ಲ..


ಕಾಪಿ ರೈಟ್ ಇಲ್ಲ ಜಾನಪದ ಕ್ಕೆ ಡಾಕ್ಟರೇಟ್ ಕೊಡುವುದು ತಪ್ಪು ನಿಮ್ಮ‌ಪ್ರಕಾರ..ವಿತ್ತಂಡ ವಾದ ಬಿಟ್ಟು ಅರ್ಥ ಮಾಡಿಕೊಳ್ಳಿ.


.ಅವರದು  ಅನೇಕ ಜನಪದ ಕುಣಿತಗಳನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಬರೆದ ಮಹಾ ಪ್ರಬಂಧ.


 ನನ್ನದು  ಒಂದು ಅಪರೂಪದ ಇಷ್ಟರ ತನಕ ಯಾರೂ ಅಧ್ಯಯನ ಮಾಡದ ಒಂದು ಅಪರೂಪದ ಜನಪದ ಕುಣಿತದ ಬಗ್ಗೆ ಅಧ್ಯಯನ ಮಾಡಿ ಬರೆದ ಸಂಶೋಧನಾ ಪ್ರಬಂಧ..ಅಷ್ಟೇ ವ್ಯತ್ಯಾಸ..


ಡಾ.ಬಿ ಎ ವಿವೇಕ ರೈ ,ಡಾ.ಚಿನ್ನಪ್ಪ ಗೌಡ,ಡಾ.ಪಾಲ್ತಾಡಿಯವರ ಪಿಎಚ್ ಡಿ ಮಹಾ ಪ್ರಬಂಧ ಕ್ಕೆ ಕಾಪಿ ರೈಟ್ ಇರುವುದಾದರೆ ನನ್ನ ಸಂಶೋಧನಾ ಬರಹ ಬೈಲ ಮಾರಿ ನಲಿಕೆಗೆ ಕಾಪಿ ರೈಟ್ ಇದೆ..


ನಿಮ್ಮ ಸ್ನೇಹಿತರ ಸಮರ್ಥನೆ ಗಾಗಿ ಪೊಳ್ಳು ವಾದ ಮಾಡಬೇಡಿ..


ಕದ್ದದ್ದನ್ನು ಸಮರ್ಥನೆ ಮಾಡುವ ನಿಮ್ಮ ಮತ್ತು ನಿಮ್ಮಂತಹವರ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ..


ಪವನಜ ಮತ್ತು ವಿಶ್ವನಾಥರಿಗೆ ಕೆಲವು ಪ್ರಶ್ನೆ ಗಳನ್ನು ಕೇಳಿದ್ದೆ,ಅವರಿಬ್ಬರೂ ಒಂದಕ್ಕೂ ಉತ್ತರಿಸಿಲ್ಲ..ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ತರಿಸಿ ಸರ್‌.ಸತ್ಯ ಹೊರಗೆ ಬರಿಸಲು..ನನಗೆ ಸತ್ಯ ಹೊರಗೆ ಬರಿಸುವ ಅಗತ್ಯ ಇಲ್ಲ..ಯಾಕೆಂದರೆ ನನಗೆ ಗೊತ್ತು ಅದು ನನ್ನ ಬರಹ ಎಂದು.. ಅದರೂ ನೀವು ಸಲಹೆ ಕೊಟ್ಟ ಕಾರಣ ಆ ಪ್ರಶ್ನೆ ಗಳನ್ನು ಯಥಾವತ್ ಇಲ್ಲಿ ಹಾಕುವೆ,ಉತ್ತರ ತರಿಸಿ ನಂತರ ಸತ್ಯವನ್ನು ಹೊರಗೆ ತೆಗೆಯಿರಿ .


(ವಿಶ್ವನಾಥ ಬದಿಕಾನ  vishwanatha badikana  ಅವರೇ..ಪವನಜ ಅವರೇ ‌‌ ನಿಮ್ಮಿಬ್ಬರಿಗೆ ಅಂತಃ ಸಾಕ್ಷಿ ಎಂಬುದು ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ (ಪವನಜ  pavanaja ub ಅವರೇ ಇದನ್ನು ಓದಿ ಗಮನವಿಟ್ಟು,ಮತ್ತೆ ನನ್ನ ಬಗ್ಗೆ ಇರುವ ದ್ವೇಷಕಾರಿ ಕೆಟ್ಡದಾಗಿ ಬರೆಯಿರಿ..)


1 ನೀವು ವಿಕಿಪೀಡಿಯಕ್ಕೆ  2016 ರಲ್ಲಿ ಹಾಕಿದ ಬೈಲ ಮಾರಿ ನಲಿಕೆ ಕುರಿತಾದ ಬರಹದ ಮೂಲ ಯಾವುದು? 


2 ಪವನಜರು ನೀವು ಜಾನಪದ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ ಓದಿ ವಿಕಿಪೀಡಿಯ ಕ್ಕೆ ಹಾಕಿದ್ದಾರೆ ಎಂದು ಬರೆದಿದ್ದಾರೆ‌,ನೀವು ಅದನ್ನು ಓದಿ ಬರೆದಿದ್ದರೆ ನನ್ನ ಲೆಖನ ನನ್ನ ಹೆಸರು ಮತ್ತು ಜಾನಪದ ಕರ್ನಾಟಕ ಜರ್ನಲ್ ನ ಉಲ್ಲೇಖ ಯಾಕೆ ಹಾಕಿಲ್ಲ?

( ಈಗ ಇರುವದ್ದು ಮೊನ್ನೆ ಭರತೇಶ್ ಅಲಸಂಡೆ ನ

ಮಜಲು ಸೇರಿಸಿದ ಉಲ್ಲೇಖ ಇದರಲ್ಲೂ ಪ್ರಕಟವಾಗಿದೆ ಎಂದು ಅವರಿಗೆ ಕೂಡ ತಿಳಿಸಿದವಳು ನಾನೇ) 


2 ನೀವು ಅಲ್ಲಿ ಮೂಲವಾಗಿ ಬ್ಯೂಟಿ ಅಫ್ ತುಳು ನಾಡು ಪೇಸ್ ಬುಕ್ ಲಿಂಕ್ ಹಾಕಿದ್ದಿರಿ..ನನ್ನ  ಬರಹವನ್ನು ಬ್ಯೂಟಿ ಆಫ್ ತುಳುನಾಡು ತಮ್ಮ ಪುಟದಲ್ಲಿ ಹಾಕಿದ್ದು ಅದರಲ್ಲಿ courtesy ಎಂದು ಬರೆದು ನನ್ನ  ಹೆಸರು ಮತ್ತು ಬ್ಲಾಗ್ ಲಿಂಕ್ ಹಾಕಿದ್ದು ಅವರ ಬರಹ ಅಲ್ಲ ಎಂಬುದನ್ನು ಸೂಚಿಸಿದ್ದರು ಆದರೂ ನೀವು ಬ್ಯೂಟಿ ಆಫ್ ತುಳುನಾಡು ಪೇಸ್ ಬುಕ್ ನ ಲಿಂಕ್ ಹಾಕಿದಿರಿ ಯಾಕೆ ? ನಿನ್ನೆ ತನಕ ಅದೇ ಲಿಂಕ್ ಇತ್ತಲ್ಲ..


3 ನೀವು ಕಾಪಿ ಮಾಡದೆ ನನ್ನ ಸಿಂಗಲ್ ಸೋರ್ಸ್ ಬರಹವನ್ನು ಜಾನಪದ ಕಾರ್ನಾಟಕದಲ್ಲಿ ಓದಿ ಅರ್ಥ ಮಾಡಿಕೊಂಡು ಬರೆದದ್ದಾದರೆ ನನ್ನ ಬರಹದ ಯಥಾವತ್ ಕಾಪಿ ಯಾಕೆ ಇದೆ ತಪ್ಪುಗಳ ಸಹಿತ? ಫ್ರಶ್ನಾರ್ಥಕ ಚಿಹ್ನೆ ,ಸಂಖ್ಯೆಗಳ ಸಹಿತ ? ಏನವು ಪ್ರಶ್ನಾರ್ಥಕ ಚಿಹ್ನೆ ? ಸಂಖ್ಯೆ,? ನಾನು ಜಾನಪದ ಕರ್ನಾಟಕಕ್ಕೆ ಬರೆದ ಬರಹಗಳಲ್ಲಿ ಈ ಚಿಹ್ನೆ ಮತ್ತು ಸಂಖ್ಯೆಗಳು ಏನೆಂಬ ವಿವರಣೆ ಇದೆ..ಬ್ಲಾಗ್ ನಲ್ಲಿ ಬರೆದಿಲ್ಲ, ಟೈಪಿಂಗ್ ತಪ್ಪುಗಳು ಜಾನಪದ ಕರ್ನಾಟಕದಲ್ಲಿ ಇಲ್ಲ ಯಾಕೆಂದರೆ ಅದು ನಾನು ಟೈಪ್ ಮಾಡಿದ್ದಲ್ಲ ,ನಾನು ಕೈ ಬರಹದಲ್ಲಿ ಕಳುಹಿಸಿದ ಬರಹ ಅದು.ಬ್ಲಾಗ್ ನಲ್ಲಿ  ನಾನು ಟೈಪಿಸುವಾಗ ಟೈಪಿಂಗ್ ಎರರ್ ಗಳು ಅಗಿವೆ,ಅದೇ  ಮೂವತ್ತಕ್ಕಿಂತ ಹೆಚ್ಚಿನ ಅದೇ ತಪ್ಪುಗಳು,ಅದೇ ಸಂಖ್ಯೆಗಳು ,ಅದೇ ಫ್ರಶ್ನಾರ್ಥಕ ಚಿಹ್ನೆ ಅದೇ ಜಾಗದಲ್ಲಿ ನೀವು ಟೈಪ್ ಮಾಡುವಾಗಲೂ ಹಾಕಿದಿರಾ ? ಯಾಕೆ ? ವಿವರಣೆ ಯಾಕಿಲ್ಲ‌? ಯಾಕೆಂದರೆ ನನ್ನ ಬ್ಲಾಗ್ ನಲ್ಲಿ ಇರಲಿಲ್ಲ ಹಾಗಾಗಿ ಕಾಪಿ ಮಾಡುವಾಗ ಅದೇ ತಪ್ಪುಗಳು ಅದೇ ಸಂಖ್ಯೆಗಳು ಅದೇ ಚಿಹ್ನೆಗಳು ಅಲ್ಲಿ ಬಂತು..ಅದಕ್ಕೆ ವಿವರಣೆ ಬರಲಿಲ್ಲ..😀 ಅದು ಮಕ್ಕಿ ಕಾ ಮಕ್ಕಿ ಕಾಪಿ,ನೊಣ ಪ್ರತಿ..😀😁


4 ನೀವು ಹಾಕಿದ ಹಾಡಿನಲ್ಲಿ ಅಲ್ಲಲ್ಲಿ ಕೆಲವು ಸಂಖ್ಯೆಗಳಿವೆ ಏನವು ? ಯಾಕೆ ಆ ಸಂಖ್ಯೆಗಳನ್ನು ಹಾಕಿದಿರಿ? 


5 ಈ ಲೇಖನ ಜಾನಪದ ಕರ್ನಾಟಕದಲ್ಲಿ ಒಂದಕ್ಷರ ತಪ್ಪಿಲ್ಲದೆ ಬಂದಿದೆ,ಮತ್ತು ಬೇರೆ ತರನಾಗಿ ಇದೆ,ನೀವು ಹಾಕಿದ ಬರಹ ನನ್ನ ಬ್ಲಾಗ್ ಬರಹದ ಯಥಾವತ್ ಕಾಪಿ ಇದೆಯಲ್ಲ..? ನಡು ನಡುವೆ ಆದ ಟೈಪಿಂಗ್ ತಪ್ಪುಗಳು ಕೂಡ ನನ್ನ ಬ್ಲಾಗ್ ನಲ್ಲಿ ಇರುವಂತೆಯೇ ಇದೆಯಲ್ಲ ಯಾಕೆ ? 


6 ಕದ್ದು ಬಳಸಿದಾಗ ಕೊನೆಯ ಪಕ್ಷ ಎಲ್ಲಿಂದ ಕಾಪಿ ಮಾಡಿದ್ದೀರಿ ಅವರ ( ನನ್ನ) ಹೆಸರು ಬ್ಲಾಗ್ ಲಿಂಕ್  ಹಾಕಬಹುದಿತ್ತಲ್ಲ..ಬೇರೆಯವರ ಫೇಸ್ ಬುಕ್ ಲಿಂಕ್ ಹಾಕಿದ್ದಿರಲ್ಲ..ನಿನ್ನೆ ತನಕ ಅದೊಂದೇ ಉಲ್ಲೇಖ ಇತ್ತಲ್ವಾ? 


7 ಕಾಂತು ಅಜಿಲರು ಸಂಗ್ರಹಿಸಿ ದ ನಲಿಕೆ ಪದ ಎಂದು ಇನ್ನೊಂದು ಉಲ್ಲೇಖ ಹಾಕಿದ್ದೀರಿ,ಯಾವ ಕಾಂತು ಅಜಿಲರು,ಯಾವ ಊರಿನವರು ,ಅವರ ವಿಳಾಸ ತಿಳಿಸುತ್ತೀರಾ? ಯಾಕೆಂದರೆ ಅವರ ಮೂಲಕ ಗೌರವ ಧನ ನೀಡಿ  ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅಸ್ಪಷ್ಟತೆ ಇರುವಲ್ಲಿ ಊಹಾ ಪಾಠ ಹಾಕಿ ಅನುವಾದಿಸಿ, ಬೈಲ ಮಾರಿ ನಲಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಲೇಖನ ಬರೆದವಳು ನಾನು ಹಾಗಾಗಿ ನನಗೆ ಅವರು ಯಾರೆಂದು ಗೊತ್ತು ? ನಿಮಗೆ ಅವರು ಯಾವಾಗ ಹೇಗೆ ಕೊಟ್ಟರು ತಿಳಿಸುವಿರಾ? 


ಅಲ್ಲಿ ಕಾಂತು ಅಜಿಲರು ಸಂಗ್ರಹಿಸಿ ಕೊಟ್ಟ ಹಾಡು ಎಂದು ಉಲ್ಲೇಖದಲ್ಲಿ ಹಾಕಿದ್ದೀರಲ್ಲ .. ಕಾಂತು ಅಜಿಲರು ಯಾರು ? ಅಜಿಲರಸರ ಸಂತತಿಯವರಾ? 

ನಾನು ಯಾರಿಂದ ಗೌರವ ಧನ ಕೊಟ್ಟು ರೆಕಾರ್ಡ್ ಮಾಡಿ ಸಂಗ್ರಹಿಸಿದ್ದೆ ಎಂದು ಬರೆಯುವಾಗ ತಪ್ಪಿ ಕಾಂತು ಅಜಿಲ ಎಂದು ಬರೆದಿದ್ದೆ ಅದನ್ನು ಕೂಡ ಹಾಗೆಯೇ ಕಾಪಿ ಮಾಡಿದ್ದೀರಿ ಅಲ್ವಾ? ಅವರ ನಿಜವಾದ ಹೆಸರು ಏನು ತಿಳಿಸಿ ? ನಿಮಗೆ ಯಾವಾಗ ಹೇಗೆ ಕೊಟ್ಟರು ತಿಳಿಸ್ತೀರಾ ? 


8 ಅಲ್ಲಿ ಅನುವಾದದಲ್ಲಿ ನಡು ನಡುವೆ ನಾನು ಫ್ರಶ್ನಾರ್ಥಕ ಚಿಹ್ನೆ ಹಾಕಿದ್ದೆ,ನೀವು ಹಾಕಿದ್ದರಲ್ಲೂ ನಾನು ಹಾಕಿದ ಸ್ಥಳಗಳಲ್ಲಿಯೇ  ಅದು ಇದೆ ,ಯಾಕೆ ಹಾಕಿದಿರಿ? ಸಂಖ್ಯೆ ಗಳನ್ನು ಯಾಕೆ ನಾನು ಹಾಕಿದ ಕಡೆಗಳಲ್ಲಿಯೇ ಇದೆ ಯಾಕೆ ? ಅದೇಕೆ ಎಂದು ನಾನು ಜಾನಪದ ಕರ್ನಾಟಕದ ನನ್ನ ಬರಹದಲ್ಲಿ ಟಿಪ್ಪಣಿ ಯಲ್ಲಿ ಬರೆದಿದ್ದೆ,ಬ್ಲಾಗ್ ನಲ್ಲಿ ಹಾಕುವಾಗ ಬಿಟ್ಟು ಹೋಗಿತ್ತು.ನಾನು ಸಂಖ್ಯೆಗಳನ್ನು ಹಾಕಿದ್ದಕ್ಕೆ  ಕಾರಣ ತಿಳಿಸಿದೆ,ನೀವು ಕೂಡ ನಾನು ಹಾಕಿದೆಡೆಗಳಲ್ಲಿಯೇ ಅದೇ ಸಂಖ್ಯೆಗಳನ್ನು ಹಾಕಿದ್ದೀರಲ್ಲ ಯಾಕೆ ? ಕಾಪಿ ಮಾಡುವಾಗ ಅದೇ ತಪ್ಪುಗಳು ಸಂಖ್ಯೆಗಳು ಕೂಡ ಬಂತು ಅಷ್ಟೇ ..ಉತ್ತರ ತಾನೇ ಬೇರೆ ಉತ್ತರ ಇದೆಯಾ? ಬೇರೆ ಇದ್ದರೆ ತಿಳಿಸಿ..ಅದು ಬಿಟ್ಟು ನನ್ನ ನಿಂದನೆ ಮಾಡುದಲ್ಲ..


9 ಟ಼ೈಪಿಂಗ್್್ ್್ ಮಾಡುವಾಗ ಈತರಹದ ತಪ್ಪುಗಳು ನನ್ನ ಬರಹದಲ್ಲಿ ಅನೇಕೆಡೆಗಳಲ್ಲಿ ಆಗಿದೆ..ಅದೇ ತಪ್ಪುಗಳು   ನನ್ನಲ್ಲಿ ಇರುವಂತೆಯೇ ನೀವು  ಬರೆದದ್ದರಲ್ಲೂ ಆಗಿವೆ ಯಾಕೆ ? 

ಎಲ್ಲಕ್ಕಿಂತ ದೊಡ್ಡ ತಪ್ಪಿದೆ..ಅದೇನೆಂದು ಈಗ ಹೇಳುವುದಿಲ್ಲ..ನೀವು ಬರೆದ ಹಾಡನ್ನು ಕಾಂತು ಅಜಲರಿಗೆ ಒಮ್ಮೆ ತೋರಿಸಿ,ಏನು ತಪ್ಪು ಎಂದು ಅವರು ಹೇಳುತ್ತಾರೆ.


10 ಕದ್ದ ಮೇಲೆ ತಪ್ಪನ್ನು ಒಪ್ಕಿಕೊಳ್ಳುವ ಬದಲು ನನ್ನ ಮೇಲೆಯೇ ಅರೋಪ ಮಾಡ್ತಿರಲ್ಲ‌.ನೀವಿಬ್ಬರು ನಾ ಇಕೆ ಆಗಲ್ವಾ ? ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು..


11 ಪವನಜ ರಿಗೆ ನಾಲ್ಕು ವರ್ಷಗಳ ಹಿಂದೆ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಕಿಪೀಡಿಯ ಕ್ಕೆ ನೀವು ಹಾಕಿದ್ದು ತಪ್ಪೆನಿಸಲಿಲ್ಲ..ವಿಕಿಪೀಡಿಯ ನಿಯಮಕ್ಕೆ ವಿರೋಧ ಎನಿಸಲಿಲ್ಲ..ನನ್ನ ಬರಹಕ್ಕೆ ಯಾರದೋ ಫೇಸ್ ಬುಕ್ ಲಿಂಕ್ ಕೊಟ್ಟದ್ದು ಕಳೆದ ನಾಲ್ಕು ವರ್ಷಗಳಲ್ಲಿ ತಪ್ಪೆನಿಸಲಿಲ್ಲ..ಯಾವುದರಿಂದ ಕಾಪಿ ಮಾಡಿ ಬರೆದಿದ್ದೀರೋ ಅವರ ಬ್ಲಾಗ್ ಲಿಂಕ್ ಹಾಕುದು ತಪ್ಪೆನಿಸಿದೆ..

ಅಲ್ಲದೇ ನನ್ನದೇ ತಪ್ಪೆಂಬಂತೆ ಬಿಂಬಿಸಲಲು ಹೊರಟಿದ್ದೀರಿ,ನಾಚಿಗೆ ಆಗಲ್ವಾ ‌ನಿಮ್ಮಿಬ್ಬರಿಗೆ ? ಅಂತಃ ಸಾಕ್ಷಿ ಚುಚ್ಚುದಿಲ್ವಾ ? ಕದ್ದಿದ್ದಲ್ಲದೇ  ಮೂಲವನ್ನು ಮುಚ್ಚಿಟ್ಟು ಬೇರೆಯವರ ಲಿಂಕ್ ಕೊಟ್ಟು ಅದನ್ನು ಸಮರ್ಥನೆ ಮಾಡುವಾಗ‌...ಕೋರ್ಟ್‌ ನಲ್ಲೂ ಇದೇ ಸುಳ್ಳನ್ನು ಸಮರ್ಥನೆ ಮಾಡುತ್ತೀರಾ ? ನಿಮ್ಮ ಜೊತೆಗೆ ಪವನಜ ಕೂಡ ಕೋರ್ಟಿಗೆ ಬಂದು ಯಾರದೋ ಬರಹ ಯಥಾವತ್  ಕಾಪಿ ಮಾಡಿ ವಿಕಿಪೀಡಿಯದಲ್ಲಿ ಹಾಕಬ ಹುದು ಎಂದು ಸಾಕ್ಷಿ ನುಡಿಯುತ್ತಾರಾ ಕೇಳಿ ನೋಡಿ..

ಆಸಕ್ತರು ನಾನು ಹೇಳಿದ ವಿಚಾರಗಳನ್ನು ವೆರಿಫೈ ಮಾಡಬಹುದು ಅದಕ್ಕಾಗಿ ನನ್ನ ಬ್ಲಾಗ್ ಬರಹವ ಲಿಂಕ್ ಕೊಟ್ಟಿದ್ದೇನೆ ,ಇಲ್ಲಿ ವಿವರಣೆಗಳನ್ನು ಯಥಾವತ್ ಒಂದು ಶಬ್ದ ಬದಲಾಯಿಸದೆ ತುಳುವಿನಲ್ಲಿ ಹಾಕಿದ್ದಾರೆ.ಉಳಿದಂತೆ ಮೂಲ ತುಳು ಹಾಡು ಮತ್ತು ಅನುವಾದ ಅದರಲ್ಲನ ಟೈಪಿಂಗ್ ಎರರ್ ಸಂಖ್ಯೆ ಫ್ರಶ್ನಾರ್ಥಕ ಚಿಹ್ನೆಗಳೊಂದಿಗೆ ಇರುವ ಹಾಗೆಯೇ ಹಾಕಿದ್ದಾರೆ ,ಅವರ upload ಮಾಡಿ ನಿನ್ನೆ ತನಕ ಬದಲಾಗದೇ ಇದ್ದ ಬರಹದ ಸ್ಕ್ರೀನ್ ಶಾಟ್ ಅನ್ನು ವಿಕಿಪೀಡಿಯ ಎಡಿಟ್ ಹಿಸ್ಟರಿ ಮೂಲಕ ತೆಗೆದು ಇಲ್ಲಿ ಹಾಕಿದ್ದೇನೆ ನೋಡಿ 

ಡಾ.ಲಕ್ಷ್ಮೀ ಜಿ ಪ್ರಸಾದ.

ಕನ್ನಡ ಉಪನ್ಯಾಸಕರು. 

ಸರ್ಕಾರಿ ಪಿಯು ಕಾಲೇಜು

ಬೆಂಗಳೂರು 


https://laxmipras.blogspot.com/2013/02/baila-maari-nalke-rare-folk-dance-of.html?m=1


https://laxmipras.blogspot.com/2013/02/baila-maari-nalke-rare-folk-dance-of.html?m=1


https://m.facebook.com/story.php?story_fbid=2186258434832779&id=100003459322515

No comments:

Post a Comment