Wednesday 23 December 2020

ನನಗೂ ಆತ್ಮವಿದೆ

 ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ


ಎರಡು ವರ್ಷದ ಮೊದಲು‌ ಐ ಎಂ ಎ ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ  ನೆಲಮಂಗಲ ಕಾಲೇಜಿನ ಸಹೋದ್ಯೋಗಿಗಳಾದ ಸಯೀದಾ ಮೇಡಂ ಮತ್ತು ಜಗದೀಶ್ ಮುಂದಿನದು ಕಣ್ವ ಎಂದು ಭವಿಷ್ಯ ನುಡಿದಿದ್ದರು..

ಈಗ ಹಾಗೆಯೇ ಆಗಿದೆ..

ಪದೇ ಪದೇ ವಂಚನೆಯ ಪ್ರಕರಣಗಳು ಕಾಣುತ್ತಿದ್ದರೂ ಮತ್ತೆ ಮತ್ತೆ ಅತಿಯಾಸೆಗೆ ಬಲಿಯಾಗಿ ಇದ್ದುದನ್ನು ಜನ ಕಳೆದುಕೊಳ್ಳುತ್ತಾರೆ

ಈ ವಿಚಾರ ಬಂದಾಗ ಇನ್ನೊಂದು ವಿಷಯ ನೆನಪಾಯ್ತು

ಬಹುಶಃ 2001-2002 ನೇ ಇಸವಿ ಎಂದು ನೆನಪು

ಪ್ರಸಾದ್ ಮಣಿಪಾಲ ಪೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.


ಕಂಪೆನಿಯ ಆಗು ಹೋಗುಗಳನ್ನು ಗಮನಿಸುತ್ತಿದ್ದ ಅವರಿಗೆ ಅಪಾಯದ ಸೂಚನೆ ಸಿಕ್ಕಿತ್ತು.

ಹಾಗಾಗಿ ಅವರ ಮೇಲಿನ ನಂಬಿಕೆಯಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ದುಡ್ಡು ಕಟ್ಟಿದವರಿಗೆ ತೆಗೆಸಿಕೊಟ್ಟರು.


ಇನ್ನು ಅನೇಕ ಪರಿಚಿತರು ಅವರಾಗಿಯೇ ಬಂದು ಕಟ್ಟಿದವರಿದ್ದರು.ಅವರುಗಳಿಗೂ ಸೂಕ್ಷ್ಮವಾಗಿ ಠೇವಣಿ ಹಿಂತೆಗೆಯುವಂತೆ ಸಲಹೆ ನೀಡಿದರು.


ನನ್ನ ಮಾವ ಮೈದುನರೂ ಕೂಡ ಮಣಿಪಾಲ್ ಪೈನಾನ್ಸ್ ಹಾಗೂ ಮಣಿಪಾಲ್ ಅಪೆಕ್ಸ್ ? ನಲ್ಲಿ ದುಡ್ಡಿಟ್ಟದ್ದು ನಮಗೆ ಗೊತ್ತಿತ್ತು.ಹಾಗಾಗಿ ಅವರಿಗೂ ಹಿಂತೆಗೆಯುವಂತೆ  ಪ್ರಸಾದ್ ಹೇಳಿದ್ದರು.ಇನ್ನು ಅನೇಕ ಬಂಧುಗಳಿಗೂ ಹೇಳಿದ್ದರು.

ಅವರೆಲ್ಲ ಅವರು ದುಡ್ಡು ಇಟ್ಟಿದ್ದ ಮಣಿಪಾಲ್ ಪೈನಾನ್ಸ್,ಅಪೆಕ್ಸ್ ನ ಬ್ರಾಂಚ್ ಮ್ಯಾನೇಜರ್ ಅಲ್ಲಿ,ಇದು ಮುಳುಗುತ್ತದೆಯಂತೆ ಹೌದೇ ಎಂದು ಹೋಗಿ ಕೇಳಿದರು.

ಹೌದೆಂದು ಹೇಳಿದರೆ ಅವರುಗಳ ಕೆಲಸ ಉಳಿಯುತ್ತದಾ? ಯಾರಾದರೂ ಹಾಗೆ ಹೇಳುವರೇ? ಛೆ..ಛೆ ಇಲ್ಲ ಎಂದು ಹೇಳಿದರು.


ಇತ್ತ ಪ್ರಸಾದ್ ಕೆಲಸಕ್ಕೆ ರಾಜಿನಾಮೆ ನೀಡಿದರು.

ಅಗ ಮನೆ ಮಂದಿ ಬಂಧು ಬಳಗದವರೆಲ್ಲ‌ ಅವನನ್ನು ಕೆಲಸದಿಂದ ತೆಗೆದಿರಬೇಕು.ಅದಕ್ಕೆ ಅ ಕಂಪೆನಿ ಮುಳುಗುತ್ತದೆ ಎಂದಿದ್ದಾನೆ..ಪೈಗಳು ಹಾಗೆಲ್ಲಜನರಿಗೆ ಮೋಸ ಮಾಡುವವರಲ್ಲ ಎಂದು ನಮ್ಮ ಕಿವಿಗೆ ಬೀಳುವಂತೆ ಆಡಿಕೊಂಡರು.

ರಾಜಿನಾಮೆ ನೀಡಿದ ತಿಂಗಳೊಳಗೆ ಪ್ರಸಾದ್ ಗೆ ಬರಬೇಕಾದ ಪಿ ಎಪ್ ಇನ್ನಿತರ ದುಡ್ಡು ಕೈ ಸೆರಿತು.

ಅದೇ ಸಮಯದಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ರೀಜನಲ್ ಮ್ಯಾನೇಜರರಾಗಿದ್ದ ನನ್ನ ತಂದೆಯ ಶಿಷ್ಯ ವರ್ಗದವರೊಬ್ಬರು ನಮ್ಮ ತಂದೆ ಮನೆಗೆ ಬಂದಿದ್ದರು.


ಆಗ ನನ್ನ ಅಮ್ಮಮಣಿಪಾಲ್ ಪೈನಾನ್ಸ್ ಮುಳುಗುವ ಲಕ್ಷಣ ಉಂಟಂತೆ ಅಲ್ವಾ? ನನ್ನ ಅಳಿಯ ಹಾಗಾಗಿ ರಾಜಿನಾಮೆ ಕೊಟ್ಟಿದ್ದಾನೆ ಎಂದರು.

ಆಗ ಅವರು ಇಲ್ಲವೇ ಇಲ್ಲ ಎಂದು ಪ್ರಸಾದರಿಗೆ ಕೆಲಸ ಹೋದದ್ದು ಎಂಬಂತೆ ನಗಾಡಿದರಂತೆ

ಇದಾಗಿ ಎರಡು ತಿಂಗಳೊಳಗೆ ಒಂದಿನ ಇದ್ದಕ್ಕಿದ್ದಂತೆ ಯಾವ ಸೂಚನೆಯೂ ಇಲ್ಲ ಮಣಿಪಾಲ್ ಪೈನಾನ್ಸ್ ಬಾಗಿಲು ಹಾಕಿತ್ತು.

ಠೇವಣಿ ಇಟ್ಟವರಿಗೆ ಪಂಗ ನಾಮ.

ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಹೋಯಿತು ಜೊತೆಗೆ  ಪಿಎಪ್ ಇನ್ನಿತರ  ದುಡ್ಡೂ ಬರಲಿಲ್ಲ. ಆ ರೀಜನಲ್ ಮ್ಯಾನೇಜರ್ ಗೂ ಕೂಡಾ.


ನಮ್ಮ ಮಾವ ಮೈದುನರಿಗೂ ಹೋಯಿತು.ನಮ್ಮ ಬಂಧುಗಳಲ್ಲಿ ಅನೇಕರು ದುಡ್ಡು ಕಳಕೊಂಡಿದ್ದರು.

ಇಷ್ಟೆಲ್ಲ ಆಗುವಾಗ ಇದರ ಸೂಚನೆ ಆರು ತಿಂಗಳ ಮೊದಲೇ ಪ್ರಸಾದ್ ಗೆ ಹೇಗೆ ಗೊತ್ತಾಯಿತು ಎಂದು ನನಗೆ ಕುತೂಹಲ ಉಂಟಾಯಿತು‌.

ಕೇಳಿದೆ.

" ವೆರಿ ಸಿಂಪಲ್..ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಯಾವುದೇ ಸರಿಯಾದ ದಾಖಲೆ ಇಲ್ಲದೇ ಕೋಟಿ ಗಟ್ಟಲೆ ಸಾಲ ಕೊಡುತ್ತಿದ್ದರು.ಅದರಲ್ಲಿ ಅರ್ಧಾಂಶ ಮ್ಯಾನೇಜ್ ಮೆಂಟಿನವರ ಮನೆಗೆ ಹೋಗುತ್ತಾ ಇತ್ತು.ಅದು ಹಿಂದೆ ವಸೂಲಿ ಮಾಡಲಿರುವ ಸಾಲವಲ್ಲ.ಕೊಡುದು ಜನರ ದುಡ್ಡು. ಮ್ಯಾನೆಜ್ ಮೆಂಟಿನರ ಮನೆಗೆ ಬರುವ ಅರ್ಧಾಂಶ ದುಡ್ಡು ಅವರ ಸ್ವಂತಕ್ಕೆ.ಇನ್ನರ್ಧ ಸಾಲ ತಗೊಂಡವರಿಗೆ..ಜನರಿಗೆ ಚೆಂಬು " ಎಂಬುದು ಗೊತ್ತಾಗಿ ಬಾಗಿಲು ಹಾಕುವ ಮೊದಲೇ ಕೆಲಸಕ್ಕೆ ರಾಜಿನಾಮೆ ನೀಡಿ ನನಗೆ ಬರಬೇಕಾದ ಎಲ್ಲವನ್ನು ಪಡೆದುಕೊಂಡೆ ಅಷ್ಟೇ ಎಂದರು

ಮತ್ತೇನೋ ಜನರು ದೂರು ಕೊಟ್ಟು ಕೋರ್ಟಿಗೆ ಹೋಗಿದ್ದರು.ದುಡ್ಡು ಸಿಕ್ಕಿತೋ ಏನೋ ಗೊತ್ತಿಲ್ಲ

ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ ಎಂದು ಜನರಿಗೇಕೆ ಅರ್ತವಾಗುದಿಲ್ಲವೋ ಗೊತ್ತಾಗುತ್ತಿಲ್ಲ.

ವಿದ್ಯಾವಂತರಾದ ಸರ್ಕಾರಿ ಕಾಲೇಜಿನ ಉಪನ್ಯಾಸಕರೇ ಚೀಟಿಗೆ ದುಡ್ಡು ಕಟ್ಟುದನ್ನು ನೋಡಿದ್ದೇನೆ.

ಇನ್ನು ಇತರರನ್ನು ಹೇಳುದೆಂತ? 



No comments:

Post a Comment