Tuesday 11 August 2020

ಬರಹದ ಮಾನದಂಡ ಯಾವುದು ?

ಬರಹವನ್ನು ಅಳೆಯುವ ಮಾನದಂಡ ಯಾವುದು ? ಒಂದು ಬರಹ ಎಲ್ಲಿ ಪ್ರಕಟವಾಗುತ್ತದೆ ಎಂಬುದು ಮುಖ್ಯವಲ್ಲ..ಫೇಸ್ ಬುಕ್ ಬ್ಲಾಗ್ ನಲ್ಲಿ ಪ್ರಕಟಿಸಿದ ಕಾರಣಕ್ಕೆ ಕೃತಿ ಕಳಪೆಯಾಗುವುದಿಲ್ಲ ,ನವ ಕರ್ನಾಟಕ ಸಪ್ನಾ,ಅಂಕಿತದಂತಹ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ ಕಾರಣಕ್ಕೆ ಶ್ರೇಷ್ಠವಾಗುವುದಿಲ್ಲ.. ಅಂತರ್ಜಾಲ ತಾಣಗಳ ಮೂಲಕ ಪ್ರಕಟಿಸುವುದು ಇತ್ತೀಚೆಗಿನ ಹೊಸ ದಾರಿ.. ನನ್ನ ಕೃತಿಗಳು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ.ಹೆಚ್ಚಂದರೆ ಒಂದು ಸಾವಿರ ಪ್ರತಿ ಪ್ರಿಂಟ್ ಮಾಡುತ್ತಾರೆ.ಅದರಲ್ಲಿ ಹೆಚ್ಚಿನದು ಲೈಬ್ರರಿ ಗಳಿಗೆ ಹೋಗಿ ಮೂಲೆಯಲ್ಲಿ ಧೂಳು ಹಿಡಿದುಕೊಂಡು ಬಿದ್ದಿರುತ್ತದೆ , ಅದೇ ವಿಚಾರಗಳನ್ನು ನಾನು ಬ್ಲಾಗ್ ನಲ್ಲಿ ಹಾಕಿದ್ದು,ದೇಶ ವಿದೇಶಗಳ ಮೂರು ಲಕ್ಷ ಎಪ್ಪತ್ತೈದು ಸಾವಿರಕ್ಕಿಂತ ಹೆಚ್ಚಿನ ಆಸಕ್ತ ಓದುಗರನ್ನು ತಲುಪಿದೆ, ಬಹುಶಃ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹಾಕಿದ್ದು ಕೂಡಾ ಒಂದೆಡೆಯಿಂದ ಇನ್ನೊಂದೆಡೆಗೆ ಶೇರ್ ಆಗುತ್ತಾ ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿರುವ ಸಾಧ್ಯತೆ ಇದೆ. ಬರೆಯುವ ಉದ್ದೇಶವೇ ಜನರು ಓದಬೇಕೆಂಬುದು. ಅಂತರ್ಜಾಲದಲ್ಲಿ ಹೆಚ್ಚು ಓದುಗರನ್ನು ತಲುಪುತ್ತದೆ. ಉತ್ತಮವಾದ್ದು ಆದರೆ ಎಲ್ಲೆಡೆ ಶೇರ್ ಆಗುತ್ತದೆ‌.ಇನ್ನಷ್ಟು ಹೆಚ್ಚಿನ ಓದುಗರನ್ನು ತಲುಪುತ್ತದೆ . ಆದರೆ ಕಾಲನ ವೇಗಕ್ಕೆ ಹೆಜ್ಜೆ ಹಾಕಲಾಗದವರು ಮಾತ್ರ ಬದಲಾವಣೆಯನ್ನು ಸ್ವಿಕರಿಸದೆ ಫೇಸ್ ಬುಕ್ ಸಾಹಿತ್ಯ ,ಬ್ಲಾಗ್ ಬರಹ ಎಂದು ಹೀಗಳೆಯುತ್ತಾರೆ‌. ಪುಸ್ತಕಗಳ ರೂಪದಲ್ಲಿ ಪ್ರಕಟವಾದ ಮಾತ್ರಕ್ಕೆ ಅದರ ಗುಣ ಮಟ್ಟ ಹೆಚ್ಚಾಗುದಿಲ್ಲ.. ಫೇಸ್ ಬುಕ್ ,ಬ್ಲಾಗ್ ನಲ್ಲಿ ಹಾಕಿದ ಮಾತ್ರಕ್ಕೆ ಗುಣಮಟ್ಟ ಕಡಿಮೆ ಆಗುವುದಿಲ್ಲ.. ಒಂದು ಗಮ್ಮತ್ತಿನ ವಿಚಾರ ಹೇಳ್ತೇನೆ,ನನ್ನ ಬ್ಲಾಗ್ ಬರಹಗಳನ್ನು ಯಥಾವತ್ ಆಗಿ ವಿಕಿಪೀಡಿಯಕ್ಕೆ ಹಾಕಿದ್ದು ,ನಾನು ಈ ಬಗ್ಗೆ ಆಕ್ಷೇಪ ಮಾಡಿದ್ದು ನಿಮಗೆಲ್ಲ ಗೊತ್ತು.ಬ್ಲಾಗ್ ಬರಹ ಆಗುತ್ತದೆ ,ಬ್ಲಾಗ್ ಲಿಂಕ್ ಉಲ್ಲೇಖದಲ್ಲಿ ಹಾಕಲು ಆಗುವುದಿಲ್ಲವಂತೆ.. ಒಂದೊಮ್ಮೆ ನಾನು ಇದನ್ನು ಬ್ಲಾಗ್ ನಿಂದ ತೆಗೆದು ವೆಬ್ ಗೆ ಹಾಕಿದರೆ ಆಗ ವೆಬ್ ನ ಉಲ್ಲೇಖ ಕೊಡಲು ಆಗುತ್ತದೆ ಅಂತೆ...ಇದೆಲ್ಲ ಕಾಲದ ಜೊತೆಯಲ್ಲಿ ಹೆಜ್ಜೆ ಹಾಕಲಾಗದವರ ಮೂರ್ಖತನ ಅಷ್ಟೇ .. ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವಧ್ಯಂ| ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ ಮೂಢಃ ಪರಪ್ರತ್ಯಯನೇಯ ಬುದ್ದಿಃ|| ಕಾವ್ಯವು ಪ್ರಾಚೀನ ಎಂಬ ಕಾರಣಕ್ಕೆ ಶ್ರೇಷ್ಠವಲ್ಲ,ಹೊಸತು ಎಂಬುದಕ್ಕೆ ಕನಿಷ್ಠವಲ್ಲ ಸಜ್ಜನರು ಪರೀಕ್ಷಿಸಿ ತಿಳಿಯುತ್ತಾರೆ ಮೂಢರು ಇತರರು ಹೇಳಿದ್ದನ್ನು ನಂಬುತ್ತಾರೆ.- ಕಾಳಿದಾಸ ಅಂದು ಕವಿ ಕಾಳಿದಾಸ ಪ್ರಾಚೀನ ಅರ್ವಾಚೀನ ಎಂಬುದು ಕಾವ್ಯದ ಯೋಗ್ಯತೆಯನ್ನು ಅಳೆಯುವ ಮಾನದಂಡ ಅಲ್ಲ ಎಂದಿದ್ದಾನೆ‌.ಇಂದು ಎಲ್ಲಿ ಪ್ರಕಟವಾಗುತ್ತದೆ ಎಂಬುದು ಕಾವ್ಯದ ಸತ್ವವನ್ನು ಅಳೆಯುವ ಮಾನದಂಡವಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.- ಡಾ.ಲಕ್ಷ್ಮೀ ಜಿ ಪ್ರಸಾದ ಶ್ರೀನಾಥ ರಾಯಸಂ ಅವರ ಬರಹದಿಂದ ಪ್ರೇರಣೆಗೊಂಡು ನಾನು ಬರೆದಿರುವ ಬರಹವಿದು, ಅವರ ಬರಹವನ್ನು ಇಲ್ಲಿ ಓದಬಹುದು https://m.facebook.com/story.php?story_fbid=4180498492021174&id=100001831931254

No comments:

Post a Comment