Saturday 31 March 2018

ದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್ © ಡಾ‌.ಲಕ್ಷ್ಮೀ ಜಿ ಪ್ರಸಾದ



ದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್
ಮೊನ್ನೆ ಮಾರ್ಚ್ ಒಂಬತ್ತನೇ ತಾರೀಕಿನಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕರ್ನಾಟಕ ಯುವರಾಜ್ಯ ವೇದಿಕೆಯ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನನಗೆ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದರು‌.
ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವವರು ಸುನಿಲ್ .ನನಗೆ ಇವರನ್ನು ಫೇಸ್ ಬುಕ್ ಮೂಲಕ ಮೂರು ನಾಲ್ಕು ವರ್ಷಗಳಿಂದ ಪರಿಚಯ.ಬಹಳ ಮುಗ್ಧ ಪ್ರಾಮಾಣಿಕ ಸಹೃದಯ ತರುಣನಾಗಿ ಅಕ್ಕಾ ಎಂದು ಬಾಯಿ ತುಂಬಾ ನನ್ನನ್ನು ಕರೆಯುವ ಸುನಿಲ್ ನನಗೆ ಆಪ್ತರಾಗಿದ್ದರು‌.ಕನ್ನಡ ಕಟ್ಟುವ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯವೆಸಗುತ್ತಿರುವ ಇವರು ಒಂದು ದಿನ ನನ್ನ ಬಯೋ ಡೇಟಾ ಕೇಳಿದರು.ಯಾಕೆ ಏನೆಂದು ವಿಚಾರಿಸುವಷ್ಟು ನನಗೆ ಸಮಯ ಇರಲಿಲ್ಲ ಯಾಕೆಂದರೆ ನಮಗೆ ಕಾಲೇಜಿನಲ್ಲಿ ಮೌಲ್ಯ ಮಾಪನನದ ಒತ್ತಡದ ಕಾರ್ಯ‌.ಫಲಿತಾಂಶ ಪ್ರಥಮ ಪಿಯುಸಿ ಫಲಿತಾಂಶ ಸಮೀಪದಲ್ಲಿಯೇ ಇದ್ದ ಕಾರಣ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿ ಕೊಡಬೇಕಾಗಿತ್ತು.
ನಂತರ ಒಂದು ದಿನ ನನಗೆ ನಿಮ್ಮನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಸಾಧನಾ ಕಣ್ಮಣಿ ಪ್ರಶಸ್ತಿ ಗೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು‌.ನನಗೆ ದೊಡ್ಡ ಅಚ್ಚರಿ ಏನೂ ಆಗಲಿಲ್ಲ. ನಾನು ಹೆಚ್ಚಾಗಿ  ತುಳುನಾಡು ಸಂಸ್ಕೃತಿ ಕುರಿತಾಗಿ ಅಧ್ಯಯನ ಮಾಡಿದ ಕಾರಣ ದಕ್ಷಣಕನ್ನಡ ಸಂಘಟನೆಗಳಾದ   ತುಳುವೆರೆಂಕುಲು  ಬೆಂಗಳೂರು ಇವರು ಬಲಿಯೇಂದ್ರ ಪುರಸ್ಕಾರ- 2016.ದಕ್ಷಿಣ ಕನ್ನಡಿಗರ ಸಂಘದಿಂದ ಕರಾವಳಿ ರತ್ನ, ಶಾಮರಾವ್ ಫೌಂಡೇಶನ್ ನಿಂದ OUTSTANDING TEACHER AWARD- 2013 ಅನ್ನು ನೀಡಿದ್ದರು
 ನಾನು ಹೆಚ್ಚಾಗಿ ತುಳು ಸಂಸ್ಕೃತಿಗೆ ಸಂಬಂಧಿಸಿ ಅಧ್ಯಯನ ಮಾಡಿದ್ದಾಗಿದ್ದರೂ ಅನೇಕ ಕನ್ನಡ ಸಂಘಟನೆಗಳು ನನ್ನನ್ನು ತುಳುನಾಡಿನವಳು ಎಂದು ಪರಿಗಣಿಸದೆ ಕನ್ನಡತಿಯಾಗಿ ಭಾವಿಸಿ ನನ್ನ ಅಧ್ಯಯನ ,ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಬೆಂಬಲ ನೀಡಿವೆ‌.ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಕನ್ನಡ ಕೈಂಕರ್ಯವನ್ನು ನಿರಂತರ ಮಾಡುತ್ತಿರುವ ಶೇಖರ್ ಅಜೆಕಾರ್ 2014 ರಲ್ಲಿಯೇ ಕರ್ನಾಟಕ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು.
2015 ರಲ್ಲಿ ಕನ್ನಡ ಕಾವಲು ಪಡೆಯ ಮೂಲಕ ಕನ್ನಡಮ್ಮನ ಸೇವೆ ಮಾಡುವ ಸತೀಶ ಜವರೇ ಗೌಡ ಅವರು ನನ್ನ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿದ್ದರು‌.ಅದೇ ವರ್ಷ ಕನ್ನಡಕ್ಕಾಗಿ ಹಿರಿಯರ ಕಾಲದಿಂದಲೂ ಶ್ರಮಿಸುತ್ತಿರುವ ಗುರುನಾರಾಯಣರಾವ್ ಅವರು ನನ್ನನ್ನು ತುಳುನಾಡಿನವಳು ಎಂದು ಭಾವಿಸದೆ ಕನ್ನಡತಿ ಎಂಬ ನೆಲೆಯಲ್ಲಿ ನನ್ನ ಅಧ್ಯಯನ ವನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ನಿಮಿತ್ತ ಪರಮೇಶ್ವರ ಪುಲಕೇಶಿ  ಪ್ರಶಸ್ತಿ ಯನ್ನು ನೀಡಿ ಸತ್ಕರಿಸಿದ್ದರು.2017 ರ. ಆರಂಭದಲ್ಲಿಯೇ   ಡಾ.ಬಾಲಾಜಿಯವರ  ಕಟ್ಟಿ ಬೆಳೆಸಿರುವ ಕನ್ನಡ ಜಾನಪದ ಪರಿಷತ್ ನಿಂದ ಜಾನಪದ ಪ್ರಪಂಚ- 2017 ಪ್ರಶಸ್ತಿ ನೀಡಿ ನನ್ನ ತುಳು ಜಾನಪದ ಅಧ್ಯಯನ ವನ್ನು ಗುರುತಿಸಿದ್ದರು.
ಹಾಗಾಗಿ ಕರ್ನಾಟಕ ಯು ರಕ್ಷಣಾ ವೇದಿಕೆ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ನನಗೇನು ದೊಡ್ಡ ಆಶ್ಚರ್ಯ ಆಗಲಿಲ್ಲ.
ಆದರೆ ಆಚ್ಚರಿ ಆದದ್ದು ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತಳಹದಿ ಬಗ್ಗೆ.
ನನಗೆ ನೀಡಿದ ಸಾಧನಾ ಕಣ್ಮಣಿ ಪ್ರಶಸ್ತಿ ಯ ಫಲಕದಲ್ಲಿ ಸ್ಪಷ್ಟವಾಗಿ ತುಳುನಾಡಿಗೆ ನೀಡಿದ ಕೊಡುಗೆಗಾಗಿ ಮತ್ತು ತುಳು ಸಂಸ್ಕೃತಿಯ ಅಧ್ಯಯನಕ್ಕಾಗಿ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದೆ ಎಂದು ಬರೆದಿದೆ‌
ಕಳೆದ ಎಂಟುವರ್ಷಗಳಿಂದ ಕನ್ನಡ ಕಟ್ಟುವ ಸಲುವಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆ ರಚಿಸಿ ಎಲ್ಲ ಜಿಲ್ಲೆ ತಾಲೂಕುಗಳಲ್ಲಿ ಶಾಖೆಗಳನ್ನು ತೆರೆದು ಕನ್ನಡ ಕೈಂಕರ್ಯ ಮಾಡುತ್ತಿರುವ ಸುನಿಲ್ ತುಳುನಾಡನ್ನು ಕೂಡ ಕರ್ನಾಟಕದ ಭಾಗವಾಗಿಯೇ ಪ್ರೀತಿಸಿದ್ದಾರೆ ಹಾಗಾಗಿಯೇ ತುಳುನಾಡಿಗೆ ನೀಡಿದ ಕೊಡುಗೆ ಹಾಗೂ ಅಧ್ಯಯನಕ್ಕಾಗಿ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದಾರೆ‌
ಅಲ್ಲಲ್ಲಿಕನ್ನಡ ಮತ್ತು ತುಳು ಸಂಘರ್ಷ ಏಳುತ್ತಿರುವೆಡೆ ಇವರದು ಸಮನ್ವಯದ ಹಾದಿ .ಇವರು ತುಳುನಾಡಿನವರು ಅಲ್ಲದಿದ್ದರೂ ತುಳುನಾಡಿನ ಮೇಲೆ ಇವರಿಗಿರುವ ಪ್ರೀತಿ ಅಭಿಮಾನವನ್ನು ಯಾರು ಕೂಡ ಮೆಚ್ಚುವದ್ದೇ ಆಗಿದೆ.ಇವರ ಸಂಘಟನಾ ಸಾಮರ್ಥ್ಯ ಕೂಡ ಮೆಚ್ಚುವದ್ದೇ ಆಗಿದೆ‌
ಅದೂ ಅಲ್ಲದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಿ ಪ್ರಶಸ್ತಿ ನೀಡಿದ್ದು ಅನುಸರಣಯೋಗ್ಯವಾಗಿದೆ
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment