Monday 5 December 2016

ದೊಡ್ಡವರ ಹಾದಿ 12

ದೊಡ್ಡವರ ಹಾದಿ
ನನಗೆ ಇವತ್ತು ಯಲಹಂಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ನಾಗರಾಜ್ ಅವರ ಒಂದು ನಡೆ ತುಂಬಾ ಇಷ್ಟ ವಾಯಿತು
ಸಾಮಾನ್ಯವಾಗಿ ಯಾರೇ ಅದರೂ ಪುಸ್ತಕ ಬರೆದರೂ ಹೊಟ್ಟೆ ಕಿಚ್ಚು ಪಟ್ಟು  ಅದರ ಬಿಡುಗಡೆಗೆ ನಾನಾ ರೀತಿಯ ಅಡ್ಡಿ ಹೇಳುವ ಮಂದಿ ನಮ್ಮ ಸುತ್ತ ಮುತ್ತ ಕಾಣುತ್ತಾರೆ
ಇಂದು ಪೀಣ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಸುಭಾಷ್ ಮಾನೆಯವರ ದಿ ಆರ್ಟಿಸ್ಟ್ ಎಂಬ ಪುಸ್ತಕವನ್ನು ಯಲಹಂಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಪದವಿ ಪೂರ್ವ ಕಾಲೆಜು ಕನ್ನಡ ಉಪನ್ಯಾಸಕರ ಕಾರ್ಯಾಗಾರದ ಆರಂಭದಲ್ಲಿ ಸರಳವಾಗಿ ನಡೆಯಿತು ಇದು ಆರಂಭದಲ್ಲಿ ಅಲ್ಲಿನ ಪ್ರಾಂಶುಪಾಲರಿಗೆ ಗೊತ್ತಿರಲಿಲ್ಲ
ಇದಾದ ನಂತರ ಪ್ರಾಂಶುಪಾಲರಾದ ನಾಗರಾಜ್ ಅವರು‌ ತಮ್ಮ ಕೊಠಡಿಗೆ ತೆರಳಿ ಅಲ್ಲಿನ ಉಪನ್ಯಾಸಕರೊಂದಿಗೆ  ಬಂದು ಹಾರ ಹಾಕಿ ಶಾಲು ಹೊದೆಸಿ ಸುಭಾಷ್ ರಾಜಮಾನೆಯವರನ್ನು ಗೌ
ರವಿಸಿದರು
ಎಷ್ಟು ಮಂದಿಗೆ ಇಂತಹ ಉದಾರತೆ ಗುಣಗ್ರಾಹಿತ್ವ ಇದೆ ? ನಾನು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅನುದಾನಿತ ಕಾಲೇಜ ಇಂದ ರಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಆಗ ನನ್ನ ‌ಮೊದಲ ಕಥಾ ಸಂಕಲನ ಮನೆಯಂಗಳದಿ ಹೂ ಮತ್ತು‌ ಅರಿವಿನಂಗಳದ ಸುತ್ತ ಎಂಬ ಎರಡು ಪುಸ್ತಕಗಳು ಮುದ್ರಣಗೊಂಡವು ಅದರ ಬಿಡುಗಡೆಯನ್ನು ಕಾಲೆಜು ವಾರ್ಷಿಕೋತ್ಸವ ದಂದು ಮಾಡಲು ಕನ್ನಡ ವಿಭಾಗದ ಮುಖ್ಯಸ್ಥ ರು ನಿರಾಕರಿಸಿ ತಾವೆಷ್ಟು ಸಣ್ಣವರು ಎಂದು ತೋರಿಸಿ ಕೊಟ್ಟಿದ್ದರು
ಇದೇ ರೀತಿ ನನ್ನ ಮೂರನೇ ‌ಪುಸ್ತಕ ದೈವಿಕ ಕಂಬಳ ಕೋಣ ಹಾಗು ಇತರ ಕೆಲವು‌ಹವ್ಯಕರ ಪುಸ್ತಕಗಳುಹವ್ಯಕ‌ಮಹಾ ಸಭೆಯ ಸಂಸ್ಥಾಪರಾದ ರಾಮಕೃಷ್ಣ ಭಟ್ ಅವರ ಸಂಸ್ಕರಣಾ ಕಾರ್ಯ ಕ್ರಮದಲ್ಲಿ ಅಗಿತ್ತು‌ಮನಸಿಲ್ಲದೆ ಮಾಡಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಶಾಲು ಹೊದೆಸಿ ಸನ್ಮಾನಿಸುವುದು ಬಿಡಿ  ಯಾರೊಬ್ಬ ಲೆಖಕರನ್ನು‌ ಕೂಡ ವೇದಿಕೆಗೆ‌ಕರೆದು ಪರಿಚಯಿಸಿರಲಿಲ್ಲ
ಇನ್ನು ನನ್ನ ‌ಪಾಡ್ದನ ಸಂಪುಟ, ತುಳುವ ಸಂಸ್ಕಾರಗಳು, ಕಂಬಳ ಕೋರಿ ನೇಮ ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು,ಪಾಡ್ದನಗಳಲ್ಲಿ ಸ್ತ್ರೀ ಎಂಬ ಐದು ಸಂಶೋಧನಾ ‌ಕ್ರತಿಗಳ ಬಿಡುಗಡೆ ಚೊಕ್ಕಾಡಿ ಹವ್ಯಕ ಸಭೆಯಲ್ಲಿ ಅಯಿತು ಅದರದ್ದು ಒಂದು ದೊಡ್ಡ ಕಥೆಯೆ ಇದೆ ಇನ್ನೊಂದು ದಿನ ಅ ಬಗ್ಗೆ ಬರೆಯುತ್ತೇನೆ
ಅದೇ ರೀತಿ ‌ಕೆಲ ವರ್ಷಗಳ ಹಿಂದೆ‌ಪುಸ್ತಕ ಪ್ರೀತಿಯ ಶ್ರೀನಿವಾಸ ರಾಜು ಅವರ ಕುರಿತಾದ ಕಾರ್ಯಕ್ರಮ ಬಿ ಎಂ ಶ್ರೀ ಪ್ರತಿಷ್ಠಾನ ದಲ್ಲಿ ಅಯೋಜನೆ ಅಗಿತ್ತು  ಅ ಸಂದರ್ಭದಲ್ಲಿ ನನ್ನ ಒಂದು ಸಂಶೋಧನ ಕೃತಿ ಮುದ್ರಣವಾಗಿ ಪ್ರಕಟಣೆಗೆ ಸಿದ್ದವಾಗಿತ್ತು ನಾನು ಬಿಎಂ ಶ್ರೀ ಸಂಶೋಧನಾ ‌ಕೇಂದ್ರದ ಅಜೀವ ಸದಸ್ಯೆ ಹಾಗೂ ಅಲ್ಲಿನ ಹಳೆಯ ವಿದ್ಯಾರ್ಥಿ ನಿಯಾಗಿದ್ದು ಆ ಕಾರ್ಯಕ್ರಮ ದಲ್ಲಿ ನನ್ನ ಪುಸ್ತಕ ಬಿಡುಗಡೆ ಮಾಡುವಂತೆ ಪ್ರತಿಷ್ಠಾನ ದ ಅಧ್ಯಕ್ಷರಿಗೆ ಕೇಳಿದ್ದೆ ಸಮಯಾಭಾವದ ನೆಪ‌ಮಾಡಿ ನಿರಾಕರಿಸಿದ್ದರು
 ಆ ಪುಸ್ತಕ ಗಳ ಬಿಡುಗಡೆ ತುಳು ಸಾಹಿತ್ಯ ಅಕಾಡೆಮಿ ಯಲ್ಲಿ ಆಗಿದ್ದು ಲೆಖಕಿಯನ್ನು ಗೌರವಿಸುವ ಉದಾರತೆ ಅವರಲ್ಲು ಇರಲಿಲ್ಲ ಹಾಗಾಗಿಯೆ
ಇಂತಹ ಸಂಕುಚಿತ ಮನೋಭಾವ ದವರೇ ತುಂಬಿದ ಜನರ ನಡುವೆ  ಯಲಹಂಕ ಕಾಲೆಜು ‌ಪ್ರಾಂಶುಪಾಲರಾದ ನಾಗರಾಜ್ ಅವರ ಸಜ್ಜನಿಕೆ ಉದಾರತೆ ಗುಣ ಪಕ್ಷಪಾತ ಗುಣ ವಿಶಿಷ್ಟ ಎನಿಸುತ್ತದೆ
ಇಂತವರು ಹೆಚ್ಚಾಗಲಿ ಇವರ‌ನಡೆ ಎಲ್ಲರಿಗೆ ಮಾದರಿಯಾಗಲಿ ಏನು ಹೇಳುತ್ತೀರಿ ಈ ಬಗ್ಗೆ ? 

No comments:

Post a Comment