Saturday, 20 September 2025

ಆತ್ಮ‌ಕಥೆಯ ಬಿಡಿಭಾಗಗಳು : ಸ್ವಂತ ಕೇಸ್ ಹಾಕಲು ಧೈರ್ಯವಿಲ್ಲದ ಹೇಡಿಗಳ ಅಡ್ಡದಾರಿ

 ಹೇಡಿಗಳು ಈ ಬರಹದಬಗ್ಗೆ ಪ್ರತಿಲಿಪಿಗೆ ರಿಪೋರ್ಟ್ ಮಾಡಿವೆ,ಈ ಬಗ್ಗೆ ಲೋಕಾಯುಕ್ತಕ್ಕೂ ತಿಳಿಸ್ತೇನೆ ದೈರ್ಯ ಇದ್ದರೆ   ಕೇಸ್ ಹಾಕಲಿ...


ಮೊದಲು ನನ್ನ ಪುಸ್ತಕದಲ್ಲಿ  ಈ ಬಗ್ಗೆ ನಾನು ಬರೆದಿದ್ದೆ.ಅದರ ಬಗ್ಗೆ ಡಾ.ಚಿನ್ನಪ್ಪ ಗೌಡ ಮತ್ತು ಧನಂಜಯ ಕುಂಬಳೆ ಯೂನಿವರ್ಸಿಟಿ ವಿ ಸಿ ಗೆ ದೂರು ನೀಡಿದ್ದು ಅದರಂತೆ ನಡೆದ ಅಕ್ರಮ ಬಗ್ಗೆ ಬರೆದದ್ದರಿಂದ ಯೂನಿವರ್ಸಿಡಿಯ ಘನತೆಗೆ ದಕ್ಕೆ ಬಂದಿದೆ ಕ್ಷಮೆ ಕೇಳಬೇಕು ಇಲ್ಲವಾದರೆ ಕೇಸ್ ಹಾಕ್ತೇವೆ ಎಂದು ರಿಜಿಸ್ಟ್ರಾರ್  ಅರುಣ ಶ್ಯಾಮ್ ಅಸೊಸಿಯೇಟ್ಸ್ ಮೂಲಕ ಲೀಗಲ್ ನೋಟೀಸ್ ಕಳುಹಿಸಿದ್ದರು.ಅದರೆ 2013 ರ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದ ಬಗ್ಗೆ ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಯಾಗಿರುವ ಡಾ.ಪಿಎಸ್ ಯಡಪಡಿತ್ತಾಯರೇ ಮುಕ್ತವಾಗಿ ಒಪ್ಪಿಕೊಂಡಿದ್ದು ಈ ಕೇಸ್ ಮುಂದುವರಿಯದಂತೆ ತಡೆ ಹಿಡಿದಿದ್ದಾರೆ


ಈಗ ಇಂತಹ ಅಡ್ಡ ಮಾರ್ಗ ಹಿಡಿದಿವೆ ..ನಾಚಿಗೆ ಮಾನ ಮರ್ಯಾದಿ ಇಲ್ಲದ ಅತೃಪ್ತ ಆತ್ಮಗಳು  ಯಾರೆಂದು ಗೊತ್ತಿಲ್ಲ 

ದೈರ್ಯ ಇದ್ದರೆ ಸ್ವತಃ ಕೇಸ್ ಹಾಕಲಿ..ನಾನು ಗೆದ್ದು ಮತ್ತೆ ಬರೆಯುತ್ತೇನೆ..


ನನ್ನ ಧ್ವನಿ ಉಡುಗಿದೆ..


ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ಎದುರಿಸಬಲ್ಲೆ ಆದರೆ ನಮ್ಮ ಬಡ ಪ್ರತಿಭಾವಂತ ಯುವಕರಿಗೆ ಅನ್ಯಾಯವಾಗುವುದನ್ನು ಸಹಿಸಲಾಗದು.ಇದಕ್ಕೊಂದು ಅಂತಿಮ ಪರಿಹಾರ ಬೇಕೇ ಬೇಕು..ನಿಮಗಿದು ಸರಿ ಎನಿಸಿದರೆ ಶೇರ್ ಮಾಡಿ..ಒಂದಷ್ಟಾದರೂ ಜಾಗೃತಿ ಮೂಡಲಿ‌..


ಏನಿದು ವಿಷಯ..ಇಲ್ಲಿ ಓದಿ 


ಸುತ್ತ ಮುತ್ತ ಎತ್ತ ನೋಡಿದರೂ ಭ್ರಷ್ಟಾಚಾರದ ಕಂಬಂಧ ಬಾಹುಗಳು ಎಲ್ಲೆಡೆ ಹರಡಿ ಅಟ್ಟಹಾಸ ಮಾಡುತ್ತಿವೆ.ಎಫಡಿಎ  ಹಿಡಿದು ಯೂನಿವರ್ಸಿಟಿ ತನಕದ ಎಲ್ಲ ಹುದ್ದೆಗಳು 30-80 ಲಕ್ಷಗಳಿಗೆ ಬಿಕರಿಯಾಗಿದೆ.

ನಮ್ಮ‌ಬಡಮಕ್ಕಳು ಊಟ ತಿಂಡಿಯ ಪರಿವೆಯಿಲ್ಲದೆ ಓದುತ್ತಿದ್ದಾರೆ.ಯಾಕೆಂದರೆ ಚೆನ್ನಾಗಿ ಓದಿ ಮಕ್ಕಳೇ..ಉತ್ತಮ‌ಅಂಕ ಪಡೆದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ ,ಸರ್ಕಾರಿ ಉದ್ಯೋಗ ಭದ್ರತೆಯನ್ನು ಕೊಡುತ್ತದೆ ಎಂಬ ಭರವಸೆಯನ್ನುಬಣ್ಣ ಬಣ್ಣದ ಕನಸನ್ನು  ನಾವು ಸದಾ ತುಂಬುತ್ತಿರುತ್ತೇವೆ

ಮೊದ ಮೊದಲು ಈ ಮಾತು ಹೇಳುವಾಗ ನನಗೂ ಈ ಬಗ್ಗೆ ತುಂಬಾ ಭರವಸೆಯಿತ್ತು

ಯಾಕೆಂದರೆ 2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಯಾವುದೇ ದುಡ್ಡು ವಶೀಲಿ ಇಲ್ಲದೆ ಕೇವಲ ಅರ್ಹತೆಯಿಂದಲೇ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆಯನ್ನು ಪಡೆದವಳು ನಾನು.

ಈ ನನ್ನ ಮಕ್ಕಳಂತೆಯೇ ನಾನೂ ಕೆಲಸದ ಜೊತೆಗೆ ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದೆ.ನನಗೊಂದು ಕನಸಿತ್ತು.ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ದೊಡ್ಡದಾದ ಕನಸು ಕಾಣಿರಿ ಎಂದಿದ್ದರಲ್ಲ.ಅಂತೆಯೇ ನನ್ನ‌ ಮಂಗಳೂರು  ಯೂನಿವರ್ಸಿಟಿ ಪ್ರೊಫೆಸರಾಗುವ  ಕನಸೂ ಕೂಡ ನನ್ನ ಪಾಲಿಗೆ ದೊಡ್ಡದೇ ಇರಬೇಕು.ಹಾಗಾಗಿಯೇ ಡಾ.ಅಮೃತ ಸೋಮೇಶ್ವರರರಂತಹ ಹಿರಿಯರೂ ನನಗೆ ಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದು ಹಿತ ನುಡಿದಿದ್ದರು.ಬಹುಶಃ ಅದಾಗಲೇ ಯೂನಿವರ್ಸಿಟಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಅವರಿಗೆ ಅವರಿವಿದ್ದಿರಬಹುದೋ ಏನೋ.ಇರುವ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಹುದ್ದೆಯಲ್ಲಿಯೇ ತೃಪ್ತಿ ಪಡುವುದು ಒಳ್ಳೆಯದೆಂದು ಹೇಳಿರಬಹುದು.ಈ ಮಾತು ನಾನು ಮಾತ್ರ ವಲ್ಲ ನನ್ನ ಸ್ನೇಹಿತರಾದ ನನ್ನ ಜೊತೆಗೆ ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಹುದ್ದೆಯನ್ನು ಪಡೆದ ಬಹುಮುಖೀ ಪ್ರತಿಭಾವಂತ ಡಾ.ಶ್ರೀಧರ ಹೆಗಡೆ ಭದ್ರನ್ ಅವರೂ ಕೇಳಿದ್ದರು‌ಅವರ ಹಿತೈಷಿಗಳು ಯಾರೋ ಅವರಿಗೆಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದಿದ್ದ ಬಗ್ಗೆ ಮಾತಿನ ನಡುವೆ ನನ್ನಲ್ಲಿ ಒಮ್ಮೆ ಅವರು ಹೇಳಿದ್ದರು

ಪ್ರಾಧ್ಯಾಪಕರಿಗೆ ಬೇಕಾದ  ಎಲ್ಲ ಅರ್ಹತೆಯನ್ನು ಪಡೆದ ನಂತರ ಅದನ್ನು ಬಯಸುವುದು ಮಹತ್ವಾಕಾಂಕ್ಷೆ ಆಗುತ್ತದಾ ? ಏನೋ ನನಗೆ ಗೊತ್ತಿಲ್ಲ.ನನಗೆ ಅದು ಈಗಲೂ ತಪ್ಪೆನಿಸಿಲ್ಲ

2009 ರಲ್ಲಿ ಸರ್ಕಾರಿ ಉದ್ಯೋಗಕ್ಕೆನಾನು ಸೇರುವಾಗ ನನ್ನ‌ಮೊದಲ ಡಾಕ್ಟರೇಟ್ ಅಧ್ಯಯನದ ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಿ ಆಗಿತ್ತು.ಮತ್ತೆ ಸ್ವಲ್ಪ ಸಮಯದ ಒಳಗೆ ಡಾಕ್ಟರೇಟ್ ಪದವಿಯನ್ನು ಪಡೆದೆ.

ನಾನು ಬೆಳ್ಳಾರೆ ಕಾಲೇಜಿಗೆ ಸೇರಿದಾಗ ಅದು ಸುವರ್ಣ ಮಹೋತ್ಸವವನ್ನು ಆಚರಿಸುತ್ತಾ ಇತ್ತು.ಆ ಐವತ್ತು ವರ್ಷಗಳಲ್ಲಿ ಆ ಕಾಲೇಜಿನ ಮೊದಲ ಡಾಕ್ಟರೇಟ್ ಪದವಿ ಪಡೆದ ಮೊದಲ ಉಪನ್ಯಾಸಕಿ ನಾನಾಗಿದ್ದೆ.

.ಪಿಯು ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಮನ್ನಣೆ ಇಲ್ಲ.ಹೆಚ್ಚಾಗಿ ಪ್ರೌಢಶಾಲೆಯಿಂದ ಭಡ್ತಿ ಬಂದ ಉಪನ್ಯಾಸಕರೇ ಇರುತ್ತಾರೆ.ಹಾಗಾಗಿ ಆಗ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರ ಸಂಖ್ಯೆ ತೀರ ಕಡಿಮೆ ಇತ್ತು.2009 ರ ಬ್ಯಾಚ್ ನಲ್ಲಿ ಆಯ್ಕೆ ಆದವರಲ್ಲಿ  ಅನೇಕರು ಪಿಎಚ್ ಡಿ ಪದವಿಧರರಿದ್ದರು

ಇರಲಿ

ಮೊದಲ ಡಾಕ್ಟರೇಟ್ ನ‌  ಅಧ್ಯಯನ ಕನಿಷ್ಠ ಅವಧಿ  ಎರಡೂವರೆ ವರ್ಷ ಮುಗಿದ ಕೂಡಲೇ ನಾನು ಎರಡನೆಯ ಡಾಕ್ಟರೇಟ್ ಅಧ್ಯಯನಕ್ಕಾಗಿ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೂ ಪ್ರಬಂಧ ಸಿದ್ದವಾಗಿತ್ತು.2012 ರಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ಮೌಲ್ಯ ಮಾಪಕರ ಹಾಗೂ ಮಾರ್ಗ ದರ್ಶಕರ  ನಿರ್ಲಕ್ಷ್ಯದಿಂದಾಗಿ  ಬಹಳ‌ ತಡವಾಗಿ 2015 ರಲ್ಲಿ ಎರಡನೆಯ ಡಾಕ್ಟರೇಟ್ ಪದವಿಯನ್ನೂ ಪಡೆದೆ

ಈ ನಡುವೆ 2013 ರಲ್ಲಿ ಮಂಗಳೂರು ಯೂನಿವರ್ಸಿಟಿ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು ನಾನೂ ಅರ್ಜಿ ಸಲ್ಲಿಸಿದ್ದೆ

ಈ ಬಾರಿ ನಾನು ಖಂಡಿತಾ ಆಯ್ಕೆ ಆಗುವೆನೆಂಬ ಆತ್ಮ ವಿಶ್ವಾಸ ನನಗಿತ್ತು.ಯಾಕೆಂದರೆ ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಅಕಾಡೆಮಿಕ್ ಫರ್ಪಾಮೆನ್ಸ್ ಇಂಡಿಕೇಟರ್ ನನಗಿತ್ತು.ನನಗೆ 1157 accademi performance indication ಪಾಯಿಂಟುಗಳಿದ್ದವುಅಲ್ಲಿ ಪ್ರೊಫೆಸರಾಗಿ ಆಯ್ಕೆ ಆದವರಿಗೆ ಕೂಡ 530 ರಷ್ಟು ಮಾತ್ರ ಇತ್ತು.ಅದಕ್ಕಿಂತ ಎರಡು ಪಟ್ಟು ಹೆಚ್ಚು ಅರ್ಹತೆ ನನಗಿತ್ತು.ನಾನು ಅರ್ಜಿ ಸಲ್ಲಿಸಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ...

ನಾನು ಅದಾಗಲೇ ಎಂಎ( ಕನ್ನಡ)  73.7% - ನಾಲ್ಕನೆಯ ರ‌್ಯಾಂಕ್,ಎಂಎ( ಹಿಂದಿ) ಎಂಎ( ಸಂಸ್ಕೃತ)- ಮೊದಲ ರ‌್ಯಾಂಕ್ ,ಎಂಫಿಲ್ ಪಿಎಚ್ ಡಿ ಪದವಿ ಗಳಿಸಿದ್ದು ಎರಡನೆಯ ಪಿಎಚ್ ಡಿ ಪದವಿಗೆ ಪ್ರಬಂಧ ಸಲ್ಲಿಕೆ ಆಗಿತ್ತು.

ಅ ಸಮಯಕ್ಕಾಗುವಾಗಲೇ ನನ್ನ ಹದಿನೇಳು ಸಂಶೋಧಾನಾ ಕೃತಿಗಳು ನೂರರಷ್ಟು ಸಂಶೋಧನಾ ಬರಹಗಳು,ಮುನ್ನೂರರಷ್ಟು ಇತರ ವೈಚಾರಿಕ ಬರಹಗಳು ಪ್ರಕಟವಾಗಿದ್ದವು

ಸುಮಾರು ಇನ್ನೂರೈವತ್ತು ಅಂತರಾಷ್ಟ್ರೀಯ,ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದೆ

ಯುಜಿಸಿ ನಿಯಮಾವಳಿಗಳಂತೆ ಅಂಕಗಳನ್ನು ನೀಡಿದರೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಖಂಡಿತವಾಗಿಯೂ ಸಿಗುತ್ತಿತ್ತು.ಆದರೆ ದುಡ್ಡು ಇನ್ಪ್ಲೂಯೆನ್ಸ್ ಗೆ ಒಳಗಾದ ವೀಸಿ ಯನ್ನೊಳಗೊಂಡ ಆಯ್ಕೆ ಸಮಿತಿ ಯುಜಿಸಿ ನಿಯಮಗಳನ್ನು ಮೀರಿ ತಮಗೆ ಬೇಕಾದ ಅಭ್ಯರ್ಥಿಗಳು ಕಡಿಮೆ ಅರ್ಹತೆ ಹೊಂದಿದ್ದರೂ ಅವರನ್ನೇ ಆಯ್ಕೆ ಮಾಡಿದ್ದರು.

ಕನ್ನಡ ವಿಭಾಗದಲ್ಲಿ ಜೆನರಲ್ ಮೆರಿಟ್ ಗೆ ಒಂದು ಹುದ್ದೆ ಇತ್ತು.ಅದಕ್ಕೆ ಒಂದು ಕನ್ನಡ( ಎಂಎ)66% ಎರಡು ಸಂಶೋಧನಾ ಕೃತಿ( ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧ) ಗಳನ್ನು ಪ್ರಕಟಿಸಿದ ಧನಂಜಯ ಕುಂಬಳೆ ಆಯ್ಕೆ ಆದರು.

ಇಲ್ಲಿ ಒಟ್ಟು ನೂರು ಅಂಕಗಳ ಸಂದರ್ಶನದಲ್ಲಿ 20 ಅಂಕಗಳು ರಿಸರ್ಚ್ ಫರ್ಫಾರ್ಮೆನ್ಸ್ ಗೆ ಮೀಸಲಾಗಿವೆ.ಇಲ್ಲಿ ಒಂದು ಸಂಶೋಧನಾ ಕೃತಿಗೆ ಐದು ಅಂತ ಮತ್ತು ಅಂತ ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಎರಡು ಅಂಕ,ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಇದರ ಹೊರತಾಗಿ ಈ ವಿಭಾಗದಲ್ಲಿ ಅಂಕಗಳನ್ನು ಕೊಡುವಂತಿಲ್ಲ ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ.ಇಲ್ಲಿ ಗರಿಷ್ಠ ಅಂಕಗಳು 20

ನನ್ನದು 17 ಸಂಶೋಧನಾ ಕೃತಿಗಳು ಪ್ರಕಟವಾದ ಕಾರಣ ಗರಿಷ್ಠ 20 ಅಂಕಗಳು ಲಭಿಸಿದ್ದವು.

ಆದರೆ ಇಲ್ಲಿ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರ ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವಂತೆ ಕೇವಲ ಎರಡು ಸಂಶೋಧನಾ ಕೃತಿಗಳು ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಇನ್ನೊಂದು ಅಕಾಡೆಮಿಕ್ ವಿಭಾಗದಲ್ಲಿ ಅಂಕಗಳು ನೀಡಲ್ಪಟ್ಟಿದೆ

ಹಾಗಾಗಿ ಇಲ್ಲಿ ಅವರು ಅವರ ಒಂದು ಪುಸ್ತಕಕ್ಕೆ 5 ಅಂಕಗಳನ್ನು ಮಾತ್ರ ಪಡೆಯಲು‌ಅರ್ಹರಾಗಿದ್ದರು.ಇದನ್ನು ಪ್ರಾಥಮಿಕ ಶಾಲೆಯ ಬಾಲಕ ಕೂಡ ಲೆಕ್ಕ ಹಾಕಬಲ್ಲ. 

ಆದರೆ ಇಲ್ಲಿ ಆಯ್ಕೆ ಸಮಿತಿಯವರು ಹೆಚ್ಚಿನ ಅಂಕ ನೀಡಲು ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹೆಚ್ಚುವರಿಯಾಗಿ ಹದಿನೈದು ಅಂಕ ನೀಡಿ ಗರಿಷ್ಟ 20 ಅಂಕ ನೀಡಿದ್ದರು.

ಇಲ್ಲಿ ಅರ್ಹತೆ ಇಲ್ಲದೆ ಇದ್ದಾಗಲೂ ಅವರನ್ನು ಆಯ್ಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ನೀಡಿದ 15 ಅಂಗಳನ್ಮು ಅವರು ಸಂದರ್ಶನದಲ್ಲಿ ಗಳಿಸಿದ ಒಟ್ಟು ಅಂಕ‌69.4 ರಿಂದ ಕಳೆದರೆ ಅವರಿಗೆ ಸಿಗಬೆಕಾಗಿದ್ದ ಅಂಕ‌54.4% 

ನನಗೆ ಸಿಕ್ಕ ಒಟ್ಟು ಅಂಕ 63.9 ಹಾಗೆಯೇ ಇರುತ್ತದೆ.ಹಾಗಾಗಿ ನಾನೇ ಹೆಚ್ಚು ಅರ್ಹಳು ಆದರೆ ದುಡ್ಡು ವಶೀಲೊಗೊಳಗಾಗಿ ಆಯ್ಕೆಸಮಿತಿ ಅಕ್ರಮವಾಗಿ ರಿಸೃಚ್ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಅವರಿಗೆ ಹದಿನೈದು ಅಂಕ‌ ನೀಡಿದ ಕಾರಣ ನನಗೆ ಅನ್ಯಾಯ ಆಗಿದೆ

ಹಾಗೆ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡಿದರೂ ಗೆಲ್ಲಾಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ  ಇಲ್ಲ ಎಂದಿಲ್ಲ‌ .ಬದಲಿಗೆ ಅರ್ಹತೆಯನ್ನು ನಿರ್ಧರಿಸುವುದು ಆಯ್ಕೆ ಸಮಿತಿ‌ ಅದರಲ್ಲಿ ತಲೆಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತದೆ

ಕಾನೂನಿನ ಈ ಪರಿಮಿತಿಯನ್ನು ತಿಳಿದೇ ಆಯ್ಕೆ ಸಮಿತಿಯವರು ಅಕ್ರಮ ಎಸಗಿ ತಮಗೆ ಬೇಕಾದವರನ್ನು ಬೇಕಾ ಬಿಟ್ಟಿ ಆಯ್ಕೆ ಮಾಡುತ್ತಾರೆ

ಆಯ್ಕೆ ಸಮಿತಿಯವರೇ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ‌ ದುಡ್ಡು ವಶೀಲಿಗೆ ಒಳಗಾಗಿ ಅನರ್ಹರನ್ನು ಆಯ್ಕೆ ಮಾಡಿದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು ? ಇದಕ್ಕೇನು ಪರಿಹಾರ? ಇದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ಈ ಬಗ್ಗೆ ಸರ್ಕಾರ ಸಿಐಡಿ ಗೆ ವಹಿಸಿ ಸರಿಯಾದ ತನಿಖೆ ಮಾಡಿ ಅಕ್ರಮ ಎಸಗಿದವರ ಮೇಲೆ ಸೆಒಯಾದ ಕ್ರಮ‌ತೆಗೆದುಕೊಂಡರೆ ಸರಿ ಹೋಗಬಹುದು.

2013 ರಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ರಿಜಿಸ್್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯಲ್ಲಿ ವೀಸಿಗಳಾಗಿರುವ ಡಾ.ಪಿಎಸ್ ಎಡಪಡಿತ್ತಾಯರು 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದ ಬಗ್ಗೆ ಒಪ್ಪಿಕೊಳ್ಳುತ್ತಾರೆ.ಅದಕ್ಕಾಗಿಯೇ  ನೇಮಕಾತಿ ಪ್ರಕ್ರಿಯೆಯಿಂದ ಆಗಿನ ವೀಸಿಗಳಾದ ಶಿವಶಂಕರಮೂರ್ತಿಗಳು   ರಿಜಿಸ್ಟ್ರಾರ್ ಆಗಿದ್ದ ಡಾ.ಪಿಎಸ್ ಎಡಪಡಿತ್ತಾಯರನ್ನು ಹೊರಗಿರಿಸಿ ನಡೆಸಿದ ಬಗ್ಗೆಯೂ ಹೇಳಿದ್ದಾರೆ.ಆಗಿನ ವೀಸಿಗಳು ಕೆಲವು ಕ್ಲರ್ಕ್ ಹಾಗೂ ಒಬ್ಬಿಬ್ಬರು ಪ್ರಾಧ್ಯಾಪಕರನ್ನು ಇಟ್ಟುಕೊಂಡು ಅಕ್ರಮ‌ಎಸಗಿದ್ದರಂತೆ.ಅಂದಿನ ನೇಮಕಾತಿಗಳಲ್ಲಿ ಎರಡು ಕೋರ್ಟಿನಲ್ಲಿ ರದ್ದಾಗಿವೆ.ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿವೆ ಎಂದವರು ತಿಳಿಸಿದ್ದಾರೆ.

ಅಂದ ಹಾಗೆ ಅಂದಿನ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ‌ಡಾ.ಚಿನ್ನಪ್ಪ ಗೌಡ ಮತ್ತು ಡಾ.ಸಬೀಹಾ ಭೂಮಿ ಗೌಡ ಮತ್ತಿತರರು ಇದ್ದರು


ನನ್ನ ವಿಷಯದಲ್ಲಿಯೇ ಇಷ್ಟು ಅನ್ಯಾಯವಾದಾಗ ಓದಿ ಕಲಿಯಿರಿ ಮಕ್ಕಳೇ ಒಳ್ಳೆಯ ಭವಿಷ್ಯ ಇದೆ ಎನ್ನುವಾಗ ನನ್ನ ಧ್ವನಿ ನಡುಗದೆ ಇರಲು ಸಾಧ್ಯವೇ ? ಆದರೂ ನಾನಿದನ್ನು ಮಕ್ಕಳ ಜೊತೆ ಹಂಚಿಕೊಳ್ಳುವುದಿಲ್ಲ.ಅವರ ಆತ್ಮ ವಿಶ್ವಾಸಕ್ಕೆ ಧಕ್ಕೆ ಬಂದು ನಿರಾಸೆ ಮೂಡೀತು ಎಂಬ ಆತಂಕ ನನಗೆ‌

ಇಷ್ಟರ ತನಕ ಸಂದರ್ಶನ ಇರುವಲ್ಲಿ ಮಾತ್ರ ದುಡ್ಡು ವಶೀಲಿ‌ ನಡೆಯುತ್ತದೆ ಎಂಬ ಭಾವ ಇತ್ತು.ಈಗ ಲಿಖಿತ ಪರೀಕ್ಷೆ ಇರುವಲ್ಲಿನಡೆದ ಅಕ್ರಮ ನೋಡಿ ಆಘಾತವಾಗಿದೆ.ನಮ್ಮ‌ಬಡ ಪ್ರತಿಭಾವಂತ ಮಕ್ಕಳ ಪಾಡೇನು ಎಂಬ ಆತಂಕ ಉಂಟಾಗಿದೆ


ನನಗೇನೋ ಬದುಕಲೊಂದು ಗೌರವದ ಉದ್ಯೋಗವಿದೆ.ಮಂಗಳೂರು ಯೂನಿವರ್ಸಿಟಿಗೆ ಅರ್ಜಿ ಅಲ್ಲಿಸುವ ಮೊದಲೇ ನಾನು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾಗಿದ್ದೆ.ಆದರೆ ಉದ್ಯೋಗವಿಲ್ಲದ ಬಡ ಪ್ರತಿಭಾವಂತರ ಬಗ್ಗೆಯೇ ನನ್ನ ಕಾಳಜಿ..

ಈಗ ಸರ್ಕಾರ ಎಲ್ಲ‌ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಅದಕ್ಕೆ ಕಾರಣರಾದವ ಮೇಲೆಬಲವಾದ ಕ್ರಮ ತೆಗೆದುಕೊಂಡರೆ ಸ್ವಲ್ಪ ಪ್ರಯೋಜನವಾಗಬಹುದು 


ಇದರ ನಡುವೆ ಒಂದು ಗಮ್ಮತ್ತಿನ ವಿಚಾರ ಹೇಳಲು ಮರೆತು ಹೋಯಿತು.ಕಳೆದ ವಾರ ಮಂಗಳೂರು ಯೂನಿವರ್ಸಿಟಿಯ ಈಗಿನ ರಿಜಿಸ್ಟ್ರಾರ್( ಅವರ್ಯಾರೆಂದು ನನಗೆ ಗೊತ್ತಿಲ್ಲ) ಅವರಿಂದ ಲಾಯರ್ ಅರುಣ ಶ್ಯಾಮ್ ಅಸೋಸಿಯೇಟ್ ನ ಸುಯೋಗ ಹೇರಳೆ ಎಂಬವರ ಮೂಲಕ ಒಂದು ಲೀಗಲ್ ನೋಟೀಸ್ ಬಂದಿದೆ.ಮೇಲೆ ಹೇಳಿದ ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ,ನನಗೆ ಅನ್ಯಾಯವಾದ ಬಗ್ಗೆ ನನ್ನ ನೋವಿನ ಬಗ್ಗೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಮನದಾಳದ ಮಾತಿನಲ್ಲಿ ಹಂಚಿಕೊಂಡಿದ್ದೆ.ಇದು ಅವರಿಗೆ ಅವಮಾನ ಆಗಿದೆಯಂತೆ.2013 ರಲ್ಲಿ ರಿಜಿಸ್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯ ವೀಸಿಗಳಾದ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರು ಆಗ ನಡೆದ ಅಕ್ರಮ ಅನ್ಯಾಯಗಳನ್ನು ಮುಕ್ತವಾಗಿ ಹೇಳಿದ್ದಾರೆ.ಆದರೆ ಈಗಿನ ರಿಜಿಸ್ಟ್ರಾರಿಗೆ ಆಗ ನಡೆದದ್ದನ್ನು ಹೇಳಿದ್ದು ಅವಮಾನ ಎನಿಸಿದೆಯಂತೆ.ಬಹುಶಃ ಅವರು ಇತ್ತೀಚೆಗೆ ರಿಜಿಸ್ಟ್ರಾರ್ ಆಗಿದ್ದು ಆಗ 2013 ರಲ್ಲಿ ನಡೆದ ಅವ್ಯವಹಾರ ಅಕ್ರಮಗಳ ಬಗ್ಗೆ ಅವರಿಗೆ ತಿಳಿದಿರಲಾರರು.ಹಾಗಾಗಿ ಅವರಿಗೆ ಇರುವ ವಿಚಾರವನ್ನು ಲೀಗಲ್ ನೋಟೀಸಿನ ಉತ್ತರದಲ್ಲಿ ತಿಳಿಸಿರುವೆ.ಇನ್ನು ಇಲ್ಲಿನ ನಡೆದ ಅಕ್ರಮ ಅವ್ಯವಹಾರ ಭ್ರಷ್ಟಾಚಾರದ ಬಗ್ಗೆ ನನಗಿಂತ ಹೆಚ್ಚು ಅಧಿಕೃತವಾಗಿ ತಿಳಿದವರು ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಪಿ ಎಸ್ ಎಡಪಡಿತ್ತಾಯರು.ಹಾಗಾಗಿ ಅವರಲ್ಲಿ ಮಾಹಿತಿ ಪಡೆಯುವಂತೆ ಸೂಚಿಸಿರುವೆ..ಅನ್ಯಾಯ ಅಕ್ರಮಮಾಡಬಹುದು..ಹೇಳಬಾರದು ಎಂದರೆ ಹೇಗೆ ?  

ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ನಾನು ಎದುರಿಸಬಲ್ಲೆ ಆದರೆ ಪ್ರಾಮಾಣಿಕವಾಗಿ ಶೆಡ್ಡಿನಲ್ಲಿ ಚಿಮಿಣಿ ದೀಪದಲ್ಲಿ ಕಚ್ಚುವ ಸೊಳ್ಳೆಗಳ ಕಾಟದ ನಡುವೆಯೂ ಓದುವ ಕಲಿಯುವ ನಮ್ಮ‌ಬಡ ಮಕ್ಕಳಿಗೆ ಉದ್ಯೋಗ ಸಿಗದೆ ಅವೆಲ್ಲವೂ ಭ್ರಷ್ಟರ ಪಾಲಾದರೆ ಎಂಬ ಆತಂಕ ನನ್ನನ್ನು ನಡುಗಿಸುತ್ತಿದೆ.ನಮ್ಮ‌ ಪ್ರತಿಭಾವಂತ ಮಕ್ಕಳ ಮುಖ ನೋಡುವಾಗ ಇವರಿಗೊಂದು ಒಳ್ಳೆಯ ಕೆಲಸ ದೊರೆಯಲಿ ದೇವರೇ ಎಂದು ಪ್ರಾರ್ಥಿಸುವಂತಾಗುತ್ತಿದೆ.ಮೊದಲೆಲ್ಲ ಈ ಆತಂಕ ನನಗಿರಲಿಲ್ಲ.ನಾನು ಲಿಖಿತ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದೆನಲ್ಲ.ಹಾಗೆಯೇ ಇವರೂ ಗೆಲ್ಲವರು ಎಂಬ ದೃಢ ನಂಬಿಕೆ ನನಗಿತ್ತು.ಆದರೆ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ.ಇದನ್ನು ಬುಡ ಸಹಿತ ಕತ್ತರಿಸಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ 

ಡಾ.ಲಕ್ಷ್ಮೀ ಜಿ ಪ್ರಸಾದ್ ,ಕನ್ನಡ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು,ಬ್ಯಾಟರಾಯನಪುರ,ಬೆಂಗಳೂರು



ಆತ್ಕಕಥೆಯ ಬಿಡಿ ಭಾಗಗಳು ಗಲ್ ನೋಟೀಸಿಗೆ ನಾನು ನೀಡಿದ ಉತ್ತರ




















 ಲೀಗಲ್ ನೋಟೀಸಿಗೆ ನಾನು ನೀಡಿದ ಉತ್ತರ









..

ಅನೇಕರು ಕುತೂಹಲದಿಂದ ಲೀಗಲ್ ನೋಟೀಸಿಗೆ ನೀವು ಲಾಯರ್ ಮೂಲಕ ಉತ್ತರ ಕೊಟ್ಟಿರಾ ? ಅಥವಾ ನೀವೇ ಉತ್ತರಿಸಿದಿರಾ? ಏನೆಂದು ಉತ್ತರಿಸಿದ್ದೀರಿ ?  ಎಂದು ಕೇಳಿದ್ದಾರೆ ,ಇದರಲ್ಲಿ ಮುಚ್ಚುಮರೆ ಮಾಡುವದ್ದು ಏನೂ ಇಲ್ಲ.ಇರುವುದನ್ನು ಇರುವ ಹಾಗೆಯೇ ಬರೆದು ಉತ್ತರಿಸಿದ್ದೆ.

ಈ ಬಗ್ಗೆ ತಿಳಿಯಲು ಆಸಕ್ತಿ ಇರುವವರಿಗಾಗಿ ಇಲ್ಲಿ ಕಾಪಿ ಪೇಸ್ಟ್ ಮಾಡಿರುವೆ,ಮುಂದಕ್ಕೆ ಲೀಗಲ್ ನೋಟೀಸ್ ಮತ್ತು ಅದಕ್ಕೆ ನೀಡಿರುವ ಉತ್ತರ ತದನಂತರದ ಹೆಜ್ಜೆಗಳು ಎಲ್ಲವೂ ಆತ್ಮಕಥೆಯಲ್ಲಿ ಸೇರಲಿವೆ.


ಅರುಣಶ್ಯಾಮ್ ಅಸೋಸಿಯೇಟ್ಸ್  ನೀಡಿದ ಲೀಗಲ್ ನೋಟೀಸಿಗೆ    ಉತ್ತರ


ನಮಸ್ಕಾರ,

ನಾನು ಡಾ.ಲಕ್ಷ್ಮೀ ಜಿ‌ ಪ್ರಸಾದ್,ಕನ್ನಡ ಪ್ರಾಧ್ಯಾಪಕರು ,ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನ ಪುರದ ವಿಳಾಸಕ್ಕೆ ಕೆಲ ದಿನಗಳ ಹಿಂದೆ ತಾವು ಕಳುಹಿಸಿದ ಲೀಗಲ್ ನೋಟೀಸ್ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬಂತು.ಒಂದು ಕ್ಷಣ ಸ್ವೀಕರಿಸಲೇ ಬೇಡವೇ ಎಂಬ ತೊಳಲಾಟ ನನ್ನನ್ನು ಕಾಡಿತು ಯಾಕೆಂದರೆ ಪಿಯು ಕಾಲೇಜಿನ ಉಪನ್ಯಾಸಕರು ಎಂದಿಗೂ ಪ್ರಾಧ್ಯಾಪಕರಾಗುವುದಿಲ್ಲ.ಎನ್ ಇ ಟಿ,ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರೂ  ಸೇರುವಾಗ ಉಪನ್ಯಾಸಕರಾದವರು ನಿವೃತ್ತಿಯಾಗುವಾಗಲೂ ಉಪನ್ಯಾಸಕರೇ ಅಗಿರಬೇಕಾಗಿದೆ.ನಾವೆಂದಿಗೂ ಗೈಡ್ ಆಗಲು ಆಗುವುದಿಲ್ಲ.ಸಂಶೋಧನಾ ತಂಡವನ್ನು ಹದಿನಾರು ಹದಿನೇಳು ವಯಸ್ಸಿನ‌ಮಕ್ಕಳ ಜೊತೆ ಕಟ್ಟಲಾಗುವುದಿಲ್ಲ


ಇಲ್ಲಿ ಪ್ರಾಧ್ಯಾಪಕರಾಗಿ ಭಡ್ತಿ ಕೊಡುವ ಪದ್ಧತಿ ಇಲ್ಲ


ಇದೇ ಕಾರಣಕ್ಕಾಗಿ ನಾನು ಮೊದಲೇ ಸರ್ಕಾರಿ ಉದ್ಯೋಗದಲ್ಲಿದ್ದರೂ ಕೂಡ ಮಂಗಳೂರು ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ


ನಾನು ಎಂಎ( ಕನ್ನಡ )77% ನಾಲ್ಕನೆಯ ರ‌್ಯಾಂಕ್ ಎಂಎ( ಸಂಸ್ಕೃತ) ಮೊದಲ ರ‌್ಯಾಂಕ್ ಎಂಎ(ಹಿಂದಿ) ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.ಜೊತೆಗೆ ಅರ್ಜಿ ಸಲ್ಲಿಸುವ ಸಮಯಕ್ಕಾಗುವಾಗಲೇ 250 ಕ್ಕೂಹೆಚ್ಚಿನ ಅಂತರಾಷ್ಟ್ರೀಯ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದೆ.ಆಗ ನನ್ನ 17 ಸಂಶೋಧನಾ ಕೃತಿಗಳೂ ನೂರಕ್ಕೂಹೆಚ್ಚು ಸಂಶೋದನಾ ಬರಹಗಳು ಐದು ನೂರರಷ್ಟು ಇತರ ಬರಹಗಳು ಪ್ರಕಟವಾಗಿದ್ದು ಯುಜಿಸಿ ಗೈಡ್ ಲೈನ್ ನಂತೆ ಲೆಕ್ಕ ಹಾಕಿದಾಗ 1154 ರಷ್ಟು ಶೈಕ್ಷಣಿಕ ನಿರ್ವಹಣಾಂಕ( academic performance indicators) ಗಳನ್ನು ಗಳಿಸಿದ್ದು  ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವೆ.


 ಶೈಕ್ಷಣಿಕ ನಿರ್ವಹಣಾಂಕಗಳನ್ನು ಆಧರಿಸಿ   ಹತ್ತು ಜನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು‌.ನನಗೂ ಆಹ್ವಾನ ಬಂದಿತ್ತು.ನಾನೂ ಸಂದರ್ಶನಕ್ಕೆಹಾಜರಾದೆ.ಎಲ್ಲರಿಗಿಂತ ಹೆಚ್ಚು‌ ಅರ್ಹತೆಗಳಿಸಿದ್ದಕಾರಣ ನನಗೆ ಮೊದಲು ಸಂದರ್ಶನ ಇತ್ತು


ಒಟ್ಟು ನೂರು ಅಂಕಗಳಲ್ಲಿ ಇಪ್ಪತ್ತು ಅಂಕಗಳು ರಿಸರ್ಚ್ ಪರ್ಪಾರ್ಮೆನ್ಸ್ ವಿಭಾಗಕ್ಕೆ ಇತ್ತು.ಇಲ್ಲಿ ಒಂದುಸಂಶೋಧನಾ  ಪುಸ್ತಕಕ್ಕೆ ಐದು ಅಂಕ  ಒಂದು ಅಂಕ,ರಾಷ್ಟ್ರೀಯ ಸಂಶೋದನಾಪತ್ರಿಕೆಗಳಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಎಂದುಯುಜಿಸಿ ನಿಗದಿ ಪಡಿಸಿದ್ದು.ಇದನ್ನುಯೂನಿವರ್ಸಿಟಿ statue of conduct interview ನಲ್ಲಿ ಯೂನಿವರ್ಸಿಟಿಯೂ ವೆಬ್ ನಲ್ಲಿ  ಹಾಕಿತ್ತು.ಸಂಶೋಧನಾ ಕೃತಿ ಮತ್ತು ಬರಹಗಳಿಗೆ ಮಾತ್ರ ಅಂಕ ನೀಡಬೇಕು ಎಂಬ ಸ್ಪಷ್ಟ ಉಲ್ಲೇಖವೂ ಯುಜಿಸಿ ಗೈಡ್ ಲೈನ್ಸ್ ನಲ್ಲಿ ಇವೆ.


ಇದರಂತೆ ನನಗೆ ಹದಿನೇಳು ಸಂಶೋಧನಾ ಪುಸ್ತಕಗಳು ಪ್ರಕಟಗೊಂಡಿರುವ ಕಾರಣ ರಿಸರ್ಚ್ ಫರ್ಪಾರ್ಮೆನ್ಸ್  ವಿಭಾಗದಲ್ಲಿ  ಗರಿಷ್ಟ 20 ಅಂಕಗಳು ದೊರೆಯಬೇಕಾಗಿತ್ತು.ದೊರೆತಿದೆ  ಕೂಡ.


ಆದರೆ ಇಲ್ಲಿ ನನ್ನ ಬದಲಿಗೆ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರೇ ಅರ್ಜಿಯಲ್ಲಿ ಡಿಕ್ಲೇರ್ ಮಾಡಿಕೊಂಡಂತೆ ಅವರ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಒಂದು ಪಿಎಚ್ ಡಿ ಪ್ರಬಂಧವಾಗಿದೆ.ಕನ್ನಡದಲ್ಲಿ ರಾಷ್ಟ್ರೀಯಾಂತರಾಷ್ಟ್ರೀ ಸಂಶೋಧನಾ ಪತ್ರಿಕೆಗಳು ಇಲ್ಲ.ಹಾಗಾಗಿ ಲೇಖನಗಳಿಗೆ ಯಾರಿಗೂ ಅಂಕ ಸಿಗುವುದಿಲ್ಲ.


ಧನಂಜಯರ ಎರಡು ಕೃತಿಗಳಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಅಕಾಡೆಮಿಕ್ ವಿಭಾಗದಲ್ಲಿ ಹತ್ತು ಅಂಕಗಳನ್ನು ನೀಡಿದ್ದಾರೆ.ಹಾಗಾಗಿ ರಿಸರ್ಚ್ ಪರ್ಫಾರ್ಮೆನ್ಸ್ ವಿಭಾಗದಲ್ಲಿ ಅವರು ಕೇವಲ ಐದು ಅಂಕಕ್ಕೆ ಅರ್ಹರಿದ್ದರು


ಆದರೆ ಸಂದರ್ಶನವೆಂಬ ನಾಟಕದಲ್ಲಿ ಆಯ್ಈಕೆ ಸಮಿತಿಯವರು   ರಿಸರ್ಚ  ಫರ್ಫಾರ್ಮೆನ್ಸ್ ವಿಭಾಗದಲ್ಲಿ  ಹೆಚ್ಚುವರಿಯಾಗಿ 15 ಅಂಕಗಳನ್ನು ನೀಡಿ  ಅವರಿಗೆ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ


.ಅವರು ಗಳಿಸಿದ ಒಟ್ಟು 69.4ಅಂಕಗಳಿಂದ ಇಲ್ಲಿ ಹೆಚ್ಚುವರಿಯಾಗಿ ನೀಡಿದ ಹದಿನೈದು ಅಂಕಗಳನ್ನು ಕಳೆದರೆ ಅವರಿಗೆ 54.4 ಅಂಕ ಮಾತ್ರ ಸಿಗುತ್ತದೆ.ಎಂದರೆ ಅವರು ಇಷ್ಟಕ್ಕೆ ಮಾತ್ರ ಅರ್ಹರಾಗಿದ್ದರು.ಹದಿನೈದು ಅಂಕಗಳನ್ನುಈ ವಿಭಾಗದಲ್ಲಿ ಅರ್ಹತೆ ಇಲ್ಲದೇ ಇರುವಾಗ ಕೂಡ  ಹೆಚ್ಚು ಕೊಟ್ಟು ಅವರನ್ನು ಆಯ್ಕೆ ಮಾಡಿದ್ದಾರೆ.ಇದರಿಂದಾಗಿ ನನಗೆ ಅನ್ಯಾಯವಾಗಿದೆ .ನನಗೆ 66 ಅಂಕಗಳ ನ್ನು ನೀಡಿದ್ದರು.


ಮೂರು ಸ್ನಾತಕೋತ್ತರ ಪದವಿಗಳು,ಅದರಲ್ಲಿ ಗಳಿಸಿದ ಅಂಕಗಳು,ಸಂಶೋಧನಾ ಪ್ರಕಟಣೆ,ಸಂಶೋಧನಾ ಪ್ರಬಂಧ ಮಂಡನೆ ಎಲ್ಲದರಲ್ಲೂ ನಾನೇ ಹೆಚ್ಚಿನವಳಾಗಿದ್ದರೂ ಆಯ್ಕೆಯಲ್ಲಿ ಅಕ್ರಮ ,ಅನ್ಯಾಯಗಳು ನಡೆದ ಕಾರಣ ನಾನು ಆಯ್ಕೆ ಆಗದೆ ನನಗಿಂತ ಕಡಿಮೆ ಅರ್ಹತೆಯ ಧನಂಜಯ ಕುಂಬಳೆ ಅವರು ಆಯ್ಕೆ ಆಗಿದ್ದರು


ಈ ಬಗ್ಗೆ ನಾನು ಸುಪ್ರೀಂ ಕೋರ್ಟ್ ತನಕ ಹೋಗಿದ್ದರೂ ನನಗೆ ಗೆಲವು ಸಿಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ ಇಲ್ಲವೆಂದಿಲ್ಲ.ಬದಲಿಗೆ ಅರ್ಹತೆಯನ್ನು ನಿರ್ಣಯಿಸುವುದು ಆಯ್ಕೆ ಸಮಿತಿ.ಅದರಲ್ಲಿ ನ್ಯಾಯಾಲಯಕ್ಕೆ ತಲೆಹಾಕಲು ಬರುವುದಿಲ್ಲ ಎಂದು ತೀರ್ಪು ನೀಡಿದೆ


ಇದು ನಮ್ಮಲ್ಲಿನ ಕಾನೂನಿನ ಪರಿಮಿತಿ  ಇರಬಹುದು.ಆದರೆ ದುಡ್ಡು influenceಗೆ ಒಳಗಾಗಿ ಯುಜಿಸಿ‌ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ ಹೆಚ್ಚು ಅರ್ಹರನ್ನು ಬಿಟ್ಡುಕಡಿಮೆ ಅರ್ಹರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದುಅನ್ಯಾಯ ಎಸಗಿದ್ದು  ಇದಕ್ಕೆ ಪರಿಹಾರವೇನು ? ಇದು ನನಗೆ ಮಾತ್ರವಲ್ಲ ಇಲ್ಲಿ ಸಂದರ್ಶನಕ್ಕೆ ಬಂದ ಹೆಚ್ಚು ಅರ್ಹತೆ ಇದ್ದೂ ಆಯ್ಕೆಯಾಗದವರ ಎಲ್ಲರ ಪ್ರಶ್ನೆ.ಇಂದಿಗೂ ಎಂದಿಗೂ ಉತ್ತರ ಸಿಗದ ಸಿಗಲಾರದ ಪ್ರಶ್ನೆಯಾಗಿದೆ.


ಮಂಗಳೂರು ಯೂನಿವರ್ಸಿಟಿಯಲ್ಲಿ 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ  ಅಕ್ರಮ‌ ಅವ್ಯಹಾರಗಳುಭ್ರಷ್ಟಾಚಾರ  ನಡೆದ ಬಗ್ಗೆ ಆ ಸಮಯದಲ್ಲಿ ಟಿವಿಗಳಲ್ಲಿ ಪತ್ರಿಕೆಗಳಲ್ಲಿಯೂ ಬಂದಿತ್ತು


ಆಗ ಮಂಗಳೂರು ಯೂನಿವರ್ಸಿಟಿಯ  ರಿಜಿಸ್ಟ್ರಾರ್ ಆಗಿದ್ದ ಈಗ ಅದೇ ಯೂನಿವರ್ಸಿಟಿಯ  ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರೂ ಕೂಡ  "ಆಗಿನ ವೀಸಿ‌ ಶಿವಶಂಕರ ಮೂರ್ತಿಯವರು ರಿಜಿಸ್ಟ್ರಾರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿರಿಸಿ ಕೆಲ ಕ್ಲರ್ಕ್ ಹಾಗೂ ಇನ್ಯಾರನ್ನೋ ಸೇರಿಸಿಕೊಂಡು‌ ಅಲ್ಲಿ ವ್ಯಾಪಕ ಅಕ್ರಮ,ಅನ್ಯಾಯ  ಭ್ರಷ್ಟಾಚಾರವನ್ನು ಮಾಡಿ ಅರ್ಹರನ್ನು ಬಿಟ್ಟು ಅನರ್ಹರನ್ನು ಆಯ್ಕೆ ಮಾಡಿದ ಬಗ್ಗೆ" ಮುಕ್ತವಾಗಿ ತಿಳಿಸಿದ್ದಾರೆ


ಆಗಿನ ಇಬ್ಬರ ಅಕ್ರಮ ನೇಮಕಾತಿ ರದ್ದಾಗಿ .ಆಗಿನ ನೇಮಕಾತಿಯ ಅಕ್ರಮದ ಬಗ್ಗೆ ಕೋರ್ಟಿಗೆ ಹೋದವರಿಗೆ ಈ ಹುದ್ದೆಗಳು ಸಿಕ್ಕಿವೆ ಇನ್ನೂ ಅನೇಕರು ಕೋರ್ಟಿಗೆ ಹೋಗಿದ್ದು ತೀರ್ಪಿಗೆ ಕಾಯುತ್ತಿದ್ದಾರೆ ಎಂಬ ಬಗ್ಗೆಯೂ ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ  ಎಡಪಡಿತ್ತಾಯರು ಹೇಳಿದ್ದಾರೆ


.ಈ ಬಗ್ಗೆ ದಾಖಲೆ ಬೇಕಾಗಿದ್ದರೆ ಒದಗಿಸಬಲ್ಲೆ ಆದರೆ ಅದರ ಅಗತ್ಯವೇನಿದೆ ? ತಾವು ಅಥವಾ ತಮ್ನ ಕಕ್ಷಿದಾರರು ಅವರಲ್ಲಿಯೇ ಈ ಬಗ್ಗೆ  ವಿಚಾರಿಸಬಹುದು


ಇನ್ನು ನನ್ನ ಕರಾವಳಿಯ ಪುಸ್ತಕದಲ್ಲಿ ನನಗಾದ ಅನ್ಯಾಯ ಅದರಿಂದಾದ ನನ್ನ ನೋವನ್ನು ಹಂಚಿಕೊಂಡಿದ್ದೇನೆ.ಅಲ್ಲಿ ಹಾಕಿದ ಎಲ್ಲ ವಿಚಾರಗಳೂ  ನೂರಕ್ಕೆ ನೂರು ನಿಜವಾದುದು


ಹಾಗಾಗಿ ತಮ್ಮ‌ ಕಕ್ಷಿದಾರರಾದ ರಿಜಿಸ್ಟ್ರಾರರು  ನನಗಾದ ಅನ್ಯಾಯಕ್ಕೆ  ನೈತಿಕವಾಗಿ  ವಿಷಾದ ವ್ಯಕ್ತಪಡಿಸಬಹುದಿತ್ತು..ಬದಲಿಗೆ ನನ್ನಿಂದ ಕ್ಷಮಾಪಣೆ ಬಯಸಿದ್ದು ಅಚ್ಚರಿ ತರಿಸಿದೆ


ಕ್ಷಮೆ ಯಾಚಿಸುವಂತಹ ಯಾವುದೇ ತಪ್ಪನ್ನು ನಾನು ಎಸಗಿರುವುದಿಲ್ಲ.ನಡೆದಿರುವ ಸತ್ಯದ ವಿಚಾರಗಳನ್ನು ಪುಸ್ತಕದಲ್ಲಿ ಬರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ನಮ್ಮ ಸಂವಿಧಾನ ನೀಡಿದೆ.ಅಕ್ರಮ ಮಾಡಬಹುದು.ಹೇಳಬಾರದು ಎಂದರೆ ಹೇಗೆ ? ತಮ್ಮ‌ ಕಕ್ಷಿದಾರರೇ ವಿವೇಚಿಸಲಿ


ಅಂದ ಹಾಗೆ ಮಂಗಳೂರು ಯುನಿವರ್ಸಿಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವ ಸಲುವಾಗಿ ವಕೀಲರಾಗಿದ್ದ ತಮ್ಮನ್ನು ( ಅರುಣ ಶ್ಯಾಮರನ್ನು)ನಾನು ಸಂಪರ್ಕಿಸಿದ್ದು ತಮ್ಮ ಫೀಸ್ ಎರಡು ಲಕ್ಷ ರುಪಾಯಿ ಎಂದಿದ್ದೀರಿ ಕೂಡ


ಇಷ್ಟು ಶುಲ್ಕ ನನ್ನಿಂದ ಭರಿಸಲು ಸಾಧ್ಯವಿಲ್ಲವೆಂದು ಸ್ವಲ್ಪ ಕಡಿಮೆಗೆ ಒಪ್ಪಿದ ಪರೀಕ್ಷಿತ್ ಅಂಗಡಿ ಎಂಬ ವಕೀಲರ ಮೂಲಕ ನಾನು ಸುಪ್ರೀಂಕೋರ್ಟಿಗೆ ಹೋದೆನಾದರೂ ಜಯಗಳಿಸಲು ಸಾಧ್ಯವಾಗಿಲ್ಲ.ಇಲ್ಲೆಲ್ಲ ಹೈ ಕೋರ್ಟಿನ ತೀರ್ಪನ್ನು ಒಪ್ಪಿದ್ದರು


ಹೀಗೆ ಹೈ ಕೋರ್ಟ. ,ಡಬಲ್  ಬೆಂಚ್ ಸುಪ್ರೀಂ ಕೋರ್ಟ್ ಎಂದು ಕೋರ್ಟ್ ಕಛೇರಿಗೆ ಅಲೆಯುವ ಬದಲು ಲಾಯರುಗಳಿಗೆ ಲಕ್ಷಗಟ್ಟಲೆ ಶುಲ್ಕ ನೀಡುವ ಬದಲು ಅದನ್ನೇ ಲಂಚವಾಗಿ ನೀಡಿದ್ದರೆ ನಾನಿಂದು ಪ್ರೊಫೆಸರಾಗಿರುತ್ತಿದ್ದೆ.ಆದರೆ ಎಂದಿಗೂ ಅನ್ಯಾಯದ ಹಾದಿಯನ್ನು ತುಳಿಯದ ನನಗೆ ಅದಾಗದು  ಎಂಬುದೂ ನನ್ನ ಮನದಾಳದ ಮಾತು


ಎಲ್ಲೆಡೆ ಭ್ರಷ್ಟಾಚಾರ ನಡೆದರೆ ಬಡ ಪ್ರತಿಭಾವಂತರ ಪಾಡೇನು ? ಇದೂ ಕೂಡ ಉತ್ತರ ಸಿಗದ ಪ್ರಶ್ನೆ


ನನಗೇನೋ ಬದುಕಲು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ವೃತ್ತಿ ಇದೆ.ಆದರೆ ಇತರ ಬಡ ಪ್ರತಿಭಾವಂತರ ಪಾಡೇನು ? ನಮ್ಮ ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ರ‌್ಯಾಂಕ್ ತೆಗೆಯಿರಿ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಹೇಳುವಾಗೆಲ್ಲ ಸರ್ಕಾರಿ ಹುದ್ದೆಗಳ ಆಯ್ಕೆಯಲ್ಲಿ ನಡೆಯುವ ಅಕ್ರಮ ,ವ್ಯಾಪಕ ಭ್ರಷ್ಟಾಚಾರ ನೆನಪಾಗಿ ಧ್ವನಿ ಕಂಪಿಸುತ್ತದೆ


ಹಾಗಾಗಿಯೇ ನನಗಾದ ನೋವನ್ನು ನಾನು ನನ್ನ ಅಧ್ಯಯನ ಕೃತಿ ಕರಾವಳಿಯ ಸಾವಿರದೊಂದು ದೈವಗಳು ನ ಮನದಾಳದ ಮಾತಿನಲ್ಲಿ ನನ್ನ ಪುಸ್ತಕದ ಓದುಗರೊಂದಿಗೆ ಹಂಚಿಕೊಂಡಿರುವೆ


ಇದರಲ್ಲಿ ತಮ್ಮ ಕಕ್ಷಿದಾರರಿಗೆ ಏನು ತಪ್ಪು ಕಂಡಿದೆಯೋ ನನಗರಿವಾಗಿಲ್ಲ.ಬಹು಼ಶಃ ಈಗಿನ ರಿಜಿಸ್ಟ್ರಾರಿಗೆ ಹತ್ತು ವರ್ಷ ಹಿಂದೆ ನಡೆದ ನೇಮಕಾತಿಯಲ್ಲಿನ ಅಕ್ರಮ ,ವ್ಯಾಪಕ ಭ್ರಷ್ಟಾಚಾರಗಳ ಅರಿವಿಲ್ಲ ಎಂದೆನಿಸುತ್ತದೆ.ಆದರೆ ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರಿಗೆ ಆಗ ನಡೆದ ಅಕ್ರಮಗಳ ,ಅನ್ಯಾಯಗಳ,ವ್ಯಾಪಕ ಭ್ರಷ್ಟಾಚಾರದ  ಅರಿವಿದೆ.ಅದನ್ನವರು  ನನ್ನಲ್ಲಿ ಮಾತನಾಡುವಾಗ ಒಪ್ಪಿಕೊಂಡಿದ್ದಾರೆ ಕೂಡ.


ನಿಮ್ಮ ಕಕ್ಷಿದಾರರು ಸರ್ಕಾರದ ದುಡ್ಡಿನಲ್ಲಿ ನನ್ನ ವಿರುದ್ಧ ಕೋರ್ಟಿಗೆ ಹೋದರೆ ಇವರದೇ ಪ್ರಬಲ ಸಾಕ್ಷ್ಯವಾಗುತ್ತದೆ


ಹಾಗಾಗಿ ಮಾನ್ಯ ವೀಸಿಗಳಾದ ಡಾ.ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಅನ್ಯಾಯಗಳ ಬಗ್ಗೆ  ವಿಚಾರಿಸಿ ಮುಂದುವರಿಯುವಂತೆ ತಮ್ಮ ಕಕ್ಷಿದಾರರಿಗೆ ತಿಳಿಸಿ 


ಯುನಿವರ್ಸಿಟಿಯೋ ಅಕಾಡೆಮಿಯೋ ಮಾಡಬೇಕಾಗಿದ್ದ ವ್ಯಾಪಕ ಕ್ಷೇತ್ರ ಕಾರ್ಯದ ಅಗತ್ಯವಿದ್ದ ಬಹು ಪರಿಶ್ರಮದ ಭೂತಾರಾಧನೆಯ ಅಧ್ಯಯನವನ್ನು ನಾನು ಸ್ವಂತ ಖರ್ಚಿನಿಂದ ಮಾಡಿ ಪ್ರಕಟಿಸಿದಾಗ ಓದಿದ  ಯೂನಿವರ್ಸಿಟಿಯ  ರಿಜಿಸ್ಟ್ರಾರ್ ಮೆಚ್ಚುತ್ತಿದ್ದರು..ಬಹುಶಃ ಅವರು ಮನದಾಳದ ಮಾತನ್ನು ಮಾತ್ರ ಓದಿರಬೇಕು.ಇಡೀ ಪುಸ್ತಕವನ್ನು ಅಥವಾ ಕೊನೆಯ ಪಕ್ಷ ಅದರ ಪರಿವಿಡಿಯನ್ನೂ ಓದಲಿಲ್ಲವೋ ಏನೋ..ಇರಲಿ ಯಾರದೇ ಮೆಚ್ಚುಗೆ ಅಥವಾ ದೂಷಣೆಗಾಗಿ ನಾನು ಅಧ್ಯಯನ ಮಾಡಿ ಪ್ರಕಟಿಸಿಲ್ಲ.ಇದು ನನ್ನ ಸ್ವಂತ ಆತ್ಮ ತೃಪ್ತಿಗಾಗಿ ಮಾಡಿದ್ದು.ಇದರಲ್ಲಿ ನನಗಾದ ಅನ್ಯಾಯ ನೋವನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗಿದೆ ಎಂಬುದನ್ನು ತಮ್ಮ ಕಕ್ಷಿದಾರರಿಗೆ ನೀವು ತಿಳಿಸಬೇಕಾಗಿ ಕೋರುವೆ..ಅವರು ಆಗ ರಿಜಿಸ್ಟ್ರಾರ್ ಆಗಿದ್ದ ಈಗ ವೀಸಿಗಳಾಗಿರುವ ಡಾ.ಪಿ ಎಸ್ ಯಡಪಡಿತ್ತಾಯರಲ್ಲಿ ಆಗ ನಡೆದ ಭ್ರಷ್ಟಾಚಾರದ ಬಗ್ಗೆ ವಿಚಾರಿಸಿದರೆ ಮುಕ್ತ ಮಾಹಿತಿ ಅವರಿಗೆ ಸಿಕ್ಕಿ,ನಾನು ಬರೆದದ್ದು ಸರಿಯಾಗಿದೆ ಎಂದು ಮನವರಿಕೆಯಾಗಬಹುದು ಹಾಗಾಗಿ ಅವರಲ್ಲೊಮ್ಮೆ ವಿಚಾರಿಸಲು ತಿಳಿಸಬೇಕಾಗಿ ಕೋರುವೆ 


ನನ್ನ 21 ವರ್ಷದ ಅಧ್ಯಯನದ ಫಲವಾದ , ಸಾವಿರಕ್ಕಿಂತ ಹೆಚ್ಚು ಪುಟಗಳ 1228 ದೈವಗಳ ಮಾಹಿತಿ ಇರುವ 2000₹ ಬೆಲೆಯ ಪುಸ್ತಕವನ್ನು ಖರೀದಿಸಿ ಓದಿದ್ದಕ್ಕಾಗಿ ಧನ್ಯವಾದಗಳು


ಡಾ.ಲಕ್ಷ್ಮೀ ಜಿ ಪ್ರಸಾದ್ 


ಮೊಬೈಲ್ 9480516684 

e mail : samagramahithi@gmail.com

blogs : http:// laxmipras.blogspot.com

  http:// shikshanaloka.blogspot.com

   http://laxmihavyaka.blogspot.com